ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಬಾರಿ ಕುತೂಹಲಕರ ಹಾಗೂ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಮರಕ್ಕೆ ಸ್ಕಾರ್ಪಿಯೋ ಕಾರು ಕಟ್ಟಿ ಹಾಕಿದ ಘಟನೆ ಕುರಿತು ಆನಂದ್ ಮಹೀಂದ್ರ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ(ನ.17): ಸೋಶಿಯಲ್ ಮೀಡಿಯಾದಲ್ಲಿ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಇದೀಗ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ಮಾಲೀಕನೋರ್ವ ತನ್ನ ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಬ್ಬಿಣದ ಚೈನ್ ಮೂಲಕ ಕಟ್ಟಿ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಗಮನಿಸಿದ ಆನಂದ್ ಮಹೀಂದ್ರ ವಿವರಣೆಯೊಂದಿಗೆ ಟ್ವೀಟ್ ಮಾಡಿದ್ದಾರೆ.

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!..

ಇದು ಹೈಟೆಕ್ ಲಾಕಿಂಗ್ ಸಿಸ್ಟಮ್ ಅಲ್ಲ, ಇದರಲ್ಲಿ ಮಾಲೀಕರ ಪೊಸೆಸೀವ್‌ನೆಸ್ ಎದ್ದುಕಾಣುತ್ತಿದೆ. ನನಗೆ ಈ ಚಿತ್ರ ಕೆಲ ನೆನಪನ್ನು ಬಿಚ್ಚಿಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಾನು ಹೇಗಿದ್ದೆ ಅನ್ನೋದನ್ನು ಈ ಚಿತ್ರ ಹೇಳುತ್ತಿದೆ. ಈ ವಾರಾಂತ್ಯದಲ್ಲಿ ನಾನು ಈ ಚೈನ್ ಮುರಿಯುತ್ತೇನೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

Scroll to load tweet…

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!..

ಮಾಲೀಕ ಕಾರು ಕಳ್ಳತನವಾಗಬಾರದು ಎಂದು ಈ ರೀತಿ ಚೈನ್‌ ಮೂಲಕ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಟ್ಟಿ ಹಾಕಿದರೆ ಉತ್ತಮ ನಿರ್ಧಾರವಲ್ಲ. ಕಾರಣ ಈ ಚೈನ್ ಮುರಿಯುವುದು ಕಷ್ಟದ ಕೆಲಸವಲ್ಲ. ಭಾರತದಲ್ಲಿ ಈ ರೀತಿ ವಿನೂತನ ಪ್ರಯೋಗ ಅಲ್ಲಲ್ಲಿ ಕಂಡು ಬರುತ್ತದೆ. ಈ ಕುರಿತು ಆನಂದ್ ಮಹೀಂದ್ರ ಹಲವು ಬಾರಿ ಬೆಳಕು ಚೆಲ್ಲಿದ್ದಾರೆ.