ಜಾಗತಿಕ ಆರ್ಥಿಕ ಹಿಂಜರಿತ ಕಂಡುಬರಲಿದೆ ಎಂಬ ಸೂಚನೆ, ಹಣದುಬ್ಬರ ಏರಿಕೆ, ಅದನ್ನು ಹತ್ತಿಕ್ಕಲು ಬಡ್ಡಿ ದರ ಏರಿಕೆಯಂತಹ ಪ್ರತಿಕೂಲ ಸಂದರ್ಭಗಳಲ್ಲಿ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದಿನಿಂದ ತಿಂಗಳ ಕಾಲ ಸಭೆ ನಡೆಯಲಿದೆ. 

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರದ ಐದನೇ ಬಜೆಟ್‌ (Budget) ಮಂಡನೆಗೆ ಸೋಮವಾರದಿಂದ ಅಧಿಕೃತವಾಗಿ ಸಿದ್ಧತೆ ಆರಂಭವಾಗಲಿದೆ. ವಿವಿಧ ಇಲಾಖೆಗಳ ಜತೆ ಹಣಕಾಸು ಇಲಾಖೆಯ (Financial Department) ಅಧಿಕಾರಿಗಳು 2022-23ನೇ ಸಾಲಿನ ಪರಿಷ್ಕೃತ ಅಂದಾಜು (Revised Estimates) ಹಾಗೂ 2023-24ನೇ ಸಾಲಿನ ಆಯವ್ಯಯ ಬೇಡಿಕೆ ಕುರಿತು ಸಮಾಲೋಚನೆಯನ್ನು ಆರಂಭಿಸಲಿದ್ದಾರೆ. ನವೆಂಬರ್‌ 10ರವರೆಗೂ ಬಜೆಟ್‌ ಪೂರ್ವ ಸಭೆಗಳು ಕೇಂದ್ರ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಜತೆ ನಡೆಯಲಿವೆ. ಆನಂತರ 2023-24ನೇ ಸಾಲಿನ ಬಜೆಟ್‌ನ ಅಂದಾಜನ್ನು ಸಿದ್ಧಪಡಿಸಲಾಗುತ್ತದೆ. 2024ರ ಲೋಕಸಭೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡನೆಯಾಗುವ ಪೂರ್ಣ ಪ್ರಮಾಣದ ಕೊನೆಯ ಬಜೆಟ್‌ ಇದಾಗಿರಲಿದೆ.

Add Asianetnews Kannada as a Preferred SourcegooglePreferred

ಜಾಗತಿಕ ಆರ್ಥಿಕ ಹಿಂಜರಿತ ಕಂಡುಬರಲಿದೆ ಎಂಬ ಸೂಚನೆ, ಹಣದುಬ್ಬರ ಏರಿಕೆ, ಅದನ್ನು ಹತ್ತಿಕ್ಕಲು ಬಡ್ಡಿ ದರ ಏರಿಕೆಯಂತಹ ಪ್ರತಿಕೂಲ ಸಂದರ್ಭಗಳಲ್ಲಿ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಆಯವ್ಯಯವನ್ನು ಮಂಡನೆ ಮಾಡಲಿದ್ದಾರೆ.

ಇದನ್ನು ಓದಿ: ಏನೇ ಮಾಡಿದ್ರೂ ಹಣ ಉಳಿಸಲು ಸಾಧ್ಯ ಆಗ್ತಿಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ

ಅಕ್ಟೋಬರ್ 10, 2022 ರಂದು ಅಂದರೆ ಮೊದಲ ದಿನವಾದ ಇಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದೊಂದಿಗೆ ಪರಿಷ್ಕೃತ ಅಂದಾಜು ಸಭೆಗಳು ನಡೆಯಲಿವೆ. ಪ್ರಸ್ತುತ ಹಣಕಾಸು ವರ್ಷಕ್ಕೆ (2022-23) ಪರಿಷ್ಕೃತ ಅಂದಾಜು (RE) ಅನ್ನು ಅಂತಿಮಗೊಳಿಸಲು ಈ ಹೆಚ್ಚಿನ ಚರ್ಚೆಗಳು ಮತ್ತು 2023-24 ರ ಬಜೆಟ್ ಅಂದಾಜುಗಳು ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತವೆ.

ಸಹಕಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮಾಲೋಚನೆಯೊಂದಿಗೆ ತಿಂಗಳ ಅವಧಿಯ ಚರ್ಚೆಗಳು ನವೆಂಬರ್ 10 ರಂದು ಕೊನೆಗೊಳ್ಳುತ್ತವೆ. ಈ ಸಂಬಂಧ ಹಣಕಾಸು ಸಚಿವಾಲಯದ ಬಜೆಟ್ ವಿಭಾಗದ ಅಧಿಸೂಚನೆ ಮಾಹಿತಿ ನೀಡಿದೆ. 

ಇದನ್ನೂ ಓದಿ: ಅಗ್ಗದಲ್ಲಿ ಮನೆ ಕಟ್ಟಬೇಕೆಂದ್ರೆ ಈ ಐಡಿಯಾ ಬಳಸಿ

2023-24ರ ಬಜೆಟ್ ಅಂದಾಜುಗಳನ್ನು ಬಜೆಟ್ ಪೂರ್ವ ಸಭೆಗಳನ್ನು ಪೂರ್ಣಗೊಳಿಸಿದ ನಂತರ ತಾತ್ಕಾಲಿಕವಾಗಿ ಅಂತಿಮಗೊಳಿಸಲಾಗುತ್ತದೆ. ರಿಸರ್ವ್ ಬ್ಯಾಂಕ್ ಮತ್ತು ವಿಶ್ವಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಕ್ರಮವಾಗಿ 7% ಮತ್ತು 6.5% ಕ್ಕೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ಸಭೆಗಳು ನಡೆಯುತ್ತವೆ.