LIVE NOW
Published : Jul 11, 2026, 06:21 AM ISTUpdated : Jul 11, 2026, 08:53 AM IST

Karnataka News Live: ತಮಿಳುನಾಡಿನ ವಿಜಯ್ ಬೆನ್ನಲ್ಲೇ ಮೂಕಾಂಬಿಕೆ ಸನ್ನಿಧಿಗೆ ಮತ್ತೊಬ್ಬ ನೂತನ ಸಿಎಂ ಭೇಟಿ..!

ಸಾರಾಂಶ

ಬೆಳಗಾವಿ: ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಾಸಕ ರಾಜು ಕಾಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಐನಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್‌ ಗಮನಕ್ಕೆ ತಂದಿದ್ದೇವೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಕೊಡಬೇಕೆಂದು ಹೇಳಿರುವುದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆಯ ಶಾಸಕರಿಗಿಂತ ನಾನು ಹಿರಿಯ. ಆದರೆ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಚಿವ ಸ್ಥಾನ ಕೇಳಿಲ್ಲ. ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದರು.

Thalapathy Vijay Kolluru

08:53 AM (IST) Jul 11

ತಮಿಳುನಾಡಿನ ವಿಜಯ್ ಬೆನ್ನಲ್ಲೇ ಮೂಕಾಂಬಿಕೆ ಸನ್ನಿಧಿಗೆ ಮತ್ತೊಬ್ಬ ನೂತನ ಸಿಎಂ ಭೇಟಿ..!

ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇಗುಲವು ದಕ್ಷಿಣ ಭಾರತದ ರಾಜಕಾರಣಿಗಳ ಪಾಲಿಗೆ ಪ್ರಮುಖ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಧಿಕಾರ ಮತ್ತು ಯಶಸ್ಸಿಗಾಗಿ ಹಲವು ನಾಯಕರು ಇಲ್ಲಿಗೆ ಆಗಮಿಸುತ್ತಾರೆ. 

Read Full Story

08:45 AM (IST) Jul 11

ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಡಬ್ಬಲ್‌ ದಾಖಲೆ ಬರೆದ ಕುಡ್ಲದ ಕುವರ!

ಮಂಗಳೂರಿನ ಆಟೋಮೊಬೈಲ್ ಪತ್ರಕರ್ತ ಗಿರೀಶ್ ಶೇಟ್, ಇವಿ ಸ್ಕೂಟರ್‌ನಲ್ಲಿ 12,111 ಕಿ.ಮೀ. ಕ್ರಮಿಸಿ ಎರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. 16 ರಾಜ್ಯಗಳಾದ್ಯಂತ 53 ದಿನಗಳ ಕಾಲ ಸಾಗಿದ ಈ ಪ್ರಯಾಣವು ಇವಿ ವಾಹನಗಳ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದು, ಅವರಿಗೆ 'ಇಂಡಿಯಾ' ಮತ್ತು 'ಏಷ್ಯಾ' ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ತಂದುಕೊಟ್ಟಿದೆ.
Read Full Story

08:24 AM (IST) Jul 11

ಜೋಡಿ ನಾಗರಹಾವು ಕಚ್ಚಿ ಚೌಡಾಪುರ ಗ್ರಾಮದ ಓಬಮ್ಮ ಸಾವು; ಮೇವು ತೆಗೆಯುವಾಗ ನಡೆದ ಘಟನೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ, ಮೆಕ್ಕೆಜೋಳದ ಸೊಪ್ಪೆ ತರುವಾಗ ಜೋಡಿ ನಾಗರಹಾವು ಕಚ್ಚಿ ಕೆ.ಓಬಮ್ಮ (53) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾವುಗಳನ್ನು ಹೊಡೆದು ಕೊಂದಿದ್ದಾರೆ.
Read Full Story

08:23 AM (IST) Jul 11

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್! ಮುಂದಿನ ಕಂತು ಯಾವಾಗ? ಹಣ ಜಮೆ ಬಗ್ಗೆ ಬಂತು ಹೊಸ ಅಪ್‌ಡೇಟ್

ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಅರ್ಹ 3,12,818 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎರಡು ಅಥವಾ ಮೂರು ದಿನಗಳಲ್ಲಿ ಒಟ್ಟು ₹62,56,36,000 ಗಳ ಮೊತ್ತವನ್ನು ಜಮೆ ಮಾಡಲಾಗುವುದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ ಹೇಳಿದರು.

Read Full Story

08:11 AM (IST) Jul 11

ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣ ಏಕೆ ಅಗತ್ಯ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ

ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಸರ್ಕಾರದ ನೀತಿಯ ಬಗ್ಗೆ ಇರುವ ಗೊಂದಲಗಳಿಗೆ ಈ ಲೇಖನ ಸ್ಪಷ್ಟನೆ ನೀಡುತ್ತದೆ. ಹಳೆಯ ವಾಹನಗಳ ಮೇಲಿನ ಪರಿಣಾಮ, ಮೈಲೇಜ್ ಬದಲಾವಣೆ ಮತ್ತು ಈ ಯೋಜನೆಯಿಂದಾಗುವ ಆರ್ಥಿಕ ಹಾಗೂ ಪರಿಸರ ಪ್ರಯೋಜನಗಳನ್ನು ಇದು ವಿವರಿಸುತ್ತದೆ.
Read Full Story

07:57 AM (IST) Jul 11

ಕಲ್ಯಾಣ ಕರ್ನಾಟಕ ಜೀವನಾಡಿ ತುಂಗಭದ್ರಾ ಡ್ಯಾಂಗೆ 4 ಟಿಎಂಸಿಗಿಂತ ಅಧಿಕ ನೀರು! ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?

ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಖಾಲಿಯಾಗಿದ್ದ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಐದು ದಿನಗಳಲ್ಲಿ 50 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದ್ದು, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ದ್ವಿಗುಣಗೊಂಡಿದೆ.
Read Full Story

07:54 AM (IST) Jul 11

Chikkaballapur - ಆಯತೊಲ್ಲಾ ಖಮೇನಿಗೆ ಅಲಿಪುರ ಗ್ರಾಮಸ್ಥರ ಅಂತಿಮ ವಿದಾಯ

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು. ದಶಕಗಳ ಹಿಂದೆ ಖಮೇನಿ ಈ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ, ಗ್ರಾಮಸ್ಥರು ಅಂತ್ಯಕ್ರಿಯೆಯ ನೇರಪ್ರಸಾರ ವೀಕ್ಷಿಸಿ, ಮೂರು ದಿನಗಳ ಶೋಕಾಚರಣೆ ನಡೆಸಿದರು.

Read Full Story

07:24 AM (IST) Jul 11

ಪತ್ನಿಗೆ ದೆವ್ವ ಬಿಡಿಸಲು ವಿಫಲನಾದ ಮಾಂತ್ರಿಕನಿಗೆ ಶಾಕ್ ಕೊಟ್ಟ ಪತಿ; ನಾಲ್ವರ ಬಂಧನ

ಪತ್ನಿಗೆ ಹಿಡಿದ ದೆವ್ವ ಬಿಡಿಸಲು ವಿಫಲನಾದ ಮಾಂತ್ರಿಕನೊಬ್ಬನಿಗೆ ವ್ಯಕ್ತಿಯೊಬ್ಬ ಪಾಠ ಕಲಿಸಿದ್ದಾನೆ. ಪೂಜೆ ನೆಪದಲ್ಲಿ ಮನೆಗೆ ಕರೆಸಿ, ಅಪಹರಿಸಿ ಸುಲಿಗೆ ಮಾಡಲಾಗಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

07:10 AM (IST) Jul 11

ಕರಾಳ ರಹಸ್ಯ ಬಯಲು; ಜಿಮ್-ಫಿಟ್ನೆಸ್ ಅನ್ನೋ ಹೆಣ್ಮಕ್ಕಳೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ!

ಜಿಮ್ ಮಾಲೀಕ ಮತ್ತು ತರಬೇತುದಾರನೊಬ್ಬ, ತರಬೇತಿಗೆ ಬರುತ್ತಿದ್ದ ಯುವತಿಯರು ಮತ್ತು ಗೃಹಿಣಿಯರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ತನ್ನ ನಿಜವಾದ ಗುರುತು ಮುಚ್ಚಿಟ್ಟು, ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಹಿಡಿದು ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡುತ್ತಿದ್ದ ಈ ಘಟನೆಯು, ಜಿಮ್‌ಗಳಿಗೆ ಮಹಿಳೆಯರನ್ನು ಕಳುಹಿಸುವಾಗ ಎಚ್ಚರಿಕೆ ವಹಿಸುವಂತೆ ಒತ್ತಿ ಹೇಳುತ್ತದೆ.

Read Full Story

06:58 AM (IST) Jul 11

ನೆಹರು ಎಲ್ಲಿ, ಮೋದಿ ಎಲ್ಲಿ ಇಬ್ಬರ ನಡುವೆ ಹೋಲಿಕೆ ಸಾಧ್ಯವೇ ಇಲ್ಲ ಎಂದ ಸಿದ್ದರಾಮಯ್ಯ

ಏನೂ ಇಲ್ಲದ ಅಂದಿನ ಭಾರತವನ್ನು ಕಟ್ಟಿದ ನೆಹರು ಎಲ್ಲಿ? ಎಲ್ಲವೂ ಇರುವ ಈಗಿನ ಭಾರತದ ಅಧಿಕಾರ ನಡೆಸುವ ಮೋದಿ ಎಲ್ಲಿ? ಆದರೂ ಅವರಿಬ್ಬರ ಆಡಳಿತವನ್ನು ಹೋಲಿಕೆ ಮಾಡುವ ಕೆಲಸ ನಡೆಯುತ್ತಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

06:45 AM (IST) Jul 11

ಶಿವಮೊಗ್ಗ ನಗರದಲ್ಲಿ ಇನ್ನೂ 6 ದಿನ ಕುಡಿವ ನೀರು ವ್ಯತ್ಯಯ; ಟ್ಯಾಂಕರ್‌ ಮೂಲಕ ನೀರು

ಶಿವಮೊಗ್ಗ ನಗರದಲ್ಲಿ ಶುದ್ಧೀಕರಣ ಘಟಕದ ಹಳೆಯ ಯಂತ್ರ ಸಂಪೂರ್ಣ ಹಾಳಾಗಿರುವುದರಿಂದ, ಇನ್ನೂ ಆರು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ದುರಸ್ತಿ ಕಾರ್ಯ ಪರಿಶೀಲಿಸಿದ್ದು, ಪರ್ಯಾಯವಾಗಿ 12ಕ್ಕೂ ಹೆಚ್ಚು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Read Full Story

More Trending News