Published : Aug 07, 2025, 07:13 AM ISTUpdated : Aug 07, 2025, 11:32 PM IST

Karnataka News Live: ಗೇಮಿಂಗ್ ಯುಗದಲ್ಲಿ ಬಂತು ಫ್ಯೂಚರ್ ರೆಡಿ ಇಂಟಲಿಜೆನ್ಸ್ ಒಪ್ಪೋ ಕೆ13 ಟರ್ಬೋ ಸೀರಿಸ್ ಫೋನ್

ಸಾರಾಂಶ

ಬೆಂಗಳೂರು: ಹೈಕೋರ್ಟ್‌ ನಿರ್ದೇಶನ ಧಿಕ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸುಮಾರು 30 ಸಾವಿರ ಸಾರಿಗೆ ನೌಕರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಂಗಳವಾರ ಕೆಲಸಕ್ಕೆ ಗೈರಾಗಿದ್ದ ಸಾರಿಗೆ ನೌಕರರ ಒಂದು ದಿನದ ವೇತನ ಕಡಿತದ ಜತೆಗೆ, ಗೈರಿಗೆ ಕಾರಣ ಕೇಳಿ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ 1.14 ಲಕ್ಷ ನೌಕರರ ಪೈಕಿ 30 ಸಾವಿರಕ್ಕೂ ಹೆಚ್ಚಿನ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಆ ಹಿನ್ನೆಲೆಯಲ್ಲಿ ಗೈರಾಗಿದ್ದ ಎಲ್ಲ ನೌಕರರಿಗೂ ನೋಟಿಸ್‌ ನೀಡಿ, ಕರ್ತವ್ಯಕ್ಕೆ ಹಾಜರಾಗದಿರಲು ಕಾರಣ ತಿಳಿಸುವಂತೆ ಸೂಚಿಸಲಾಗಿದೆ. ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯೂಟ್ಯೂಬರ್‌ಗಳಿಗೆ ಭಕ್ತರಿಂದ ಧರ್ಮದೇಟು. ಸ್ಥಳೀಯ ಆಸ್ಪತ್ರೆಗೆ ದಾಖಲು. ಧರ್ಮಸ್ಥಳದ ಕುರಿತು ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ.

11:32 PM (IST) Aug 07

ಗೇಮಿಂಗ್ ಯುಗದಲ್ಲಿ ಬಂತು ಫ್ಯೂಚರ್ ರೆಡಿ ಇಂಟಲಿಜೆನ್ಸ್ ಒಪ್ಪೋ ಕೆ13 ಟರ್ಬೋ ಸೀರಿಸ್ ಫೋನ್

ಗೇಮರ್‌ಗಳು ಮತ್ತು ಪವರ್ ಯೂಸರ್‌ಗಳಿಗಾಗಿ ನಿರ್ಮಿತವಾದ ಒಪ್ಪೋ ಕೆ13 ಟರ್ಬೋ ಸೀರಿಸ್ ಫೋನ್ ಭಾರಿ ಸದ್ದು ಮಾಡುತ್ತಿದೆ. ಪರ್ಫಾರ್ಮೆನ್ಸ್ ಮತ್ತು ಫ್ಯೂಟರ್ ರೆಡಿ ಇಂಟಲಿಜೆನ್ಸ್ ಫೋನ್ ವಿಶೇಷತೆ ಏನು?

Read Full Story

11:17 PM (IST) Aug 07

PHOTO - ಬೋಸ್ಟನ್‌ನಲ್ಲಿ 50ನೇ NCSL ಶೃಂಗಸಭೆ - ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಕರ್ನಾಟಕದ 11 ವಿಧಾನ ಪರಿಷತ್ ಸದಸ್ಯರು ಭಾಗಿ

ಅಮೆರಿಕ ಬೋಸ್ಟನ್ ನಗರದಲ್ಲಿ ಆಯೋಜಿಸಿರುವ 50ನೇ ನ್ಯಾಷನಲ್ ಕಾನ್ಫರೆನ್‌ಸ್‌ ಆಫ್ ಸ್ಟೇಟ್ ಲೆಜಿಸ್ಲೇಚರ್ ಶೃಂಗ ಸಭೆಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ರಾಜ್ಯದ 11 ಮಂದಿ ವಿಧಾನ ಪರಿಷತ್ ಸದಸ್ಯ ತಂಡವು ಭಾಗವಹಿಸಿದರು, ಕಾರ್ಯಕ್ರಮದ ಫೋಟೋಗಳು ಇಲ್ಲಿವೆ

Read Full Story

11:08 PM (IST) Aug 07

ಧರ್ಮಸ್ಥಳ ಹೋರಾಟಗಾರರಿಗೂ SDPI ಏನು ಸಂಬಂಧ? ಯೂಟ್ಯೂಬರ್ಸ್ ಭೇಟಿ ಪ್ರಶ್ನಿಸಿದ ಸುನಿಲ್ ಕುಮಾರ್

ಧರ್ಮಸ್ಥಳದಲ್ಲಿ ಗಾಯಗೊಂಡ ಯೂಟ್ಯೂಬರ್‌ಗಳನ್ನು ಎಸ್‌ಡಿಪಿಐ ಮುಖಂಡರು ಭೇಟಿ ಮಾಡಿದ್ದಾರೆ. ಈ ಭೇಟಿಗೂ ಸೌಜನ್ಯ ಹೋರಾಟಗಾರರಿಗೂ ಇರುವ ಸಂಬಂಧವೇನು? ಎಂದು ಬಿಜೆಪಿ ನಾಯಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

Read Full Story

11:03 PM (IST) Aug 07

ಕೇರ್​ಟೇಕರ್​ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ವೃದ್ಧ - ಯಾವ ಜನ್ಮದ ಋಣಾನುಬಂಧವೊ?

ರಕ್ತ ಸಂಬಂಧಕ್ಕಿಂತಲೂ ಮಿಗಿಲಾದದ್ದು ಋಣದ ಸಂಬಂಧ. ಇದೀಗ ಟಾಟಾ ಇಂಡಸ್ಟ್ರೀಸ್‌ನ ಮಾಜಿ ಉದ್ಯೋಗಿಯೊಬ್ಬರು ಕೇರ್​ಟೇಕರ್​ ಮೊಮ್ಮಗಳಿಗೆ ಆಸ್ತಿ ಬರೆದಿಟ್ಟು ಕೊನೆಯುಸಿರೆಳೆದ ಘಟನೆ ನಡೆದಿದೆ. ಏನಿದು ವಿಷ್ಯ?

 

Read Full Story

10:50 PM (IST) Aug 07

ಧರ್ಮಸ್ಥಳ ಪ್ರಕರಣ - ಪ್ರಚೋದನಕಾರಿ ಹೇಳಿಕೆ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್, ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌!

ಸೌಜನ್ಯ ಕೊಲೆ ಪ್ರಕರಣ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದಿದ್ದು, ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಕಡೆಯವರ ಮೇಲೆ ಆರೋಪ-ಪ್ರತ್ಯಾರೋಪಗಳ ನಡುವೆ ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್ ಎಫ್‌ಐಆರ್ ದಾಖಲು.

Read Full Story

10:17 PM (IST) Aug 07

ಟ್ರಂಪ್ ತೆರಿಗೆಯಿಂದ ಮಹತ್ವದ ಬೆಳವಣಿಗೆ, ದೋವಲ್ ಪುಟಿನ್ ಭೇಟಿ ಬೆನ್ನಲ್ಲೇ ಭಾರತಕ್ಕೆ ಚೀನಾ ಬೆಂಬಲ

ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ಡಬಲ್ ತೆರಿಗೆ ವಿಧಿಸಿದ್ದಾರೆ. ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಅಜಿತ್ ದೋವಲ್  ವ್ಲಾದಿಮಿರ್ ಪುಟಿನ್ ಭೇಟಿ ಮಾಡಿದ್ದಾರೆ. ಇತ್ತ ಚೀನಾ ಕೂಡ ಭಾರತಕ್ಕೆ ಬೆಂಬಲ ನೀಡಿದೆ. ಇದೀಗ ಅಮೆರಿಕ ಹೊರಗಿಟ್ಟು ವ್ಯಾಪಾರ ವ್ಯಹಹಾರ ಹಾಗೂ ಕರೆನ್ಸಿಗೆ ಬ್ರಿಕ್ಸ್ ಮುಂದಾಗಿದೆಯಾ?

Read Full Story

10:03 PM (IST) Aug 07

ಸರಿಯಾಗಿ ಬರೆಯಲಿಲ್ಲ ಎಂಬ ಕಾರಣಕ್ಕೆ ಬಾಲಕನ ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ!

ಉತ್ತರ ಕನ್ನಡ ಜಿಲ್ಲೆಯ ಕಾಳಗನಕೊಪ್ಪದಲ್ಲಿ ಶಿಕ್ಷಕಿಯೊಬ್ಬರು ಎರಡನೇ ತರಗತಿ ಬಾಲಕನಿಗೆ ಹೊಡೆದಿದ್ದಾರೆ. ಬಾಲಕನ ಬೆನ್ನಿನ ಮೇಲೆ ಬಾಸುಂಡೆಗಳು ಮೂಡಿವೆ. ಈ ಘಟನೆಗೆ ಸಂಬಂಧಿಸಿದಂತೆ ಬಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read Full Story

09:39 PM (IST) Aug 07

ಬಸ್ ಹತ್ತಲು ಮುಗಿಬಿದ್ದ ಪ್ರಯಾಣಿಕರು; ನೂಕುನುಗ್ಗಲಿನಲ್ಲಿ ಕಂಗಾಲಾಗಿ ಹೊರಗೆ ನಿಂತ ಕಂಡಕ್ಟರ್!

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದಾಗಿ ರಾಜ್ಯದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹಾವೇರಿಯಲ್ಲಿ ನಡೆದ ಘಟನೆಯೊಂದರಲ್ಲಿ, ಬಸ್‌ ಕಂಡಕ್ಟರ್‌ಗೂ ಒಳಗೆ ಹತ್ತಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಸಾರಿಗೆ ಇಲಾಖೆಯ ಮೇಲೆ ಒತ್ತಡ ಹೆಚ್ಚಿಸಿದೆ.
Read Full Story

09:31 PM (IST) Aug 07

ಸರ್ಕಾರ ₹13 ಲಕ್ಷ ಖರ್ಚು ಮಾಡಿ ಮೆಸ್ಸಿ ಆಹ್ವಾನಿಸಿದ್ರೂ ಕೇರಳಕ್ಕೆ ಬರುತ್ತಿಲ್ಲ ಲಿಯೋನಲ್ ಮೆಸ್ಸಿ

ಕೇರಳ ಸರ್ಕಾರ ಬರೋಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿ ಫುಟ್ಬಾಲಿಗ ಲಿಯೋನಲ್ ಮೆಸ್ಸಿಯನ್ನು ಆಹ್ವಾನಿಸಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಮೆಸ್ಸಿ ಮಾತ್ರ ಕೇರಳಕ್ಕೆ ಭೇಟಿ ನೀಡುತ್ತಿಲ್ಲ.

Read Full Story

09:12 PM (IST) Aug 07

ಆರೋಗ್ಯ ಇಲಾಖೆಯಲ್ಲಿ ಪಾರದರ್ಶಕ ವರ್ಗಾವಣೆ - ೮ ವರ್ಷಗಳ ಬಳಿಕ ಮಹತ್ವದ ಬದಲಾವಣೆ!

ಆರೋಗ್ಯ ಇಲಾಖೆಯಲ್ಲಿ ೮ ವರ್ಷಗಳ ಬಳಿಕ ಎಲ್ಲಾ ವೃಂದದ ಸಿಬ್ಬಂದಿ ವರ್ಗಾವಣೆಯನ್ನು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸಲಾಗಿದೆ. ತಾಲೂಕು ಆಸ್ಪತ್ರೆಗಳ ಬಲವರ್ಧನೆಗೆ ಆದ್ಯತೆ ನೀಡಲಾಗಿದ್ದು, ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.
Read Full Story

08:50 PM (IST) Aug 07

ನಾಳೆ ವರಮಹಾಲಕ್ಷ್ಮಿ ಹಬ್ಬ; ಮಹಿಳೆಯರೇ ಅನಾಹುತ ತಪ್ಪಿಸಲು ಪೊಲೀಸರು ನೀಡಿರುವ ಈ ಸಲಹೆಗಳು ಪಾಲಿಸಿ

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಚಿನ್ನಾಭರಣಗಳನ್ನು ಧರಿಸುವಾಗ ಮತ್ತು ಹೊರಗೆ ಓಡಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ಅಪರಿಚಿತರನ್ನು ಮನೆಗೆ ಬಿಡದಂತೆ ಮತ್ತು ದೇವರನ್ನು ಕಿಟಕಿಯ ಪಕ್ಕದಲ್ಲಿ ಕೂರಿಸದಂತೆಯೂ ಸಲಹೆ ನೀಡಿದ್ದಾರೆ. 

Read Full Story

08:43 PM (IST) Aug 07

ನೀ ಎಂತಹಾ ಮೂರ್ಖ ಅದಿಯೋ, ಗಿರೀಶ್ ಮಟ್ಟೆನ್ನವರ್ ವಿರುದ್ಧ ಜೈನಮುನಿ ಆಕ್ರೋಶ

ಸೌಜನ್ಯ ಪ್ರಕರಣದಲ್ಲಿ ಗಿರೀಶ್ ಮಟ್ಟೆನ್ನವರ್ ನೀಡಿರುವ ಹೇಳಿಕೆಗೆ ಜೈನಮುನಿ ಕುಲರತ್ನ ಮಹಾರಾಜರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈನ ಧರ್ಮದ ಬಗ್ಗೆ ಅಧ್ಯಯನವಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ಮಟ್ಟೆನ್ನವರ್ ವಿರುದ್ಧ ಕಿಡಿಕಾರಿದ್ದಾರೆ. 

Read Full Story

08:25 PM (IST) Aug 07

ಜೋಗ್ ಫಾಲ್ಸ್‌ನ ಅಪಾಯಕಾರಿ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ; ಬೆಂಗಳೂರು ಮೂಲದ YouTuber ವಿರುದ್ಧ ಎಫ್‌ಐಆರ್!

ಜೋಗ್ ಫಾಲ್ಸ್‌ನ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ಯೂಟ್ಯೂಬರ್ ಮತ್ತು ಸ್ಥಳೀಯ ಗೈಡ್ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. \

Read Full Story

08:25 PM (IST) Aug 07

Breaking ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ 2ನೇ ಬಾರಿಗೆ ಗುಂಡಿನ ದಾಳಿ

ಕಪಿಲ್ ಶರ್ಮಾ ಮಾಲೀಕತ್ವದ ಕ್ಯಾಪ್ಸ್ ಕಫೆ ರೆಸ್ಟೋರೆಂಟ್ ಮೇಲೆ ದುರ್ಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ನಡೆದ 2ನೇ ಗುಂಡಿನ ದಾಳಿ ಇದಾಗಿದೆ.

Read Full Story

07:57 PM (IST) Aug 07

ಧರ್ಮಸ್ಥಳದಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆ ಪ್ರಕರಣ, ಓರ್ವ ಆರೋಪಿ ಬಂಧನ

ಧರ್ಮಸ್ಥಳದಲ್ಲಿ  ಉದ್ವಿಘ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಯೂಟ್ಯೂಬರ್ ವರದಿಗಾರಿಕೆ ಹಾಗೂ ನಡೆ ಕುರಿತು ಧರ್ಮಸ್ಥಳದ ಭಕ್ತ ವೃಂದ, ಸ್ಥಳೀಯರು ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ನೂಕಾಟ ತಳ್ಳಾಟ ನಡೆದಿದ್ದು, ಹಲ್ಲೆಯೂ ವರದಿಯಾಗಿದೆ. ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಓರ್ವ ಆರೋಪಿ ಬಂಧನವಾಗಿದೆ.

Read Full Story

07:54 PM (IST) Aug 07

'ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕೊಳ್ಳಿ' ಪತ್ನಿಗೆ ಬೆದರಿಕೆ, ಡಿಜಿಐಜಿಪಿಗೆ ಬಿಗ್ ಬಾಸ್ ಸ್ಪರ್ಧಿ ರಜತ್ ದೂರು

ಧರ್ಮಸ್ಥಳದಲ್ಲಿ ನಡೆದ ಗಲಾಟೆಯ ಬಳಿಕ ಬಿಗ್ ಬಾಸ್ ಸ್ಪರ್ಧಿ ರಜತ್ ಮತ್ತು ಅವರ ಪತ್ನಿ ಅಕ್ಷತಾ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಬೆದರಿಕೆ ಸಂದೇಶಗಳ ಆಧಾರದ ಮೇಲೆ ರಜತ್ ದಂಪತಿ ದೂರು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

07:46 PM (IST) Aug 07

ಹಾಸನ ಉಸ್ತುವಾರಿ ಬದಲಾವಣೆ ಬೆನ್ನಲ್ಲೇ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಎಂದ ಸಚಿವ ರಾಜಣ್ಣ!

ಹಾಸನ ಉಸ್ತುವಾರಿ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಸಚಿವ ರಾಜಣ್ಣ ಮನವಿ ಮಾಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ ಅವರು, ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
Read Full Story

07:13 PM (IST) Aug 07

ನಟಿ ಶ್ವೇತಾ ಅಶ್ಲೀಲಾ ವಿಡಿಯೋ ಪ್ರಕರಣ, ಎಫ್ಐಆರ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನಟಿ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

 

Read Full Story

06:55 PM (IST) Aug 07

ಮತಗಳ್ಳತನದ ಕರಾಳ ಮುಖ, ಪಿಎಂ ಮೋದಿ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ನಕಲಿ ಮತದಾರರು, ನಕಲಿ ವಿಳಾಸಗಳು, ಒಂದೇ ವಿಳಾಸದಲ್ಲಿ ನೂರಾರು ಮತದಾರರು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.
Read Full Story

06:52 PM (IST) Aug 07

2025ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಆ.14ರಂದು ಯುವನಿಧಿ ಯೋಜನೆಗೆ ನೋಂದಣಿ

ಆಗಸ್ಟ್ 14 ರಂದು ಬೆಂಗಳೂರಿನಲ್ಲಿ ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ನೋಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ. 2023, 2024 ಮತ್ತು 2025ರಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡಲಾಗುವುದು.
Read Full Story

06:28 PM (IST) Aug 07

ಬೆಂಗಳೂಗೆ ರಾಹುಲ್ ಗಾಂಧಿ, 15 ಸೆಕ್ಟರ್‌ಗಳಾಗಿ ವಿಭಜನೆ 6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ರಾಹುಲ್ ಗಾಂಧಿಯವರ ಬೆಂಗಳೂರು ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್. 15 ಸೆಕ್ಟರ್‌ಗಳಲ್ಲಿ 6000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ತುರ್ತು ಸೇವೆಗಳು, ಆರೋಗ್ಯ ಸಿಬ್ಬಂದಿ ಸಜ್ಜು.
Read Full Story

06:11 PM (IST) Aug 07

ಯಾವ ಉದ್ಯೋಗವೂ ಸೇಫ್ ಅಲ್ಲ, ಶೀಘ್ರದಲ್ಲೇ ಜಾಬ್ ಚಿತ್ರಣ ಬದಲು,ಗೂಗಲ್ EX ಆಫೀಸರ್ ಎಚ್ಚರಿಕೆ

ಕೆಲ ಹುದ್ದೆ ಸುಭದ್ರ ಎಂದು ಲೆಕ್ಕಚಾರ ಹಾಕಿದ್ದರೆ ತಪ್ಪು, ಕೆಲವೇ ವರ್ಷದಲ್ಲಿ ಉದ್ಯೋಗದ ಚಿತ್ರಣ ಬದಲಾಗಲಿದೆ. ಸಿಇಒ ಹುದ್ದೆ ಕೂಡ ಸೇಫ್ ಅಲ್ಲ ಎಂದು ಗೂಗಲ್ ಮಾಜಿ ಬ್ಯೂಸಿನೆಸ್ ಆಫೀಸರ್ ಎಚ್ಚರಿಸಿದ್ದಾರೆ.

Read Full Story

05:53 PM (IST) Aug 07

ಚಾಮರಾಜನಗರ - ತುಂಡು ಭೂಮಿ ಜಾಗಕ್ಕಾಗಿ ನಡೆದೆ ಹೋಯ್ತು ಡೆಡ್ಲಿ ಅಟ್ಯಾಕ್!

ಚಾಮರಾಜನಗರ ಜಿಲ್ಲೆಯ ಬೆಟ್ಟಹಳ್ಳಿಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಘಟನೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

05:40 PM (IST) Aug 07

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ!

ಬಿಜೆಪಿ ಸರ್ಕಾರವನ್ನು 'ನೇಮ್ ಚೇಂಜಿಂಗ್ ಸರ್ಕಾರ' ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಕಲಬುರಗಿ ಗುತ್ತಿಗೆದಾರ ಸಾವು, ಮೆಟ್ರೋ ಯೋಜನೆಗಳ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Read Full Story

05:31 PM (IST) Aug 07

ಧರ್ಮಸ್ಥಳ - 13ನೇ ಸ್ಥಳ ಶೋಧ ಇಂದಿಲ್ಲ, 3 ಗಂಟೆ ಅನಾಮಿಕನ ತೀವ್ರ ವಿಚಾರಣೆ, 7 ಪ್ರಕರಣ ದಾಖಲು

ಧರ್ಮಸ್ಥಳ ಶವ ಹೂತು ಪ್ರಕರಣದ ತನಿಖೆಯಲ್ಲಿ ಹೊಸ ತಿರುವು. ಪಾಯಿಂಟ್ ನಂಬರ್ 13ರಲ್ಲಿ ಶೋಧ ಕಾರ್ಯ ಸ್ಥಗಿತಗೊಂಡಿದ್ದು, ಎಸ್ಐಟಿ ಸಾಕ್ಷ್ಯ ಪರಿಕರಗಳ ವಿಶ್ಲೇಷಣೆಯತ್ತ ಗಮನ ಹರಿಸಿದೆ. ಮುಸುಕುಧಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಲವು ಮಂದಿಯ ವಿಚಾರಣೆ ಮುಂದುವರಿದಿದೆ.
Read Full Story

05:23 PM (IST) Aug 07

ಧರ್ಮಸ್ಥಳ ಪ್ರಕರಣದಲ್ಲಿ ಎಡಪಂಥೀಯ ಸಂಘಟನೆಗಳ ಒತ್ತಡದಿಂದ ಎಸ್‌ಐಟಿ ರಚನೆ - ಸಚಿವ ದಿನೇಶ್ ಗುಂಡೂರಾವ್

ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಪಂಥೀಯ ಸಂಘಟನೆಗಳ ಒತ್ತಡದಿಂದಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ, ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮತ್ತು ಮಾಧ್ಯಮಗಳ ವೈಭವೀಕರಣ ಬೇಡ ಎಂದರು.

Read Full Story

05:01 PM (IST) Aug 07

ಬೆಂಗಳೂರಿನ ನಂದಿ ಹಿಲ್ಸ್‌ನಲ್ಲಿ ಒಬೆರಾಯ್‌ ಗ್ರೂಪ್‌ನಿಂದ ಐಷಾರಾಮಿ ಹೋಟೆಲ್‌!

ಒಬೆರಾಯ್ ಗ್ರೂಪ್ ಭಾರತದಲ್ಲಿ ನಾಲ್ಕು ಹೊಸ ಹೋಟೆಲ್‌ಗಳನ್ನು ತೆರೆಯಲಿದೆ. ಈ ಹೋಟೆಲ್‌ಗಳು ಬೆಂಗಳೂರು, ಗೋವಾ, ಗಿರ್ ಮತ್ತು ಹೈದರಾಬಾದ್‌ನಲ್ಲಿ ಇರಲಿವೆ. ಈ ವಿಸ್ತರಣೆಯು ಗ್ರೂಪ್‌ನ 2030 ರ ವೇಳೆಗೆ 25 ಹೊಸ ಆಸ್ತಿಗಳನ್ನು ಸೇರಿಸುವ ಯೋಜನೆಯ ಭಾಗವಾಗಿದೆ.
Read Full Story

04:59 PM (IST) Aug 07

ಮದುವೆಯಾಗುವುದಾಗಿ ಯುವತಿಯನ್ನು ಗರ್ಭಿಣಿ ಮಾಡಿದ, ಇದೀಗ ಬೇರೆ ಹುಡುಗಿ ಮದುವೆಯಾಗಿ ಕೈಕೊಟ್ಟ ಹೋದ

ಭಟ್ಕಳದಲ್ಲಿ ಯುವತಿಯೊಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡು ಗರ್ಭಪಾತ ಮಾಡಿಸಿ ಬೇರೊಬ್ಬಳನ್ನು ವಿವಾಹವಾದ ಘಟನೆ ನಡೆದಿದೆ. ಸಂತ್ರಸ್ತ ಯುವತಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
Read Full Story

04:36 PM (IST) Aug 07

ತಪ್ಪು ದಾಖಲೆ ನೀಡಿದರೆ ಸೆಕ್ಷನ್ 227 BNS ಆಕ್ಟ್ ಅಡಿ ಶಿಕ್ಷೆ; ಮತಗಳ್ಳತನ ಆರೋಪಕ್ಕೆ ಚುನಾವಣಾಧಿಕಾರಿ ತಿರುಗೇಟು, ಸಹಿ ಮಾಡಿ ಆಕ್ಷೇಪಣೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ!

ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್‌ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಪತ್ರ ಬರೆದಿದ್ದಾರೆ. ಸಾಕ್ಷ್ಯಾಧಾರಿತ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ. ತಪ್ಪು ಮಾಹಿತಿ ನೀಡಿದರೆ ಕಠಿಣ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ.
Read Full Story

04:30 PM (IST) Aug 07

ಮುಕೇಶ್ ಅಂಬಾನಿ ಸತತ 5ನೇ ವರ್ಷ ವೇತನ ತ್ಯಜಿಸಿದರೂ ಆದಾಯ ಹೆಚ್ಚಾಗುತ್ತಿರುವುದು ಹೇಗೆ?

ಮುಕೇಶ್ ಅಂಬಾನಿ ಸತತ 5ನೇ ವರ್ಷ ತಮಗೆ ಒಂದು ರೂಪಾಯಿ ಸ್ಯಾಲರಿ ಬೇಡ ಎಂದಿದ್ದಾರೆ. ಇಷ್ಟಾದರೂ ಮುಕೇಶ್ ಅಂಬಾನಿ ಆದಾಯ ಹೆಚ್ಚಾಗುತ್ತಿರುವುದು ಹೇಗೆ?

Read Full Story

04:07 PM (IST) Aug 07

ನಿಮ್ಮ ಬದುಕು ಬದಲಿಸುವ ಟಾಪ್ 10 ಕನ್ನಡ ಪುಸ್ತಕಗಳಿವು

ಕನ್ನಡ ಸಾಹಿತ್ಯದ ಪ್ರಮುಖ 10 ಪುಸ್ತಕಗಳ ಪರಿಚಯ. ಜೀವನಕ್ಕೆ ಪ್ರೇರಣೆ, ದೃಷ್ಟಿಕೋನ ಬದಲಾವಣೆ ಮತ್ತು ಮಾರ್ಗದರ್ಶನ ನೀಡುವ ಕೃತಿಗಳು. ನಿಮ್ಮ ಬದುಕಿಗೆ ಒಂದು ಹೊಸ ದಿಕ್ಕು.
Read Full Story

04:00 PM (IST) Aug 07

ಮೃತ ಡ್ರೈವರ್ ಬಾಬು ಯಾರೆಂದು ಗೊತ್ತಿಲ್ಲ, ನನ್ನ ಹೆಸರೇಕೆ ಉಲ್ಲೇಖಿಸಿದ್ದಾರೋ ಗೊತ್ತಿಲ್ಲ; ಸಂಸದ ಕೆ. ಸುಧಾಕರ್

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಸುಧಾಕರ್ ತಮ್ಮ ಹೆಸರು ಉಲ್ಲೇಖಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಾಬುವಿನ ಪರಿಚಯವಿಲ್ಲ, ರಾಜಕೀಯ ಪಿತೂರಿ ಇದೆ. ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

Read Full Story

03:56 PM (IST) Aug 07

ಬಿಹಾರದಲ್ಲಿ ಅದಾನಿ ಪವರ್‌ಗೆ 2400 ಮೆಗಾವ್ಯಾಟ್‌ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಅನುಮತಿ!

ಬಿಹಾರದಲ್ಲಿ 2400 ಮೆಗಾವ್ಯಾಟ್‌ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಅದಾನಿ ಪವರ್‌ಗೆ ಒಪ್ಪಿಗೆ ಸಿಕ್ಕಿದೆ.

Read Full Story

03:47 PM (IST) Aug 07

ಉದ್ಯೋಗ ಕಡಿತದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ಟಿಸಿಎಸ್, ಸೆ.1ರಿಂದಲೇ ಸ್ಯಾಲರಿ ಹೈಕ್

ಟಿಸಿಎಸ್ ಉದ್ಯೋಗ ಕಡಿತ ಘೋಷಣೆ ಹಲವರಿಗೆ ಆಘಾತ ನೀಡಿತ್ತು. ಇದರ ಬೆನ್ನಲ್ಲೇ ಟಿಸಿಎಸ್ ಇದೀಗ ಉದ್ಯೋಗಿಗಳಿ ಬಂಪರ್ ಗಿಫ್ಟ್ ಘೋಷಿಸಿದೆ. ಸೆಪ್ಟೆಂಬರ್ 1 ರಿಂದ ಟಿಸಿಎಸ್ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುತ್ತಿದೆ.

Read Full Story

03:29 PM (IST) Aug 07

ಧರ್ಮಸ್ಥಳ ಕೇಸನ್ನು ಪೊಲೀಸರಲ್ಲ, ಸೋಶಿಯಲ್ ಮೀಡಿಯಾ ತನಿಖೆ ಮಾಡ್ತಿದೆ; ಸುನೀಲ್ ಕುಮಾರ್ ಆಕ್ರೋಶ

ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಯ ಹೆಸರಿನಲ್ಲಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಅಪಪ್ರಚಾರ ಬಗ್ಗೆ ತನಿಖೆ ನಡೆಸಬೇಕು ಮತ್ತು ಜನರ ಅಸಹನೆ ಕಟ್ಟೆ ಒಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು.

Read Full Story

03:03 PM (IST) Aug 07

ನೀವು ಸಲಿಂಗಿಯಾ? ಜೊತೆಯಲ್ಲಿದ್ದ ಯುವಕನಾರು? ಎಲ್ಲಾ ಆರೋಪಗಳಿಗೆ ನಿಜಲಿಂಗ ಸ್ವಾಮೀಜಿ ಸ್ಪಷ್ಟನೆ

ಇಸ್ಲಾಂನಿಂದ ಮತಾಂತರಗೊಂಡು ಲಿಂಗದೀಕ್ಷೆ ಪಡೆದ ನಿಜಲಿಂಗ ಸ್ವಾಮೀಜಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ್ದಾರೆ.  ಫೋಟೋ ಮತ್ತು ವಿಡಿಯೋ ಲೀಕ್ ಆಗಿದ್ದು ಹೇಗೆ ಎಂಬುದರ ಬಗ್ಗೆಯೂ ನಿಜಲಿಂಗ ಸ್ವಾಮೀಜಿ (ಮೊಹಮ್ಮದ್ ನಿಸಾರ್) ಮಾಹಿತಿ ನೀಡಿದ್ದಾರೆ.

Read Full Story

02:32 PM (IST) Aug 07

ಜಾತಿ ಜನಗಣತಿ ಡಿಜಿಟಲ್ ಸಮೀಕ್ಷೆಗೆ ಸಜ್ಜು, 17% ಒಳ ಮೀಸಲಾತಿ ಐದು ವಿಭಿನ್ನ ಪ್ರವರ್ಗ

ಕರ್ನಾಟಕದಲ್ಲಿ ಮರು ಜಾತಿ ಜನಗಣತಿಯನ್ನು ಡಿಜಿಟಲ್‌ ಮೂಲಕ ನಡೆಸಲು ಸರ್ಕಾರ ಸೂಚನೆ ನೀಡಿದೆ. ವೋಟರ್ ಐಡಿ ಆಧಾರಿತ ಮಾದರಿಯನ್ನು ಬಳಸುವ ಸಾಧ್ಯತೆಗಳಿವೆ. ಒಳ ಮೀಸಲಾತಿ ವರದಿ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

Read Full Story

01:36 PM (IST) Aug 07

ಧರ್ಮಸ್ಥಳದಲ್ಲಿ 13ನೇ ಸಮಾಧಿ ಶೋಧ ಕಾರ್ಯಕ್ಕೆ 2 ಗಂಟೆ ತಡವಾಗಿ ಬಂದ ಅನಾಮಿಕ!

ಧರ್ಮಸ್ಥಳದ ನೇತ್ರಾವತಿ ನದಿ ತೀರದ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ದೂರುದಾರರು 2 ಗಂಟೆ ತಡವಾಗಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ವಕೀಲರೊಂದಿಗೆ ಬಂದ ದೂರುದಾರರ ಮಾರ್ಗದರ್ಶನದಲ್ಲಿ 13ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ಆರಂಭವಾಗಲಿದೆ. ದೂರುದಾರನ ವಿಳಂಬದ ಕಾರಣ ತಿಳಿದಿಲ್ಲ.

Read Full Story

01:27 PM (IST) Aug 07

800 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ಕಾಪರ್‌ ಲ್ಯಾಮಿನೇಟ್‌ ಪ್ಲ್ಯಾಂಟ್‌, ಮುಡಾದಿಂದ 16 ಎಕರೆ ಜಾಗಕ್ಕೆ ಬೇಡಿಕೆ!

ದೆಹಲಿ ಮೂಲದ ಆಂಬರ್ ಎಂಟರ್‌ಪ್ರೈಸಸ್, ಮೈಸೂರಿನಲ್ಲಿ ಕಾಪರ್ ಲ್ಯಾಮಿನೇಟ್ ಸ್ಥಾವರ ಸ್ಥಾಪಿಸಲು ₹800 ಕೋಟಿ ಹೂಡಿಕೆ ಮಾಡಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 16 ಎಕರೆ ಭೂಮಿಗೆ ಕಂಪನಿಯು ಮನವಿ ಮಾಡಿದೆ. ಸರ್ಕಾರ ಹೂಡಿಕೆಗೆ ಅನುಕೂಲಕರ ವಾತಾವರಣ ಒದಗಿಸುವುದಾಗಿ ಭರವಸೆ ನೀಡಿದೆ.
Read Full Story

01:00 PM (IST) Aug 07

ವಿಜಯಪುರ - ಕುಕ್ ಹುಟ್ಟುಹಬ್ಬ, ಹಾಸ್ಟೆಲ್ ಹೆಣ್ಮಕ್ಕಳನ್ನ ರಾತ್ರಿ ಪಾರ್ಟಿಗೆ ಕರೆದೊಯ್ದ ವಾರ್ಡನ್!

ವಿಜಯಪುರದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಪಾರ್ಟಿ ಹಾಗೂ ಡಾನ್ಸ್ ಕಾರ್ಯಕ್ರಮ ಆಯೋಜಿಸಿದ ಆರೋಪದ ಮೇಲೆ ವಾರ್ಡನ್ ಮತ್ತು ಅಡುಗೆಯವರ ವಿರುದ್ಧ ತನಿಖೆ ನಡೆಯುತ್ತಿದೆ. ಹಾಸ್ಟೆಲ್ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ಆರೋಪ ಕೇಳಿಬಂದಿದೆ.  

Read Full Story

More Trending News