Mar 27, 2025, 11:49 PM IST
Karnataka News Live 27th March 6 ವರ್ಷ ಯತ್ನಾಳ್ ಉಚ್ಚಾಟನೆ: Summer cool tips: ಎಷ್ಟೇ ಬಿಸಲಿರಲಿ, ಬೇಸಗೆಯಲ್ಲಿ ನಿಮ್ಮನ್ನು ತಂಪಾಗಿಟ್ಟುಕೊಳ್ಳಲು ಇಷ್ಟು ಮಾಡಿ ಸಾಕು!


ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ. ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟನೆಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಕಳೆದ ಫೆ.10ರಂದು ನೀಡಿದ್ದ ಶೋಕಾಸ್ ನೋಟಿಸ್ಗೆ ನೀಡಿದ ವಿವರಣೆಯನ್ನು ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಶಿಸ್ತನ್ನು ಪದೇ ಪದೆ ಉಲ್ಲಂಘಿಸಿರುವುದು, ಹಿಂದೆ ಶೋಕಾಸ್ ನೋಟಿಸ್ ನೀಡಿದ ಬಳಿಕವೂ ಉತ್ತಮ ನಡವಳಿಕೆ ಪ್ರದರ್ಶಿಸದೇ ಇರುವುದನ್ನು ಉಲ್ಲೇಖಿಸಲಾಗಿದೆ. ಕೆಲದಿನಗಳ ಕಾಲ ಮೌನವಾಗಿರುತ್ತಿದ್ದ ಯತ್ನಾಳ್ ಅವರು ಮತ್ತೆ ತಮ್ಮ ವಾಗ್ದಾಳಿ ಮುಂದುವರೆಸುತ್ತಿದ್ದರು. ಲೋಕಸಭಾ ಚುನಾವಣೆ ಬಳಿಕ ಬಹಿರಂಗ ಹೇಳಿಕೆಗಳನ್ನು ತೀವ್ರಗೊಳಿಸಿದ ಯತ್ನಾಳ್ ಅವರು ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸತೊಡಗಿದರು. ಇದಕ್ಕೆ ಪೂರಕ ಎಂಬಂತೆ ವಕ್ಫ್ ಆಸ್ತಿ ವಿವಾದದ ವೇಳೆ ಅವರಿಗೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್, ಬಿ.ಪಿ.ಹರೀಶ್ ಮೊದವಲಾದವರು ಸಕ್ರಿಯವಾಗಿ ಜತೆಗೂಡಿದರು. ರಾಜ್ಯ ಪ್ರವಾಸ ಕೈಗೊಂಡರು. ಹೋದಲ್ಲೆಲ್ಲ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಿದರು. ಆದರೆ ಈಗ ಯತ್ನಾಳ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದ್ದು, ಯತ್ನಾಳ್ ಬಣದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.
11:49 PM
Summer cool tips: ಎಷ್ಟೇ ಬಿಸಲಿರಲಿ, ಬೇಸಗೆಯಲ್ಲಿ ನಿಮ್ಮನ್ನು ತಂಪಾಗಿಟ್ಟುಕೊಳ್ಳಲು ಇಷ್ಟು ಮಾಡಿ ಸಾಕು!
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಹೈಡ್ರೇಟ್ ಆಗಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ತಂಪಾಗಿರಿ. ಈ ಸಲಹೆಗಳನ್ನು ಅನುಸರಿಸುವ ಮೂಲಕ ದೇಹವನ್ನು ಆರೋಗ್ಯವಾಗಿ ಮತ್ತು ಉಲ್ಲಾಸದಿಂದ ಇಡಬಹುದು.
ಪೂರ್ತಿ ಓದಿ11:21 PM
ಎನರ್ಜಿ ಡ್ರಿಂಕ್ಸ್ ಕುಡಿಯೋದ್ರಿಂದ ಹೃದಯಾಘಾತವಾಗಬಹುದೇ? ಸತ್ಯಾಸತ್ಯತೆ ಏನು?
ಇತ್ತೀಚಿನ ದಿನಗಳಲ್ಲಿ ಎನರ್ಜಿ ಡ್ರಿಂಕ್ಗಳ ಬಳಕೆ ಹೆಚ್ಚಾಗಿದೆ, ಆದರೆ ಅವು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಅಧ್ಯಯನಗಳ ಪ್ರಕಾರ, ಇವು ಹೃದಯದ ಮೇಲೆ ಒತ್ತಡ ಹೇರಿ, ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.
ಪೂರ್ತಿ ಓದಿ10:45 PM
ಆಟೋ ಬಾಡಿಗೆ ಹಣ ಕೊಡದೆ ಚಾಲಕನ ಮೊಬೈಲ್ನೊಂದಿಗೆ ಪರಾರಿಯಾದ ಕಳ್ಳ!
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪ್ರಯಾಣಿಕನ ಸೋಗಿನಲ್ಲಿ ಬಂದ ಕಳ್ಳನೊಬ್ಬ ಆಟೋ ಚಾಲಕನ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿದ್ದರಿಂದ ಕಳ್ಳನ ಪತ್ತೆ ಪೊಲೀಸರಿಗೆ ಸವಾಲಾಗಿದೆ.
ಪೂರ್ತಿ ಓದಿ10:11 PM
ಅಕ್ರಮ ಬಾಂಗ್ಲಾದೇಶಿಯರ ಬಳಿ ಬಂಗಾಳದ ಆಧಾರ ಕಾರ್ಡ್ ಪತ್ತೆ! ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಗಂಭೀರ ಆರೋಪ!
ಲೋಕಸಭೆಯಲ್ಲಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಗಡಿ ಬೇಲಿ ನಿರ್ಮಾಣಕ್ಕೆ ಭೂಮಿ ನೀಡದಿರುವ ಮತ್ತು ಅಕ್ರಮ ವಲಸಿಗರಿಗೆ ನೆರವು ನೀಡುತ್ತಿರುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೆ ಟಿಎಂಸಿ ಸರ್ಕಾರ ಆಧಾರ್ ಕಾರ್ಡ್ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಪೂರ್ತಿ ಓದಿ9:43 PM
ಕೊಡಗು: ಕಸ ವಿಲೇವಾರಿ ಘಟಕ ವಿರೋಧಿಸಿ ಹಾಡಿ ಜನರ ಅಹೋರಾತ್ರಿ ಧರಣಿ, ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ!
ಕೊಡಗಿನ ಚೊಟ್ಟೆಪಾರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಬಹುಜನ ಪಕ್ಷದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜನವಸತಿ ಪ್ರದೇಶದಲ್ಲಿ ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ8:51 PM
ಕೇರಳ ದೇವಸ್ಥಾನದಲ್ಲಿ ನಡೆಯಬೇಕಿದ್ದ 'ಇಫ್ತಾರ್ ಪಾರ್ಟಿ' ರದ್ದು ಮಾಡಿದ ಹೈಕೋರ್ಟ್!
ಕೇರಳದ ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಇಫ್ತಾರ್ ಕೂಟವನ್ನು ಹೈಕೋರ್ಟ್ ಮಧ್ಯಪ್ರವೇಶದ ನಂತರ ರದ್ದು ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಆಯೋಜನೆಗೆ ವಿರೋಧ ವ್ಯಕ್ತವಾಗಿತ್ತು.
ಪೂರ್ತಿ ಓದಿ8:39 PM
ಮುಸ್ಲಿಮರು ಬೀದಿಗಳಲ್ಲಿ ಏಕೆ ನಮಾಜ್ ಮಾಡ್ತಾರೆ? ಎಸ್ಪಿ ಶಾಸಕ ಅಬು ಅಜ್ಮಿ ಹೇಳಿದ ಕಾರಣ ಏನು ಗೊತ್ತಾ?
ಉತ್ತರ ಪ್ರದೇಶದಲ್ಲಿ ಬೀದಿಗಳಲ್ಲಿ ನಮಾಜ್ ನಿಷೇಧಿಸಿರುವುದಕ್ಕೆ ಎಸ್ಪಿ ಶಾಸಕ ಅಬು ಅಜ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ. ತಾಜ್ ಮಹಲ್ ಕುರಿತ ವಿವಾದ ಮತ್ತು ಸಲ್ಮಾನ್ ರಶ್ದಿಗೆ ರೆಡ್ ಕಾರ್ಪೆಟ್ ಹಾಕುವ ವಿಚಾರವನ್ನೂ ಅವರು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ8:23 PM
ಮಹರಾಷ್ಟ್ರದ ಮುದ್ದಾದ ಹೆಂಡತಿ ಕೊಂದು, ಸೂಟ್ಕೇಸ್ಗೆ ತುಂಬಿದ ಪತಿರಾಯ!
ಬೆಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ದಂಪತಿಗಳ ನಡುವೆ ಜಗಳವಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನೇ ಹೆಂಡತಿಯನ್ನು ಕೊಂದು ದೇಹವನ್ನು ಸೂಟ್ಕೇಸ್ನಲ್ಲಿ ತುಂಬಿದ್ದಾನೆ.
ಪೂರ್ತಿ ಓದಿ8:07 PM
ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ ಟೀ ದರವೂ ಹೆಚ್ಚಳ ! ಕಾಂಗ್ರೆಸ್ ನಂಬಿದ ಜನಸಾಮಾನ್ಯರಿಗೆ ಬರೆ ಮೇಲೆ ಬರೆ!
ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾದ ಕಾರಣ, ಕಾಫಿ ಮತ್ತು ಟೀ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ಹೊಟೇಲ್ ಮಾಲೀಕರ ಸಂಘವು ದರವನ್ನು 2-3 ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಪೂರ್ತಿ ಓದಿ7:59 PM
'ಬೇರೆಲ್ಲಾ ರಾಜ್ಯಕ್ಕಿಂತ ಕಡಿಮೆ..' ಹಾಲಿನ ಬೆಲೆ ಏರಿಕೆಗೆ ಮತ್ತೆ ಹಳೆ ಪ್ಲೇಟ್ ಓಡಿಸಿ ಸಮರ್ಥನೆಗಿಳಿದ ಸಿಎಂ!
ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ದರವನ್ನು 9 ರೂಪಾಯಿ ಏರಿಸಿದೆ, ಈ ಬಾರಿ 4 ರೂಪಾಯಿ ಏರಿಕೆ ಮಾಡಿದ್ದು, ಸಿಎಂ ಸಮರ್ಥಿಸಿಕೊಂಡಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವ ಬದಲು ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ7:31 PM
ಕರ್ನಾಟಕದಲ್ಲಿ ಐಟಿ ಉದ್ಯಮ ಮಹಾಕುಸಿತ, 2025 ಅಲ್ಲಿ ಕೇವಲ 212 ಕಂಪನಿ ಸ್ಟಾರ್ಟ್, 440 ಕಂಪನಿ ಕ್ಲೋಸ್!
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಭಾರತದಲ್ಲಿ ಐಟಿ ಕಂಪನಿಗಳ ಸ್ಥಾಪನೆ ಶೇ.90ರಷ್ಟು ಕುಸಿದಿದೆ. 2020ರಲ್ಲಿ 16388 ಕಂಪನಿಗಳು ಸ್ಥಾಪನೆಯಾಗಿದ್ದರೆ, 2025ರಲ್ಲಿ ಕೇವಲ 2419ಕ್ಕೆ ಇಳಿದಿದೆ.
ಪೂರ್ತಿ ಓದಿ6:55 PM
ಈ ದೇಶ ಧರ್ಮಶಾಲೆಯಲ್ಲ..; ರೋಹಿಂಗ್ಯಾ, ಬಾಂಗ್ಲಾದೇಶಿಗಳಿಗೆ ಅಮಿತ್ ಶಾ ಎಚ್ಚರಿಕೆ!
ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತವು ಯಾರೂ ಬೇಕಾದ್ರೂ ಬಂದು ಹೋಗುವ ಧರ್ಮಶಾಲೆಯಲ್ಲ ಎಂದು ಹೇಳಿದ್ದಾರೆ. ವಲಸೆ ಮತ್ತು ವಿದೇಶಿಯರ ಮಸೂದೆ 2025 ರ ಕುರಿತು ಮಾತನಾಡಿದ ಅವರು, ದೇಶದ ಭದ್ರತೆಗಾಗಿ ವಿದೇಶಿಯರ ವಿವರಗಳನ್ನು ದಾಖಲಿಸುವುದು ಅಗತ್ಯ ಎಂದಿದ್ದಾರೆ.
ಪೂರ್ತಿ ಓದಿ6:46 PM
ದುಬಾರಿ ಬೆಲೆಯ ಅಯೋಧ್ಯೆ ರಾಮಜನ್ಮಭೂಮಿ ಸ್ಪೆಷಲ್ ಎಡಿಷನ್ ವಾಚ್ ಧರಿಸಿದ ಸಲ್ಮಾನ್ ಖಾನ್, ಫೋಟೋ ವೈರಲ್!
ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಮುಂಚಿತವಾಗಿ ರಾಮ ಜನ್ಮಭೂಮಿ ವಾಚ್ ಧರಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಚ್ ರಾಮ ಮಂದಿರದ ಕೆತ್ತನೆಗಳನ್ನು ಹೊಂದಿದೆ ಮತ್ತು ಇದರ ಬೆಲೆ 34 ಲಕ್ಷ ರೂಪಾಯಿ.
ಪೂರ್ತಿ ಓದಿ6:29 PM
ಹುಸ್ಕೂರು ಮದ್ದೂರಮ್ಮದೇವಿ 100 ಅಡಿ ರಥ ದುರಂತ: ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಜಿಲ್ಲಾಧಿಕಾರಿ!
ಆನೇಕಲ್ ಹುಸ್ಕೂರು ಗ್ರಾಮದ ಮದ್ದೂರಮ್ಮ ದೇವಿಯ ಜಾತ್ರೆಯಲ್ಲಿ ತೇರು ಬಿದ್ದ ದುರಂತದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಾಜಸ್ವ ನಿರೀಕ್ಷಕ ಪ್ರಶಾಂತ್ ಮತ್ತು ಗ್ರಾಮ ಆಡಳಿತಾಧಿಕಾರಿ ಕಾರ್ತಿಕ್ ಡಿ. ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ಪೂರ್ತಿ ಓದಿ6:28 PM
ಅಚ್ಚರಿಯಾದರೂ ಸತ್ಯ, ಲಂಡನ್ನಲ್ಲಿ ಕಿಂಗ್ ಚಾರ್ಲ್ಸ್ ಎಂಟ್ರಿಗೆ ಧೂಮ್ ಮಚಾಲೆ ಮ್ಯೂಸಿಕ್
ಲಂಡನ್ನ ಕಿಂಗ್ ಚಾರ್ಲ್ಸ್ ಎಂಟ್ರಿ ಕೊಡುವ ವೇಳೆ ಗೌರವ ಸೂಚಕವಾಗಿ ಮ್ಯೂಸಿಕ್ ಬ್ಯಾಂಡ್ ತಂಡ ಪರಿಸ್ಥಿತಿಗೆ ತಕ್ಕಂತೆ ಮ್ಯೂಸಿಕ್ ಬಜಾಯಿಸಲಿದೆ. ಆದರೆ ಈ ಬಾರಿ ಲಂಡನ್ ಅರಮನೆಗೆ ಕಿಂಗ್ ಚಾರ್ಲ್ಸ್ ಎಂಟ್ರಿಕೊಡುವ ವೇಳೆ ಬಾಲಿವುಡ್ನ ಧೂಮ್ ಮಚಾಲೆ ಹಾಡಿನ ಮ್ಯೂಸಿಕ್ ಬಾರಿಸಿದ್ದಾರೆ.
ಪೂರ್ತಿ ಓದಿ6:28 PM
'ನಿಮಗೆ ಧೈರ್ಯವಿದ್ರೆ KFC ಮುಚ್ಚಿಸಿ..; ನವರಾತ್ರಿಗೆ ಮಾಂಸದಂಗಡಿ ಮುಚ್ಚಬೇಕೆಂಬ ಬಿಜೆಪಿ ಒತ್ತಾಯಕ್ಕೆ ಎಎಪಿ ಸಂಸದ ಸವಾಲ್!
ದೆಹಲಿಯಲ್ಲಿ ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಬಿಜೆಪಿ ಒತ್ತಾಯಿಸಿದ್ದಕ್ಕೆ ಎಎಪಿ ಸಂಸದ ಸಂಜಯ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ಧೈರ್ಯವಿದ್ದರೆ ಕೆಎಫ್ಸಿ ಮುಚ್ಚಲಿ ಎಂದು ಸವಾಲು ಹಾಕಿರುವ ಅವರು, ಮದ್ಯ ನಿಷೇಧದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಪೂರ್ತಿ ಓದಿ6:16 PM
ಸರ್ಕಾರದ ಇಲಾಖೆಗಳಿಂದ ಎಸ್ಕಾಂಗೆ 8500 ಕೋಟಿ ಬಾಕಿ, ರಾಜ್ಯ ವಿದ್ಯುತ್ ಗ್ರಾಹಕರಿಗೆ ಮಿಸ್ ಆಯ್ತು ಕೇಂದ್ರದ ಭಾರೀ ಸಬ್ಸಿಡಿ!
ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಕರ್ನಾಟಕವು ಸ್ಮಾರ್ಟ್ ಮೀಟರ್ಗಳ ಮೇಲಿನ ಸಬ್ಸಿಡಿಯನ್ನು ಕಳೆದುಕೊಳ್ಳುತ್ತಿದೆ. ವಿವಿಧ ಇಲಾಖೆಗಳು 8500 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ, ಇದರಿಂದಾಗಿ ಗ್ರಾಹಕರಿಗೆ ಸಿಗಬೇಕಾದ ಸಬ್ಸಿಡಿ ತಪ್ಪಿಹೋಗುತ್ತಿದೆ.
ಪೂರ್ತಿ ಓದಿ6:03 PM
ಕಾಂಗ್ರೆಸ್ ಸರ್ಕಾರದಿಂದ 3ನೇ ಬಾರಿಗೆ ₹4 ಹಾಲಿನ ದರ ಏರಿಕೆ! 20 ತಿಂಗಳಲ್ಲಿ 9 ರೂ. ಹೆಚ್ಚಳ!
ಕಾಂಗ್ರೆಸ್ ಸರ್ಕಾರವು 20 ತಿಂಗಳಲ್ಲಿ ಮೂರು ಬಾರಿ ಹಾಲಿನ ದರವನ್ನು ಏರಿಸಿದೆ, ಒಟ್ಟು 9 ರೂಪಾಯಿ ಹೆಚ್ಚಳವಾಗಿದೆ. ಈ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಪರಿಣಾಮ ಬೀರಿದೆ.
ಪೂರ್ತಿ ಓದಿ6:02 PM
ಯತ್ನಾಳ್ ಉಚ್ಚಾಟನೆ, ಸೆಂಚುರಿ ದಾಟಿದ ಪದಾಧಿಕಾರಿಗಳು ರಾಜೀನಾಮೆ ವಿಜಯಪುರ ಬಿಜೆಪಿ ಮಂಡಲವೇ ಖಾಲಿ! ಮುಂದೇನು?
ಯತ್ನಾಳ ಉಚ್ಚಾಟನೆ ಬೆನ್ನಲ್ಲೆ ವಿಜಯಪುರದಲ್ಲಿ ರಾಜೀನಾಮೆಗಳ ಮಹಾಪರ್ವ ಶುರುವಾಗಿದೆ. ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ 174 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಪೂರ್ತಿ ಓದಿ5:57 PM
ಪತಿಯಂದಿರೇ ಹುಷಾರ್! ಗಂಡ ಹೆಂಡಿರ ಜಗಳ ನಾಲಿಗೆ ಕಚ್ಚಿ ತುಂಡು ಮಾಡುವ ತನಕ...
ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡ ನಾಲಿಗೆಯನ್ನು ತುಂಡರಿಸಿ ತಾನೂ ಸಾಯಲು ಹೊರಟಿರುವ ಘಟನೆ ನಡೆದಿದೆ. ಆಗಿದ್ದೇನು?
5:55 PM
ಅಡಿಕೆ ಯಂತ್ರಕ್ಕೆ ಸೀರೆ ಸಿಲುಕಿ ಕೆಪಿಸಿಸಿ ಕಾರ್ಯದರ್ಶಿ ಸಾವು
ಉತ್ತರ ಕನ್ನಡದಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶೋಭಾ ಹೆಗಡೆ ಮೃತಪಟ್ಟಿದ್ದಾರೆ. ಶಿರಸಿ ತಾಲೂಕಿನ ಹೊಸಬಾಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ5:46 PM
ಕಲಬುರಗಿ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಹಿತಿ ಆಯುಕ್ತ! ಏನಿದು ಪ್ರಕರಣ?
ಮಾಹಿತಿ ಹಕ್ಕು ಕಾರ್ಯಕರ್ತನ ಹೆಸರನ್ನು ಬ್ಲಾಕ್ ಲಿಸ್ಟ್ ನಿಂದ ತೆಗೆಯಲು ಲಂಚ ಕೇಳಿದ ಮಾಹಿತಿ ಆಯುಕ್ತ ರವೀಂದ್ರ ಢಾಕಪ್ಪ ಅವರು ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರು ಆರ್ ಟಿಐ ಕಾರ್ಯಕರ್ತರಿಂದ 3 ಲಕ್ಷ ರೂ ಬೇಡಿಕೆ ಇಟ್ಟಿದ್ದರು.
ಪೂರ್ತಿ ಓದಿ5:31 PM
ಗೂಗಲ್ ಕ್ರೋಮ್ ಬಳಕೆದಾರರು ತಕ್ಷಣ ಅಪ್ಡೇಟ್ ಮಾಡಿ, ಕೇಂದ್ರ ಸರ್ಕಾರದಿಂದ ಸೆಕ್ಯೂರಿಟಿ ವಾರ್ನಿಂಗ್
ಗೂಗಲ್ ಕ್ರೋಮ್ ಬಹುತೇಕರು ಬಳಕೆ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರ ಗೂಗಲ್ ಕ್ರೋಮ್ ಬಳಕೆದಾರರಿಗೆ ಹೈ ರಿಸ್ಕ್ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ. ಕ್ರೋಮ್ ಬಳಕೆದಾರರು ಏನು ಮಾಡಬೇಕು?
ಪೂರ್ತಿ ಓದಿ4:50 PM
ಗ್ಯಾರಂಟಿ ಎಂಟಾಣೆ ತೋರಿಸಿ ಜನರನ್ನ ಲಂಗೋಟಿ ಮೇಲೆ ನಿಲ್ಲಿಸಿದ ಸರ್ಕಾರ, 22 ತಿಂಗಳ ಅಧಿಕಾರದಲ್ಲಿ 'ಬೆಲೆ ಏರಿಕೆ'ಯದ್ದೇ ಕಾರುಬಾರು!
ಕೇವಲ 22 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ದರ ಏರಿಕೆ, ನಂದಿನಿ ಹಾಲಿನ ದರ ಏರಿಕೆ ಸೇರಿದಂತೆ ಸಾರ್ವಜನಿಕರು ತತ್ತರಿಸುವಂತಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ4:43 PM
ದೇಹದ ಭಾಗಗಳಲ್ಲಿ ಕಾಣುವ ಈ ಚಿಹ್ನೆಗಳು ನಿಮಗಿರುವ ಕಾಯಿಲೆ ಸೂಚಿಸುತ್ತೆ! ಹೇಗೆ ಅಂತೀರಾ ಇಲ್ಲಿ ನೋಡಿ
ನಿಮ್ಮ ದೇಹದ ಅಂಗಗಳಲ್ಲಿ ಕಾಣುವ ಈ ಲಕ್ಷಣಗಳ ಆಧಾರದ ಮೇಲೆ ನೀವು ರೋಗವನ್ನು ಹೇಗೆ ನಿರ್ಣಯಿಸಬಹುದು ಎಂಬುದನ್ನು ಈ ಪೋಸ್ಟ್ನಲ್ಲಿ ತಿಳಿಯೋಣ.
ಪೂರ್ತಿ ಓದಿ4:26 PM
ಭಕ್ತರ ಮನೆ ಬಾಗಿಲಿಗೆ ದೇವಾಲಯಗಳ ಪ್ರಸಾದ ತಲುಪಿಸಲು 'ಇ-ಪ್ರಸಾದ' ಸೇವೆ ಆರಂಭಿಸಿದ ಸರ್ಕಾರ!
ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ 14 ದೇವಾಲಯಗಳ ಪ್ರಸಾದವನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿ ಪಡೆಯಬಹುದು.
ಪೂರ್ತಿ ಓದಿ4:11 PM
ಘಿಬ್ಲಿ ಕಲಾ ಚಿತ್ರ ಬಿಡಿಸಬೇಕಾ? ChatGPT 4o ಮೂಲಕ ಅದ್ಭುತ AI ಇಮೇಜ್ ರಚಿಸಿ
ಉಚಿತ ChatGPT 4o ಇದೀಗ ಹತ್ತು ಹಲವು ಹೊಸ ಫೀಚರ್ಸ್ ನೀಡುತ್ತಿದೆ. ವಿಶೇಷ ಅಂದರೆ ನಿಮಗೆ ಘಿಬ್ಲಿ ಶೈಲಿಯ ಚಿತ್ರಗಳನ್ನು ಸುಲಭವಾಗಿ ಈ ChatGPT 4o ಮೂಲಕ ರಚಿಸಬಹುದು. ಎಐ ಇಮೇಜ್ ರಚಿಸವುದು ಹೇಗೆ?
ಪೂರ್ತಿ ಓದಿ3:12 PM
ಮನೆಯಲ್ಲೇ ರೆಡಿ ಮಾಡಿ ಹೊಟೇಲ್ ಸ್ಟೈಲ್ ಗರಿಗರಿಯಾದ ಪೂರಿ ಸಾಗು: ಇಲ್ಲಿದೆ ರೆಸಿಪಿ
ಪೂರಿಗೆ ಸರಿಯಾದ ಕಾಂಬೊ ಅಂದ್ರೆ ಅದು ಆಲೂಗಡ್ಡೆ ಮಸಾಲಾ. ಆದ್ರೆ ಹೋಟೆಲ್ಗಳಲ್ಲಿ ಸಿಗೋ ರೀತಿ ರುಚಿಯಾಗಿ ಮನೆಯಲ್ಲಿ ಮಾಡಿದ್ರೆ ಬರಲ್ಲ. ಇದಕ್ಕೆ ಕೆಲವು ರಹಸ್ಯ ವಿಧಾನಗಳನ್ನು ಅನುಸರಿಸಿದರೆ ಹೋಟೆಲ್ ರುಚಿಯನ್ನು ಮನೆಯಲ್ಲೇ ತರಬಹುದು.
ಪೂರ್ತಿ ಓದಿ3:02 PM
ಹಾಲು ಮಾರುವ ಹುಡುಗನ ಜೊತೆ ಕುಮಾರ್ ವಿಶ್ವಾಸ್ ಮಗಳ ಮದುವೆ, ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ?
ಮನೆ ಮುಂದೆ ನಡೆದ ಗಲಾಟೆ ವಿಷ್ಯಕ್ಕೆ ಸದ್ಯ ಸುದ್ದಿಯಲ್ಲಿರುವ ಕುಮಾರ್ ವಿಶ್ವಾಸ್, ಅದ್ಧೂರಿಯಾಗಿ ತಮ್ಮ ಮಗಳ ಮದುವೆ ಮುಗಿಸಿದ್ದಾರೆ. ಅವರ ಅಳಿಯ ಯಾರು? ಅವರ ಸಂಪಾದನೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.
2:39 PM
ಎಲ್ಲೋದ್ರೂ ಇದೇ ಮುಖದಲ್ಲೇ ಹೋಗ್ಬೇಕು... ಬ್ರಹ್ಮಗಂಟು ದೀಪಾ ಬೇಸರ! ಸಂಭಾವನೆ ಬಗ್ಗೆ ನಟರು ಹೇಳಿದ್ದೇನು?
ಬ್ರಹ್ಮಗಂಟು ಸೀರಿಯಲ್ ದೀಪಾ ಮತ್ತು ಚಿರು ಸಂಭಾವನೆ ಬಗ್ಗೆ ಹೇಳಿದ್ದೇನು? ದೀಪಾಗೆ ಕೋಪ ಬರುವುದು ಯಾವಾಗ? ಅವರ ಬಾಯಲ್ಲೇ ಕೇಳಿ..
2:37 PM
ಹೆಂಡ್ತಿ ಜೊತೆಯಾಗಿ ಜಾಯಿಂಟ್ ಲೋನ್ ತಗೊಂಡ್ರೆ ಎಷ್ಟೊಂದು ಲಾಭ! 7 ಲಕ್ಷದವರೆಗೆ ಟ್ಯಾಕ್ಸ್ ಉಳಿಸ್ಬಹುದು
ಜಾಯಿಂಟ್ ಹೋಮ್ ಲೋನ್: ಹೆಂಡತಿ ಜೊತೆ ಸೇರಿ ಹೋಮ್ ಲೋನ್ ತಗೊಂಡ್ರೆ ಬಡ್ಡಿ ರೇಟ್ ಕಡಿಮೆ ಇರುತ್ತೆ, ಟ್ಯಾಕ್ಸ್ನಲ್ಲಿ ವಿನಾಯಿತಿ ಸಿಗುತ್ತೆ, ಲೋನ್ ಲಿಮಿಟ್ ಕೂಡ ಹೆಚ್ಚಾಗುತ್ತೆ. ಇದರಿಂದ ಕ್ರೆಡಿಟ್ ಸ್ಕೋರ್ ಹೆಚ್ಚಾಗೋದರ ಜೊತೆಗೆ ಇಎಂಐ ಭಾರ ಕೂಡ ಕಡಿಮೆ ಆಗುತ್ತೆ.
ಪೂರ್ತಿ ಓದಿ2:20 PM
ಆರ್ಬಿಐ ಮಹತ್ವದ ಸಭೆ, ಈ ಹಣಕಾಸು ವರ್ಷದಲ್ಲಿ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತಾ?
ಆರ್ಬಿಐ 2025-26ರ ಎಂಪಿಸಿ ಸಭೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಡ್ಡಿ ದರಗಳ ಮೇಲಿನ ತೀರ್ಮಾನಗಳಿಗಾಗಿ ಕಾಯುವಿಕೆ!
ಪೂರ್ತಿ ಓದಿ2:19 PM
ನಂದಿನಿ ಹಾಲಿನ ದರ 4 ರೂ. ಹೆಚ್ಚಳ; ಬೆಲೆ ಏರಿಕೆಯ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಬರೆ!
ಕಾಂಗ್ರೆಸ್ ಸರ್ಕಾರದಿಂದ ನಂದಿನಿ ಹಾಲಿನ ದರ ಲೀಟರ್ಗೆ 4 ರೂ ಹೆಚ್ಚಳವಾಗಿದೆ. ಇದು ಸರ್ಕಾರ ಅಧಿಕಾರಕ್ಕೆ ಬಂದ ನಂತರ 3ನೇ ಬಾರಿಗೆ ಹಾಲಿನ ದರ ಏರಿಕೆಯಾಗಿದೆ.
ಪೂರ್ತಿ ಓದಿ1:55 PM
ಒಂದೇ ಸಿರಿಂಜ್ನಿಂದ ಡ್ರಗ್ಸ್ ಸೇವನೆ, ಗ್ಯಾಂಗ್ನ 9 ಮಂದಿಗೆ ಹೆಚ್ಐವಿ ಸೋಂಕು
ಡ್ರಗ್ಸ್ ಸೇವನೆ ಪ್ರಕರಣಗಳು, ಮಾರಾಟ ಸೇರಿದಂತೆ ಹಲವು ಸ್ಫೋಟಕ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದರ ನಡುವೆ ಮತ್ತೊಂದು ಭಯಾನಕ ಮಾಹಿತಿ ಬಯಲಾಗಿದೆ. ಡ್ರಗ್ಸ್ ಗ್ಯಾಂಗ್ನ 9 ಮಂದಿಗೆ ಹೆಚ್ಐವಿ ಸೋಂಕು ತಗುಲಿದೆ.
1:25 PM
ಅಪ್ಪ ರಾಜಣ್ಣಗೆ ಹನಿಟ್ರ್ಯಾಪ್, ಮಗ ರಾಜೇಂದ್ರಗೆ ಮರ್ಡರ್ ಸುಪಾರಿ; ಈ ಕೇಸಿನ ಹಿಂದಿರೋ ಮಹಾನಾಯಕ ಯಾರು?
ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ, ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದಾರೆ. ನವೆಂಬರ್ನಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಮತ್ತು ಜನವರಿಯಲ್ಲಿ ಸುಪಾರಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಪೂರ್ತಿ ಓದಿ1:19 PM
'ಟಾಕ್ಸಿಕ್ ರಿಲೇಶನ್ಶಿಪ್ನಲ್ಲಿದ್ದೆ, ಸಾಕಾಗಿದೆ; ಈಗ ಅರೇಂಜ್ ಮ್ಯಾರೇಜ್ ಆಗ್ತೀನಿ': ʼಲಕ್ಷ್ಮೀ ನಿವಾಸʼ ನಟಿ ರೂಪಿಕಾ!
ʼನನಗೆ ಟಾಕ್ಸಿಕ್ ರಿಲೇಶನ್ಶಿಪ್ ಇತ್ತು, ಈಗ ನಾನು ಅರೇಂಜ್ ಮ್ಯಾರೇಜ್ ಆಗ್ತೀನಿʼ ಎಂದು ʼಲಕ್ಷ್ಮೀ ನಿವಾಸʼ ಧಾರಾವಾಹಿ ನಟಿ ರೂಪಿಕಾ ಹೇಳಿದ್ದಾರೆ.
ಪೂರ್ತಿ ಓದಿ1:17 PM
ಪರ್ಪ್ಲೆಕ್ಸಿಟಿ AIನಲ್ಲಿ ಇಂಟರ್ನ್ಶಿಪ್ ಮಾಡ್ತೀನಿ ಅಂದ ಉದ್ಯಮಿ ನಿಖಿಲ್ ಕಾಮತ್! CEO ಶಾಕ್
ಪರ್ಪ್ಲೆಕ್ಸಿಟಿ AI ಸಹ-ಸಂಸ್ಥಾಪಕ ಅರವಿಂದ್ ಶ್ರೀನಿವಾಸ್ ಇತ್ತೀಚೆಗೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ WTF ಆನ್ಲೈನ್ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದರು. ಅಲ್ಲಿ ಕಾಮತ್ ಮೂರು ತಿಂಗಳ ಕಾಲ ಪರ್ಪ್ಲೆಕ್ಸಿಟಿ AI ನಲ್ಲಿ ಇಂಟರ್ನ್ ಆಗಲು ನಿಜವಾದ ಆಸಕ್ತಿಯನ್ನು ವ್ಯಕ್ತಪಡಿಸಿದರು.
ಪೂರ್ತಿ ಓದಿ1:11 PM
ಮ್ಯಾಗ್ನೈಟ್ ರೀತಿ ಅತೀ ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ 5, 7 ಸೀಟರ್ ನಿಸ್ಸಾನ್ ಕಾರು
ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಬಿಡುಗಡೆಯಾದ ಅತೀ ಕಡಿಮೆ ಬೆಲೆಯ ಉತ್ತಮ ಎಸ್ಯುವಿ ಕಾರು. ಇದೀಗ ಇದೇ ರೀತಿ ಅತೀ ಕಡಿಮೆ ಬೆಲೆಗೆ 5 ಸೀಟರ್ ಹಾಗೂ ಸೀಟರ್ ಎಸ್ಯುವಿ ಕಾರು ಬಿಡುಗಡೆ ಮಾಡುತ್ತಿದೆ. ಇದರ ವಿನ್ಯಾಸ ಲಕ್ಷುರಿ ಕಾರುಗಳನ್ನು ಹಿಂದಿಕ್ಕುವಂತಿದೆ.
ಪೂರ್ತಿ ಓದಿ1:07 PM
ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು? ಭಾರತಕ್ಕೆ ಶಾಕ್: ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದ ಸಮೀಕ್ಷೆ!
ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು ಎಂಬ ಸಮೀಕ್ಷೆಯೊಂದು ಹೊರಕ್ಕೆ ಬಂದಿದೆ. ಇದರಲ್ಲಿ ಭಾರತಕ್ಕೆ ಶಾಕ್ ಆಗುವಂಥ ವರದಿಯೂ ಸೇರಿದ್ದು, ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಲಾಗಿದೆ. ಏನಿದೆ ಇದರಲ್ಲಿ?
1:00 PM
ಹೈ-ಲೆವೆಲ್ ಹುಡಗೀರನ್ನ ಲವ್ ಮಾಡೋ ಹುಡುಗರಿಗೆ ಲೈಫ್ ಸಕ್ಸಸ್ ಐಡಿಯಾ ಕೊಟ್ಟ ಆಂಟಿ!
ಕಿಪಿ ಕೀರ್ತಿ ತರಹದವರೇ ಮೂರು ಜನರನ್ನು ಮೇಂಟೇನ್ ಮಾಡ್ತಿದ್ದಾರೆ, ಇನ್ನು ಹೈ-ಲೆವೆಲ್ ಫಿಗರ್ ಎಷ್ಟು ಜನರನ್ನು ಮೇಂಟೇನ್ ಮಾಡಬಹುದು ಎಂದು ಹುಡುಗರು ತಿಳಿದುಕೊಳ್ಳುವುದು ತಪ್ಪು ಕಲ್ಪನೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದ್ದಾರೆ. ಹೈ ಲೆವೆಲ್ ಫಿಗರ್ಗಳು ಸಿಂಗಲ್ ಆಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ12:55 PM
ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಎರಡು ಮಕ್ಕಳ ತಾಯಿಗೆ ಲವರ್ ಜೊತೆ ಮದ್ವೆ ಮಾಡಿದ ಗಂಡ
ಉತ್ತರ ಪ್ರದೇಶದಲ್ಲಿ ಪತ್ನಿ ಪ್ರೇಮಿಯೊಂದಿಗೆ ಸಿಕ್ಕಿಬಿದ್ದಾಗ, ಆಕೆಯ ಗಂಡನೇ ಮುಂದೆ ನಿಂತು ಮದುವೆ ಮಾಡಿಸಿದ ಘಟನೆ ನಡೆದಿದೆ. ಬಾಬ್ಲು ಎಂಬಾತ ತನ್ನ ಹೆಂಡತಿ ರಾಧಿಕಾಳನ್ನು ಆಕೆಯ ಪ್ರಿಯತಮನೊಂದಿಗೆ ವಿವಾಹ ಮಾಡಿದ್ದಾನೆ.
ಪೂರ್ತಿ ಓದಿ12:47 PM
ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ಅಧಿಕೃತ ಫೆರಾರಿ ಸರ್ವೀಸ್ ಸೆಂಟರ್ ಆರಂಭ
ದಕ್ಷಿಣ ಭಾರತದ ಮೊದಲ ಸೂಪರ್ ಕಾರು ಫೆರಾರಿಯ ಅಧಿಕೃತ ಸರ್ವೀಸ್ ಸೆಂಟರ್ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಇತರ ನಗರಗಳನ್ನು ಬಿಟ್ಟು ಬೆಂಗಳೂರಿನಲ್ಲಿ ಈ ಸರ್ವೀಸ್ ಸೆಂಟರ್ ಆರಂಭಿಸಲು ಒಂದು ಬಲವಾದ ಕಾರಣವಿದೆ.
ಪೂರ್ತಿ ಓದಿ12:35 PM
ಶಾಸಕ ಯತ್ನಾಳ್ ವಿರುದ್ಧದ ಕ್ರಮ ದುರದೃಷ್ಟಕರ: ಬಿ.ವೈ.ವಿಜಯೇಂದ್ರ
'ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವರಿಷ್ಠರು ತೆಗೆದುಕೊಂಡಿರುವ ಶಿಸ್ತು ಕ್ರಮವನ್ನು ನಾನು ಸಂಭ್ರಮಿಸಲಾರೆ. ಬದಲಾಗಿ ಬೆಳವಣಿಗೆಯನ್ನು ದುರದೃಷ್ಟಕರವೆಂದು ದುಃಖಿಸುತ್ತೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಪೂರ್ತಿ ಓದಿ12:16 PM
ರೋಡ್ ಟ್ಯಾಕ್ಸ್ ಸೇರಿ ರೂಲ್ಸ್ ಉಲ್ಲಂಘಿಸಿದ ಹೊರ ರಾಜ್ಯ ವಾಹನ ಸೀಝ್, ಕರ್ನಾಟಕ ನಡೆಗೆ ಹಲವರು ಕಂಗಾಲು
ಹೊರ ರಾಜ್ಯಗಳಿಂದ ವಾಹನಗಳನ್ನು ತಂದು ಇಲ್ಲಿ ರಸ್ತೆ ತೆರಿಗೆ ಪಾವತಿಸದೇ, ನಿಯಮ ಉಲ್ಲಂಘಿಸುತ್ತಾ ಚಲಾಯಿಸುತ್ತಿರುವವರಿಗೆ ಕರ್ನಾಟಕ ಶಾಕ್ ನೀಡಿದೆ. ಇಂತಹ ವಾಹನಗಳನ್ನು ಸೀಝ್ ಮಾಡಲಾಗುತ್ತಿದೆ. ಇದೀಗ ನಾನ್ KA ವಾಹನಗಳ ಮೇಲೆ ಕರ್ನಾಟಕ ಪೊಲೀಸರ ಕೈಗೊಂಡ ಕ್ರಮಗಳೇನು? ಇದರಿಂದ ಹಲವರು ಕಂಗಾಲಾಗಿದ್ದೇಕೆ?
ಪೂರ್ತಿ ಓದಿ12:16 PM
ಒಂದೇ ಸಿರಿಂಜ್ ಬಳಕೆ: ಕೇರಳದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 9 ಜನರಿಗೆ ಹೆಚ್ಐವಿ
ಕೇರಳದ ಮಲಪ್ಪುರಂ ಜಿಲ್ಲೆಯ ವಳಂಚೇರಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದವರಲ್ಲಿ ಹೆಚ್ಐವಿ ಸೋಂಕು ಇರುವುದು ದೃಢಪಟ್ಟಿದೆ.
ಪೂರ್ತಿ ಓದಿ12:15 PM
ಚನ್ನಪಟ್ಟಣ: ತಿಟ್ಟಮಾರನಹಳ್ಳಿ ಬೈಪಾಸ್ನ ಸರ್ವಿಸ್ ರಸ್ತೆಯಲ್ಲಿ ಅಪಘಾತವಾಗಿ 3 ಜನ ಸಾವು
ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬ್ರಿಡ್ಜ್ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕಾರು ಮತ್ತೆ ಕ್ಯಾಂಟರ್ ನಡುವೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ 3 ಜನ ಸಾವನಪ್ಪಿದ್ದಾರೆ.
ಪೂರ್ತಿ ಓದಿ11:57 AM
ಬಿಜೆಪಿ ಸರ್ಕಾರವಿದ್ದಾಗ 17 ಮಂದಿ ಹನಿಟ್ರ್ಯಾಪ್: ಯತೀಂದ್ರ ಸಿದ್ದರಾಮಯ್ಯ
ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಪ್ರಸ್ತಾಪ ಮಾಡಿದ್ದಾರೆ, ಆದರೆ ಎಲ್ಲ ಪಕ್ಷದ ಶಾಸಕರು ಹಾಗೂ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಪೂರ್ತಿ ಓದಿ11:43 AM
ಕರ್ನಾಟಕದಲ್ಲಿ 35-40 ಉದ್ಯೋಗಿಗಳನ್ನು ತೆಗೆದು ಹಾಕಿದ ಇನ್ಫೋಸಿಸ್! ಇನ್ನೊಂದು ಚಾನ್ಸ್ ಸಿಕ್ಕಿದ್ದು ಯಾರಿಗೆ?
ಇನ್ಫೋಸಿಸ್ ಕಂಪೆನಿಯಿಂದ ಲೇಆಫ್ ಶುರುವಾಗಿದೆ. ಈಗ ಮತ್ತೆ ಯಾಕೆ ಈ ನಡೆ? ನಿಜಕ್ಕೂ ಏನಾಗ್ತಿದೆ?
11:42 AM
ದ್ವೇಷದ ಬಗ್ಗೆ ನಮಗೆ ಪಾಠ ಮಾಡೋದಾ? ಯೋಗಿ ಆದಿತ್ಯನಾಥ್ ಭಾಷಾ ನೀತಿ ಹೇಳಿಕೆಗೆ ಸ್ಟಾಲಿನ್ ಆಕ್ರೋಶ
ಯೋಗಿ ಆದಿತ್ಯನಾಥ್ ಅವರ ತ್ರಿಭಾಷಾ ನೀತಿ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಪೂರ್ತಿ ಓದಿ11:37 AM
ಔರಂಗಜೇಬ್ ಕ್ರೌರ್ಯಕ್ಕೆ ಸಾಕ್ಷಿ ಬೇಕೆ? ಸಂಭಾಲ್ to ಮಹಾಕುಂಭ ಯೋಗಿ ಉತ್ತರಕ್ಕೆ ತತ್ತರಿಸಿದ ವಿಪಕ್ಷ
ಔರಂಗಬೇಜ್, ಬಾಬರ್, ಜಿನ್ನಾ ಅವರನ್ನು ಮಾದರಿಯಾಗಿ ಮುಂದಿಟ್ಟವರಿಂದ ಪಾಠ ಕಲಿಯಲು ಏನೂ ಇಲ್ಲ. ಒಬ್ಬ ಹಿಂದು ಸುರಕ್ಷಿತವಾಗಿದ್ದರೆ, ಮುಸ್ಲಿಮರು ಸುರಕ್ಷಿತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಭಾಲ್ನಲ್ಲಿ ಅಡಗಿರುವ ಹಿಂದೂ ದೇವಾಲಗಳನ್ನು ಹುಡುಕುತ್ತೇವೆ. ಒಲೈಕೆ ನಮ್ಮಲ್ಲಿಲ್ಲ, ಸುಪ್ರೀಂ ಕೋರ್ಟ್ ಆದೇಶದಿಂದ ಭಾರತದಲ್ಲಿ ನಡೆಯುತ್ತಿರುವ ಏಕೈಕ ರಾಜ್ಯ ಯುಪಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ANI ಗೆ ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
11:33 AM
ಪ್ರಾಣ ಹೋದ್ರೂ ಮೊಬೈಲ್ ಬಿಡೊಲ್ಲ ಎಂದ ಬಾಲಕಿ; ಅಮ್ಮ ಮೊಬೈಲ್ ಕಿತ್ತುಕೊಂಡಳು, ಮಗಳು ಪ್ರಾಣಬಿಟ್ಟಳು!
ಬೀದರ್ನಲ್ಲಿ ಮೊಬೈಲ್ ಬಳಸದಂತೆ ತಾಯಿ ಹೇಳಿದ್ದಕ್ಕೆ 9ನೇ ತರಗತಿ ಬಾಲಕಿ ಸಾವಿಗೆ ಶರಣಾಗಿದ್ದಾಳೆ. ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗಳಿಗೆ ತಾಯಿ ಬೈದು ಮೊಬೈಲ್ ಕಿತ್ತುಕೊಂಡಿದ್ದಳು. ಇದರಿಂದ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೂರ್ತಿ ಓದಿ11:32 AM
ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ: ಸ್ಪೀಕರ್ ಯು.ಟಿ.ಖಾದರ್ ಸಂದರ್ಶನ
ಹನಿಟ್ರ್ಯಾಪ್ ನಂಥ ಗಂಭೀರ ಪ್ರಕರಣವನ್ನು ಮುನ್ಸೂಚನೆ ನೀಡದೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಸ್ಪೀಕರ್ ಯು.ಟಿ.ಖಾದರ್.
ಪೂರ್ತಿ ಓದಿ11:11 AM
ಸಾರಾಯಿಗೆ ಬೈ ಒನ್ ಗೆಟ್ ಒನ್ ಆಫರ್; ವಿದೇಶಿ ಮದ್ಯಕ್ಕೆ ಅರ್ಧ ಬೆಲೆ; ಅಂಗಡಿ ಮುಂದೆ ಜನವೋ ಜನ!
ಕೆಲವೇ ಕೆಲವು ವಸ್ತುಗಳಿಗೆ ʼಬೈ ಒನ್ ಗೆಟ್ ಒನ್ʼ ಆಫರ್ ಇರುವುದು. ಈಗ ಈ ಆಫರ್ ಮದ್ಯಕ್ಕೂ ಅಪ್ಲೈ ಆಗಿದೆ. ಹೌದು, ಮದ್ಯ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿ ಆಗಿದೆ.
11:10 AM
ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಚೆನ್ನಮ್ಮ ವಿವಿಯಲ್ಲಿ ತೀವ್ರ ಸಿಬ್ಬಂದಿ ಕೊರತೆ
ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ (ಆರ್ಸಿಯು) ಶೈಕ್ಷಣಿಕ ಚಟುವಟಿಕೆಗಳಿಂದ ಸಂಶೋಧನಾ ಕಾರ್ಯಗಳವರೆಗೂ ಎಲ್ಲವೂ ಓಕೆ.
ಪೂರ್ತಿ ಓದಿ10:48 AM
ಮಗಳು ವಿಸ್ಮಯ ಹುಟ್ಟುಹಬ್ಬದಂದೇ ಎಂಪೂರನ್ ಬಿಡುಗಡೆ: ಏನ್ ಮಾಡ್ತಿದ್ದಾರೆ ಮೋಹನ್ಲಾಲ್ ಪುತ್ರಿ
ಕೇರಳದಲ್ಲಿ 750ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಎಂಪೂರನ್ ಪ್ರದರ್ಶನ ಕಾಣುತ್ತಿದೆ.
ಪೂರ್ತಿ ಓದಿ10:44 AM
ಸತೀಶ್ - ಎಚ್ಡಿಕೆ ಯಾಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಸತೀಶ್ ಜಾರಕಿಹೊಳಿ ಅವರು ಯಾವ ಕಾರಣಕ್ಕೆ ಕುಮಾರಸ್ವಾಮಿ, ದೇವೇಗೌಡರನ್ನು ಭೇಟಿ ಮಾಡಿದ್ದಾರೋ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪೂರ್ತಿ ಓದಿ10:21 AM
ದಿನಕ್ಕೆ 400 ಗಳಿಸುವ ಸಣ್ಣ ಜ್ಯೂಸ್ ವ್ಯಾಪಾರಿಗೆ 7.7 ಕೋಟಿ ಆದಾಯ ತೆರಿಗೆ ನೋಟೀಸ್
ಉತ್ತರ ಪ್ರದೇಶದ ಅಲಿಘರ್ನಲ್ಲಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ರಯೀಸ್ ಎಂಬುವವರಿಗೆ 7.7 ಕೋಟಿ ರೂ. ಆದಾಯ ತೆರಿಗೆ ಇಲಾಖೆ ನೋಟಿಸ್ ಬಂದಿದೆ. ದಿನಕ್ಕೆ 400 ರೂ. ಸಂಪಾದಿಸುವ ರಯೀಸ್ ಕುಟುಂಬವನ್ನು ಸಾಕುತ್ತಿದ್ದು, ಈ ನೋಟಿಸ್ ಅವರಿಗೆ ಆಘಾತ ತಂದಿದೆ.
ಪೂರ್ತಿ ಓದಿ10:05 AM
ಡಿಆರ್ಡಿಒ ಮತ್ತು ನೌಕಾಪಡೆಯಿಂದ VLSRSAM ಪರೀಕ್ಷೆ ಯಶಸ್ವಿ
ಡಿಆರ್ಡಿಒ ಮತ್ತು ಭಾರತೀಯ ನೌಕಾಪಡೆಯಿಂದ VLSRSAM ಕ್ಷಿಪಣಿಯ ಯಶಸ್ವಿ ಪರೀಕ್ಷೆ. ಈ ಕ್ಷಿಪಣಿಯು ಕಡಿಮೆ ದೂರದಲ್ಲಿಯೂ ಸಹ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಮಂತ್ರಿ ಅಭಿನಂದನೆ ಸಲ್ಲಿಸಿದ್ದಾರೆ!
ಪೂರ್ತಿ ಓದಿ10:00 AM
ಮುಡಾ ಕೇಸ್ನಲ್ಲಿ ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ: ಇ.ಡಿ ಬೇಸರ
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿರುವುದರಿಂದ ಪ್ರಕರಣದ ತನಿಖೆಯೇ ಸ್ಥಗಿತಗೊಂಡಿದೆ. ಇದರಿಂದ ನಮ್ಮ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ತಿಳಿಸಿದೆ.
9:52 AM
ಟ್ರಂಪ್ ಬಿಗ್ ಶಾಕ್, ವಿದೇಶಿ ಕಾರುಗಳ ಮೇಲೆ ಭಾರೀ ತೆರಿಗೆ!
ವಿದೇಶಿ ಕಾರುಗಳ ಮೇಲೆ ಟ್ರಂಪ್ 25% ತೆರಿಗೆ ವಿಧಿಸಿದ್ದಾರೆ. ಇದರಿಂದ ವ್ಯಾಪಾರ ಪಾಲುದಾರರೊಂದಿಗೆ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ಉದ್ಯಮಗಳಿಗೆ ತೊಂದರೆಯಾಗಬಹುದು.
ಪೂರ್ತಿ ಓದಿ9:28 AM
ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ: ಬಳ್ಳಾರಿ ಚಿನ್ನದ ವ್ಯಾಪಾರಿ ಬಂಧನ
ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್ಐ) ಬಂಧಿಸಿದೆ.
ಪೂರ್ತಿ ಓದಿ9:19 AM
ಸಂಸತ್ ಕಲಾಪದ ವೇಳೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಹುಲ್ ಗಾಂಧಿ ಜಟಾಪಟಿ
ಸಂಸತ್ ಕಲಾಪದ ವೇಳೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಹುಲ್ ಗಾಂಧಿ ನಡುವೆ ವಾಗ್ವಾದ ನಡೆದಿದೆ. ಸ್ಪೀಕರ್ ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಆರೋಪಿಸಿದರೆ, ನಿಯಮ ಪಾಲಿಸುವಂತೆ ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡಿಸಿದೆ.
ಪೂರ್ತಿ ಓದಿ9:04 AM
ಪನ್ನೀರ್ ತಿಂತೀರಾ? ಹುಷಾರ್ ಆಗಿರಿ... ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಎಚ್ಚರಿಕೆ
ಅಡುಗೆ ಪದಾರ್ಥಗಳಲ್ಲಿ ರಾಸಾಯನಿಕ ಬಣ್ಣ ಬಳಕೆ, ಕಲಬೆರಕೆ ವಿರುದ್ಧ ಸಮರ ಸಾರಿರುವ ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಪನ್ನೀರ್ ಪ್ರಿಯರಿಗೆ ಕ್ಯಾನ್ಸರ್ ಎಚ್ಚರಿಕೆ ನೀಡಿದೆ. ಮಾ.17ರಂದು ನಗರದ ವಿವಿಧೆಡೆಯಿಂದ ಪನ್ನೀರ್ನ 163 ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗಿತ್ತು.
ಪೂರ್ತಿ ಓದಿ8:48 AM
ಯುಗಾದಿಗೆ ಖಾಸಗಿ ಬಸ್ ದರ ಶಾಕ್: ಟಿಕೆಟ್ ದರ ಮೂರು ಪಟ್ಟು ಹೆಚ್ಚಳ
ಪ್ರತಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿ ದರ ಹೆಚ್ಚಿಸುವ ಚಾಳಿಯನ್ನು ಖಾಸಗಿ ಬಸ್ ಮಾಲೀಕರು ಮುಂದುವರಿಸಿದ್ದು, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವವರಿಗೆ ಮತ್ತೆ ದುಬಾರಿ ಪ್ರಯಾಣ ದರ ವಸೂಲಿಗೆ ಮುಂದಾಗಿದ್ದಾರೆ.
ಪೂರ್ತಿ ಓದಿ8:29 AM
ನನ್ನ ಕಪ್ಪುವರ್ಣದ ಬಗ್ಗೆ ನಿಂದನೆ :ಫೇಸ್ಬುಕ್ನಲ್ಲಿ ಬೇಸರ ಹೊರಹಾಕಿದ ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ
ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ವರ್ಣ ತಾರತಮ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ8:13 AM
ಹಿಂದೂಗಳು ಸೇಫ್ ಆಗಿದ್ದರೆ ಮುಸ್ಲಿಮರೂ ಸೇಫ್ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಹಿಂದೂಗಳ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉದಾಹರಣೆಗಳನ್ನು ನೀಡಿದ್ದಾರೆ.
ಪೂರ್ತಿ ಓದಿ7:42 AM
8ನೇ ವೇತನ ಆಯೋಗ: ವೇತನದಲ್ಲಿ ಭರ್ಜರಿ ಏರಿಕೆ ಸಾಧ್ಯತೆ!
ಕೇಂದ್ರ ಸರ್ಕಾರವು 8ನೇ ವೇತನ ಆಯೋಗ ರಚನೆಗೆ ಸಿದ್ಧತೆ ನಡೆಸಿದ್ದು, ಏಪ್ರಿಲ್ನಿಂದಲೇ ಕಾರ್ಯಾರಂಭವಾಗುವ ಸಾಧ್ಯತೆ ಇದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ 14 ಸಾವಿರದಿಂದ 19 ಸಾವಿರದವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಪೂರ್ತಿ ಓದಿ7:23 AM
ಏ.6 ರಾಮನವಮಿಯಂದು ರಾಮೇಶ್ವರಂ ಸಂಪರ್ಕಿಸುವ ಪಾಂಬನ್ ಸೇತುವೆಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ಮೋದಿ ಅವರು ರಾಮನವಮಿಯಂದು ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ನೂತನ ಪಾಂಬನ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಶಿಥಿಲಗೊಂಡ ಹಳೆಯ ಸೇತುವೆಯ ಬದಲಿಗೆ ನಿರ್ಮಾಣಗೊಂಡ ಈ ಸೇತುವೆಯು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಿದೆ.
ಪೂರ್ತಿ ಓದಿ7:05 AM
ಭಾರತದಲ್ಲಿ ಮುಸ್ಲಿಮರಿಗೆ ಅಭದ್ರತೆ : ಅಮೆರಿಕದ ಆಯೋಗ ಆರೋಪ
ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಭಾರತದಲ್ಲಿ ಮುಸ್ಲಿಮರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆರೋಪಿಸಿದೆ. ಭಾರತದ ಗುಪ್ತಚರ ಸಂಸ್ಥೆ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದೆ.
ಪೂರ್ತಿ ಓದಿ