MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Dr Vishnuvardhan Memorial: ಬಾಲಣ್ಣನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ನಟ ಡಾ ವಿಷ್ಣುವರ್ಧನ್‌ ಸಮಾಧಿ ನೆಲಸಮ!

Dr Vishnuvardhan Memorial: ಬಾಲಣ್ಣನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ನಟ ಡಾ ವಿಷ್ಣುವರ್ಧನ್‌ ಸಮಾಧಿ ನೆಲಸಮ!

ನಟ ಬಾಲಣ್ಣ ಅಲಿಯಾಸ್‌ ಬಾಲಕೃಷ್ಣ ಅವರು ಬೆಂಗಳೂರಿನ ಹೊರವಲಯದಲ್ಲಿ ಅಭಿಮಾನ್‌ ಸ್ಟುಡಿಯೋ ಆರಂಭಿಸಿದ್ದರು. ಇದೇ ಅಭಿಮಾನ್‌ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್‌ ಅವರ ಸಮಾಧಿಯಿದೆ. ಈ ಸಮಾಧಿ ವಿಚಾರವಾಗಿ ಸಾಕಷ್ಟು ಸಮಸ್ಯೆಗಳು ಸೃಷ್ಟಿ ಆಗಿತ್ತು. ಈಗ ಸಮಾಧಿಯೇ ಇಲ್ಲವಂತಾಗಿದೆ. 

2 Min read
Padmashree Bhat
Published : Aug 08 2025, 03:18 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಬಾಲಣ್ಣ ಅವರ ಮಗಳು ಗೀತಾ ಬಾಲಿ ಅವರು ಈ ಬಗ್ಗೆ ಎರಡು ವರ್ಷದ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ  ಸಮಾಧಿ ಗೊಂದಲದ ಬಗ್ಗೆ ಮಾತನಾಡಿದ್ದರು. “2004ರಿಂದಲೇ ಈ ಜಾಗದ ಸಮಸ್ಯೆಯಿದೆ. 2009ರಲ್ಲಿ ವಿಷ್ಣುವರ್ಧನ್‌ ನಿಧನರಾದರು. ವಿಷ್ಣುವರ್ಧನ್‌ ಸಮಾಧಿಗೆ ಎರಡು ಎಕರೆ ಬಿಟ್ಟುಕೊಡಿ ಎಂದು ಬಿಶುಕುಮಾರ್ ಎನ್ನುವವರು‌ ಹೇಳಿದ್ದರು. ಆಗ ಇದ್ದ ನ್ಯಾಯಾಧೀಶರು ಪಾರ್ಟ್‌ ಪಾರ್ಟ್‌ ಆಗಿ ಬಿಟ್ಟುಕೊಡೋಕೆ ಆಗೋದಿಲ್ಲ, ಕಾಂಪ್ರಮೈಸ್‌ ಮಾಡ್ಕೊಳ್ಳಿ ಎಂದರು. ಒಟ್ಟೂ 20 ಎಕರೆಯಲ್ಲಿ 10 ಎಕರೆ ಅವ್ಯವಹಾರ ಆಗಿದೆ. ಬೇರೆ ರೀತಿಯಲ್ಲಿ ಈ ಜಾಗ ಮಾರಾಟ ಆಗಿದೆ, ಇದು ನನಗೆ 2004ರಲ್ಲಿ ಗಮನಕ್ಕೆ ಬಂದಿತು. ನಾನು ಕೇಸ್‌ ಹಿಂಪಡೆಯೋದಿಲ್ಲ. ಎರಡು ಎಕರೆ ಜಮೀನು ಕೊಡೋದಕ್ಕೆ ನನ್ನದೇನೂ ಸಮಸ್ಯೆ ಇಲ್ಲ. ಈ ಕೇಸ್‌ ಬಗೆಹರಿದಮೇಲೆ ನಿಮ್ಮಿಷ್ಟ ಎಂದು ಕೋರ್ಟ್‌ ಕೂಡ ಹೇಳಿತ್ತಂತೆ” ಎಂದು ಗೀತಾ ಬಾಲಿ ಅವರು ಹೇಳಿದ್ದರು.

27
Image Credit : Asianet News

ಡಾ ವಿಷ್ಣುವರ್ಧನ್‌ ( Dr Vishnuvardhan ) ಅಭಿಮಾನಿಗಳು ಕಳೆದ ಏಳು ವರ್ಷಾದಿಂದ ಸಮಾಧಿ ವಿಚಾರದಲ್ಲಿ ಹೋರಾಟ ಮಾಡುತಿದ್ರು. ಮೈಸೂರಿನಲ್ಲಿ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಜಾಗ ಕೊಟ್ಟಿದೆ. ಹೀಗಾಗಿ ಬಾಲಣ್ಣ ಸ್ಟುಡಿಯೋ ಜಾಗದ ಬಗ್ಗೆ ಸರ್ಕಾರ ತಲೆ ಕೇಡಿಸಿಕೊಂಡಿಲ್ಲ. ಮೈಸೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ಮಾಡಲಾಗಿದೆ. ಅಲ್ಲಿ ಬಹಳ ಅದ್ದೂರಿಯಾಗಿ ಸ್ಮಾರಕ ಕಟ್ಟಲಾಗಿದೆ.

Related Articles

Related image1
Dr Vishnuvardhan: ಕೀರ್ತಿಯನ್ನು ಡಾ ವಿಷ್ಣುವರ್ಧನ್‌, ಭಾರತಿ ದತ್ತು ತಗೊಂಡಿದ್ದು ಹೇಗೆ? ರಿಯಲ್‌ ತಂದೆ-ತಾಯಿ ಯಾರು?
Related image2
ಡಾ ವಿಷ್ಣುವರ್ಧನ್‌ ಸಿನಿಮಾದಲ್ಲಿ ನಟಿಸಿದ್ದ ದೇವಯಾನಿ ಮಗಳೀಗ ʼಸರಿಗಮಪʼ ಶೋ ಸ್ಪರ್ಧಿ!
37
Image Credit : Asianet News

ಸಮಾಧಿ ನೆಲಸಮ ಮಾಡಿರುವ ಬಗ್ಗೆ ಇನ್ನೂ ಡಾ ವಿಷ್ಣುವರ್ಧನ್‌ ಅವರ ಪತ್ನಿ ಭಾರತಿ, ಅಳಿಯ ಅನಿರುದ್ಧ, ಮಗಳು ಕೀರ್ತಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. 

47
Image Credit : Asianet News

ಅಂದಹಾಗೆ ಅಭಿಮಾನ್‌ ಸ್ಟುಡಿಯೋ ಬಳಿ ಪೊಲೀಸರು ಇರುವ ದೃಶ್ಯಗಳು ಕೂಡ ಕಂಡಿವೆ. ಪೊಲೀಸರ ಮುಂದೆಯೇ ರಾತ್ರೋರಾತ್ರಿ ಸಮಾಧಿಯನ್ನು ನೆಲಸಮ ಮಾಡಲಾಗಿದೆ ಎನ್ನಲಾಗಿದೆ. 

57
Image Credit : Asianet News

ಇಷ್ಟುವರ್ಷಗಳಿಂದ ವಿಷ್ಣುವರ್ಧನ್‌ ಜನ್ಮದಿನ ಹಾಗೂ ನಿಧನರಾದ ದಿನ ಅಭಿಮಾನಿಗಳು ಸಮಾಧಿಗೆ ಬಳಿ ಸಾಹಸ ಸಿಂಹನನ್ನು ನೆನಪಿಸಿಕೊಳ್ತಿದ್ದರು. ಇದು ಬಾಲಣ್ಣ ಕುಟುಂಬದ ಜಾಗ. ಬಾಲಣ್ಣ ಕುಟುಂಬ ಒಪ್ಪಿದ್ರೆ ಸಮಾಧಿ ಜಾಗ ಕೊಡಬಹುದಿತ್ತು ಎಂದು ಕೋರ್ಟ್‌ ಹೇಳಿತ್ತು. ಆದರೆ ಬಾಲಣ್ಣ ಕುಟುಂಬ ಒಪ್ಪಲಿಲ್ಲ ಎಂದು ಹೇಳಿದೆ. ಹೀಗಾಗಿ ಕೋರ್ಟ್‌ನಿಂದ ಸಮಾಧಿ ತೆರವಿಗೆ ಆದೇಶ ಇತ್ತು.

67
Image Credit : Asianet News

ಕಳೆದ ಏಳು ವರ್ಷಗಳಿಂದ ಸಮಾಧಿ ಜಾಗ ಕೊಡಿ ಎಂದು ಅಭಿಮಾನಿಗಳು ಹೋರಾಟ ಮಾಡುತ್ತಿದ್ದರು. ಕೊನೆಗೂ ಈ ಹೋರಾಟಕ್ಕೆ ಫಲ ಇಲ್ಲದಂತಾಗಿದೆ. 

77
Image Credit : Asianet News

ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ನಟ ವಿಷ್ಣುವರ್ಧನ್‌ ಸಮಾಧಿಗೆ ಇಷ್ಟೆಲ್ಲ ಸಮಸ್ಯೆ ಆಗಿದೆ ಎನ್ನೋದು ನಿಜಕ್ಕೂ ಬೇಸರದ ವಿಷಯ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಡಾ. ವಿಷ್ಣುವರ್ಧನ್
ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved