ಕನ್ನಡದಲ್ಲಿ ಪತ್ತೇದಾರಿ ಕಾದಂಬರಿಗಳ ಪರಂಪರೆಯೇ ಇದೆ.  ಇತ್ತು. ಉಗುರು ಕಚ್ಚಿಕೊಂಡು ಓದುವಂಥಹ ಅಂಥಹ ಕಾದಂಬರಿ  ಬರೆಯುವವರು ಈಗ ಕಡಿಮೆ. ಸುದ್ದಿ ಏನಂದರೆ ಕೌತುಕಮಯವಾದ ಕಾದಂಬರಿಯೊಂದು ನಾಳೆ ಬಿಡುಗಡೆ ಆಗುತ್ತಿದೆ. ಇದು ಕನ್ನಡ ಮನೆತನದ ಹುಡುಗಿ ಬರೆದ ಇಂಗ್ಲಿಷ್ ಕಾದಂಬರಿ. ಶೀರ್ಷಿಕೆ - Silent Fires!

ಬೆಂಗಳೂರು ( ಮಾ 6) : ಯಾಕೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಕಥಾನಾಯಕನ ಪತ್ನಿ ಒಂದು ದಿನ ಕಳೆದುಹೋಗುತ್ತಾಳೆ. ಅಂದರೆ ನಾಪತ್ತೆ. ಅದೊಂದು ಸನ್ನಿವೇಶ. ಆದರೆ ನಾಯಕನ ಪತ್ನಿ ಈಗ ಎಲ್ಲಿದ್ದಾಳೆ, ಅವಳೇನು ಮಾಡುತ್ತಿದ್ದಾಳೆ? ಪೊಲೀಸರೇನೋ ಅವಳಿಗಾಗಿ ಹುಡುಕಾಟ ನಡೆಸಿದ್ದಾರೆ, ಸರಿಯೇ.

Add Asianetnews Kannada as a Preferred SourcegooglePreferred

13ರ ಬಾಲಕಿಯ ಆಂಗ್ಲ ಕವನ ಸಂಕಲನ ಬಿಡುಗಡೆ

ಇದು ಕತೆಯ ಒಂದು ಎಳೆ. ಹುಡುಕುತ್ತಿರುವ ಪೊಲೀಸರಿಗೆ ಅವಳು ಸಿಗುತ್ತಾಳಾ? ಅಥವಾ ಇಲ್ಲವಾ. ಸಿಕ್ಕರೆ ಎಲ್ಲಿ ಸಿಗುತ್ತಾಳೆ? ಎನ್ನುವುದು ಗುಟ್ಟು. ಅದ್ಸರಿ. ಈ ಕಾದಂಬರಿಯ ನಾಯಕ ಯಾರು? ಅವನೇಕೆ ನಾಪತ್ತೆ ಆದ? ಪತ್ತೇದಾರಿ ಕತೆ ಯಾರ ಸುತ್ತ ಗಿರಕಿ ಹೊಡೆಯುತ್ತಿದೆ?. ಮುಂದೇನಾಯಿತು? ಮುಂದೇನಾಗುತ್ತಿದೆ? 

2020ರಲ್ಲಿ ಓದುಗರು ಮೆಚ್ಚಿದ 30 ಪುಸ್ತಕಗಳು

ಎಂದು ಉಸಿರುಗಟ್ಟಿಸಿ ಓದಿಸಿಕೊಳ್ಳುವ ಈ ಕಾದಂಬರಿ ನಿಗೂಢ, ರಹಸ್ಯ ಮತ್ತು ಕೌತುಕ ತುಂಬಿದ ಓದು ಬಯಸುವವರಿಗೆ ಮಾತ್ರ.ಕಾದಂಬರಿ ಬಿಡುಗಡೆಗೆ ನೀವೂ ಬನ್ನಿ ಎಂದು ಹೇಳುತ್ತಿರುವ ಕರೆಯೋಲೆ ಇದು. ಜೆಪಿ ನಗರ ಮೂರನೇ ಫೇಸಿನಲ್ಲಿ ದೆಜಾವೂ ಹೊಟೆಲಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ. ಭಾನುವಾರ ಸಂಜೆ ( 7, ಮಾರ್ಚ್ 2021) ಕಾರ್ಯಕ್ರಮ. 

ದೆಜಾವೂ ವಿಳಾಸ ಇದು: 
Deja Vu Buffet Bar, Eden Park, No.7/8 Doresanipalya, Near Kalyani Magnum Tech Park, 5th Phase, J. P. Nagar, Bengaluru, Karnataka 560078

ಇದು ಇಂಗ್ಲಿಷ್ ಕಾದಂಬರಿ. ಲೇಖಕಿ: ಪೂಜಿತಾ ಜಿ ಪ್ರಸಾದ್, ಕೃತಿ ಬಿಡುಗಡೆ: ಚಲನಚಿತ್ರ ನಿರ್ದೇಶಕಿ ರೂಪಾ ರಾವ್. ರೂಪಾ ರಾವ್ ಯಾರು ಗೊತ್ತಾ? ರೋಚಕ ಮತ್ತು ತುಂಟತನದಿಂದ ಎಲ್ಲರ ಮನಗೆದ್ದ ಗಂಟುಮೂಟೆ ಚಿತ್ರದ ಯಂಗ್ ಮತ್ತು ಎನರ್ಜೆಟಿಕ್ ನಿರ್ದೇಶಕಿ