LIVE NOW
Published : Sep 06, 2026, 06:28 AM ISTUpdated : Sep 06, 2026, 08:47 AM IST

State News Live: ಬಸ್‌ ದರ ಏರಿಕೆ ಮಾಡೋದಲ್ಲ, ಇರೋ ಬಸ್‌ ಸರಿ ಮಾಡಿ - ಮತ್ತೊಮ್ಮೆ ಟಾರ್ಚ್‌ ಬೆಳಕಲ್ಲಿ ಓಡಿದ ಸರ್ಕಾರಿ ಬಸ್‌

ಸಾರಾಂಶ

ಬೆಂಗಳೂರು (ಸೆ.6): ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಅವರು ಹಸಿರು ಶಾಲು ಹಾಕಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದಾರೆ. ಇದು ನಮ್ಮ ಪಾದಯಾತ್ರೆಗೆ ಸಿಕ್ಕ ದೊಡ್ಡ ಜಯ ಎಂದಿದ್ದಾರೆ. ಅಲ್ಲದೆ, ಬಿಜೆಪಿ ಹಮ್ಮಿಕೊಂಡಿರುವ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದೆ ಎಂದೂ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

08:47 AM (IST) Sep 06

ಬಸ್‌ ದರ ಏರಿಕೆ ಮಾಡೋದಲ್ಲ, ಇರೋ ಬಸ್‌ ಸರಿ ಮಾಡಿ - ಮತ್ತೊಮ್ಮೆ ಟಾರ್ಚ್‌ ಬೆಳಕಲ್ಲಿ ಓಡಿದ ಸರ್ಕಾರಿ ಬಸ್‌

ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನ ಹೆಡ್‌ಲೈಟ್‌ ಕೈಕೊಟ್ಟ ಪರಿಣಾಮ, ಚಾಲಕನು ಪ್ರಯಾಣಿಕರ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲೇ ಬಸ್ಸನ್ನು ಗುಡಗೇರಿ ಮತ್ತು ಅತ್ತಿಗೇರಿಗೆ ಸುರಕ್ಷಿತವಾಗಿ ತಲುಪಿಸಿದ್ದಾನೆ.

Read Full Story

08:30 AM (IST) Sep 06

ಕಲ್ಯಾಣನಗರದಲ್ಲಿ ರಸ್ತೆ ಬದಿಯ ದೊಡ್ಡ ಆಲದ ಮರಕ್ಕೆ ರಾತ್ರೋರಾತ್ರಿ ಕೊಡಲಿ

ಬೆಂಗಳೂರಿನ ಕಲ್ಯಾಣ ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ, ರಸ್ತೆ ಬದಿಯಲ್ಲಿದ್ದ ಮೂರು ದಶಕಗಳಷ್ಟು ಹಳೆಯದಾದ ಆಲದ ಮರವನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ.

Read Full Story

07:53 AM (IST) Sep 06

ರಂಗಭೂಮಿ ಬದಲಾಗುತ್ತಿದೆ, ಹೊಸ ಯೋಚನೆ ಜೊತೆ ಹಣವೂ ಹುಟ್ಟುತ್ತಿದೆ - ರಾಜೇಶ್‌ ನಟರಂಗ

ನಟ ರಾಜೇಶ್ ನಟರಂಗ ಅವರು ಸುಮಾರು 20 ವರ್ಷಗಳ ನಂತರ 'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ರಂಗಭೂಮಿಗೆ ಮರಳಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು, ನಿವೃತ್ತ ನ್ಯಾಯಾಂಗದ ಅಧಿಕಾರಿಗಳು ದಾರಿ ತಪ್ಪಿ ಬಂದವರೊಂದಿಗೆ ಆಡುವ ಒಂದು ಆಟವು ಹೇಗೆ ಗಂಭೀರ ತಿರುವು ಪಡೆಯುತ್ತದೆ ಎಂಬುದನ್ನು ವಿವರಿಸುತ್ತದೆ.
Read Full Story

06:32 AM (IST) Sep 06

ಹುಬ್ಬಳ್ಳಿ ಗಣೇಶೋತ್ಸವ: ಫ್ಲೈಓವರ್ ದಾಟಲಿವೆಯೇ ಬೃಹತ್ ಗಣಪತಿಗಳು? ಪರ‍್ಯಾಯ ಮಾರ್ಗ

ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್, ಗಣೇಶ ವಿಸರ್ಜನಾ ಮೆರವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸ್ಪಷ್ಟಪಡಿಸಿದ್ದಾರೆ. 18 ಅಡಿ ಎತ್ತರದವರೆಗಿನ ಗಣಪತಿಗಳು ಹಳೆಯ ಮಾರ್ಗದಲ್ಲೇ ಸಾಗಲಿದ್ದು, ಅದಕ್ಕಿಂತ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.

 

Read Full Story

06:32 AM (IST) Sep 06

ನಗರದ ಶೇ.30 ಪೌರಕಾರ್ಮಿಕರು ಕೆಲಸಕ್ಕೆ ಚಕ್ಕರ್‌, ಮೂರು ಬಾರಿ ನೋಟಿಸ್‌ ಬಳಿಕ ವಜಾ: ಕೃಷ್ಣ ಬೈರೇಗೌಡ

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಸಮರ್ಪಕವಾಗಿ ಕರ್ತವ್ಯಕ್ಕೆ ಹಾಜರಾಗದ ಪೌರ ಕಾರ್ಮಿಕರನ್ನು ವಜಾಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

 

Read Full Story

06:29 AM (IST) Sep 06

Dr ಹಾಗೂ Profಗೆ ಇದೀಗ Tr ಹೊಸ ಸೇರ್ಪಡೆ, ರಾಜ್ಯದ ಶಿಕ್ಷಕರಿಗೆ ಇನ್ನು Tr ವಿಶೇಷಣದ ಗೌರವ

ಕೂಡ್ಲಿಗಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯರಂತೆ ಶಿಕ್ಷಕರ ಹೆಸರಿನ ಮುಂದೆಯೂ 'Tr' (ಟೀಚರ್) ಎಂದು ಸೇರಿಸಿ ಗೌರವಿಸುವ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

 

Read Full Story

06:29 AM (IST) Sep 06

ಹೆಲಿಕಾಪ್ಟರಲ್ಲಿ ಬರ ವೀಕ್ಷಣೆ ಎಷ್ಟು ಸರಿ?: ವಿಜಯೇಂದ್ರ ಕಿಡಿ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿದ್ದಾರೆ. ತಮ್ಮ ಹೋರಾಟದಿಂದಾಗಿಯೇ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದಿದ್ದಾರೆ.

 

Read Full Story

06:29 AM (IST) Sep 06

ನೌಕರರಿಗೆ ಸಿಹಿ ಸುದ್ದಿ, ಶೀಘ್ರವೇ ರಾಜ್ಯ ಸರ್ಕಾರದಿಂದ ಒಪಿಎಸ್‌ ಜಾರಿ

ಶಿಕ್ಷಕರು ಮತ್ತು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ.

 

Read Full Story

More Trending News