ಮುಂಬೈನಲ್ಲಿ ನಡೆದ ವೇವ್ಸ್ ಸಮ್ಮಿಟ್ 2025 ಕಾರ್ಯಕ್ರಮದಲ್ಲಿ ಕಿಂಗ್ ನಾಗಾರ್ಜುನ ಭಾಗವಹಿಸಿದ್ದರು. ಚಿರಂಜೀವಿ, ರಜನಿಕಾಂತ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸಿದ್ದರು.

ಮುಂಬೈನಲ್ಲಿ ನಡೆದ ವೇವ್ಸ್ ಸಮ್ಮಿಟ್ 2025 ಕಾರ್ಯಕ್ರಮದಲ್ಲಿ ಕಿಂಗ್ ನಾಗಾರ್ಜುನ ಭಾಗವಹಿಸಿದ್ದರು. ಚಿರಂಜೀವಿ, ರಜನಿಕಾಂತ್, ಆಮೀರ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಭಾಗವಹಿಸಿದ್ದರು. ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಿಂಗ್ ನಾಗಾರ್ಜುನ ಕೂಡ ವೇವ್ಸ್ ಸಮ್ಮಿಟ್‌ನಲ್ಲಿ ಸಂಭ್ರಮ ಮನೆಮಾಡಿದರು. ಅಲ್ಲಿ ಏರ್ಪಾಟು ಮಾಡಲಾಗಿದ್ದ ತೆಲಂಗಾಣ ಮಳಿಗೆಯನ್ನು ತಮ್ಮ ಕೈಯಾರೆ ಉದ್ಘಾಟಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂತರ ನಾಗಾರ್ಜುನ, ಕಾರ್ತಿ, ಖುಷ್ಬೂ, ಅನುಪಮ್ ಖೇರ್ ಜೊತೆಗೂಡಿ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಾಗಾರ್ಜುನ ಮಾಡಿದ ಹೇಳಿಕೆಗಳು ವೈರಲ್ ಆಗಿವೆ. ಬಾಹುಬಲಿ, ಪುಷ್ಪ, ಕೆಜಿಎಫ್‌ನಂತಹ ಸೂಪರ್ ಹಿಟ್ ಚಿತ್ರಗಳ ಬಗ್ಗೆ ನಾಗಾರ್ಜುನ ವಿಶೇಷವಾಗಿ ಪ್ರಸ್ತಾಪಿಸಿದರು. ಶೇ.90ರಷ್ಟು ಜನ ಸಿನಿಮಾಗೆ ಹೋಗೋದು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳೋಕೆ.

ತೆರೆಯ ಮೇಲೆ ನಡೆಯುವ ಮ್ಯಾಜಿಕ್ ನೋಡೋಕೆ ಅವರು ಇಷ್ಟಪಡ್ತಾರೆ. ಈ ಪೀಳಿಗೆಯ ಪ್ರೇಕ್ಷಕರು ನಾಯಕರನ್ನು ಸೂಪರ್ ಹೀರೋಗಳಾಗಿ, ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಾರೆ. ಬಾಹುಬಲಿ, ಪುಷ್ಪ, ಕೆಜಿಎಫ್ ಚಿತ್ರಗಳು ಅದಕ್ಕಾಗಿಯೇ ಯಶಸ್ವಿಯಾಗಿವೆ. ಪುಷ್ಪ ಚಿತ್ರ ತೆಲುಗಿಗಿಂತ ಉತ್ತರ ಭಾರತದಲ್ಲಿ ಹೆಚ್ಚು ಗಳಿಕೆ ಕಂಡಿತು. ನನಗೂ ಪುಷ್ಪ, ಬಾಹುಬಲಿಯಂತಹ ಚಿತ್ರಗಳು ಇಷ್ಟ ಅಂತ ನಾಗಾರ್ಜುನ ಹೇಳಿದರು.

ನನ್ನ ಹಾಡಿಗೆ ಕೆಲವು ನಟರು ಅನ್ಯಾಯ ಮಾಡಿದ್ರು: ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ್ದೇನು?

ಬಾಹುಬಲಿ ಚಿತ್ರಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ ಎಂದು ನಾಗಾರ್ಜುನ ಮೆಚ್ಚುಗೆ ವ್ಯಕ್ತಪಡಿಸಿದರು. ನಾಗಾರ್ಜುನ ಪ್ರಸ್ತುತ ರಜನಿಕಾಂತ್ ಅವರ ಜೈಲರ್, ಶೇಖರ್ ಕಮ್ಮುಲ ಅವರ ಕುಬೇರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಾ ಸಾಮಿರಂಗ ಚಿತ್ರದ ನಂತರ ನಾಗಾರ್ಜುನ ಏಕವ್ಯಕ್ತಿ ನಾಯಕನಾಗಿ ಹೊಸ ಚಿತ್ರವನ್ನು ಇನ್ನೂ ಆರಂಭಿಸಿಲ್ಲ.