ಈ ರಾಶಿಯವರಿಂದು ಜಾಗೃತೆ ವಹಿಸುವುದು ಉತ್ತಮ

ಈ ರಾಶಿಯವರಿಂದು ಜಾಗೃತೆ ವಹಿಸುವುದು ಉತ್ತಮ

Add Asianetnews Kannada as a Preferred SourcegooglePreferred

ಮೇಷ
ಪೇಂಟ್ ಮಾರಾಟದವರಿಗೆ ಒಳ್ಳೆಯ ದಿನ.
ಆದಾಯವು ಹೆಚ್ಚು. ಹಳೆಯ ಬಾಕಿಗಳು ಈ
ದಿನ ನಿಮ್ಮ ಕೈ ಸೇರಲಿವೆ. ಚಿಂತೆಗೆ ಬ್ರೇಕ್!

ವೃಷಭ
ಸೋಮಾರಿತನ ಮೈಗೂಡಿಸಿಗೊಳ್ಳದೇ ಜಾಗೃತ
ರಾಗಿ ಕೆಲಸ ಮಾಡಿ. ನಿಮ್ಮಲ್ಲಿನ ಏಕಾಗ್ರತೆ
ಯನ್ನು ಸರಿಯಾಗಿ ಬಳಸಿದಲ್ಲಿ ಫಲ ಸಿಗಲಿದೆ.

ಮಿಥುನ
ನರ್ಸ್ ಹಾಗೂ ಡಾಕ್ಟರ್‌ಗಳಿಗೆ ಆಲಸ್ಯವು
ಹೆಚ್ಚು. ನಿಮ್ಮ ವೃತ್ತಿಯೇ ಹಾಗಿದೆ. ಅದಕ್ಕಾಗಿ
ಬೇಸರಿಸುವ ಅಗತ್ಯವಿಲ್ಲ. ಹುರುಪಿರಲಿ.

ಕಟಕ
ಈ ರಾಶಿಯವರು ಇಂದು ಹೆಚ್ಚು ಹಣ ವ್ಯಯ
ಮಾಡುವರು. ಅದು ಅಷ್ಟು ಸೂಕ್ತವೂ ಅಲ್ಲ.
ಹಣದ ಮುಗ್ಗಟ್ಟು ನಿಮ್ಮ ಕಾಡಲಿದೆ. ಜೋಕೆ.

ಸಿಂಹ
ಪುಸ್ತಕದ ಹುಳುವಂತಿದ್ದು ಹೆಚ್ಚು ಓದುತ್ತಿದ್ದ
ನೀವು ಇಂದಿನ ಸೋಷಲ್ ಮೀಡಿಯಾದಲ್ಲಿ
ಹೆಚ್ಚು ಕಾಲ ಕಳೆಯುತ್ತಿದ್ದೀರಿ. ಅಷ್ಟು ಒಳಿತಲ್ಲ

ಕನ್ಯಾ
ಚಿತ್ತಚಾಂಚಲ್ಯದಿಂದ ವ್ಯವಹಾರದಲ್ಲಿ ಸ್ವಲ್ಪ
ಏರುಪೇರಾಗಲಿದೆ. ವೈಮನಸ್ಯಗಳು ಬೇಡ.
ಯೋಗ ಹಾಗೂ ಪ್ರಾಣಾಯಾಮ ಮಾಡಿರಿ.

ತುಲಾ 
ನಿಮ್ಮ ನೆಮ್ಮದಿಯು ದ್ವಿಗುಣವಾಗಲಿದೆ. ಅದಕ್ಕೆ
ಬಲವಾದ ಕಾರಣ ನಿಮ್ಮ ನೆಚ್ಚಿನವರು ನೀವು
ಇದ್ದಲ್ಲಿಗೇ ಬರಲಿದ್ದಾರೆ. ಖುಷಿಯ ದಿನವಿದು.

ವೃಶ್ಚಿಕ
ಉದ್ಯೋಗದ ಹಲವು ದಾರಿಗಳು ನಿಮ್ಮ
ಮುಂದಿವೆ. ಯೋಚಿಸಿ ಕ್ರಮ ಕೈಗೊಳ್ಳಿ.
ಪ್ರತಿಭೆ ಬೆಳೆಸಿಕೊಳ್ಳುವತ್ತಲೂ ಗಮನಹರಿಸಿ. 

ಧನುಸ್ಸು
ನಿಮ್ಮದಲ್ಲದ ತಪ್ಪಿಗೂ ನಿಮ್ಮನ್ನು ಟಾರ್ಗೆಟ್
ಮಾಡಲಿದ್ದಾರೆ. ಆದಷ್ಟು ನಿಗಾ ವಹಿಸಿ ಕೆಲಸ
ಗಳನ್ನು ಮಾಡುವುದು ಸೂಕ್ತ ಎನ್ನಬಹುದು.

ಮಕರ
ಆಗಾಗ ಮೋಡ ಮುಚ್ಚಿದ ವಾತಾವರಣವು
ನಿಮ್ಮ ಮನಸ್ಸನ್ನು ಕದಡಲಿದೆ. ಕೋಪ-ತಾಪ
ಗಳಿಂದ ಆದಷ್ಟು ದೂರವಿರಿ. ಜೋಪಾನ.

ಕುಂಭ
ಯಾತ್ರೆಯ ಯೋಗವು ಕೂಡಿ ಬರಲಿದೆ.
ಅದಕ್ಕಾಗಿ ನೀವು ದಿಢೀರೆಂದು ತಯಾರಾಗಿ
ಹೆಚ್ಚು ಖುಷಿಯ ದಿನವನ್ನಾಗಿಸಿಕೊಳ್ಳುವಿರಿ.

ಮೀನ 
ಅಮ್ಮನ ಕಡೆಯ ನೆಂಟರಿಂದ ನಿಮ್ಮ ಮನೆಗೆ
ವರನ ಆಗಮನವಾಗಲಿದೆ. ಅದಕ್ಕೆ ನಿಮ್ಮ
ಮನೆತನದ ಮೇಲಿನ ಗೌರವೇ ಕಾರಣವಾಗಿ