LIVE NOW
Published : Aug 05, 2026, 06:55 AM ISTUpdated : Aug 05, 2026, 10:28 AM IST

Karnataka News Live: ಹುಡುಗಿ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಭಕ್ತ ! ವೈರಲ್ ಆಯ್ತು ಪತ್ರ

ಸಾರಾಂಶ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಗಳನ್ನು ಹರಾಜಿಗೆ ಇರಿಸಲಾಗಿತ್ತು. ಕೊನೇ ಕ್ಷಣದಲ್ಲಿ ಹೆಸರುಗಳು ಬದಲಾಗಿ ಗೊಂದಲದ ಗೂಡಾಗಿದ್ದೇ ಇದಕ್ಕೆ ಸಾಕ್ಷಿ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಮಾಣ ವಚನ ಸಮಾರಂಭಕ್ಕೆ ಬರಲಿಲ್ಲ. ಇದರಲ್ಲೇ ಸಂಪುಟ ವಿಸ್ತರಣೆ ಹೇಗಿದೆ ಆಗಿದೆ ಎಂಬುದು ಜನರಿಗೆ ತಿಳಿದಿದೆ. ಸಚಿವ ಸ್ಥಾನ ಸಿಗದವರು ರಾಜೀನಾಮೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ರಾಜ್ಯವನ್ನು ಅಪಮಾನಕ್ಕೀಡು ಮಾಡುತ್ತಿದೆ. ರಾಜ್ಯದಲ್ಲಿ ತೀವ್ರ ಬರ ಇದ್ದರೂ ಸರ್ಕಾರ ಜನರ ಸಂಕಷ್ಟ ಅರಿತಿಲ್ಲ ಎಂದು ವಾಗ್ದಾಳಿ ನಡೆಸಿದರು.

10:28 AM (IST) Aug 05

ಹುಡುಗಿ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಭಕ್ತ ! ವೈರಲ್ ಆಯ್ತು ಪತ್ರ

ಬೆಳಗಾವಿಯ ಯುವಕನೊಬ್ಬ ಯುವತಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ರಾಮದುರ್ಗದ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 'ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು' ಎಂದು ಬರೆದಿದ್ದ ಅನಾಮಧೇಯ ಪತ್ರವೊಂದು ಪತ್ತೆಯಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
Read Full Story

10:27 AM (IST) Aug 05

​ಪೀಣ್ಯದಲ್ಲಿ ಪುಂಡರ ಅಟ್ಟಹಾಸ - ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸ! ಕ್ರಮ ಕೈಗೊಳ್ಳದೆ ಕೈತೊಳೆದುಕೊಂಡ ಪೋಲಿಸರು!

ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಮತ್ತಿನಲ್ಲಿ ವೀಲಿಂಗ್ ಮಾಡಿ, ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದರೂ, ದೂರು ಸ್ವೀಕರಿಸಿದ ಪೀಣ್ಯ ಪೊಲೀಸರು ಕೇವಲ ಎನ್‌ಸಿಆರ್ (NCR) ಹಾಕಿ ಕೈತೊಳೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Read Full Story

09:21 AM (IST) Aug 05

ಕೈ ಮೇಲಿನ ಹಚ್ಚೆ ತೋರಿಸಿ ಅಕುಲ್ ಬಾಲಾಜಿ ಭಾವುಕ ; ಆಂಧ್ರ ಹುಡುಗ ಕನ್ನಡಿಗನಾಗಿದ್ದೇಗೆ?

ಕನ್ನಡ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ತಮ್ಮ ಕೈ ಮೇಲಿರುವ  ಎಂಬ ಹಚ್ಚೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜನ್ಮ ಕೊಟ್ಟಿದ್ದು ತಂದೆ-ತಾಯಿ, ಆದರೆ ಬದುಕು ಕೊಟ್ಟಿದ್ದು ಕನ್ನಡ ನಾಡು ಮತ್ತು ಕನ್ನಡಿಗರು ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

Read Full Story

08:52 AM (IST) Aug 05

ರೈತರೇ ಹೊಡೀರಿ ಹಲಗಿ - ತುಂಗಭದ್ರಾ ಜಲಾಶಯಕ್ಕೆ ಪ್ರಥಮ ಬಾರಿ ಒಂದು ಲಕ್ಷ ಕ್ಯೂಸೆಕ್‌ ನೀರು!

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೊದಲ ಬಾರಿಗೆ 1,08,531 ಕ್ಯೂಸೆಕ್‌ ನೀರು ಹರಿದುಬಂದಿದೆ. ಇದರಿಂದ ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿದೆ.
Read Full Story

08:26 AM (IST) Aug 05

ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ-169 ಅಭಿವೃದ್ಧಿ - ಹಲವೆಡೆ ಭೂಕುಸಿತ!

ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯ ಹಲವೆಡೆ ಮಣ್ಣು ಕುಸಿತದ ಆತಂಕ ಎದುರಾಗಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ಹೆಚ್ಚುತ್ತಿದೆ. ಇದರಿಂದಾಗಿ ಸ್ಥಳೀಯರು ಶಾಶ್ವತ ಪರಿಹಾರ ಮತ್ತು ಹಾನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
Read Full Story

08:25 AM (IST) Aug 05

ಸಚಿವರಾಗ್ತಿದ್ದಂತೆ ಅಖಾಡಕ್ಕಿಳಿದ ವಿಜಯಾನಂದ ಕಾಶಪ್ಪನವರ್ - ಇಂದು ಬಾಗಲಕೋಟೆಯಲ್ಲಿ ಬರ ವೀಕ್ಷಣೆ

ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ

Read Full Story

08:10 AM (IST) Aug 05

ನಿರೀಕ್ಷಣಾ ಜಾಮೀನು ಪಡೆದಿದ್ರೂ ಬಂಧನ; ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ 9 ಲಕ್ಷ ದಂಡ

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಇಂಗ್ಲೆಂಡ್‌ನಿಂದ ಬಂದ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿ, ಆತನ ತಂದೆಗೆ ಕಿರುಕುಳ ನೀಡಿದ್ದ ಪೊಲೀಸರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ತಂದೆ-ಮಗನಿಗೆ 9 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
Read Full Story

07:57 AM (IST) Aug 05

ಬರ-ಅತಿವೃಷ್ಟಿ ಅಧ್ಯಯನ - 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?

ರಾಜ್ಯದಲ್ಲಿನ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿದ್ದಾರೆ. ಈ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿ ಅರಿತು ಡಿಸಿಎಂಗೆ ವರದಿ ಸಲ್ಲಿಸಲಿದ್ದಾರೆ.

Read Full Story

07:55 AM (IST) Aug 05

ಪೊಲೀಸರೇ ಗಂಡನನ್ನು ಕೊಂದ್ರು, ಮಕ್ಕಳನ್ನ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ - ಶೈನಾಜ್ ಬೇಗಂ

ಕುಡಿದು ಗಲಾಟೆ ಮಾಡುತ್ತಿದ್ದ ಪತಿಗೆ ಬುದ್ಧಿ ಹೇಳಲು ಠಾಣೆಗೆ ಕರೆತಂದ ಪತ್ನಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪೊಲೀಸರ ಅಮಾನುಷ ಹಲ್ಲೆಯಿಂದಲೇ ತನ್ನ ಪತಿ ಖಲೀಲ್ ಸಾಬ್ ಸಾವನ್ನಪ್ಪಿದ್ದು, ಇದು ಲಾಕಪ್ ಸಾವು ಎಂದು ಪತ್ನಿ ಶೈನಾಜ್ ಬೇಗಂ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದು, ಪ್ರಕರಣಕ್ಕೆ ರಾಜಕೀಯ ಮುಖಂಡರು ಧ್ವನಿಗೂಡಿಸಿದ್ದಾರೆ.
Read Full Story

07:43 AM (IST) Aug 05

Hubballi - ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸುವಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ, ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಓಲಾ, ಊಬರ್‌ನಂತಹ ಆ್ಯಪ್ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಆ್ಯಪ್‌ಗಳಿಂದ ತಮ್ಮ ಆದಾಯ ಕುಸಿದು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ, ಸರ್ಕಾರ ತಕ್ಷಣವೇ ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
Read Full Story

07:33 AM (IST) Aug 05

CM ಡಿಕೆ ಶಿವಕುಮಾರ್‌ಗೆ MB ಪಾಟೀಲರನ್ನು ಸಚಿವರಾಗಿಸೋ ಮನಸ್ಸಿರಲಿಲ್ಲ - ಶಾಸಕ ಯತ್ನಾಳ

ಡಿ.ಕೆ. ಶಿವಕುಮಾರ್‌ಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿಸುವ ಮನಸ್ಸಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ನಡುವಿನ ಜಗಳ ತಾತ್ಕಾಲಿಕ ಎಂದಿರುವ ಅವರು, ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ ಗೊಂದಲಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Read Full Story

07:11 AM (IST) Aug 05

ರಾಯಚೂರು - ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್‌ ಬೈಕ್‌ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.

Read Full Story

More Trending News