Asianet Suvarna News Asianet Suvarna News

ಕರೀನಾ ಕಪೂರ್​ ಖಾನ್​ರನ್ನು ಕಿಡ್ನಾಪ್​ ಮಾಡಿದ ಅರ್ಜುನ್​ ಕಪೂರ್​! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಸುಸ್ತು...

 ಕರೀನಾ ಕಪೂರ್​ ಖಾನ್​ರನ್ನು ಕಿಡ್ನಾಪ್​ ಮಾಡಿದ ಅರ್ಜುನ್​ ಕಪೂರ್​! ಬಿಡಿಸಲು ಹೋಗುವ ರಣವೀರ್​ ಸಿಂಗ್​. ಏನಿದು ಹೊಸ ವಿಷ್ಯ?  
 

Singham Again star Kareena Kapoor Khan says Rohit Shettys film would be incomplete without her Ramayan suc
Author
First Published Oct 7, 2024, 10:29 PM IST | Last Updated Oct 7, 2024, 10:37 PM IST

ರಾಮಾಯಣದ ಕಥೆಯನ್ನಾಧರಿಸಿ ಅದೆಷ್ಟೋ ಚಿತ್ರಗಳು ಬಂದು ಹೋಗಿವೆ. ಇನ್ನೂ ಕೆಲವು ಚಿತ್ರಗಳು ಬರುವುದು ಇದೆ. ಅದರ ಮಧ್ಯೆಯೇ ಈಗ ಆಧುನಿಕ ರಾಮಾಯಣದ ಚಿತ್ರವೊಂದರ ಟ್ರೇಲರ್​ ಬಿಡುಗಡೆಯಾಗಿದೆ. ಅದೇ ಸಿಂಘಂ ಅಗೇನ್​.  ಅಜಯ್ ದೇವಗನ್ ಇಲ್ಲಿ ಆಧುನಿಕ ರಾಮನ ಪಾತ್ರವನ್ನು ನಿರ್ವಹಿಸಿದ್ದರೆ ಕರೀನಾ ಕಪೂರ್ ಖಾನ್ ಸೀತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ಅರ್ಜುನ್​ ಕಪೂರ್​ ನಟಿಸಿದ್ದಾರೆ. ಅಂದಹಾಗೆ ಇದರ ಹೆಸರಿಗೂ ರಾಮಾಯಣಕ್ಕೂ ಸಂಬಂಧವಿಲ್ಲ. ಸಿಂಘಂ ಅಗೇನ್​ ಹೆಸರು ನೋಡಿ ಇಂದು ಬಿಡುಗಡೆಯಾಗಿರುವ ಟ್ರೇಲರ್​ ನೋಡಿದ ಫ್ಯಾನ್ಸ್​ ಫುಲ್​ ಸುಸ್ತು ಹೊಡೆದಿದ್ದಾರೆ. ಏಕೆಂದರೆ ಇದರಲ್ಲಿ ಮತ್ತದೇ ರಾಮಾಯಣ ಕಥೆ!

ಹೌದು. ರಾಮಾಯಣದ ಕಥೆಯನ್ನು ಇಟ್ಟುಕೊಂಡು ರೋಹಿತ್ ಶೆಟ್ಟಿ ಅವರು ‘ಸಿಂಘಂ ಅಗೇನ್​’ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಜಯ್​ ದೇವಗನ್​, ರಣವೀರ್​ ಸಿಂಗ್​, ಕರೀನಾ ಕಪೂರ್​ ಖಾನ್​, ಅರ್ಜುನ್​ ಕಪೂರ್​, ಅಕ್ಷಯ್​ ಕುಮಾರ್​, ದೀಪಿಕಾ ಪಡುಕೋಣೆ ಮುಂತಾದವರು ಅಭಿನಯಿಸಿದ್ದಾರೆ.  ದೀಪಾವಳಿಯಂದು ಅಂದರೆ ನವೆಂಬರ್​ 1ರಂದು ‘ಸಿಂಗಂ ಅಗೇನ್​’ ಸಿನಿಮಾ ತೆರೆಕಾಣಲಿದೆ. ಇಂದು ಟ್ರೇಲರ್​ ಬಿಡುಗಡೆಯಾಗಿದ್ದು, ಅದು ಸಂಪೂರ್ಣ ರಾಮಾಯಣದ ಕಥೆ ಇರುವುದನ್ನು ನೋಡಬಹುದು.  

ಬಿಗ್​ಬಾಸ್​ನವ್ರು ಕರೆದಾಗ ಕದ್ದು ಮುಚ್ಚಿ ಶೂಟಿಂಗ್​ ಮಾಡಿ ಬರ್ತೇನೆ ಎಂದ ರಾಖಿ ಸಾವಂತ್​! ದುಬೈನಿಂದ ಸಂದರ್ಶನ

ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗುತ್ತಾನೆ. ಅಂದರೆ ಅರ್ಜುನ್​ ಕಪೂರ್​, ಕರೀನಾಳನ್ನು ಕಿಡ್ನಾಪ್​ ಮಾಡುತ್ತಾರೆ.  ರಾಮನಾಗಿ ಅಜಯ್​ ದೇವಗನ್​ ನಟಿಸಿದ್ದಾರೆ. ವಿಲನ್​ ಅರ್ಜುನ್​ ಕಪೂರ್​ರನ್ನು ರಾವಣನಿಗೆ ಹೋಲಿಕೆ ಮಾಡಿದ್ದು, ಶ್ರೀಲಂಕಾದಲ್ಲಿ ಇರುವ ನಟೋರಿಯಸ್​ ವ್ಯಕ್ತಿಯಾಗಿ  ಅಭಿನಯಿಸಿದ್ದಾರೆ. ನಾಯಕಿಯನ್ನು ವಿಲನ್​ ಅಪಹರಣ ಮಾಡಿದ ಬಳಿಕ ಆಕೆಯನ್ನು ಮರಳಿ ಕರೆದುಕೊಂಡು ಬರಲು ಲಂಕೆಗೆ ಸಿಂಘಂ ಅರ್ಥಾತ್​ ನಾಯಕ ಅಜಯ್​ ದೇವಗನ್ ಪ್ರಯಾಣ ಮಾಡುತ್ತಾನೆ. ಅವನಿಗೆ ಸಾಥ್​ ಕೊಡುವುದು ಲಕ್ಷ್ಮಣನಾಗಿ ನಟಿಸಿರೋ ಟೈಗರ್​ ಶ್ರಾಫ್​, ಆಂಜನೇಯನ ಪಾತ್ರ ಹೋಲುವ ರಣವೀರ್​ ಸಿಂಗ್​ ಮತ್ತು ಜಟಾಯು ರೀತಿಯ ಅಕ್ಷಯ್​ ಕುಮಾರ್​. ಈ ರೀತಿ ಕಥೆಯನ್ನು ‘ಸಿಂಗಂ ಅಗೇನ್’ ಸಿನಿಮಾದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ ತೋರಿಸಲಿದ್ದಾರೆ.

ಈಗಷ್ಟೇ ಅಮ್ಮನಾಗಿರುವ ದೀಪಿಕಾ ಪಡುಕೋಣೆಯ ಭರ್ಜರಿ ಆ್ಯಕ್ಷನ್ ಇದರಲ್ಲಿ ನೋಡಬಹುದು. ​ ಲೇಡಿ ಸಿಂಗಂ ಆಗಿ ಅಬ್ಬರಿಸಿದ್ದಾರೆ. ಸದ್ಯ ಇವರ ಪಾತ್ರದ ಪರಿಚಯವನ್ನೂ ನೋಡಿರುವ ಅನೇಕರು ದೀಪಿಕಾ ಪಡುಕೋಣೆ ವಿಭೀಷಣನ ಪಾತ್ರವನ್ನು ನಿರ್ವಹಿಸಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಪ್ರಮೋಷನ್​ಗೆ ಬಂದಿರುವ ಕರೀನಾ ಕಪೂರ್​, ಸೀತಾ ಇಲ್ಲದೇ ರಾಮಾಯಣ ಇಲ್ಲ, ರಕ್ಷಿತ್​ ಶೆಟ್ಟಿ ಸಿನಿಮಾದಲ್ಲಿ ಕರೀನಾ ಕಪೂರ್ ಇಲ್ಲದೇ ಇರಲು ಸಾಧ್ಯವಿಲ್ಲ ಎಂಬ ಡೈಲಾಗ್​ ಹೇಳಿದ್ದಾರೆ. ​

ನನ್ನದು ಬಚ್ಚನ್​ ಫ್ಯಾಮಿಲಿ, ಖಾನ್ ಫ್ಯಾಮಿಲಿಯಲ್ಲ! ಕರಣ್​ ಜೋಹರ್​ ವಿರುದ್ಧ ಐಶ್ವರ್ಯ ಗರಂ ಆಗಿದ್ಯಾಕೆ?


Latest Videos
Follow Us:
Download App:
  • android
  • ios