MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಗದಗ: ಲಕ್ಕುಂಡಿಯ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಗದಗ: ಲಕ್ಕುಂಡಿಯ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆಯಾಗಿದೆ. ಈ ಐತಿಹಾಸಿಕ ಸಂಶೋಧನೆಯು ಕುತೂಹಲ ಕೆರಳಿಸಿದ್ದರೆ, ಉತ್ಖನನದಿಂದಾಗಿ ವಾರ್ಷಿಕ ವೀರಭದ್ರೇಶ್ವರ ಜಾತ್ರೆಗೆ ಅಡ್ಡಿಯಾಗುವ ಆತಂಕದಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

2 Min read
Author : Gowthami K
Published : Jan 17 2026, 11:46 AM IST
Share this Photo Gallery
  • FB
  • TW
  • Linkdin
  • Whatsapp
18
ಎರಡನೇ ದಿನ ಶಿವಲಿಂಗದ ಪೀಠ ಪತ್ತೆ
Image Credit : Asianet News

ಎರಡನೇ ದಿನ ಶಿವಲಿಂಗದ ಪೀಠ ಪತ್ತೆ

ಗದಗ: ಕಲ್ಯಾಣಿ ಚಾಲುಕ್ಯರ ಕಲಾ ವೈಭವದ ಜೀವಂತ ಸಾಕ್ಷಿಯಾಗಿರುವ, “ದೇವಸ್ಥಾನಗಳ ಸ್ವರ್ಗ” ಎಂದೇ ಖ್ಯಾತಿ ಪಡೆದ ಲಕ್ಕುಂಡಿಯಲ್ಲಿ ಪುರಾತತ್ವ ಮಹತ್ವದ ಅಪೂರ್ವ ಅವಶೇಷಗಳು ಪತ್ತೆಯಾಗಿವೆ. ಲಕ್ಕುಂಡಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ಎರಡನೇ ದಿನ ಶಿವಲಿಂಗದ ಪೀಠ ಹಾಗೂ ಪಾನಿಬಟ್ಟಲು ಮಾದರಿಯ ಪ್ರಾಚೀನ ಆಕೃತಿಗಳು ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

28
ಶೈವ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು
Image Credit : Asianet News

ಶೈವ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು

ಉತ್ಖನನದ ಎರಡನೇ ದಿನದ ಆರಂಭದಲ್ಲೇ ಶಿವಲಿಂಗ ಪೀಠದ ಮಾದರಿಯ ಪುರಾತನ ಅವಶೇಷಗಳು ಗೋಚರವಾಗಿದ್ದು, ಇದು ಶೈವ ಸಂಸ್ಕೃತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ಕುರುಹು ಪತ್ತೆಯಾಗಿದೆ ಎಂದು ಪುರಾತತ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲೇ ಕಂಡುಬಂದ ಶಿವಲಿಂಗದ ಆಕೃತಿ ಪುರಾತನ ಕಾಲದ ಧಾರ್ಮಿಕ ಆಚರಣೆಗಳತ್ತ ಹೊಸ ಬೆಳಕು ಚೆಲ್ಲುತ್ತಿದೆ.

Related Articles

Related image1
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
Related image2
ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ, ಆತ ಭೇಟಿ ಕೊಟ್ಟ ಪುಣ್ಯ ಭೂಮಿ: ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ
38
ಎರಡನೇ ದಿನವೂ ಮುಂದುವರೆದ ಉತ್ಖನನ ಕಾರ್ಯ
Image Credit : Asianet News

ಎರಡನೇ ದಿನವೂ ಮುಂದುವರೆದ ಉತ್ಖನನ ಕಾರ್ಯ

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಹಂತ ಹಂತವಾಗಿ ಉತ್ಖನನ ಕಾರ್ಯ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಎರಡನೇ ದಿನದ ಉತ್ಖನನ ಕಾರ್ಯವನ್ನು ಸುಮಾರು 10 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಕೈಗೊಳ್ಳಲಾಗಿದೆ. ನಿನ್ನೆ ಜಿಲ್ಲಾಧಿಕಾರಿ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎನ್ ಶ್ರೀಧರ್ ಅವರು ಉತ್ಖನನ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು.

48
ಉತ್ಖನನ ಎರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ
Image Credit : Asianet News

ಉತ್ಖನನ ಎರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ

ಮೊದಲ ದಿನ ತಂಡವು ಸುಮಾರು ನಾಲ್ಕು ಇಂಚಿನಷ್ಟು ಆಳಕ್ಕೆ ತೋಡಿ ಪರಿಶೀಲನೆ ನಡೆಸಿದ್ದು, ಎರಡನೇ ದಿನದಿಂದ ಇನ್ನಷ್ಟು ಆಳವಾಗಿ ಹಾಗೂ ವಿಜ್ಞಾನಾತ್ಮಕ ವಿಧಾನದಲ್ಲಿ ಉತ್ಖನನ ಮುಂದುವರಿಸಲಾಗಿದೆ. ಪುರಾತತ್ವ ಇಲಾಖೆಯ ಮಾಹಿತಿ ಪ್ರಕಾರ, ಈ ಉತ್ಖನನ ಕಾರ್ಯವು ಸುಮಾರು ಎರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.

58
ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ
Image Credit : Asianet News

ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ: ಜಿಲ್ಲಾಧಿಕಾರಿ ಆದೇಶ

ಉತ್ಖನನ ಕಾರ್ಯ ನಿರ್ವಿಘ್ನವಾಗಿ ನಡೆಯುವ ದೃಷ್ಟಿಯಿಂದ, ಉತ್ಖನನ ನಡೆಯುತ್ತಿರುವ ಪ್ರದೇಶವನ್ನು ‘ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಲಾಗಿದೆ. ಪುರಾತತ್ವ ಇಲಾಖೆಯ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಅವರು ಉತ್ಖನನ ಕಾರ್ಯ ಮುಗಿಯುವವರೆಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಫೋಟೋ ಹಾಗೂ ವೀಡಿಯೋಗ್ರಫಿಗೂ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಉತ್ಖನನ ಕಾರ್ಯಕ್ಕೆ ಯಾವುದೇ ರೀತಿಯ ಅಡಚಣೆ ಆಗಬಾರದು ಎಂಬ ಕಾರಣದಿಂದಲೇ ಈ ನಿರ್ಬಂಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

68
ಸ್ಥಳೀಯರಿಂದ ವಿರೋಧ: ವೀರಭದ್ರೇಶ್ವರ ಜಾತ್ರೆಗೆ ತೊಂದರೆ ಆತಂಕ
Image Credit : Asianet News

ಸ್ಥಳೀಯರಿಂದ ವಿರೋಧ: ವೀರಭದ್ರೇಶ್ವರ ಜಾತ್ರೆಗೆ ತೊಂದರೆ ಆತಂಕ

ಆದರೆ, ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಉತ್ಖನನಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಉತ್ಖನನ ನಡೆಯುವ ಪ್ರದೇಶಕ್ಕೆ ಏಕಾಏಕಿ ಸಾರ್ವಜನಿಕ ಪ್ರವೇಶ ನಿಷೇಧಿಸಿದ ಕ್ರಮ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ನಡೆಯುವ ಪ್ರಸಿದ್ಧ ವೀರಭದ್ರೇಶ್ವರ ಜಾತ್ರೆಗೆ ಉತ್ಖನನದಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಅಗ್ನಿಕುಂಡ ನಿರ್ಮಿಸುವ ಜಾಗದಲ್ಲಿಯೇ ಉತ್ಖನನ ಕಾರ್ಯ ನಡೆಯುತ್ತಿರುವುದು ಅವರ ಆಕ್ಷೇಪಕ್ಕೆ ಪ್ರಮುಖ ಕಾರಣವಾಗಿದೆ.

78
ದೇವಸ್ಥಾನ ಸಮಿತಿಗೆ ಮಾಹಿತಿ ಇಲ್ಲದೆ ಉತ್ಖನನ ಆರೋಪ
Image Credit : Asianet News

ದೇವಸ್ಥಾನ ಸಮಿತಿಗೆ ಮಾಹಿತಿ ಇಲ್ಲದೆ ಉತ್ಖನನ ಆರೋಪ

ದೇವಸ್ಥಾನ ಸಮಿತಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಉತ್ಖನನ ಕಾರ್ಯ ಆರಂಭಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಉತ್ಖನನದಿಂದ ಧಕ್ಕೆಯಾಗಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

“ಐವತ್ತು ವರ್ಷಗಳ ಇತಿಹಾಸ ಹೊಂದಿರುವ ಜಾತ್ರೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಪುರಾತತ್ವ ಕಾರ್ಯಗಳ ಜೊತೆಗೆ ಧಾರ್ಮಿಕ ಸಂಪ್ರದಾಯಗಳಿಗೂ ಗೌರವ ನೀಡಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಏಕಾಏಕಿ ಪ್ರದೇಶವನ್ನು ನಿರ್ಬಂಧಿಸಿರುವ ಕ್ರಮ ಜನರಲ್ಲಿ ಆಕ್ರೋಶ ಮೂಡಿಸಿದೆ.

88
ಸ್ಥಳೀಯರ ಆಚರಣೆಗೆ ಮನ್ನಣೆ ಮುಖ್ಯ
Image Credit : Asianet News

ಸ್ಥಳೀಯರ ಆಚರಣೆಗೆ ಮನ್ನಣೆ ಮುಖ್ಯ

ಒಟ್ಟಾರೆ, ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ಈ ಪುರಾತನ ಅವಶೇಷಗಳು ಇತಿಹಾಸದ ಮಹತ್ವದ ಅಧ್ಯಾಯವನ್ನು ಬಿಚ್ಚಿಡುವ ಸಾಧ್ಯತೆ ಹೊಂದಿದ್ದರೂ, ಉತ್ಖನನ ಮತ್ತು ಸ್ಥಳೀಯರ ಧಾರ್ಮಿಕ ಆಚರಣೆಗಳ ನಡುವೆ ಸಮತೋಲನ ಕಾಪಾಡಬೇಕಿರುವುದು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಗದಗ
ಲಕ್ಕುಂಡಿ
ಬಂಗಾರದ ನಿಧಿ
ಶಿವ
ದೇವಸ್ಥಾನ
ಪುರಾತತ್ವ ಇಲಾಖೆ

Latest Videos
Recommended Stories
Recommended image1
ತನಗೆ ಮದುವೆ ಮಾಡಿದ್ದ ಪುರೋಹಿತಗೂ ರಾಜೀವ್‌ ಲಾಂಗ್‌ ತೋರಿಸಿ ಧಮ್ಕಿ
Recommended image2
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ 8 ಬಡಾವಣೆಗಳನ್ನು ಜಿಬಿಎಗೆ ಒಪ್ಪಿಸುವಂತೆ ಆದೇಶ
Recommended image3
Gadag: ಬೆಂಕಿಗಾಹುತಿಯಾದ ದೇವರ ಮೂರ್ತಿಗಳು: ದೇವಸ್ಥಾನದಿಂದ ನಿಗೂಢ ಗೆಜ್ಜೆನಾದ! ಗ್ರಾಮದಲ್ಲಿ ಆತಂಕ
Related Stories
Recommended image1
ಲಕ್ಕುಂಡಿ: ನಿಧಿ ಸಿಕ್ಕ ಜಾಗದಲ್ಲಿ ದೊಡ್ಡ ಸರ್ಪ ಎದ್ದಿದೆ, ಒಂದಲ್ಲ ಒಂದು ದಿನ ಕಚ್ಚುತ್ತೆ, ನಮಗೆ ಆ ಜಾಗ ಬೇಡವೆಂದ ಕುಟುಂಬ!
Recommended image2
ಲಕ್ಕುಂಡಿಗೆ ಶ್ರೀರಾಮನ ಕಾಲದ ಇತಿಹಾಸವಿದೆ, ಆತ ಭೇಟಿ ಕೊಟ್ಟ ಪುಣ್ಯ ಭೂಮಿ: ಇತಿಹಾಸ ತಜ್ಞ ಅಬ್ದುಲ್ ಕಟ್ಟಿಮನಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved