LIVE NOW
Published : Sep 04, 2026, 06:37 AM ISTUpdated : Sep 04, 2026, 08:24 AM IST

State News Live: ಕೆಪಿಎಸ್ಸಿ - ಜ್ಞಾನೇಂದ್ರಗೆ ಕಚೇರಿಯಲ್ಲೇ ₹1 ಕೋಟಿ ಸಂದಾಯ?

ಸಾರಾಂಶ

ಬೆಂಗಳೂರು (ಸೆ.4): ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆಗೆ ಮೂರನೇ ದಿನವೂ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ರೈತರ 5 ಲಕ್ಷ ರೂಪಾಯಿವರೆಗಿನ ಸಾಲಮನ್ನಾ ಮಾಡುವಂತೆ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಿಗಿಪಟ್ಟು ಹಿಡಿದಿದ್ದಾರೆ. ರಾಜ್ಯದ 190 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಹೀಗಾಗಿ ರೈತರರಿಗೆ ವಿಶೇಷ ನೆರವು ಅಗತ್ಯವಾಗಿದೆ.ಕೃಷಿಕರ ಸಮಸ್ಯೆ ಚರ್ಚೆಗೆ ಅಧಿವೇಶನ ಕರೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

08:24 AM (IST) Sep 04

ಕೆಪಿಎಸ್ಸಿ - ಜ್ಞಾನೇಂದ್ರಗೆ ಕಚೇರಿಯಲ್ಲೇ ₹1 ಕೋಟಿ ಸಂದಾಯ?

ಪಶುವೈದ್ಯಾಧಿಕಾರಿಗಳ ಹುದ್ದೆ ಮಾರಾಟ ಸಂಬಂಧ ಕೆಪಿಎಸ್‌ಸಿ ಕಚೇರಿಯಲ್ಲೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರಿಗೆ ಒಂದು ಕೋಟಿ ರೂ. ಸಂದಾಯವಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಜ್ಞಾನೇಂದ್ರ ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿದೆ.

Read Full Story

08:09 AM (IST) Sep 04

ಜಂಕ್ಷನ್‌ ಬಳಿ 103 ಬಸ್‌ ಸ್ಟಾಪ್‌ ಸ್ಥಳಾಂತರ, ಶೀಘ್ರದಲ್ಲೇ ಬಿಎಂಟಿಸಿ-ಮೆಟ್ರೋ ಎರಡಕ್ಕೂ ಒಂದೇ ಕಾರ್ಡ್‌

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಯಲ್ಲಿ ನಗರದ 103 ಬಸ್ ನಿಲುಗಡೆ ತಾಣಗಳ ಸ್ಥಳಾಂತರ, ಬಿಎಂಟಿಸಿ-ಮೆಟ್ರೋಗೆ ಏಕೀಕೃತ ಮೊಬಿಲಿಟಿ ಕಾರ್ಡ್ ಜಾರಿ ಮತ್ತು ಅಗ್ನಿಶಾಮಕ ಇಲಾಖೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ಕುರಿತು ಚರ್ಚಿಸಲಾಗಿದೆ.

Read Full Story

08:07 AM (IST) Sep 04

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಸಿಎಂಗಳಿಗೆ ಆಹ್ವಾನ, ಏರ್‌ ಶೋ ಸೇರಿದಂತೆ ವಿವಿಧ ಕಾರ್ಯಕ್ರಮ!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ 2026ರ ಮೈಸೂರು ದಸರಾ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು, ಏರ್‌ ಶೋ ಆಯೋಜಿಸಲು ಹಾಗೂ ಡ್ರೋನ್ ಶೋ, ವಿಂಟೇಜ್ ಕಾರ್ ರ್ಯಾಲಿಯಂತಹ ವಿನೂತನ ಕಾರ್ಯಕ್ರಮಗಳನ್ನು ಸೇರಿಸಲು ನಿರ್ಧರಿಸಲಾಗಿದೆ.
Read Full Story

07:52 AM (IST) Sep 04

ನಾಳೆ ಯಶವಂತಪುರ-ಮಂಗಳೂರು ಸೆಂಟ್ರಲ್‌ ನಡುವೆ ವಂದೇ ಭಾರತ್‌ ಪರೀಕ್ಷಾರ್ಥ ಸಂಚಾರ

ಮಂಗಳೂರು ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷಾರ್ಥ ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ. ಯಶವಂತಪುರ ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ವರೆಗೆ ನಡೆಯಲಿರುವ ಈ ಪ್ರಾಯೋಗಿಕ ಓಟದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

Read Full Story

07:38 AM (IST) Sep 04

ವಿಪ್ರೋ-ಕವಾಸಕಿ ₹1000 ಕೋಟಿ ಹೂಡಿಕೆ, ಬೆಂಗಳೂರಿನ ಹಾರೋಹಳ್ಳಿಯಲ್ಲಿ ಹೈಡ್ರಾಲಿಕ್‌ ಪಂಪ್‌ ಉತ್ಪಾದನಾ ಘಟಕ ಸ್ಥಾಪನೆ

ವಿಪ್ರೋ-ಕವಾಸಕಿ ಪ್ರಿಸಿಷನ್‌ ಮಷಿನರಿ ಸಂಸ್ಥೆಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಾವಿರ ಕೋಟಿ ರು. ಹೂಡಿಕೆಯೊಂದಿಗೆ ಹೊಸ ಹೈಡ್ರಾಲಿಕ್‌ ಪಂಪ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಈ ಯೋಜನೆಯಿಂದಾಗಿ ಸುಮಾರು 1200 ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ.

Read Full Story

07:28 AM (IST) Sep 04

ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್‌ ಬೆನ್ನಲ್ಲೆ ಪ್ರತಿ ದೂರು ದಾಖಲು, ಮನೀಷ್‌ ಮೇಲೆ ಸಮೃದ್‌ನಿಂದ ಎಫ್‌ಐಆರ್

ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಮತ್ತು ಆತನ ಸ್ನೇಹಿತರ ಮೇಲೆ ಕಾಲೇಜು ಕ್ಯಾಂಪಸ್ ಗಲಾಟೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ, ಸಾಮ್ರಾಟ್ ಸ್ನೇಹಿತ ಸಮೃದ್ ಕೂಡ ಮನೀಷ್ ಗೌಡ ಮತ್ತು ಆತನ ಸ್ನೇಹಿತರ ವಿರುದ್ಧ ಪ್ರತಿ ದೂರು ದಾಖಲಿಸಲಾಗಿದೆ.

Read Full Story

07:18 AM (IST) Sep 04

ಕೆಆರ್‌ ಮಾರ್ಕೆಟ್‌ಗೆ ಬರುವ ಗೂಡ್ಸ್‌ ವಾಹನಕ್ಕೆ ಮಾತ್ರ ಟೋಲ್‌ಗೇಟ್‌ ಶುಲ್ಕ, RTC ತೋರಿಸುವ ರೈತರಿಗೆ ಫ್ರೀ!

ಕೆ.ಆರ್. ಮಾರುಕಟ್ಟೆಯಲ್ಲಿ ಆದಾಯ ಸೋರಿಕೆ ತಡೆಯಲು ಪಾಲಿಕೆಯು ಹೊಸ ಟೋಲ್ ಗೇಟ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಮೂಲಕ ಸರಕು ಸಾಗಣೆ ವಾಹನಗಳಿಗೆ ಲೋಡ್ ಆಧಾರದ ಮೇಲೆ ನಿಗದಿತ ಶುಲ್ಕ ವಿಧಿಸಲಾಗುತ್ತಿದ್ದು, ಆರ್‌ಟಿಸಿ ದಾಖಲೆ ಹಾಜರುಪಡಿಸುವ ರೈತರಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

Read Full Story

06:53 AM (IST) Sep 04

ಬಿಜೆಪಿ ‘ಬಳ್ಳಾರಿ ಚಲೋ’ಗೆ 3ನೇ ದಿನವೂ ಭರ್ಜರಿ ಸ್ಪಂದನೆ, ರೈತರ 5 ಲಕ್ಷ ರು.ವರೆಗಿನ ಸಾಲಮನ್ನಾಗೆ ಬಿವೈವಿ ಪಟ್ಟು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 'ಬಳ್ಳಾರಿ ಚಲೋ' ಪಾದಯಾತ್ರೆ ನಡೆದಿದ್ದು, ಬರಪೀಡಿತ ರೈತರ ₹5 ಲಕ್ಷದವರೆಗಿನ ಬೆಳೆ ಸಾಲ ಮನ್ನಾಕ್ಕೆ ಆಗ್ರಹಿಸಲಾಗಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಲಾಯಿತು.

Read Full Story

More Trending News