ಬೆಳಗಾವಿ: ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ಗೊಂದಲದ ನಡುವೆಯೇ ಕೋಡಿಮಠ ಸಂಸ್ಥಾನದ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ ಎಂದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದರು.
ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ, ಮತ್ತೊಂದು ಯುಗಾದಿ ಫಲ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣದ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು ಎಂದು ಹೇಳಿದರು.
09:50 PM (IST) Dec 28
ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು ನೀಡಿದ್ದಾರೆ. ಆತ ಮಾಡೋದು ನೋಡಿದ್ರೆ ಮುಸ್ಲಿಂ ಮತಾಂಧ ಇರಬೇಕು, ಸುನ್ನಿ ಏನೋ ಮಾಡಿದ್ದಾನೋ ಏನೋ ಎಂದು ಚೆಕ್ ಮಾಡಿದರೆ ಗೊತ್ತಾಗುತ್ತೆ ಎಂದಿದ್ದಾರೆ.
09:29 PM (IST) Dec 28
ಕಾರವಾರದ ಕರಾವಳಿ ಉತ್ಸವದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 300 ಕಿ.ಮೀ ಕರಾವಳಿ ತೀರಕ್ಕೆ 'ಮೆಗಾ ಟೂರಿಸಂ' ಯೋಜನೆ ಘೋಷಿಸಿದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ, ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಶರಾವತಿ ಯೋಜನೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
08:59 PM (IST) Dec 28
Tadasana Yoga Pose Benefits for Health: ತಾಡಾಸನ ಯೋಗದ ಪ್ರಯೋಜನಗಳು: ಸರಿಯಾಗಿ ನಿಲ್ಲುವುದು ಕೂಡ ಒಂದು ಚಿಕಿತ್ಸೆಯಾಗಬಹುದು ಎಂಬುದನ್ನು ತಾಡಾಸನ ಕಲಿಸುತ್ತದೆ. ಇದನ್ನು ನೀವು ದೈನಂದಿನ ಅಭ್ಯಾಸ ಮಾಡಿಕೊಂಡರೆ, ದೇಹವು ಎತ್ತರವಾಗುವುದಲ್ಲದೆ, ಈ ಅದ್ಭುತ ಪ್ರಯೋಜನಗಳನ್ನು ಸಹ ನೀಡುತ್ತದೆ.
08:12 PM (IST) Dec 28
07:58 PM (IST) Dec 28
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ಕ್ಯಾಂಪ್ಗೆ ಭೇಟಿ ನೀಡಿ, ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರ ಆಶೀರ್ವಾದ ಪಡೆದರು. ದಲಾಯಿ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಪಂಡಿತರ ಸಮಾವೇಶ'ವನ್ನು ಉದ್ಘಾಟಿಸಿದರು.
07:42 PM (IST) Dec 28
ಹೋಟೆಲ್ಗಳಲ್ಲಿ ಕೋಳಿ ಖಾದ್ಯಗಳನ್ನು ನೀಡುವುದನ್ನು ತಡೆಯಲಾಗಿದೆ. ಊಟಕ್ಕೆ ಬಂದವರನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ ಎಂದು ಹೋಟೆಲ್ ಮಾಲೀಕರು ದೂರುತ್ತಿದ್ದಾರೆ. ಇದರ ವಿರುದ್ಧ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.
07:33 PM (IST) Dec 28
ಉಡುಪಿಯ ಹೆಜಮಾಡಿ ದೇವಸ್ಥಾನದಲ್ಲಿ ವೃದ್ಧೆಯ ಸರ ಕದ್ದಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರ ಗ್ಯಾಂಗ್, ಪುತ್ತೂರಿನಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದೆ. ವೈರಲ್ ಆದ ಸಿಸಿಟಿವಿ ದೃಶ್ಯಗಳಿಂದ ಕಳ್ಳಿಯರನ್ನು ಗುರುತಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
07:24 PM (IST) Dec 28
ಟೆಕ್ನೋ ಪೋವಾ ಕರ್ವ್ 2 5G ಯ ಡಿಸೈನ್ ರೆಂಡರ್ಗಳು ಮತ್ತು ಪ್ರಮುಖ ಫೀಚರ್ಗಳು ಲೀಕ್ ಆಗಿವೆ. 8000mAh ದೈತ್ಯ ಬ್ಯಾಟರಿ ಮತ್ತು 144Hz ರಿಫ್ರೆಶ್ ರೇಟ್ ಡಿಸ್ಪ್ಲೇ ಈ ಫೋನಿನ ಪ್ರಮುಖ ಆಕರ್ಷಣೆಗಳಾಗಿವೆ.
07:01 PM (IST) Dec 28
ಚಿತ್ರದುರ್ಗ ಬಳಿಯ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟಿದ್ದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರ ಮೃತದೇಹಗಳನ್ನು DNA ಪರೀಕ್ಷೆ ನಂತರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗದ ಕಾರಣ ಸಂತ್ರಸ್ತರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
06:57 PM (IST) Dec 28
06:15 PM (IST) Dec 28
ಮೈಸೂರಿನ ಹುಣಸೂರು ಪಟ್ಟಣದಲ್ಲಿ, ಹಾಡಹಗಲೇ 5 ಜನರ ಮುಸುಕುಧಾರಿ ಗ್ಯಾಂಗ್ ಗನ್ ತೋರಿಸಿ 'ಸ್ಕೈಗೋಲ್ಡ್ ಅಂಡ್ ಡೈಮಂಡ್ಸ್' ಶೋರೂಂನಿಂದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದೆ. ಸುಮಾರು 4 ಕೆಜಿ ಚಿನ್ನ ಲೂಟಿ ಮಾಡಲಾಗಿದೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ.
06:10 PM (IST) Dec 28
ಬೆಂಗಳೂರು ಜಲಮಂಡಳಿಯು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ 'ಒನ್ ಟೈಮ್ ಸೆಟಲ್ಮೆಂಟ್' (OTS) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ, ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.
05:57 PM (IST) Dec 28
05:51 PM (IST) Dec 28
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ತೆರವುಗೊಂಡ ಸ್ಥಳಕ್ಕೆ ಕೇರಳ ನಿಯೋಗ ಭೇಟಿ ನೀಡಿದ್ದನ್ನು ಖಂಡಿಸಿರುವ ಸಚಿವ ಜಮೀರ್ ಅಹಮದ್ ಖಾನ್, ಬಡವರ ಬಗ್ಗೆ ಕಾಳಜಿ ಇದ್ದರೆ ಕೇರಳ ಸರ್ಕಾರವೇ ಆರ್ಥಿಕ ಸಹಾಯ ನೀಡಲಿ ಎಂದು ಸವಾಲು ಹಾಕಿದ್ದಾರೆ.
05:45 PM (IST) Dec 28
ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ, ಸರ್ಕಾರದಿಂದ ಇನ್ಫೋಸಿಸ್ ಕ್ಯಾಂಪಸ್ಗೆ ಜಾಗ ಪಡೆದು ಮಾರಾಟ ಮಾಡಿದ್ದಾರೆ ಅನ್ನೋ ಆರೋಪ, ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಎಫ್ಒ ಮಾಹಿತಿ ಬಹಿರಂಗಪಡಿಸಿದ್ದಾರೆ.
05:45 PM (IST) Dec 28
05:17 PM (IST) Dec 28
Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ಕುತಂತ್ರಕ್ಕೆ ಬಲಿಯಾದ ಭೂಮಿಕಾ ದೇಶಾಂತರ ಹೋಗುವ ಆಲೋಚನೆಯಲ್ಲಿದ್ದಾಳೆ. ಹೀಗಿರುವಾಗ ಅವಳಿಗೆ ಮಹಾಸತ್ಯವೊಂದು ಗೊತ್ತಾಗಿದ್ದು, ಸೀರಿಯಲ್ ಕಥೆಗೆ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ.
04:56 PM (IST) Dec 28
04:48 PM (IST) Dec 28
ಬಿಗ್ ಬಾಸ್ ಕನ್ನಡ 10 ಶೋನಲ್ಲಿ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವಿನಯ್ ಗೌಡ ಮಧ್ಯೆ ಸಾಕಷ್ಟು ಜಗಳಗಳು ಆಗಿದ್ದವು. ದೊಡ್ಮನೆಯಿಂದ ಹೊರಗಡೆ ಬಂದ್ಮೇಲೆ ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಿದ್ದರೂ ಕೂಡ ಸಂಗೀತಾ, ಕಾರ್ತಿಕ್ ಮಾತನಾಡಿರೋದನ್ನು ಯಾರೂ ನೋಡಿರಲಿಲ್ಲ, ಒಂದೇ ಕಡೆ ಕಾಣಿಸಿರಲಿಲ್ಲ.
04:36 PM (IST) Dec 28
ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ಮಗನೊಬ್ಬ, ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಗೆ ಪೀಡಿಸಿ ದೊಣ್ಣೆಯಿಂದ ಭೀಕರವಾಗಿ ಹಲ್ಲೆ. ತಾಯಿಯನ್ನು ರಕ್ಷಿಸಲು ಬಂದ ನಾದಿನಿಯ ಮೇಲೂ ದಾಳಿ ನಡೆಸಿದ್ದು, ಈ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
04:03 PM (IST) Dec 28
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರ ಸ್ನೇಹವೇ ಹೈಲೈಟ್ ಆಗಿದೆ. ಈ ಮಧ್ಯೆ ಕಾವು ಕಾವು ಎಂದು ಗಿಲ್ಲಿ ಕರೆಯೋದು, ಕಾವ್ಯ ತನ್ನ ಹುಡುಗಿ ಎನ್ನುವಂತೆ ಮಾತನಾಡೋದು, ವರ್ತಿಸೋದು ಕಾವ್ಯಗೆ ಇರಿಟೇಟ್ ಆಗಿತ್ತು. ಇದನ್ನು ಅವರು ವಿರೋಧಿಸಿದರೆ, ಮನೆಯವರು ಬೆಂಬಲ ಕೊಟ್ಟರು.
04:00 PM (IST) Dec 28
ತಮ್ಮ ತಾಯಿಗೆ ಕಣ್ಣು ಕಾಣದೇ ಹೋದರೂ, ಆ ಸಿಂಹಿಣಿಯ ಹೆಣ್ಣು ಮಕ್ಕಳು ಅವಳನ್ನು ತೊರೆಯುವ ಮನಸ್ಸು ಮಾಡಿಲ್ಲ. ಪ್ರಾಣಿ ಜಗತ್ತಿನಲ್ಲಿ ಸ್ವತಃ ತಾಯಿಯೇ , ದುರ್ಬಲ ಮರಿಯನ್ನು ಅದು ತೊರೆದು ಹೋಗುತ್ತದೆ. ಹೀಗಿರುವಾಗ ಇಲ್ಲಿ ಮಕ್ಕಳೇ ತಮ್ಮ ತಾಯಿಗೆ ಕಣ್ಣಾಗಿವೆ. ಪ್ರಾಣಿಲೋಕದ ಈ ಅಪರೂಪದ ಸ್ಟೋರಿ ಈಗ ವೈರಲ್ ಆಗಿದೆ.
03:54 PM (IST) Dec 28
ಕಾಗವಾಡದ ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರ ಪುತ್ರಿ ತೃಪ್ತಿ ಕಾಗೆ, ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಚಿಕ್ಕೋಡಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
02:34 PM (IST) Dec 28
Captain Gilli Nata: ಫಿನಾಲೆ ಹತ್ತಿರವಿರುವ ಈ ಸಮಯದಲ್ಲಿ, ಮನೆಯ ಕ್ಯಾಪ್ಟನ್ ಗಿಲ್ಲಿ ನಟ ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವರ ನಿಯಮಗಳು ಜಾರಿಯಾಗುತ್ತವೆಯೇ ಎಂಬ ಕುತೂಹಲ ಮೂಡಿದೆ.
01:54 PM (IST) Dec 28
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ ಮಾಡಿದದ ಘಟನೆ ನಡೆದಿದೆ. ಈ ಕುರಿತ ಫೋಟೋ ವೈರಲ್ ಆದ ಕೂಡಲೇ ಎಚ್ಚೆತ್ತ ಪೊಲೀಸರಿಂದ ಟೋಪಿ ತೆರವು. ಪೂರ್ಣ ವರದಿಗಾಗಿ ಕ್ಲಿಕ್ ಮಾಡಿ.
01:48 PM (IST) Dec 28
01:37 PM (IST) Dec 28
ಚಾಮರಾಜನಗರದ ಬಂಡೀಪುರದಲ್ಲಿ ಗಸ್ತಿನಲ್ಲಿದ್ದ ಹಿರಿಯ ಅರಣ್ಯ ವೀಕ್ಷಕ ಸಣ್ಣಹೈದ ಹುಲಿ ದಾಳಿಗೆ ಬಲಿ. ಘಟನೆ ನಡೆದಿದ್ದು ಹೇಗೆ? ಇಲಾಖೆ ಅಧಿಕಾರಿಗಳು ಹೇಳಿದ್ದೇನು? ಪೂರ್ಣ ವಿವರ ತಿಳಿಯಿರಿ.
01:24 PM (IST) Dec 28
ಈಗಾಗಲೇ ಎಲ್ಲ ಭಾಷೆಯಲ್ಲಿಯೂ ವೆಬ್ ಸಿರೀಸ್ಗಳು ಪ್ರಸಾರ ಆಗುತ್ತಲಿವೆ. ನೆಟ್ಫ್ಲಿಕ್ಸ್, ಅಮೆಜಾನ್ನಂತಹ ಆನ್ನೈನ್ ವೇದಿಕೆಗಳು ಎಲ್ಲ ಸಿನಿಮಾ, ವೆಬ್ ಸಿರೀಸ್ಗಳನ್ನು ಖರೀದಿ ಮಾಡೋದಿಲ್ಲ. ಈಗ ಹೊಸ ವೆಬ್ ಸಿರೀಸ್ವೊಂದು ಎಲ್ಲರನ್ನು ಅಡಿಕ್ಟ್ ಆಗುವಂತೆ ಮಾಡಿದೆ. ಹಾಗಾದರೆ ಯಾವುದು?
01:21 PM (IST) Dec 28
ಸುಕುಮಾರ್ ಮತ್ತು ರಾಜಮೌಳಿ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ರಾಜಮೌಳಿ ಸಿನಿಮಾಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಸುಕುಮಾರ್ ಸಿನಿಮಾಗಳಲ್ಲಿ ರಾಜಮೌಳಿಗೆ ತುಂಬಾ ಇಷ್ಟವಾದ ಸಿನಿಮಾ ಯಾವುದು ಗೊತ್ತಾ?
12:56 PM (IST) Dec 28
Thalapathy Vijay Retirement: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. 33 ವರ್ಷಗಳ ಕಾಲ ಹೀರೋ ಆಗಿ ನಟಿಸಿದ್ದ ವಿಜಯ್, ಈ ಪಯಣಕ್ಕೆ ವಿದಾಯ ಹೇಳುವಾಗ ಭಾವುಕರಾದರು. 51 ವರ್ಷದ ಸೂಪರ್ಸ್ಟಾರ್ ಇನ್ನು ಮುಂದೆ ರಾಜಕೀಯದತ್ತ ಗಮನ ಹರಿಸಲಿದ್ದಾರೆ.
12:53 PM (IST) Dec 28
ಮದುವೆಗೆ ಹಿಂದೇಟು ಹಾಕುತ್ತಿರುವ ಜೆನ್ ಜಿ ಯುವಜನತೆಗೆ ನಟ ಡಾಲಿ ಧನಂಜಯ ಅವರು ತಮ್ಮ ಪತ್ನಿ ಧನ್ಯತಾ ನೀಡಿದ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. ದಾಂಪತ್ಯದಲ್ಲಿ ಸಾಮರಸ್ಯವನ್ನು ತರುವ ಬಗ್ಗೆ ಈ ಸರಳ ಮಾತು, ಅನೇಕರ ಮನಸ್ಸನ್ನು ಬದಲಿಸಿ ಮದುವೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸುತ್ತಿದೆ.
12:51 PM (IST) Dec 28
12:35 PM (IST) Dec 28
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಮಾಡಿದ್ದಾರೆಂದರೆ, ನಮ್ಮ ರಾಜ್ಯ ಸರ್ಕಾರದ ಬೇಜವಾಬ್ದಾರಿ ಎಷ್ಟಿರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
12:31 PM (IST) Dec 28
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಕ್ರೆಟ್ ರೂಮ್ನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ನಡುವೆ ಜಗಳ ನಡೆದಿತ್ತು. ಬಹುತೇಕ ರಕ್ಷಿತಾ ಹೇಳಿದಂತೆ ಧ್ರುವಂತ್ ಕೂಡ ಆಟದ ವಿಚಾರಕ್ಕೆ ಸಹಮತ ನೀಡಿದ್ದರು. ಈ ಬಗ್ಗೆ ಗಿಲ್ಲಿ ಅವರು ಧ್ರುವಂತ್ ಕಾಲೆಳೆದಿದ್ದಾರೆ.
12:31 PM (IST) Dec 28
ಚಳಿಗಾಲದಲ್ಲಿ ನಿಮಗೂ ಕ್ಯಾರೆಟ್ ಹಲ್ವಾ ತಿನ್ನಬೇಕು ಅನಿಸಿದರೆ, ಆದರೆ ಅದನ್ನು ಮಾಡಲು ಕಷ್ಟವಾದರೆ, 10 ನಿಮಿಷದಲ್ಲಿ ಕ್ಯಾರೆಟ್ ಹಲ್ವಾ ಮಾಡುವ ಇನ್ಸ್ಟಂಟ್ ರೆಸಿಪಿಯನ್ನು ನಾವು ನಿಮಗೆ ಹೇಳುತ್ತೇವೆ...
12:06 PM (IST) Dec 28
ಪ್ರಭಾಸ್ ಸದ್ಯ 'ದಿ ರಾಜಾ ಸಾಬ್' ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಒಂದು ಕ್ರೇಜಿ ಉತ್ತರ ಕೊಟ್ಟಿದ್ದಾರೆ.
11:51 AM (IST) Dec 28
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.
11:46 AM (IST) Dec 28
Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?
11:25 AM (IST) Dec 28
ಬಿಗ್ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಸೂರಜ್ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ , ಈ ಹೊಸ ಸುದ್ದಿ ಕೇಳಿ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
10:53 AM (IST) Dec 28
ಮಾರ್ಕ್ ಸಿನಿಮಾ ರಿಲೀಸ್ ಆಗಿದ್ದು, ನಟ ಕಿಚ್ಚ ಸುದೀಪ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾತನಾಡುವಾಗ, ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಈಗ ಕಿಚ್ಚ ಸುದೀಪ್ ಮಗಳು ಸಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.