Asianet Suvarna News Asianet Suvarna News

ಈ ವಾರದಲ್ಲಿ ನಿಮ್ಮ ಜೀವನ ಹೇಗಿರಲಿದೆ..?

ಈ ವಾರದಲ್ಲಿ ನಿಮ್ಮ ಜೀವನ ಹೇಗಿರಲಿದೆ..?

Weekly Horoscope June july 1

ಈ ವಾರದಲ್ಲಿ ನಿಮ್ಮ ಜೀವನ ಹೇಗಿರಲಿದೆ..?

ಮೇಷ
ಕಂಟಕಗಳ ನಿವಾರಣೆಯಾಗಲಿದೆ. ಔದ್ಯೋಗಿಕ
ಕ್ಷೇತ್ರದಲ್ಲಿರುವವರು ಉಳಿತಾಯದ ಕಡೆಗೆ ಗಮನ
ನೀಡುವಿರಿ. ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ
ಕಾಣಲಿದೆ. ಹೆಚ್ಚು ಕೋಪ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ
ಶಾಂತಿ ನೆಲೆಯಾಗಲಿದೆ. ಸರ್ಪದೋಷ ನಿವಾರಣೆಯಾಗಲಿದೆ.
ಪುತ್ರ ಸಂತಾನ ಭಾಗ್ಯ. ವಾಹನ ಖರೀದಿಗೆ ಮುಂದಾಗುವಿರಿ.

ವೃಷಭ
ನೀವು ಮಾಡುವ ಕೆಲಸಗಳಿಗೆ ಸಾಮಾಜಿಕ ಮಾನ್ಯತೆ
ದೊರೆಯಲಿದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ
ಸಿದ್ಧಿಯಾಗಲಿದೆ. ಭಿನ್ನಾಭಿಪ್ರಾಯದಿಂದ ಮನಸ್ಸಿಗೆ
ಕಸಿವಿಸಿ. ಅಂದುಕೊಂಡ ಕಾರ್ಯವನ್ನು ಮುಂದೂಡುವುದು
ಬೇಡ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳ ಆರಂಭ. ರೈತರಿಗೆ
ಹೆಚ್ಚಿನ ಅನುಕೂಲವಾಗಲಿದೆ. ಮನೆಯಲ್ಲಿ ಶುಭ ಕಾರ್ಯ.

ಮಿಥುನ
ದೈಹಿಕ ಕ್ಷಮತೆ ಹೆಚ್ಚಾಗಲಿದೆ. ಒತ್ತಡಗಳಿಂದ ಮುಕ್ತಿ.
ಅನಾವಶ್ಯಕ ಖರ್ಚಿನ ಮೇಲೆ ಹಿಡಿತವಿರಲಿ.
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಪ್ರವಾಸಿ
ತಾಣಗಳಿಗೆ ಭೇಟಿ ನೀಡುವಿರಿ. ವೈಯಕ್ತಿಕ ಅಭಿಪ್ರಾಯಕ್ಕೆ ಹೆಚ್ಚು
ಮಾನ್ಯತೆ ದೊರೆಯಲಿದೆ. ನಿಂದಕರ ಮಾತಿಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ.

ಕಟಕ
ಭೂ ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಮನೆಯಲ್ಲಿನ
ಜಗಳಕ್ಕೆ ವಿರಾಮ ಬೀಳಲಿದೆ. ತಂದೆಯ ಆರೋಗ್ಯ
ದಲ್ಲಿ ಅಲ್ಪ ಚೇತರಿಕೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ
ಕಾಣಲಿದೆ. ಬೃಹತ್ ಉದ್ಯಮ ಸ್ಥಾಪನೆಗೆ ಕಾಯುವುದು
ಒಳಿತು. ಮನರಂಜನೆ ಕ್ಷೇತ್ರದಲ್ಲಿರುವವರಿಗೆ ಹೆಚ್ಚು
ಅವಕಾಶಗಳು ಲಭ್ಯವಾಗಲಿವೆ. ಆದಾಯದಲ್ಲಿ ಏರುಪೇರು

ಸಿಂಹ
ಆದಾಯದಲ್ಲಿ ಗಣನೀಯ ಏರಿಕೆ ಈ ವಾರವೂ
ಮುಂದುವರೆಯಲಿದೆ. ಮಕ್ಕಳ ಆರೋಗ್ಯದ ಕಡೆ
ನಿಗಾ ವಹಿಸಿ. ತಲೆ ನೋವು, ಬೆನ್ನು ನೋವುಗಳ
ತಾತ್ಕಾಲಿಕ ಶಮನವಾಗಲಿದೆ. ಶುಭ ಲಾಭ. ತಂದೆ-ತಾಯಿ
ಮಾತಿಗೆ ಬದ್ಧರಾಗಿ ನಡೆದುಕೊಳ್ಳಿ. ವಿಚಾರವನ್ನು ಸಂಪೂರ್ಣ
ವಾಗಿ ತಿಳಿದುಕೊಳ್ಳದೆ ಪ್ರತಿಕ್ರಿಯೆ ನೀಡುವುದು ಬೇಡ.

ಕನ್ಯಾ
ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ. ಹಿಂದಿನ
ಉಳಿತಾಯಗಳು ನೆರವಿಗೆ ಬರಲಿವೆ. ಕಣ್ಣಿನ ಸಮಸ್ಯೆ
ಹೆಚ್ಚಾಗಲಿದೆ. ಸಾಲಭಾದೆಯಿಂದ ಅಲ್ಪ ಬಿಡುಗಡೆ.
ನೂತನ ಉದ್ಯೋಗ ದೊರೆಯಲಿದೆ. ಧಾರ್ಮಿಕ ಕ್ಷೇತ್ರಗಳಿಗೆ
ಭೇಟಿ. ಮನೆಯ ವಾಸ್ತು ದೋಷಕ್ಕೆ ಸೂಕ್ತ ಪರಿಹಾರ ಕಂಡು
ಕೊಳ್ಳುವುದು ಉತ್ತಮ. ನೂತನ ಗೆಳೆಯರು ದೊರೆಯಲಿದ್ದಾರೆ.

ತುಲಾ
ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಸ್ವಲ್ಪ
ಅಡೆತಡೆಗಳು ಉಂಟಾಗಲಿವೆ. ಪೂರ್ಣ ಪ್ರಮಾಣದ
ಮನಸ್ಸಿನಿಂದ ಹೊಸ ಕಾರ್ಯಗಳಲ್ಲಿ ಮುಂದಾಗಿ.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ಪತಿಯ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ದೈಹಿಕ ಕ್ಷಮತೆ
ಹೆಚ್ಚಾಗಲಿದೆ. ಉದ್ಯಮಿಗಳಿಗೆ ಹೆಚ್ಚಿನ ಲಾಭ ಹರಿದುಬರಲಿದೆ. 

ವೃಶ್ಚಿಕ
ನಿಮ್ಮಲ್ಲಿನ ನಾಯಕತ್ವ ಗುಣಕ್ಕೆ ಸೂಕ್ತವಾದ
ಸ್ಥಾನಮಾನ ದೊರೆಯಲಿದೆ. ಅಧಿಕಾರಸ್ಥರು
ಸಾಧ್ಯವಾದಷ್ಟು ಜನೋಪಯೋಗಿ ಕಾರ್ಯ
ಮಾಡುವುದು ಉತ್ತಮ. ದಾಂಪತ್ಯದಲ್ಲಿ ಕಲಹಗಳು
ನಿವಾರಣೆಯಾಗಲಿವೆ. ಆರೋಗ್ಯದ ಕಡೆಗೆ ಹೆಚ್ಚು ಗಮನ
ನೀಡಿ. ಅನಿರೀಕ್ಷಿತ ಖರ್ಚುಗಳು ಅಧಿಕ.

ಧನಸ್ಸು
ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ಓದಿನಲ್ಲಿ ಆಸಕ್ತಿ
ಹೆಚ್ಚಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ
ನೀಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕೈ
ತುಂಡಾಗಲಿದೆ. ಹತ್ತಿರದ ಸ್ನೇಹಿತರಿಂದ ನೆರವು. ಉಸಿರಾಟದ
ಸಮಸ್ಯೆಗೆ ಪರಿಹಾರ ದೊರೆಯಲಿದೆ. ದಾಂಪತ್ಯದಲ್ಲಿ ಸಣ್ಣ ಕಲಹ. 

ಮಕರ
ಸ್ವಂತ ವಾಹನ ಕೊಳ್ಳುವ ಯೋಗ ಕೂಡಿಬರಲಿದೆ.
ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ
ಅವಕಾಶ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅಲ್ಪ
ಮುನ್ನಡೆ. ಶತ್ರುಭಾದೆಯಿಂದ ಮುಕ್ತಿ. ಗ್ರಹಗಳೆಲ್ಲವೂ ನಿಮ್ಮ
ಪರವಾಗಿಯೇ ಇವೆ. ಮಾಡಿದ ಕೆಲಸದಲ್ಲಿ ಯಶ ಸಿಗಲಿದೆ.

ಕುಂಭ
ಹಿರಿಯರ ನೆರವಿನಿಂದ ಮಾನಸಿಕ ನೆಮ್ಮದಿ. ಮದುವೆ
ಮೊದಲಾದ ಶುಭ ಕಾರ್ಯಗಳು ತ್ವರಿತವಾಗಿ
ನೆರವೇರಲಿವೆ. ಆರೋಗ್ಯದಲ್ಲಿ ಚೇತರಿಕೆ. ಸುತ್ತಾಟ
ಹೆಚ್ಚಾಗುವುದು. ಹತ್ತಿರದ ಗೆಳೆಯರೊಂದಿಗೆ ಆತ್ಮೀಯತೆ
ಹೆಚ್ಚಾಗಲಿದೆ. ಖರ್ಚು ಕಡಿಮೆ, ಉಳಿತಾಯ ಹೆಚ್ಚಾಗಲಿದೆ. ಭೂ
ವ್ಯಾಜ್ಯಗಳಿಂದ ಮಾನಸಿಕ ಕಿರಿಕಿರಿ. ಲಕ್ಷ್ಮೀ ಆರಾಧನೆ ಮಾಡಿ.

ಮೀನ
ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಹೊಸ ಸಾಲಕ್ಕೆ ಮಿತಿ ಇರಲಿ. ರೈತರಿಗೆ ಹೆಚ್ಚಿನ ಲಾಭ
ವಾಗಲಿದೆ. ನಿರ್ಧಾರ ಕೈಗೊಳ್ಳುವಾಗ ಜಾಗರೂಕ
ರಾಗಿರಿ. ಸ್ವಂತ ಮನೆಯ ಕನಸಿಗೆ ಮರು ಜೀವ ಬರಲಿದೆ.
ಮಕ್ಕಳ ಮದುವೆಗೆ ಸಣ್ಣ ಅಡೆತಡೆಗಳು ಎದುರಾಗಲಿವೆ.

Follow Us:
Download App:
  • android
  • ios