ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಹೆಚ್ಚು ಧೈರ್ಯವಂತರಾಗಿರುತ್ತಾರೆ. ಮೇಷ, ವೃಷಭ, ಸಿಂಹ ಮತ್ತು ಧನು ರಾಶಿಯವರು ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತಾರೆ.

ಜ್ಯೋತಿಷ್ಯದಲ್ಲಿ ಹೇಳಿರುವಂತೆ ಮನುಷ್ಯನ ಗುಣ, ಲಕ್ಷಣಗಳು ಮತ್ತು ವ್ಯಕ್ತಿತ್ವ ಅರ್ಥ ಮಾಡಿಕೊಳ್ಳುವುದು ಸುಲಭ. ಹಿಂದೆ ಘಟಿಸಿದ, ಮುಂದೆ ಘಟಿಸಬಹುದಾದ ಘಟನೆಗಳ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ತರ ಸೂಚನೆ ನೀಡುತ್ತದೆ. ರಾಶಿ, ನಕ್ಷತ್ರಗಳನ್ನು ತಿಳಿದು ವ್ಯಕ್ತಿಯ ಸ್ವಭಾವವನ್ನು ಅರಿಯಬಹುದು. ಜೀವನದಲ್ಲಾಗುವ ಏರು-ಪೇರು ಮತ್ತು ಇನ್ನಿತರ ಕುತೂಹಲಕಾರಿ ಸಂಗತಿಗಳನ್ನು ಜಾತಕದಿಂದ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಗ್ರಹ ಹಾಗೂ ನಕ್ಷತ್ರಗಳ ಪರಿವರ್ತನೆ ರಾಶಿ-ನಕ್ಷತ್ರಗಳನ್ನೂ ಪ್ರಭಾವಿಸುತ್ತದೆ. 

ಅದರದ್ದೇ ಆದ ಭಿನ್ನ ಸ್ವಭಾವಗಳು ಪ್ರತಿ ರಾಶಿಗೂ ಇರುತ್ತವೆ. ಎಲ್ಲರಿಗೂ ರಾಶಿಗನುಗುಣವಾದ ವ್ಯಕ್ತಿತ್ವವಿರುತ್ತದೆ. ಕೆಲವರದ್ದು ಸೂಕ್ಷ್ಮ ಸ್ವಭಾವವಾದರೆ, ಮತ್ತೆ ಕೆಲವರು ಗಟ್ಟಿಗರು. ಹಾಗಾಗಿ ಕೆಲ ರಾಶಿಯವರಿಗೆ ಹೆದರಿಕೆ ಅಂದರೇನು ಎನ್ನುವುದೇ ಗೊತ್ತಿರುವುದಿಲ್ಲ. ಎಂಥಹುದೇ ಪರಿಸ್ಥಿತಿ ಬಂದರೂ ಧೈರ್ಯಗೆಡದೆ ಕಷ್ಟ ಎದುರಿಸುವ ಸಾಮರ್ಥ್ಯವಿರುತ್ತದೆ ಅವರಿಗೆ. ಧೈರ್ಯವೇ ಸರ್ವತ್ರ ಸಾಧನ ಅವರಿಗೆ. ಆ ರಾಶಿಗಳು ಯಾವುವು?

ಮೇಷ ರಾಶಿ
ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರು ಹೆಚ್ಚು ಛಲವಾದಿಗಳು ಮತ್ತು ಧೈರ್ಯವಂಥರು. ಮಂಗಳ ಗ್ರಹ ಈ ರಾಶಿಯ ಅಧಿಪತಿ. ಮಂಗಳವು ಧೈರ್ಯ (Courage), ಕೋಪ (Anger), ಸಾಹಸ ಮತ್ತು ವಿಜಯದ (Victory)ಕಾರಕ ಗ್ರಹವಾಗಿರುವ ಕಾರಣ ಮೇಷದವರಿಗೆ ಧೈರ್ಯ ಹೆಚ್ಚು. ಹಾಗಾಗಿ ಈ ರಾಶಿಯವರಲ್ಲಿ ಮಂಗಳ ಗ್ರಹದ ಪ್ರಭಾವವನ್ನು ಕಾಣಬಹುದು. ಈ ರಾಶಿಯವರು ಯಾವುದೇ ಕಾರಣಕ್ಕೂ ಬೇರೆಯವರ ಮುಂದೆ ತಲೆ ತಗ್ಗಿಸುವುದಿಲ್ಲ. ಇವರಿಗೆ ಧೈರ್ಯದಿಂದಲೇ ಹೆಚ್ಚಿನ ಯಶಸ್ಸು ಕಟ್ಟಿಟ್ಟು ಬುತ್ತಿ. ಅದಕ್ಕೋಸ್ಕರವೇ ಯಾರಿಗೂ ಹೆದರದ ಸ್ವಭಾವವನ್ನು ಇವರದ್ದಾಗಿರುತ್ತದೆ. ಈ ರಾಶಿಯವರ ಈ ಗುಣಗಳೇ ಇವರ ಸಫಲತೆಗೆ ಕಾರಣ.

ವೃಷಭ ರಾಶಿ
ವೃಷಭ ರಾಶಿಯವರು ಹೆಚ್ಚು ಧೈರ್ಯವಂತರು. ಅಷ್ಟೇ ಅಲ್ಲ, ರಾಶಿಯವರು ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ತಿಳಿದು ನಿಭಾಯಿಸುತ್ತಾರೆ. ಎಲ್ಲ ಸಂಕಷ್ಟಗಳನ್ನು ಸುಲಭವಾಗಿ ನಿಭಾಯಿಸುವುದಲ್ಲದೆ, ಕಷ್ಟಕ್ಕೆ ಹೆದರದೇ ಧೈರ್ಯವಾಗಿ ಎದುರಿಸುವ ಗುಣ ವೃಷಭ ರಾಶಿಯವರಿಗೆ ಇರುತ್ತದೆ. ಹಾಗೆಯೇ ಅದಕ್ಕೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳುವ ಚತುರತೆಯೂ ಇವರಿಗಿರುತ್ತದೆ. 

ಸಿಂಹ ರಾಶಿ
ಹೆಸರೇ ಸೂಚಿಸುವಂತೆ ಈ ರಾಶಿಯವರು ಬಾಲ್ಯದಿಂದಲೂ ಧೈರ್ಯ ಹೆಚ್ಚು. ಬಾಲ್ಯದಲ್ಲಿ ಇವರ ಚಟುವಟಿಕೆಗಳೇ ಆಶ್ಚರ್ಯ ಹುಟ್ಟಿಸುತ್ತದೆ. ಯಾವುದೇ ರೀತಿಯ ಭಯವೂ ಇವರಿಗಿರುವುದಿಲ್ಲ. ವರ್ತನೆಯಿಂದಲೇ ಇವರ ಧೈರ್ಯವೆಷ್ಟು ಎಂದು ಹೇಳಬಹುದು. ಈ ರಾಶಿಯ ಅಧಿಪತಿ ಸೂರ್ಯ. ಸಾಹಸ – ನಿಯಮ – ಉಚ್ಛಪದವಿ – ಧೈರ್ಯ ಮತ್ತು ನಾಯಕತ್ವ ಗುಣಗಳ ಕಾರಕ ಗ್ರಹ. ಹಾಗಾಗಿ ಈ ರಾಶಿಯವರ ಗುಣವು ಸೂರ್ಯ ಗ್ರಹದಿಂದ ಪ್ರಭಾವಿತವಾಗಿ ಇನ್ನಷ್ಟು ಧೈರ್ಯವಂತವಾಗಿರುತ್ತಾರೆ. ಈ ಸಿಂಹ ರಾಶಿಯವರು ಹೆಚ್ಚು ಬುದ್ಧಿವಂತರೂ ಹೌದು. 

ಧನು ರಾಶಿ
ಜಯ ಸಾಧಿಸುವಲ್ಲಿ ಧನು ರಾಶಿಯವರು ಬಹಳ ಮುಂದೆ. ಹಾಗಾಗಿ ಇವರಿಗೆ ಸೋಲೆಂಬುದನ್ನು ಅರಿಗಿಸಿಕೊಳ್ಳುವುದು ಕಷ್ಟವೆಂಬ ಮನಸ್ಥಿತಿ ಇರುತ್ತದೆ. ಇದರಿಂದ ಜಯದತ್ತಲೇ ಹೆಚ್ಚು ಕೇಂದ್ರೀಕರಿಸಿರುತ್ತಾರೆ. ಇದಕ್ಕೋಸ್ಕರ ಕಠೋರ ನಿರ್ಧಾರ ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ. ನೋಡಲು ಕಠೋರ ಸ್ವಭಾವದವರಂತೆ ಅನಿಸಿದರೂ ಆಂತರ್ಯದಲ್ಲಿ ಮೃದುತ್ವವನ್ನು ಹೊಂದಿದವರಾಗಿರುತ್ತಾರೆ. ಇದರ ಜೊತೆಗೆ ಎಂಥ ಸಮಸ್ಯೆಗಳು ಎದುರಾದರೂ ದೃತಿಗೆಡದೆ ಅದನ್ನು ಸುಲಭ ಹಾಗೂ ಸರಳವಾಗಿ ಎದುರಿಸಿಕೊಂಡು ಹೋಗುವ ಚಾಕಚಕ್ಯತೆ ಈ ರಾಶಿಯವರಿಗೆ ಇರುತ್ತದೆ. ಇವರ ಈ ಗುಣವೇ ಇವರಿಗೆ ಹೆಚ್ಚು ಧೈರ್ಯವನ್ನು ತಂದುಕೊಟ್ಟು, ಜೀವನದಲ್ಲಿ ಯಶಸ್ಸು ಸಿಗುವಂತೆ ಮಾಡುತ್ತದೆ.