LIVE NOW
Published : Dec 28, 2025, 06:56 AM ISTUpdated : Dec 28, 2025, 12:06 PM IST

Karnataka News Live: ಕೊನೆಗೂ ಮದುವೆ ಯಾಕೆ ಆಗಿಲ್ಲ ಅಂತ ಹೇಳಿದ ಪ್ರಭಾಸ್.. ಯಾರೂ ಊಹಿಸಿರಲಿಲ್ಲ ಈ ಸರ್ಪ್ರೈಸ್ ಉತ್ತರ!

ಸಾರಾಂಶ

ಬೆಳಗಾವಿ: ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ಗೊಂದಲದ ನಡುವೆಯೇ ಕೋಡಿಮಠ ಸಂಸ್ಥಾನದ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ ಎಂದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದರು.

ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ, ಮತ್ತೊಂದು ಯುಗಾದಿ ಫಲ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣದ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು ಎಂದು ಹೇಳಿದರು.

12:06 PM (IST) Dec 28

ಕೊನೆಗೂ ಮದುವೆ ಯಾಕೆ ಆಗಿಲ್ಲ ಅಂತ ಹೇಳಿದ ಪ್ರಭಾಸ್.. ಯಾರೂ ಊಹಿಸಿರಲಿಲ್ಲ ಈ ಸರ್ಪ್ರೈಸ್ ಉತ್ತರ!

ಪ್ರಭಾಸ್ ಸದ್ಯ 'ದಿ ರಾಜಾ ಸಾಬ್' ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಒಂದು ಕ್ರೇಜಿ ಉತ್ತರ ಕೊಟ್ಟಿದ್ದಾರೆ.

Read Full Story

11:51 AM (IST) Dec 28

ಕುರ್ಚಿಗಾಗಿ ಕಿತ್ತಾಟ, ಅಭಿವೃದ್ಧಿ ಶೂನ್ಯ - ಸಿದ್ದರಾಮಯ್ಯ-ಡಿಕೆಶಿ ವಿರುದ್ಧ ಎನ್.ರವಿಕುಮಾರ್ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.

Read Full Story

11:46 AM (IST) Dec 28

Ramachari Serial ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್‌ ಫೋಟೋಗಳಿವು!

Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್‌ ಕೃಪಾಕರ್‌ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್‌ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?

 

Read Full Story

11:25 AM (IST) Dec 28

BBK 12 - ವೀಕ್ಷಕರು, ಸ್ಪರ್ಧಿಗಳ ಊಹೆ ಸುಳ್ಳಾಗಿಸಿದ ಬಿಗ್‌ಬಾಸ್? ರಕ್ಷಿತಾ ಫ್ಯಾನ್ಸ್‌ಗೆ ಅತಿದೊಡ್ಡ ಆಘಾತ!

ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಸೂರಜ್ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ , ಈ ಹೊಸ ಸುದ್ದಿ ಕೇಳಿ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

Read Full Story

10:53 AM (IST) Dec 28

ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ - ಖಡಕ್‌ ಆಗಿ ಹೇಳಿದ Kiccha Sudeep ಮಗಳು ಸಾನ್ವಿ

ಮಾರ್ಕ್‌ ಸಿನಿಮಾ ರಿಲೀಸ್‌ ಆಗಿದ್ದು, ನಟ ಕಿಚ್ಚ ಸುದೀಪ್‌ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾತನಾಡುವಾಗ, ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಈಗ ಕಿಚ್ಚ ಸುದೀಪ್‌ ಮಗಳು ಸಾನ್ವಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. 

 

Read Full Story

10:45 AM (IST) Dec 28

Amruthadhaare - ದೇಶವನ್ನೇ ಬಿಡೋದಿದ್ರೆ ಇಷ್ಟ್ಯಾಕೆ ಬಿಲ್ಡಪ್‌ ಬೇಕಿತ್ತು? ಸೀರಿಯಲ್ ವೀಕ್ಷಕರೇ ಶಾಕ್

ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ, ಜೈದೇವ್‌ಗೆ ಸವಾಲು ಹಾಕಿದ್ದ ಭೂಮಿಕಾ, ಇದೀಗ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾಳೆ. ಕುಟುಂಬ ಸಮೇತ ದೇಶ ತೊರೆಯಲು ಮುಂದಾಗಿರುವ ಆಕೆಯ ನಿರ್ಧಾರ ಗೌತಮ್ ಹಾಗೂ ವೀಕ್ಷಕರಿಗೆ ತೀವ್ರ ಆಘಾತವನ್ನುಂಟುಮಾಡಿದೆ.
Read Full Story

10:30 AM (IST) Dec 28

ಯಶಸ್ವಿ ಜನರು ಪಾಲಿಸುವ ದಿನಚರಿ - 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು

ಯಶಸ್ವಿ ವ್ಯಕ್ತಿಗಳು ಯಾರಿರುತ್ತಾರೋ ಅವರು ಕನಿಷ್ಠ ಆರು ತಿಂಗಳಿಗೊಮ್ಮೆ ಹೊಸ ಅಭ್ಯಾಸ ಶುರು ಮಾಡುತ್ತಾರೆ. ಹೊಸ ದಿನಚರಿ ಆರಂಭಿಸುತ್ತಾರೆ. ಅದು ಅವರನ್ನು ಅವರು ಹೊಸತಾಗಿಸುವ ಕ್ರಮ. ಹೊಸ ದಾರಿಗೆ ಹೊರಳುವ ಅಭ್ಯಾಸ.

Read Full Story

10:13 AM (IST) Dec 28

ಹಳ್ಳಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗೆ ‘ಮಕ್ಕಳ ಮನೆ’ - ಕಲ್ಯಾಣ ಕರ್ನಾಟಕದಲ್ಲಿ ಹೊಸ ಪ್ರಯೋಗ

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 7 ಜಿಲ್ಲೆ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಮುಂಬರುವ 5 ವರ್ಷದಲ್ಲಿ 10 ಸಾವಿರ ಮಕ್ಕಳ ಮನೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.

Read Full Story

09:50 AM (IST) Dec 28

4 ಸಾವಿರಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ಅಷ್ಟಾಂಗ ಹೃದಯ ಸಂಹಿತೆ ಪಠಣ - ಆಯುರ್ವೇದದಲ್ಲಿ ಐತಿಹಾಸಿಕ ದಾಖಲೆ

‘ಅಷ್ಟಾಂಗ ಹೃದಯ ಸಂಹಿತೆ ದಿನಚರ್ಯ ಅಧ್ಯಾಯ’ವನ್ನು 4 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಪಠಿಸುವ ಮೂಲಕ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ ಹಾಗೂ ಏಷಿಯಾ ಬುಕ್ಸ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದರು.

Read Full Story

09:49 AM (IST) Dec 28

BBK 12 - ಶನಿವಾರ ಸೂರಜ್, ಇಂದು ಮತ್ತೊಬ್ಬರು ಔಟ್; ಒಬ್ಬರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್?

ಈ ವಾರ ಬಿಗ್‌ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಶನಿವಾರ ಸೂರಜ್ ಔಟ್ ಆಗಿದ್ದಾರೆ. ಭಾನುವಾರ ಸ್ಪಂದನಾ ಸೋಮಣ್ಣ ಹೊರಹೋಗುವ ಸಾಧ್ಯತೆಯಿದ್ದು, ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Read Full Story

09:13 AM (IST) Dec 28

ವಿರೋಧಿಗಳನ್ನು ಹತ್ತಿಕ್ಕಲು ಅಸ್ತ್ರ ಆಗುತ್ತೆ ದ್ವೇಷದ ಬಿಲ್‌ - ಸಂಸದ ಬೊಮ್ಮಾಯಿ ಲೇಖನ

ಸರ್ಕಾರ ಯಾವಾಗ ವಿಫಲವಾಗುತ್ತದೆಯೋ ಮತ್ತು ಜನಪ್ರಿಯತೆ ಕಳೆದುಕೊಳ್ಳುತ್ತದೆಯೋ ಆಗೆಲ್ಲಾ ಕಠಿಣ ಕಾನೂನಿನ ಮೊರೆ ಹೋಗುವುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಕಠಿಣ ಕಾನೂನುಗಳು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಮಾರಕ.

Read Full Story

08:26 AM (IST) Dec 28

Bengaluru - ಗಾನವಿ ಕುಟುಂಬಸ್ಥರ ವಿರುದ್ಧ ದಾಖಲಾಯ್ತು ದೂರು; ಕಂಪ್ಲೇಂಟ್ ಕೊಟ್ಟೋರು ಯಾರು?

ಪತ್ನಿ ಗಾನವಿ ಆತ್ಮ*ಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪತಿ ಸೂರಜ್ ಕೂಡ ನಾಗ್ಪುರದಲ್ಲಿ ನೇಣಿಗೆ ಶರಣಾಗಿದ್ದಾನೆ. ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾದ ಬಳಿಕ ಈ ಘಟನೆ ನಡೆದಿದ್ದು, ಇದೀಗ ಸೂರಜ್ ಸೋದರ, ಗಾನವಿ ಕುಟುಂಬಸ್ಥರ ವಿರುದ್ಧವೇ ದೂರು ದಾಖಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

Read Full Story

07:56 AM (IST) Dec 28

December 2025 - ವರ್ಷಾಂತ್ಯದ ವಾರದಲ್ಲಿ 5 ರಾಶಿಗಳಿಗೆ ಅದೃಷ್ಟದ ಸುರಿಮಳೆ; ಏಕಾಗ್ರತೆ ಇರಲಿ!

ವರ್ಷದ ಕೊನೆಯ ವಾರವು 5 ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಈ ರಾಶಿಗಳಿಗೆ ರಾಜಯೋಗ, ಕಾರ್ಯಸಿದ್ಧಿ, ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಯಶಸ್ಸು ಸೇರಿದಂತೆ ಅನೇಕ ಸಕಾರಾತ್ಮಕ ಫಲಿತಾಂಶಗಳು ಕಾದಿವೆ.

Read Full Story

07:29 AM (IST) Dec 28

BBK 12 - ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ - ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ನಟಿ ಅನುಪಮಾ ಗೌಡ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ, ಸ್ಪರ್ಧಿ ಅಶ್ವಿನಿ ಗೌಡ ಅವರು ರಘು ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದು, ಇದನ್ನು ಗಿಲ್ಲಿ ನಟ 'ಸ್ವಯಂವರ' ಎಂದು ತಮಾಷೆ ಮಾಡಿದ್ದಾರೆ.
Read Full Story

More Trending News