ಬಾಲಿವುಡ್‌ನ ಟಾಪ್ ನಟ ಆಯುಷ್ಮಾನ್ ಖುರಾನ ಮಾತು ನಟನಾಗಿ ಸಕ್ಸಸ್ ಆಗದಿದ್ರೆ ಬರ್ತ್‌ಡೇಗಳಲ್ಲಿ ಹಾಡ್ತಿದ್ದೆ ಎಂದ ನಟ

ಬಾಲಿವುಡ್ ನಟ ಆಯುಷ್ಮಾನ್ ಖುರಾನ ಸದ್ಯ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟ. ಆದ್ರೆ ಇವರು ನಟನಾಗಿರದಿದ್ದರೆ ಏನಾಗಿರ್ತಿದ್ರು ? ಸಿಂಗರ್ ಆಗಿರುತ್ತಿದ್ದರು ಎಂದಿದ್ದಾರೆ ಆಯುಷ್ಮಾನ್.

Add Asianetnews Kannada as a Preferred SourcegooglePreferred

ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆದಾಗ ಸೋಲನ್ನು ಸ್ವೀಕರಿಸಲು ಸಿದ್ಧನಾಗಿದ್ದೆ ಎಂದಿದ್ದಾರೆ ನಟ. ಕೆರಿಯರ್ ಡಲ್ ಆದಾಗ ತನ್ನೂರು ಚಂಡೀಗಡಕ್ಕೆ ಮರಳುವವರಿದ್ದರು ನಟ.

2020ರಲ್ಲಿ ಹೊಸ ಮನೆ ಖರೀದಿಸಿದ ಬಾಲಿವುಡ್‌ ಸೆಲೆಬ್ರೆಟಿಗಳು!

2015ರಲ್ಲಿಯೇ ಪುಸ್ತಕ ಬರೆದ ಆಯುಷ್ಮಾನ್ ಕುರಿತು ಭಾರೀ ಟೀಕೆ ವ್ಯಕ್ತವಾಗಿತ್ತು. ಆತ್ಮಕಥೆ ಬರೆಯುವಷ್ಟು ಬಾಲಿವುಡ್ ಅನುಭವ ನಟನಿಗಾಗಿಲ್ಲ ಎಂಬುದೇ ಮೆಜಾರಿಟಿ ಆರೋಪವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ, ಸಿನಿಮಾ ಫ್ಲಾಪ್ ಆದಾಗ ನನ್ನಲ್ಲಿ ಸಮಯವಿತ್ತು. ಹಾಗಾಗಿ ಬರೆದೆ ಎಂದಿದ್ದಾರೆ. ಆದರೆ ಈಗ ನಾನ್ಯಾವ ಪರಿಸ್ಥಿತಿಯಲ್ಲಿದ್ದೇನೆಂದರೆ ಪುಸ್ತಕ ಬರೆಯಲು ನನಗೆ ಸಮಯವಿಲ್ಲ ಎಂದಿದ್ದಾರೆ.

ನನಗೆ ಒಂದು ಬಾಂಡ್ ಇತ್ತು. ಆಯುಷ್ಮಾನ್ ಭಾವ. ನಾನು ಕನ್ಸರ್ಟ್ ಮಾಡುತ್ತಿದ್ದೆ. ಸಿನಿಮಾ ಸಕ್ಸಸ್ ಆಗದಿದ್ರೆ ಬರ್ತ್‌ಡೇಗಳಲ್ಲಿ ಹಾಡೋದು, ಪಾರ್ಟಿ ಮಾಡೋದು, ಜನರನ್ನು ನಗಿಸೋದು, ಪುಸ್ತಕ ಬರೆಯೋದು ಹೀಗೆ ಏನಾದ್ರೂ ಮಾಡುತ್ತೇನೆಂದು ಆಲೋಚಿಸಿದ್ದೆ ಎಂದಿದ್ದಾರೆ ನಟ

ಆಯುಷ್ಮಾನ್ ಖುರಾನಾ ಜೊತೆ ಜೋರಾಗಿ ಮಾತನಾಡಿದ್ದಕ್ಕೆ ರಣವೀರ್‌ಗೆ ಡಿಪ್ಪಿ ಕ್ಲಾಸ್!

ಎಂಟಿವಿ ರೋಡೀಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರ ಮತ್ತು ಆರ್‌ಜೆ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡ ನಂತರ, ಆಯುಷ್ಮಾನ್ 2012 ರಲ್ಲಿ ವಿಕ್ಕಿ ಡೋನರ್‌ನೊಂದಿಗೆ ತನ್ನ ಬಾಲಿವುಡ್ ಅನ್ನು ನಿರ್ಮಿಸಿದರು. ಈ ಚಿತ್ರವು ಯಶಸ್ವಿಯಾಯಿತು, ಆದರೆ ಆಯುಷ್ಮಾನ್ ಅದನ್ನು ನೌತಂಕಿ ಸಾಲಾ! ಗಲ್ಲಾಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ. ಅಂದಿನಿಂದ ಅವರು ಹಿಂದಿ ಚಿತ್ರರಂಗದ ಅತ್ಯಂತ ಬ್ಯಾಂಕಿಂಗ್ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಬಾದೈ ಹೋ, ಅಂಧಾಧುನ್ ಮತ್ತು ಬಾಲಾ ಅವರಂತಹ ಹಿಟ್ ಗಳಿಸಿದ್ದಾರೆ.