ಸೂರ್ಯ, ಕಾರ್ತಿಯಿಂದ ಸಿಎಂ ನಿಧಿಗೆ 1 ಕೋಟಿ ರೂ. ನೆರವು
- ಕಾಲಿವುಡ್ ಟಾಪ್ ಸೆಲೆಬ್ರಿಟಿ ಸಹೋದರರಿಂದ ಸಿಎಂ ನಿಧಿಗೆ ನೆರವು
- 1 ಕೋಟಿ ರೂಪಾಯಿ ನೀಡಿದ ಸೂರ್ಯ, ಕಾರ್ತಿಕ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಸಿಎಂ ಕೋವಿಡ್ -19 ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದಾರೆ. ಕೊರೋನಾ ವಿರುದ್ಧ ಹೋರಾಡಲು ಉದಾರವಾಗಿ ದೇಣಿಗೆ ನೀಡುವಂತೆ ಸಿಎಂ ಸ್ಟಾಲಿನ್ ಇತ್ತೀಚೆಗೆ ಜನರನ್ನು ಕೇಳಿಕೊಂಡಿದ್ದರು.
ಸಿಎಂ ಅವರನ್ನು ಭೇಟಿಯಾದ ನಂತರ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಜನರು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ನಾವು ಅವರನ್ನು COVID-19 ನಿಂದ ಉಳಿಸಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ಬೆಂಬಲವನ್ನು ಹೆಚ್ಚಿಸಬೇಕು. ಇದು ನಮ್ಮ ಸಣ್ಣ ಕೊಡುಗೆಯಾಗಿದೆ. ಎಲ್ಲರೂ ಆರೋಗ್ಯವಾಗಿರಬೇಕು. ಮಾಧ್ಯಮದಲ್ಲಿರುವವರು, ದಯವಿಟ್ಟು ಆರೋಗ್ಯವಾಗಿರಿ ಎಂದಿದ್ದಾರೆ.
"
ಅನುಷ್ಕಾ ಶೆಟ್ಟಿ ಲಾಕ್ಡೌನ್ ಫೋಟೋ ವೈರಲ್: ಇಣುಕುತ್ತಿದೆ ಬೆಳ್ಳಿ ಕೂದಲು
ಕೋವಿಡ್ -19 ರ ಮೊದಲ ಅಲೆಯಲ್ಲಿ ಸೂರ್ಯ ಮತ್ತು ಕಾರ್ತಿ ತಮಿಳು ಚಲನಚಿತ್ರೋದ್ಯಮದ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಆಗಿನ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿಯ ನಿಧಿಗೆ ಅವರು ತಲಾ 10 ಲಕ್ಷ ರೂ ನೆರವು ನೀಡಿದ್ದರು.
ಸೂರ್ಯ ವೆಟ್ರಿಮಾರನ್ ಅವರ ವಾಡಿವಾಸಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯ ಬಾರಿಗೆ ಸೂರಾರೈ ಪೊಟ್ರು ಬಯೋಪಿಕ್ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಥಿಯೇಟರ್ ಬಿಟ್ಟು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿತ್ತು.