Asianet Suvarna News Asianet Suvarna News

ಪ್ರಧಾನಿ ಮೋದಿ-ಅಕ್ಷಯ್ ಕುಮಾರ್ ಮೀಮ್ ಶೇರ್ ಮಾಡಿದ ಪ್ರಕಾಶ್ ರಾಜ್ ಸಖತ್ ಟ್ರೋಲ್

ಅಕ್ಷಯ್ ಕುಮಾರ್ ಮತ್ತು ಮೋದಿ ಮೀಮ್ ಶೇರ್ ಮಾಡಿದ ಪ್ರಕಾಶ್ ರಾಜ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. 

Prakash Raj gets troll Akshay Kumar for his Chhatrapati Shivaji Maharaj look sgk
Author
First Published Dec 9, 2022, 2:33 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ಮೊದಲ ಮರಾಠಿ ಸಿನಿಮಾದ ಲುಕ್ ರಿಲೀಸ್ ಆಗಿದೆ. ಶೂಟಿಂಗ್ ಸೆಟ್‌ನಿಂದ ವಿಡಿಯೋ ಶೇರ್ ಮಾಡಿರುವ ಅಕ್ಷಯ್ ಕುಮಾರ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾಗಳು ಸತತ ಸೋಲು ಕಂಡಿವೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಕಂಗೆಟ್ಟಿದ್ದ ಅಕ್ಷಯ್ ಕುಮಾರ್ ಮರಾಠಿ ಕಡೆ ಮುಖ ಮಾಡಿದ್ದು ಛತ್ರಪತಿ ಶಿವಾಜಿ ಮಹಾರಾಜ್ ಆಗಿ ತೆರೆಮೇಲೆ ಬರ್ತಿದ್ದಾರೆ. ಅಕ್ಷಯ್ ಕುಮಾರ್ ಶಿವಾಜಿ ಲುಕ್ ವೈರಲ್ ಆದ ಬೆನ್ನಲ್ಲೇ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸರಿಯಾಗಿ ಸಂಶೋಧನೆ ಮಾಡಿ ನಂತರ ಸಿನಿಮಾ ಮಾಡಿ ಎಂದು ನೆಟ್ಟಿಗರು ತರಾಟೆ ತೆಗೆದು ಕೊಂಡಿದ್ದಾರೆ. ಇದೀಗ ಖ್ಯಾತ ಸೌತ್ ಸ್ಟಾರ್ ಪ್ರಕಾಶ್ ರೈ ಕೂಡ ಅಕ್ಷಯ್ ಕುಮಾರ್ ಕಾಲೆಳೆದಿದ್ದಾರೆ. 

ಅಕ್ಷಯ್ ಕುಮಾರ್ ಮೊದಲ ಮರಾಠಿ ಸಿನಿಮಾಗೆ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ಮೊದಲ ಲುಕ್ ಶೇರ್ ಮಾಡಿದ್ದರು ಅಕ್ಷಯ್ ಕುಮಾರ್. ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿಯಾಗಿ ನಡೆದುಕೊಂಡು ಬರುತ್ತಿದ್ದಾರೆ. ಈ ವಿಡಿಯೋದಲ್ಲಿ ಬಲ್ಬ್‌ನ ಗೊಂಚಲು ಕೂಡ ಇದೆ. ನೆಟ್ಟಿಗರ ಕಣ್ಣು ಸೀದ  ಬಲ್ಬ್ ಮೇಲೆ ಹೋಗಿದೆ. ಬಳಿಕ ತರಾಟೆ ತೆಗೆದುಕೊಂಡಿದ್ದಾರೆ. ಛತ್ರಪತಿ ಶಿವಾಜಿ ಆಡಳಿತ ನಡೆಸಿದ್ದು 1674 ರಿಂದ 1680ರ ವರೆಗೆ. ಆಗ ಬಲ್ಬ್ ಕಂಡುಹಿಡಿದಿರಲಿಲ್ಲ. ಆದರೆ ಅಕ್ಷಯ್ ಕುಮಾರ್ ಅವರ ಛತ್ರಪತಿ ಸಿನಿಮಾದಲ್ಲಿ ಬಲ್ಬ್ ಹೇಗೆ ಬಂತು ಎಂದು ಟ್ರೋಲ್ ಮಾಡುತ್ತಿದ್ದಾರೆ.   

ಈ ನಡುವೆ ನಟ ಪ್ರಕಾಶ್ ರಾಜ್, ಅಕ್ಷಯ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಯ ಮೀಮ್ ಶೇರ್ ಮಾಡಿದ್ದಾರೆ. ಮೀಮ್ ನಲ್ಲಿ ಮೋದಿ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಮಾತುಕತೆ ನಡೆಸುತ್ತಿದ್ದಾರೆ. 'ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್ ಯಾವಾಗ ಇತ್ತೋ ವಿಮಲ್ ರಾಜ್' ಎಂದು ಕೇಳುತೇತ್ರುವ ಫೋಟೋ ಮತ್ತು ಅದಕ್ಕೆ ಅಕ್ಷಯ್ ಕುಮಾರ್ 'ನೀವೂ ಹೇಳಿದ್ರಲ್ಲ 1988ರಲ್ಲಿ ನಿಮ್ಮ ಕಡೆ ಡಿಜಿಟಲ್ ಕ್ಯಾಮರಾ ಇತ್ತು ಅಂತ. ಇದು ಹಾಗೆ' ಎಂದು ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡುವ ಮೀಮ್ ಇದಾಗಿದೆ. ಈ ಮೀಮ್‌ನ ಫೋಟೋ ಶೇರ್ ಮಾಡಿ 'ಮನ್ ಕಿ ಬಾತ್' ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಓ..ಆ ಕಾಲದಲ್ಲೇ ಬಲ್ಬ್ ಇತ್ತಾ; ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಲುಕ್ ಹಿಗ್ಗಾಮುಗ್ಗಾ ಟ್ರೋಲ್

ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಪ್ರಕಾಶ್ ರಾಜ್ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರಕಾಶ್ ರೈ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಸಿನಿಮಾ ಪೋಸ್ಟರ್ ಶೇರ್ ಮಾಡಿ ಕಾಲೆಳೆಯುತ್ತಿದ್ದಾರೆ. ಅಂದಹಾಗೆ ಟ್ರೋಲ್ ಗಳು ಪ್ರಕಾಶ್ ರಾಜ್ ಅವರಿಗೆ ಏನು ಹೊದೇನಲ್ಲ. ಹಾಗಾಗಿ ಹೆಚ್ಚು ತಲೆಡಿಸಿಕೊಳ್ಳದ ಪ್ರಕಾಶ್ ರಾಜ್ ಸಿನಿಮಾ ಕಡೆ ಗಮನ ಹರಿಸಿದ್ದಾರೆ.

ಅಕ್ಷಯ್, ಸೋನಾಕ್ಷಿಯಂತೆ ಭಾರೀ ದೊಡ್ಡ ಸಂಭಾವನೆ ಕೇಳಿ ಚಿತ್ರದಿಂದ ಹೊರಹಾಕಲ್ಪಟ ಸ್ಟಾರ್ಸ್‌ ಇವರು

ಅಕ್ಷಯ್ ಕುಮಾರ್ ನಟನೆಯ  'ವೇದತ್ ಮರಾಠೆ ವೀರ್ ದೌಡಲೆ ಸಾತ್' ಸಿನಿಮಾಗೆ ಮಹೇಶ್ ಮಂಜ್ರೇಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ನವಾಬ್ ಖಾನ್, ಮತ್ತು ಪ್ರವೀಣ್ ತಾರ್ಡೆಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ವಸೀಮ್ ಖುರೇಷಿ ನಿರ್ಮಿಸಿರುವ 'ವೇದತ್ ಮರಾಠೆ ವೀರ್ ದೌಡಲೆ ಸಾತ್' ಮರಾಠಿ ಮತ್ತು ಹಿಂದಿ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಈ ಸಿನಿಮಾ 2023ರ ದೀಪಾವಳಿಯಂದು ರಿಲೀಸ್ ಆಗುತ್ತಿದೆ. 


 

Follow Us:
Download App:
  • android
  • ios