Asianet Suvarna News Asianet Suvarna News

LPG ಗ್ಯಾಸ್‌ ಸಿಲಿಂಡರ್‌ ಮತ್ತಷ್ಟು 'ಭಾರ': ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!

* ಕೊರೋನಾ ಹಾವಳಿಯಿಂದ ನಲುಗಿರುವ ಜನತೆಗೆ ಮತ್ತೊಂದು ಏಟು

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ಈಗ LPG ಗ್ಯಾಸ್‌ ಸಿಲಿಂಡರ್‌ ದುಬಾರಿ

* ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಳ

Cooking gas prices hiked by over Rs 25 after fresh revision Check latest LPG rates pod
Author
Bangalore, First Published Jul 1, 2021, 1:09 PM IST

ನವದೆಹಲಿ(ಜು.01): ಪೆಟ್ರೋಲ್‌, ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರ ಹೆಗಲಿಗೆ ಮತ್ತೊಂದು ಭಾರ ಸೇರಿದೆ. ಹೌದು ಇಂದು ತೈಲ ಮಾರುಕಟ್ಟೆ ಕಂಪನಿಗಳು LPG ಗ್ಯಾಸ್​ ಸಿಲಿಂಡರ್​ ಬೆಲೆ ಹೆಚ್ಚಿಸಿದ್ದು, ಅದರ ಅನ್ವಯ ಗೃಹ ಬಳಕೆ ಸಿಲಿಂಡರ್​ ಬೆಲೆ 25 ರೂ.ಹೆಚ್ಚಾಗಿದೆ. ನೂತನ ಪರಿಷ್ಕೃತ ದರ ಜುಲೈ 1ರಿಂದ ಅನ್ವಯಯವಾಗಲಿದೆ.

ಇಂದಿನಿಂದ ಬ್ಯಾಂಕಿಂಗ್, ಹಣಕಾಸು ಸೇವೆಯಲ್ಲಿ ಮಹತ್ವದ ಬದಲಾವಣೆಗಳು!

ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಇಂದಿನಿಂದ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್​ ಬೆಲೆ 834.50 ರೂಪಾಯಿಗೇರಿದೆ. ಮುಂಬೈನಲ್ಲಿ 809ರೂ. ಇದ್ದ ಗ್ಯಾಸ್​ ಸಿಲಿಂಡರ್ ಬೆಲೆ 834.50 ರೂ.ಗೇರಿದ್ದು, ಕೋಲ್ಕತ್ತಾದಲ್ಲಿ 835.50 ರೂ. ಆಗಿದೆ. ಇತ್ತ ಚೆನ್ನೈನಲ್ಲಿ ಗ್ಯಾಸ್​ ಸಿಲಿಂಡರ್​ ಬೆಲೆ ದುಬಾರಿಯಾಗಿ 850.50 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ದರ 812 ರೂಪಾಯಿಗೇರಿದೆ. 

ಅಂತಾರಾಷ್ಟ್ರೀಯ ಮಾನದಂಡ ದರ ಮತ್ತು ಯುಎಸ್​ ಡಾಲರ್ ಹಾಗೂ ರೂಪಾಯಿ ವಿನಿಮಯ ದರ ಆಧರಿಸಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಅದರಂತೆ ಇಂದು ಜುಲೈ 1 ರಂದು ಹೆಚ್ಚಾಗಿದ್ದು, ಅದರ ಅನ್ವಯ ಪ್ರಮುಖ ನಗರಗಳಲ್ಲಿ 14 ಕೆ.ಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್​ ದರ ಹೀಗಿದೆ.

ನಗರ ದರ
ಬೆಂಗಳೂರು/ಕರ್ನಾಟಕ 812 ರೂ.
ದೆಹಲಿ 834.50 ರೂ.
ಕೋಲ್ಕತ್ತ 861 ರೂ.
ಮುಂಬೈ 834.50 ರೂ.
ಚೆನ್ನೈ 850.50 ರೂ.

ಈ ವರ್ಷ ಫೆಬ್ರವರಿ 4ರಂದು ಮೊದಲ ಬಾರಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ 25 ರೂಪಾಯಿ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್​ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳೊಂದರಲ್ಲೇ 3 ಬಾರಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ ಏರಿಸಲಾಗಿತ್ತು. ಪ್ರತಿ ಗ್ಯಾಸ್​ ಸಿಲಿಂಡರ್​ಗೆ 125 ರೂಪಾಯಿ ಏರಿಕೆಯಾದ ಬಳಿಕ, ಏಪ್ರಿಲ್​ 1ರಂದು ಪ್ರತೀ ಸಿಲಿಂಡರ್​​ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು.

LPG ಸಿಲಿಂಡರ್‌ ಖರೀ​ದಿ ಸಬ್ಸಿಡಿ ರದ್ದು: ಪರೋಕ್ಷ ಒಪ್ಪಿದ ಕೇಂದ್ರ ಸರ್ಕಾರ

ಕೊರೋನಾ ಹಾವಳಿಯಿಂದ ಕಂಗೆಟ್ಟಿರುವ ಜನರು ಅನೇಕ ಸಂಕಷ್ಟಗಳನ್ನೆದುರಿಸುತ್ತಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದರೆ, ವಲಸೆ ಕಾರ್ಮಿಕರು ಊರು ಸೇರಿ ಕೆಲಸವಿಲ್ಲದೇ ಒಂದೊತ್ತಿನ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಲೆ ಏರಿಕರೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Follow Us:
Download App:
  • android
  • ios