ಬೆಂಗಳೂರು (ಆ.19): ಎಫ್ಎಸ್ಎಲ್ ವರದಿ ಬರುವ ತನಕ ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಶವಶೋಧ ಕಾರ್ಯ ಸ್ಥಗಿತವಾಗಲಿದೆ ಎಂದು ರಾಜಯ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ನೂರಾರು ಶವ ಹೂತ ಕೇಸ್ನ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ತನಿಖೆ ಅಬಾಧಿತವಾಗಿ ಮುನ್ನಡೆಯಲಿದೆ. ಷಡ್ಯಂತ್ರ ಆಗಿದ್ದರೂ ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
11:05 PM (IST) Aug 19
10:46 PM (IST) Aug 19
ಮತಗಳ್ಳತನ ಆರೋಪದ ಬಳಿಕ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟ್ ಅಧಿಕಾರಿ ಯಾತ್ರಾ ನಡೆಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ ನಡೆದಿದೆ. ರಾಹುಲ್ ಗಾಂಧಿ ಬೆಂಬಲಿಗರೊಂದಿಗೆ ತೆರಳುತ್ತಿದ್ದ ಕಾರು ಪೊಲೀಸ್ ಪೇದೆ ಕಾಲಿನ ಮೇಲೆ ಹತ್ತಿದ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
10:21 PM (IST) Aug 19
09:58 PM (IST) Aug 19
ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಒಟ್ಟು ಐದು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಈ ಪೈಕಿ ಉತ್ತರ ಕನ್ನಡದ ಕೆಲ ತಾಲೂಕುಗಳಿಗೆ ನಾಳೆ ರಜೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಯಲ್ಲಿ ನಾಳೆ ರಜೆ?
09:48 PM (IST) Aug 19
ವಕೀಲ ಜಗದೀಶ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸರು ಜಾತಿ ನಿಂದನೆ ಹಾಗೂ ಸಾಮಾಜಿಕ ಅಶಾಂತಿ ಹುಟ್ಟುಹಾಕಿದ ಆರೋಪದಡಿ FIR ದಾಖಲಿಸಿದ್ದಾರೆ. ಮಂಜುನಾಥ್ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 196 ಮತ್ತು 299ರ ಅಡಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವ ಆರೋಪಿ ಇದೆ.
09:27 PM (IST) Aug 19
08:44 PM (IST) Aug 19
ಹಲವು ವರ್ಷಗಳಿಂದ ಆಗ್ರಹಿಸಿದ ಮಹತ್ವದ ನಿಯಮ ಇದೀಗ ಜಾರಿಯಾಗುತ್ತಿದೆ. ಹಣ ಹಾಕಿ ಆಡುವ ಗೇಮಿಂಗ್, ಆನ್ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಹೊಸ ಆನ್ಲೈನ್ ಗೇಮಿಂಗ್ ಬಿಲ್ ತರುತ್ತಿದೆ. ಈ ಬಿಲ್ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
08:31 PM (IST) Aug 19
08:30 PM (IST) Aug 19
ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.ಆರೋಪಗಳು, ತನಿಖೆ,ವಿವಾದಗಳ ಬೆನ್ನಲ್ಲೇ ಇದೀಗ ಧರ್ಮಸ್ಥಳ ಪ್ರಕರಣ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಲುಪಿದೆ. ಈ ಮೂಲಕ ತಮಿಳುನಾಡು ರಾಜಕಾರಣಿಯ ಷಡ್ಯಂತ್ರ ಬಯಲಾಗುತ್ತಾ?
08:03 PM (IST) Aug 19
ಚಾಮರಾಜನಗರದಲ್ಲಿ ಹೃದಯ ಸಮಸ್ಯೆಯಿಂದ ಬನ್ನಿತಾಳಪುರದಲ್ಲಿ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕೇರಳದ ಪುಲುಪಳ್ಳಿ ಶಾಲೆಗೆ ತಾಯಿ ಬಿಟ್ಟು ಬಂದ ಮರಿಯಾನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಮಕ್ಕಳು ಆನೆ ಕಂಡು ಸಂಭ್ರಮಿಸಿದರು. ಅಧಿಕಾರಿಗಳು ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸಲು ಯತ್ನಿಸುತ್ತಿದ್ದಾರೆ.
07:54 PM (IST) Aug 19
Aiyyo Shraddha controversy: ಅಯ್ಯೋ ಶ್ರದ್ಧಾ ಎಂದೇ ಫೇಮಸ್ ಆಗಿರೋ ಶ್ರದ್ಧಾ ಜೈನ್ರ ಸ್ಟ್ಯಾಂಡಪ್ ಕಾಮಿಡಿಯೊಂದು ಈಗ ಕನ್ನಡಿಗರನ್ನು ಕೆಣಕಿದೆ. ಹಾಗಾದರೆ ಅಂತ ಮಾತು ಏನಿದೆ?
07:29 PM (IST) Aug 19
07:29 PM (IST) Aug 19
ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ಜೈನ್ ಅವರು ಬೆಂಗಳೂರು-ಮಂಡ್ಯ ಮಾರ್ಗದಲ್ಲಿ ವಿಂಡೋ-ಟ್ರೈಲಿಂಗ್ ತಪಾಸಣೆ ನಡೆಸಿ, ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
07:07 PM (IST) Aug 19
Bengaluru News: ಬೆಂಗಳೂರಿನಲ್ಲಿ ಆಟೋಗಳು ಮತ್ತೆ ಮೀಟರ್ ಆಧಾರದಲ್ಲಿ ಓಡಲಿವೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಲಿದೆ.
07:07 PM (IST) Aug 19
3 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ವೇತನ ಪಡೆಯುವ ಪ್ರತಿಯೊಬ್ಬ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಫೈಲ್ ಮಾಡಬೇಕು. ತೆರಿಗೆ ಶೂನ್ಯವಾಗಿದ್ದರೂ ಸಲ್ಲಿಕೆ ಮಾಡಬೇಕು. ಆದರೆ ಈ ಟಿಡಿಎಸ್ ಫೈಲ್ ಮಾಡಲು ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ?
06:54 PM (IST) Aug 19
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಆಗಸ್ಟ್ 20 ರಂದು ಎರಡೂ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 7 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
06:26 PM (IST) Aug 19
ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ್ ಭಟ್ ಕೇಸ್ ಇದೀಗ ಹಲವು ತಿರುವು ಪಡೆದುಕೊಂಡಿದೆ. ಬುರುಡೆ ಪ್ರಕರಣದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಮಗಳ ಮಿಸ್ಸಿಂಗ್ ದೂರು ದಾಖಲಿಸುವ ಮೊದಲು ಸುಜಾತಾ ಭಟ್, ಬೆಂಗಳೂರಲ್ಲಿ ಜ್ಯೂಸ್, ಕಷಾಯ ಮಾರುತ್ತಿದ್ದ ವಿವರ ಬಹಿರಂಗವಾಗಿದೆ.
06:21 PM (IST) Aug 19
05:40 PM (IST) Aug 19
05:32 PM (IST) Aug 19
ಧರ್ಮಸ್ಥಳ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಆರೋಪಗಳು, ಎಸ್ಐಟಿ ತನಿಖೆ ತೀವ್ರಗೊಂಡಿದೆ. ಇತ್ತ ಸದನದಲ್ಲೂ ಧರ್ಮಸ್ಥಳ ಪ್ರಕರಣ ಭಾರಿ ಚರ್ಚೆಯಾಗಿದೆ. ಈ ಬೆಳವಣಿಗೆ ನಡುವೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರಕರಣ ಕುರಿತು ಪಿಟಿಐಗೆ ನೀಡಿದ ಸಂದರ್ಶನ ಇಲ್ಲಿದೆ.
05:28 PM (IST) Aug 19
ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಹೈಡೆಲ್ ವಿದ್ಯುತ್ ಘಟಕದ ಚಿದಾನಂದ ನಾಪತ್ತೆಯಾಗಿ ಮೂರು ದಿನಗಳ ನಂತರ ಜಲಪಾತದಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹ*ತ್ಯೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
05:22 PM (IST) Aug 19
05:17 PM (IST) Aug 19
Pratap Simha Political Future: ಮಾಜಿ ಸಂಸದ ಪ್ರತಾಪ್ ಸಿಂಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಾಗಾದ್ರೆ ಪ್ರತಾಪ್ ಸಿಂಹ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಯಾವುದು ಗೊತ್ತಾ?
04:57 PM (IST) Aug 19
ಬಿಬಿಎಂಪಿ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇವರು ತರಬೇತಿ ಪಡೆದು, ಪ್ರಾಕ್ಟೀಸ್ ಮಾಡಿ ಗುಂಡಿ ಮುಚ್ಚೋದರೊಳಗೆ ಅದೆಷ್ಟು ಜನರು ರಸ್ತೆ ಗುಂಡಿಯಲ್ಲಿ ಬಿದ್ದು, ಶಾಶ್ವತ ಗುಂಡಿ ಸೇರುತ್ತಾರೋ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.
04:51 PM (IST) Aug 19
ದೇಶದ ಹಲವು ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿದೆ. ಇದರ ನಡುವೆ ಫುಡ್ ಡೆಲಿವರಿ ಎಜೆಂಟ್ಸ್ ಸಾಹಸ ಮಾಡಿ ಡೆಲಿವರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಲವರು ಡೆಲಿವರಿ ಎಜೆಂಟ್ ಸವಾಲುಗಳ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
04:06 PM (IST) Aug 19
ಸಾಲು ಮರದ ತಿಮ್ಮಕ್ಕ ಅವರು ನೆಟ್ಟ 200ಕ್ಕೂ ಹೆಚ್ಚು ಮರಗಳನ್ನು ಕಡಿದ ಆರೋಪದ ಮೇಲೆ ಬೇಲೂರು ತಹಶೀಲ್ದಾರ್ ವಿರುದ್ಧ ದೂರು ದಾಖಲಾಗಿದೆ. .
03:53 PM (IST) Aug 19
ಮಹೀಂದ್ರ ಇತ್ತೀಚೆಗೆ ಅನಾವರಣ ಮಾಡಿದ ನಾಲ್ಕು ಕಾನ್ಸೆಪ್ಟ್ ಕಾರುಗಳ ಪೈಕಿ ನ್ಯೂ ಜನರೇಶನ್ ಬೊಲೆರೋ ಕಾರಿಗೆ ಹಲವರು ಮನಸೋತಿದ್ದಾರೆ. ಇದರ ವಿನ್ಯಾಸ, ಇಂಟಿರಿಯರ್ ಸೇರಿದಂತೆ ಕಾರು ಎಲ್ಲರ ಗಮನಸೆಳೆಯುತ್ತಿದೆ.
03:53 PM (IST) Aug 19
03:31 PM (IST) Aug 19
ನನಗೆ ಡ್ರೈವಿಂಗ್ ಇಷ್ಟ, ಕಾರು ಖರೀದಿಸುವಷ್ಟು ದುಡ್ಡಿಲ್ಲ. ನನ್ನ ಬಜೆಟ್ನಲ್ಲಿ ಆಟೋ ಖರೀದಿಸಿದ್ದೇನೆ. ಪ್ರತಿ ದಿನ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪಟ ಪಟ ಇಂಗ್ಲೀಷ್ ಮಾತನಾಡುವ ಬೆಂಗಳೂರು ಆಟೋ ಚಾಲಕಿಯ ಬೋಲ್ಡ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
02:18 PM (IST) Aug 19
01:36 PM (IST) Aug 19
ಕೊಡಗಿನಲ್ಲಿ ಪ್ರವಾಹ ಆದಾಗ ಮೊದಲು ಸುದ್ದಿ ಹಾಕುವ ಜೊತೆಗೆ ಪರಿಹಾರ ಕಾರ್ಯ ಶುರು ಮಾಡಿದ್ದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.
01:20 PM (IST) Aug 19
ಧರ್ಮಸ್ಥಳ ದೇವಸ್ಥಾನದ ವಿರುದ್ಧದ ಷಡ್ಯಂತ್ರದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಸೆಂಥಿಲ್ ಮಾಸ್ಟರ್ ಮೈಂಡ್ ಎಂದು ರೆಡ್ಡಿ ಹೇಳಿದ್ದಾರೆ.
01:12 PM (IST) Aug 19
12:58 PM (IST) Aug 19
12:31 PM (IST) Aug 19
ಕಾಂಗ್ರೆಸ್ ನಾಯಕರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
12:28 PM (IST) Aug 19
12:17 PM (IST) Aug 19
Minister Priyank Kharge: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಹೆಚ್ಚುತ್ತಿರುವ ಸಾಲದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
12:15 PM (IST) Aug 19
ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
11:54 AM (IST) Aug 19
ಶ್ರೀಕೃಷ್ಣನ ಜೀವನವು ಧರ್ಮ ಕಾರ್ಯ ಎತ್ತಿಹಿಡಿಯುವ ನಿರಂತರ ಹೋರಾಟವೇ ಆಗಿತ್ತು. ಆತ ಅಸಾಂಪ್ರದಾಯಿಕ ಅಥವಾ ಮೇಲ್ನೋಟಕ್ಕೆ ನೈತಿಕವೆಂದು ಗೋಚರಿಸದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ.
11:35 AM (IST) Aug 19
ಕೃಷ್ಣರಾಜಸಾಗರ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 49.431 ಟಿ.ಎಂ.ಸಿ ಇದೆ. 2022ರಲ್ಲಿ ಸರ್ವೇ ಕೈಗೊಳ್ಳಲಾಗಿದ್ದು, 2.002 ಟಿಎಂಸಿ ಸಂಚಿತ ಹೂಳು ಪ್ರಮಾಣ ಇರುವುದು ದಾಖಲಾಗಿದೆ.