Asianet Suvarna News Asianet Suvarna News

ಬಿಬಿಸಿ ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ: ಅಪ್ಘಾನಿಸ್ತಾನದಲ್ಲಿ ಪಾಕ್‌ ಕುತಂತ್ರ ಹೊಗಳಿದ ನಿರೂಪಕಿ!

* ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಪಾಕಿಸ್ತಾನದ ಬಹಿರಂಗ ಬೆಂಬಲ

* ಪಂಜ್‌ಶೀರ ಪ್ರಾಂತ್ಯದ ಮೇಲೂ ದಾಳಿ

* ಪಾಕಿಸ್ತಾನದ ಕುಕೃತ್ಯವನ್ನು ಹೊಗಳಿದ ಬಿಬಿಸಿ ನಿರೂಪಕಿ

BBC slammed for doing propaganda work for Pakistan during interview with scholar Christine Fair pod
Author
Bangalore, First Published Sep 6, 2021, 12:41 PM IST

ಕಾಬೂಲ್(ಸೆ.06): ಪಾಕಿಸ್ತಾನ ಸದ್ಯಕ್ಕೀಗ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನ್‌ ಉಗ್ರರಿಗೆ ಬಹಿರಂಗವಾಗಿ ಸಹಾಯ ಮಾಡುತ್ತಿದೆ. ಪಾಕಿಸ್ತಾನದ ವಾಯುಪಡೆ ಪಂಜಶೀರ್ ನಲ್ಲಿ ರಾಷ್ಟ್ರೀಯ ಪ್ರತಿರೋಧ ಪಡೆ (NRF) ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನದ ಸಿಎಚ್ -4 ಡ್ರೋನ್ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಮನೆ ಮೇಲೆ ದಾಳಿ ನಡೆಸಿದೆ. ಇದರ ಮೂಲಕವೇ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಅಫ್ಘಾನಿಸ್ತಾನದ ವಿಷಯದಲ್ಲಿ ಪಾಕಿಸ್ತಾನವನ್ನು ಬಿಬಿಸಿ ಹೊಗಳುತ್ತಿದ್ದು, ಇದು ಈ ಮಾಧ್ಯಮದ ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕೆ ಕಳಂಕ ತಂದಿದೆ. ಇನ್ನು ತಾಲಿಬಾನ್ ಸರ್ಕಾರ ರಚನೆಯಾಗುವ ಮೊದಲು, ಪಾಕಿಸ್ತಾನದ ಐಎಸ್‌ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಮತ್ತು ಅನೇಕ ಅಧಿಕಾರಿಗಳು ಕಾಬೂಲ್ ತಲುಪಿದ್ದಾರೆ ಎಂಬುವುದು ಉಲ್ಲೇಖನೀಯ.

ಏನಿದು ವಿವಾದ? ಪಾಕ್ ವಿರುದ್ಧ ತಜ್ಞರ ಮಾತು ಸಹಿಸದ ಬಿಬಿಸಿ

ಬಿಬಿಸಿ ಆಂಕರ್ ಫಿಲಿಪಾ ಥಾಮಸ್ ಅಫ್ಘಾನಿಸ್ತಾನದ ಸಮಸ್ಯೆಯನ್ನು ದಕ್ಷಿಣ ಏಷ್ಯಾದ ವ್ಯವಹಾರಗಳ ತಜ್ಞೆ ಕ್ರಿಸ್ಟಿನಾ ಫೇರ್ ಜೊತೆ ಚರ್ಚಿಸುತ್ತಿದ್ದರು. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಫ್ಘಾನಿಸ್ತಾನದಲ್ಲಿ ಸ್ಥಿರ ಸರ್ಕಾರ ರಚನೆಯಾಗುವುದನ್ನು ಪಾಕಿಸ್ತಾನ ಎಂದಿಗೂ ಬಯಸುವುದಿಲ್ಲ ಎಂದು ಕ್ರಿಸ್ಟಿನಾ ಹೇಳಿದ್ದಾರೆ. ಈ ವೇಳೆ ನಿರೂಪಕಿ ಪಾಕಿಸ್ತಾನ ಪರ ಮಾತನಾಡುತ್ತಾ ಅಪ್ಘಾನಿಸ್ತಾನದಲ್ಲಿ ಅಸ್ಥಿರತೆ ಇದ್ದರೆ, ಪಾಕಿಸ್ತಾನ ನಿರಾಶ್ರಿತರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಅದೇಕೆ ಇಂತಹ ನಡೆ ಅನುಸರಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕ್ರಿಸ್ಟಿನಾ ಅವರು 1990 ರ ದಶಕದಲ್ಲಿ ತಾಲಿಬಾನ್‌ಗಳಿಗೆ ಬೆಂಬಲ ನೀಡುವ ವಿಚಾರವಿರಲಿ ಅಥವಾ ಭಾರತದ ಮೇಲೆ ದಾಳಿ ಮಾಡಿದ ಭಯೋತ್ಪಾದಕರಿಗೆ ಆಶ್ರಯ ನೀಡುವ ವಿಚಾರವಿರಲಿ ಪಾಕಿಸ್ತಾನ ಯಾವತ್ತೂ ಅಂತಹುದ್ದೇ ನಡೆ ಸನುಸರಿಸಿದೆ. ಹೀಗಿರುವಾಗ ಈ ಚರ್ಚೆಗೆ ಪಾಕಿಸ್ತಾನದ ರಾಜತಾಂತ್ರಿಕರು ಅಥವಾ ಅಧಿಕಾರಿ ಹಾಜರಿಲ್ಲ ಎಂಬ ಕಾರಣ ನೀಡಿ ಆಂಕರ್ ಅವರನ್ನು ತಡೆದಿದ್ದಾರೆ. ಹೀಗಿದ್ದರೂ ಆಂಕರ್ ಪಾಕಿಸ್ತಾನದ ವಿರುದ್ಧದ ಈ ಆರೋಪಗಳನ್ನು ಖಂಡಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕ್ರಿಸ್ಟಿನ್ ಆಂಕರ್ ಪಾಕಿಸ್ತಾನದ ಪ್ರಚಾರಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಿಬಿಸಿ ವಿರುದ್ಧ ಆಕ್ರೋಶ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಬಿಬಿಸಿಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಈ ಸಂಭಾಷಣೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿ, ಆಂಕರ್ ಹಠಮಾರಿ ವರ್ತನೆ ತೋರಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದು ತಾಲಿಬಾನ್ ರಚಿಸಿರುವ ವಿಚಾರವನ್ನು ಪಾಕಿಸ್ತಾನ ಎಂದಿಗೂ ನಿರಾಕರಿಸಿಲ್ಲ. ಆದರೆ ಬಿಬಿಸಿ ವರ್ಲ್ಡ್‌ ಸಮತೋಲನ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ನಿರೂಪಿಸುವ ಭರದಲ್ಲಿ ಪಾಕಿಸ್ತಾನದ ಪರ ವಾಲಿದೆ. ಇದು ಪಾಶ್ಚಾತ್ಯ ಪತ್ರಿಕೋದ್ಯಮದ ಸಮಸ್ಯೆ. ಕ್ರಿಸ್ಟಿನಾ ಜಾತ್ರೆಯ ಮಾತನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios