Asianet Suvarna News Asianet Suvarna News

ರಸ್ತೆ ಅಪಘಾತದಲ್ಲಿ ಹಿರಿಯ ಸಿನಿಮಾ ನಿರ್ಮಾಪಕ ಕಮಲಾಕರ ರೆಡ್ಡಿ ಸಾವು

ವಾಡಪಲ್ಲಿ ಚೆಕ್‌ಪೋಸ್ಟ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಟಾಲಿವುಡ್‌ ನಿರ್ಮಾಪಕ ಕಮಲಾಕರ ರೆಡ್ಡಿ ಮೃತಪಟ್ಟಿದ್ದಾರೆ.

Tollywood distributor producer kamalakar reddy dies in  Hyderabad road accident
Author
Bangalore, First Published Aug 21, 2020, 2:28 PM IST

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ವಿತರಕ ಕಮಲಾಕರ ರೆಡ್ಡಿ ಹಾಗೂ ಅವರ ತಂದೆ ನಂದಗೋಪಾಲ ರೆಡ್ಡಿ ಅವರಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದ್ದು  ಇಬ್ಬರು ಖಾಸಗಿ ಆಂಬುಲೆನ್ಸ್‌ನಲ್ಲಿ ನೆಲ್ಲೂರಿನಿಂದ ಹೈದರಾಬಾದ್‌ ಅಪೋಲೋ ಆಸ್ಪತ್ರೆ ಕಡೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಕಮಲಕಾರ ರೆಡ್ಡಿ ಪ್ರಯಾಣಿಸುತ್ತಿದ್ದ ಆಂಬ್ಯುಲೆನ್ಸ್‌ ಕೊಂಡಪ್ರೋಲು ಬಳಿ ಲಾರಿಯೊಂದಕ್ಕೆ ಗುದ್ದಿದೆ. ನಿರ್ಮಾಪಕ ಹಾಗೂ ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಆದರೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

365 ಪ್ರಕರಣ ಪತ್ತೆಮಾಡಿದ್ದ 'ಗುಡ್ ಬಾಯ್ ರಾಕಿ' ಇನ್ನಿಲ್ಲ

ಬೆಳಗ್ಗಿನ ಜಾವವಾಗಿದ್ದ ಕಾರಣ ಆಂಬ್ಯುಲೆನ್ಸ್ ಚಲಾಯಿಸುತ್ತಿದ್ದ ಚಾಲಕ ನಿದ್ದೆ ಜಾರಿ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಮಲಾಕರ ಹಾಗೂ ಅವರ ತಂದೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲು ಮಿರಿಯಾಲಗುಡ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

25ವರ್ಷಗಳಿಂದೆ ತೆಲುಗು ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಮಲಾಕರ ರೆಡ್ಡಿ ಹಿಂದಿಯ 'ಪದ್ಮಾವತ್' ಸಿನಿಮಾಗೂ ವಿತರಣೆ ಮಾಡಿದ್ದಾರೆ ಹಾಗೂ ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ' ಸಿನಿಮಾದ ಸಹ ನಿರ್ಮಾಪಕರಾಗಿದ್ದರು. ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತರನ್ನು ಅಗಲಿರುವ ಕಮಲಾಕರ ಹಾಗೂ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

Follow Us:
Download App:
  • android
  • ios