ಖಾತೆ ಹಂಚಿಕೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಯುಟಿ ಖಾದರ್ ಕಾರ್ಯಪ್ರವೃತ್ತರಾಗಿದ್ದಾರೆ. ಜಯನಗರದ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದ ವೈದ್ಯರು ಗೈರಾಗಿರುವುದನ್ನು ಖಾದರ್ ಗಮನಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ ಎಂದು ಯುಟಿ ಖಾದರ್ ಹೇಳಿದ್ದಾರೆ. ಹೊಸ ಸಚಿವರ ಕೆಲಸ, ರಾಜ್ಯ ರಾಜಕಾರಣ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಲೈವ್ ಅಪ್ಡೇಟ್ ಇಲ್ಲಿದೆ.

10:47 AM (IST) Jun 05
ಮುರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಹಿಂದೂ ಸಂಘಟನೆಗಳು ಕೆರಳಿದೆ. ಅನ್ಯ ಕೋಮಿನ ಸಮುದಾಯದ ಉದ್ರಿಕ್ತರು ಮುರಿನ ಕಟ್ಟೆ ಧ್ವಂಸಗೊಳಿಸಿರುವುದು ಹಾಗೂ ಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ಬಂದ್ ನಡೆಸಲಾಗುತ್ತಿದೆ.
10:44 AM (IST) Jun 05
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ, ರಾತ್ರಿ ಶೆಡ್ನಲ್ಲಿ ಮಲಗಿದ್ದ 50ಕ್ಕು ಹೆಚ್ಚು ಕುರಿಗಳ ಮೇಲೆ ದುಷ್ಮರ್ಮಿಗಳು ಚಾಕು ಮಚ್ಚು ದಾಳಿಸಿದ್ದಾರೆ. ಐದು ಕುರಿಗಳು ನರಳಾಡಿ ಸತ್ತಿವೆ ಉಳಿದ ಕುರಿಗಳು ಸ್ಥಿತಿ ಗಂಭೀರವಾಗಿದೆ.
10:38 AM (IST) Jun 05
ಕರ್ನಾಟಕ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಸಚಿವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಖಾತೆಯು ಬೃಹತ್ ಬಜೆಟ್, ಪ್ರಮುಖ ಸಂಸ್ಥೆಗಳ ಮೇಲಿನ ನಿಯಂತ್ರಣ, ಮತ್ತು ಅಪಾರ ರಾಜಕೀಯ ಪ್ರಭಾವವನ್ನು ನೀಡುವುದರಿಂದ, ಸಚಿವರು ಇದಕ್ಕಾಗಿ ಪಟ್ಟು ಹಿಡಿಯುತ್ತಾರೆ.
10:34 AM (IST) Jun 05
ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ. ಸರ್ಕಾರ ರಚನೆಯಾದ ಕೆಲವೇ ದಿನಕ್ಕೆ ಕೋಲಾಹಲ ತೀವ್ರಗೊಂಡಿದೆ.
10:07 AM (IST) Jun 05
ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಖಾತೆ ಕಾರವಲ್ಲ, ನೋವು ಎಂದಿದ್ದಾರೆ.
09:55 AM (IST) Jun 05
09:42 AM (IST) Jun 05
ತೀವ್ರ ಬೇಸರಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನಗೆ ಕೊಡ್ತೇನೆ ಎಂದು ಕಿತ್ತುಕೊಂಡಿದ್ದಾರೆ. ಇದು ನನಗೆ ತೀವ್ರ ಬೇಸರ ತರಿಸಿದೆ. ಯಾವುದೇ ಮಾತುಕತೆಗೆ ನಾನು ಮಣಿಯುವುದಿಲ್ಲ ಎಂದಿದ್ದಾರೆ.
09:28 AM (IST) Jun 05
ಮುನಿಸಿಕೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ಪಟ್ಟು ಬಿಗಿಗೊಳಿಸಿದ್ದಾರೆ. ಯಾವುದೇ ಮನ ಒಲಿಕೆಗೆ ರಾಮಲಿಂಗಾ ರೆಡ್ಡಿ ಜಗ್ಗಿಲ್ಲ. ಇದೀಗ ರಾಜೀನಾಮೆ ಪತ್ರಕ್ಕೆ ಅಧಿಕೃತ ಸಹಿ ಮಾಡಿದ್ದಾರೆ. ಇದೇ ವೇಳೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
08:59 AM (IST) Jun 05
ಸಚಿವ ರಾಮಲಿಂಗಾ ರೆಡ್ಡಿ ತಮಗೆ ನೀಡಿರುವ ಜಲಸಂಪನ್ಮೂಲ ಖಾತೆಯಿಂದ ಮುನಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಪರಿಣಾಮ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
08:40 AM (IST) Jun 05
ವಿದೇಶಿ ಶಂಕಿತ ಉಗ್ರರ ಜೊತೆ ನಿರಂತರ ಸಂಪರ್ಕದಲ್ಲಿದ್ದ ತುಮಕೂರಿನ 24ರ ಹರೆಯದ ಯುವಕ ಅಲ್ಲಾ ಬಕ್ಷುವನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಚಾಟ್ಗಳು, ಉಗ್ರರ ಚಟುವಟಿಕೆ ಕುರಿತು ಚಾಟ್ ಮಾಡಿರುವುದು ಬಯಲಾಗಿದೆ.
07:54 AM (IST) Jun 05
ಕಳೆದ 2 ದಶಕಗಳಿಂದ ನಡೆಸುತ್ತಿದ್ದ ಡಿವೋರ್ಸ್ ಹೋರಾಟದಲ್ಲಿ ಕೊನೆಗೂ ಭಾರತೀಯ ಮಹಿಳೆ ಗೆದ್ದಿದ್ದಾರೆ. ಪರಿಣಾಮ ಇದೀಗ ಜೀವನಾಂಶವಾಗಿ ಬರೋಬ್ಬರಿ 85 ಕೋಟಿ ರೂಪಾಯಿ ಪಡೆದಿದ್ದಾರೆ. ಆರಂಭದಲ್ಲಿ ಕೋರ್ಟ್ 3.5 ಕೋಟಿ ರೂ ಪಡೆದಿದ್ದರು. ಏನಿದು ಪ್ರಕರಣ?
07:50 AM (IST) Jun 05
07:07 AM (IST) Jun 05
ಜಯನಗರ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೇಳೆ ಆರೋಗ್ಯ ಸಚಿವ ಯುಟಿ ಖಾದರ್, ವೈದ್ಯಾಧಿಕಾರಿಗಳು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗರ್ಭಿಣಿಯೊಬ್ಬರು ನೆಲದ ಮೇಲೆ ಕುಳಿತಿರುವುದು ಕಂಡಿದ್ದಾರೆ. ಸ್ಥಳದಲ್ಲೆ ಸಿಬ್ಬಂದಿಗಳನ್ನು, ವೈದ್ಯರನ್ನು ಪ್ರಶ್ನಿಸಿದ್ದಾರೆ.