ನಿರ್ಮಲಾ ಮೊದಲ ಬಜೆಟ್ನ ಗುಡ್, ಬ್ಯಾಡ್, ಅಗ್ಲಿ ಅಂಶಗಳು!
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಬಗ್ಗೆ ಬೇರೆ ಬೇರೆ ಕ್ಷೇತ್ರಗಳಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾದರೆ ಬಜೆಟ್ನಲ್ಲಿರುವ ಒಳ್ಳೆಯ, ಕೆಟ್ಟ ಹಾಗೂ ಅತಿಕೆಟ್ಟ ಎನ್ನಿಸಿಕೊಳ್ಳುವ ಅಂಶಗಳು ಏನೇನು? ಇಲ್ಲಿವೆ ಆ ಪ್ರಮುಖ ಅಂಶಗಳು
ಒಳ್ಳೆಯ ಅಂಶಗಳೇನು?
*ತೆರಿಗೆ ರಿಟರ್ನ್ಸ್ಗೆ ಆಧಾರ್ ಮತ್ತು ಪಾನ್ ಕಾರ್ಡ್ ಎರಡರಲ್ಲಿ ಯಾವುದನ್ನಾದರೂ ದಾಖಲೆಯಾಗಿ ಬಳಕೆಗೆ ಅವಕಾಶ. ಒಂದೊಮ್ಮೆ ಪಾನ್ಕಾರ್ಡ್ ಇಲ್ಲದಿದ್ದಲ್ಲಿ ಆಧಾರ್ ನಂಬರ್ ನೀಡಿದರೆ ಸಾಕು.
*ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಜಿಎಸ್ಟಿಯನ್ನು 12%ನಿಂದ 5%ಗೆ ಇಳಿಕೆಗೆ ನಿರ್ಧಾರ. ಈಗಾಗಲೇ ಜಿಎಸ್ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ.1.50 ಲಕ್ಷ ಮಿತಿಯ ಎಲೆಕ್ಟ್ರಿಕ್ ವಾಹನ ಸಾಲದ ಮೇಲಿನ ತೆರಿಗೆ ರದ್ದು. ಕೆಲ ಬಿಡಿ ಭಾಗಗಳ ಮೇಲಿನ ಅಬಕಾರಿ ಸುಂಕಕ್ಕೂ ಕತ್ತರಿ.
*ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗುವಂತೆ ‘ಒಂದೇ ದೇಶ ಒಂದೇ ಕಾರ್ಡ್’ ಜಾರಿಗೆ. ಈ ‘ರುಪೇ ಕಾರ್ಡ್’ನಿಂದ ದೇಶದೆಲ್ಲೆಡೆ ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್ ಚಾರ್ಜ್ ಕಟ್ಟಿಕೊಳ್ಳಬಹುದು. ಇದರಲ್ಲೇ ರಿಟೇಲ್ ಖರೀದಿ, ಹಣ ವಿತ್ಡ್ರಾ ಕೂಡ ಮಾಡಬಹುದು.
*ಬ್ಯಾಂಕ್ಗಳ ಹಿತದೃಷ್ಟಿಯಿಂದ 70 ಸಾವಿರ ಕೋಟಿ ಮೀಸಲು. ಕಳೆದ ನಾಲ್ಕು ವರ್ಷದಲ್ಲಿ ದಾಖಲೆ ಪ್ರಮಾಣದ ೪ ಲಕ್ಷ ಕೋಟಿ ರು. ಕೆಟ್ಟ ಸಾಲದ ವಸೂಲಾತಿ ಮಾಡಲಾಗಿದೆ.
*ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಭಾರತಕ್ಕೆ ಮರಳಿದ ಬಳಿಕ ಕಡಿಮೆ ಅವಧಿಯಲ್ಲಿ ಆಧಾರ್ ಕಾರ್ಡ್ ವಿತರಿಸುವುದು. ಈಗಿನ ವ್ಯವಸ್ಥೆಯಲ್ಲಿ ಕನಿಷ್ಠ 180 ದಿನಗಳ ಕಾಲ ಕಾಯಬೇಕು.
*ಸ್ಟಾರ್ಟ್ಅಪ್ ಮತ್ತು ಬಂಡವಾಳ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ.
*50 ಕೋಟಿ ರು. ವರೆಗಿನ ನಗದು ರಹಿತ ವ್ಯವಹಾರದ ಮೇಲೆ ಎಂಡಿಆರ್ ಚಾರ್ಜ್ ಇರುವುದಿಲ್ಲ.
*ಅಸಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು 3000ರು. ಪೆನ್ಷನ್ ಹಣ ನೀಡುವುದಾಗಿ ಘೋಷಣೆ. ಈಗಾಗಲೇ ಹೆಚ್ಚುಕಡಿಮೆ 30 ಲಕ್ಷ ಕಾರ್ಮಿಕರಿಗೆ ಶ್ರಮ ಯೋಗಿ ಮಾಂಧನ್ ಯೋಜನೆ ಅಡಿ ಪೆನ್ಷನ್.
*ಮನೆ ಬಾಡಿಗೆ ನಿಯಮದಲ್ಲಿ ಬದಲಾವಣೆ. ಬಾಡಿಗೆ ಕಾಯ್ದೆಯನ್ನು ರಾಜ್ಯಗಳಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ
*ಶೂನ್ಯ ಬಂಡವಾಳ ಕೃಷಿಗೆ ಒತ್ತು. ಇದರಿಂದ ಸ್ಥಳೀಯವಾಗಿ ಸಿದ್ಧವಾಗುವ ಗೊಬ್ಬರಗಳ ಬಳಕೆಯೂ ಸಾಧ್ಯ.
*ನೂತನ ಶಿಕ್ಷಣ ನೀತಿ ಶೀಘ್ರ ಜಾರಿ. ವಿದೇಶಿ ವಿದ್ಯಾರ್ಥಿಗಳಿಗೂ ದೇಶದಲ್ಲಿ ಶಿಕ್ಷಣಕ್ಕೆ ಅವಕಾಶ ನೀಡಿ, ಸಂಶೋಧನೆಗೆ ಅನುಕೂಲ ಮಾಡಿಕೊಡುವುದು.
ಕೇಂದ್ರ ಬಜೆಟ್ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu
ಕೆಟ್ಟ ಅಂಶಗಳೇನು?
*ಕಂಪನಿಗಳ ಸಾರ್ವಜನಿಕ ಷೇರುಗಳ ಮಿತಿಯನ್ನು 25%ರಿಂದ 35%ಗೆ ಏರಿಕೆ.
*ಈವರೆಗಿನ ಕಾರ್ಪೊರೇಟ್ ಕಂಪನಿಗಳ ಮೇಲಿನ ಆದಾಯ ತೆರಿಗೆ ಮಿತಿಯನ್ನು 250 ಕೋಟಿಯಿಂದ 400 ಕೋಟಿ ರು.ಗೆ ಹೆಚ್ಚಿಸುವುದಾಗಿ ಘೋಷಣೆ.
*ರಕ್ಷಣಾ ಇಲಾಖೆಗೆ ಹೇಳಿಕೊಳ್ಳುವಂತಹ ಯಾವು ದೇ ನೆರವು ನೀಡುವ ಬಗ್ಗೆ ಪ್ರಸ್ತಾಪವೇ ಇಲ್ಲ.
*ಉದ್ಯೋಗ ಸಮಸ್ಯೆ ನಿವಾರಣೆಗೂ ಸ್ಪಷ್ಟವಾದ ನಿಲುವು ಪ್ರಕಟಿಸಲಿಲ್ಲ.
ಅತಿಕೆಟ್ಟ ಅಂಶಗಳೇನು?
* ತೆರಿಗೆದಾರ ಉದ್ಯೋಗಿಗಳ ಸ್ಟಾಂಡರ್ಡ್ ಡಿಡಕ್ಷನ್ ಮತ್ತು ಟಿಡಿಎಸ್ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಮಧ್ಯಂತರ ಬಜೆಟ್ ವೇಳೆ ಪಿಯೂಷ್ ಗೋಯಲ್ ನೀಡಿದ್ದ ಭರವಸೆ ಈಡೇರಲಿಲ್ಲ .
*ಹೂಡಿಕೆದಾರರ ಮೇಲೆ ಈ ಹಿಂದೆ ಹೇರಲಾಗಿದ್ದ 10% ದೀರ್ಘಾವಧಿ ಕೆಪಿಟಲ್ ಗೇನ್ಸ್ ತೆರಿಗೆ ಮುಂದುವರಿಕೆ.
*ಶ್ರೀಮಂತರಿಗೆ ತೆರಿಗೆ ಹೊರೆ. 2-3 ಕೋಟಿ ರು. ಮತ್ತು ೫ಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಕ್ರಮವಾಗಿ ಶೇ.3 ಮತ್ತು ಶೇ.7ರಷ್ಟು ಹೆಚ್ಚುವರಿ ತೆರಿಗೆ
*ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ 1 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಸೆಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ಸೆಸ್ ಘೋಷಣೆ
*ಆರ್ಬಿಐ ಮೇಲೆ ಒತ್ತಡ. ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಭಾರೀ ಪ್ರಮಾಣದಿಂದ ಲಾಭಾಂಶ ನಿರೀಕ್ಷಿಸಲಾಗುತ್ತಿದೆ
ಕೇಂದ್ರ ಬಜೆಟ್ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu