ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಜನ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಪೂಜೆ, ಹೋಮಗಳನ್ನು ಮಾಡುವವರೂ ಇದ್ದಾರೆ. ಆದರೆ, ಮನೆಯ ಯಜಮಾನರು ಪ್ರತಿದಿನ ಒಂದು ಸರಳ ಕೆಲಸ ಮಾಡುವುದರಿಂದ ಅವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ.
ಭಾರತೀಯ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಹಿರಿಯರ ಪಾದಗಳನ್ನು ಮುಟ್ಟುತ್ತಾರೆ. ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ. ಶಾಸ್ತ್ರಗಳ ಪ್ರಕಾರ, ಹಿರಿಯರ ಪಾದಗಳನ್ನು ಮುಟ್ಟುವುದರಿಂದ ನಮ್ಮ ಪುಣ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಆ ಹಿರಿಯರ ಆಶೀರ್ವಾದ ನಮಗೆ ದೊರೆಯುತ್ತದೆ ಎಂದು ಭಾವಿಸಲಾಗುತ್ತದೆ. ಅವರ ಆಶೀರ್ವಾದದಿಂದ ನಮ್ಮ ದುರಾದೃಷ್ಟ ದೂರವಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ನಂಬುತ್ತಾರೆ.
ಅಷ್ಟೇ ಅಲ್ಲ, ಮದುವೆಯ ನಂತರ ಹೆಂಡತಿ ತಪ್ಪದೇ ಗಂಡನ ಪಾದಗಳನ್ನು ಮುಟ್ಟಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮದುವೆಯ ಸಮಯದಲ್ಲಿ ಮಾತ್ರವಲ್ಲ, ಮನೆಯಲ್ಲಿ ಯಾವುದೇ ಪೂಜೆ, ವ್ರತ ಏನೇ ಮಾಡಿದರೂ ಗಂಡನ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಆದರೆ, ಗಂಡ ಹೆಂಡತಿಯ ಪಾದಗಳನ್ನು ಮುಟ್ಟಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲಿಯವರೆಗೆ ಮನೆಯ ಹಿರಿಯರು ಗಂಡನ ಪಾದಗಳನ್ನು ಹೆಂಡತಿ ಮುಟ್ಟಬೇಕು, ಆಶೀರ್ವಾದ ಪಡೆಯಬೇಕು ಎಂದು ಹೇಳಿದ್ದಾರೆ. ಆದರೆ ಹೆಂಡತಿಯ ಪಾದಗಳನ್ನು ಗಂಡ ಮುಟ್ಟಬೇಕು ಎಂದು ಹೇಳಿಲ್ಲ. ಆದರೆ, ಹಾಗೆ ಆಕೆಯ ಪಾದಗಳನ್ನು ಮುಟ್ಟುವುದು, ಪಾದಗಳಿಗೆ ಮಸಾಜ್ ಮಾಡುವುದು ಇತ್ಯಾದಿ ಮಾಡಿದರೆ ಏನಾಗುತ್ತದೆ?
ಲಾಭಗಳೇನು?
ಹೆಂಡತಿ ಗಂಡನ ಪಾದಗಳನ್ನು ಮುಟ್ಟಿ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಭಕ್ತಿ ಭಾವ ಮೂಡುತ್ತದೆ. ಇದು ಅಹಂಕಾರವನ್ನು ಕಡಿಮೆ ಮಾಡುತ್ತದೆ. ಗಂಡನ ಬಗ್ಗೆ ಹೆಂಡತಿಗೆ ಗೌರವವಿದ್ದರೆ, ಗಂಡನಿಗೆ ಹೆಂಡತಿಯ ಬಗ್ಗೆ ಜವಾಬ್ದಾರಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಗಂಡ ಕೂಡ ಹೆಂಡತಿಯ ಪಾದಗಳನ್ನು ಮುಟ್ಟಬೇಕು ಅಥವಾ ಮಸಾಜ್ ಮಾಡಬೇಕು. ಮನೆಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವ ಗಂಡನನ್ನು ಅನೇಕರು ಸೇವಕನಂತೆ ನೋಡುತ್ತಾರೆ. ಅವನು ಆಕೆಯ ಪಾದಗಳನ್ನು ಮುಟ್ಟಿದರೆ ನಗುವವರೇ ಹೆಚ್ಚು. ಆದರೆ ಅದರಿಂದಾಗುವ ಲಾಭಗಳು ತಿಳಿದರೆ ನೀವೂ ಇದನ್ನೇ ಮಾಡುತ್ತೀರಿ.
ಪುರುಷರ ಎಲ್ಲಾ ಆಸೆಗಳು ಈಡೇರುತ್ತವೆ
ಗಂಡ ತನ್ನ ಅಹಂಕಾರವನ್ನು ಬಿಟ್ಟು ಹೆಂಡತಿಯ ಪಾದಗಳನ್ನು ಮುಟ್ಟಿದರೆ ಇಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ಮಹಿಳೆಯನ್ನೂ ದೇವತೆಯಂತೆ ಪೂಜಿಸಲಾಗುತ್ತದೆ. ಕನ್ಯಾ ಪೂಜೆಯಲ್ಲಿ ಹೆಣ್ಣುಮಕ್ಕಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಗಳು, ಸೊಸೆ, ಅತ್ತೆ ಇರುವ ಮನೆ ಸಂತೋಷದಿಂದ ಇರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿರುವ ಮಹಿಳೆಯರನ್ನು ಗೌರವಿಸಿದರೆ ಪುರುಷರ ಎಲ್ಲಾ ಆಸೆಗಳು ಈಡೇರುತ್ತವೆ. ದೇವತೆಗಳು ಆ ಮನೆಯಲ್ಲಿ ನೆಲೆಸುತ್ತಾರೆ. ಆ ಮನೆಯಲ್ಲಿ ಲಕ್ಷ್ಮಿ ಇರುವುದರಿಂದ ಹಣದ ಕೊರತೆ ಇರುವುದಿಲ್ಲ.
ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ಬಯಸುವ ಪುರುಷರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಹೆಂಡತಿಯ ಪಾದಗಳನ್ನು ಮುಟ್ಟಬೇಕು. ಹಾಗೆ ಮಾಡಿದರೆ ಜೀವನದಲ್ಲಿ ಸುಖ-ಸಂತೋಷಗಳ ಜೊತೆಗೆ ಅಭಿವೃದ್ಧಿಯೂ ಆಗುತ್ತದೆ. ಹೆಂಡತಿಯನ್ನು ಲಕ್ಷ್ಮೀದೇವಿಯೊಂದಿಗೆ ಹೋಲಿಸಲಾಗುತ್ತದೆ. ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಗಂಡ ಈ ಒಂದು ಕೆಲಸ ಮಾಡಿದರೆ ಸಾಕು.
ಐಶ್ವರ್ಯ ಪ್ರಾಪ್ತಿ
ಹೆಂಡತಿಯ ಪಾದಗಳನ್ನು ಮುಟ್ಟುವುದು ಅಥವಾ ಮಸಾಜ್ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಪಾದಗಳು ಶನಿ ಗ್ರಹಕ್ಕೆ ಸಂಬಂಧಿಸಿದ್ದರೆ, ಕೈಗಳು ಶುಕ್ರ ಗ್ರಹಕ್ಕೆ ಸಂಬಂಧಿಸಿವೆ. ಈ ಎರಡೂ ಸ್ಪರ್ಶಿಸಿದಾಗ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ಗಂಡ ಹೆಂಡತಿಯ ಪಾದಗಳನ್ನು ಮಾತ್ರವಲ್ಲ, ಆಕೆಯ ಅಂಗೈಗಳನ್ನು ಸಹ ಮುಟ್ಟಬೇಕು. ಇದು ಅವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಧನಲಕ್ಷ್ಮಿ ಮಹಿಳೆಯರ ಅಂಗೈಯಲ್ಲಿ ನೆಲೆಸಿರುತ್ತಾಳೆ. ಒಬ್ಬ ವ್ಯಕ್ತಿ ಪ್ರತಿದಿನ ಲಕ್ಷ್ಮೀದೇವಿಯನ್ನು ಧ್ಯಾನಿಸುತ್ತಾ ಹೆಂಡತಿಯ ಅಂಗೈಯನ್ನು ಮುಟ್ಟಿದರೆ, ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ.
