Published : Aug 08, 2025, 07:18 AM ISTUpdated : Aug 08, 2025, 11:20 PM IST

Karnataka News Live: ಕಲಬುರಗಿಯ ಬಯಲು ಸೀಮೆಯಲ್ಲಿ ಚಿರತೆ ಪ್ರತ್ಯಕ್ಷ, ಹೊಲದಲ್ಲಿ ಕಟ್ಟಿದ್ದ ಎತ್ತಿನ ಮೇಲೆ ದಾಳಿ, ಗ್ರಾಮಸ್ಥರಲ್ಲಿ ಆತಂಕ

ಸಾರಾಂಶ

ಬೆಂಗಳೂರು: ಬಿಎಂಟಿಸಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ ನೌಕರರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ನಗದು ಬಹುಮಾನ ನೀಡಲು ಮುಂದಾಗಿದೆ. 313 ನೌಕರರಿಗೆ 500 ರೂಪಾಯಿ ನಗದು ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲು ಬಿಎಂಟಿಸಿ ಮುಂದಾಗಿದೆ. ಇಷ್ಟು ಕಡಿಮೆ ಮೊತ್ತ ಬಹುಮಾನ ನೀಡುತ್ತಿರೋದಕ್ಕೆ ನಿಗಮದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯುಧ ಪೂಜೆ ಸಂದರ್ಭದಲ್ಲಿಯೂ ನಿಗಮ ಅತ್ಯಂತ ಕಡಿಮೆ ಹಣವನ್ನು ನೀಡುತ್ತದೆ. ಬಿಎಂಟಿಸಿ ನೀಡುತ್ತಿರೋ ನಗದು ಬಹುಮಾನದಲ್ಲಿ ಸದ್ಯ 2 ಕೆಜಿ ಸೇಬು ಹಣ್ಣು ಸಹ ಬರಲ್ಲ. ಸದ್ಯ ಮಾರುಕಟ್ಟೆಯಲ್ಲಿ 1 ಕೆಜಿ ಸೇಬು ಬೆಲೆ 280 ರೂ.ಗಳಿಂದ 300 ರೂ. ಆಗಿದೆ

 

11:20 PM (IST) Aug 08

ಕಲಬುರಗಿಯ ಬಯಲು ಸೀಮೆಯಲ್ಲಿ ಚಿರತೆ ಪ್ರತ್ಯಕ್ಷ, ಹೊಲದಲ್ಲಿ ಕಟ್ಟಿದ್ದ ಎತ್ತಿನ ಮೇಲೆ ದಾಳಿ, ಗ್ರಾಮಸ್ಥರಲ್ಲಿ ಆತಂಕ

ಕಲಬುರಗಿ ಹೊರವಲಯದ ಪಾಣೆಗಾಂವ್ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎತ್ತಿನ ಮೇಲೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಚಿರತೆ ಭೀತಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
Read Full Story

10:57 PM (IST) Aug 08

ಹಾಸನ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ

ಹಾಸನ ಜಿಲ್ಲೆಗೆ ಕೃಷ್ಣಭೈರೇಗೌಡರನ್ನು ನೂತನ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಕೆ.ಎನ್.ರಾಜಣ್ಣ ಅವರ ಬದಲಿಗೆ ಕೃಷ್ಣಭೈರೇಗೌಡರು ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಬದಲಾವಣೆಯನ್ನು ಜೆಡಿಎಸ್ ಶಾಸಕ ಹೆಚ್‌ಪಿ ಸ್ವರೂಪ್ ಸ್ವಾಗತಿಸಿದ್ದಾರೆ.
Read Full Story

10:56 PM (IST) Aug 08

ಸತತ 2 ಗಂಟೆ ಸುರಿದ ಭಾರಿ ಮಳೆಗೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ನುಗ್ಗಿದ ನೀರು

ಸವದತ್ತಿ ತಾಲೂಕಿನಾದ್ಯಂತ ಭಾರೀ‌ ಮಳೆ ಹಿನ್ನೆಲೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಹಳ್ಳದ ನೀರು ನುಗ್ಗಿದೆ. ಗರ್ಭಗುಡಿಯಲ್ಲಿ 3 ಅಡಿಯಷ್ಟು ನೀರು ತುಂಬಿಕೊಂಡಿದೆ.

Read Full Story

10:08 PM (IST) Aug 08

ಸಿಲಿಂಡರ್ ಬದಲಿಸುವಾಗ ಸೋರಿಕೆಯಾದ ಅನಿಲ, ಹೊತ್ತಿಕೊಂಡ ಬೆಂಕಿಯಿಂದ ಮನೆ ಭಸ್ಮ

ಸಿಲಿಂಡರ್ ಬದಲಿಸಿ ಸ್ಟವ್ ಹಚ್ಚಿದ್ದಾರೆ. ದಿಢೀರ್ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಕೆಲವೇ ಕ್ಷಣದಲ್ಲಿ ಬೆಂಕಿ ಮನೆಗೆ ಆವರಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ.

Read Full Story

09:33 PM (IST) Aug 08

ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಡುವಾಗ ಮಗನ ನೆನಪಾಯಿತು, ಭಾವುಕರಾದ ಶಿಖರ್ ಧವನ್

WCL ಟೂರ್ನಿ ಬಿಡುವಿನ ವೇಳೆ ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಟವಾಡುವಾಗ ನನ್ನ ಮಗನ ನೆನಪಾಯಿು. ಮಗ ನನ್ನ ಜೊತೆಗಿದ್ದರೆ ಆ ಖುಷಿಯೇ ಬೇರೆ ಇತ್ತು. ಆದರೆ..ಶಿಖರ್ ಧವನ್ ತನ್ನ ಮಗನ ನೆನೆದು ಭಾವುಕರಾಗಿದ್ದಾರೆ. ಮಗನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.

Read Full Story

09:21 PM (IST) Aug 08

ವಿದ್ಯಾರ್ಥಿಗೆ ಥಳಿಸಿದ ಪ್ರಕರಣ - ನಿನ್ನೆ ಕ್ಷಮೆಯಾಚಿಸಿದ್ದ ಶಿಕ್ಷಕಿ ಇಂದು ಅಮಾನತು!

ಕಾರವಾರದ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಶಿಕ್ಷಕಿ ಭಾರತಿ ನಾಯ್ಕ್‌ರನ್ನ ಅಮಾನತು ಮಾಡಲಾಗಿದೆ. ಬರೆಯದಿರುವುದು ಮತ್ತು ಕಲಿತದ್ದನ್ನು ಮನನ ಮಾಡದಿರುವ ಕಾರಣಕ್ಕೆ ಶಿಕ್ಷಕಿ ವಿದ್ಯಾರ್ಥಿಯನ್ನು ಹೊಡೆದಿದ್ದರು.
Read Full Story

08:54 PM (IST) Aug 08

ಬೆಂಗಳೂರು-ಪುಣೆ ಕೇವಲ 5 ಗಂಟೆ ಪ್ರಯಾಣ, ಹೊಸ ಎಕ್ಸ್‌ಪ್ರೆಸ್ ವೇ ಘೋಷಿಸಿದ ನಿತಿನ್ ಗಡ್ಕರಿ

ಬೆಂಗಳೂರು ಪುಣೆ ರಸ್ತೆ ಸಂಚಾರ ಇನ್ನು ಕೇವಲ 5 ಗಂಟೆ ಮಾತ್ರ. ಕೇಂದ್ರ ಸಚಿವ ನಿತಿಕ್ ಗಡ್ಕರಿ ಹೊಸ ಎಕ್ಸ್‌ಪ್ರೆಸ್‌ವೇ ಘೋಷಿಸಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅತೀ ವೇಗದ ರಸ್ತೆ ದಾಖಲೆಗೆ ಭಾರತ ಸಜ್ಜಾಗಿದೆ.

Read Full Story

08:29 PM (IST) Aug 08

ಮಂಗಳೂರು, ಗೊಮಟೇಶ್ವರ, ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸೆಂಟ್ರಲ್‌ ನಿಲ್ದಾಣಕ್ಕೆ ವಿಸ್ತರಣೆಗೆ ಮನವಿ

ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲುಗಳನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವಂತೆ ರೈಲ್ವೆ ಸಂಘಟನೆಗಳು ಒತ್ತಾಯಿಸಿವೆ. ಹಲವು ರೈಲುಗಳ ವಿಸ್ತರಣೆ, ಹೊಸ ರೈಲುಗಳ ಆರಂಭ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಲಾಗಿದೆ.  

Read Full Story

08:26 PM (IST) Aug 08

ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ... ವಿಷ್ಣುವರ್ಧನ್​ ಸಮಾಧಿ ನೆಲಸಮಕ್ಕೆ ವಿಜಯ ರಾಘವೇಂದ್ರ ಹೇಳಿದ್ದೇನು?

ವಿಷ್ಣುವರ್ಧನ್​ ಸಮಾಧಿ ನೆಲಸಮದ ವಿಚಾರವಾಗಿ ಮಾತನಾಡಿರುವ ನಟ ವಿಜಯ ರಾಘವೇಂದ್ರ ಅವರು ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೇಗೆ? ಅವ್ರ ಕೆಲಸ ಅವ್ರಿಗೆ ಮಾಡಲು ಬಿಟ್ಟುಬಿಡಿ ಎಂದು ಹೇಳಿದ್ದೇಕೆ?

 

Read Full Story

08:26 PM (IST) Aug 08

ಧರ್ಮಸ್ಥಳ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಎಸ್ಐಟಿಗೆ ಪೊಲೀಸ್ ಠಾಣೆ ಪವರ್ ನೀಡಿದ ಸರ್ಕಾರ

ಧರ್ಮಸ್ಥಳದಲ್ಲಿನ ಶವ ಹೂತಿಟ್ಟ ಪ್ರಕರಣದ ತನಿಖೆ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇದೀಗ ರಾಜ್ಯ ಸರ್ಕಾರ ಪೊಲೀಸ್ ಠಾಣೆ ಪವರ್ ನೀಡಿದೆ.

Read Full Story

08:12 PM (IST) Aug 08

ದೇಶದಲ್ಲೇ ಅತ್ಯಂತ ಸುರಕ್ಷಿತ ನಗರ ಪಟ್ಟ ಗಳಿಸಿದ ಮಂಗಳೂರು!

ಜಾಗತಿಕ ಡೇಟಾ ಸಂಸ್ಥೆ ನಂಬಿಯೋ ಬಿಡುಗಡೆ ಮಾಡಿದ ಸುರಕ್ಷತಾ ಸೂಚ್ಯಂಕದಲ್ಲಿ ಮಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಜಾಗತಿಕವಾಗಿ 49ನೇ ಸ್ಥಾನದೊಂದಿಗೆ, ಮಂಗಳೂರಿನ 74.2 ಸುರಕ್ಷತಾ ಸೂಚ್ಯಂಕವು 'ಬ್ಯಾಕ್ ಟು ಊರಿಗೆ' ಪ್ರೋತ್ಸಾಹಿಸುತ್ತಿದೆ.
Read Full Story

08:08 PM (IST) Aug 08

ಹರ್ಷೇಂದ್ರಗೆ ಹಿನ್ನಡೆ, ಧರ್ಮಸ್ಥಳ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಕೊಲೆ ಪ್ರಕರಣದ ವರದಿಗೆ ನಿರ್ಬಂಧ ಹೇರಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ ಅವರ ಅರ್ಜಿಯನ್ನು ತಿರಸ್ಕರಿಸಿದೆ.

Read Full Story

07:46 PM (IST) Aug 08

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ, ಪ್ರವೇಶ ಶುಲ್ಕ ಯಾರಿಗೆ ಎಷ್ಟು?

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ. ಚೆನ್ನಮ್ಮ ಮತ್ತು ರಾಯಣ್ಣನವರ ಶೌರ್ಯ-ತ್ಯಾಗಗಳ ಸ್ಮರಣೆ.
Read Full Story

07:32 PM (IST) Aug 08

ಲೈಂಗಿಕ ಸಮ್ಮತಿ ವಯಸ್ಸು ಇಳಿಕೆ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

ಲೈಂಗಿಕ ಸಮ್ಮತಿ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತನ್ನ ಅಭಿಪ್ರಾಯ ಹೇಳಿದೆ. ಇಷ್ಟೇ ಅಲ್ಲ ಕೆಲ ಆತಂಕ ವ್ಯಕ್ತಪಡಿಸಿದೆ.

Read Full Story

07:17 PM (IST) Aug 08

ತುಮಕೂರಿನಲ್ಲಿ 200 ಅಡಿಕೆ ಗಿಡಗಳ ಕಡಿದ ಕಿಡಿಗೇಡಿಗಳು, ಮತ್ತೊಂದೆಡೆ ಕೆರೆ ಒಡೆದು ನೀರು ಪೋಲು

ತುಮಕೂರು ಜಿಲ್ಲೆಯಲ್ಲಿ ರೈತರೊಬ್ಬರ 200 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ಹಾಕಿದ್ದಾರೆ. ಚೆನ್ನತಿಮ್ಮನಪಾಳ್ಯ ಗ್ರಾಮದಲ್ಲಿ ಕೆರೆ ಏರಿ ಒಡೆದು ನೀರು ಪೋಲಾಗಿ ರೈತರಿಗೆ ಬೆಳೆ ಹಾನಿಯಾಗಿದೆ. ದುರಸ್ತಿ ಕಾಮಗಾರಿಯಲ್ಲಿನ ಲೋಪದೋಷಗಳಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Read Full Story

07:17 PM (IST) Aug 08

ಸ್ಟಾರ್‌ ನಟರೆಲ್ಲ ಬದುಕಿದ್ದೂ ಸತ್ತಂಗೆ, ವಿಷ್ಣು ಸರ್‌ ಬದುಕಿದ್ದಾಗಲೂ ನೆಮದ್ದಿ ಇಲ್ಲ, ಸತ್ತಾಗ್ಲೂ ನೆಮ್ಮದಿ ಇಲ್ಲ - ಅಭಿಮಾನಿಗಳ ದುಃಖ

ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮಗೊಳಿಸಿರುವುದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾಲಣ್ಣ ಕುಟುಂಬದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸ್ಟಾರ್ ನಟರು ಈ ಬಗ್ಗೆ ಧ್ವನಿ ಎತ್ತಬೇಕೆಂದು ಒತ್ತಾಯಿಸಿದ್ದಾರೆ. ಸ್ಮಾರಕಕ್ಕೆ ಪುನಃ ಜಾಗ ನೀಡುವಂತೆ ಮನವಿ ಮಾಡಿದ್ದಾರೆ.
Read Full Story

06:52 PM (IST) Aug 08

ಉತ್ತರಾಖಂಡ ಮೇಘಸ್ಫೋಟ ದುರಂತ - 35 ವರ್ಷದ ಬಳಿಕ ಒಂದಾಗಿದ್ದ 24 ಸ್ನೇಹಿತರು ಗುಂಪು ನಾಪತ್ತೆ

ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟದಿಂದಾಗಿ ಮಹಾರಾಷ್ಟ್ರದ ಪ್ರವಾಸಿಗರ ತಂಡವೊಂದು ಸಿಲುಕಿಕೊಂಡಿದೆ. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಈ ತಂಡದ ಸದಸ್ಯರ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Read Full Story

06:27 PM (IST) Aug 08

ಮೇರುನಟ ವಿಷ್ಣುವರ್ಧನ್‌ ಸಮಾಧಿ ನೆಲಸಮ, ಬಾಲಣ್ಣ ಅವರ ಪುತ್ರಿ ಗೀತಾ ಬಾಲಿ ಹೇಳಿದ್ದೇನು?

ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಗೀತಾ ಬಾಲಿ ಅವರು ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಆದರೆ, ವೀರಕಪುತ್ರ ಶ್ರೀನಿವಾಸ್ ಅವರು ಗೀತಾ ಬಾಲಿ ಅವರನ್ನೇ ದೂಷಿಸಿದ್ದಾರೆ. ಈ ವಿವಾದಕ್ಕೆ ಕಾರಣವೇನು?
Read Full Story

06:26 PM (IST) Aug 08

ಅಮೆರಿಕ ಅಧ್ಯಕ್ಷರ ತಿಂಗಳ ಸ್ಯಾಲರಿ ಎಷ್ಟು? ಖರ್ಚು ವೆಚ್ಚದ ರೂಪದಲ್ಲೂ ಸಿಗುತ್ತಿದೆ ಲಕ್ಷ ಲಕ್ಷ

ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸ್ಯಾಲರಿಯನ್ನು ವೈಟ್ ಹೌಸ್ ನವೀಕರಣಕ್ಕೆ ನೀಡಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷರ ತಿಂಗಳ ವೇತನ ಚರ್ಚೆಯಾಗುತ್ತಿದೆ. ಎಷ್ಟಿದೆ ಅಮೆರಿಕ ಅಧ್ಯಕ್ಷರ ವೇತನ ಗೊತ್ತಾ?

Read Full Story

06:14 PM (IST) Aug 08

ಮತದಾರರ ಪಟ್ಟಿ ಹಗರಣ - ಅಗತ್ಯವಿದ್ದರೆ ವರುಣಾ, ಚಾಮರಾಜಪೇಟೆಯಲ್ಲೂ ತನಿಖೆಯಾಗಲಿ! ಡಿ.ಕೆ. ಶಿವಕುಮಾರ್

ರಾಜ್ಯದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ. ಚುನಾವಣಾ ಆಯೋಗವು ಅಗತ್ಯವಿದ್ದರೆ ವರುಣಾ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿಯೂ ತನಿಖೆ ನಡೆಸಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದಾರೆ.
Read Full Story

06:04 PM (IST) Aug 08

ಹಾಸನದ ಯುವತಿ ಪ್ರೀತಿಸಿ ಕೈಕೊಟ್ಟ ಬಳ್ಳಾರಿ ಯುವಕ, ಮದುವೆಗೆ ಜಾತಿ ಅಡ್ಡಿ ಹುಡುಗನ ಮನೆಮುಂದೆ ಹೆಣ್ಮಗು ಧರಣಿ

ಐದು ವರ್ಷಗಳ ಪ್ರೀತಿಗೆ ಮೋಸ ಹೋದ ಯುವತಿ, ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ. ಜಾತಿ ಅಡ್ಡಿಯಿಂದ ಮದುವೆ ನಿರಾಕರಿಸಿದ ಯುವಕ, ಕುಟುಂಬ ಸಮೇತ ಪರಾರಿ.
Read Full Story

05:55 PM (IST) Aug 08

ಮೇರು ನಟನ ಸಮಾಧಿಗೆ 4 ಅಡಿ ಜಾಗ ಕೊಡೋಕೆ ನಮ್ಮಿಂದ ಆಗ್ಲಿಲ್ಲ, ವೀರಕಪುತ್ರ ಶ್ರೀನಿವಾಸ್‌ ಬೇಸರ

ಡಾ.ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ವಿಷ್ಣು ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಕುಟುಂಬದವರು ಮತ್ತು ನ್ಯಾಯಾಲಯದ ತೀರ್ಪಿನಿಂದಾಗಿ ಸಮಾಧಿ ತೆರವು ಅನಿವಾರ್ಯವಾಯಿತು ಎಂದು ಸಮಿತಿ ಹೇಳಿದೆ. 

Read Full Story

05:34 PM (IST) Aug 08

'ಅಫಡವಿಟ್‌ಗೆ ಸಹಿ ಮಾಡಿ ಎಂದ್ರೆ ಏನರ್ಥ?..' ಚುನಾವಣಾ ಆಯೋಗದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ, ಬಿಜೆಪಿಗೆ ಹಾಕಿದ ಸವಾಲೇನು?

ಮತಗಳ್ಳತನದ ಆರೋಪದ ಬಗ್ಗೆ ಪ್ರಿಯಾಂಕ್ ಖರ್ಗೆ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯೋಗವು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Read Full Story

05:13 PM (IST) Aug 08

'ಇಂದು ವಿಷ್ಣುವರ್ಧನ್‌ ಅವ್ರ 2ನೇ ಸಾವಾಗಿದೆ, ನೊಂದು ನೊಂದು, ಸಾಕು ಅಂತ ಹೋದ್ರುʼ - ನಿರ್ದೇಶಕ ರವಿ ಶ್ರೀವತ್ಸ

Dr Vishnuvardhan Memorial: ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ಡಾ ವಿಷ್ಣುವರ್ಧನ್‌ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ನಟ ಬಾಲಣ್ಣನ ಕುಟುಂಬಸ್ಥರಿಗೆ ಸೇರಿದ ಈ ಅಭಿಮಾನ್‌ ಸ್ಟುಡಿಯೋದಲ್ಲಿ ಈಗ ವಿಷ್ಣು ಸಮಾಧಿ ಇಲ್ಲ. 

Read Full Story

05:07 PM (IST) Aug 08

2025ರ ಆದಾಯ ತೆರಿಗೆ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ, ಮುಂದೇನು?

ಕೇಂದ್ರ ಸರ್ಕಾರ ಮುಂಡಿಸಿದ ಆದಾಯ ತೆರಿಗೆ ಕಾಯ್ದೆ 2025ನ್ನು ಹಿಂಪಡೆಯಲಾಗಿದೆ. ಫೆಬ್ರವರಿ ತಿಂಗಳಲ್ಲಿ ಬಿಲ್ ಮಂಡಿಸಲಾಗಿತ್ತು. ದಿಢೀರ್ ಬಿಲ್ ವಾಪಾಸ್ ಪಡೆಯಲಾಗಿದೆ. ಮುಂದೇನು?

Read Full Story

04:59 PM (IST) Aug 08

ರಾಹುಲ್ ಗಾಂಧಿ ಚುನಾವಣಾ ಆಯೋಗ ಭೇಟಿ ರದ್ದು - ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಲು ಹಿಂದೇಟು?

ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವನ್ನು ಭೇಟಿಯಾಗಲು ನಿರ್ಧರಿಸಿದ್ದ ರಾಹುಲ್ ಗಾಂಧಿ, ಇಂದು ತೆರಳದಿರಲು ನಿರ್ಧರಿಸಿದ್ದಾರೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭೇಟಿ ರದ್ದಾಗಿದೆ ಎನ್ನಲಾಗಿದ್ದು, ಕಾನೂನು ಇಕ್ಕಟ್ಟಿನ ಭಯವೂ ಕಾರಣ ಎನ್ನಲಾಗಿದೆ.
Read Full Story

04:54 PM (IST) Aug 08

ಚಿತ್ರದುರ್ಗ - ವರಮಹಾಲಕ್ಷ್ಮಿ ಹಬ್ಬದಂದು 23 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ!

ಚಿತ್ರದುರ್ಗದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿದ್ದ ವೇಳೆ ಮನೆಯೊಂದರಲ್ಲಿ 23 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಕಳವು. ಮನೆಯವರು ಊರಿನಿಂದ ಹೊರಗೆ ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಹಬ್ಬದ ದಿನ ಮನೆಗೆ ಬಂದ ಕುಟುಂಬಸ್ಥರಿಗೆ ಕಳ್ಳತನದ ಬಗ್ಗೆ ತಿಳಿದು ಆಘಾತ.
Read Full Story

04:35 PM (IST) Aug 08

ಕರ್ನಾಟಕದಲ್ಲಿ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಿಂದ ಹಿಂದೆ ಸರಿಯುತ್ತಿರುವ ಬೃಹತ್‌ ಕಂಪನಿಗಳು!

ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉದ್ಯೋಗಾವಕಾಶಗಳು ಕುಸಿದಿವೆ, ವಿಶೇಷವಾಗಿ ಟೈಯರ್-2 ಮತ್ತು ಟೈಯರ್-3 ಸಂಸ್ಥೆಗಳಲ್ಲಿ. ದೊಡ್ಡ ಕಂಪನಿಗಳ ನೇಮಕಾತಿ ಕಡಿಮೆಯಾಗಿದೆ ಮತ್ತು ಕಂಪ್ಯೂಟರ್ ಸೈನ್ಸ್‌ನಂತಹ ಕ್ಷೇತ್ರಗಳಲ್ಲಿಯೂ ಸಹ ಉದ್ಯೋಗಗಳು ಕಡಿಮೆ ಇವೆ.

Read Full Story

04:31 PM (IST) Aug 08

ಪಟ್ಟಾಪಟ್ಟಿ ಚೆಡ್ಡಿಯಲ್ಲಿ ಶಿವರಾಜ್‌ಕುಮಾರ್; ಹೋವರ್ ಬೋರ್ಡ್ ಮೇಲೆ ಜಾಲಿ ರೈಡ್!

ಅನಾರೋಗ್ಯದಿಂದ ಚೇತರಿಸಿಕೊಂಡ ನಟ ಶಿವರಾಜ್‌ಕುಮಾರ್, ಹೋವರ್‌ಬೋರ್ಡ್‌ನಲ್ಲಿ ಸವಾರಿ ಮಾಡುವ ಮೂಲಕ ಹೊಸ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಜೊತೆಗೆ ಆರೋಗ್ಯಕ್ಕೂ ಒತ್ತು ನೀಡುತ್ತಿರುವ ಶಿವಣ್ಣ, ಈ ವಯಸ್ಸಿನಲ್ಲಿಯೂ ಯುವಕರಂತೆ ಚಟುವಟಿಕೆಯಿಂದ ಇರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
Read Full Story

04:26 PM (IST) Aug 08

'ಸಂವಿಧಾನದ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ಹೇಳುವುದೆಲ್ಲವೂ ಸತ್ಯ..' ಸಹಿ ಮಾಡಿ ಪ್ರಮಾಣಪತ್ರ ಸಲ್ಲಿಸಿ ಎಂದ ಚುನಾವಣೆ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

2024ರ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಮಹಾದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Read Full Story

04:18 PM (IST) Aug 08

ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂ ಕಳೆದುಕೊಂಡ ವೃದ್ಧ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲು

ನಿಮ್ಗೆ ಅನಾಮಿಕರಿಂದ ಅಥವಾ ಗೆಳೆಯರ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬರುತ್ತಿದೆಯಾ, ಹತ್ತು ಬಾರಿ ಯೋಚಿಸಿ, ಪರಿಶೀಲಿಸಿ ಆಕ್ಸೆಪ್ಟ್ ಮಾಡಿ. ಇಲ್ಲೊಬ್ಬ ವೃದ್ಧ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

Read Full Story

04:02 PM (IST) Aug 08

Coming Soon ಎನ್ನುತ್ತಲೇ ವೀಕ್ಷಕರ ತಲೆಯಲ್ಲಿ ಹುಳುಬಿಟ್ಟ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿಯರು!

Coming Soon ಎನ್ನುತ್ತಲೇ ವೀಕ್ಷಕರ ತಲೆಯಲ್ಲಿ ಹುಳುಬಿಟ್ಟ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ ಪೂರ್ಣಿ ಮತ್ತು ದೀಪಿಕಾ ಅರ್ಥಾತ್​ ಲಾವಣ್ಯ ಭಾರದ್ವಾಜ್​ ಮತ್ತು ದರ್ಶಿನಿ ಡೆಲ್ಟಾ. ಏನಿದು?

 

Read Full Story

04:02 PM (IST) Aug 08

ನಾಚಿಕೆಗೇಡಿನ ಸರ್ಕಾರ, ದುರಾಸೆಯ ನಟ ಬಾಲಣ್ಣನ ಕುಟುಂಬದಿಂದ‌ ಡಾ ವಿಷ್ಣುವರ್ಧನ್ ಸಮಾಧಿ ನೆಲಸಮವಾಯ್ತ - ವೀರಕಪುತ್ರ ಶ್ರೀನಿವಾಸ್

Dr Vishnuvardhan Memorial: ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ನಟ ವಿಷ್ಣುವರ್ಧನ್‌ ಅವರಿಗೆ ಕನ್ನಡ ನಾಡಿನಲ್ಲಿ ಆರು-ಮೂರು ಅಡಿ ಜಾಗ ಕೊಡಲು ಸರ್ಕಾರ ವಿಫಲವಾಗಿದೆ. ಬಾಲಣ್ಣ ಅವರ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮವಾಗಿದೆ. 

Read Full Story

03:59 PM (IST) Aug 08

ಬೆಂಗಳೂರು ಮೂಲದ ಡಂಜೋದಲ್ಲಿ ಹೂಡಿಕೆ ಮಾಡಿ 2100 ಕೋಟಿ ಕಳೆದುಕೊಂಡ ಮುಖೇಶ್‌ ಅಂಬಾನಿ!

ರಿಲಯನ್ಸ್ ಇಂಡಸ್ಟ್ರೀಸ್ ಡಂಜೊದಲ್ಲಿ ಮಾಡಿದ್ದ $200 ಮಿಲಿಯನ್ ಹೂಡಿಕೆಯನ್ನು ರೈಟ್‌ ಆಫ್ ಮಾಡಲು ನಿರ್ಧರಿಸಿದೆ. ಡಂಜೊದ ಆಕ್ರಮಣಕಾರಿ ವಿಸ್ತರಣೆ, ಹೆಚ್ಚಿನ ವೆಚ್ಚಗಳು ಮತ್ತು ಮಾರುಕಟ್ಟೆಯ ಒತ್ತಡಗಳು ಕಂಪನಿಯ ಕುಸಿತಕ್ಕೆ ಕಾರಣವಾಯಿತು.
Read Full Story

03:24 PM (IST) Aug 08

ಧರ್ಮಸ್ಥಳ ಕ್ಷೇತ್ರದ ಘನತೆಗೆ ಚ್ಯುತಿ ತರುವ ಸಂಚು ನಡೆಯುತ್ತಿದೆ ; ವಿಹಿಂಪದಿಂದ ಗಂಭೀರ ಆರೋಪ

ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಶ್ರೀಕ್ಷೇತ್ರದ ಘನತೆಗೆ ಚ್ಯುತಿ ತರುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದೆ. ಅನ್ಯಮತೀಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ವಿಹಿಂಪ ಹೇಳಿದೆ.
Read Full Story

03:22 PM (IST) Aug 08

ಕಪಿಲ್ ಶರ್ಮಾ ಕೆಫೆ ಮೇಲೆ ದಾಳಿಗೆ ಸಲ್ಮಾನ್ ಖಾನ್ ಕಾರಣ ಎಂದ ಬಿಷ್ಣೋಯ್ ಗ್ಯಾಂಗ್, ನೆಕ್ಸ್ಟ್ ಮುಂಬೈ

ಕಪಿಲ್ ಶರ್ಮಾ ಕೆಫೆ ಮೇಲೆ 25 ಸುತ್ತಿನ ಗುಂಡು ಹಾರಿಸಿ ದಾಳಿ ಮಾಡಲಾಗಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಬಿಷ್ಣೋಯ್ ಗ್ಯಾಂಗ್ ಮುಂದಿನ ದಾಳಿ ಮುಂಬೈನಲ್ಲೇ ನಡೆಯಲಿದೆ ಎಂದು ಎಚ್ಚರಿಸಿದೆ. ಕಾರಣ ಸಲ್ಮಾನ್ ಖಾನ್ ಎಂದಿದೆ.

Read Full Story

03:18 PM (IST) Aug 08

Dr Vishnuvardhan Memorial - ಬಾಲಣ್ಣನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ನಟ ಡಾ ವಿಷ್ಣುವರ್ಧನ್‌ ಸಮಾಧಿ ನೆಲಸಮ!

ನಟ ಬಾಲಣ್ಣ ಅಲಿಯಾಸ್‌ ಬಾಲಕೃಷ್ಣ ಅವರು ಬೆಂಗಳೂರಿನ ಹೊರವಲಯದಲ್ಲಿ ಅಭಿಮಾನ್‌ ಸ್ಟುಡಿಯೋ ಆರಂಭಿಸಿದ್ದರು. ಇದೇ ಅಭಿಮಾನ್‌ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್‌ ಅವರ ಸಮಾಧಿಯಿದೆ. ಈ ಸಮಾಧಿ ವಿಚಾರವಾಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿ ಆಗಿತ್ತು. ಈಗ ಸಮಾಧಿಯೇ ಇಲ್ಲವಂತಾಗಿದೆ.

 

Read Full Story

03:04 PM (IST) Aug 08

ಬೆಂಗಳೂರಿನ ಚಲಘಟ್ಟದಲ್ಲಿ ರಾತ್ರಿ ಕೇಳುತ್ತೆ ವಿಚಿತ್ರ ಧ್ವನಿ! 1990ರಂದು ನಡೆದಿತ್ತು 90 ಸಾವಿನ ದುರಂತ

ಬೆಂಗಳೂರಿನ ಚಲ್ಲಘಟ್ಟದಲ್ಲಿ ರಾತ್ರಿ ವೇಳೆ ವಿಚಿತ್ರ ಧ್ವನಿಗಳು ಕೇಳಿಬರುತ್ತವೆ. ಅಧಿಮನೋವಿಜ್ಞಾನಿ ಡಾ. ರಾಹುಲ್ ಕುಮಾರ್ ಈ ಪ್ರದೇಶದಲ್ಲಿ ಅತೀಂದ್ರಿಯ ಶಕ್ತಿಯಿದೆ ಎಂದು ಹೇಳುತ್ತಾರೆ.

Read Full Story

03:03 PM (IST) Aug 08

ಧರ್ಮಸ್ಥಳ ಕೇಸಲ್ಲಿ ಭಾರೀ ಟ್ವಿಸ್ಟ್ - ಬೋಳಿಯಾರ್ ಕಾಡಲ್ಲಿ ಶಾಲಾ ಬಾಲಕಿ ಶವ ತೋರಿಸಿದನಾ ಅನಾಮಿಕ!

ಧರ್ಮಸ್ಥಳ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದ್ದು, ಅನಾಮಿಕ ದೂರುದಾರ ಬೋಳಿಯಾರ್‌ನಲ್ಲಿ ಶಾಲಾ ಬಾಲಕಿಯ ಶವ ಹೂತಿರುವ ಸ್ಥಳವನ್ನು ಗುರುತಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯು ಪ್ರಕರಣಕ್ಕೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

Read Full Story

02:35 PM (IST) Aug 08

ಸೌಜನ್ಯಾ ಬಗ್ಗೆ 3 ತನಿಖೆ ಮುಗಿದಿದೆ; ಅವರಮ್ಮ ಬೇರೆ ತನಿಖೆಗೆ ಹೇಳಿದರೆ ನಾವೇ ಅರ್ಜಿ ಹಾಕ್ತೇವೆ; ಪ್ರತಾಪ್ ಸಿಂಹ

ಸೌಜನ್ಯ ಪ್ರಕರಣದ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ಧರ್ಮಾಧಿಕಾರಿಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಸೌಜನ್ಯಾ ಕೇಸಿನಲ್ಲಿ ಈಗಾಗಲೇ 3 ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ. ಅವರ ಅಮ್ಮ ಬೇರಾವುದೇ ತನಿಖೆ ಬೇಕಿದ್ದರೆ ಹೇಳಲಿ, ನಾವೇ ಅರ್ಜಿ ಹಾಕುತ್ತೇವೆ ಎಂದರು.

Read Full Story

More Trending News