ಶುಭೋದಯ ಓದುಗರೇ, ಇಂದಿನ ನಿಮ್ಮ ರಾಶಿ ಫಲಾಫಲಗಳು ಹೀಗಿವೆ ನೋಡಿ. 

ಮೇಷ ರಾಶಿ : ನಿಮ್ಮ ರಾಶಿಯ ಅಧಿಪತಿ ಲಾಭ ಸ್ಥಾನಕ್ಕೆ ಬಂದಿರುವುದರಿಂದ ಲಾಭ ನಿರೀಕ್ಷಿಸಬಹುದು. ಆರೋಗ್ಯ ಸುಧಾರಣೆ, ನಿಮ್ಮ ಉದ್ಯೋಗ ಸ್ಥಾನದಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ತಪ್ಪಿದ್ದಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೋಷಪರಿಹಾರ : ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ : ನಿಮ್ಮ ವ್ಯಯಾಧಿಪತಿ ಕರ್ಮ ಸ್ಥಾನಕ್ಕೆ ಬಂದಿರುವುದರಿಂದ ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು, ಉದ್ಯೋಗ ನಷ್ಟವೂ ಆಗುವ ಸಾಧ್ಯತೆ ಇದೆ. ಆದರೆ ಹೆದರುವ ಅವಶ್ಯಕತೆ ಇಲ್ಲ ಲಾಭಕ್ಕೆ ಗುರು ದೃಷ್ಟಿ ಇರುವುದರಿಂದ ಯಾವುದೋ ರೀತಿಯಲ್ಲಿ ಸಹಕಾರವಾಗುತ್ತದೆ.

ದೋಷ ಪರಿಹಾರ : ಗುರುವಿನ ಅನುಗ್ರಹಕ್ಕಾಗಿ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಿಥುನ : ಉತ್ತಮ ದಿನ. ಸಂಗಾತಿಯಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ಬರಲಿದೆ, ನೀವಂದುಕೊಂಡ ಹಾಗೆ ಆಗಂತುಕರು ನಿಮ್ಮ ಮನಸ್ಸನ್ನು ಹಾಳುಮಾಡಬುದು. ಪ್ರಯಾಣ ಮಾಡುವಾಗ ಗುರು ಹಿರಿಯರನ್ನು ನೋಡಿ ಗೌರವಿಸಿ.

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ಗಂಧದ ಅಭಿಷೇಕ ಮಾಡಿಸಿ

ಕಟಕ : ನೀವು ಕೊಟ್ಟ ಹಣ ಹಿಂದಿರುಗುವ ಸಾಧ್ಯತೆ ಇದೆ, ಕುಟುಂಬದಲ್ಲಿ ನಡೆದ ಕಲಹ ಅಂತ್ಯವಾಗಿ ಸಮಾಧಾನವಾಗಬಹುದು, ಮನೆ ವಿಚಾರದಲ್ಲಿ ಹಾಗೂ ಸ್ತ್ರೀಯರ ನಡುವೆ ಹೊಂದಾಣಿಕೆಯಲ್ಲಿ ಉತ್ತಮ ಫಲ

ದೋಷ ಪರಿಹಾರ : ಲಲಿತಾ ಸಹಸ್ರನಾಮ ಪಠಿಸಿ.

ಸಿಂಹ : ತಂದೆ ಮಕ್ಕಳಲ್ಲಿ ಸ್ವಲ್ಪ ಘರ್ಷಣೆ, ಆದರೆ ನಿಮ್ಮ ನಿರ್ಧಾರಗಳು ಕೆಲವೊಮ್ಮೆ ಎಡವಟ್ಟು ಮಾಡುತ್ತವೆ. ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ವಲ್ಪ ಘಾಸಿಯಾಗಬಹುದು. ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭ ಮಾಡಿ.

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಕನ್ಯಾ : ಸ್ತ್ರೀಯರಿಂದ ಕಾರ್ಯಾನುಕೂಲ, ಸ್ವಲ್ಪ ಮಟ್ಟಿಗೆ ಹೆಣ್ಣುಮಕ್ಕಳಿಗೂ ತಂದೆಗೂ ಮನಸ್ತಾಪವಾಗಬಹುದು. ನಿಮ್ಮ ಕ್ಷೇತ್ರದಲ್ಲಿ ಅಂದರೆ ವಾಸ ಮಾಡುವ ಕಡೆ ಸ್ವಲ್ಪ ಕ್ಷುದ್ರ ದೋಷಗಳನ್ನು ಕಾಣಬಹುದು. ಎಚ್ಚರವಾಗಿರಿ. 

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತೆಂಗಿನಕಾಯಿ ಸಮರ್ಪಣೆ ಮಾಡಿ

ತುಲಾ : ಕಾರ್ಯ ಸಾಧನೆಗೆ ಅನುಕೂಲದ ದಿನ, ನಿಮ್ಮ ವೈಯುಕ್ತಿಕ ಅಭಿಪ್ರಾಯಗಳಿಗೆ ಗೌರವ ಸಿಗಲಿದೆ, ಉದ್ಯೋಗದಲ್ಲಿ ಅತ್ಯುತ್ತಮ ಏಳಿಗೆ ಹೊಂದಲಿದ್ದೀರಿ. ನಿಮ್ಮ ಸಂಕಲ್ಪಕ್ಕೆ ಹಿರಿಯರ ಸಹಾಕಾರ ಇರಲಿದೆ. 

ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಹರಿದ್ರಾಭಿಷೇಕ ಮಾಡಿಸಿ 

ವೃಶ್ಚಿಕ : ಸ್ವಲ್ಪ ಮಟ್ಟಿಗೆ ಧನವ್ಯಯ, ಕುಟುಂಬದಲ್ಲಿ ಹಿರಿಯರಿಂದ ಮಾತುಕೇಳಬೇಕಾದ ಸಂದರ್ಭ ಎದುರಾಗುತ್ತದೆ. ಸಾಹಸ ಕಾರ್ಯಗಳಿಗೆ ಹಿನ್ನಡೆ, ಸೌಖ್ಯ ವೃದ್ಧಿ, ವಾಹನ-ಖನಿಜ ವಸ್ತು ಖರೀದಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನಸ್ಸು : ಇಂದು ನಿಮ್ಮ ಮನಸ್ಸಿಗೆ ಸಮಾಧಾನದ ದಿನ, ಕಾರ್ಯ ಸಾಧನೆಗೆ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಉತ್ತಮರ ಭೇಟಿ, ಆರೋಗ್ಯದಲ್ಲಿ ಮಾತ್ರ ಕೊಂಚ ವ್ಯತ್ಯಯವಾಗಬಹುದು.

ದೋಷ ಪರಿಹಾರ : ಭಗವದ್ಗೀತೆ ಪುಸ್ತಕ ದಾನ ಮಾಡಿ

ಮಕರ : ನೀವು ಅಂದುಕೊಂಡ ಕಾರ್ಯ ಸಾಧಿಸಬಹುದು, ಹಿರಿಯರ ಸಹಾಯ, ಧನ ಸಹಾಯ ಎಲ್ಲವೂ ಲಭಿಸುತ್ತದೆ. ಉತ್ತಮರ ಸಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಹಕಾರ. ದಿನದ ಪ್ರಾರಂಭಕ್ಕೂ ಮುನ್ನ ಶಿವ ಸಹಸ್ರನಾಮ ಪಠಿಸಿ. 

ದೋಷ ಪರಿಹಾರ : ಶಿವಾರಾಧನೆ ಮಾಡಿ 

ಕುಂಭ : ಕಾರ್ಯ ಸಾಧನೆ, ಉದ್ಯೋಗದಲ್ಲಿ ಅತ್ಯಧಿಕ ಶ್ರಮ, ನಿಮ್ಮ ಪ್ರತಿಭೆಯಿಂದ ಅನ್ಯರು ಹೆಸರು ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೆ ನೀವು ಉತ್ತಮ ಫಲ ಪಡೆದೇ ಪಡೆಯುತ್ತೀರಿ. ಶುಭ ದಿನ. 

ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿ

ಮೀನ : ಕಾರ್ಯ ಸಾಧನೆಗೆ ಗುರುವಿನ ಅನುಗ್ರಹವಿದೆ, ನಿಮ್ಮ ಉದ್ಯೋಗ, ವ್ಯಾಪಾರದಲ್ಲಿ ನಿಮ್ಮ ಮಾರ್ಗದರ್ಶನದಿಂದ ಧನ ಸಂಪಾದನೆ ಅಧಿಕವಾಗಲಿದೆ. ವೃಥಾ ತಿರುಗಾಟ ಇರಲಿದೆ. ಸ್ವಲ್ಪ ಧನ ವ್ಯಯವೂ ಆಗಲಿದೆ.

ದೋಷ ಪರಿಹಾರ : ಕುಜ ಶಾಂತಿ ಮಾಡಿಸಿ.