ಡೆಲಿವರಿ ಏಜೆಂಟರು ವಿಳಂಬ ಮಾಡಿದರೆ ಬೈಗುಳ ಕೇಳುವುದು ಸಾಮಾನ್ಯ. ಆದರೆ ದೆಹಲಿಯ ಸಂಜೀವ್ ತ್ಯಾಗಿ ಎಂಬುವವರು ತಡವಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ದೆಹಲಿಯ ಟ್ರಾಫಿಕ್‌ನಿಂದಾಗಿ ಡೆಲಿವರಿ ಬಾಯ್ ಒಂದು ಗಂಟೆ ತಡವಾಗಿ ಬಂದಿದ್ದ. ಸಂಜೀವ್ ಅವರು ಆತನ ಕಷ್ಟವನ್ನು ಅರ್ಥಮಾಡಿಕೊಂಡು ಈ ರೀತಿ ಸತ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡೆಲಿವರಿ ಏಜೆಂಟ್​ಗಳು ಸ್ವಲ್ಪವೂ ವಿಳಂಬ ಮಾಡುವಂತಿಲ್ಲ. ಅವರಿಗೆ ಇನ್ನಿಲ್ಲದಂತೆ ಬೈಗುಳಗಳ ಸುರಿಮಳೆಯಾಗುತ್ತದೆ. ಕೆಲವೊಂದು ಕಂಪೆನಿಗಳಂತೂ ಇಂತಿಷ್ಟು ಅವಧಿ ವಿಳಂಬವಾದರೆ, ಉಚಿತ ಡೆಲಿವರಿ ಎಂದೂ ಘೋಷಿಸುತ್ತವೆ. ಇದೇ ಕಾರಣಕ್ಕೆ, ಡೆಲಿವರಿ ಬಾಯ್ಸ್​ಗಳ ಪಾಡು ಯಾರಿಗೂ ಬೇಡ. ಎಷ್ಟೇ ಟ್ರಾಫಿಕ್​ ಇದ್ದರೂ ಜೀವದ ಹಂಗು ತೊರೆದು ಗಾಡಿ ಓಡಿಸುವ ಸ್ಥಿತಿ ಕೆಲವು ಪ್ರದೇಶಗಳಲ್ಲಿ ಇದೆ. ಇದರ ಹೊರತಾಗಿಯೂ ಸ್ವಲ್ಪವೂ ತಾಳ್ಮೆ ಇಲ್ಲದ ಕೆಲವರಿಂದ ಬಾಯಿಗೆ ಬಂದರೆ ಬೈಸಿಕೊಳ್ಳುವುದೂ ತಪ್ಪುವುದಿಲ್ಲ. ಆದರೆ ಎಷ್ಟೇ ಕೋಪ ಬಂದರೂ ಈ ಹುಡುಗರು ತಮ್ಮ ತಾಳ್ಮೆ ಕಳೆದುಕೊಳ್ಳುವಂತಿಲ್ಲ, ಇಲ್ಲದಿದ್ದರೆ ಕೆಲಸಕ್ಕೆ ಕುತ್ತು. 

ಪರಿಸ್ಥಿತಿ ಹೀಗೆ ಇರುವಾಗ, ಒಂದು ಗಂಟೆ ಲೇಟಾಗಿ ಬಂದರೆ ಹೇಗಿರುತ್ತೆ? ಫುಡ್​ ಆರ್ಡರ್​​ ಮಾಡಿದವರು ಕೊತಕೊತ ಕುದ್ದು ಹೋಗುತ್ತಾರೆ ಅಲ್ಲವೆ? ಆ ಡೆಲಿವರಿ ಬಾಯ್​ ಮನೆಗೆ ಬರುವುದರೊಳಗೆ ಆತನ ಕೆಲಸದಿಂದಲೂ ತೆಗೆದುಹಾಕುವ ಕೆಲಸವನ್ನು ಕೆಲವರು ಮಾಡುವುದು ಇದೆ. ಕಂಪೆನಿಗೆ ಕಂಪ್ಲೇಂಟ್​ ಕೊಟ್ಟು ಇನ್ನಿಲ್ಲದಂತೆ ಆ್ಯಕ್ಷನ್​ ತೆಗೆದುಕೊಳ್ಳುವ ಮನಸ್ಸುಗಳಿಗೂ ಕಡಿಮೆಯೇನಿಲ್ಲ. ಆದರೆ ಇಲ್ಲೊಬ್ಬ ಉದ್ಯಮಿ ಮಾತ್ರ ಒಂದು ಗಂಟೆ ಲೇಟಾಗಿ ಬಂದ ಡೆಲಿವರಿ ಬಾಯ್​ಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಬರಮಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ಮತ್ತೊಮ್ಮೆ ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್​ ಡಿಟೇಲ್ಸ್​..

ಕಳೆದ ದಸರಾ ಸಮಯದಲ್ಲಿ ನಡೆದಿರುವ ಘಟನೆ ಇದಾಗಿದೆ. ದೆಹಲಿಯ ಸಂಜೀವ್ ತ್ಯಾಗಿ ಅವರು, ಹಲ್ದಿರಾಮ್‌ನಿಂದ ಚೋಲೆ ಭಟೋರೆಯನ್ನು ಆರ್ಡರ್​ ಮಾಡಿದ್ದರು. ಆದರೆ ದೆಹಲಿಯ ಟ್ರಾಫಿಕ್ ಜಾಂನಿಂದಾಗಿ ಡೆಲಿವರಿ ಬಾಯ್​ಗೆ ಬರಲು ಸಾಧ್ಯವಾಗಲೇ ಇಲ್ಲ. ಆತ ಸುಮಾರು ಒಂದು ಗಂಟೆ ತಡವಾಗಿ ಬಂದ. ದೆಹಲಿಯಲ್ಲಿ ಅಂದು ಇದ್ದ ಟ್ರಾಫಿಕ್​ ಜಾಂ ಅನ್ನು ಅರಿತಿದ್ದ ಸಂಜೀವ್​ ಅವರಿಗೆ ಈ ಯುವಕನ ಕಷ್ಟ ಸಹಜವಾಗಿ ಗೊತ್ತಿತ್ತು. ವಿಳಂಬ ಆದರೂ ಅದರಲ್ಲೇನೂ ವಿಶೇಷ ಇಲ್ಲ ಎಂಬ ತಿಳಿವಳಿಕೆ ಇತ್ತು. ಡೆಲಿವರಿ ಬಾಯ್​ ಸಮೀಪ ಬಂದಾಗ ಮನೆ ಸಮೀಪ ಇರುವುದಾಗಿ ಹೇಳಿದ್ದ.

ಆದ್ದರಿಂದ ಸಂಜೀವ್​ ಅವರು, ಯುವಕ ಬಂದಾಗ ಏನು ಮಾಡಬೇಕು ಎಂದು ಮೊದಲೇ ಯೋಚನೆ ಮಾಡಿಟ್ಟಿದ್ದರು. ಅವನು ಬಂದ ಬಳಿಕ, ದೆಹಲಿಯ ಈ ಭಯಂಕರ ಟ್ರಾಫಿಕ್ ಹೊರತಾಗಿಯೂ ನಿಮ್ಮ ಆರ್ಡರ್ ಪಡೆಯುತ್ತಿದ್ದೇನೆ, ಇದು ಖುಷಿಯ ವಿಷಯ ಎಂದು ಯುವಕನಿಗೆ ಆರತಿ ಬೆಳಗಿದರು. ಯುವಕ ಆರಂಭದಲ್ಲಿ ಕಕ್ಕಾಬಿಕ್ಕಿಯಾದರೂ, ಕೊನೆಗೆ ಹೆಲ್ಮೆಟ್​ ತೆಗೆದ. ಆತನಿಗೆ ಟೀಕಾ ಇಟ್ಟು ಆರತಿ ಬೆಳಗಿ ಆರ್ಡರ್​ ತೆಗೆದುಕೊಂಡರು ಸಂಜೀವ್​ ಅವರು. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ. ಸಂಜೀವ್​ ಅವರ ಹಾಸ್ಯಪ್ರಜ್ಞೆ ಜೊತೆಗೆ, ಡೆಲಿವರಿ ಬಾಯ್​ ಕಷ್ಟ ಅರಿತ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಹುಶಃ ಯಾರಿಗೂ ಇಂಥ ಐಡಿಯಾ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. 

ಮಗಳ ಮಗುವಿಗೇ ಅಮ್ಮನಾದ ಅಜ್ಜಿ! ಮುಟ್ಟು ನಿಂತರೂ ಗರ್ಭಿಣಿಯಾಗೋ ಸಾಹಸ ಮಾಡಿದ ಈಕೆ ರೋಚಕ ಕಥೆ ಕೇಳಿ

View post on Instagram