LIVE NOW
Published : Jan 17, 2026, 06:55 AM ISTUpdated : Jan 18, 2026, 12:01 AM IST

Karnataka News Live: ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!

ಸಾರಾಂಶ

ಬಳ್ಳಾರಿ: ಬ್ಯಾನರ್ ಗಲಭೆ ಖಂಡಿಸಿ ಬಳ್ಳಾರಿ ನಗರದ ಎಪಿಎಂಸಿ ಬಳಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ ₹50 ಲಕ್ಷದ ಬಾಂಡ್ ನೀಡುವಂತೆ ಜಿಲ್ಲಾಡಳಿತ ಕೇಳಿದ್ದು, ಈ ಬಗ್ಗೆ ಶುಕ್ರವಾರ ಪಕ್ಷದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ ಅವರಿಗೆ ನೋಟಿಸ್‌ ನೀಡಲು ಬಂದ ಪೊಲೀಸರನ್ನೇ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಬಳ್ಳಾರಿ ತಾಲೂಕು ತಹಸೀಲ್ದಾರ್ ಹಾಗೂ ಎಪಿಎಂಸಿ ಪೊಲೀಸ್ ಠಾಣೆ ಮೂಲಕ ನೋಟಿಸ್ ನೀಡಲಾಗಿದ್ದು, ಪ್ರತಿಭಟನಾ ಸಮಾವೇಶಕ್ಕೆ 20 ಸಾವಿರ ಜನರು ಸೇರುವ ನಿರೀಕ್ಷೆ ಇರುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ಸಂಭವವಿದೆ. ಹಾಗಾಗಿ ₹50 ಲಕ್ಷ ಮುಚ್ಚಳಿಕೆ ಬಾಂಡ್ ನೀಡುವಂತೆ ನೋಟಿಸ್‌ ಕೊಡಲು ಪಿಎಸ್‌ಐ ರಫೀಕ್ ಆಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಈ ಹಿಂದೆ ಯಾವುದಾದರೂ ಕಾರ್ಯಕ್ರಮಕ್ಕೆ ಬಾಂಡ್ ಬರೆಸಿಕೊಂಡಿದ್ದರೆ ತೆಗೆದುಕೊಂಡು ಬನ್ನಿ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Magadi Fire Tragedy Eucalyptus Plantation Burnt Local Heroes Save the Day

12:01 AM (IST) Jan 18

ಕಸದ ರಾಶಿಯಿಂದ ಹತ್ತಿಕೊಂಡ ಬೆಂಕಿ ನೀಲಗಿರಿ ತೋಪಿಗೆ ; ಸ್ಥಳೀಯರ ಸಾಹಸದಿಂದ ತಪ್ಪಿದ ಭಾರಿ ಅನಾಹುತ!

Magadi Fire Tragedy ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕಸದ ರಾಶಿಗೆ ಹಚ್ಚಿದ ಬೆಂಕಿ ಸಮೀಪದ ನೀಲಗಿರಿ ತೋಪಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಬರುವ ಮುನ್ನವೇ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಬೆಂಕಿಯನ್ನು ನಂದಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

Read Full Story

10:32 PM (IST) Jan 17

ವಿದ್ಯಾರ್ಥಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಶಿಕ್ಷಕನಿಗೆ 3 ವರ್ಷ ಜೈಲು ಶಿಕ್ಷೆ

ಚಾಮರಾಜನಗರದ ಹನೂರು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ, ತನ್ನ ವಿದ್ಯಾರ್ಥಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದೆ. ಈ ಹೇಯ ಕೃತ್ಯಕ್ಕಾಗಿ ಕೊಳ್ಳೇಗಾಲದ ನ್ಯಾಯಾಲಯವು ಆರೋಪಿ ಶಿಕ್ಷಕನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
Read Full Story

09:49 PM (IST) Jan 17

ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಟಿಪ್ಪರ್ ಎರಡು ಬಾರಿ ಡಿಕ್ಕಿ ಹಿಂದೆ ಅನುಮಾನ

ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಮೇಲ್ನೋಟಕ್ಕೆ ಸಹಜ ಅಪಘಾತದಂತೆ ಕಂಡರೂ ಉದ್ದೇಶಪೂರ್ವಕವಾಗಿ ಅಪಘಾತ ನಡೆಸಲಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಅಪಘಾತ ಕುರಿತು ದೂರು ದಾಖಲಾಗಿದೆ.

 

Read Full Story

09:01 PM (IST) Jan 17

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ, ಕಂಡೀಷನ್ ಏನು?

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಸರ್ಕಾರದ ಅನುಮತಿ,, ಕಾಲ್ತುಳಿತದಿಂದ ಸ್ಥಗಿತಗೊಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಮರು ಜೀವ ಸಿಕ್ಕಿದೆ. ಸರ್ಕಾರ ಇದೀಗ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನುಮತಿ ನೀಡಿದೆ.

 

Read Full Story

08:07 PM (IST) Jan 17

ಗದಗ - ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ದಿನವಿಡೀ ಗೆಜ್ಜೆ ಶಬ್ಧ! ದೇವಿ ಕೋಪ ಶಮನಕ್ಕೆ ಊರವರಿಂದ ಮಹತ್ವದ ನಿರ್ಧಾರ

ಗದಗ ಜಿಲ್ಲೆಯ ದೇವಸ್ಥಾನದಲ್ಲಿ ರಾತ್ರಿ ವೇಳೆ ನಿಗೂಢ ಗೆಜ್ಜೆ ಶಬ್ಧ ಕೇಳಿಬರುತ್ತಿದೆ. ದುರ್ಗಮ್ಮ ದೇವಸ್ಥಾನದಲ್ಲಿ ಬೆಂಕಿ ಅವಘಡದ ನಂತರ ದೇವಿಯರ ಮೂರ್ತಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದ್ದು, ಅಂದಿನಿಂದ ಈ ಶಬ್ಧ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು  ಜಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.

Read Full Story

07:21 PM (IST) Jan 17

ಚಿಕ್ಕಮಗಳೂರು - ರಾಟ್‌ವೀಲರ್ ನಾಯಿ vs ನಾಗರಹಾವು ಮಧ್ಯೆ ಭೀಕರ ಕಾಳಗ, ಹಾವು ಕೊಂದು ಪ್ರಾಣಬಿಟ್ಟ ಶ್ವಾನ! ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ರಾಟ್‌ವೀಲರ್ ನಾಯಿ ಮತ್ತು ನಾಗರಹಾವಿನ ನಡುವೆ ಭೀಕರ ಕಾಳಗ ನಡೆದಿದೆ. ತನ್ನ ಮಾಲೀಕರನ್ನು ರಕ್ಷಿಸಲು ಹೋರಾಡಿದ ನಾಯಿ, ಹಾವನ್ನು ಕೊಂದರೂ, ಹಾವಿನ ವಿಷದಿಂದ ತಾನೂ ಪ್ರಾಣ ಬಿಟ್ಟಿದೆ. ಈ ದುರಂತ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. 

Read Full Story

06:37 PM (IST) Jan 17

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಸಮಿತಿ ಗ್ರೀನ್ ಸಿಗ್ನಲ್

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತದಿಂದ ಬ್ರೇಕ್ ಬಿದ್ದಿದ್ದ ಪಂದ್ಯಗಳಿಗೆ ಮತ್ತೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.KSCA ಅಧಿಕೃತ ಘೋಷಣೆ ಮಾಡಲಿದೆ.

Read Full Story

06:27 PM (IST) Jan 17

ಫಿನಾಲೆ ಹೊತ್ತಲ್ಲೇ ಕಾವ್ಯಾ ಉಲ್ಟಾ ಹೊಡೆಯೋದಾ? ಆ ದಿನದ ಮಾತು ಮರೆತೋಯ್ತಾ? ಗಿಲ್ಲಿ ಫ್ಯಾನ್ಸ್​ ಬೇಸರ

ಬಿಗ್​ಬಾಸ್​ ಮನೆಯಲ್ಲಿ ಆರಂಭದಲ್ಲಿ ಗಿಲ್ಲಿ ನಟನ ಜೊತೆ ಒಟ್ಟಾಗಿ ಇರುವುದಾಗಿ ಹೇಳಿದ್ದ ಕಾವ್ಯಾ ಶೈವ, ಇದೀಗ ತನ್ನ ಮದುವೆಗೆ ಗಿಲ್ಲಿಯೇ ಅಡ್ಡಿ ಎಂದು ಹೇಳಿಕೆ ನೀಡಿದ್ದಾರೆ.  ಗಿಲ್ಲಿ ಅಭಿಮಾನಿಗಳು, ಮೊದಲ ದಿನದ ವಿಡಿಯೋವನ್ನು ಸೋಷಿಯಲ್   ಹಂಚಿಕೊಂಡು ಬೇಸರಿಸುತ್ತಿದ್ದಾರೆ.

Read Full Story

06:27 PM (IST) Jan 17

ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾ ಬಲೆಗೆ ಬಿದ್ದ ಅಬಕಾರಿ ಅಧಿಕಾರಿಗಳ ಪ್ರಕರಣಕ್ಕೆ ಟ್ವಿಸ್ಟ್, ಸಚಿವ ತಿಮ್ಮಾಪುರ ಹೆಸರು ಬಹಿರಂಗ!

ಬೆಂಗಳೂರಿನಲ್ಲಿ  ಲಂಚಕ್ಕೆ ಬೇಡಿಕೆ ಇಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರ ಲಕ್ಷ್ಮೀ ನಾರಾಯಣ್ ಅವರು ಈ ಪ್ರಕರಣದಲ್ಲಿ ಅಬಕಾರಿ ಸಚಿವ ಬಿ. ತಿಮ್ಮಾಪುರ ಅವರ ಪಾತ್ರದ ಬಗ್ಗೆಯೂ ಗಂಭೀರ ಆರೋಪ ಮಾಡಿದ್ದಾರೆ, ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

Read Full Story

06:23 PM (IST) Jan 17

ಕೊಡಗು - ಈಜಲು ಹೋದ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ಸಾವು

ಕುಶಾಲನಗರದ ಸುಂಟಿಕೊಪ್ಪ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಆಳ ಅರಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಕಾಲೇಜು ಮುಗಿಸಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದ್ದು, ಪೊಲೀಸರು, ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

Read Full Story

05:51 PM (IST) Jan 17

88 ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲು ಬೇಲಿಯೇ ಹೊಲ ಮೇಯ್ದರೆ? ಪೊಲೀಸರಿಗೆ ಸಿಎಂ ಖಡಕ್ ಸಂದೇಶ

ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಪೊಲೀಸರೇ ಅಪರಾಧಗಳಲ್ಲಿ ಶಾಮೀಲಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೈಬರ್ ಅಪರಾಧ ಮತ್ತು ಡ್ರಗ್ಸ್ ದಂಧೆಯನ್ನು ಮಟ್ಟಹಾಕಿ ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಸೂಚಿಸಿದರು.

Read Full Story

05:49 PM (IST) Jan 17

Bigg Bossನಲ್ಲಿ ಈ ಬಾರಿ ದಾಖಲೆಯ 37 ಕೋಟಿ ವೋಟ್​ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿಯ ವಿಷ್ಯ ರಿವೀಲ್​

ಕನ್ನಡ ಬಿಗ್​ಬಾಸ್​ ಈ ಬಾರಿ 37 ಕೋಟಿಗೂ ಅಧಿಕ ಮತಗಳನ್ನು ಪಡೆದು ಹೊಸ ಇತಿಹಾಸ ಸೃಷ್ಟಿಸಿದೆ. ಈ ವಿಷಯವನ್ನು ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಅತಿ ಕಡಿಮೆ ಮತಗಳ ಅಂತರವಿದೆ ಎಂದು ತಿಳಿಸಿದ್ದಾರೆ. 

Read Full Story

05:33 PM (IST) Jan 17

ಮನಸ್ಸಿನಲ್ಲಿ ಅಂದುಕೊಳ್ಳೋದೆಲ್ಲ ಅಷ್ಟದಿಕ್ಕಿನಿಂದ ನಡೆಯುತ್ತಿದೆ; ಗಿಲ್ಲಿ ನಟ ಜಪಿಸುವ ರಹಸ್ಯ ಮಂತ್ರ ಯಾವುದು?

Bigg Boss Kannada Season 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ. ಗಿಲ್ಲಿ ನಟ ಅವರು ಏನು ಅಂದುಕೊಂಡಿರೋದೆಲ್ಲ ಆಗುತ್ತಿದೆ. ಇದಕ್ಕೆ ಕಾರಣ ಏನು? ಇದರ ಹಿಂದಿನ ಮಂತ್ರ ಯಾವುದು?

 

Read Full Story

05:23 PM (IST) Jan 17

Bigg Boss ಸ್ಪರ್ಧಿಗಳ ಪರ ಅಖಾಡಕ್ಕಿಳಿದ ಸಚಿವರು ಶಾಸಕರು! ಯಾರಿಗೆ ಯಾವ ರಾಜಕಾರಣಿ ಬೆಂಬಲ?

ಬಿಗ್​ಬಾಸ್​ ಕನ್ನಡ 12ರ ಫಿನಾಲೆ ಅಭೂತಪೂರ್ವ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಸೇರಿದಂತೆ ಫೈನಲಿಸ್ಟ್‌ಗಳ ಪರವಾಗಿ ಶಾಸಕರು ಮತ್ತು ಮಾಜಿ ಸಚಿವರೇ ಅಖಾಡಕ್ಕಿಳಿದು ಬೆಂಬಲ ವ್ಯಕ್ತಪಡಿಸುತ್ತಿದ್ದು, ಇದು ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾಗಿದೆ. 

Read Full Story

05:09 PM (IST) Jan 17

ಬಳ್ಳಾರಿ ಲೂಟಿ, 'ಡ್ಯಾಡಿ' ರಾಜಕೀಯ - ಎದುರಾಳಿಗಳ ವಿರುದ್ಧ ಡೈಲಾಗ್ ಹೊಡೆದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ!

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿ ಲೂಟಿ, ಜನಾರ್ದನ ರೆಡ್ಡಿ ಸೇರ್ಪಡೆ, ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳನ್ನು ಖಂಡಿಸಿದ ಅವರು, ಪಕ್ಷಾಂತರಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು.   

Read Full Story

05:06 PM (IST) Jan 17

ತುತ್ತು ಅನ್ನ ತಿನ್ನೋಕೆ ಜೈಲಲ್ಲಿ ಪವಿತ್ರಾ ಗೌಡ ಪರದಾಟ! ದರ್ಶನ್ ಚಳಿ ತಡೆಯೋದಕ್ಕೆ ಆಗ್ತಿಲ್ಲ ಅಂದ್ರು ಪೊಲೀಸರು ಡೋಂಟ್ ಕೇರ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ಪವಿತ್ರಾ ಗೌಡಗೆ ಕೋರ್ಟ್ ಅನುಮತಿ ನೀಡಿದರೂ ಮನೆಯೂಟ ಸಿಗುತ್ತಿಲ್ಲ. ಜೈಲಾಧಿಕಾರಿಗಳು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿದ್ದು, ಪವಿತ್ರಾ ಜೈಲಿನಲ್ಲೇ ಪರದಾಡುವಂತಾಗಿದೆ.  

Read Full Story

05:06 PM (IST) Jan 17

ಗದಗ - ಬಸ್ ರಶ್ ಇದೆ ಹತ್ತಬೇಡಿ ಎಂದಿದ್ದಕ್ಕೆ ಕುಡುಕನ ಕಿರಿಕ್; '50 ಮಂದಿಗಷ್ಟೇ ಅವಕಾಶ ಎಲ್ಲರನ್ನ ಕೆಳಗಿಳಿಸಿ' ಎಂದ ಭೂಪ!

ಗದಗ ನಗರದ ಬಸ್ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಬಸ್ ಹತ್ತಲು ಬಿಡಲಿಲ್ಲವೆಂದು ರಾದ್ಧಾಂತ ಸೃಷ್ಟಿಸಿದ್ದಾನೆ. ಬಸ್‌ನಲ್ಲಿ ಹೆಚ್ಚು ಜನರಿದ್ದಾರೆಂದು ಆರೋಪಿಸಿ, ಬಸ್‌ನ ಚಕ್ರದ ಮುಂದೆ ಮಲಗಿ ಪ್ರತಿಭಟಿಸಿ, ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಹೈರಾಣಾದರು.

Read Full Story

04:39 PM (IST) Jan 17

ಗಿಲ್ಲಿ ನಟನ ಹೆಸರಲ್ಲಿ ಮತ್ತೊಂದು ದಾಖಲೆ - Bigg Boss ಇನ್​ಸ್ಟಾಗ್ರಾಮ್​ನಲ್ಲಿಯೂ ಗೆದ್ದು ಬೀಗಿದ ಗಿಲ್ಲಿ

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ನಟ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ತಮ್ಮ ವೈಯಕ್ತಿಕ ಖಾತೆ ಮಾತ್ರವಲ್ಲದೆ, ಕಲರ್ಸ್ ವಾಹಿನಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇವರು ಕಾಣಿಸಿಕೊಂಡ ಮೂರು ಪ್ರೊಮೋಗಳು 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಪಡೆದು ಹೊಸ ಇತಿಹಾಸ ಸೃಷ್ಟಿಸಿವೆ.
Read Full Story

04:34 PM (IST) Jan 17

KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಬಿಗ್ ಶಾಕ್, 8 ಲಕ್ಷಕ್ಕೂ ಅಧಿಕ ದಂಡ ವಸೂಲಿ!

ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಇದನ್ನೇ ಬಳಸಿಕೊಂಡು ಟಿಕೆಟ್ ರಹಿತ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಕೆಎಸ್‌ಆರ್‌ಟಿಸಿಯಲ್ಲಿ 4,353 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ 8 ಲಕ್ಷಕ್ಕೂ ಅಧಿಕ ದಂಡ ವಸೂಲಿ.

Read Full Story

04:22 PM (IST) Jan 17

ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಚಿಂತನೆ, ಪ್ರಯಾಣಿಕರ ಆಕ್ರೋಶ, ಹೋರಾಟದ ಎಚ್ಚರಿಕೆ ಕೊಟ್ಟ ಸಂಸದ ಸೂರ್ಯ

BMRCL ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇ.5ರಷ್ಟು ಹೆಚ್ಚಿಸಲು ಚಿಂತಿಸುತ್ತಿದ್ದು, ಇದು ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಂಸದ ತೇಜಸ್ವಿ ಸೂರ್ಯ ಈ ಕ್ರಮವನ್ನು ಖಂಡಿಸಿದ್ದು, ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.  

Read Full Story

04:11 PM (IST) Jan 17

ಹೆಂಡ್ತಿ ಮುಂದೆ Bigg Boss ಫೈನಲಿಸ್ಟ್​ ಯಾವ್​ ಲೆಕ್ಕ? ಅಜ್ಜನ ಉತ್ತರಕ್ಕೆ ಕಿಚ್ಚನ ಚಪ್ಪಾಳೆ ಕೊಟ್ಟ ನೆಟ್ಟಿಗರು!

ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಬಗ್ಗೆ ಅಜ್ಜನಿಗೆ ಕೇಳಿದ ಪ್ರಶ್ನೆಗೆ, ಅವರು ನೀಡಿದ ಉತ್ತರ ವೈರಲ್ ಆಗಿದೆ. ಬಿಗ್ ಬಾಸ್ ಗಿಗ್ ಬಾಸ್ ಗೊತ್ತಿಲ್ಲ, ನನಗೆ ನನ್ನ ಹೆಂಡತಿಯೇ ಇಷ್ಟ ಎಂದು ಅಜ್ಜ ಹೇಳಿದ್ದು, ನೆಟ್ಟಿಗರ ಮನಗೆದ್ದಿದೆ.
Read Full Story

03:54 PM (IST) Jan 17

ಲೈಸನ್ಸ್‌ ಕೊಡಬೇಕಾದ್ರೆ 2.30 ಕೋಟಿ ರೂ ಲಂಚ, ಕಛೇರಿಯಲ್ಲಿ ಹಣ ಪಡೆಯವಾಗಲೇ ಲೋಕಾ ಬಲೆಗೆ ಬಿದ್ದ ಅಬಕಾರಿ ಉಪ ಆಯುಕ್ತ!

ಬೆಂಗಳೂರಿನಲ್ಲಿ ನಡೆದ ಭಾರೀ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ, ಸಿಎಲ್–7 ಮತ್ತು ಮೈಕ್ರೋ ಬ್ರೇವರಿ ಲೈಸೆನ್ಸ್ ನೀಡಲು ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮೂವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.  

Read Full Story

03:11 PM (IST) Jan 17

ದೇವನಹಳ್ಳಿಯಲ್ಲಿ ಬೈಕ್ -ಲಾರಿ ನಡುವೆ ಭೀಕರ ಅಪಘಾತ, ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು!

ದೇವನಹಳ್ಳಿ ತಾಲ್ಲೂಕಿನ ಬೈಚಾಪುರ-ಬೆಟ್ಟಕೋಟೆ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read Full Story

03:09 PM (IST) Jan 17

ಬಿಗ್‌ ಬಾಸ್ ಫಿನಾಲೆಯಲ್ಲಿ ಮತ್ತೊಬ್ಬರ ಎಂಟ್ರಿ ಕನ್ಫರ್ಮ್‌! ಫೈನಲ್‌ನಲ್ಲಿ ತುಟಿ ಬಿಚ್ತಾರಾ ಸುದೀಪ್?

ಬಿಗ್ ಬಾಸ್ ಶೋನಲ್ಲಿ ನಟ ಸುದೀಪ್ ರಣಹದ್ದುಗಳ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದ್ದು, ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ಜಾರಿ ಮಾಡಿದೆ. 

Read Full Story

02:56 PM (IST) Jan 17

ಅಶ್ವಿನಿ ಗೌಡ ಇಲ್ಲ ಅಂದಿದ್ರೆ 4 ವಾರಕ್ಕೆ Bigg Boss ಮುಚ್ಚಬೇಕಿತ್ತು, ಮುಖ್ಯಸ್ಥರು ಹೇಳಿದ್ರು - ನಾರಾಯಣಗೌಡ್ರು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಸ್ಪರ್ಧಿ. ಈಗ ಅಶ್ವಿನಿ ಬಗ್ಗೆ ವಾಹಿನಿಯವರು ಏನು ಹೇಳಿದರು ಎನ್ನೋದನ್ನು ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ್ರು ಮಾತನಾಡಿರೋ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Read Full Story

02:26 PM (IST) Jan 17

Amruthadhaare - ಗಂಡನ ಜೊತೆ ಬಾಳಲು ಭೂಮಿಕಾ ನಿರ್ಧಾರ - ಗೌತಮ್‌ಗಾಗಿ ಮಮ್ಮಲ ಮರುಗಿದ ವೀಕ್ಷಕರು

ಐದು ವರ್ಷಗಳಿಂದ ದೂರವಿದ್ದ ಗೌತಮ್ ಮತ್ತು ಭೂಮಿಕಾ ಇದೀಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವಠಾರಕ್ಕೆ ಬಂದಿರುವ ತಂದೆ ಸದಾಶಿವ ಅವರ ಮಾತಿಗೆ ಒಪ್ಪಿ, ಭೂಮಿಕಾ ಮತ್ತೆ ಗೌತಮ್ ಜೊತೆ ಜೀವನ ನಡೆಸಲು ಮುಂದಾಗಿದ್ದಾಳೆ. ಈ ಪ್ರೋಮೋ ನೋಡಿ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
Read Full Story

02:13 PM (IST) Jan 17

ಆಗ ಊಟಕ್ಕೂ ಪರದಾಟ, ಈಗ ಬಿಗ್​ ಬಾಸ್ ಕಿರೀಟ? ವೋಟಿಂಗ್​ ಲೆಕ್ಕದಲ್ಲಿ ಗಿಲ್ಲಿನೇ ನಂ.1 ಸ್ಪರ್ಧಿ!

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿ ಗಿಲ್ಲಿಗೆ ಭರ್ಜರಿ ಜನಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಾದ್ಯಂತ ಫ್ಯಾನ್ಸ್ ಪ್ರಚಾರ ಮಾಡುತ್ತಿದ್ದು, ಅವರ ಹೋರಾಟದ ಬದುಕು, ಪ್ರಸ್ತುತ ವೋಟಿಂಗ್ ಟ್ರೆಂಡ್ ಗಮನಿಸಿದರೆ, ಗಿಲ್ಲಿಯೇ ಈ ಬಾರಿಯ ವಿನ್ನರ್ ಆಗುವ ಸಾಧ್ಯತೆ ದಟ್ಟವಾಗಿದೆ.

Read Full Story

01:31 PM (IST) Jan 17

ಬಾಯಿಂದ ಕುಡಿಯೋದು ಹಳೇ ಸ್ಟೈಲ್; ಮೂಗಿನಲ್ಲೇ ಬಿಯರ್‌ ಇಳಿಸಿದ ಮಹಾಭೂಪ! Video Viral

Chinese man drinks an entire beer with his NOSE: ಕೆಲವರು ಆಲ್ಕೋಹಾಲ್‌ ಸಿಕ್ಕಿದರೆ ಸಾಕು ಎನ್ನುತ್ತಿರುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ಬಿಯರ್‌ನ್ನು ಮೂಗಿನ ಮೂಲಕ ಸೇವನೆ ಮಾಡಿದ್ದಾರೆ. ಈ ವಿಡಿಯೋ ಈಗ ಭಾರೀ ವೈರಲ್‌ ಆಗ್ತಿದೆ.

 

Read Full Story

01:01 PM (IST) Jan 17

ರೇಣುಕಾಸ್ವಾಮಿ ಕೊಲೆ ಪ್ರಕರಣ, ಜೈಲಾಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಸಿದ ಆರೋಪ, ನ್ಯಾಯಾಂಗ ನಿಂದನೆ ಅರ್ಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿಗಳಿಗೆ ಮನೆ ಊಟ ನೀಡದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ, ರೇಣುಕಾಸ್ವಾಮಿ ತಾಯಿಯನ್ನು ಹಾಸ್ಟೈಲ್ ಸಾಕ್ಷಿ ಎಂದು ಪರಿಗಣಿಸುವ ಪ್ರಾಸಿಕ್ಯೂಷನ್ ಮನವಿ ತಿರಸ್ಕರಿಸಿದೆ.

Read Full Story

12:45 PM (IST) Jan 17

ಕಿಚ್ಚ ಸುದೀಪ್‌ ಆಸೆಯನ್ನು ಈಡೇರಿಸಿದ Gilli Nata; ಕೊನೆಗೂ BBK 12 ಶೋನಲ್ಲಿ ಅದ್ಭುತವೊಂದು ಸೃಷ್ಟಿಯಾಯ್ತು!

Bigg Boss Kannada Season 12 Episode: ಬಿಗ್‌ ಬಾಸ್‌ ಮನೆಯಲ್ಲಿ ಗ್ರ್ಯಾಂಡ್‌ ಫಿನಾಲೆ ಕುರಿತಂತೆ ಸಂಭ್ರಮ ಶುರುವಾಗಿದೆ. ಯಾರು ಗೆಲ್ಲುತ್ತಾರೆ? ಯಾರು ಯಾವ ಸ್ಥಾನ ತಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಹೀಗಿರುವಾಗ ಗಿಲ್ಲಿ ನಟನ ಗೆಟಪ್‌ ಕೂಡ ಬದಲಾಗಿದೆ.

Read Full Story

12:33 PM (IST) Jan 17

ಮಂಡ್ಯ - 11 ತಿಂಗಳ ಬಂಡೂರು ಕುರಿ ದಾಖಲೆಯ 1.35 ಲಕ್ಷ ರೂಗೆ ಮಾರಾಟ! ಬೆಂಗಳೂರು ಟೆಕ್ಕಿ ಖರೀದಿಸಿದ್ಯಾಕೆ?

ಮಂಡ್ಯದಲ್ಲಿ  11 ತಿಂಗಳ ಬಂಡೂರು ಟಗರು, 1 ಲಕ್ಷ 35 ಸಾವಿರ ರೂಪಾಯಿ ದಾಖಲೆ ಬೆಲೆಗೆ ಮಾರಾಟವಾಗಿದೆ. ಬೆಂಗಳೂರಿನ ಇಂಜಿನಿಯರ್ ಹರೀಶ್ ಅವರು ಈ ಟಗರುವನ್ನು ತಳಿ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ಖರೀದಿಸಿದ್ದಾರೆ. ಈ ಘಟನೆಯು ಬಂಡೂರು ತಳಿಯ ಮಹತ್ವ ಮತ್ತು ರೈತರಿಗೆ ಉತ್ತಮ ಆದಾಯದ ಸಾಧ್ಯತೆಯನ್ನು ತೋರಿಸಿದೆ.

Read Full Story

12:28 PM (IST) Jan 17

ಜಾತ್ಯತೀತತೆ ಯಾರೂ ಯಾರಿಗೂ ಕಲಿಸಲಾಗಲ್ಲ - ಜಾವೇದ್

‘ಜಾತ್ಯತೀತ ಮನೋಭಾವ ಕಲಿಸುವುದಕ್ಕೆ ಯಾವುದೇ ಕ್ರ್ಯಾಶ್ ಕೋರ್ಸ್ ಇಲ್ಲ. ಅದು ನಮ್ಮ ಜೀವನಶೈಲಿ ಆದಾಗಲೇ ಅರ್ಥಪೂರ್ಣ. ಇವತ್ತು ಜಾತ್ಯತೀತ ಎನ್ನುವುದನ್ನು ನಾಲ್ಕು ಅಕ್ಷರಗಳ ಪದಕ್ಕೆ ಇಳಿಸಲಾಗಿದೆ’ ಎಂದು ಹಿರಿಯ ಗೀತರಚನಕಾರ, ಲೇಖಕ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟರು.

Read Full Story

12:08 PM (IST) Jan 17

ಬಜಾಜ್‌ ಚೇತಕ್‌ನಿಂದ ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್‌

ದೇಶದ ಪ್ರತಿಷ್ಠಿತ ಆಟೋ ಮೊಬೈಲ್‌ ಕಂಪನಿ ಬಜಾಜ್‌ ಆಟೋ ಲಿಮಿಟೆಡ್‌ ಮತ್ತೊಂದ ಚೇತಕ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಬಿಡುಗಡೆ ಮಾಡಿದೆ. ಪುಣೆ ನಗರದ ಅಕ್ಕುರಡಿಯಲ್ಲಿರುವ ಸಂಸ್ಥೆಯ ಉತ್ಸಾಹ್‌ ಸಭಾಂಗಣದಲ್ಲಿ ಚೇತಕ್‌ ಸಿ25 ವಾಹನದ ಬಿಡುಗಡೆ ಹಾಗೂ ವಾಹನದ ಟೆಸ್ಟ್‌ ರೈಡ್‌ ನಡೆಸಲಾಯಿತು.

Read Full Story

11:48 AM (IST) Jan 17

BBK 12 - ಕುರುಬ Vs ಗೌಡ - ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ

ಗಿಲ್ಲಿ ನಟ ಮತ್ತು ಅಶ್ವಿನಿ ಗೌಡರ ಪರವಾಗಿ 'ಕುರುಬ Vs ಗೌಡ' ಎಂಬ ಜಾತಿ ರಾಜಕಾರಣಕ್ಕೆ ತಿರುಗಿದೆ. ಈ ಬೆಳವಣಿಗೆಯನ್ನು 'ಪಿಆರ್ ಮಾಫಿಯಾ' ಎಂದು ಕರೆದಿರುವ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ, ಮನರಂಜನಾ ಕಾರ್ಯಕ್ರಮದಲ್ಲಿ ಜಾತಿ ಬೆರೆಸದಂತೆ ವೀಕ್ಷಕರಿಗೆ ಸಲಹೆ ನೀಡಿದ್ದಾರೆ.

Read Full Story

11:46 AM (IST) Jan 17

ಗದಗ - ಲಕ್ಕುಂಡಿಯಲ್ಲಿ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆಯಾಗಿದೆ. ಈ ಐತಿಹಾಸಿಕ ಸಂಶೋಧನೆಯು ಕುತೂಹಲ ಕೆರಳಿಸಿದ್ದರೆ, ಉತ್ಖನನದಿಂದಾಗಿ ವಾರ್ಷಿಕ ವೀರಭದ್ರೇಶ್ವರ ಜಾತ್ರೆಗೆ ಅಡ್ಡಿಯಾಗುವ ಆತಂಕದಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story

11:31 AM (IST) Jan 17

ಕಿಡ್ನಾಪ್‌ ಆದ 1094 ಮಕ್ಕಳು ಇನ್ನೂ ಪತ್ತೆಯಾಗಿಲ್ಲ!

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಅಪಹರಣ/ನಾಪತ್ತೆ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಹರಣವಾದ ಮಕ್ಕಳನ್ನು ಭಿಕ್ಷಾಟನೆ ಸೇರಿ ಇನ್ನಿತರ ಕೆಲಸಗಳಿಗೆ ಬಲವಂತವಾಗಿ ದೂಡಲಾಗುತ್ತಿದೆ.

Read Full Story

11:02 AM (IST) Jan 17

ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ

ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಒಂದೊಂದೇ ಕರಾಳ ಮುಖ ಬಯಲಾಗುತ್ತಿದೆ. ತನಗೆ ಮದುವೆ ಮಾಡಿದ್ದ ಪುರೋಹಿತನಿಗೂ ಲಾಂಗ್ ತೋರಿಸಿ ಹಲ್ಲೆ ಮಾಡಿದ್ದ ಎಂಬ ವಿಚಾರ ತಿಳಿದುಬಂದಿದೆ.

Read Full Story

11:01 AM (IST) Jan 17

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ 8 ಬಡಾವಣೆಗಳನ್ನು ಜಿಬಿಎಗೆ ಒಪ್ಪಿಸುವಂತೆ ಆದೇಶ

ನಗರಾಭಿವೃದ್ಧಿ ಇಲಾಖೆಯು ಬನಶಂಕರಿ 6ನೇ ಹಂತ ಮತ್ತು ಅಂಜನಾಪುರ ಸೇರಿದಂತೆ ಎಂಟು ಪ್ರಮುಖ ಬಿಡಿಎ ಬಡಾವಣೆಗಳನ್ನು ಸಂಬಂಧಿತ ನಗರ ಪಾಲಿಕೆಗಳಿಗೆ ಹಸ್ತಾಂತರಿಸಲು ಅಧಿಕೃತ ಆದೇಶ ಹೊರಡಿಸಿದೆ.  

Read Full Story

10:55 AM (IST) Jan 17

Gadag - ಬೆಂಕಿಗಾಹುತಿಯಾದ ದೇವರ ಮೂರ್ತಿಗಳು - ದೇವಸ್ಥಾನದಿಂದ ನಿಗೂಢ ಗೆಜ್ಜೆನಾದ! ಗ್ರಾಮದಲ್ಲಿ ಆತಂಕ

Gejje Nada: ಗದಗದ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ, ಬೆಂಕಿ ಅವಘಡದಿಂದ ವಿರೂಪಗೊಂಡ ದೇವರ ಮೂರ್ತಿಗಳನ್ನು ಸ್ಥಳಾಂತರಿಸಿದ ಮಾರುತಿ ಮಂದಿರದಿಂದ ನಿಗೂಢ ಗೆಜ್ಜೆನಾದ ಕೇಳಿಬರುತ್ತಿದೆ.

Read Full Story

10:53 AM (IST) Jan 17

BBK 12 - ಅರೇ.. ಗಿಲ್ಲಿ...; ನರೇಂದ್ರ ಮೋದಿ ಅವ್ರೇ ಗಿಲ್ಲಿ ನಟನ ಬಗ್ಗೆ ಕನ್ನಡದಲ್ಲೇ ಪೋಸ್ಟ್‌ ಮಾಡಿದ್ರಾ? ಸತ್ಯ ಏನು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್‌ ಫಿನಾಲೆ ಹತ್ತಿರ ಬಂತು. ಇನ್ನು ಒಂದೇ ದಿನದಲ್ಲಿ ಯಾರು ವಿನ್ನರ್‌ ಆಗ್ತಾರೆ ಎಂದು ಘೋಷಣೆ ಆಗುವುದು. ಈ ಮಧ್ಯೆ ನರೇಂದ್ರ ಮೋದಿ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ರಾ?

 

Read Full Story

More Trending News