Asianet Suvarna News Asianet Suvarna News

ಚುನಾವಣಾ ಪ್ರಣಾಳಿಕೆಯಿಂದ ಸಾಲ ಮನ್ನಾ ಹೊರಗಿಡಿ: ರಾಜನ್‌

ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ರೈತರ ಸಾಲ ಮನ್ನಾವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿರುವುದನ್ನು RBI ಮಾಜಿ ಗೌರ್ನರ್ ರುಘರಾಮ್ ರಾಜನ್ ವಿರೋಧಿಸಿದ್ದಾರೆ. ಏಕೆ? 

Ex RBI governor opposes farmers loan as it affects investment
Author
Bengaluru, First Published Dec 15, 2018, 8:15 AM IST

ನವದೆಹಲಿ: ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಸಾಲ ಮನ್ನಾ ಮೊರೆ ಹೋಗಿರುವ ಬೆನ್ನಲ್ಲೇ, ರೈತರ ಋುಣಮುಕ್ತಿ ಎಂಬುದು ಚುನಾವಣಾ ಭರವಸೆಗಳ ಭಾಗವಾಗಿರಬಾರದು ಎಂದು ಹೆಸರಾಂತ ಆರ್ಥಿಕ ತಜ್ಞ ಹಾಗೂ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಂ ರಾಜನ್‌ ಹೇಳಿದ್ದಾರೆ. ಅಲ್ಲದೆ, ಚುನಾವಣಾ ಭರವಸೆಗಳಿಂದ ಸಾಲ ಮನ್ನಾವನ್ನು ಹೊರಗಿಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಸಾಲ ಮನ್ನಾ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ

ಸಾಲ ಮನ್ನಾದಿಂದ ಕೃಷಿ ಕ್ಷೇತ್ರದ ಹೂಡಿಕೆಗೆ ಅಡ್ಡಿಯಾಗುತ್ತದೆ. ಅಲ್ಲದೆ ಸಾಲ ಮನ್ನಾ ಮಾಡುವ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಒತ್ತಡ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೃಷಿ ಕ್ಷೇತ್ರದ ಸಂಕಷ್ಟದ ಬಗ್ಗೆ ನಿಜಕ್ಕೂ ಆಲೋಚನೆ ಮಾಡಬೇಕು. ಆದರೆ ತೀವ್ರ ತೊಂದರೆ ಎದುರಿಸುತ್ತಿರುವ ರೈತರಿಗೆ ಸಾಲ ಮನ್ನಾದಿಂದ ಲಾಭವಾಗುತ್ತಿದೆಯೇ? ಎಂದು ಕೇಳಿದ್ದಾರೆ.

ಮೋದಿ ಭರ್ಜರಿ ಗಿಫ್ಟ್: ರೈತರ ಸಾಲ ಮನ್ನಾ

Follow Us:
Download App:
  • android
  • ios