Asianet Suvarna News Asianet Suvarna News

ಈ ರಾಶಿಯವರಿಗೆ ಇಂದು ಶತ್ರು ಬಾಧೆ ಕಾಡಬಹುದು

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.

Special Bhavishya July 18
Author
Bengaluru, First Published Jul 18, 2018, 7:05 AM IST

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕನ್ಯಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಪ್ರಿಯರೇ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಸೊಂಟ ಭಾಗದಲ್ಲಿ ಪೆಟ್ಟು ಮಾಡಿಕೊಳ್ಳುವ ಅಥವಾ ಉಳುಕುವ ಸಾಧ್ಯತೆ ಇದೆ. ನಿಮ್ಮ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಸ್ವಲ್ಪ ಬೇಸರವನ್ನುಂಟುಮಾಡಬಹುದು. ಕಾರ್ಯ ಸ್ಥಳದಲ್ಲಿ ಸ್ವಲ್ಪ ಹೊರೆ ಹೆಚ್ಚಾಯ್ತು ಅನ್ನುವ ಭಾವನೆ ಬರುತ್ತದೆ. ಸಮಾಧಾನವಿರಲಿ.

ದೋಷಪರಿಹಾರ : ಅನ್ನಪೂರ್ಣೇಶ್ವರಿ ದೇವಿಗೆ ಒಂದು ತಾಮ್ರದ ತಂಬಿಗೆಯಲ್ಲಿ ಹಾಲನ್ನು ಸಮರ್ಪಿಸಿ ಬನ್ನಿ.

ವೃಷಭ : ಆತ್ಮೀಯರೇ ನಿಮ್ಮ ಹೊಟ್ಟೆ ಭಾಗದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಮಕ್ಕಳಿಂದ ಸ್ವಲ್ಪ ಸಮಸ್ಯೆ ಅಂತನ್ನಿಸುತ್ತದೆ ಆದರೆ ಅಷ್ಟೇನೂ ಸಮಸ್ಯೆಯಾಗುವುದಿಲ್ಲ. ಯೋಚಿಸಬೇಡಿ. ನಿಮ್ಮ ಸಹೋದರಿ ನಿಮ್ಮ ಮನಸ್ಸಿಗೆ ಕಿರಿಕಿರಿಯಾಗುವಂತೆ ನಡೆದುಕೊಳ್ಳುವ ಸಾಧ್ಯತೆ ಇದೆ. 

ದೋಷ ಪರಿಹಾರ : ಅಮ್ಮನವರ ದೇವಸ್ಥಾನಕ್ಕೆ ಅಗತ್ಯವೆನಿಸುವ ಮಂಗಲ ದ್ರವ್ಯಗಳ ದಾನ ಮಾಡಿ.

ಮಿಥುನ : ನಿಮ್ಮ ಸುಖಕ್ಕೆ ಅಡ್ಡಿಯಾಗುವ ದಿನ, ಓರ್ವ ಶತ್ರು ನಿಮ್ಮನ್ನು ಮಾನಸಿಕವಾಗಿ ಕಾಡಬಹುದು. ಆದರೆ ಪಂಚಮ ಗುರು ನಿಮಗೆ ಅನುಕೂಲವನ್ನೂ ತರಲಿದ್ದಾನೆ. ಹೆದರುವ ಅಗತ್ಯವಿಲ್ಲ. ಕುಟುಂಬದಲ್ಲಿ ಸ್ವಲ್ಪ ಸಾಮರಸ್ಯ ಕಳೆದುಹೋಗಲಿದೆ. ಸಮಾಧಾನವೇ ಜೀವನ. ಸಮಾಧಾನವಿರಲಿ.  

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಕಟಕ : ನಿಮ್ಮ ಸಹೋದರಿ ಸ್ವಲ್ಪ ಕಿರಿಕಿರಿ ಮಾಡಬಹುದು. ಅದೇನೂ ನಿಮಗೆ ತೊಂದರೆಯಾಗುವುದಿಲ್ಲ. ಅವರೊಂದಿಗೆ ಜಗಳವಾಡುವುದು ಬೇಡ. ನಿಮ್ಮ ಕಿಬ್ಬೊಟ್ಟೆ ಜಾಗದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು. ಕುಜನರು ನಿಮ್ಮ ಕಡೆ ಕೆಟ್ಟ ದೃಷ್ಟಿ ಹರಿಸಬಹುದು. ಎಚ್ಚರವಾಗಿರಿ.  
  
ದೋಷ ಪರಿಹಾರ : ಚಂದ್ರ ಆರಾಧನೆ ಮಾಡಿ

ಸಿಂಹ : ಇಂದು ನಿಮ್ಮ ಪಾಲಿಗೆ ಧನ ವ್ಯಯ. ಉದ್ಯೋಗದಲ್ಲಿ ಸ್ವಲ್ಪ ಅಸಮಧಾನ, ಸಹೋದರರಲ್ಲಿ ಸಾಮರಸ್ಯ, ಸುಖ ನೆಮ್ಮದಿ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ. ಪ್ರಯಾಣದ ಸಾಧ್ಯತೆ ಇದೆ. ಸಾಮಾನ್ಯದಿನವಾಗಿರಲಿದೆ. 

ದೋಷ ಪರಿಹಾರ : ಶಿವನಿಗೆ ಭಸ್ಮ ಸಮರ್ಪಣೆ ಮಾಡಿ

ಕನ್ಯಾ : ಇಂದು ನಿಮ್ಮ ಪಾಲಿಗೆ ಭೂರಿ ಭೋಜನ, ಧನಾಗಮನ, ವಾಹನ ಹಾಗೂ ಓಡಾಟದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಮಡದಿಯಿಂದ ಧನಾಗಮನ. ಒಳ್ಳೇ ಮಾತುಗಳನ್ನೂ ಕೇಳುತ್ತೀರಿ. ಶುಭದಿನವಾಗಿರಲಿದೆ.
  
ದೋಷ ಪರಿಹಾರ : ವಿಷ್ಣು ದರ್ಶನ ಮಾಡಿ

ತುಲಾ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಉತ್ತಮ ದಿನ. ಹಿರಿಯರ ಸಹಕಾರ ದೊರೆಯುತ್ತದೆ. ಕರ್ಮ ಸ್ಥಾನದಲ್ಲಿ ಅಂದರೆ ಉದ್ಯೋಗ ಸ್ಥಾನದಲ್ಲಿ ಶುಭ ಸಮಾಚಾರವಿದೆ. ಅಷ್ಟೇ ಅಲ್ಲ ಸ್ವಲ್ಪ ಕಿರಿಕಿರಿಯೂ ಇದೆ. ಆದರೆ ಹೆಚ್ಚು ಸಮಾಧಾನ ಇರಲಿದೆ. ಚಿಂತೆ ಬೇಡ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು ನಿಮ್ಮ ಪಾಲಿಗೆ ಧನವ್ಯಯ, ಸಾಲಕೊಟ್ಟು ಕೈಸುಟ್ಟುಕೊಳ್ಳುವ ಸಾಧ್ಯತೆ ಇದೆ. ಯಾರಿಗೂ ಕೈಸಾಲ ಕೊಡಬೇಡಿ. ಉದ್ಯೋಗದಲ್ಲಿ ಸ್ತ್ರೀಯರ ಸಹಾಯ ಇದೆ ಕೆಲ ಸ್ತ್ರೀಯರಿಂದ ಸಮಸ್ಯೆಯೂ ಇದೆ. ಎಚ್ಚರವಾಗಿರಿ. 

ದೋಷ ಪರಿಹಾರ : ದುರ್ಗಾದೇವಿಯ ಆರಾಧನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಸ್ತ್ರೀಯರಿಂದ ಪ್ರಶಂಸೆ. ಸ್ತ್ರೀಯರಿಗೆ ಉದ್ಯೋಗ ಪ್ರಾಪ್ತಿ. ಕೊಟ್ಟ ಹಣ ವಾಪಸ್ಸು ಬರಲಿದೆ. ಧನ ಲಾಭವೂ ಇದೆ. ಆದರೆ ಸಂಗಾತಿಯ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ಆಹಾರ ವ್ಯತ್ಯಯವಾಗಬಹುದು. ಹುಷಾರಾಗಿರಿ.

ದೋಷ ಪರಿಹಾರ : ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಶುಭದಿನ. ಆಗಂತುಕರಿಂದ ಶುಭ ಸುದ್ದಿ ಹಾಗೂ ಅದೃಷ್ಟವೆನಿಸುವ ಸಂಗತಿ ಜರುಗಲಿದೆ. ನಿಮ್ಮ ತಲೆ ಭಾಗದಲ್ಲಿ ಸ್ವಲ್ಪ ಪೆಟ್ಟಾಗುತ್ತದೆ. ಉದ್ಯೋಗದಲ್ಲಿ ಪ್ರಶಂಸೆ ಹಾಗೂ ಲಾಭವಿದೆ.
  
ದೋಷ ಪರಿಹಾರ : ಗುರು ದರ್ಶನ ಮಾಡಿ

ಕುಂಭ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಸ್ವಲ್ಪ ಆರೋಗ್ಯ ವ್ಯತ್ಯಯವಾಗಲಿದೆ. ಶೀತ ಬಾಧೆ, ಕಾಲು ನೋವಿನಂಥಾ ಬಾಧೆಗಳು ಕಾಡಲಿವೆ. ಹಿರಿಯರಿಂದ ಸಹಾಯವೂ ದೊರೆಯಲಿದೆ. ಸಮಾಧಾನಕರ ದಿನವಾಗಿರಲಿದೆ.   

ದೋಷ ಪರಿಹಾರ : ಚಂದ್ರನ ಆರಾಧನೆಯನ್ನೇ ಮಾಡಿ ಅಥವಾ ದೇವಿ ದರ್ಶನ ಮಾಡಿ 
  
ಮೀನ : ಸ್ನೇಹಿತರೆ ನಿಮ್ಮ ಮಡದಿಯಿಂದ ಸಹಾಯ, ಅಥವಾ ಮಡದಿ ಜೊತೆ ಪ್ರಾಯಾಣ ಬೆಳೆಸುವ ಸಾಧ್ಯತೆ ಇದೆ. ಸ್ನೆಹಿತರು ಸ್ವಲ್ಪ ಕಿರಿಕಿರಿ ಮಾಡುವ ಸಾಧ್ಯತೆತೆಯೂ ಇದೆ. ವ್ಯಾಪಾರದಲ್ಲಿ ಸ್ತ್ರೀಯರ ಭಾಗಿತ್ವ ಇದೆ. ಹಣದ ವಿಷಯದಲ್ಲಿ ಜಾಗರೂಕವಾಗಿರಿ.   
  
ದೋಷ ಪರಿಹಾರ : ಶ್ರೀರಾಮ ನಾಮ ಪಠಿಸಿ.

ಗೀತಾಸುತ.

Follow Us:
Download App:
  • android
  • ios