Asianet Suvarna News Asianet Suvarna News

ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ರಜನಿಕಾಂತ್

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ನಾಲ್ಕು ದಿನಗಳ ನಂತರ ಮನೆಗೆ ಮರಳಿದ್ದಾರೆ. 73 ವರ್ಷದ ನಟ ಅಕ್ಟೋಬರ್ 3 ರಂದು ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮನೆಗೆ ಮರಳಿದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

Rajinikanth discharge after successful heart procedure and he thanks to fans and well wishers gow
Author
First Published Oct 4, 2024, 5:27 PM IST | Last Updated Oct 4, 2024, 5:27 PM IST

ಚೆನ್ನೈನ ಅಯ್ಯನಾವರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ನಾಲ್ಕು ದಿನಗಳ ಆರೈಕೆಯ ನಂತರ ಮನೆಗೆ ಮರಳಿದ್ದಾರೆ. 73 ವರ್ಷದ ನಟ ಸೆಪ್ಟೆಂಬರ್ 30, 2024 ರಂದು ಅಪಧಮನಿಯಲ್ಲಿ ಊತದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಅಕ್ಟೋಬರ್ 3 ರಾತ್ರಿ 11 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 

ರಜನಿಕಾಂತ್ ಅವರ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ, ಚಿತ್ರರಂಗದ ಹಲವಾರು ಹಿತೈಷಿಗಳು, ರಾಜಕಾರಣಿಗಳು ಪ್ರಧಾನಿ ಮೋದಿ , ತಮಿಳುನಾಡು ಸಿಎಂ ಸೇರಿ ಅನೇಕರು ತಮ್ಮ ಪ್ರಾರ್ಥನೆ ಮತ್ತು ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಎಲ್ಲರಿಗೂ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿರುವ ತಲೈವಾ ನಿಮ್ಮೆಲ್ಲರ ಹಾರೈಕೆಗೆ ಕೃತಜ್ಞ ಎಂದಿದ್ದಾರೆ.

ಭಾರತದ ಕಾರ್ಮಿಕ ವರ್ಗಕ್ಕೆ ಸಿಹಿ ಸುದ್ದಿ, 2025 ರಲ್ಲಿ 9.5% ವೇತನ ಹೆಚ್ಚಳ!

ಜೊತೆಗೆ ನನ್ನ ಪ್ರೀತಿಯ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ  ನರೇಂದ್ರ ಮೋದಿ ಅವರೇ ನನ್ನ ಆರೋಗ್ಯದ ಬಗ್ಗೆ ನಿಮ್ಮ ಕಳವಳ ಮತ್ತು ಕಾಳಜಿಗಾಗಿ ಮತ್ತು ವೈಯಕ್ತಿಕವಾಗಿ ನನ್ನನ್ನು ಪರೀಕ್ಷಿಸಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಹೃದಯದಿಂದ ರಕ್ತ ಸಂಚಾರವಾಗುವ ಮುಖ್ಯ ನಾಳದಲ್ಲಿ ರಜನಿಕಾಂತ್ ಅವರಿಗೆ ಊತ ಕಾಣಿಸಿಕೊಂಡಿತ್ತು. ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿತ್ತು ಮತ್ತು ನಟನನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಟ್ರಾನ್ಸ್‌ಕ್ಯಾಥೀಟರ್ ಚಿಕಿತ್ಸೆ ಎಂದು ಕರೆಯಲ್ಪಡುವ ಶಸ್ತ್ರಚಿಕಿತ್ಸೆಯೇತರ ವಿಧಾನವನ್ನು ನಡೆಸಲಾಯಿತು. ಹಿರಿಯ ಹೃದ್ರೋಗ ತಜ್ಞ ಡಾ. ಸಾಯಿ ಸತೀಶ್ ನೇತೃತ್ವದ ಈ ಕಾರ್ಯವಿಧಾನವು ಅಪಧಮನಿಯಲ್ಲಿನ ಊತಕ್ಕೆ ಚಿಕಿತ್ಸೆ ನೀಡಲು ಸ್ಟೆಂಟ್ ಅನ್ನು ಇರಿಸುವುದನ್ನು ಒಳಗೊಂಡಿತ್ತು. ಇದು ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಪ್ರತೀ ದಿನ ಕೂದಲಿಗೆ ಎಣ್ಣೆ ಹಚ್ಚಿದ್ರೆ ಏನಾಗುತ್ತೆ, ಲಾಭವೆಷ್ಟು? ನಷ್ಟವೆಷ್ಟು?

ಟ್ರಾನ್ಸ್‌ಕ್ಯಾಥಟರ್ ಚಿಕಿತ್ಸೆ ಮೂಲಕ ಹೃದಯದಲ್ಲಿನ ರಕ್ತನಾಳಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.  73ರ ಹರೆಯದ  ಹಿರಿಯ ನಟ ರಜನಿಕಾಂತ್ ಅವರ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಇದು ಅಭಿಮಾನಿಗಳಿಗೆ ಆತಂಕವನ್ನು ಕಡಿಮೆ ಮಾಡಿದೆ. 

ತಡರಾತ್ರಿ ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.  ಈ ಮೂಲಕ ಅಭಿಮಾನಿಗಳಿಗೆ ಆತಂಕ ಕೊನೆಗೊಂಡಿತು.  ಸಾಮಾಜಿಕ ಮಾಧ್ಯಮದಲ್ಲಿ   ನಟನ ಚೇತರಿಕೆಯ ಬಗ್ಗೆ ತಮ್ಮ ಸಂತೋಷವನ್ನು ಅಭಿಮಾನಿಗಳು ವ್ಯಕ್ತಪಡಿಸಿದರು.  ಮುಂದಿನ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಪರಿಣಾಮವಾಗಿ, ಅಕ್ಟೋಬರ್ 10, 2024 ರಂದು ಬಿಡುಗಡೆಯಾಗಲಿರುವ ಅವರ ಮುಂಬರುವ ಚಿತ್ರ "ವೆಟ್ಟೈಯನ್" ನ ಪ್ರಚಾರ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲು ಸಾಧ್ಯವಾಗುವುದಿಲ್ಲ. ಟಿ.ಜೆ.ಜ್ಞಾನವೇಲ್ ನಿರ್ದೇಶನದ ಈ ಚಿತ್ರ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾಗಲಿದೆ. ಸೂಪರ್‌ಸ್ಟಾರ್ ಪ್ರಚಾರ ಕಾರ್ಯಕ್ರಮಗಳಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳು ನಿರಾಶೆಗೊಂಡಿದ್ದರೂ, ಅವರು ಅವರ ಚೇತರಿಕೆಗಾಗಿ ಆಶಾಭಾವನೆ ಹೊಂದಿದ್ದಾರೆ ಮತ್ತು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

 

Latest Videos
Follow Us:
Download App:
  • android
  • ios