ಬೆಂಗಳೂರಿನ ವಿಲ್ಲಾ ಪಾರ್ಟಿ & ರೇ*ಪ್ : ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್ ಬಂಧನ
ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಮೇಲಿನ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿಖಿಲ್ನ ಸ್ನೇಹಿತನಾಗಿರುವ ಈತ, ಘಟನೆ ನಡೆದಿದೆ ಎನ್ನಲಾದ ವಿಲ್ಲಾವನ್ನು ಬುಕ್ ಮಾಡಿದ್ದನು.

ಅನಿರುಧ್
ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿ ಪುತ್ರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅನಿರುಧ್ ಎಂದು ಗುರುತಿಸಲಾಗಿದೆ. ಅನಿರುಧ್ ಸೇರಿದಂತೆ ಒಟ್ಟು ಐವರ ಬಂಧನವಾಗಿದೆ.
ಮಾಜಿ ಕಾರ್ಪೋರೇಟರ್ ಪುತ್ರ
ಮಾಜಿ ಕಾರ್ಪೋರೇಟರ್ ಪುತ್ರನಾಗಿರುವ ಅನಿರುಧ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅತ್ಯಾ*ಚಾರ ನಡೆದಿದೆ ಸ್ಥಳ ಎನ್ನಲಾದ ವಿಲ್ಲಾ ಬುಕಿಂಗ್ ಸಂಬಂಧ ವಿಚಾರಣೆ ನಡೆಸಲು ಅನಿರುಧ್ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ಬಳಿಕ ಹೆಚ್ಚಿನ ತನಿಖೆಗಾಗಿ ಅನಿರುಧ್ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಖಿಲ್ ಸ್ನೇಹಿತನೇ ಈ ಅನಿರುಧ್
ಗುತ್ತಿಗೆದಾರನಾಗಿರುವ ಅನಿರುಧ್, ದಾವಣಗೆರೆ ಮೂಲದ ನಿವಾಸಿ. ಅನಿರುಧ್ ತಂದೆ ದಾವಣಗೆರೆಯ ಮಾಜಿ ನಗರ ಪಾಲಿಕೆ ಸದಸ್ಯ ಎಂದು ಹೇಳಲಾಗುತ್ತಿದೆ. ಅನಿರುಧ್ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅನಿರುಧ್ ಪ್ರಮುಖ ಆರೋಪಿಯಾಗಿರುವ ನಿಖಿಲ್ ಸ್ನೇಹಿತನಾಗಿದ್ದಾನೆ. ಅನಿರುದ್ಧ್, ಮೋಹಿತ್, ಶರವಣ್, ನಿಖಿಲ್, ಡಿಕ್ಸನ್ ಬಂಧಿತ ಆರೋಪಿಗಳು
ಕಾರು ಮಾರಾಟ ಮಳಿಗೆ
ರಾಜಾಜಿನಗರದ ಸಮೀಪ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಿಖಿಲ್ ಹೊಂದಿದ್ದಾನೆ. ಮಲ್ಲೇಶ್ವರದಲ್ಲಿ ನಿಖಿಲ್ ವಾಸವಾಗಿದ್ದ. ಮೋಜು ಮಸ್ತಿಗೆ ಜೀವನಕ್ಕೆ ಬಿದ್ದಿದ್ದ ಈತ, ವಾರಾಂತ್ಯಗಳಲ್ಲಿ ಪಾರ್ಟಿಗಳು ಹಾಗೂ ಆಫ್ಟರ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದನು.
ಇದನ್ನೂ ಓದಿ: ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ
ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್
ಇನ್ನು ಪಶ್ಚಿಮ ಬಂಗಾಳ ಮೂಲದ ಡಿಕ್ಸೆನ್ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಂತರ ಡೇಟಿಂಗ್, ಫೋಟೋಶೂಟ್ ಹೆಸರಿನಲ್ಲಿ ಯುವತಿಯರೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿದ್ದನು.
ಇದನ್ನೂ ಓದಿ: ಲಿವ್ ಇನ್ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್ನೇಮ್, ಒಪ್ಪಿದ ಹೈಕೋರ್ಟ್!

