Published : Jun 30, 2025, 06:43 AM ISTUpdated : Jun 30, 2025, 11:38 PM IST

Karnataka News Live: ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಶೀಘ್ರದಲ್ಲೇ ಲಾಂಚ್

ಸಾರಾಂಶ

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸತತ ಮೂರು ದಿನಗಳ ಕಾಲ 42 ಮಂದಿ ಕಾಂಗ್ರೆಸ್‌ ಶಾಸಕರೊಂದಿಗೆ ಮುಖಾಮುಖಿ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

11:38 PM (IST) Jun 30

ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಶೀಘ್ರದಲ್ಲೇ ಲಾಂಚ್

ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್‌ಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಬಳಿ ತಲುಪಿರುವ ಈ ಕಾರಿನ ಬೆಲೆ ಎಷ್ಟು?

Read Full Story

11:09 PM (IST) Jun 30

ಹುಲಿಗೆ ವಿಷ ಹಾಕುವುದನ್ನು ಹೀಗೂ ತಪ್ಪಿಸಬಹುದು,ಚಿತ್ರಕಲಾವಿದೆ ಸುನೀತಾ ಸಾಹಸಗಾಥೆ

ಮಲೆ ಮಹದೇಶ್ವರದಲ್ಲಿ ಹಸುವಿನ ಮೇಲೆ ದಾಳಿ ದ್ವೇಷಕ್ಕೆ ಮರಿ ಹಾಗೂ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಿಗೆವ ವಿಷ ಹಾಕಿ ಕೊಂದ ಪ್ರಕರಣ ಕೋಲಾಹಲ ಸೃಷ್ಟಿಸಿದೆ. 25-30 ವರ್ಷದ ಹಿಂದೆ ಇದೇ ಪರಿಸ್ಥಿತಿ ಬಂಡಿಪುರದಲ್ಲೂ ಇತ್ತು. ಆದರೆ ಅಲ್ಲೀಗ ಈ ವಿಷದ ಮನಸ್ಥಿತಿ ಇಲ್ಲ. ಇದಕ್ಕೆ ಕಾರಣ ಚಿತ್ರಕಲಾವಿದೆ ಸುನೀತಾ.

Read Full Story

10:39 PM (IST) Jun 30

ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ, ಮತ್ತೊರ್ವ ಆರೋಪಿ ಬಂಧನ

ಮಂಗಳೂರಿನಲ್ಲಿ ನಡೆದ ಸರಣಿ ಹ-ತ್ಯೆ ಪ್ರಕರಣಗಳ ತನಿಖೆ ತೀವ್ರಗೊಂಡಿದೆ. ಸುಹಾಸ್ ಶೆಟ್ಟಿ ಹ-ತ್ಯೆ ಬಳಿಕ ನಡೆದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

09:41 PM (IST) Jun 30

ಬೆಂಗಳೂರಿಗರಿಗೆ ಮತ್ತೊಂದು ಶಾಕ್, ಶೀಘ್ರದಲ್ಲೇ ಆಟೋ ದರ ಏರಿಕೆ

ಹಾಲಿನ ದರ ಏರಿಕೆ ಸೇರಿದಂತೆ ಕರ್ನಾಟಕದ ಸಾಲು ಸಾಲು ಬೆಲೆ ಏರಿಕೆಯಾಗುತ್ತಿದೆ. ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಶೀಘ್ರದಲ್ಲೇ ಬೆಂಗಳೂರು ಆಟೋ ದರ ಏರಿಕೆಯಾಗುತ್ತಿದೆ.

Read Full Story

08:57 PM (IST) Jun 30

ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಶಾಕ್, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಪಂದ್ಯ ನಡೆಸುವುದು ಕಷ್ಟವಾಗಲಿದೆ. ಆರ್‌ಸಿಬಿ ಕಾಲ್ತುಳಿತ ಪ್ರಕರಣದಿಂದ ಇದೀಗ ಕ್ರೀಡಾಂಗಣಕ್ಕೀ ಶಾಕ್ ಎದುರಾಗಿದೆ. ಅಗ್ನಿಶಾಮಕ ದಳ ಸೂಚನೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

 

Read Full Story

07:45 PM (IST) Jun 30

ಭಾರತದ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ನಂದಿನಿಗೆ 4ನೇ ಸ್ಥಾನ, ನಂ.1 ಯಾರು?

ಭಾರತದ ಟಾಪ್ ಆಹಾರ ಉತ್ಪನ್ನ ಬ್ರ್ಯಾಂಡ್ ಯಾವುದು? ಈ ಪ್ರಶ್ನೆಗೆ ಸರ್ವೇ ಉತ್ತರ ನೀಡಿದೆ. ವಿಶೇಷ ಅಂದರೆ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಕರ್ನಾಟಕದ ನಂದಿನಿ 4ನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ.

 

Read Full Story

07:40 PM (IST) Jun 30

ಹಾಸನದಲ್ಲಿ ಮತ್ತೆ ರಣಕೇಕೆ ಹಾಕಿದ ಹಾರ್ಟ್ಅಟ್ಯಾಕ್; ಆಟೋ ಓಡಿಸುತ್ತಲೇ ಪ್ರಾಣ ಬಿಟ್ಟ ಡ್ರೈವರ್!

ಹಾಸನದಲ್ಲಿ ಒಂದೇ ದಿನದಲ್ಲಿ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 40 ದಿನಗಳಲ್ಲಿ ಒಟ್ಟು 21 ಹೃದಯಾಘಾತ ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.
Read Full Story

07:32 PM (IST) Jun 30

ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!

ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನ. ಹಲವು ಬಿಗ್ ಬಾಸ್ ಸ್ಪರ್ಧಿಗಳ ಅಕಾಲಿಕ ಮರಣದ ಬೆನ್ನಲ್ಲೇ ಶೆಫಾಲಿ ಸಾವು ನಡೆದಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.
Read Full Story

07:00 PM (IST) Jun 30

ರಾಜ್ಯಾಧ್ಯಕ್ಷರ ಆಯ್ಕೆ ಘೋಷಣೆ ಮೊದಲೇ ಬಿಜೆಪಿಗೆ ಶಾಕ್, ಪಕ್ಷಕ್ಕೆ ಶಾಸಕ ಟಿ ರಾಜ ರಾಜೀನಾಮೆ

ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಅಂತಿಮ ಹಂತ ತಲುಪಿದೆ. ಆದರೆ ಘೋಷಣೆಗೂ ಮೊದಲೇ ಬಿಜೆಪಿಗೆ ಶಾಕ್ ಎದುರಾಗಿದೆ. ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಬೆನ್ನಲ್ಲೇ ಪ್ರಮುಖ ನಾಯಕ, ಶಾಸಕ ಟಿ ರಾಜ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

Read Full Story

06:56 PM (IST) Jun 30

ಕೆಲ ಮಕ್ಕಳು ವಯಸ್ಸಿಗೆ ತಕ್ಕಂಗೆ ಬೆಳವಣಿಗೆ ಆಗ್ದೇ ಇರೋದಕ್ಕೆ ಕಾರಣ ಏನು?

ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಠಿಕಾಂಶ, ಹಾರ್ಮೋನುಗಳು, ದೈಹಿಕ ಚಟುವಟಿಕೆ ಮತ್ತು ನಿದ್ರೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣ ಏನು ಎಂದು ಈಗ ನೋಡೋಣ.

Read Full Story

06:52 PM (IST) Jun 30

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ 10-10-10 ಫಾರ್ಮುಲಾ ಫಾಲೋ ಮಾಡಿ!

ಪ್ರತಿದಿನ ಕೇವಲ ಮೂರು ಸಣ್ಣ ಅಭ್ಯಾಸಗಳಿಂದ ಸಕ್ಕರೆ ಕಂಟ್ರೋಲ್ ಸಾಧ್ಯ. 10-10-10 ಫಾರ್ಮುಲಾ ರಕ್ತದಲ್ಲಿ ಸಕ್ಕರೆ ಮಟ್ಟನ ಸಮತೋಲನ ಮಾಡುತ್ತದೆ.

Read Full Story

06:36 PM (IST) Jun 30

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿಯ ಗೂಂಡಾಗಿರಿ - ಸಿಪಿಐಎಂನ ವೃದ್ಧ ನಾಯಕನ ರಸ್ತೆಯಲ್ಲಿ ಬೀಳಿಸಿ ಹಲ್ಲೆ

ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಟಿಎಂಸಿ ಮಹಿಳಾ ನಾಯಕಿ ಬೇಬಿ ಕೋಲಿ, ಸಿಪಿಐಎಂ ಹಿರಿಯ ನಾಯಕ ಅನಿಲ್ ದಾಸ್‌ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.

Read Full Story

06:28 PM (IST) Jun 30

ಎಂಐಟಿ ಬೆಂಗಳೂರು ಕಾಲೇಜಿಗೆ ಹಿರಿಮೆ, ಬರೋಬ್ಬರಿ ₹52 ಲಕ್ಷದ ಪ್ಯಾಕೇಜ್‌ ಉದ್ಯೋಗ ಪಡೆದ ವಿದ್ಯಾರ್ಥಿ!

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಬೆಂಗಳೂರು ತನ್ನ ಮೊದಲ ಬ್ಯಾಚ್ ಪ್ಲೇಸ್‌ಮೆಂಟ್‌ನಲ್ಲಿ ಅದ್ಭುತ ಸಾಧನೆ ಮಾಡಿದೆ. ಒಬ್ಬ ವಿದ್ಯಾರ್ಥಿ ₹52 ಲಕ್ಷದ ವಾರ್ಷಿಕ ಪ್ಯಾಕೇಜ್ ಪಡೆದಿದ್ದಾರೆ, ಇದು ಸಂಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
Read Full Story

06:11 PM (IST) Jun 30

ನಾವು ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್ ಬ್ಯಾನ್; ಸಚಿವ ಪ್ರಿಯಾಂಕ್ ಖರ್ಗೆ

ಆರ್‌ಎಸ್‌ಎಸ್ ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ದೆವು. ಕೈಕಾಲು ಹಿಡಿದು ವಾಪಸ್ ಬಂದರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯುವ RSS ಆಗ್ರಹವನ್ನು ಖಂಡಿಸಿದರು

Read Full Story

06:05 PM (IST) Jun 30

ಟೀಚರ್‌ನಿಂದ ತಪ್ಪಿಸಿಕೊಂಡು ಶಾಲೆಯಿಂದ ಎಸ್ಕೇಪ್ ಪ್ರಯತ್ನ, ಮುದ್ದು ಬಾಲಕನ ವಿಡಿಯೋ ವೈರಲ್

ಟೀಚರ್ ಕೈಯಿಂದ ತಪ್ಪಿಸಿಕೊಂಡು ನನಗೆ ಶಾಲೆ ಬೇಡ ಎಂದು ಓಡಲು ಆರಂಭಿಸಿದ ಮುದ್ದು ಬಾಲಕನ ಟೀಚರ್ ಬೆನ್ನಟ್ಟಿದ ಘಟನೆ ನಡೆದಿದೆ. ಏನು ಕೊಟ್ಟರೂ ಸಮಾಧಾನವಾಗದ ಈ ಬಾಲಕನ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

 

Read Full Story

05:44 PM (IST) Jun 30

ಬಾಡಿಗೆದಾರರ ಡೆಪಾಸಿಟ್‌ ನಿಂದ ಶೇ.60ಕ್ಕೂ ಹೆಚ್ಚು ಕಡಿತ, ಬೆಂಗಳೂರು ಮನೆ ಮಾಲೀಕರ ಕಾರಣ ಒಂದೆರಡಲ್ಲ!

ಬೆಂಗಳೂರಿನಲ್ಲಿ ಮನೆಮಾಲೀಕರೊಬ್ಬರು ಬಾಡಿಗೆದಾರರ ಠೇವಣಿಯಿಂದ ₹60,000ಕ್ಕೂ ಹೆಚ್ಚು ಹಣವನ್ನು ಕಡಿತಗೊಳಿಸಿರುವ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೇಯಿಂಟಿಂಗ್, ದಲ್ಲಾಳಿ ಶುಲ್ಕ, ತುಕ್ಕು ಹಿಡಿದ ಅಡುಗೆಮನೆ ರ್ಯಾಕ್‌ನಂತಹ  ಕಾರಣ ನೀಡಿ ಠೇವಣಿ ಕಡಿತಗೊಳಿಸಲಾಗಿದೆ.

Read Full Story

05:30 PM (IST) Jun 30

ಫೇಕ್ ನ್ಯೂಸ್ ಕಾನೂನು ತಡೆ ಕಾನೂನು ಬಗ್ಗೆಯೇ ಮಾಧ್ಯಮಗಳಿಂದ ತಪ್ಪು ಸುದ್ದಿ ಬಿತ್ತರ; ಸಚಿವ ಪ್ರಿಯಾಂಕ್ ಖರ್ಗೆ

ಫೇಕ್ ನ್ಯೂಸ್ ಹರಡುವುದನ್ನು ತಡೆಯಲು ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ಕಾಯ್ದೆಯ ಬಗ್ಗೆಯೇ ಮಾಧ್ಯಮಗಳು ತಪ್ಪು ಸುದ್ದಿಗಳನ್ನು ಹರಡುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಶಾಸಕರ ಅಸಮಾಧಾನದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.
Read Full Story

05:17 PM (IST) Jun 30

ಪ್ರತಿ ದಿನ ಇನ್‌ಸ್ಟಾಂಟ್ ಕಾಫಿ ಕುಡಿಯುತ್ತೀರಾ? ದೃಷ್ಠಿ ದೋಷ ಎಚ್ಚರಿಕೆ ನೀಡಿದ ಅಧ್ಯಯನ ವರದಿ

ಪ್ರತಿ ದಿನ ಇನ್‌ಸ್ಟಾಂಟ್ ಕಾಫಿ ಕುಡಿಯುವ ಅಭ್ಯಾಸವಿದೆಯಾ? ಹೊಸ ಅಧ್ಯಯನ ವರದಿ ಪ್ರಕಾರ, ಇನ್‌ಸ್ಟಾಂಟ್ ಕಾಫಿಯಿಂದ ದೃಷ್ಟಿದೋಷ ಸಾಧ್ಯತೆ ಇದೆ ಎಂದಿದೆ. ಹಾಗಾದಾರೆ ಯಾವ ಕಾಫಿ ಕುಡಿಯಬಹುದು?

Read Full Story

05:17 PM (IST) Jun 30

ಮಾಡಲ್ಲ ಅಂದಿದ್ರೂ ಮತ್ತೆ ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ ಸೀಸನ್ 12' ಹೋಸ್ಟ್ ಮಾಡಲು ಒಪ್ಪಿದ್ದೇಕೆ?

ಇದೀಗ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸೀಸನ್ 12 ಹೋಸ್ಟ್ ಮಾಡಲಿರುವ ಕಿಚ್ಚ ಸುದೀಪ್ ಅವರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. 

Read Full Story

05:16 PM (IST) Jun 30

ವಾಹನ ಸವಾರರಿಗೆ NHAI ಶಾಕ್‌, ಬೆಂಗಳೂರಲ್ಲಿ ನಾಳೆಯಿಂದ ಟೋಲ್‌ ದರ ಏರಿಕೆ!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಟೋಲ್‌ಗಳಲ್ಲಿ ದರ ಹೆಚ್ಚಳವಾಗಿದೆ. ಕಾರು, ಜೀಪ್, ಲಘು ವಾಹನ, ಭಾರಿ ವಾಹನಗಳ ದರಗಳು ಏರಿಕೆಯಾಗಿವೆ. ಜುಲೈ 1, 2025 ರಿಂದ ಹೊಸ ದರಗಳು ಜಾರಿಗೆ ಬರಲಿವೆ.
Read Full Story

05:10 PM (IST) Jun 30

ತಾವರೆಕೆರೆಗೆ ಈಗ ನೇರಳೆ ಮೆರುಗು - ಕೊಡಗಿನ ಕುಶಾಲನಗರದಲ್ಲಿ ಅಪರೂಪದ ಪುಷ್ಪ ಸೊಬಗು

ಅರೆ ಇದೇನಪ್ಪ.... ಇಲ್ಲಿದ್ದ ಕೆರೆ ಎಲ್ಲೋಯ್ತು...? ಇಲ್ಲಿ ಕೆರೆ ಮಾಯವಾಗಿ ನೇರಳೆ ಬೆಡಗಿ ಬಂದಿದ್ದು ಹೇಗೆ ಎಂಬುದು ಈಗ ಇಲ್ಲಿನ ಸ್ಥಳೀಯರ ಪ್ರಶ್ನೆ ಜೊತೆಗೆ ಈ ಪ್ರದೇಶ ಈಗ ಎಲ್ಲರ ಫೇವರೇಟ್ ಹಾಟ್ ಸ್ಪಾಟ್ ಆಗಿದೆ ಅದೆಲ್ಲಿ ಅಂತ ನೋಡೋಣ ಬನ್ನಿ

Read Full Story

04:44 PM (IST) Jun 30

ಬಟಾಣಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಮಗು ಸಾವು - ಇಬ್ಬರು ಮಕ್ಕಳ ಕಳೆದುಕೊಂಡು ಪೋಷಕರ ಗೋಳಾಟ

ಗೋಲ್ಗಪ್ಪಕ್ಕಾಗಿ ಬಟಾಣಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ದುರಂತ ಎಂದರೆ ಎರಡು ವರ್ಷಗಳ ಹಿಂದೆ ಇದೇ ರೀತಿಯ ದುರಂತದಲ್ಲಿ ಮಗುವಿನ ಸಹೋದರಿ ಕೂಡ ಸಾವನ್ನಪ್ಪಿದ್ದಳು.
Read Full Story

04:09 PM (IST) Jun 30

ನಟಿ ಶೆಫಾಲಿ ಜರಿವಾಲ ಸಾವಿನ ಮುಖ್ಯ ಕಾರಣ ಬಹಿರಂಗಪಡಿಸಿದ ಪೊಲೀಸ್

ನಟಿ ಶೆಫಾಲಿ ಜರಿವಾಲ ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಹೃದಯಾಘಾತ, ಡಯೆಟ್, ಸೌಂದರ್ಯ ವರ್ಧಕ ಔಷಧಿ ಸೇರಿದಂತೆ ಸಾವಿಗೆಹಲವು ಕಾರಣಗಳು ಕೇಳಿಬಂದಿತ್ತು. ಇದೀಗ ಪೊಲೀಸರು ವೈದ್ಯರು ಹೇಳಿದ ಸಾವಿನ ಕಾರಣ ಬಹಿರಂಗಪಡಿಸಿದ್ದಾರೆ.

Read Full Story

04:07 PM (IST) Jun 30

ಸರ್ಕಾರದ ಹೆಸರು ಬದಲಾವಣೆ ವಿವಾದ, ರಾಮನಗರ ಈಗ ಬೆಂ.ದಕ್ಷಿಣ - ಮಂಗಳೂರು ಬೆಂಗಳೂರು ಕರಾವಳಿ ಆಗುತ್ತಾ!?

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಸರ್ಕಾರದ ನಿರ್ಧಾರಕ್ಕೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಬಳಕೆದಾರರು ಈ ನಡೆಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಂದ ಪ್ರೇರಿತವಾದ ರಾಜಕೀಯ ಪ್ರೇರಿತ ಮರುಬ್ರ್ಯಾಂಡಿಂಗ್ ಎಂದು ಟೀಕಿಸಿದ್ದಾರೆ.  

Read Full Story

03:50 PM (IST) Jun 30

ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋದ ಯುವತಿಯರು, ಜಲಪಾತದ ಅಂಚಿನಲ್ಲಿ ರಕ್ಷಣೆ ವಿಡಿಯೋ

ಭಾರಿ ಮಳೆ, ದಿಢೀರ್ ಪ್ರವಾಹ ಪರಿಸ್ಥಿತಿ ಸುಂದರ ಪ್ರವಾಸವನ್ನು ದುರಂತ ಮಾಡುವ ಸಾಧ್ಯತೆ ಹೆಚ್ಚು.ಹೀಗೆ ಜಲಪಾತ ವೀಕ್ಷಿಸಲು ತೆರಳಿದ್ದ 6 ಯುವತಿರು ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಲಪಾತದ ಅಂಚಿನಿಂದ ಯುವತಿಯರ ರಕ್ಷಿಸಲಾಗಿದೆ. ವಿಡಿಯೋ ಇಲ್ಲಿದೆ.

Read Full Story

03:34 PM (IST) Jun 30

ಭಾರಿ ಮಳೆಗೆ ಬಾಯ್ತೆರೆದ ರಸ್ತೆ - ಬೈಕ್ ಸಮೇತ ಹೊಂಡಕ್ಕೆ ಬಿದ್ದ ಸವಾರ

ಚಂಡೀಗಢದಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯೊಂದು ಕುಸಿದು ಬೈಕ್ ಸವಾರನೊಬ್ಬ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದವರು ಸಕಾಲಕ್ಕೆ ಆಗಮಿಸಿ ಸವಾರನನ್ನು ರಕ್ಷಿಸಿದ್ದಾರೆ. ಈ ಘಟನೆ ಕಳಪೆ ಕಾಮಗಾರಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
Read Full Story

03:31 PM (IST) Jun 30

ಡಿಕೆಶಿ ಕೈ ಮೇಲೆತ್ತಿ 'ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತದೆ' ಎಂದ ಸಿಎಂ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ ತಿಂಗಳಲ್ಲೇ ಕೆ.ಆರ್.ಎಸ್. ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಒಗ್ಗಟ್ಟಿನಿಂದ ಇರುವುದಾಗಿ ಪ್ರದರ್ಶಿಸಿದರು. ಶ್ರೀರಾಮುಲು ಅವರ ಟೀಕೆಗೆ ತಿರುಗೇಟು ನೀಡಿದರು.
Read Full Story

03:00 PM (IST) Jun 30

ಪೆಟ್ರೋಲ್ ಅಥವಾ ಡೀಸೆಲ್, EOL ವಾಹನಗಳಿಗೆ ಜುಲೈ 1ರಿಂದ ಸಿಗಲ್ಲ ಇಂಧನ

ಪೆಟ್ರೋಲ್ ಅಥವಾ ಡೀಸೆಲ್ ವಾಹನವೇ ಆಗಿರಲಿ, ಆದರೆ EOL ಆಗಿದ್ದರೆ ಅಂತಹ ವಾಹನಗಳಿಗೆ ಇಂಧನ ಸಿಗುವುದಿಲ್ಲ. ರಾಜಧಾನಿ ವ್ಯಾಪ್ತಿಯ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಿಗುವುದಿಲ್ಲ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದರೆ 5 ರಿಂದ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ.

Read Full Story

02:56 PM (IST) Jun 30

ವೃದ್ಧ ತಾಯಿ ಆರೈಕೆಗಾಗಿ ಕೊಲೆ ಆರೋಪಿಯ ಶಿಕ್ಷೆಯೇ ಅಮಾನತು! ಏನಿದು ಪ್ರಕರಣ?

ಅನಾರೋಗ್ಯಪೀಡಿತ ತಾಯಿ ಮತ್ತು ಮಗನ ಆರೈಕೆಗಾಗಿ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 

Read Full Story

02:44 PM (IST) Jun 30

ಏರ್‌ಟೆಲ್ 28 ದಿನದ ರಿಚಾರ್ಜ್‌ ಕೈಬಿಡಿ; ಇಲ್ಲಿವೆ ನೋಡಿ 365 ದಿನದ ಬೆಸ್ಟ್ ಪ್ಲ್ಯಾನ್‌ಗಳು!

ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ವಿವಿಧ ರೀಚಾರ್ಜ್ ಪ್ಯಾಕ್‌ಗಳನ್ನು ನೀಡುತ್ತದೆ. ₹1849 ರಿಂದ ₹4000 ವರೆಗಿನ ಬೆಲೆಯಲ್ಲಿ ಲಭ್ಯವಿರುವ ಈ ಪ್ಯಾಕ್‌ಗಳು ವಿಭಿನ್ನ ಡೇಟಾ, ಕರೆ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿವೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ಯಾಕ್ ಆಯ್ಕೆ ಮಾಡಿಕೊಳ್ಳಬಹುದು.
Read Full Story

02:41 PM (IST) Jun 30

ಬೆಂಗಳೂರಿನ ಬೆಳಗಿನ ಭಯಾನಕ ಪ್ರಯಾಣ 'ಟಿಕ್ಕಿಂಗ್ ಟೈಮ್ ಬಾಂಬ್' ವೈರಲ್ ಆಯ್ತು ಪೋಸ್ಟ್

ಬೆಂಗಳೂರು ನಿವಾಸಿಯೊಬ್ಬರು ತಮ್ಮ ಬೆಳಗಿನ ಜಾವದ ಪ್ರಯಾಣದಲ್ಲಿ ಎದುರಿಸಿದ ಎರಡು ಆತಂಕಕಾರಿ ಘಟನೆಗಳನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆ ಟ್ರಾಫಿಕ್ ಜಾಮ್ ಮತ್ತು ರಸ್ತೆ ಅಪಘಾತದಿಂದಾಗಿ ನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.  

Read Full Story

02:24 PM (IST) Jun 30

ಮೆಸ್ಸಿ ಪ್ರತಿಮೆಗಳ ಜತೆ ಆಡುತ್ತಿದ್ದಾರೆಯೇ ಹೊರತು ತಂಡಕ್ಕಾಗಿ ಅಲ್ಲ - ಹೊಸ ಬಾಂಬ್ ಸಿಡಿಸಿದ ಝಲ್ಟಾನ್

ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಇಂಟರ್ ಮಿಯಾಮಿ ಸೋಲಿನ ಬೆನ್ನಲ್ಲೇ ಮೆಸ್ಸಿ ಆಟದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಝ್ಲಾಟನ್ ಇಬ್ರಾಹಿಮೊವಿಕ್, ಮೆಸ್ಸಿ ತಂಡದ ಸದಸ್ಯರೊಂದಿಗೆ ಅಲ್ಲ, ಪ್ರತಿಮೆಗಳೊಂದಿಗೆ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.

Read Full Story

02:19 PM (IST) Jun 30

ಧಾರಾಕಾರ ಮಳೆಗೆ ಹಠಾತ್ ಕುಸಿದು ಬಿದ್ದ ಐದಂತಸ್ಥಿನ ಕಟ್ಟಡ - ದೃಶ್ಯ ಕ್ಯಾಮರಾದಲ್ಲಿ ಸೆರೆ

ಶಿಮ್ಲಾದಲ್ಲಿ ಭಾರಿ ಮಳೆಯಿಂದಾಗಿ ಐದು ಅಂತಸ್ತಿನ ಕಟ್ಟಡ ಕುಸಿದಿದೆ. ಚಮ್ಯಾನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದ್ದು, ಕಟ್ಟಡದಲ್ಲಿದ್ದವರನ್ನು ಮೊದಲೇ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Read Full Story

02:10 PM (IST) Jun 30

ಸ್ವಾತಂತ್ರ್ಯ ಹೋಗಿದ್ದೇ ತುರ್ತುಪರಿಸ್ಥಿತಿಯಿಂದ, ಅಂಬೇಡ್ಕರ್, ಸಂವಿಧಾನಕ್ಕೆ ಅವಮಾನ ಮಾಡಿದ್ದೇ ಕಾಂಗ್ರೆಸ್ - ಎಸ್‌ ಸುರೇಶ್ ಕುಮಾರ್ ಕಿಡಿ

ಕಾಂಗ್ರೆಸ್‌ನಿಂದ ಹೇರಿದ ತುರ್ತುಪರಿಸ್ಥಿತಿಯು ದೇಶದ ಸ್ವಾತಂತ್ರ್ಯವನ್ನು ಕಸಿದುಕೊಂಡಿತು ಮತ್ತು ಸಂವಿಧಾನವನ್ನು ನಾಶಮಾಡಿತು ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. 

Read Full Story

01:54 PM (IST) Jun 30

ಡಿಸೆಂಬರ್‌ನಲ್ಲೇ ಕಾಂಗ್ರೆಸ್ ಸರ್ಕಾರ ಪತನ; ಬಿಜೆಪಿ ಅಧಿಕಾರಕ್ಕೆ - ಶಾಕಿಂಗ್ ಕಾರಣ ಕೊಟ್ಟ ಕಾರಜೋಳ!

ಚಳ್ಳಕೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಪಕ್ಷದ ಪತನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

Read Full Story

01:34 PM (IST) Jun 30

ರಾತ್ರಿ ಮಲಗಿದ್ದ ತಾಯಿ-ಮಗನಿಗೆ ಕಚ್ಚಿದ ಹಾವು! ಬೆಳಗಾಗುವಷ್ಟರಲ್ಲಿ ಇಬ್ಬರೂ ಸಾವು!

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ತಾಯಿ ಮತ್ತು ಮಗನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ರಾತ್ರಿ ಮಲಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಹಾವು ಕಚ್ಚಿದ ವಿಷಯ ತಡವಾಗಿ ಗೊತ್ತಾದ್ದರಿಂದ ಚಿಕಿತ್ಸೆ ತಕ್ಷಣವೇ ದೊರೆಯದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Read Full Story

12:58 PM (IST) Jun 30

ಮಂಗಳೂರಿಗೆ ಶಿಫ್ಟ್‌ ಆಗಲು ನಿರಾಕರಿಸಿ ರಾಜೀನಾಮೆ ನೀಡಿದ ಎಂಡಿ, ಕರ್ಣಾಟಕ ಬ್ಯಾಂಕ್‌ ಷೇರು ಭಾರೀ ಕುಸಿತ!

ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಗುರುತಿಸಲು ಶೋಧನಾ ಸಮಿತಿಯನ್ನು ರಚಿಸಲಾಗಿದೆ ಮತ್ತು ಹೊಸ ಕಾರ್ಯನಿರ್ವಾಹಕ ನಿರ್ದೇಶಕರನ್ನು ನೇಮಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

 

Read Full Story

12:55 PM (IST) Jun 30

ಮುಂಗಾರಿಗೆ ಇಂದಿಗೆ ಒಂದು ತಿಂಗಳು, ಈ 12 ಜಿಲ್ಲೆಗಳಲ್ಲಿ ಮಳೆ ಕೊರತೆ!

ರಾಜ್ಯದಲ್ಲಿ ಜೂನ್ ತಿಂಗಳ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿದ್ದರೂ, ಕೆಲವು ಜಿಲ್ಲೆಗಳಲ್ಲಿ ಗಮನಾರ್ಹ ಕೊರತೆ ಕಂಡುಬಂದಿದೆ. ಜುಲೈ 3 ರಿಂದ ಮಳೆ ಚುರುಕಾಗುವ ನಿರೀಕ್ಷೆಯಿದೆ.
Read Full Story

12:48 PM (IST) Jun 30

ಹಾಸನದಲ್ಲಿ ಮತ್ತೆ ಕಾಡಿದ ಹೃದಯಾಘಾತ, ಒಂದೇ ದಿನ ನಾಲ್ವರ ಸಾವು; 40 ದಿನಗಳಲ್ಲಿ 21 ಮಂದಿ ಬಲಿ

ಹಾಸನ ಜಿಲ್ಲೆಯಲ್ಲಿ ಕೇವಲ 40 ದಿನಗಳಲ್ಲಿ 21 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಮಹಿಳೆ, ಉಪನ್ಯಾಸಕ, ಯೋಧ ಮತ್ತು ಸರ್ಕಾರಿ ನೌಕರ ಸೇರಿದಂತೆ ವಿವಿಧ ವಯೋಮಾನದವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

Read Full Story

12:46 PM (IST) Jun 30

ತೊರೆದು ಹೋಗುತ್ತಿರುವುದಕ್ಕೆ ಕ್ಷಮಿಸಿಬಿಡು ಕಂದ - ಪತ್ರದೊಂದಿಗೆ ನವಜಾತ ಕಂದನ ಬಿಟ್ಟು ಹೋದವರಾರು?

ಮುಂಬೈನಲ್ಲಿ ಮದುವೆಯಾಗದ ಜೋಡಿಯೊಂದು ತಮ್ಮ ನವಜಾತ ಶಿಶುವನ್ನು ಅನಾಥಾಶ್ರಮದ ಬಳಿ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಪೊಲೀಸರು ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದು, ಮಗುವಿನ ಭವಿಷ್ಯದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ನಿರ್ಧರಿಸಲಿದೆ.
Read Full Story

More Trending News