ದಾವಣಗೆರೆ: ತಮ್ಮ ಸಹೋದರ, ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇರುವುದು ಒಳ್ಳೆಯದಾಗಿದೆ. ಅಧ್ಯಕ್ಷರಾಗಿದ್ದರೆ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನು ನಾಯಕ ಸಮಾಜಕ್ಕೆ ಕಟ್ಟುತ್ತಿದ್ದರು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಭಾನುವಾರ ನಡೆದ ಸಂವಿಧಾನಬದ್ಧ ಶೇ.7ರ ಎಸ್ಟಿ ಮೀಸಲಾತಿ ಜಾರಿಯಾಗಲೇಬೇಕು ಎಂಬ ಸಮಾವೇಶದಲ್ಲಿ ಮಾತನಾಡಿ, ಒಂದು ವೇಳೆ ತಮ್ಮ ಸಹೋದರ ಅಧ್ಯಕ್ಷರಾಗಿದ್ದರೆ ಇಡೀ ನಮ್ಮ ಸಮುದಾಯ ಕೆಡುತ್ತಿತ್ತು. ಕಾಂಗ್ರೆಸ್ ಸೋತರೆ ನಾಯಕ ಸಮಾಜದ ಲೀಡರ್ಶಿಪ್ನಿಂದಾಗಿಯೇ ಪಕ್ಷಕ್ಕೆ ಸೋಲಾಯಿತು ಅಂತ ನಮ್ಮ ಮೇಲೆಯೇ ಕಾಂಗ್ರೆಸ್ಸಿನವರು ಅಪವಾದ ಹೊರಿಸುತ್ತಿದ್ದರು. ಅದಕ್ಕೆ ದೇವರು ಒಳ್ಳೆಯದನ್ನೇ ಮಾಡಿದ್ದಾನೆ ಎಂದರು.
ಬಿಜೆಪಿ ತಪ್ಪಿನಿಂದಲೇ ಇವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ಅಧಿಕಾರದಲ್ಲಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲಾ ಸಮಾಜಗಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರೆ ಸೋಲುತ್ತಿರಲಿಲ್ಲ. ಗೆದ್ದ ಮೇಲೆ ಒಂದೇ ಸಮುದಾಯದ ರಾಜಕೀಯವನ್ನೂ ಮಾಡಬಾರದು. ಅದನ್ನು ನಾವು ಹೋರಾಟದ ಮೂಲಕ ಗಟ್ಟಿಯಾಗಿ ಎದುರಿಸಬೇಕು ಎಂದು ಹೇಳಿದರು.
08:52 AM (IST) Jun 15
08:40 AM (IST) Jun 15
Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ಗೆ ಸ್ವಂತ ಮಗಳನ್ನು ಹುಡುಕೋ ಸಮಸ್ಯೆ ಒಂದುಕಡೆಯಾದರೆ, ಮನೆಯಲ್ಲಿರುವ ಮಿಂಚುಳನ್ನು ಉಳಿಸಿಕೊಳ್ಳಬೇಕಿದೆ. ಇದೊಂದು ಟಾಸ್ಕ್ ಆಗಿದೆ. ಹೀಗಿರುವಾಗ ಕರ್ಣ ಧಾರಾವಾಹಿ ಕರ್ಣನ ಆಗಮನದಿಂದ ಎಲ್ಲ ಗೊಂದಲ ಬಗೆಹರಿದಿದೆ.
07:48 AM (IST) Jun 15
07:47 AM (IST) Jun 15
07:34 AM (IST) Jun 15
07:20 AM (IST) Jun 15
07:12 AM (IST) Jun 15
ಯಲಬುರ್ಗಾ ಪಟ್ಟಣದ 12ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆ ಉಂಟಾದಾಗ, ಶಿವಕುಮಾರ ಮ್ಯಾಗೇರಿ ಎಂಬ ಯುವಕ ತನ್ನ ಸ್ವಂತ ಕೊಳವೆಬಾವಿಯಿಂದ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾನೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಆತ ಮಾಡುತ್ತಿರುವ ಈ ಸಮಾಜ ಸೇವೆಯನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
06:46 AM (IST) Jun 15
06:37 AM (IST) Jun 15
ಸಂಗೋಳಗಿ ಗ್ರಾಮದ ಸರ್ಕಾರಿ ಶಾಲೆಯ ಹಳೆಯ, ಬಳಕೆಯಲ್ಲಿಲ್ಲದ ಕಟ್ಟಡದ ಛಾವಣಿ ಕುಸಿದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಈ ಘಟನೆಯು ತಾಲೂಕಿನಲ್ಲಿರುವ ಶಿಥಿಲಗೊಂಡ ಶಾಲಾ ಕಟ್ಟಡಗಳ ಸುರಕ್ಷತೆಯ ಗಂಭೀರ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
06:28 AM (IST) Jun 15
06:16 AM (IST) Jun 15
06:08 AM (IST) Jun 15
05:44 AM (IST) Jun 15
05:39 AM (IST) Jun 15
05:32 AM (IST) Jun 15
05:26 AM (IST) Jun 15