Published : Aug 05, 2026, 06:55 AM ISTUpdated : Aug 05, 2026, 11:02 PM IST

Karnataka News Live: Viral - ಒಂದೇ ಒಂದು ವಿಡಿಯೋ, ಬಿಎಂಟಿಸಿ ಚಾಲಕ ಸಸ್ಪೆಂಡ್ ಶಿಕ್ಷೆ! ವಿಡಿಯೋ ನೋಡಿ ಶಾಕ್‌ ಆದ ಬೆಂಗಳೂರಿನ ಜನ!

ಸಾರಾಂಶ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನಗಳನ್ನು ಹರಾಜಿಗೆ ಇರಿಸಲಾಗಿತ್ತು. ಕೊನೇ ಕ್ಷಣದಲ್ಲಿ ಹೆಸರುಗಳು ಬದಲಾಗಿ ಗೊಂದಲದ ಗೂಡಾಗಿದ್ದೇ ಇದಕ್ಕೆ ಸಾಕ್ಷಿ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಮಾಣ ವಚನ ಸಮಾರಂಭಕ್ಕೆ ಬರಲಿಲ್ಲ. ಇದರಲ್ಲೇ ಸಂಪುಟ ವಿಸ್ತರಣೆ ಹೇಗಿದೆ ಆಗಿದೆ ಎಂಬುದು ಜನರಿಗೆ ತಿಳಿದಿದೆ. ಸಚಿವ ಸ್ಥಾನ ಸಿಗದವರು ರಾಜೀನಾಮೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಆಡಳಿತ ರಾಜ್ಯವನ್ನು ಅಪಮಾನಕ್ಕೀಡು ಮಾಡುತ್ತಿದೆ. ರಾಜ್ಯದಲ್ಲಿ ತೀವ್ರ ಬರ ಇದ್ದರೂ ಸರ್ಕಾರ ಜನರ ಸಂಕಷ್ಟ ಅರಿತಿಲ್ಲ ಎಂದು ವಾಗ್ದಾಳಿ ನಡೆಸಿದರು.

11:02 PM (IST) Aug 05

Viral - ಒಂದೇ ಒಂದು ವಿಡಿಯೋ, ಬಿಎಂಟಿಸಿ ಚಾಲಕ ಸಸ್ಪೆಂಡ್ ಶಿಕ್ಷೆ! ವಿಡಿಯೋ ನೋಡಿ ಶಾಕ್‌ ಆದ ಬೆಂಗಳೂರಿನ ಜನ!

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಹತ್ತಲು ಯತ್ನಿಸಿದ ನಿರಾಶ್ರಿತ ವ್ಯಕ್ತಿಯನ್ನು ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗೆ ತಳ್ಳಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಬಿಎಂಟಿಸಿ ಆರೋಪಿ ಕಂಡಕ್ಟರ್‌ನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.
Read Full Story

10:19 PM (IST) Aug 05

Iran - ಹಾರ್ಮುಜ್‌ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಗ್ರ್ಯಾಂಡ್ ಎಸ್ಕೇಪ್; ಕ್ಷಿಪಣಿಗಳ ನಡುವೆ ನಡೆದಿತ್ತು ಕಲ್ಪನೆಗೂ ಮೀರಿದ ಮಿಷನ್!

ಸಂಘರ್ಷದ ನಡುವೆಯೂ, ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ 60 ಸರಕು ಹಡಗುಗಳನ್ನು ಮತ್ತು 3,972 ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಯಶಸ್ವಿ ಕಾರ್ಯಾಚರಣೆಯು ಭಾರತದ ಇಂಧನ ಪೂರೈಕೆ ಸರಪಳಿಯನ್ನು ಅಬಾಧಿತವಾಗಿರಿಸಿದ್ದು, ಸರ್ಕಾರದ ಸಮನ್ವಯ ಮತ್ತು ನೌಕಾಪಡೆ ಶಕ್ತಿ ಪ್ರದರ್ಶಿಸಿದೆ.

Read Full Story

10:01 PM (IST) Aug 05

ಓದಲೆಂದು ಫೋನ್ ಹಿಡಿದ ಬಾಲಕ ಮರುಕ್ಷಣವೇ ಮಾಡಿದ್ದೇನು? ಮೆಸೇಜ್ ನೋಡಿ ತಂದೆಗೆ ಆಘಾತ!

8ನೇ ತರಗತಿಯ ವಿದ್ಯಾರ್ಥಿಯೊಬ್ಬ ತಂದೆಯ ಫೋನ್‌ನಲ್ಲಿ ಅಧ್ಯಯನ ಮಾಡುವ ನೆಪದಲ್ಲಿ ರೊಬ್ಲಾಕ್ಸ್ ಗೇಮ್‌ಗೆ ₹42 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ ಆರೋಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ಸಾಲ ಮತ್ತು ಶಾಲಾ ಶುಲ್ಕದ ಒತ್ತಡದಲ್ಲಿದ್ದ ಕುಟುಂಬ ಹಣ ಮರಳಿ ಪಡೆಯಲು ಸಹಾಯ ಕೋರಿದ್ದು, ಪೋಷಕರು ಉಳಿಸಿದ ಕಾರ್ಡ್ ವಿವರಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬ ಚರ್ಚೆಗೆ ಕಾರಣವಾಗಿದೆ.

Read Full Story

09:18 PM (IST) Aug 05

IIT - ಜೆಇಇ ಪರೀಕ್ಷೆಯಲ್ಲಿ ಅಪ್ಪನಿಗೆ ಜೀರೋ ಅಂಕ! ಆದರೆ ಅದೇ ಅವರ ಮಗನಿಗೆ ಸಿಕ್ಕ ದೊಡ್ಡ ಗಿಫ್ಟಂತೆ!

ನ್ಯೂಯಾರ್ಕ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಆಕಾಶ್ ಪಾಂಡೆ, ತಮ್ಮ ತಂದೆಯ ಐಐಟಿ ವೈಫಲ್ಯದ ಕಥೆಯನ್ನು ಹಂಚಿಕೊಂಡಿದ್ದಾರೆ. ತಂದೆಯ ಸೋಲು ತನ್ನ ಮೇಲೆ ಯಾವುದೇ ಒತ್ತಡ ಹೇರದೆ, ಯಶಸ್ಸಿಗೆ ಹೇಗೆ 'ಶೂನ್ಯ ಒತ್ತಡ'ದ ವಾತಾವರಣವನ್ನು ಸೃಷ್ಟಿಸಿತು ಎಂಬುದನ್ನು ಈ ಕಥೆ ವಿವರಿಸುತ್ತದೆ.
Read Full Story

08:02 PM (IST) Aug 05

Virat - ಕುಸಿದ ವಿರಾಟ್ ಕೊಹ್ಲಿ ಬ್ರ್ಯಾಂಡ್ ಮೌಲ್ಯ! ರಣ್‌ವೀರ್ ಸಿಂಗ್‌ಗೆ 2ನೇ ಸ್ಥಾನ; ಹಾಗಾದ್ರೆ ನಂ. 1 ಕಿಂಗ್ ಯಾರು?

ಕ್ರಾಲ್‌ನ 2025ರ ಬ್ರಾಂಡ್ ಮೌಲ್ಯಮಾಪನ ವರದಿಯು ಭಾರತದ ಸೆಲೆಬ್ರಿಟಿ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯನ್ನು ಬಹಿರಂಗಪಡಿಸಿದೆ. ಆ ವ್ಯಕ್ತಿ ಅಗ್ರಸ್ಥಾನಕ್ಕೇರಿದ್ದರೆ, ರಣವೀರ್ ಸಿಂಗ್ ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Read Full Story

08:01 PM (IST) Aug 05

ಕರ್ನಾಟಕದಲ್ಲಿ ಸಿಪ್ಲಾ 200 ಕೋಟಿ, ರಾಕೆಟ್ ಇಂಡಿಯಾದಿಂದ 100 ಕೋಟಿ ಹೂಡಿಕೆ

ಸಿಪ್ಲಾ ಔಷಧ ತಯಾರಿಕಾ ಘಟಕದ ಸಾಮರ್ಥ್ಯ ವಿಸ್ತರಣೆಗೆ 200 ಕೋಟಿ ರೂಪಾಯಿ ಹಾಗೂ ರಾಕೆಟ್ ಇಂಡಿಯಾ ಕಂಪನಿಯು ಗೋಕಾಕದಲ್ಲಿರುವ ತನ್ನ ಸ್ಥಾವರ ವಿಸ್ತರಣೆಗೆ ₹100 ಕೋಟಿ ಹೂಡಿಕೆ ಮಾಡುತ್ತಿದೆ.

Read Full Story

07:03 PM (IST) Aug 05

'35 ವರ್ಷ ಆದ್ಮೇಲೆ ನಾನು ನಾನಾಗಿರಲಿಲ್ಲ, ನಿದ್ದೆ ಬರ್ತಿರಲಿಲ್ಲ' - ಹೆಣ್ಣುಮಕ್ಕಳ ಸಮಸ್ಯೆ ಬಗ್ಗೆ ನಟಿ ರಮ್ಯಾ ಓಪನ್​ ಮಾತು

ಮುಟ್ಟು ನಿಲ್ಲುವ ಸಮಯದ ಬಗ್ಗೆ ಅನೇಕ ಮಹಿಳೆಯರು ಮುಕ್ತವಾಗಿ ಮಾತನಾಡುವುದಿಲ್ಲ. ನಟಿ ರಮ್ಯಾ ತಮ್ಮ 35ನೇ ವಯಸ್ಸಿನಲ್ಲಿಯೇ ಪೆರಿಮೆನೋಪಾಸ್‌ನಿಂದ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದು, ಈ ಅನುಭವವೇ ರಾಜ್ಯ ಸರ್ಕಾರದ 'ಋತುತಾರೆ' ಯೋಜನೆಗೆ ಸ್ಫೂರ್ತಿಯಾಗಿದೆ.
Read Full Story

05:48 PM (IST) Aug 05

ಕನ್ನಡ ಸೇರಿ 6 ಭಾರತದ ಭಾಷೆಗಳಲ್ಲಿ ಮಾತನಾಡಲಿದೆ ಟೆಸ್ಲಾ ಕಾರು, Y ಮಾಡೆಲ್ ಬೆಲೆ ಎಷ್ಟು?

ಭಾರತದಲ್ಲಿ ಅಮೆರಿಕನ್ ಟೆಸ್ಲಾ ಕಾರು ಈಗಾಗಲೇ ಮಾರಾಟ ಆರಂಭಿಸಿದೆ. ವಿಶೇಷ ಅಂದರೆ ಇದೀಗ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಟೆಸ್ಲಾ ಕಾರು ಮಾತನಾಡಲಿದೆ. 500 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರಿನ ಬೆಲೆ ಹಾಗೂ ಗ್ರೂಕ್ ಎಐ ವಿಶೇಷತೆ ಇಲ್ಲಿದೆ.

Read Full Story

05:41 PM (IST) Aug 05

PM Modi - ಭಾರತ ಸರ್ಕಾರದ ಬಿಗ್ 'ಸರ್ಜಿಕಲ್ ಸ್ಟ್ರೈಕ್'! ಮೆಟಾಗೆ ನಡುಕ; ಮೋದಿ ವಿಡಿಯೋ ಗೊಂದಲಕ್ಕೆ ಜುಕರ್ ಬರ್ಗ್ ಕ್ಷಮೆಯಾಚನೆ!

ಪ್ರಧಾನಿ ಮೋದಿ ಅವರ ವೀಡಿಯೊ ಡಿಲೀಟ್ ಸೇರಿದಂತೆ ಹಲವು ಗಂಭೀರ ಲೋಪಗಳಿಗಾಗಿ ಮೆಟಾ ಸಂಸ್ಥೆಯು ಭಾರತ ಸರ್ಕಾರದ ಮುಂದೆ ಅಧಿಕೃತವಾಗಿ ಕ್ಷಮೆಯಾಚಿಸಿದೆ. ದೇಶದ ಕಾನೂನಿಗಿಂತ ಯಾವುದೇ ಡಿಜಿಟಲ್ ವೇದಿಕೆ ದೊಡ್ಡದಲ್ಲ ಎಂದು ಎಚ್ಚರಿಸಿದ ಸರ್ಕಾರ, ಮೆಟಾಗೆ ನೀಡಲಾದ 'ಸೇಫ್ ಹಾರ್ಬರ್' ಕಾನೂನು ರಕ್ಷಣೆಯನ್ನು ರದ್ದುಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದೆ.

Read Full Story

05:40 PM (IST) Aug 05

ಪ್ಲಾಸ್ಟಿಕ್ ವಿರುದ್ಧ 'ನಿಫ್ಟ್' ಹಳೇ ವಿದ್ಯಾರ್ಥಿ ಸಮರ - ಮಾಸಿಕ ₹2 ಕೋಟಿ ವಹಿವಾಟಿನ ಪರಿಸರ ಸ್ನೇಹಿ ನವೋದ್ಯಮ ಕಟ್ಟಿದ ವೈಭವ್ ಅನಂತ್!

ಬೆಂಗಳೂರಿನ ನಿಫ್ಟ್ ಹಳೆಯ ವಿದ್ಯಾರ್ಥಿ ವೈಭವ್ ಅನಂತ್ ಅವರು 'ಬ್ಯಾಂಬ್ರೂ' ಎಂಬ ಹಸಿರು ನವೋದ್ಯಮವನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಬಿದಿರು, ಕಬ್ಬಿನ ಸಿಪ್ಪೆಯಂತಹ ನೈಸರ್ಗಿಕ ವಸ್ತುಗಳಿಂದ ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುತ್ತಿದೆ.

Read Full Story

05:20 PM (IST) Aug 05

"ಸಾಮಾನ್ಯರಿಗಿರಲಿ, NRIಗಳಿಗೂ ಬೆಂಗಳೂರಲ್ಲಿ ಮನೆ ಕೊಳ್ಳೋದು ಕಷ್ಟ!" - ಪ್ರತಿ ತಿಂಗಳ ಇಎಂಐ ಕೇಳಿದರೆ ಶಾಕ್!

ಬೆಂಗಳೂರು ಮನೆ ಬೆಲೆಗಳ ಬಗ್ಗೆ ವೈರಲ್ ಆದ X ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಮುಖ ಪ್ರದೇಶಗಳಲ್ಲಿ 2BHK ಬೆಲೆ ₹1.4–1.8 ಕೋಟಿಗೆ ಏರಿರುವುದರಿಂದ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಮನೆ ಖರೀದಿ ಅಸಾಧ್ಯವಾಗುತ್ತಿದೆ ಎನ್ನಲಾಗಿದೆ. ಹೆಚ್ಚಿದ EMI, ಮೂಲಸೌಕರ್ಯ ಸಮಸ್ಯೆ ಮತ್ತು ರಿಯಲ್ ಎಸ್ಟೇಟ್ ಬೆಲೆ ಏರಿಕೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

Read Full Story

05:18 PM (IST) Aug 05

ಏಕಾಏಕಿ ಪಹಣಿಯಿಂದ ಮಾಯವಾದ ಜಮೀನು, ಸಣ್ಣ ನೀರಾವರಿ ಇಲಾಖೆ ವಿರುದ್ಧ ರೈತರ ಆಕ್ರೋಶ

ಮುಂಡಗೋಡ ತಾಲೂಕಿನಲ್ಲಿ, ಬಾಚಣಕಿ ಜಲಾಶಯದ ಬಳಿ ತಲತಲಾಂತರದಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು, ಯಾವುದೇ ಮುನ್ಸೂಚನೆ ನೀಡದೆ ಸಣ್ಣ ನೀರಾವರಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ.

Read Full Story

04:45 PM (IST) Aug 05

Viral News - ಯುವತಿಯ ಬದುಕನ್ನೇ ಬಲಿ ಪಡೆಯಿತಾ ರಾಪಿಡೋ ರೈಡ್‌ ? ₹20 ಲಕ್ಷ ಮೆಡಿಕಲ್ ಬಿಲ್‌ ನೋಡಿ ಕಣ್ಣೀರಿಡುತ್ತಿರುವ ಬೆಂಗಳೂರಿನ ಟೆಕ್ಕಿ!

ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಅಜಾಗರೂಕತೆಯಿಂದಾಗಿ ಯುವತಿಯೊಬ್ಬರು ಭೀಕರ ಅಪಘಾತಕ್ಕೀಡಾಗಿದ್ದಾರೆ. ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂತ್ರಸ್ತೆಗೆ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.

Read Full Story

04:06 PM (IST) Aug 05

Cricket - 2027ರ ವಿಶ್ವಕಪನಿಂದ್ ಆ ಸ್ಟಾರ್ ಬ್ಯಾಟ್ಸಮನ್‌ ಔಟ್? ಅವರು ಸ್ಟೇಡಿಯಂಗೆ ಇಳಿದರೆ ಸೋಲು ಗ್ಯಾರಂಟಿಯಂತೆ; ಬಿಸಿಸಿಐ ಆಯ್ಕೆಗಾರರ ಸ್ಫೋಟಕ ವರದಿ!

2027ರ ವಿಶ್ವಕಪ್‌ಗೆ ಆ ಆಟಗಾರನ ಭವಿಷ್ಯದ ಬಗ್ಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿವೆ. ಅವರ ಇತ್ತೀಚಿನ ಶತಕ ಹಾಗೂ ನಾಯಕತ್ವದ ಯಶಸ್ಸು, ಅವರ ಸ್ಥಾನವನ್ನು ಉಳಿಸಿಕೊಳ್ಳುವ ಚರ್ಚೆಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಹಾಗಾದರೆ ಆಟಗಾರ ಯಾರು ಎನ್ನುವುದನ್ನು ನೋಡೋಣ ಬನ್ನಿ.

Read Full Story

02:44 PM (IST) Aug 05

ಕಿಚ್ಚ ಸುದೀಪ್ 'ಪ್ರೇಮದ ಕಾದಂಬರಿ' ಫೋಟೋ ಪೋಸ್ಟ್‌ ಮಾಡಿದ 'ಎವರ್‌ಗ್ರೀನ್ ಬ್ಯೂಟಿ'ಗೆ ನೆಟ್ಟಿಗರ ಮಸ್ತ್ ರಿಯಾಕ್ಷನ್ಸ್!

ವೈರಲ್ ಆಗಿರುವ  26 ವರ್ಷಗಳ ಹಿಂದಿನ ಈ ಫೋಟೋ ಸುದೀಪ್ ಅವರ ಪರಿಶ್ರಮದ ಹಾದಿಯನ್ನು ನೆನಪಿಸುವಂತಿದೆ. ಬಿಗ್ ಬಾಸ್ ಮೂಲಕ ಕಿರುತೆರೆಯನ್ನು ಆಳುತ್ತಿರುವ ಸುದೀಪ್, ಅಂದು ಸೀರಿಯಲ್ ಮೂಲಕವೇ ತಮ್ಮ ಪಯಣಕ್ಕೆ ಭದ್ರ ಬುನಾದಿ ಹಾಕಿದ್ದರು. ನಟಿ ಸಂಗೀತಾಗೆ ಬಂದಿರುವ ಕಾಮೆಂಟ್ಸ್ ಏನು ನೋಡಿ!

Read Full Story

01:17 PM (IST) Aug 05

ಹೆಬ್ಬಾಳ ಸುರಂಗ ಯೋಜನೆಗೆ 893 ಮರಗಳ ಬಲಿ, ಉತ್ತರ ಬೆಂಗಳೂರಿನ ಹಸಿರು ಕಸಿಯಲಿರುವ ಪ್ರಾಜೆಕ್ಟ್‌!

ಬೆಂಗಳೂರಿನ ಹೆಬ್ಬಾಳದಲ್ಲಿ ಉದ್ದೇಶಿತ ಕಿರು ಸುರಂಗ ರಸ್ತೆ ಯೋಜನೆಗಾಗಿ 893 ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿದೆ, ಇದು ಪರಿಸರವಾದಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬಿಡಿಎ ಮರಗಳನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದರೂ, ತಜ್ಞರು ಅದರ ಯಶಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

12:50 PM (IST) Aug 05

ಏನ್ ಸರ್, ಕಾವ್ಯಾಳನ್ನು ಸಹ ಕರೆಸಬೇಕಿತ್ತು ಅಲ್ವಾ? ವೇದಿಕೆ ಮೇಲೆ ಗಿಲ್ಲಿ ನಟನ ಮಾತು

ರಾಮನಗರದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟನಿಗೆ ಅಭಿಮಾನಿಗಳು 'ಕಾವು ಕಾವು' ಎಂದು ಕೂಗಿದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಮಳೆಯಲ್ಲಿ ನಿಂತು ಸರಳತೆ ಮೆರೆದರೆ, ದರ್ಶನ್ ಅಭಿಮಾನಿಗಳ ವರ್ತನೆಗೆ ಸಿಎಂ ಡಿಕೆಶಿ ಗರಂ ಆದರು.
Read Full Story

12:38 PM (IST) Aug 05

ಸಿಂಗಟಾಲೂರು ಏತ ನೀರಾವರಿ - ಬರೋಬ್ಬರಿ 117 ಕೋಟಿ ವಿದ್ಯುತ್‌ ಬಿಲ್‌ ಬಾಕಿ! ಜೆಸ್ಕಾಂ, ಹೆಸ್ಕಾಂನಿಂದ ಫೈನಲ್ ವಾರ್ನ್!

ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬರೋಬರಿ ₹117 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಲದಂಡೆ ಭಾಗದಲ್ಲಿ ₹87 ಕೋಟಿ ಮತ್ತು ಎಡದಂಡೆ ಭಾಗದಲ್ಲಿ ₹29 ಕೋಟಿ ಬಾಕಿ ಇದ್ದು, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಮತ್ತು ಹೆಸ್ಕಾಂ ಅಂತಿಮ ಎಚ್ಚರಿಕೆ.

Read Full Story

12:34 PM (IST) Aug 05

ಸರ್ಕಾರದಿಂದ ಐತಿಹಾಸಿಕ ಹೆಜ್ಜೆ - ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗಾಗಿ ‘ಋತುತಾರೆ’- ರಮ್ಯಾ ರಾಯಭಾರಿ

ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯ ಕಾಳಜಿಗೆ ಒತ್ತು ನೀಡುವ ಉದ್ದೇಶದಿಂದ ‘ಋತುತಾರೆ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಋತುಮತಿ ಹಾಗೂ ಮೆನೋಪಾಸ್ ಸಮಯದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ನಟಿ ರಮ್ಯಾ ಅವರನ್ನು ಈ ಯೋಜನೆಗೆ ರಾಯಭಾರಿಯಾಗಿ ನೇಮಿಸಲಾಗಿದೆ.
Read Full Story

12:10 PM (IST) Aug 05

kavalesad point tragedy - ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!

ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.

Read Full Story

12:07 PM (IST) Aug 05

ದಳಪತಿ ವಿಜಯ್ ಮಗ 'ಸಿಗ್ಮಾ' ಜೇಸನ್‌ ಸಂಜಯ್‌ಗೆ ಕನ್ನಡದ 'ಅದೊಂದು ಸಿನಿಮಾ' ತುಂಬಾ ಇಷ್ಟವಂತೆ!

ತಮಿಳುನಾಡಿನ ಭಾವಿ ಸೂಪರ್ ಸ್ಟಾರ್ ಅಥವಾ ಸೆನ್ಸೇಷನಲ್ ನಿರ್ದೇಶಕ ಎನ್ನಿಸಿಕೊಳ್ಳುತ್ತಿರುವ ಜೇಸನ್ ಸಂಜಯ್ ಅವರಿಗೆ ನಮ್ಮ ಕನ್ನಡ ಸಿನಿಮಾದ ಹವಾ ತಗುಲಿರುವುದು ಸ್ಯಾಂಡಲ್‌ವುಡ್ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಜೇಸನ್ ಅವರ 'ಸಿಗ್ಮಾ' ಚಿತ್ರದಲ್ಲೂ ಇದೇ ತರಹದ ಮಾಸ್ ಎಲಿಮೆಂಟ್ಸ್ ಇರಲಿದೆಯೇ ಎಂದು ಕಾದು ನೋಡಬೇಕಿದೆ!

Read Full Story

12:03 PM (IST) Aug 05

ಹೂಗುಚ್ಛ, ಶಾಲು, ಪೇಟಗಳಿಗೆ ಸಚಿವರಿಂದ ಬ್ರೇಕ್, ಸರಳತೆಯ ಹಾದಿ ಹಿಡಿದ ವಿಜಯಾನಂದ ಕಾಶಪ್ಪನವರ್

ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು, ತಮಗೆ ಶಾಲು, ಪೇಟ, ಹಾರ-ತುರಾಯಿ ತರಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

Read Full Story

11:40 AM (IST) Aug 05

ಆಂಕರ್ ಅಪರ್ಣಾ ನೆನಪಲ್ಲಿ ಗಾಯಕಿ ಜೋಗಿ ಸುನೀತಾ ಹೆಜ್ಜೆ; ಹೊಸ ಕನಸು ತೆರೆದಿಟ್ಟ ಗೆಳತಿ

ಖ್ಯಾತ ಗಾಯಕಿ ಜೋಗಿ ಸುನೀತಾ, ತಮ್ಮ ಗೆಳತಿ ಹಾಗೂ ನಿರೂಪಕಿ ದಿವಂಗತ ಅಪರ್ಣಾ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ಅಪರ್ಣಾ ಅವರ ಆಸೆಯನ್ನು ತಾನು ಮುಂದುವರಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ, ಇಂದಿನ ಸಂಗೀತ ಕ್ಷೇತ್ರದ ಸವಾಲುಗಳ ಬಗ್ಗೆಯೂ ಸುನೀತಾ ಮಾತನಾಡಿದ್ದಾರೆ.
Read Full Story

11:27 AM (IST) Aug 05

ಯಾದಗಿರಿ ಕೆಮಿಕಲ್ ಫ್ಯಾಕ್ಟರಿ ದುರಂತ - ಮೂವರು ಕಾರ್ಮಿಕರು ದುರ್ಮರಣ ! 'ಇನ್ನೊಂದು ಶಿಪ್ಟ್ ಮುಗಿಸಿ ಬರ್ತಿನಮ್ಮ... ಅಂದ ಮಗ ಬರಲೇ ಇಲ್ಲ.. ತಾಯಿ ಕಣ್ಣೀರು

ಯಾದಗಿರಿ ಕಡೇಚೂರು ಇಂಡಸ್ಟ್ರಿಯಲ್ ಫ್ಯಾಕ್ಟರಿಯೊಂದರಲ್ಲಿ ಗ್ಯಾಸ್ ವಿಷಾನಿಲ ಸೋರಿಕೆಯಿಂದಾಗಿ ಮಧ್ಯಪ್ರದೇಶ, ಆಂಧ್ರಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಇನ್ನಿಬ್ಬರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್‌ತಿದ್ದಾರೆ.

Read Full Story

10:28 AM (IST) Aug 05

ಹುಡುಗಿ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಭಕ್ತ ! ವೈರಲ್ ಆಯ್ತು ಪತ್ರ

ಬೆಳಗಾವಿಯ ಯುವಕನೊಬ್ಬ ಯುವತಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ರಾಮದುರ್ಗದ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 'ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು' ಎಂದು ಬರೆದಿದ್ದ ಅನಾಮಧೇಯ ಪತ್ರವೊಂದು ಪತ್ತೆಯಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
Read Full Story

10:27 AM (IST) Aug 05

​ಪೀಣ್ಯದಲ್ಲಿ ಪುಂಡರ ಅಟ್ಟಹಾಸ - ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸ! ಕ್ರಮ ಕೈಗೊಳ್ಳದೆ ಕೈತೊಳೆದುಕೊಂಡ ಪೋಲಿಸರು!

ಬೆಂಗಳೂರಿನ ಪೀಣ್ಯ ಠಾಣಾ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ಗಣಿ ಮತ್ತು ನಂಜುಂಡ ಎಂಬ ಪುಂಡರು ಗಾಂಜಾ ಮತ್ತಿನಲ್ಲಿ ವೀಲಿಂಗ್ ಮಾಡಿ, ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸಗೊಳಿಸಿದ್ದಾರೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದರೂ, ದೂರು ಸ್ವೀಕರಿಸಿದ ಪೀಣ್ಯ ಪೊಲೀಸರು ಕೇವಲ ಎನ್‌ಸಿಆರ್ (NCR) ಹಾಕಿ ಕೈತೊಳೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Read Full Story

09:21 AM (IST) Aug 05

ಕೈ ಮೇಲಿನ ಹಚ್ಚೆ ತೋರಿಸಿ ಅಕುಲ್ ಬಾಲಾಜಿ ಭಾವುಕ ; ಆಂಧ್ರ ಹುಡುಗ ಕನ್ನಡಿಗನಾಗಿದ್ದೇಗೆ?

ಕನ್ನಡ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ತಮ್ಮ ಕೈ ಮೇಲಿರುವ  ಎಂಬ ಹಚ್ಚೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜನ್ಮ ಕೊಟ್ಟಿದ್ದು ತಂದೆ-ತಾಯಿ, ಆದರೆ ಬದುಕು ಕೊಟ್ಟಿದ್ದು ಕನ್ನಡ ನಾಡು ಮತ್ತು ಕನ್ನಡಿಗರು ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

Read Full Story

08:52 AM (IST) Aug 05

ರೈತರೇ ಹೊಡೀರಿ ಹಲಗಿ - ತುಂಗಭದ್ರಾ ಜಲಾಶಯಕ್ಕೆ ಪ್ರಥಮ ಬಾರಿ ಒಂದು ಲಕ್ಷ ಕ್ಯೂಸೆಕ್‌ ನೀರು!

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಈ ವರ್ಷ ಮೊದಲ ಬಾರಿಗೆ 1,08,531 ಕ್ಯೂಸೆಕ್‌ ನೀರು ಹರಿದುಬಂದಿದೆ. ಇದರಿಂದ ಜಲಾಶಯದಲ್ಲಿ 53.648 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಹಲವು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿದೆ.
Read Full Story

08:26 AM (IST) Aug 05

ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ-169 ಅಭಿವೃದ್ಧಿ - ಹಲವೆಡೆ ಭೂಕುಸಿತ!

ಬಹುನಿರೀಕ್ಷಿತ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯ ಹಲವೆಡೆ ಮಣ್ಣು ಕುಸಿತದ ಆತಂಕ ಎದುರಾಗಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ಹೆಚ್ಚುತ್ತಿದೆ. ಇದರಿಂದಾಗಿ ಸ್ಥಳೀಯರು ಶಾಶ್ವತ ಪರಿಹಾರ ಮತ್ತು ಹಾನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
Read Full Story

08:25 AM (IST) Aug 05

ಸಚಿವರಾಗ್ತಿದ್ದಂತೆ ಅಖಾಡಕ್ಕಿಳಿದ ವಿಜಯಾನಂದ ಕಾಶಪ್ಪನವರ್ - ಇಂದು ಬಾಗಲಕೋಟೆಯಲ್ಲಿ ಬರ ವೀಕ್ಷಣೆ

ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ

Read Full Story

08:10 AM (IST) Aug 05

ನಿರೀಕ್ಷಣಾ ಜಾಮೀನು ಪಡೆದಿದ್ರೂ ಬಂಧನ; ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ 9 ಲಕ್ಷ ದಂಡ

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರೂ ಇಂಗ್ಲೆಂಡ್‌ನಿಂದ ಬಂದ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿ, ಆತನ ತಂದೆಗೆ ಕಿರುಕುಳ ನೀಡಿದ್ದ ಪೊಲೀಸರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ತಂದೆ-ಮಗನಿಗೆ 9 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
Read Full Story

07:57 AM (IST) Aug 05

ಬರ-ಅತಿವೃಷ್ಟಿ ಅಧ್ಯಯನ - 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?

ರಾಜ್ಯದಲ್ಲಿನ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿದ್ದಾರೆ. ಈ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿ ಅರಿತು ಡಿಸಿಎಂಗೆ ವರದಿ ಸಲ್ಲಿಸಲಿದ್ದಾರೆ.

Read Full Story

07:55 AM (IST) Aug 05

ಪೊಲೀಸರೇ ಗಂಡನನ್ನು ಕೊಂದ್ರು, ಮಕ್ಕಳನ್ನ ಎದೆಗವಚಿಕೊಂಡು ವಾಹನದ ಹಿಂದೆ ಓಡಿದೆ - ಶೈನಾಜ್ ಬೇಗಂ

ಕುಡಿದು ಗಲಾಟೆ ಮಾಡುತ್ತಿದ್ದ ಪತಿಗೆ ಬುದ್ಧಿ ಹೇಳಲು ಠಾಣೆಗೆ ಕರೆತಂದ ಪತ್ನಿ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪೊಲೀಸರ ಅಮಾನುಷ ಹಲ್ಲೆಯಿಂದಲೇ ತನ್ನ ಪತಿ ಖಲೀಲ್ ಸಾಬ್ ಸಾವನ್ನಪ್ಪಿದ್ದು, ಇದು ಲಾಕಪ್ ಸಾವು ಎಂದು ಪತ್ನಿ ಶೈನಾಜ್ ಬೇಗಂ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದು, ಪ್ರಕರಣಕ್ಕೆ ರಾಜಕೀಯ ಮುಖಂಡರು ಧ್ವನಿಗೂಡಿಸಿದ್ದಾರೆ.
Read Full Story

07:43 AM (IST) Aug 05

Hubballi - ಆ್ಯಪ್ ಆಧಾರಿತ ಆಟೋ ಸೇವೆ ಸ್ಥಗಿತಗೊಳಿಸುವಂತೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ, ಕರ್ನಾಟಕ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ಓಲಾ, ಊಬರ್‌ನಂತಹ ಆ್ಯಪ್ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಆ್ಯಪ್‌ಗಳಿಂದ ತಮ್ಮ ಆದಾಯ ಕುಸಿದು ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ, ಸರ್ಕಾರ ತಕ್ಷಣವೇ ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.
Read Full Story

07:33 AM (IST) Aug 05

CM ಡಿಕೆ ಶಿವಕುಮಾರ್‌ಗೆ MB ಪಾಟೀಲರನ್ನು ಸಚಿವರಾಗಿಸೋ ಮನಸ್ಸಿರಲಿಲ್ಲ - ಶಾಸಕ ಯತ್ನಾಳ

ಡಿ.ಕೆ. ಶಿವಕುಮಾರ್‌ಗೆ ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿಸುವ ಮನಸ್ಸಿರಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ನಡುವಿನ ಜಗಳ ತಾತ್ಕಾಲಿಕ ಎಂದಿರುವ ಅವರು, ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯ ಗೊಂದಲಗಳ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
Read Full Story

07:11 AM (IST) Aug 05

ರಾಯಚೂರು - ಬುಲೆಟ್ ಮೇಲೆ ಹೊರಟಿದ್ದವನ ಮೇಲೆ ದುಷ್ಕರ್ಮಿಗಳಿಂದ ಭೀಕರ ಅಟ್ಯಾಕ್! ನಡುರಸ್ತೆಯಲ್ಲೇ ಉಸಿರು ಚೆಲ್ಲಿದ ಯುವಕ!

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಬಳಿ, ಬುಲೆಟ್‌ ಬೈಕ್‌ನಲ್ಲಿ ಹೊರಟಿದ್ದ ಭೂಮಾನಂದ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಬ್ಬೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ.

Read Full Story

More Trending News