ಈ ವಾರ ನಿಮ್ಮ ಭವಿಷ್ಯ ಹೇಗಿದೆ? ಸಮಸ್ಯೆ ನಿವಾರಣೆಗೆ ಏನು ಮಾಡಬೇಕು? ತಿಳಿದುಕೊಳ್ಳಿ ಈ ವಾರದ ರಾಶಿ ಭವಿಷ್ಯದಲ್ಲಿ

ಮೇಷ: ನಿಮಗರಿವಿಲ್ಲದ ಅದೆಷ್ಟೋ ಕೆಟ್ಟ ವಿಚಾರಗಳು ನಿಮ್ಮ ಸುತ್ತ ನಡೆಯುತ್ತಿದ್ದರೂ ಸುಮ್ಮನೆ ಕುಳಿತು ನೋಡುವುದು ಒಳಿತಲ್ಲ. ಸಂದರ್ಭಕ್ಕೆ ತಕ್ಕಂತೆ ಉತ್ತರ ನೀಡಿ ಮುಂದಾಗುವ ಅನಾಹುತವನ್ನು ತಪ್ಪಿಸಲಿದ್ದೀರಿ. ಇದರಿಂದ ನಿಮ್ಮ ಸುತ್ತಲಿನವರ ಪ್ರೀತಿಗೆ ಪಾತ್ರರಾಗಲಿದ್ದೀರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

Add Asianetnews Kannada as a Preferred SourcegooglePreferred

ವೃಷಭ: ಬಿಸಿಲು ಜಾಸ್ತಿ ಇರುವುದರಿಂದ ದೂರ ಪ್ರಯಾಣ ಸ್ವಲ್ಪ ಕಡಿಮೆ ಮಾಡುವುದು ಒಳಿತು. ಆರೋಗ್ಯದಲ್ಲಿ ಹೆಚ್ಚುಕಮ್ಮಿ ಆದರೂ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ಸ್ವಲ್ಪ ಶ್ರಮಪಟ್ಟು ಹುಡುಕಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಹಿರಿಯರಿಂದ ಪ್ರಶಂಸೆ, ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ಶುಭ ಫಲ.

ಮಿಥುನ: ಇಷ್ಟು ದಿನದಲ್ಲಿ ನೆರವೇರದ ಎಷ್ಟೋ ವಿಷಯಗಳು ಈ ವಾರ ಕೈಗೂಡಲಿದೆ. ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಜೀವನದ ತೃಪ್ತಿ ಭಾವನೆ ಮೂಡಲಿದ್ದು, ಮಕ್ಕಳನ್ನು ಬಿಸಿಲಿನಲ್ಲಿ ಜಾಸ್ತಿ ಸುತ್ತಿಸದಿರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಕಟಕ: ಆಸಕ್ತಿ ಇರುವ ವಿಷಯಗಳಲ್ಲಿ ಹೆಚ್ಚು ಗಮನಹರಿಸುವುದು ಸೂಕ್ತ. ಗೊತ್ತಿಲ್ಲದ ವಿಚಾರಗಳ ಬಗ್ಗೆ ತಿಳಿದವರ ಬಳಿ ಚರ್ಚಿಸುವುದು ಒಳ್ಳೆಯದು. ಇದು ಮುಂದೊಂದು ದಿನ ನಿಮ್ಮ ಕೆಲಸಗಳಿಗೆ ಸಹಾಯವಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಬಂಪರ್. ಮಹಿಳೆಯರಿಗೆ ಶುಭ ವಾರ. ಶುಭ ಫಲ

ಸಿಂಹ: ಈ ವಾರ ಪ್ರಯಾಣದಲ್ಲೇ ಕಳೆಯುವ ನೀವು ವಾರಾಂತ್ಯದಲ್ಲಿ ಆಯಾಸದೊಂದಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಲಿದೆ. ಧಾರ್ಮಿಕ ವಿಷಯದಲ್ಲಿ ಮೊಂಡುತನ ಬೇಡ. ಹಿರಿಯರು ಹೇಳಿದ ಮಾತನ್ನು ಲಘುವಾಗಿ ಪರಿಗಣಿಸದಿರಿ. ಮಹಿಳೆಯರಿಂದ ಈ ವಾರ ಉತ್ತಮ ಮನೆ ನಿರ್ವಹಣೆ ಸಾಧ್ಯತೆ.

ಕನ್ಯಾ: ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪುರುಷರು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಉತ್ತಮ. ವಾರದುದ್ದಕ್ಕೂ ಮನಸ್ಸಿನಲ್ಲಿನ ಗೊಂದಲ ಕಿರಿಕಿರಿಗೆ ವಾರಂತ್ಯದಲ್ಲಿ ನೆಮ್ಮದಿ ಸಿಗಲಿದೆ. ವಾರಂತ್ಯದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಮಕ್ಕಳಿಗೆ ಶುಭ ಫಲ.

ತುಲಾ: ಕಟುವಾದ ನಡೆವಳಿಕೆ, ಮಾತುಗಳಿಂದ ನಿಮ್ಮ ಸುತ್ತಲಿನವರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ. ಯಾವುದೇ ವಿಚಾರದ ಬಗ್ಗೆ ಚರ್ಚಿಸುವಾಗ ಶಾಂತ ಮನಸ್ಸಿನಿಂದ ಚರ್ಚಿಸಿ. ಒಳ್ಳೆಯ ಅವಕಾಶಕ್ಕೆ ಕಾಯುವ ಅಗತ್ಯವಿಲ್ಲ. ಅಂದುಕೊಂಡ ಕೆಲಸ ಇಂದೇ ಮಾಡಿ ಮುಗಿಸಿದರೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ.

ವೃಶ್ಚಿಕ: ಮಾಡುವ ಕೆಲಸ ತಪ್ಪು ಅನ್ನುವುದು ತಿಳಿದಿದ್ದರೂ ಪುನಃ ಅದೇ ತಪ್ಪು ಮಾಡದಿರಿ. ಒಮ್ಮೆ ಹೋದ ಮರ್ಯಾದೆ ಎಷ್ಟೇ ದುಡ್ಡುಕೊಟ್ಟರು ಮರಳಿ ಬರುವುದಿಲ್ಲ ಹಾಗೆಯೇ ಇದು. ಪುರುಷರ ಹಣಕಾಸಿನ ವ್ಯವಹಾರದಲ್ಲಿ ಈ ವಾರ ಉತ್ತಮ ಬೆಳವಣಿಗೆ ಕಾಣಲಿದ್ದು, ಮುಂದಿನ ಕೆಲಸಗಳಿಗೆ ಅನುಕೂಲವಾಗಲಿದೆ.

ಧನುಸ್ಸು: ಆರೋಗ್ಯದ ಕಡೆ ಇಷ್ಟೊಂದು ನಿರ್ಲಕ್ಷ್ಯ ಬೇಡ. ಮನೆಯವರ ಮಾತಿಗೆ ಬೆಲೆಕೊಟ್ಟು ಸುಧಾರಿಸಿಕೊಳ್ಳಿ. ನಿಮ್ಮ ನಂಬಿದವರಿಗೆ ಎಂದಿ ಗೂ ಕೈಕೊಡದ ನೀವು ಅಂತಹವರಿಂದಲೇ ಪೆಟ್ಟು ತಿನ್ನುವ ಸಾಧ್ಯತೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಮಕರ: ಕಾರ್ಮಿಕ ವರ್ಗಕ್ಕೆ ಅಧಿಕ ಖರ್ಚು ಸಾಧ್ಯತೆ. ಮನಸ್ಸಿಗೆ ನೆಮ್ಮದಿ. ಕುಂಟು ನೆಪ ತೋರಿ ಕೆಲಸ ದಿಂದ ದೂರಾದರೂ ಅದು ನಿಮ್ಮನ್ನೇ ಬೆನ್ನಟ್ಟಿ ಬರಲಿದೆ. ಕುಟುಂಬದಲ್ಲಿನ ಮನಸ್ಥಾಪಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು.

ಕುಂಭ: ನೆರೆಹೊರೆಯವರ ಜೊತೆಗಿದ್ದ ಮನಸ್ಥಾಪ ಈ ವಾರ ದೂರವಾಗಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದ್ದು, ಹಳೆ ಶತ್ರುಗಳೂ ನಿಮ್ಮ ಮಿತ್ರರಾಗಿ ಪರಿವರ್ತನೆಯಾಗಲಿದ್ದಾರೆ. ವಿನಃ ಕಾರಣ ನಿಮ್ಮ ತಪ್ಪಿಲ್ಲದ್ದನ್ನು ಒಪ್ಪಿಕೊಳ್ಳದಿರಿ. ಪರೀಕ್ಷೆ ಸಮಯವಾದ್ದರಿಂದ ಮಕ್ಕಳಿಗೆ ಹೆಚ್ಚಿನ ನಿದ್ರೆ ಅತ್ಯವಶ್ಯಕ. ಶುಭ ಫಲ.

ಮೀನ: ಅತಿಯಾದ ಆಲಸಿಗಳಾಗುವುದು ತರವಲ್ಲ. ಸೋಮಾರಿತನ ಮುಂದೆ ಕಷ್ಟ ತರಬಹುದು. ಕೊಂಕು ಮಾತುಗಳಿಗೆ ಕಿವಿಕೊಡಬೇಡಿ. ಕೆಲಸದಲ್ಲಿ ನಿಮ್ಮದೇ ನಿಲುವು ಅಂತಿಮವಾಗಿರಲಿ. ಸೇವೆ, ದಾನಗಳಿಂದ ಹೆಚ್ಚಿನ ಮನಸ್ಸಿಗೆ ಹತ್ತಿರವಾಗಲಿದ್ದೀರಿ.