MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Karnataka Districts
  • ಲಕ್ಕುಂಡಿ ನಿಧಿ ಸಿಕ್ಕ ಸ್ವಲ್ಪವೇ ದೂರದಲ್ಲಿ ಚಿನ್ನದ ಗುಡ್ಡ ಪತ್ತೆ: ಬಂಗಾರದ ಗುಹೆ ರಹಸ್ಯ ಇಲ್ಲಿದೆ ನೋಡಿ!

ಲಕ್ಕುಂಡಿ ನಿಧಿ ಸಿಕ್ಕ ಸ್ವಲ್ಪವೇ ದೂರದಲ್ಲಿ ಚಿನ್ನದ ಗುಡ್ಡ ಪತ್ತೆ: ಬಂಗಾರದ ಗುಹೆ ರಹಸ್ಯ ಇಲ್ಲಿದೆ ನೋಡಿ!

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಸಮೀಪದ ಕಣವಿಹೊಸೂರಿನಲ್ಲಿರುವ ಬ್ರಿಟೀಷರ ಕಾಲದ ನಿಗೂಢ ಚಿನ್ನದ ಗಣಿಯೊಂದು ಗಮನ ಸೆಳೆದಿದೆ. ಈ ಗುಹೆಯೊಳಗೆ ಅಪಾರ ಚಿನ್ನದ ನಿಕ್ಷೇಪವಿದೆ ಎಂದು ನಂಬಲಾಗಿದ್ದರೂ, ಸ್ವತಃ ಜಿಲ್ಲಾಡಳಿತವು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

2 Min read
Author : Sathish Kumar KH
Published : Jan 28 2026, 04:57 PM IST
Share this Photo Gallery
  • FB
  • TW
  • Linkdin
  • Whatsapp
18
ಲಕ್ಕುಂಡಿ ಚಿನ್ನದ ನಿಧಿ ಬೆನ್ನಲ್ಲೇ ಚಿನ್ನ ದೊಡ್ಡ ಗುಡ್ಡ ಪತ್ತೆ
Image Credit : Asianet News

ಲಕ್ಕುಂಡಿ ಚಿನ್ನದ ನಿಧಿ ಬೆನ್ನಲ್ಲೇ ಚಿನ್ನ ದೊಡ್ಡ ಗುಡ್ಡ ಪತ್ತೆ

ಗದಗ (ಜ.28): ಕತ್ತಲೆ ತುಂಬಿದ ನಿಗೂಢ ಗುಹೆಯಲ್ಲಿದೆ ಚಿನ್ನವಿದೆಯೇ ಎಂಬ ಕುತೂಹಲ ಇದೀಗ ಜನರಲ್ಲಿ ಆರಂಭವಾಗಿದೆ. ಲಕ್ಕುಂಡಿಯಲ್ಲಿ ಸಾಮಾನ್ಯವಾಗಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದ್ದು, ಅದರ ಬೆನ್ನಲ್ಲಿಯೇ ಎಲ್ಲೆಲ್ಲೂ ಚಿನ್ನ ಅಡಗಿಸಿಟ್ಟಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಲಕ್ಕುಂಡಿ ಬಳಿಯ ಕಣವಿಹೊಸೂರಿನಲ್ಲಿದೆ ಬ್ರಿಟೀಷರು ಮಾಡಿದ್ದ ಗೋಲ್ಡ್ ಮೈನ್ ಗುಹೆಯೊಂದು ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಚಿನ್ನದ ಮೈನಿಂಗ್ ಮಾಡಿದ ಗುಡ್ಡ
Image Credit : Asianet News

ಚಿನ್ನದ ಮೈನಿಂಗ್ ಮಾಡಿದ ಗುಡ್ಡ

ನಿಧಿ, ನಿಕ್ಷೇಪದ ದಾರಿಯಲ್ಲಿ ಏಷ್ಯನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಆಡಳಿತಕ್ಕೆ ಒಳಪಟ್ಟಿದ್ದ ಇಡೀ ನಗರವೀಗ ಹಾಳು ಬಿದ್ದಿದೆ. ಹಾಳು ಬಿದ್ದ ಪ್ರತಿ ಪ್ರದೇಶಕ್ಕೂ ತೆರಳಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಇಂಚಿಂಚು ಭೂಮಿಯನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ಮಾಡಿದೆ. ಅದರಲ್ಲಿ ಕತ್ತಲೆ ತುಂಬಿದ ಆಳದ ಗುಹೆಯಲ್ಲಿ ಚಿನ್ನವನ್ನು ಮೈನಿಂಗ್ ಮಾಡಲಾಗುತ್ತಿತ್ತು ಎಂಬ ಸ್ಥಳವನ್ನೂ ತೋರಿಸಲಾಗಿದೆ. ಈ ಗುಹೆ ನೋಡಿದಾಕ್ಷಣ ಲಕ್ಕುಂಡಿಯಲ್ಲಿ ನಿಧಿ ಬೆನ್ನಲ್ಲಿಯೇ ಚಿನ್ನದ ನಿಕ್ಷೇಪವೂ ಇರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Related Articles

Related image1
ಬಂಗಾರದ ನಿಧಿ ಕೊಟ್ಟ ಲಕ್ಕುಂಡಿ ರಿತ್ತಿ ಕುಟುಂಬಕ್ಕೆ ಕೊಟ್ರಲ್ಲಾ ಚಿಪ್ಪು; 11 ತಿಂಗಳ ಗುತ್ತಿಗೆ ನೌಕರಿ ಕೊಟ್ಟ ಸರ್ಕಾರ!
Related image2
9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ
38
ಲಕ್ಕುಂಡಿಯಿಂದ ಕೆಲವೇ ಕಿ.ಮೀ ದೂರ
Image Credit : Asianet News

ಲಕ್ಕುಂಡಿಯಿಂದ ಕೆಲವೇ ಕಿ.ಮೀ ದೂರ

ಗದಗ ತಾಲೂಕಿನ ಕಣವಿ ಹೊಸೂರಿನಲ್ಲಿವೆ ಚಿನ್ನದ ಗಣಿಯ ಗುಹೆ ಇದಾಗಿದೆ. ಈ ಗುಹೆ ಲಕ್ಕುಂಡಿಯಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿದೆ. ಈ ಕಣವಿ ಹೊಸೂರು ಗ್ರಾಮದ ವ್ಯಪ್ತಿಯಲ್ಲಿ ನಾಲ್ಕೈದು ನಿಗೂಢ ಗುಹೆಯಲ್ಲಿ ಗೋಲ್ಡ್ ಮೈನಿಂಗ್ ನಡೆಯುತ್ತಿತ್ತಂತೆ. ಸಾವಿರಾರು ವರ್ಷಗಳಿಂದಲೂ ಕಣವಿ ಹೊಸೂರಿನ ಮಣ್ಣಿನಲ್ಲಿ ಚಿನ್ನವಿದೆ ಎಂದು ಹೇಳಲಾಗುತ್ತಿದೆ.. 

48
ಗೋಲ್ಡ್ ಮೈನಿಂಗ್ ಮಾಡುತ್ತಿದ್ದ ಗುಹೆ
Image Credit : Asianet News

ಗೋಲ್ಡ್ ಮೈನಿಂಗ್ ಮಾಡುತ್ತಿದ್ದ ಗುಹೆ

ಬ್ರಿಟಿಷರ ಕಾಲದಲ್ಲಿ ಕಣವಿ ಹೊಸೂರಿನಲ್ಲಿ ಗೋಲ್ಡ್ ಮೈನಿಂಗ್ ಮಾಡಲಾಗುತ್ತಿತ್ತು. ಆದರೆ, ಇಲ್ಲಿಗೆ ಯಾವೊಬ್ಬ ಸ್ಥಳೀಯರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲವಂತೆ. ಅವರು ಬ್ರಿಟೀಷರು ಕೊಪ್ಪರಿಗೆಯಷ್ಟು ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಹೀಗಾಗಿ, ಹೊಸೂರಿನ ವ್ಯಾಪ್ತಿಯಲ್ಲಿ ಈಗಲೂ ಇವೆ ಚಿನ್ನದ ನಿಧಿ ಕಣಿವೆಗಳು ಇವೆ ಎಂದು ಹೇಳಲಾಗುತ್ತಿದೆ. 

58
ಗುಹೆಯೊಳಗೆ ಹೋದವರು ವಾಪಸ್ ಬಂದಿಲ್ಲ
Image Credit : Asianet News

ಗುಹೆಯೊಳಗೆ ಹೋದವರು ವಾಪಸ್ ಬಂದಿಲ್ಲ

ಆದರೆ, ಬ್ರಿಟೀಷರು ಹೋದರೂ ಕೂಡ ಚಿನ್ನದ ಗುಹೆಯೊಳಗೇಕೆ ಸ್ಥಳೀಯರು ಹೋಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಈ ಗುಹೆಗಳು ಸಾವಿನ ಮನೆಗಳಂತಿವೆ. ಒಳಗೆ ಹೋದವರು ವಾಪಸ್ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲವಾಗಿದೆ. ಆದ್ದರಿಂದ ಇಲ್ಲಿಗೆ ಸ್ಥಳೀಯರು ಒಳಗೆ ಹೋಗಲು ಹೆದರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬ್ರಿಟೀಷರು ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಇಲ್ಲಿ ಚಿನ್ನದ ಮೈನಿಂಗ್ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

68
ಬ್ರಿಟೀಷರಿಂದ ನಿರಂತರ ಗಣಿಗಾರಿಕೆ
Image Credit : Asianet News

ಬ್ರಿಟೀಷರಿಂದ ನಿರಂತರ ಗಣಿಗಾರಿಕೆ

ಈ ಕಣವಿ ಹೊಸೂರಿನಲ್ಲಿ ಚಿನ್ನದ ಮತ್ತು ವಜ್ರದ ನಿಕ್ಷೇಪ ಇರುವ ಬಗ್ಗೆ ಮಾತುಗಳಿವೆ. ಆದ್ದರಿಂದ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಹೊಸೂರು ನಿಕ್ಷೇಪದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಸ್ಟ್ ಇಂಡಿಯಾ ಕಂಪನಿ ಸೇರಿದಂತೆ ಅನೇಕ ಗಣಿ ಕಂಪನಿಯಿಂದ ಗಣಿಗಾರಿಕೆ ಮಾಡಲಾಗಿದೆ. ಗಣಿ ಸುರಂಗದೊಳಗೆ ಈಗಲೂ ಚಿನ್ನ ಇರುವ ಬಗ್ಗೆ ಮಾಹಿತಿಯಿದೆ. ಮಣ್ಣು ಸಂಸ್ಕರಿಸಿ ಚಿನ್ನ ತೆಗೆಯುತ್ತಿದ್ದ ಇಬ್ಬರು ಗಣಿ ಕಾರ್ಮಿಕರು, ದಶಕದ ಹಿಂದೆ ನಿಕ್ಷೇಪದ ಆಸೆಗೆ ಒಳಗೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

78
ಇಬ್ಬರ ಸಾವಿನ ಬಳಿಕ ಪ್ರವೇಶ ನಿಷೇಧಿಸಿದ್ದ ಜಿಲ್ಲಾಡಳಿತ
Image Credit : Asianet News

ಇಬ್ಬರ ಸಾವಿನ ಬಳಿಕ ಪ್ರವೇಶ ನಿಷೇಧಿಸಿದ್ದ ಜಿಲ್ಲಾಡಳಿತ

ಗುಹೆಯೊಳಗಿನ ಗೋಡೆ ಕುಸಿತದಿಂದ ಇಬ್ಬರು ಯುವಕರ ದುರಂತವಾಗಿ ಸಾವಿಗೀಡಾಗಿದ್ದರು. ಆಗಿನಿಂದ ಸ್ವತಃ ಗದಗ ಜಿಲ್ಲಾಡಳಿತವೇ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಆದರೆ, ಈಗಲೂ ಚಿನ್ನದ ನಿಕ್ಷೇಪದ ಬಗ್ಗೆ ಜನರಲ್ಲಿ ಕುತೂಹಲವಿದೆ. ಚಿನ್ನದ ನಿಧಿ, ವಜ್ರದ ನಿಕ್ಷೇಪದ ಕುತೂಹಲಕ್ಕೆ ಈಗಲೂ‌ ಕೆಲವರು ಈ ನಿಗೂಢ ಜಾಗಕ್ಕೆ ಭೇಟಿಕೊಡುತ್ತಾರೆ. 

88
ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆ
Image Credit : Asianet News

ಸುವರ್ಣ ನ್ಯೂಸ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆ

ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ ಏರಿಯಾದಲ್ಲಿ ಸುವರ್ಣ ನ್ಯೂಸ್ ಕ್ಯಾಮರಾ ಕಣ್ಣು ನೆಟ್ಟಿದ್ದು ಏನೆಲ್ಲಾ ಕಾಣುತ್ತಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಈ ಜಾಗದಲ್ಲಿ ಜಿಲ್ಲಾಡಳಿತದಿಂದ ನಿಧಿ ಶೋಧ ಕಾರ್ವನ್ನು ಮಾಡಲಾಗುತ್ತದೆಯೋ ಇಲ್ಲವೋ ಎಂಬುದು ತಿಳಿದಿಲ್ಲ. ಜಿಲ್ಲಾಡಳಿತದ ತೀರ್ಮಾನಕ್ಕೂ ಮುನ್ನ ರಾಜ್ಯ ಸರ್ಕಾರದ ಒಪ್ಪಿಗೆಯೂ ಇದಕ್ಕೆ ಅಗತ್ಯವಾಗಿರುತ್ತದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಿನ್ನ
ಬಂಗಾರದ ನಿಧಿ
ಲಕ್ಕುಂಡಿ
ಗದಗ

Latest Videos
Recommended Stories
Recommended image1
SSLC, PUCಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 'ನಮ್ಮೂರ ಹೆಮ್ಮೆ' ಪೌರ ಸನ್ಮಾನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
Recommended image2
"ನಾನು ಕರೆದಾಗ ಬರಬೇಕು": ಸಾಗರದಲ್ಲಿ ಬ್ಲ್ಯಾಕ್‌ಮೇಲ್‌ಗೆ 17 ವರ್ಷದ ವಿದ್ಯಾರ್ಥಿನಿ ಬಲಿ
Recommended image3
ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!
Related Stories
Recommended image1
ಬಂಗಾರದ ನಿಧಿ ಕೊಟ್ಟ ಲಕ್ಕುಂಡಿ ರಿತ್ತಿ ಕುಟುಂಬಕ್ಕೆ ಕೊಟ್ರಲ್ಲಾ ಚಿಪ್ಪು; 11 ತಿಂಗಳ ಗುತ್ತಿಗೆ ನೌಕರಿ ಕೊಟ್ಟ ಸರ್ಕಾರ!
Recommended image2
9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved