Published : Jan 28, 2026, 07:26 AM ISTUpdated : Jan 28, 2026, 11:18 PM IST

State News Live: ಬಾಗಲಕೋಟೆ - ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!

ಸಾರಾಂಶ

ಬೆಂಗಳೂರು (ಜ.28): ಗಾಂಧೀಜಿ ಹೆಸರಿನ 'ಮನರೇಗಾ' ಯೋಜನೆ ಕೈಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ 'ಜಿ ರಾಮ್ ಜಿ' ಕಾಯ್ದೆ ವಿರುದ್ದ ಬೃಹತ್ ಪ್ರತಿಭಟನೆ, ಲೋಕಭವನ ಚಲೋ ಮೂಲಕ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. 'ಮನರೇಗಾ' ಮರು ಜಾರಿಯಾಗುವವರೆಗೆ ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಚಳವಳಿ ಮಾದರಿಗೆ ಈ ಹೋರಾಟ ಕೊಂಡೊಯ್ಯುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:18 PM (IST) Jan 28

ಬಾಗಲಕೋಟೆ - ಬಿಸಿಯೂಟದ ಬಳಿಕ ಕೊಳಚೆ ನೀರಲ್ಲೇ ಪ್ಲೇಟ್ ತೊಳೆಯುವ ದುಸ್ಥಿತಿಯಲ್ಲಿ ಶಾಲಾ ಮಕ್ಕಳು!

ಬಾಗಲಕೋಟೆ ಜಿಲ್ಲೆಯ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಮಕ್ಕಳು ಬಿಸಿಯೂಟದ ನಂತರ ಚರಂಡಿ ಪಕ್ಕದಲ್ಲಿ ತಟ್ಟೆ ತೊಳೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಶಾಲೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿ

Read Full Story

11:04 PM (IST) Jan 28

Brahmagantu ದೀಪಾನೂ ಅಲ್ಲ ದಿಶಾನೂ ಅಲ್ಲ- ಈಕೆ ದಿಯಾ! ರೊಮ್ಯಾಂಟಿಕ್​ ಸ್ಟೆಪ್​ಗೆ ಫ್ಯಾನ್ಸ್ ಫಿದಾ

ಬ್ರಹ್ಮಗಂಟು ಧಾರಾವಾಹಿಯ ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್​ ಅವರ ಕ್ಯೂಟ್​ ವಿಡಿಯೋ ವೈರಲ್ ಆಗಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ ಎಂಬ ಸಂದೇಶ ಸಾರುವ ಈ ಪಾತ್ರಕ್ಕಾಗಿ ಅವರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುತ್ತಾರೆ. 

Read Full Story

10:46 PM (IST) Jan 28

ಸತ್ತಿದ್ದು ಪತ್ನಿ, ಡೆತ್ ಸರ್ಟಿಫಿಕೇಟ್ ಪತಿಯ ಹೆಸರಲ್ಲಿ! ರಟ್ಟಿಹಳ್ಳಿ ತಹಸೀಲ್ದಾರ್ ಎಡವಟ್ಟಿಗೆ ಏನು ಹೇಳ್ತೀರಿ?

ಹಾವೇರಿಯ ರಟ್ಟಿಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ, ಮೃತ ಪತ್ನಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ಪತಿಗೆ, ಅವರ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಿದ ಘಟನೆ ನಡೆದಿದೆ. ಐದು ವರ್ಷಗಳ ಹಿಂದಿನ ಎಡವಟ್ಟಿನಿಂದ ಜೀವಂತ ಇರುವ ತೋಪನಗೌಡ ಎಂಬುವವರ ರೇಷನ್ ಕಾರ್ಡ್ ರದ್ದಾಗಿ ತೊಂದರೆ ಅನುಭವಿಸುತ್ತಿದ್ದಾರೆ.

Read Full Story

10:15 PM (IST) Jan 28

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಮನೆಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳ ಕೃತ್ಯಕ್ಕೆ ಮನೆ ಮಂದಿ ಕಂಗಾಲಾಗಿದ್ದಾರೆ. ಇದು ಪಕ್ಕಾ ಪ್ಲಾನ್ ಮಾಡಿದ ಕೃತ್ಯ, ನಿಮ್ಮ ಮನೆಯಲ್ಲಿ ಮನೆಗೆಲದವರಿದ್ದರೆ ಈ ವಿಚಾರದಲ್ಲಿ ಗಮನಹರಿಸಿ.

Read Full Story

09:50 PM (IST) Jan 28

ಉತ್ತರ ಕನ್ನಡ - ಎರಡೂವರೆ ಗಂಟೆ ರಸ್ತೆಗೆ ಅಡ್ಡ ನಿಂತ ಗೂಡ್ಸ್ ರೈಲು, ಊರಿಗೆ ಊರೇ ಸಂಪರ್ಕ ಬಂದ್! ಜನರ ಪರದಾಟ

ದಾಂಡೇಲಿಯಲ್ಲಿ ಗೂಡ್ಸ್ ರೈಲು ರೈಲ್ವೆ ಗೇಟ್ ಬಳಿ ಎರಡೂವರೆ ಗಂಟೆ ನಿಂತಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾದರು. ಇನ್ನೊಂದೆಡೆ, ಬೆಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ಚಾಲಕನ ಅಜಾಗರೂಕತೆಯಿಂದ ರಿವರ್ಸ್ ತೆಗೆದುಕೊಂಡ ಬಿಎಂಟಿಸಿ ಬಸ್ಸಿಗೆ ರೈಲು ಡಿಕ್ಕಿ ಹೊಡೆದು ಜಖಂಗೊಂಡಿದೆ.

Read Full Story

09:47 PM (IST) Jan 28

ಇವ್ರ ಒಂದೇ ನೋಟಕ್ಕೆ ನೂರಾರು ಹೆಣ್ಮಕ್ಕಳು ಬೀಳ್ತಿದ್ರಂತೆ ನೋಡ್ರಪ್ಪಾ! 'ಕನ್ನಡದ ಆಮೀರ್​ ಖಾನ್​' ವಿಡಿಯೋ ವೈರಲ್​

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ತಮ್ಮನ್ನು ಯೌವನದಲ್ಲಿ ಆಮೀರ್ ಖಾನ್ ಎಂದು ಕರೆಯುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಸದ್ಯ ಅವರ ಹಳೆಯ ಸಿನಿಮಾದ ತುಣುಕೊಂದು ವೈರಲ್ ಆಗಿದ್ದು,  'ಕನ್ನಡದ ಆಮೀರ್ ಖಾನ್' ಫೋಟೋ ನೋಡಿ ಎಂದು ಟ್ರೋಲ್​ ಮಾಡ್ತಿದ್ದಾರೆ ನೆಟ್ಟಿಗರು!

Read Full Story

09:44 PM (IST) Jan 28

ಬೋರ್‌ವೆಲ್ ಲಾರಿಗೆ ಗುದ್ದಿದ ಬೊಲೆರೊ ಜೀಪ್ - ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವು, ಕೂಲಿ ಮಾಡಿ ಮನೆಗೆ ಮರಳುವಾಗ ದುರಂತ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಬಳಿ ಕೂಲಿ ಕೆಲಸ ಮುಗಿಸಿ ಮರಳುತ್ತಿದ್ದ ಕಾರ್ಮಿಕರಿದ್ದ ಬೊಲೆರೊ ಜೀಪ್, ನಿಂತಿದ್ದ ಬೋರ್‌ವೆಲ್ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ.

Read Full Story

09:35 PM (IST) Jan 28

ಮಂಗಳೂರು ಜಂಕ್ಷನ್‌ನಿಂದ ತಮಿಳುನಾಡಿಗೆ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭ, ಸಮಯ, ನಿಲುಗಡೆ ಮಾಹಿತಿ ಇಲ್ಲಿದೆ

ತಮಿಳುನಾಡಿನ ನಾಗರಕೋಯಿಲ್ ಮತ್ತು ಕರ್ನಾಟಕದ ಮಂಗಳೂರು ಜಂಕ್ಷನ್ ನಡುವೆ ಹೊಸ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಗೊಂಡಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳು ಹಾಗೂ ಕರಾವಳಿ ಪ್ರದೇಶಗಳನ್ನು ಸಂಪರ್ಕಿಸುವ ಈ ರೈಲಿನ ವೇಳಾಪಟ್ಟಿ ಮತ್ತು ನಿಲ್ದಾಣಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Read Full Story

09:25 PM (IST) Jan 28

ನಟರು ಅಷ್ಟು ಸುಲಭದಲ್ಲಿ ನಟಿಯನ್ನು ಎತ್ತೋದು ಹೇಗಪ್ಪಾ ಅಂತೀರಾ? ಇಲ್ಲಿದೆ ನೋಡಿ ಅಸಲಿ ವಿಡಿಯೋ

ಚಲನಚಿತ್ರ ಮತ್ತು ಸೀರಿಯಲ್‌ಗಳಲ್ಲಿ ನಟರು ನಟಿಯರನ್ನು ಸುಲಭವಾಗಿ ಎತ್ತುವ ದೃಶ್ಯಗಳ ಹಿಂದಿನ ಸತ್ಯವೇ ಬೇರೆ. ಇದು ನಟರ ನಿಜವಾದ ಬಲವಲ್ಲ, ಬದಲಿಗೆ ಗ್ರೀನ್ ಸ್ಕ್ರೀನ್ ತಂತ್ರಜ್ಞಾನ ಮತ್ತು ಶೂಟಿಂಗ್ ಸೆಟ್‌ನಲ್ಲಿ ಬಳಸುವ ಟೇಬಲ್‌ಗಳಂತಹ ಆಧಾರಗಳ ಸಹಾಯದಿಂದ ಚಿತ್ರೀಕರಿಸಲಾಗುತ್ತದೆ. 

Read Full Story

09:17 PM (IST) Jan 28

ಸಾರಿಗೆ ನೌಕರರ ಧ್ವನಿ ಅನಂತ ಸುಬ್ಬರಾವ್ ವಿಧಿವಶ - ಪತಿ ನಿಧನ ಹಿನ್ನೆಲೆ ಪತ್ನಿ ಆರೋಗ್ಯದಲ್ಲಿ ಏರುಪೇರು

ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಹಾಗೂ ಕಾರ್ಮಿಕ ನಾಯಕ ಅನಂತ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದ ಆಘಾತದಿಂದ ಪತ್ನಿ ಅಸ್ವಸ್ಥರಾಗಿದ್ದು, ಕುಟುಂಬದ ನಿರ್ಧಾರದಂತೆ ಅಂತಿಮ ವಿಧಿವಿಧಾನಗಳ ನಂತರ ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು.
Read Full Story

09:04 PM (IST) Jan 28

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ, ಬರೋಬ್ಬರಿ 8 ಎಕರೆ ಜಮೀನು ಸ್ವಾದೀನ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ, ಚನ್ನಪಟ್ಟಣ-ರಾಮನಗರ ನಡುವೆ 8 ಎಕರೆ ಜಾಗದಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣವಾಗಲಿದೆ. ಎಕ್ಸ್‌ಪ್ರೆಸ್ ವೇಯಿಂದಾಗಿ ಕುಸಿದಿರುವ ಸ್ಥಳೀಯ ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವುದು, ಕಲೆಗಾರರಿಗೆ, ಪ್ರವಾಸಿಗರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ.

Read Full Story

08:16 PM (IST) Jan 28

ಸಚಿವ ಶರಣಪ್ರಕಾಶ್ ಪಾಟೀಲ್ ಬಿಗ್ ಡೀಲ್ - 600ಕ್ಕೂ ಹೆಚ್ಚು GTCC ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ರ‍್ಯಾಂಗ್‌ಸನ್ಸ್‌ ಹಾಗೂ ಎಕ್ಸೈಡ್ ರೆಡಿ!

ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್ ಮತ್ತು ಎಕ್ಸೈಡ್ ಎನರ್ಜಿ ಕಂಪನಿಗಳು ಜಿಟಿಟಿಸಿಯಲ್ಲಿ ತರಬೇತಿ ಪಡೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಒಪ್ಪಂದ ಮಾಡಿಕೊಂಡಿವೆ. ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ರಾಜಾಜಿನಗರ ಕ್ಯಾಂಪಸ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು

Read Full Story

08:04 PM (IST) Jan 28

ಕರ್ಣನಿಗೆ ಅವರಪ್ಪನ ಜತೆಗೆ ಅವರ ಅತ್ತೆಯ ಮುಖವಾಡವೂ ಗೊತ್ತಾಯ್ತಾ? ಆ ಕಠಿಣ ನಿರ್ಧಾರ ಕಠಿಣ ನಿರ್ಧಾರ ತಗೊಂಡಿದ್ದೇಕೆ?

ಮಹಾಭಾರತದಲ್ಲಿ ತ್ಯಾಗಮಯಿ ಹಾಗೂ ಕರುಣಾಮಯಿಯಾಗಿದ್ದ ಕರ್ಣನಂತೆ ಇದ್ದ ಕಿರಣ್ ರಾಜ್, ಕರ್ಣ ಧಾರಾವಾಹಿಯಲ್ಲಿ ಇದ್ದಕ್ಕಿದ್ದಂತೆಯೇ ಬದಲಾಗಿ ಹೋಗಿದ್ದಾನೆ. ಅವರ ಅಪ್ಪನ ಕಂತ್ರಿ ಬುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ತಮ್ಮ ಅತ್ತೆಯ ಮುಖವಾಡ ಬಯಲಾದಂತೆ ಅನಿಸುತ್ತಿದೆ. ಏನದು ಹೊಸ ಅಪ್ಡೇಟ್ಸ್‌.

 

Read Full Story

08:01 PM (IST) Jan 28

ಡಿಸ್​ಚಾರ್ಜ್​ ಮಾಡ್ವಾಗ ಈ ಪರಿ ಮೇಕಪ್​ ಮಾಡಿ ಕಳಿಸೋ ಆಸ್ಪತ್ರೆಗೆ ಭಾರಿ ಡಿಮಾಂಡ್​ - ಅಡ್ರೆಸ್​ ಕೇಳ್ತಿರೋ ವೀಕ್ಷಕರು!

'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ ಎತ್ತರದ ಕಟ್ಟಡದಿಂದ ಬಿದ್ದ ಮಾಯಾ ಪಾತ್ರಕ್ಕೆ ಏನೂ ಆಗುವುದಿಲ್ಲ. ಅಷ್ಟೇ ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ಫುಲ್ ಮೇಕಪ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರಿಂದ ಸಖತ್ ಟ್ರೋಲ್ ಆಗುತ್ತಿದ್ದಾಳೆ.  

Read Full Story

07:57 PM (IST) Jan 28

ಉಡುಪಿ - ದೋಣಿ ದುರಂತ ಬಳಿಕ ಎಚ್ಚೆತ್ತ ಸರ್ಕಾರ, 45 ದಿನಗಳಲ್ಲಿ ಎಲ್ಲಾ ಬೋಟುಗಳಿಗೆ ಕಡ್ಡಾಯ ನೋಂದಣಿ ಆದೇಶ

ಕೋಡಿಬೆಂಗ್ರೆ ದೋಣಿ ದುರಂತದಲ್ಲಿ ಮೂವರು ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತವು ಪ್ರವಾಸಿ ಬೋಟುಗಳಿಗೆ ಕಠಿಣ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿದೆ. 45 ದಿನಗಳೊಳಗೆ ನೋಂದಣಿ, ಕಡ್ಡಾಯ ಲೈಫ್ ಜಾಕೆಟ್ ಧಾರಣೆ ಸೇರಿದಂತೆ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.
Read Full Story

07:42 PM (IST) Jan 28

ನಾಳೆ ಸಾರಿಗೆ ನೌಕರರ ಹೋರಾಟ ಹಮ್ಮಿಕೊಂಡಿದ್ದ ಮುಖಂಡ ಮುಖಂಡ ಅನಂತ್ ಸುಬ್ಬರಾವ್ ನಿಧನ

ನಾಳೆ ಸಾರಿಗೆ ನೌಕರರ ಹೋರಾಟ ಹಮ್ಮಿಕೊಂಡಿದ್ದ ಮುಖಂಡ ಮುಖಂಡ ಅನಂತ್ ಸುಬ್ಬರಾವ್ ನಿಧನ, ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

Read Full Story

07:33 PM (IST) Jan 28

ವಿಶ್ವದ ಶ್ರೇಷ್ಠ ವೈದ್ಯಕೀಯ ಕಾಲೇಜು ಪಟ್ಟಿಯಲ್ಲಿ ದೇಶದ ಏಕೈಕ ಸಂಸ್ಥೆ ಕೆಎಂಸಿ ಮಣಿಪಾಲ, ರಾಜ್ಯಕ್ಕಿದು ಹೆಮ್ಮೆ

ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು  ಸಿಂಗಾಪುರ ಸರ್ಕಾರದ ಮಾನ್ಯತೆ ಪಡೆದು ವಿಶ್ವದ ಶ್ರೇಷ್ಠ ವೈದ್ಯಕೀಯ ಕಾಲೇಜುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಸಿಂಗಾಪುರ ಮೆಡಿಕಲ್ ಕೌನ್ಸಿಲ್‌ನ ಕಟ್ಟುನಿಟ್ಟಿನ ಮೌಲ್ಯಮಾಪನದ ನಂತರ, ಹೊಸದಾಗಿ ಮಾನ್ಯತೆ ಪಡೆದ ಭಾರತದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

Read Full Story

07:23 PM (IST) Jan 28

ಮದುವೆ ಮಂಟಪದಲ್ಲಿ ತಾಳಿಕಟ್ಟಲು ಅರ್ಧ ಗಂಟೆಯಿದ್ದಾಗ ಕಿರಣ್ ರಾಜ್‌ಗೆ ಪ್ರಪೋಸ್‌! ಆ ಘಟನೆ ಮೆಲುಕು ಹಾಕಿದ ಕರ್ಣ ಸೀರಿಯಲ್ ನಟ

ಜಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವ ಕರ್ಣ ಸೀರಿಯಲ್‌ನಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕರ್ಣ ಉರೂಪ್ ಕಿರಣ್ ರಾಜ್ ಅವರಿಗೆ ಲೇಡಿಸ್ ಫ್ಯಾನ್ಸ್ ತುಂಬಾನೆ ಇದ್ದಾರೆ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಈ ಕುರಿತಂತೆ ಮಾತಾಡಿದ್ದಾರೆ.

 

Read Full Story

07:13 PM (IST) Jan 28

ಧಾರವಾಡದಲ್ಲಿ ಹುಚ್ಚು ನಾಯಿ ಕಡಿತಕ್ಕೆ 9 ಜನರಿಗೆ ಗಂಭೀರ ಗಾಯ, ಪಂಚಾಯ್ತಿ ನಿರ್ಲಕ್ಷ್ಯ,ರೊಚ್ಚಿಗೆದ್ದ ಸ್ಥಳೀಯರಿಂದಲೇ ಶ್ವಾನ ಸಂಹಾರ

ಧಾರವಾಡದ ಶಿರಡಿ ನಗರದಲ್ಲಿ ಹುಚ್ಚು ನಾಯಿಯೊಂದು ದಾಳಿ ಮಾಡಿ 9 ಜನರನ್ನು ಗಾಯಗೊಳಿಸಿದೆ. ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಪಗೊಂಡ ಸ್ಥಳೀಯ ನಿವಾಸಿಗಳು, ಅಂತಿಮವಾಗಿ ನಾಯಿ ಹಿಡಿದು ಹೊಡೆದು ಕೊಂದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

07:04 PM (IST) Jan 28

ರಾಜ್ಯದ 25 ಶಾಸಕರಿಗೆ ಗುಡ್ ನ್ಯೂಸ್ - ನಿಗಮ-ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸಿ ಸರ್ಕಾರ ಆದೇಶ

ರಾಜ್ಯ ಸರ್ಕಾರವು 25 ಶಾಸಕರ ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಶಾಸಕರು ಮುಂದಿನ ಎರಡು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ಆದೇಶವು ಜ.26, 2026 ರಿಂದ ಪೂರ್ವಾನ್ವಯ.

Read Full Story

06:44 PM (IST) Jan 28

ಸಿದ್ದರಾಮಯ್ಯ ಮುಡಾ ಹಗರಣ ಬಿ-ರಿಪೋರ್ಟ್ ವಿರುದ್ಧ, ಹೈಕೋರ್ಟ್ ಮೆಟ್ಟಿಲೇರುತ್ತೇನೆ - ಸ್ನೇಹಮಯಿ ಕೃಷ್ಣ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಪೊಲೀಸರ 'ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಸ್ನೇಹಮಯಿ ಕೃಷ್ಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Read Full Story

06:44 PM (IST) Jan 28

ಬೀದರ್ - ನೈಜ ಫಲಾನುಭವಿಗಳನ್ನ ಕೈಬಿಟ್ಟು, ಹಣ ಕೊಟ್ಟವರಿಗೆ ಮನೆ? ಪಂಚಾಯ್ತಿ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಮಲ್ಕಾಪುರ ಗ್ರಾಮಸ್ಥರು

ಬೀದರ್ ತಾಲೂಕಿನ ಮಲ್ಕಾಪುರ ಗ್ರಾಮ ಸಭೆಯಲ್ಲಿ ಆಶ್ರಯ ಯೋಜನೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರ್ಹರನ್ನು ಕೈಬಿಟ್ಟು ಅನರ್ಹರಿಗೆ ನಿವೇಶನ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಭೆಯು ರಣರಂಗವಾಯ್ತು.

Read Full Story

06:42 PM (IST) Jan 28

ಬೃಹತ್ ಅಕ್ರಮ ಡ್ರಗ್ ತಯಾರಿಕೆ ಶಂಕೆ, ಮೈಸೂರಲ್ಲಿ ಕೆಮಿಕಲ್ಸ್ ಫ್ಯಾಕ್ಟರಿಗೆ ದೆಹಲಿ ಪೊಲೀಸರು ದಾಳಿ!

ದೆಹಲಿ ಪೊಲೀಸರು ಮತ್ತು ಎನ್‌ಸಿಬಿ ಅಧಿಕಾರಿಗಳು ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಮಾದಕ ದ್ರವ್ಯ ತಯಾರಿಕೆಯ ಶಂಕೆಯ ಮೇಲೆ ಈ ಕಾರ್ಯಾಚರಣೆ ನಡೆದಿದ್ದು, ಲ್ಯಾಬ್‌ನಲ್ಲಿದ್ದ ರಾಸಾಯನಿಕ ವಸ್ತುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 

Read Full Story

05:59 PM (IST) Jan 28

ಉಡುಪಿ - ಸಾಸ್ತಾನ ಟೋಲ್ ವಿವಾದ, ದರ್ಪ ತೋರಿದ್ದ ಟೋಲ್ ಸಿಬ್ಬಂದಿಯನ್ನು ಕ್ಷಮಿಸಿದ ಮಾಜಿ ಸೈನಿಕ ಶ್ಯಾಮರಾಜ್

ಉಡುಪಿಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಮಾಜಿ ಸೈನಿಕ ಶ್ಯಾಮರಾಜ್ ಅವರಿಗೆ ಅವಮಾನಿಸಲಾಗಿತ್ತು. ಘಟನೆಯ ನಂತರ ಟೋಲ್ ಸಿಬ್ಬಂದಿ ಕ್ಷಮೆಯಾಚಿಸಿದ್ದು, ಸೈನಿಕ ಅವರನ್ನು ಕ್ಷಮಿಸಿದ್ದರೂ, ಇತರ ಮಾಜಿ ಸೈನಿಕರು ನ್ಯಾಯಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
Read Full Story

05:41 PM (IST) Jan 28

ಭಾರತದಲ್ಲಿ ಬಿಡುಗಡೆಗೂ ಮುನ್ನವೇ ರೆಡ್ಮಿ ನೋಟ್ 15 ಪ್ರೊ ಪ್ಲಸ್, ನೋಟ್ 15 ಪ್ರೊ ಬೆಲೆಗಳು ಲೀಕ್

ಶಿಯೋಮಿ ಭಾರತದಲ್ಲಿ ರೆಡ್ಮಿ ನೋಟ್ 15 ಪ್ರೊ ಮತ್ತು ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಜನವರಿ 29 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಲೇಖನವು ಬಿಡುಗಡೆಗೂ ಮುನ್ನ ಸೋರಿಕೆಯಾದ ಈ ಫೋನ್‌ಗಳ ನಿರೀಕ್ಷಿತ ಬೆಲೆ, 200MP ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿ ಸಾಮರ್ಥ್ಯ ಇಲ್ಲಿ ವಿವರಿಸಲಾಗಿದೆ.

Read Full Story

05:34 PM (IST) Jan 28

ವಿಧವೆ ಮಹಿಳೆ ಜೊತೆ ಹೋಂ ಸ್ಟೇನಲ್ಲಿದ್ದ ಆರೋಪ; ಸಿ.ಟಿ ರವಿ ಆಪ್ತ, ಸಿಡಿಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ

ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರ ಆಪ್ತ ಹಾಗೂ ಸಿಡಿಎ ಮಾಜಿ ಅಧ್ಯಕ್ಷ ಆನಂದ್, ವಿಧವೆ ಮಹಿಳೆಯೊಂದಿಗೆ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದಾರೆಂದು ಆರೋಪಿಸಿ ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಈ ಘಟನೆ ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿರುವ ಹೋಂ ಸ್ಟೇನಲ್ಲಿ ನಡೆದಿದೆ.

Read Full Story

05:29 PM (IST) Jan 28

Ajit Pawar Plane Crash - ಅಪಘಾತವೋ, ಪಿತೂರಿಯೋ? ಹೊಸ ತಿರುವು ನೀಡಿದ ಮಮತಾ ಬ್ಯಾನರ್ಜಿ, ಪ್ರತ್ಯಕ್ಷದರ್ಶಿ ಹೇಳಿಕೆಗಳು

BJP Ajit Pawar news: ಈ ಅಪಘಾತದ ನಂತರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಹಾಗೆಯೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ನಾಲ್ಕರಿಂದ ಐದು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳೂ ತಿಳಿಸಿದ್ದಾರೆ.

Read Full Story

05:21 PM (IST) Jan 28

Bigg Breaking - ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್; ಕೋರ್ಟ್‌ನಿಂದ ಬಿ-ರಿಪೋರ್ಟ್ ಅಂಗೀಕಾರ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಕ್ಕಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ-ರಿಪೋರ್ಟ್' ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದ್ದು, ಇತರ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ.
Read Full Story

05:17 PM (IST) Jan 28

ರಾಜಕೀಯದಲ್ಲಿ ಶಿವರಾಮೇಗೌಡ ಆಡಿಯೋ ಸ್ಫೋಟ, ದಿ| ನಟ ಅಂಬರೀಷ್, ಹೆಚ್‌ಡಿಕೆ ವಿರುದ್ಧ ಅಶ್ಲೀಲ ಪದ ಬಳಕೆ!

ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರದ್ದು ಎನ್ನಲಾದ  ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ಹೆಚ್.ಡಿ.ಕೆ ತಮಗೆ ಟಿಕೆಟ್ ನೀಡಿ ಮೋಸ ಮಾಡಿದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ದಿವಂಗತ ನಟ ಅಂಬರೀಶ್ ಸೇರಿದಂತೆ ಹಲವು ರಾಜಕೀಯ ನಾಯಕರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿರುವುದು ಚರ್ಚೆಗೆ ಕಾರಣವಾಗಿದೆ.

Read Full Story

05:02 PM (IST) Jan 28

ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಅರ್ಚಕರ ಹೈಡ್ರಾಮಾ; 'ತಟ್ಟೆ ಕಾಸಿಗಾಗಿ' ಭಕ್ತರ ಮುಂದೆಯೇ ಕಿತ್ತಾಟ!

ಹೊನ್ನಾವರದ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ, ಭಕ್ತರು ಅರ್ಪಿಸಿದ 'ತಟ್ಟೆ ಹಣ' ಹಂಚಿಕೆ ವಿಚಾರವಾಗಿ ಇಬ್ಬರು ಅರ್ಚಕರು ಭಕ್ತರ ಮುಂದೆಯೇ ನೂಕಾಟ-ತಳ್ಳಾಟ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ದಶಕಗಳ ಹಳೆಯ ಪೂಜಾ ಹಕ್ಕಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
Read Full Story

04:57 PM (IST) Jan 28

ಲಕ್ಕುಂಡಿ ನಿಧಿ ಸಿಕ್ಕ ಸ್ವಲ್ಪವೇ ದೂರದಲ್ಲಿ ಚಿನ್ನದ ಗುಡ್ಡ ಪತ್ತೆ - ಬಂಗಾರದ ಗುಹೆ ರಹಸ್ಯ ಇಲ್ಲಿದೆ ನೋಡಿ!

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಸಮೀಪದ ಕಣವಿಹೊಸೂರಿನಲ್ಲಿರುವ ಬ್ರಿಟೀಷರ ಕಾಲದ ನಿಗೂಢ ಚಿನ್ನದ ಗಣಿಯೊಂದು ಗಮನ ಸೆಳೆದಿದೆ. ಈ ಗುಹೆಯೊಳಗೆ ಅಪಾರ ಚಿನ್ನದ ನಿಕ್ಷೇಪವಿದೆ ಎಂದು ನಂಬಲಾಗಿದ್ದರೂ, ಸ್ವತಃ ಜಿಲ್ಲಾಡಳಿತವು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

Read Full Story

04:39 PM (IST) Jan 28

₹36000 ಕೋಟಿ ಬಾಕಿ - ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ, ನಾಳೆ ಮಹತ್ವದ ಸುದ್ದಿಗೋಷ್ಠಿ

ಸುಮಾರು 36 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಪಾವತಿಸದ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘವು ಬೃಹತ್ ಹೋರಾಟಕ್ಕೆ ಸಿದ್ಧವಾಗಿದೆ. ಬಜೆಟ್ ನಂತರವೂ ಸರ್ಕಾರ ಸ್ಪಂದಿಸದಿದ್ದರೆ, ರಾಜ್ಯಾದ್ಯಂತ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.

Read Full Story

03:55 PM (IST) Jan 28

ಹಾವೇರಿ ಆಸ್ಪತ್ರೆಯಲ್ಲಿ 'ನೀನು 8 ಸಾವಿರ ಸಂಬಳಕ್ಕೆ ಕೆಲಸ ಮಾಡುವ'ವನೆಂದು ನಿಂದಿಸಿದ ವೈದ್ಯ, ಮನನೊಂದು ವಿಷ ಕುಡಿದ ನೌಕರ

ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ, ಮೇಲಾಧಿಕಾರಿಯ ನಿರಂತರ ಕಿರುಕುಳದಿಂದ ಬೇಸತ್ತ ಡಿ-ಗ್ರೂಪ್ ನೌಕರ ಸಿದ್ದು ರಡ್ಡೇರ್, ಕರ್ತವ್ಯದ ವೇಳೆ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Read Full Story

03:19 PM (IST) Jan 28

ಸಾವಿನಲ್ಲೂ ದೂರವಾಗಬಾರದೆಂದು ಟೈಟಾಗಿ ಕಟ್ಟಿಕೊಂಡು ಹಾರಿದ ಪ್ರೇಮಿಗಳು; ಮಲಪ್ರಭಾ ನದಿಯಲ್ಲಿ ಜಂಟಿ ಶವ ಪತ್ತೆ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ, ಪ್ರೀತಿಸುತ್ತಿದ್ದ ಯುವ ಜೋಡಿಯೊಂದು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದೆ. ಗ್ರಾಮಸ್ಥರು ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. 

Read Full Story

03:00 PM (IST) Jan 28

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ ಥೈಲ್ಯಾಂಡ್‌ನಿಂದ ತರಿಸಿದ 4 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, 10 ಮಂದಿ ಆರೋಪಿಗಳ ಬಂಧನ

ಬೆಂಗಳೂರಿನ ಅಮೃತಹಳ್ಳಿ ಪೊಲೀಸರು 4 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, 10 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಆರೋಪಿಗಳು ಥೈಲ್ಯಾಂಡ್‌ನಿಂದ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದರು.

Read Full Story

01:44 PM (IST) Jan 28

ಉಡುಪಿ ದೋಣಿ ದುರಂತಕ್ಕೆ ಬಲಿಯಾದ ಯುವತಿ ದಿಶಾ - ಗೆಳತಿಯ ಸಾವಿಗೆ ಕಣ್ಣೀರಿಟ್ಟ ಯೂಟ್ಯೂಬರ್ ಮಧು ಗೌಡ, ನಿಶಾ!

Udupi Boat Tragedy: YouTuber Madhu Gowda’s Friend Disha Passes Away ಉಡುಪಿಯ ಮಲ್ಪೆ ಸಮೀಪದ ಡೆಲ್ಟಾ ಬೀಚ್‌ನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ದಿಶಾ ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದಾರೆ.

Read Full Story

01:43 PM (IST) Jan 28

ಬಿಎಂಟಿಸಿ ಬಸ್ ಜಾಹೀರಾತು ಹರಿದುಹಾಕಿದ ಕನ್ನಡಪರ ಹೋರಾಟಗಾರರು; ಗುಟ್ಕಾ ಪ್ರದರ್ಶನಕ್ಕೆ ಆಕ್ರೋಶ!

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಮೇಲಿನ ಗುಟ್ಕಾ ಜಾಹೀರಾತುಗಳ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಣಕ್ಕಾಗಿ ಸಾರ್ವಜನಿಕ ಆರೋಗ್ಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರೆ, ಸಾರಿಗೆ ಸಚಿವರು ಆದಾಯದ ಮೂಲವನ್ನು ಸಮರ್ಥಿಸಿಕೊಂಡು ಜಾಹೀರಾತಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
Read Full Story

01:21 PM (IST) Jan 28

ಯುಟ್ಯೂಬ್‌, ರೀಲ್ಸ್‌ ನೋಡಿ ಷೇರು ವ್ಯವಹಾರ; ಡ್ರಗ್ಸ್‌ ರೀತಿ ಟ್ರೇಡಿಂಗ್‌ ಚಟಕ್ಕೂ ನಿಮ್ಹಾನ್ಸ್‌ ಚಿಕಿತ್ಸೆ!

NIMHANS Treats Trading Addiction: Youth Lost ₹80 Lakh in Stocks ಯುಟ್ಯೂಬ್‌ ನೋಡಿ ಷೇರು ವ್ಯವಹಾರಕ್ಕೆ ಇಳಿದ ಯುವಕನೊಬ್ಬ, ಚಟಕ್ಕೆ ಬಿದ್ದು ₹80 ಲಕ್ಷ ಸಾಲ ಮಾಡಿಕೊಂಡಿದ್ದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತನಿಗೆ ನಿಮ್ಹಾನ್ಸ್‌ ವೈದ್ಯರು ವಿಶೇಷ ಚಿಕಿತ್ಸೆ ನೀಡಿದ್ದಾರೆ.

Read Full Story

01:19 PM (IST) Jan 28

ಸದನದಲ್ಲಿ ಮೇಷ್ಟ್ರಂತೆ ಹಾಜರಿ ಕರೆದ ಸ್ಪೀಕರ್ ಖಾದರ್ - ಹಲವು ಸಚಿವರ ಗೈರು ಮಕ್ಕಳಂತೆ ಬೊಬ್ಬೆ ಹೊಡೆದವರಾರು? - ವೀಡಿಯೋ

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಸದನದಲ್ಲಿ ಶಾಲಾ ಶಿಕ್ಷಕರಂತೆ ಸಚಿವರ ಹಾಜರಾತಿ ಕರೆದರು. ಈ ವೇಳೆ ಬಹುತೇಕ ಸಚಿವರು ಗೈರಾಗಿದ್ದರಿಂದ, ಬಿಜೆಪಿ ಶಾಸಕರು ಇದೊಂದು 'ಇಲ್ಲಗಳ ಸರ್ಕಾರ' ಎಂದು ವ್ಯಂಗ್ಯವಾಡಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

01:10 PM (IST) Jan 28

ಬೆಂಗಳೂರಿನ ಕಳ್ಳತನ ಪ್ರಕರಣಕ್ಕೆ ಅಮೆರಿಕಾದಿಂದ ದೂರು, ಡಿಜಿ–ಐಜಿಪಿಗೆ ನೇರವಾಗಿ ಕರೆ ಮಾಡಿದ ಯುಎಸ್ ರಾಯಭಾರ ಕಚೇರಿ!

ಬೆಂಗಳೂರಿನಲ್ಲಿ ವಾಸವಿದ್ದ ಅಮೆರಿಕ ಮೂಲದ ದಂಪತಿಯ ಮನೆಯಲ್ಲಿ ಮನೆಗೆಲಸದವನು ಕಳ್ಳತನ ಮಾಡಿದ್ದಾನೆ. ಈ ಪ್ರಕರಣದ ದೂರು ಅಮೆರಿಕಾ ರಾಯಭಾರ ಕಚೇರಿ ಮೂಲಕ ನೇರವಾಗಿ ಕರ್ನಾಟಕ ಡಿಜಿ-ಐಜಿಪಿಗೆ ಸಲ್ಲಿಕೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ 1ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Read Full Story

More Trending News