Asianet Suvarna News Asianet Suvarna News

Business: ವಿದ್ಯುನ್ಮಾನ ಉದ್ಯಮಕ್ಕೆ ರಾಜ್ಯ ಅತ್ಯುತ್ತಮ ತಾಣ: ಅಶ್ವತ್ಥನಾರಾಯಣ

* ಉದ್ದಿಮೆಗಳಿಗೆ ರಾಜ್ಯವು ಪ್ರಶಸ್ತ ತಾಣ
* ವಿದ್ಯುನ್ಮಾನ ಉದ್ಯಮಕ್ಕೆ ರಾಜ್ಯ ಅತ್ಯುತ್ತಮ ತಾಣ ಎಂದ ಅಶ್ವತ್ಥನಾರಾಯಣ
* ಎಲೆಕ್ಟ್ರಾನಿಕ್ & ಪ್ರಾಡಕ್ಟಾನಿಕಾ ಇಂಡಿಯಾ-2021 ಕಾರ್ಯಕ್ರಮದಲ್ಲಿ ಹೇಳಿಕೆ

Karnataka Best Place for Electronic Business Says Ashwath narayan rbj
Author
Bengaluru, First Published Dec 18, 2021, 8:07 PM IST

ಬೆಂಗಳೂರು, (ಡಿ.18): ವಿದ್ಯುನ್ಮಾನ ಮತ್ತು ಅದಕ್ಕೆ ಪೂರಕವಾಗಿರುವ ಇತರ ಉದ್ದಿಮೆಗಳಿಗೆ ರಾಜ್ಯವು ಪ್ರಶಸ್ತ ತಾಣವಾಗಿದ್ದು, ಇವುಗಳ ಬೆಳವಣಿಗೆಗೆ ಸರಕಾರವು ರಚನಾತ್ಮಕ ನೀತಿಗಳನ್ನು ರೂಪಿಸಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ `ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ’ದಲ್ಲಿ ನಡೆಯುತ್ತಿರುವ `ಎಲೆಕ್ಟ್ರಾನಿಕ್ & ಪ್ರಾಡಕ್ಟಾನಿಕಾ ಇಂಡಿಯಾ-2021’ ಪ್ರದರ್ಶನ ಮತ್ತು ವಾಣಿಜ್ಯ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮೇಳಗಳು ಉದ್ಯಮಗಳನ್ನು ಸಮಗ್ರವಾಗಿ ಬೆಳೆಸಲು ದೊಡ್ಡ ಶಕ್ತಿಯಾಗಿ ಕೆಲಸ ಮಾಡಲಿವೆ ಎಂದರು.

Code Unnati: ಮೊದಲಿಗೆ 4 ಜಿಲ್ಲೆಗಳಲ್ಲಿ 'ಕೋಡ್ ಉನ್ನತಿ' ಜಾರಿ, 20 ಸಾವಿರ ವಿದ್ಯಾರ್ಥಿಗಳಿಗೆ ಲಾಭ

ವಿದ್ಯುನ್ಮಾನ ಉದ್ಯಮ ವಲಯದ ಬೆಳವಣಿಗೆಗೆ ರಾಜ್ಯದಲ್ಲಿರುವ ನೀತಿಗಳು ಮತ್ತು ಉತ್ತೇಜನಾ ಕ್ರಮಗಳನ್ನು ದೇಶದ ಉಳಿದ ರಾಜ್ಯಗಳು ಅನುಸರಿಸುತ್ತಿವೆ. ನಮ್ಮಲ್ಲಿ ಇರುವಂತಹ ಕೈಗಾರಿಕಾ ಪರವಾದ ನೀತಿಯು ಜಾಗತಿಕ ಮಟ್ಟದಲ್ಲೂ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ಬಣ್ಣಿಸಿದರು.

ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಎಲ್ಲ ಬಗೆಯ ಉದ್ಯಮಗಳ ತಾಣವಾಗಿದೆ. ಇದರ ಬಲದ ಮೇಲೆ ರಾಜ್ಯದ ಎಲ್ಲೆಡೆಗಳಲ್ಲೂ ಉದ್ದಿಮೆಗಳು ನೆಲೆಗೊಳ್ಳುವಂತೆ ಮಾಡಲು ಸರಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ನುಡಿದರು.

ರಾಜ್ಯವು ನವೋದ್ಯಮಗಳ ರಾಜಧಾನಿಯಾಗಿರುವುದು ಹೂಡಿಕೆ ಮತ್ತು ಉದ್ಯಮಗಳ ವಹಿವಾಟಿಗೆ ಕ್ಷಿಪ್ರ ಗತಿಯನ್ನು ತಂದುಕೊಟ್ಟಿದೆ. ಮುಂಬರಲಿರುವ ಅಗಾಧ ಸಾಮರ್ಥ್ಯದ ನವೋದ್ಯಮಗಳನ್ನು ಸ್ಥಾಪಿಸಲು ಕರ್ನಾಟಕವು ಹೇಳಿಮಾಡಿಸಿದ ರಾಜ್ಯವಾಗಿದೆ. ಇಂತಹ ವಾಣಿಜ್ಯ ಮೇಳಗಳಿಂದ ಉದ್ಯಮಿಗಳ ನಡುವೆ ವಿಚಾರ ವಿನಿಮಯ ನಡೆದು, ಸದೃಢ ಬೆಳವಣಿಗೆಗೆ ನೆರವಾಗಲಿದೆ ಎಂದು ಅವರು ಹೇಳಿದರು.

*17 ನವೋದ್ಯಮಗಳಿಗೆ ಪ್ರಶಸ್ತಿ ಪುರಸ್ಕಾರ
ನಗರದಲ್ಲಿರುವ `ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲೆಕ್ಯುಲರ್ ಪ್ಲಾಟ್ ಫಾರ್ಮ್ಸ್’ (ಸಿ-ಕ್ಯಾಂಪ್) ಏರ್ಪಡಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಅಶ್ವತ್ಥನಾರಾಯಣ ಅವರು, ಸಂಸ್ಥೆಯು ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಜೈವಿಕ ಉದ್ಯಮಶೀಲತೆ ಸ್ಪರ್ಧೆಯ ನಾನಾ ಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುವ 17 ನವೋದ್ಯಮ ಮತ್ತು ನಾವೀನ್ಯತಾ ಕಂಪನಿಗಳಿಗೆ ನಗದು ಬಹುಮಾನ ಮತ್ತು ಪುರಸ್ಕಾರಗಳನ್ನು ಪ್ರದಾನ ಮಾಡಿದರು.

Follow Us:
Download App:
  • android
  • ios