Published : Aug 12, 2025, 07:30 AM ISTUpdated : Aug 12, 2025, 10:59 PM IST

Karnatata Latest News Live: 1 ಲಕ್ಷ ರೂ ಮ್ಯಾಕ್‌ಬುಕ್ ಇನ್ನು ಕೇವಲ 52,000 ರೂ, ಆ್ಯಪಲ್ ಲ್ಯಾಪ್‌ಟಾಪ್ ಲಾಂಚ್‌ಗೆ ತಯಾರಿ

ಸಾರಾಂಶ

ಬೆಂಗಳೂರು (ಆ.12): ರಾಜ್ಯ ರಾಜಕಾರಣದಲ್ಲಿ ಅಪರೂಪದ ಬೆಳವಣಿಗೆ ಎನ್ನವಂತೆ, ಹಾಲಿ ಮಂತ್ರಿಯೇ ವಜಾ ಆಗಿದ್ದಾರೆ. ಸೆಪ್ಟೆಂಬರ್‌ಗೆ ರಾಜ್ಯದಲ್ಲಿ ಕ್ರಾಂತಿ ಎನ್ನುತ್ತಿದ್ದ ಸಹಕಾರ ಸಚಿವ ಆಗಸ್ಟ್‌ನಲ್ಲೇ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಸಹಕಾರ ಸಚಿವ ಕೆಎನ್‌ ರಾಜಣ್ಣ ಅವರವನ್ನು ಸಂಪುಟದಿಂದ ವಜಾ ಮಾಡಲಾಗಿದೆ.'ಮತಗಳ್ಳತನ ಆರೋಪ ಮಾಡಲು ನಾಚಿಕೆಯಾಗಬೇಕು' ಎಂದಿದ್ದಕ್ಕೆ ಮಂತ್ರಿ ತಲೆದಂಡವಾಗಿದೆ. ರಾಜೀನಾಮೆ ಕೊಡಲು ಮುಂದಾದರೂ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ವರಿಷ್ಠರು ವಜಾ ಮಾಡಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌.

macbook air m1

10:59 PM (IST) Aug 12

1 ಲಕ್ಷ ರೂ ಮ್ಯಾಕ್‌ಬುಕ್ ಇನ್ನು ಕೇವಲ 52,000 ರೂ, ಆ್ಯಪಲ್ ಲ್ಯಾಪ್‌ಟಾಪ್ ಲಾಂಚ್‌ಗೆ ತಯಾರಿ

ಆ್ಯಪಲ್ ಮ್ಯಾಕ್‌ಬುಕ್ ಬೆಲೆ 1 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.ಆದರೆ ಇನ್ಮುಂದೆ ಕೇವಲ 52,000 ರೂಪಾಯಿಗೆ ಆ್ಯಪಲ್ ಮ್ಯಾಕ್‌ಬಕ್ ಲಭ್ಯವಾಗಲಿದೆ.

Read Full Story

10:03 PM (IST) Aug 12

ಧರ್ಮಸ್ಥಳದಲ್ಲಿ ಪತ್ತೆಯಾಗದ ಕಳೇಬರ, SIT ಶವ ಶೋಧನೆ ಸ್ಥಗಿತ ಚರ್ಚಿಸಿ ನಿರ್ಧಾರ ಎಂದ ಸಿಎಂ

ಧರ್ಮಸ್ಥಳದ ಶವಗಳ ಶೋಧನೆ ಬಗ್ಗೆ ಶಾಸಕಾಂಗ ಸಭೆಯಲ್ಲಿ ತೀವ್ರ ಚರ್ಚೆಯಾಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ 13ನೇ ಸ್ಥಳದಲ್ಲೂ ಶವ ಸಿಗದಿದ್ದರೆ ಎಸ್ಐಟಿ ಶವ ಶೋಧನೆ ಸ್ಥಗಿತದ ಕುರಿತು ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read Full Story

09:51 PM (IST) Aug 12

ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ...

'ಕೊತ್ತಲವಾಡಿ' ಸಿನಿಮಾದ ಬಗ್ಗೆ ಮಾತನಾಡಿದವರ ಕುರಿತಂತೆ ಗರಂ ಆಗಿರೋ ಯಶ್​ ಅಮ್ಮ ಪುಷ್ಪಾ ಅರುಣ್​ ಕುಮಾರ್​ ಅವರು ಸಿದ್ದರಾಮಯ್ಯ-ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ ಎಂದಿದ್ದಾರೆ. ಅವರು ಹೇಳಿದ್ದೇನು?

 

Read Full Story

09:17 PM (IST) Aug 12

ಪತಿಗೆ ವೀರ್ಯಾಣು ಕಡಿಮೆ, ಸೊಸೆ ಗರ್ಭಿಣಿಯಾಗಲು ಮಾವ,ಸಂಬಂಧಿ ನಿರಂತರ ಅತ್ಯಾ*ರ

ಪತಿಗೆ ವೀರ್ಯಾಣು ಕಡಿಮೆ, ಪತಿಯಿಂದ ಗರ್ಭಿಣಿಯಾಗಲ್ಲ ಎಂದು ಮಾವ ಹಾಗೂ ಸಂಬಂಧಿಯೊಬ್ಬರು ಸೊಸೆ ಮೇಲೆ ನಿರಂತರ ಅತ್ಯಾ*ರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

Read Full Story

09:12 PM (IST) Aug 12

Dharmasthala Case - ಸತ್ಯ ಹೊರಕ್ಕೆ ಬಂದ್ರೆ ಆತ... ಧರ್ಮಸ್ಥಳದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯವೇನು?

ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ಇವರು ಹೇಳಿರುವ ಹಿಂದಿನ ನಿಗೂಢ ಅರ್ಥವೇನು? ಇಲ್ಲಿದೆ ಡಿಟೇಲ್ಸ್​...

 

Read Full Story

08:39 PM (IST) Aug 12

ಗತವೈಭವ ಮರುಕಳಿಸುವ ಜಾವಾ ಯೆಜ್ಡಿ ರೋಡ್‌ಸ್ಟರ್ ಬೈಕ್ ಲಾಂಚ್, ಬೆಲೆ ಎಷ್ಟು?

ಹೊಚ್ಚ ಹೊಸ ಜಾವಾ ಯೆಜ್ಡೆ ರೋಡ್‌ಸ್ಟರ್ ಬೈಕ್ ಬಿಡುಗಡೆಯಾಗಿದೆ. ರೆಟ್ರೋ ಶೈಲಿಯ ಈ ಬೈಕ್ ಮೊದಲ ನೋಟಕ್ಕೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಹೊಸ ಬೈಕ್ ವಿಶೇಷತೆ ಬೆಲೆ ಕುರಿತು ಫುಲ್ ವಿವರ ಇಲ್ಲಿದೆ.

Read Full Story

08:15 PM (IST) Aug 12

ಹಳದಿ ಬೆನ್ನಲ್ಲೇ ಸದ್ದು ಮಾಡ್ತಿದೆ ನಮ್ಮ ಮೆಟ್ರೋ ರೈಡ್ ಲೈನ್, ಹೆಬ್ಬಾಳ-ಸರ್ಜಾಪುರ ನಿಲ್ದಾಣದ ಲಿಸ್ಟ್

ಹಳದಿ ಮೆಟ್ರೋ ಉದ್ಘಾಟನೆ ಆಯ್ತು. ಇದೀಗ ಕೆಂಪು ಮೆಟ್ರೋ. ಬೆಂಗಳೂರಿನ ಭಾರಿ ಟ್ರಾಫಿಕ್ ವಲಯ ಎಂದೇ ಗುರುತಿಸಿಕೊಂಡ ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಕೆಂಪು ಮೆಟ್ರೋ ಸಂಚಾರ ಆರಂಭಿಸಲಿದೆ. ಯಾವೆಲ್ಲಾ ಪ್ರದೇಶ ಮೆಟ್ರೋ ಕವರ್ ಮಾಡಲಿದೆ.

Read Full Story

08:01 PM (IST) Aug 12

ರಾಜಭವನ ವೀಕ್ಷಣೆಗೆ ಆ.16ರಿಂದ 3 ದಿನ ಸಾರ್ವಜನಿಕರಿಗೆ ಮುಕ್ತ ಪ್ರವೇಶ, ನಿಯಮಗಳೇನು?

79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 16 ರಿಂದ 18 ರವರೆಗೆ ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಅವಕಾಶ. ಸಂಜೆ 6 ರಿಂದ 7.30 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
Read Full Story

07:51 PM (IST) Aug 12

ಸರ್ವೇಪಲ್ಲಿ ರಾಧಾಕೃಷ್ಣನ್ ಜೊತೆಗಿರೋ ಪುಟ್ಟ ಹುಡುಗ, ಕನ್ನಡ ಭಾಷೆಗೆ ಅವಮಾನಿಸಿದ್ದು ನೆನಪಿದೆಯಾ? ಯಾರಿವರು ಗೆಸ್ ಮಾಡಿ!

ಈ ಫೋಟೋದಲ್ಲಿರೋ ಪುಟ್ಟ ಹುಡುಗ ಯಾರು ಗೊತ್ತಾ? ಮಾಜಿ ಉಪರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಈ ಹುಡುಗ ಈಗ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ. ಯಾರಿದು? ಕನ್ನಡ ಭಾಷೆಗೆ ಅವಮಾನಿಸಿ ಪೇಚಿಗೆ ಸಿಲುಕಿದ್ದ.!

Read Full Story

07:49 PM (IST) Aug 12

ಪುತ್ರಿಯ ಚಿನ್ನ ಕಳ್ಳಸಾಗಣೆ ಪ್ರಕರಣದ ನಂತರ, ಡಿಜಿಪಿ ರಾವ್‌ ಮತ್ತೆ ಹೊಸ ಇಲಾಖೆಗೆ ನಿಯೋಜನೆ

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನದ ನಂತರ ಕಡ್ಡಾಯ ರಜೆಯಲ್ಲಿದ್ದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಿಸಲಾಗಿದೆ. ರನ್ಯಾ ರಾವ್ ಅವರನ್ನು 14.2 ಕೆಜಿ ಚಿನ್ನದೊಂದಿಗೆ ಬಂಧಿಸಲಾಗಿತ್ತು.

Read Full Story

07:40 PM (IST) Aug 12

ಹಳದಿ ಮೆಟ್ರೋ ನಿಲ್ದಾಣಗಳ ಹೆಸರು ಅದಲು-ಬದಲು; ಗೀತಾ-ಸೀತಾ ಕಥೆಗೆ ಪ್ರಯಾಣಿಕರು ಕನ್ಫ್ಯೂಸ್

Bengaluru Yellow Line Metro Station Name: ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳ ಹೆಸರು ಅದಲು-ಬದಲು ಆಗಿರುವುದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ. 

Read Full Story

07:31 PM (IST) Aug 12

ಚಾಟಿಂಗ್ ಮಾಡುತ್ತಾ ಎಐ ಚಾಟ್‌ಬಾಟ್ ಜೊತೆ ಲವ್, ನಿಶ್ಚಿತಾರ್ಥ ಮಾಡಿಕೊಂಡ ಯುವತಿ

ಎಐ ಇದೀಗ ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಈ ಪೈಕಿ ಎಐ ಚಾಟ್‌ಬಾಟ್ ಜೊತೆ ಚಾಟಿಂಗ್ ಮಾಡುತ್ತಿದ್ದ ಯುವತಿಗೆ ಲವ್ ಶುರುವಾಗಿದೆ. ಇದೀಗ ಎಐ ಚಾಟ್‌ಬಾಟ್ ಜೊತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾಳೆ.

Read Full Story

07:27 PM (IST) Aug 12

ದತ್ತಪೀಠ ಘೋರಿಗಳ ಉತ್ಖನನಕ್ಕೆ ವಿಹಿಂಪ ಆಗ್ರಹ; ಧರ್ಮಸ್ಥಳ ಮಾದರಿಯಲ್ಲಿ ಜಿಪಿಆರ್ ಯಂತ್ರ ಬಳಕೆಗೆ ಮನವಿ!

ಚಿಕ್ಕಮಗಳೂರಿನ ದತ್ತಪೀಠದ ಆವರಣದಲ್ಲಿರುವ ಘೋರಿಗಳ ಉತ್ಖನನಕ್ಕೆ ಹಿಂದೂ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಧರ್ಮಸ್ಥಳದ ಉತ್ಖನನದ ಮಾದರಿಯಲ್ಲೇ ಇಲ್ಲಿಯೂ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಘೋರಿಗಳಲ್ಲಿ ಯಾರನ್ನು ಹೂಳಲಾಗಿದೆ ಎಂಬುದರ ಸತ್ಯಾಸತ್ಯತೆ ಹೊರತೆಗೆಯಲು ಆಗ್ರಹಿಸಲಾಗಿದೆ.

Read Full Story

07:09 PM (IST) Aug 12

ಟ್ರಾಫಿಕ್ ತಪ್ಪಿಸಿ ಹಳದಿ ಮೆಟ್ರೋ ಬಳಸಿ, ಉದ್ಯೋಗಿಗಳಿಗೆ ಇನ್ಫೋಸಿಸ್ ಸೂಚನೆ

ಬೆಂಗಳೂರಿನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಹಳದಿ ಮೆಟ್ರೋ ಮಾರ್ಗವನ್ನು ಬಳಸಲು ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಿದೆ. ELCITA ಫೀಡರ್ ಶಟಲ್‌ಗಳು ಮೆಟ್ರೋ ನಿಲ್ದಾಣದಿಂದ ಇನ್ಫೋಸಿಸ್ ಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

Read Full Story

06:48 PM (IST) Aug 12

ಇಲ್ಲಾಂದ್ರೆ ಹಿಂಗ್ ಆಗುತ್ತೆ - ರಾಜುಗೌಡ ಸ್ಫೋಟಕ ಹೇಳಿಕೆಗೆ ಸತೀಶ್ ಜಾರಕಿಹೊಳಿ ಫಸ್ಟ್ ರಿಯಾಕ್ಷನ್

KN Rajanna: ಮಾಜಿ ಸಚಿವ ರಾಜುಗೌಡ ಅವರ ಸ್ಫೋಟಕ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. 

Read Full Story

06:23 PM (IST) Aug 12

ದೇಶದ ಅತೀ ಕಡಿಮೆ ಬೆಲೆಯ SUV ಸಿಟ್ರೊಯೆನ್ C3 & C3X ಕಾರು ಲಾಂಚ್, ಬೆಲೆ ಕೇವಲ 5.25 ಲಕ್ಷ ರೂ

ಭಾರತದಲ್ಲಿ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು ಬಿಡುಗಡೆಯಾಗಿದೆ. ಸಿಟ್ರೊಯೆನ್ C3 & C3X ವೇರಿಯೆಂಟ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಇದರ ಆರಂಭಿಕ ಬೆಲೆ ಕೇವಲ 5.25 ಲಕ್ಷ ರೂ.

Read Full Story

06:21 PM (IST) Aug 12

ಧರ್ಮಸ್ಥಳದ 13ನೇ ಪಾಯಿಂಟ್‌ನಲ್ಲಿ 14 ಅಡಿ ಅಗೆದರೂ ಕಳೇಬರ ಸಿಗಲಿಲ್ಲ; ಸಿಕ್ಕಿದ್ದು ಬರೀ ನೀರು!

ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್‌ನಲ್ಲಿ 14 ಅಡಿ ಅಗೆದರೂ ಅಸ್ತಿಪಂಜರ ಸಿಗದೆ ನೀರು ಉಕ್ಕಿ, ಶೋಧ ಕಾರ್ಯಕ್ಕೆ ತಡೆ ಉಂಟಾಗಿದೆ. ನೀರನ್ನು ಹೊರಹಾಕಲು ಮೋಟರ್ ಅಳವಡಿಸಲಾಗಿದ್ದು, ಹಿಟಾಚಿ ಯಂತ್ರಗಳ ಕೆಲಸ ತಾತ್ಕಾಲಿಕ ಸ್ಥಗಿತಗೊಂಡಿದೆ. ಅನಾಮಿಕನ ಸುಳಿವುಗಳ ಮೇಲೆ ಎಸ್‌ಐಟಿ ಶೋಧ ಮುಂದುವರೆಸಿದೆ.

Read Full Story

05:55 PM (IST) Aug 12

ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ; ಡಿಸಿಎಂ ಡಿಕೆ ಶಿವಕುಮಾರ್

ಪ್ರಧಾನಿ ಮೋದಿಗೆ ನೀಡಿದ ಬೆಳ್ಳಿ ಗಣೇಶ ವಿಗ್ರಹ ಉಡುಗೊರೆ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕರಿಂದ ಪಡೆದ ಉಡುಗೊರೆಯಲ್ಲ, ಸ್ವಂತ ಹಣದಿಂದ ಖರೀದಿಸಿದ್ದು ಎಂದು ತಿಳಿಸಿದ್ದಾರೆ. 

Read Full Story

05:14 PM (IST) Aug 12

ಆರ್ ಅಶೋಕ್ ಸಿದ್ದರಾಮಯ್ಯ ಸಂಭಾಷಣೆ - ವಿಪಕ್ಷ ನಾಯಕನ ಸಪ್ಪಗಿದ್ದೀರಿ ಪ್ರಶ್ನೆಗೆ ಬೃಹಸ್ಪತಿ ಪಾಠ ಮಾಡಿದ ಸಿಎಂ

ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ಯುದ್ಧ ನಡೆಯಿತು. ಆರ್‌ಸಿಬಿ ಕಾರ್ಯಕ್ರಮ, ಲೋಗೋ ವಿವಾದ, ಸ್ಟೇಡಿಯಂ ಸುರಕ್ಷತೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯದ ಕೊರತೆ ಕುರಿತು ಆರೋಪ-ಪ್ರತ್ಯಾರೋಪಗಳು ಕೇಳಿಬಂದವು.
Read Full Story

05:11 PM (IST) Aug 12

ಈ ಬಾರಿಯ ಲಾಂಗ್ ವೀಕೆಂಡ್‌ಗೆ ಕಡಿಮೆ ಬೆಲೆಗೆ ಮಧುರೈ, ರಾಮೇಶ್ವರಂ, ಕನ್ಯಾಕುಮಾರಿಯ ಪ್ರವಾಸ

ಲಾಂಗ್ ವೀಕೆಂಡ್‌ನಲ್ಲಿ ಮಧುರೈ, ರಾಮೇಶ್ವರಂ ಮತ್ತು ಕನ್ಯಾಕುಮಾರಿಗೆ ಕಡಿಮೆ ವೆಚ್ಚದಲ್ಲಿ KSTDC ಯಾತ್ರೆ. ಈ ಪ್ಯಾಕೇಜ್‌ನಲ್ಲಿ ಊಟ, ವಸತಿ ಮತ್ತು ಪ್ರಯಾಣದ ವ್ಯವಸ್ಥೆಗಳು ಸೇರಿವೆ.
Read Full Story

04:59 PM (IST) Aug 12

ನಿನ್ಗಿಂತ ಓದಿದ್ದೇನೆ, ಅಪ್ಪನ ಮರ್ಯಾದೆ ತೆಗಿಬೇಡ, ಬಿಜೆಪಿ ನಾಯಕನ ಪುತ್ರನಿಗೆ ಪೊಲೀಸ್ ಉತ್ತರ

ಬಿಜೆಪಿ ನಾಯಕನ ಪುತ್ರನ ದರ್ಪಕ್ಕೆ ಖಡಕ್ ಉತ್ತರ ನೀಡಿದ ಘಟನೆ ನಡೆದಿದೆ. ಅಪ್ಪನ ಮರ್ಯಾದೆ ತೆಗಿಬೇಡಾ, ನಿನಗಿಂತ ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದೇನೆ ಎಂದು ಪೊಲೀಸ್ ಉತ್ತರಿಸಿದ್ದಾರೆ.

Read Full Story

04:56 PM (IST) Aug 12

ಸರ್ಕಾರದ ಆದೇಶದಂತೆ ಸಿನಿಮಾ ಟಿಕೆಟ್‌ ದರ 200 ರೂ; ರಜನಿಕಾಂತ್‌ 'Coolie Movie' ಟಿಕೆಟ್‌ ದರ ಗಗನಕ್ಕೇರಲು ಕಾರಣ?

coolie Movie: ಈಗಾಗಲೇ ಕರ್ನಾಟಕ ಸರ್ಕಾರವು ಸಿನಿಮಾ ಥಿಯೇಟರ್‌ನಲ್ಲಿ ಒಂದು ಟಿಕೆಟ್‌ ಬೆಲೆ 200 ರೂಪಾಯಿ ಎಂದು ನಿಗದಿಪಡಿಸಿದೆ. ಆದರೆ ರಜನಿಕಾಂತ್‌ ಅವರ ಕೂಲಿ ಸಿನಿಮಾ ಟಿಕೆಟ್‌ ದರವು 2000ರೂಪಾಯಿ ಗಡಿ ದಾಟಿದೆ.

 

Read Full Story

04:21 PM (IST) Aug 12

ಜಿಪಿಆರ್ ಯಂತ್ರದ ಶೋಧದಲ್ಲಿ ಏನೂ ಸಿಗಲಿಲ್ಲ; ಆದ್ರೂ ಅನಾಮಿಕ ತೋರಿಸಿದ ಕಡೆಗೆಲ್ಲಾ 2 ಹಿಟಾಚಿಯಿಂದ ಎಸ್‌ಐಟಿ ಅಗೆತ!

ಧರ್ಮಸ್ಥಳ ನೇತ್ರಾವತಿ ನದಿ ತೀರದ 13ನೇ ಪಾಯಿಂಟ್‌ನಲ್ಲಿ ಅನಾಮಿಕ ದೂರುದಾರನ ಮಾಹಿತಿ ಮೇರೆಗೆ ಎಸ್‌ಐಟಿ ತಂಡ ಎರಡು ಹಿಟಾಚಿಗಳಿಂದ 10 ಅಡಿ ಆಳಕ್ಕೆ ಉತ್ಖನನ ಮುಂದುವರೆಸಿದೆ. ಜಿಪಿಆರ್ ಸ್ಕ್ಯಾನ್‌ನಲ್ಲಿ ಅಸ್ಥಿಪಂಜರದ ಕುರುಹು ಸಿಗದಿದ್ದರೂ, ಅನಾಮಿಕನ ನಿರ್ದೇಶನದಂತೆ ಉತ್ಖನನ ನಡೆಯುತ್ತಿದೆ.

Read Full Story

03:57 PM (IST) Aug 12

ಭಾರತ, ಮೋದಿ ಆಯ್ತೂ, ಇದೀಗ ಅಂಬಾನಿ ರಿಫೈನರಿ ಮೇಲೆ ದಾಳಿ ಬೆದರಿಕೆ ಹಾಕಿದ ಪಾಕ್ ಮನೀರ್

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರದ ಮೇಲೆ ಪರಮಾಣು ದಾಳಿ ಎಚ್ಚರಿಕೆ ನೀಡಿದರೂ ಭಾರತ ಬೆಚ್ಚಿ ಬೀಳಲೇ ಇಲ್ಲ. ಮುನೀರ್ ಮಾತನ್ನೂ ಭಾರತ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಕೆರಳಿದ ಆಸೀಮ್ ಮನೀರ್ ಇದೀಗ ಮುಕೇಶ್ ಅಂಬಾನಿಯ ರಿಫೈನರಿ ಘಟಕದ ಮೇಲೆ ದಾಳಿ ಮಾಡುವ ಎಚ್ಚರಿಕೆ ನೀಡಿದ್ದಾರೆ

Read Full Story

03:24 PM (IST) Aug 12

ಭುವನೇಶ್ವರದಲ್ಲಿ ಥಾರ್ ಗಾಡಿಗೆ ಅಮ್ಮ ಮಗಳು ಬಲಿ - ದೆಹಲಿಯಲ್ಲಿ ಇಬ್ಬರ ಬಲಿಪಡೆದ ಥಾರಲ್ಲಿ ಗಾಂಜಾ ಪತ್ತೆ

ಒಡಿಶಾದ ಭುವನೇಶ್ವರದಲ್ಲಿ ಥಾರ್ ಗಾಡಿ ಡಿಕ್ಕಿ ಹೊಡೆದು ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ.  ದೆಹಲಿಯಲ್ಲೂ ಇದೇ ರೀತಿಯ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರೋಪಿಯಿಂದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

Read Full Story

03:05 PM (IST) Aug 12

ಧರ್ಮಸ್ಥಳದಲ್ಲಿ ಅಹಿಂಸಾ ಧರ್ಮ ಪಾಲಿಸುವವರು ಕೊಲೆ ಮಾಡಲು ಸಾಧ್ಯವಿಲ್ಲ - ಸೋಂದಾ ಜೈನ ಮಠದ ಸ್ವಾಮೀಜಿ

ಧರ್ಮಸ್ಥಳದ ಅಸ್ತಿಪಂಜರ ಪ್ರಕರಣದಲ್ಲಿ ಹೆಗಡೆ ಪರಿವಾರದ ಬೆಂಬಲಕ್ಕೆ ಶಿರಸಿಯ ಸೋಂದಾ ಜೈನ ಮಠದ ಸ್ವಾಮೀಜಿ ನಿಂತಿದ್ದಾರೆ. ಅಹಿಂಸಾ ಧರ್ಮ ಪಾಲಿಸುವವರು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. SIT ತನಿಖೆಗೆ ಒತ್ತಡ ಬರಬಾರದು ಎಂದು ಸಲಹೆ ನೀಡಿದ್ದಾರೆ.
Read Full Story

02:24 PM (IST) Aug 12

ಬಂಡೀಪುರ ಕಾಡಲ್ಲಿ ಆನೆ ತುಳಿದರೂ ಬದುಕಿಬಂದ ವ್ಯಕ್ತಿ - ₹25,000 ದಂಡ ಹಾಕಿದ ಅರಣ್ಯ ಇಲಾಖೆ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.

Read Full Story

02:16 PM (IST) Aug 12

'ನಮ್ಮ ಬಾಸ್ ತಂಟೆಗೆ ಬರಬೇಡ..' ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಮತ್ತೊಬ್ಬ ದರ್ಶನ್ ಫ್ಯಾನ್ ಬಂಧನ!

ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ದರ್ಶನ್ ಅಭಿಮಾನಿ ಎಂದು ತಿಳಿದುಬಂದಿದೆ.
Read Full Story

01:16 PM (IST) Aug 12

ದರ್ಶನ್, ಪವಿತ್ರಾ ಕೋರ್ಟ್‌ಗೆ ಹಾಜರು - ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಬೆಂಗಳೂರಿನಲ್ಲಿ ನಡೆಯಿತು. ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 14 ಆರೋಪಿಗಳು ಕೋರ್ಟ್‌ಗೆ ಹಾಜರಾದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ.
Read Full Story

01:06 PM (IST) Aug 12

ಈ ವರ್ಷವೂ ಬಿಬಿಎಂಪಿಗೆ ಚುನಾವಣೆ ಇಲ್ಲ; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ವರ್ಷ ಸ್ಥಾಪನೆಯಾಗುವುದಿಲ್ಲ. ಹೊಸ ನಗರಪಾಲಿಕೆಗಳ ಚುನಾವಣೆಯವರೆಗೆ ಬಿಬಿಎಂಪಿಯೇ ಆಡಳಿತ ಮುಂದುವರಿಸಲಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲೇಖನದಲ್ಲಿದೆ.
Read Full Story

12:52 PM (IST) Aug 12

Power Point - ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! - ಯುಎಸ್ ಆರ್ಥಿಕ ತಜ್ಞ

 ಜೆಫ್ರಿ ಸ್ಯಾಕ್ಸ್‌. ವಿಶ್ವ ಪ್ರಸಿದ್ಧ ಆರ್ಥಿಕ ತಜ್ಞ. ಭಾರತ- ಅಮೆರಿಕ ತೆರಿಗೆ ಯುದ್ಧ, ರಷ್ಯಾ- ಉಕ್ರೇನ್‌ ಸಮರದ ಬಗ್ಗೆ ಅತ್ಯಂತ ಒಳನೋಟದ ಅಭಿಪ್ರಾಯವನ್ನು ಮಂಡಿಸಿದ್ದಾರೆ.

Read Full Story

12:52 PM (IST) Aug 12

ಕೆ.ಎನ್. ರಾಜಣ್ಣ ವಜಾ - 'ವಾಲ್ಮೀಕಿ ಸಮುದಾಯ ಮುಗಿಸಲು ಕಾಂಗ್ರೆಸ್‌ನಿಂದ ಷಡ್ಯಂತ್ರ' ಮಾಜಿ ಸಚಿವ ರಾಜುಗೌಡ ಆರೋಪ

ಕಾಂಗ್ರೆಸ್ ಹೈಕಮಾಂಡ್ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ, ನಾಗೇಂದ್ರ ನಂತರ ಈಗ ಕೆ.ಎನ್. ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ ಎಂದು ಅವರು ಎಚ್ಚರಿಸಿದ್ದಾರೆ.

Read Full Story

12:25 PM (IST) Aug 12

ಮಂತ್ರಾಲಯ ಗೋಶಾಲೆಗೆ ಬೆಂಕಿ; ಹೊತ್ತಿ ಉರಿದ ಹುಲ್ಲಿನ ಬಣವೆಗಳು!

ಮಂತ್ರಾಲಯದ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಮೇವಿನ ಬಣಿವೆಗಳು ಭಸ್ಮವಾಗಿದ್ದು, ಯಾವುದೇ ಜಾನುವಾರುಗಳಿಗೆ ಹಾನಿಯಾಗಿಲ್ಲ.
Read Full Story

12:23 PM (IST) Aug 12

ಬೆಂಗಳೂರು - ಬೀದಿ ನಾಯಿಯಿಂದ ತಪ್ಪಿಸಿಕೊಳ್ಳಲು ಮನೆ ಗೇಟ್‌ ಹಾರಿ ಕಳ್ಳನಾದ ಟೆಕ್ಕಿ!

ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಹಾರಿದಾಗ, ಮನೆಯವರು ಅವರನ್ನು ಕಳ್ಳ ಎಂದು ಭಾವಿಸಿ ಫೋನ್ ಕಸಿದುಕೊಂಡ ಘಟನೆ ನಡೆದಿದೆ. ನೆರೆಹೊರೆಯವರ ಸಿಸಿಟಿವಿ ದೃಶ್ಯಾವಳಿಗಳಿಂದ ಸತ್ಯ ಬಯಲಾದ ನಂತರ ಟೆಕ್ಕಿಯನ್ನು ಬಿಡುಗಡೆ ಮಾಡಲಾಯಿತು.
Read Full Story

12:00 PM (IST) Aug 12

ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದ ಬಾಲಕಿ; ಬಾವಿಗೆ ಬಿದ್ದು ದುರಂತ ಸಾವು!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ. ಬಾವಿಯ ಸುತ್ತಲೂ ಸುರಕ್ಷತಾ ಕ್ರಮಗಳ ಕೊರತೆಯೇ ಘಟನೆಗೆ ಕಾರಣ ಎನ್ನಲಾಗಿದೆ.
Read Full Story

11:59 AM (IST) Aug 12

ಧರ್ಮಸ್ಥಳದಲ್ಲಿ ಅನಾಮಿಕ ತೋರಿಸಿದ 13ನೇ ಪಾಯಿಂಟ್ ವ್ಯಾಪ್ತಿ 3 ಪಟ್ಟು ಹೆಚ್ಚಳ; ಜಿಪಿಆರ್ ಬಳಸಿ ಶೋಧ

ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಶವಗಳಿಗಾಗಿ ಶೋಧ ಕಾರ್ಯ ಮತ್ತೆ ಆರಂಭವಾಗಿದೆ. ಡ್ರೋನ್ ಮೌಂಟೆಡ್ ಜಿಪಿಆರ್ ತಂತ್ರಜ್ಞಾನ ಬಳಸಿ ತನಿಖಾ ತಂಡ ವಿಸ್ತೃತ ಪ್ರದೇಶದಲ್ಲಿ ಶೋಧ ನಡೆಸುತ್ತಿದೆ. ಆದರೆ, ಅನಾಮಿಕ ತೋರಿಸಿದ 13ನೇ ಪಾಯಿಂಟ್ ವ್ಯಾಪ್ತಿಯನ್ನು 3 ಪಟ್ಟು ವಿಸ್ತರಣೆ ಮಾಡಿಕೊಂಡು, ಶೋಧಿಸಲಾಗುತ್ತಿದೆ.

Read Full Story

11:47 AM (IST) Aug 12

ಆನ್‌ಲೈನ್‌ ಬ್ಯಾಂಕಿಂಗ್‌ - ಫೋನ್‌, ಲ್ಯಾಪ್‌ಟಾಪ್‌ ಯಾವುದು ಸೇಫ್?

ಇಂದಿನ ಡಿಜಿಟಲ್ ಯುಗದಲ್ಲಿ ಹಣದ ವರ್ಗಾವಣೆ ಬಲು ಸುಲಭ. ಆದರೆ ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲಿ ಸುರಕ್ಷತೆ ದೊಡ್ಡ ತಲೆನೋವು. ಹೀಗಿರುವಾಗ ಸುರಕ್ಷಿತ ಹಣದ ವರ್ಗಾವಣೆಗೆ ಸ್ಮಾರ್ಟ್‌ ಫೋನ್ ಮತ್ತು ಲ್ಯಾಪ್‌ಟಾಪ್ ಇವೆರಡರಲ್ಲಿ ಯಾವುದು ಬೆಸ್ಟ್ ಅನ್ನೋ ವಿವರ ಈ ಬರಹದಲ್ಲಿದೆ.

 

Read Full Story

11:32 AM (IST) Aug 12

ಚಾಮರಾಜನಗರ ಹುಲಿಗಳಷ್ಟೇ ಅಲ್ಲ, ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲಿ ನಂಬರ್ ಒನ್!

ಚಾಮರಾಜನಗರ ಜಿಲ್ಲೆಯು ಹುಲಿಗಳಷ್ಟೇ ಅಲ್ಲದೆ ಆನೆಗಳಿಗೂ ಪ್ರಸಿದ್ಧವಾಗಿದೆ. 2023 ರ ಆನೆ ಗಣತಿಯ ಪ್ರಕಾರ, ಚಾಮರಾಜನಗರದಲ್ಲಿ 2500 ಕ್ಕೂ ಹೆಚ್ಚು ಆನೆಗಳಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು. ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ಆನೆಗಳ ಸಂಖ್ಯೆ ಹೆಚ್ಚಳವಾಗಿದೆ.
Read Full Story

11:22 AM (IST) Aug 12

ಫಸ್ಟ್ ಡೇ, ಫಸ್ಟ್ ಶೋ ನಿಂದಲೇ ಹೌಸ್ ಫುಲ್! ಸಂಸದ ತೇಜಸ್ವಿ ಸೂರ್ಯ ನೀಡಿದ ಬಿಗ್ ಅಪ್ಡೇಟ್!

ಬೆಂಗಳೂರಿನಲ್ಲಿ ಬಿಡುಗಡೆಯಾದ ಮೊದಲ ದಿನವೇ ಹೌಸ್‌ಫುಲ್ ಆಗಿರುವುದು ಭಾರೀ ವಿಶೇಷ. ಕುಳಿತುಕೊಳ್ಳುವುದಕ್ಕೂ ಆಸನ ಇಲ್ಲದ ರೀತಿಯಲ್ಲಿ ಜನರ ನೂಕು ನುಗ್ಗಲು ಆಗುವುದನ್ನು ನೋಡಿ ಸ್ವತಃ ಸಂಸದ ತೇಜಸ್ವಿ ಸೂರ್ಯು ಸಂತಸಗೊಂಡಿದ್ದಾರೆ. ಈ ಬಗ್ಗೆ ಅವರೇ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಎಂದು ಬರೆದುಕೊಂಡಿದ್ದಾರೆ.

Read Full Story

11:00 AM (IST) Aug 12

'ಸಿದ್ಧರಾಮಯ್ಯ ಅವರೇ ಸ್ವಾಭಿಮಾನ ಎಲ್ಲೋಯ್ತ, ಗುಲಾಮಗಿರಿ ಏನು ಅಂತಾ ಗೊತ್ತಾಯ್ತಾ?' ಸಿಎಂಗೆ ತಿವಿದ ಸಿಟಿ ರವಿ!

ಸಚಿವ ಕೆ.ಎನ್. ರಾಜಣ್ಣ ಅವರ ವಜಾಗೆ ಸಿ.ಟಿ. ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸ್ವಾಭಿಮಾನವನ್ನು ಪ್ರಶ್ನಿಸಿದ ರವಿ, ರಾಜಣ್ಣ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜಾತಿ ತಾರತಮ್ಯದ ಆರೋಪವನ್ನೂ ಮಾಡಿದ್ದಾರೆ.
Read Full Story

More Trending News