Asianet Suvarna News Asianet Suvarna News

ಕಟಕ ರಾಶಿಯವರ ಮನಸ್ಸಿಂದು ತಲ್ಲಣಗೊಳ್ಳುವ ಸಾಧ್ಯತೆ ಇದೆ, ಉಳಿದ ರಾಶಿಯವರ ದಿನ ಹೇಗಿರಲಿದೆ?

ಗ್ರಹ ಗತಿಗಳು ಬದಲಾದವರೆ ರಾಶಿ ನಕ್ಷತ್ರಗಳ ಮೇಲೂ ಪರಿಣಾಮ ಬೀಳೋದು ಸಹಜ. ಯಾವ ಗ್ರಹ, ಯಾವ ಮನೆಯಲ್ಲಿದೆ? ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರುತ್ತಾನೆ. ನಿಮ್ಮ ಜಾತಕ ನಿಮ್ಮ ಕೈಯಲ್ಲಿ. ನಿಮ್ಮ ಭವಿಷ್ಯ, ನಿಮ್ಮ ಕೈಯಲ್ಲಿ...

Daily horoscope on June 22 2018

23-06-18 - ಶನಿವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ನಿಜ ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ಏಕಾದಶಿ ತಿಥಿ

ಸ್ವಾತಿ ನಕ್ಷತ್ರ

Daily horoscope on June 22 2018

ಮೇಷ ರಾಶಿ: ಇಂದು ನಿಮ್ಮ ಪಾಲಿಗೆ ಅಸಾಧಾರಣ ದಿನ. ಶುಭ ಫಲಗಳು ನಿಮ್ಮ ಪಾಲಿಗಿವೆ. ನಿಮ್ಮ ರಾಶಿಯಿಂದ ಕೇಂದ್ರದಲ್ಲಿ ಗುರುಚಂದ್ರರು ಇರುವುದರಿಂದ ಉತ್ತಮ ಫಲಗಳನ್ನು ಅನುಭವಿಸಲಿದ್ದೀರಿ. ಶನಿವಾರ ಶುಭದಾಯಕವಾಗಿದೆ. 
ದೋಷ ಪರಿಹಾರ - ನಿಮ್ಮ ಇಷ್ಟ ದೇವರನ್ನು ನೆನೆಯಿರಿ. 

ವೃಷಭ: ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ, ನೀವು ಅಂದುಕೊಂಡ ಗುರಿ ತಲುಪುವಲ್ಲಿ ಹಿನ್ನಡೆಯಾಗಲಿದೆ. ಅಪೇಕ್ಷೆಗಳು ಅಧಿಕವಾಗಿದ್ದು ಫಲ ಕಡಿಮೆ. ಹಳೆಯ ಬಾಕಿ ಬರಲಿದೆ.
ದೋಷ ಪರಿಹಾರ : ಶಂ ಶನೈಶ್ಚರಾಯ ನಮ: ಮಂತ್ರವನ್ನು 7 ಬಾರಿ ಹೇಳಿಕೊಳ್ಳಿ 

ಮಿಥುನ: ಇಂದು ಬೆಳಗ್ಗೆ ಎದ್ದು ಶುಭ್ರವಾದ ನಂತರ ಸ್ವಲ್ಪ ಹೆಸರುಕಾಳನ್ನು ಸೇವಿಸಿ. ಅಥವಾ ಹೆಸರುಕಾಳಿನ ಪಲ್ಯ ಮಾಡಿಕೊಂಡು ತಿನ್ನಿ. ಅಷ್ಟೆ ಅಲ್ಲ ಹೆಸರು ಕಾಳು ದಾನ ಮಾಡಿ ಬನ್ನಿ. ನಿಮ್ಮ ದಿನ ಸುಗಮವಾಗಿರುತ್ತದೆ.
ದೋಷ ಪರಿಹಾರ : ಓಂ ನಮೋ ನಾರಾಯಣಾಯ ಮಂತ್ರವನ್ನು 8 ಬಾರಿ ಸ್ಮರಿಸಿ.

ಕಟಕ: ಇಂದು ನಿಮ್ಮ ಮನಸ್ಸು ತಲ್ಲಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ರಾಶಿಯ ಅಧಿಪತಿಯಾದ ಚಂದ್ರ ಶುಕ್ರನ ಮನೆಯಲ್ಲಿದ್ದು, ಶುಕ್ರ ಚಂದ್ರನ ಮನೆಯಲ್ಲಿದ್ದು ಒಂದು ಪರಿವರ್ತನ ಯೋಗವಿದೆ. ಆದ್ದರಿಂದ ನಿಮ್ಮ ಹುಷಾರಿನಲ್ಲಿ ನೀವಿರಬೇಕು. ಸ್ತ್ರೀ-ಪುರುಷರಲ್ಲಿ ಪರಸ್ಪರ ಗೌರವವಿರಲಿ. 
ದೋಷ ಪರಿಹಾರ: ಊಟ ಮಾಡುವ ಮುನ್ನ ತಮ್ಮದೆ ಅನ್ನಪೂರ್ಣೇಶ್ವರಿ ಸ್ಮರಣೆ ಮಾಡಿ.

ಸಿಂಹ: ಇಂದು ನಿಮಗೆ ಓರ್ವ ವಿದ್ವಾಂಸರಿಂದ ಪ್ರಶಂಸೆ ಸಿಗಲಿದೆ. ಮಿತ್ರರಿಂದ ನಿಮ್ಮ ಮಕ್ಕಳಿಗೆ  ಇರುಸುಮುರುಸಾಗಬಹುದು. ಮಕ್ಕಳನ್ನು ಗೌರವಿಸಿ, ಅವರ ಮನಸ್ಸಿಗೆ ನೋವು ಮಾಡದೆ ಅವರನ್ನು ತಿದ್ದುವ ಪ್ರಯತ್ನ ಮಾಡಬೇಕಾಗುತ್ತದೆ.
ದೋಷ ಪರಿಹಾರ : 1 ಕೆಜಿ ಗೋಧಿಯನ್ನು ಶಿವನಿಗೆ ಸಮರ್ಪಿಸಿಬನ್ನಿ

ಕನ್ಯಾ: ಉದ್ಯೋಗದಲ್ಲಿರುವ ಮಿತ್ರರೇ ನಿಮಗೆ ಸಿಹಿಸುದ್ದಿ. ಉದ್ಯೋಗ ಬದಲಾವಣೆಗೆ ಅವಕಾಶವಿದೆ, ಬಡ್ತಿಯೂ ಸಿಗಲಿದೆ. ಆದಾಯವೂ ದ್ವಿಗುಣವಾಗಲಿದೆ. ಆದರೆ ನಿಮ್ಮ ವಾಹನ ಸಂಚಾರದಲ್ಲಿ ಎಚ್ಚರವಾಗಿರಿ.
ದೋಷ ಪರಿಹಾರ: ಮನೋ ಬಲ ಸ್ಮರಣೆಯೇ ಸಾಕು.

ತುಲಾ: ನಿಮ್ಮ ರಾಶಿಯಲ್ಲಿ ಗಜಕೇಸರಿಯೋಗ ಏರ್ಪಟ್ಟಿದ್ದೆ. ಗಜ ಅಂದ್ರೆ ಆನೆ , ಕೇಸರಿ ಅಂದ್ರೆ ಸಿಂಹ ಎರಡೂ ವೈರ ಪ್ರಾಣಿಗಳು ಹೇಗೆ ಯೋಗವಾಗತ್ತೆ ಅಂದ್ರೆ ಗಜದಂಥ ದಿಟ್ಟತೆ, ಸಿಂಹದಂಥ ಧೈರ್ಯ ಬರಲಿದೆ. ಆದ್ರೆ ಗುರು ಚಂದ್ರರು ಇರುವುದು ಶತ್ರು ರಾಶಿಯಲ್ಲಿ  ಹಾಗಾಗಿ ಫಲ ಪ್ರಮಾಣ ಕಡಿಮೆ.  
ದೋಷ ಪರಿಹಾರ: ನವಗ್ರಹ ದರ್ಶನ, ನಮಸ್ಕಾರ ಮಾಡಿ

ವೃಶ್ಚಿಕ: ಮಿತ್ರರೇ ಸ್ವಲ್ಪ ಹಣ ಖರ್ಚಾಗಬಹುದು. ವೃಥಾ ಮೈಮೇಲೆ ಎಳೆದುಕೊಂಡು ಹುಂಬತನ ಪ್ರದರ್ಶಿಸಬೇಡಿ. ಆರೋಗ್ಯದ ಕಡೆಗೆ ಗಮನವಹಿಸಿ. ನೀರು ಕುಡಿಯುವಾಗ ಎಚ್ಚರದಿಂದ ಎರಡು ಬಾರಿ ಕುಡಿಯುವ ಬಾಟಲ್ ಅಥವಾ ಲೋಟ ಪರಿಶೀಲಿಸಿ ಕುಡಿಯಿರಿ.
ದೋಷ ಪರಿಹಾರ: ಗಣಪತಿ ಸುಬ್ರಹ್ಮಣ್ಯ ಉಭಯ ದೇವತೆಗಳನ್ನು ಸ್ಮರಿಸಿ.

ಧನಸ್ಸು: ನೀವು ಕೈಗೊಳ್ಳುವ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆ ಇದೆ. ನಿರ್ಧಾರ ಕೈಗೊಳ್ಳಲು ಹಿಂದು ಮುಂದೆ ನೋಡುತ್ತೀರಿ. ಇಂದು ಅರಾಮಾಗಿರಿ. ಯಾವ ಪ್ರಮುಖ ನಿರ್ಧಾರವೂ ಬೇಡ. 
ದೋಷ ಪರಿಹಾರ: ನಿಮ್ಮ ತಾಯಿಗೆ ನಮಸ್ಕಾರ ಮಾಡಿ. 

ಮಕರ: ಇಂದು ಬಿಡುವಿಲ್ಲದಷ್ಟು ಕೆಲಸ, ಕೆಲವರಿಗೆ ಸಮಯ ಹೇಗಪ್ಪಾ ತಳ್ಳುವುದು ಎಂಬ ಚಿಂತೆ. ಇಂದು ಪುಟ್ಟ ಪ್ರವಾಸ ಕೈಗೊಳ್ಳಿ. ಮನೆ ಕೆಲಸಗಳನ್ನು ಮಾಡಿ. ಹಿರಿಯರ ಸಲಹೆಯಿಂದ ದಿನ ಸುಗಮವಾಗಲಿದೆ. 
ದೋಷ ಪರಿಹಾರ: ಶಂ ಶನೈಶ್ಚರಾಯ ನಮ: ಹೇಳಿಕೊಳ್ಳಿ.

ಕುಂಭ: ಇಂದು ಯಾವ ಮುಖ್ಯ ಜವಾಬ್ದಾರಿಯನ್ನೂ ವಹಿಸುವುದು ಬೇಡ. ಹಾಗಂತ ಆಲಸ್ಯವೂ ಬೇಡ. ನಿಮ್ಮ ಮಿತಿಯಲ್ಲಿನ ಕೆಲಸಗಳನ್ನು ಮಾಡುವುದರಲ್ಲಿ ಯೋಚಿಸುವ ಅಗತ್ಯವಿಲ್ಲ. ಮಿತ್ರರೊಂದಿಗೆ ಕಾಲಹರಣ ಮಾಡಬೇಡಿ. 
ದೋಷ ಪರಿಹಾರ : ನಿಮ್ಮ ಕುಲದೇವರಿಗೆ ನಮಸ್ಕಾರ ಹಾಕಿ.  

ಮೀನ: ಇಂದು ನಿಮ್ಮ ಗುರುಪೀಠಕ್ಕೆ ಹೋಗಿಬಂದರೆ ನಿಮ್ಮ ಕಾರ್ಯ ನೆರವೇರುತ್ತದೆ. ಮುಖ್ಯವಾಗಿ ಉಪನ್ಯಾಸಕ ವೃತ್ತಿಯವರು ಗುರು ದರ್ಶನ ಮಾಡಿ. ಸ್ವಲ್ಪ ಧನಾಗಮನವಿದೆ. ಖುಷಿಯಾಗಿರಿ. 
ದೋಷ ಪರಿಹಾರ: ಗುರು ಚರಿತ್ರೆ ಪಾರಾಯಣ ಮಾಡಿದರೆ ಅತ್ಯಂತ ಫಲದಾಯಕ.

- ಗೀತಾಸುತ.

Follow Us:
Download App:
  • android
  • ios