LIVE NOW
Published : Jul 11, 2026, 06:21 AM ISTUpdated : Jul 11, 2026, 11:42 PM IST

Karnataka News Live: ರಾಧಿಕಾಗಿಂತ ನಾನೇ ಚಿರಂಜೀವಿಗೆ ಹೆಚ್ಚು - ಜಾನಕಿಯಮ್ಮ ಹೇಳಿದ್ದ ಆ ಮಾತಿನ ಮರ್ಮವೇನು?

ಸಾರಾಂಶ

ಬೆಳಗಾವಿ: ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಾಸಕ ರಾಜು ಕಾಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಐನಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ ಇನ್ನೂ ಎರಡು ಸಚಿವ ಸ್ಥಾನ ನೀಡಬೇಕೆಂದು ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್‌ ಗಮನಕ್ಕೆ ತಂದಿದ್ದೇವೆ. ಲಕ್ಷ್ಮಣ ಸವದಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಕೊಡಬೇಕೆಂದು ಹೇಳಿರುವುದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆಯ ಶಾಸಕರಿಗಿಂತ ನಾನು ಹಿರಿಯ. ಆದರೆ, ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಚಿವ ಸ್ಥಾನ ಕೇಳಿಲ್ಲ. ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದರು.

S Janaki

11:42 PM (IST) Jul 11

ರಾಧಿಕಾಗಿಂತ ನಾನೇ ಚಿರಂಜೀವಿಗೆ ಹೆಚ್ಚು - ಜಾನಕಿಯಮ್ಮ ಹೇಳಿದ್ದ ಆ ಮಾತಿನ ಮರ್ಮವೇನು?

ಖ್ಯಾತ ಗಾಯಕಿ ಎಸ್. ಜಾನಕಿ ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಇಡೀ ಚಿತ್ರರಂಗವೇ ದುಃಖದಲ್ಲಿ ಮುಳುಗಿದೆ. ಸುಮಾರು 6 ದಶಕಗಳ ಕಾಲ, ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

Read Full Story

10:41 PM (IST) Jul 11

ಎಸ್. ಜಾನಕಿ ಆಸ್ತಿ ಮೌಲ್ಯ ಎಷ್ಟು ಕೋಟಿ? ಅಭಿಮಾನಿಗಳಲ್ಲಿ ಮೂಡಿದ ದೊಡ್ಡ ಪ್ರಶ್ನೆಗೆ ಇಲ್ಲಿದೆ ಉತ್ತರ!

ದಕ್ಷಿಣ ಭಾರತದ ಗಾನ ಕೋಗಿಲೆ ಎಸ್. ಜಾನಕಿ ನಮ್ಮನ್ನಗಲಿದ್ದಾರೆ. ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಇದೆ. ಆರು ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Read Full Story

10:30 PM (IST) Jul 11

ಕಾಲು ನೋವು ತೋರಿಸಲು ಬಂದಿದ್ದ ಗಾಯಕಿ ಎಸ್‌ ಜಾನಕಿ ಸಾವು ಕಂಡಿದ್ದು ಹೇಗೆ? ಖಾಸಗಿ ಆಸ್ಪತ್ರೆ ಹೇಳಿದ್ದಿಷ್ಟು..

ಹಿರಿಯ ಗಾಯಕಿ ಎಸ್. ಜಾನಕಿ ಅವರ ಸಾವಿನ ಕಾರಣದ ಬಗ್ಗೆ ಇದ್ದ ಗೊಂದಲಕ್ಕೆ ತೆರೆಬಿದ್ದಿದೆ. ಕಾಲು ನೋವಿನ ಚಿಕಿತ್ಸೆಗೆಂದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ತೀವ್ರ ಸೋಂಕಿನಿಂದ ಉಂಟಾದ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕೃತವಾಗಿ ದೃಢಪಡಿಸಿದೆ.
Read Full Story

10:16 PM (IST) Jul 11

S janaki - ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!

'ದಕ್ಷಿಣ ಭಾರತದ ಕೋಗಿಲೆ' ಎಂದೇ ಖ್ಯಾತಿ ಪಡೆದಿದ್ದ ಗಾಯಕಿ ಎಸ್ ಜಾನಕಿಯವರು ತಮ್ಮ 88ನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರನ್ನು ಭೌತಿಕವಾಗಿ ಕಳೆದುಕೊಂಡಿರುವ ಭಾರತ ಹಾಗೂ ಜಗತ್ತಿನ ಸಂಗೀತಪ್ರೇಮಿಗಳು ಈ ಸಂಗೀತದ ಮೇರುಪ್ರತಿಭೆಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.

Read Full Story

10:07 PM (IST) Jul 11

ಎಸ್‌ ಜಾನಕಿ ಅವರ ಇಚ್ಛೆಯಂತೆ ಮೈಸೂರಿನಲ್ಲಿಯೇ ಗಾನಕೋಗಿಲೆಯ ಅಂತ್ಯಸಂಸ್ಕಾರ

ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಕೊನೆಯ ಇಚ್ಛೆಯಂತೆ ಮೈಸೂರಿನಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

Read Full Story

09:50 PM (IST) Jul 11

Singer S Janaki ಜೀವನದ ಅಪರೂಪದ ಸಂಗತಿಗಳು - ಇಲ್ಲಿದೆ ಗಾನ ಕೋಗಿಲೆಯ ಅಜ್ಞಾತ ಕಥೆ

ಎಸ್. ಜಾನಕಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಇತ್ತು. ಓದಿಗಿಂತ ಸಂಗೀತವೇ ಅವರ ಬದುಕಿನ ಕನಸಾಗಿತ್ತು. ಮಗಳ ಪ್ರತಿಭೆಯನ್ನು ಗುರುತಿಸಿದ ತಂದೆ ಸಂಗೀತಾಭ್ಯಾಸಕ್ಕೆ ಕಳುಹಿಸಿದರು.

Read Full Story

09:49 PM (IST) Jul 11

2013ರಲ್ಲಿ ನೀಡಿದ್ದ ದೇಶದ ಅತ್ಯುನ್ನುತ ನಾಗರಿಕ ಪದ್ಮಭೂಷಣ ಪ್ರಶಸ್ತಿಯೇ ಬೇಡ ಎಂದಿದ್ದ Singer S Janaki

Singer S Janaki: ಅಭಿಮಾನಿಗಳಿಂದ ಜಾನಕಿಯಮ್ಮ ಎಂದೇ ಕರೆಸಿಕೊಳ್ಳುವ S Janaki ಅವರು 25 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 'ದಕ್ಷಿಣ ಭಾರತದ ಕೋಗಿಲೆ' ಎಂಬ ಬಿರುದು ಪಡೆದಿದ್ದಾರೆ. ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿ ಹಾಡು ಹಾಡಿದ್ದ ಅವರು ಇಂದು ನಮಗೆ ನೆನಪು.

Read Full Story

09:44 PM (IST) Jul 11

ಎಸ್‌ ಜಾನಕಿ ಅಂತ್ಯಸಂಸ್ಕಾರಕ್ಕೆ ಉಚಿತ ನಿವೇಶನ, ಸ್ವಯಾರ್ಜಿತ ಸೈಟ್‌ ನೀಡುವುದಾಗಿ ಹೇಳಿದ ಸಾರಾ ಮಹೇಶ್‌

ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ನಂತರ, ಅವರ ಅಂತ್ಯಸಂಸ್ಕಾರಕ್ಕೆ ಮೈಸೂರಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಉಚಿತ ನಿವೇಶನ ನೀಡಲು ಮುಂದೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಂತಿಮ ನಿರ್ಧಾರಕ್ಕಾಗಿ ತುರ್ತು ಸಭೆ ನಡೆಸಲಾಗುತ್ತಿದೆ.
Read Full Story

09:31 PM (IST) Jul 11

ಗಾನಕೋಗಿಲೆ ಎಸ್. ಜಾನಕಿ ಅಗಲಿಕೆ - ಸಂಗೀತ ಲೋಕದ ದಿಗ್ಗಜೆಗೆ ಡಿಕೆಶಿ-ಸಿದ್ದರಾಮಯ್ಯ ಭಾವುಕ ನಮನ

ಎಸ್. ಜಾನಕಿ ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ. 

Read Full Story

09:26 PM (IST) Jul 11

'ನನ್ನ ಸಿನಿಮಾಗಳಿಗೆ ಜೀವ ತುಂಬಿದ್ದೇ ಜಾನಕಮ್ಮನ ಧ್ವನಿ..' ಗಾನಕೋಗಿಲೆಯ ಸಾವಿಗೆ ಮೆಗಾಸ್ಟಾರ್‌ ಚಿರಂಜೀವಿ ಕಂಬನಿ

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ವಾರ್ತೆಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ. ತಮ್ಮ ಸಿನಿಮಾಗಳ ಯಶಸ್ಸಿನಲ್ಲಿ ಜಾನಕಮ್ಮನವರ ಪಾತ್ರವನ್ನು ಸ್ಮರಿಸಿದ ಅವರು, ಅವರ ಧ್ವನಿ ಸದಾ ಅಮರ ಎಂದು ಕಂಬನಿ ಮಿಡಿದಿದ್ದಾರೆ.
Read Full Story

09:14 PM (IST) Jul 11

S Janaki - ಗಾಯಕಿ ಎಸ್ ಜಾನಕಿಯ ಕೊನೆಯ ಗಾಯನ, ಕೊನೆಯ ಉಸಿರಿಗೆ ಸಾಕ್ಷಿಯಾಗಿದ್ದು ಕನ್ನಡನಾಡಿನ ಮೈಸೂರು!

1952ರಲ್ಲಿ ಜಿ.ಕೆ. ವೆಂಕಟೇಶ್‌ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್‌ ಅವರೊಂದಿಗೆ ಹಾಡಿದ್ದ ಎಸ್ ಜಾನಕಿಯವರು, ಮತ್ತೆ ಅಕ್ಟೋಬರ್‌ 28, 2017ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ಗಾನಸುಧೆ ಹರಿಸಿದ್ದೇ ಕೊನೆಯ ಕಾರ್ಯಕ್ರಮ.

Read Full Story

09:04 PM (IST) Jul 11

ಎಸ್‌ ಜಾನಕಿ ಅವರ ಎಂದೂ ಮರೆಯದ ಕನ್ನಡದ ಟಾಪ್‌-10 ಹಾಡುಗಳು, ಇದರಲ್ಲಿ ನಿಮ್ಮಿಷ್ಟದ ಗೀತೆ ಯಾವುದು?

ಗಾನಕೋಗಿಲೆ ಎಸ್. ಜಾನಕಿ ಅವರ ಧ್ವನಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಈ ಲೇಖನವು ಅವರ ಕಂಠಸಿರಿಯಲ್ಲಿ ಮೂಡಿಬಂದ, ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವ 10 ಸಾರ್ವಕಾಲಿಕ ಶ್ರೇಷ್ಠ ಹಾಡುಗಳ ಪಟ್ಟಿಯನ್ನು ಒದಗಿಸುತ್ತದೆ.
Read Full Story

08:55 PM (IST) Jul 11

KGF ನಂತರ ಯಶ್‌ ಅಬ್ಬರ - ಬಾಕ್ಸ್‌ ಆಫೀಸ್‌ ಶೇಕ್‌ ಮಾಡಲು ಬರ್ತಿವೆ 5 ಬಿಗ್‌ ಬಜೆಟ್‌ ಸಿನಿಮಾಗಳು

KGF ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆದ ಯಶ್, ಇದೀಗ 'ಟಾಕ್ಸಿಕ್', 'ರಾಮಾಯಣ' ಸೇರಿದಂತೆ 5 ದೊಡ್ಡ ಸಿನಿಮಾಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅವರ ಮುಂಬರುವ ಚಿತ್ರಗಳ ಸಂಪೂರ್ಣ ಪಟ್ಟಿ ಮತ್ತು ಲೇಟೆಸ್ಟ್ ಅಪ್‌ಡೇಟ್‌ ಇಲ್ಲಿದೆ.

Read Full Story

08:19 PM (IST) Jul 11

S Janaki - ಮಹಾನಟಿ ಸಾವಿತ್ರಿಗೆ ನಾನು ಹಾಡಲ್ಲ ಎಂದಿದ್ದ ಜಾನಕಿಯಮ್ಮ? ಇಲ್ಲಿದೆ ಅಸಲಿ ಕಹಾನಿ

ಖ್ಯಾತ ಗಾಯಕಿ ಎಸ್. ಜಾನಕಿ ಅವರು ಮಹಾನಟಿ ಸಾವಿತ್ರಿ ಸಿನಿಮಾಗಳಿಗೆ ಹಾಡುವುದನ್ನು ಏಕೆ ನಿರಾಕರಿಸಿದ್ದರು? ಪಿ. ಸುಶೀಲಾ, ಸಾವಿತ್ರಿ ಮತ್ತು ಜಾನಕಿ ನಡುವೆ ನಡೆದ ಘಟನೆಯ ಹಿಂದಿನ ಅಸಲಿ ಕಥೆ ಹಾಗೂ ಜಾನಕಿ ಸಂದರ್ಶನದಲ್ಲಿ ಹೇಳಿದ ಸತ್ಯ ಇಲ್ಲಿದೆ.

Read Full Story

08:06 PM (IST) Jul 11

Breaking - ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ

ಪ್ರಖ್ಯಾತ ಗಾಯಕಿ ಎಸ್‌.ಜಾನಕಿ ಶನಿವಾರ ವಹೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

Read Full Story

07:46 PM (IST) Jul 11

'ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತೆ?' - ಆರ್‌ಎಸ್‌ಎಸ್ ಬಗ್ಗೆ ಶಿವರಾಜ ತಂಗಡಗಿ ಪ್ರಶ್ನೆ

ಶಾಸಕ ಶಿವರಾಜ ತಂಗಡಗಿ, ಆರ್‌ಎಸ್‌ಎಸ್‌ಗೆ ಬರುತ್ತಿರುವ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಬಿಜೆಪಿ, ಎಸ್‌ಐಆರ್‌, ಅಂಜನಾದ್ರಿ ಕಾಣಿಕೆ ಹುಂಡಿ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.

Read Full Story

07:34 PM (IST) Jul 11

ಕೋಟೆನಾಡಿನಿಂದ ಕ್ಯಾಲಿಫೋರ್ನಿಯಾ - 2.6 ಕೋಟಿ ಸಂಬಳಕ್ಕೆ Nvidia ಕೇಂದ್ರ ಕಚೇರಿಯಲ್ಲಿ ಕೆಲಸ ಗಿಟ್ಟಿಸಿದ ಚಿತ್ರದುರ್ಗದ ಹುಡುಗ

ಚಿತ್ರದುರ್ಗದ ಸಣ್ಣ ಹಳ್ಳಿಯ ಯುವ ಇಂಜಿನಿಯರ್ ಪೃಥ್ವಿರಾಜ್, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಪ್ರಖ್ಯಾತ ಟೆಕ್ ಕಂಪನಿ ‘ಎನ್‌ವಿಡಿಯಾ’ದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಐಐಟಿ ಪದವಿ ಇಲ್ಲದಿದ್ದರೂ, ಕೌಶಲ್ಯ ಅಭಿವೃದ್ಧಿಯಿಂದಲೇ ವಾರ್ಷಿಕ 2.6 ಕೋಟಿ ರೂ. ವೇತನದ ಉದ್ಯೋಗ ಗಿಟ್ಟಿಸಿದ್ದಾರೆ.

Read Full Story

07:00 PM (IST) Jul 11

'ಎರಡು ಪ್ಲೇಟ್ ದೋಸೆ' ಲುಕ್‌ನಲ್ಲಿ ಮಿಂಚಿದ 'ಪುಟ್ಟಗೌರಿ' - ಇಲ್ಲಿವೆ ಸಾನ್ಯ ಅಯ್ಯರ್ ಬೋಲ್ಡ್ ಪೋಟೋಸ್

Sanya Iyer: 'ಬಿಗ್ ಬಾಸ್ ಕನ್ನಡ' ಖ್ಯಾತಿಯ ಸಾನ್ಯ ಅಯ್ಯರ್ 'ಎರಡು ಪ್ಲೇಟ್ ದೋಸೆ' ರ್ಯಾಪ್ ಸಾಂಗ್ ಬಿಡುಗಡೆಯಾಗಿ ಒಂದು ತಿಂಗಳಾದ ಬೆನ್ನಲ್ಲೇ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Read Full Story

06:27 PM (IST) Jul 11

500ಕ್ಕೂ ಹೆಚ್ಚು ಕೆಲಸಕ್ಕೆ ಅರ್ಜಿ, ಒಂದೇ ಒಂದು ಇಂಟರ್ವ್ಯೂ ಕಾಲ್ ಬಂದಿಲ್ಲ! ಬೆಂಗಳೂರು ಟೆಕ್ಕಿಯ ಅಳಲು ವೈರಲ್

ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರನೊಬ್ಬ ಒಂದು ತಿಂಗಳಲ್ಲಿ 500ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಹಾಕಿದ್ರೂ ಒಂದೇ ಒಂದು ಇಂಟರ್ವ್ಯೂಗೆ ಕರೆ ಬಂದಿಲ್ಲ ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್ ಹಾಕಿದ್ದಾನೆ. ಅನುಭವಕ್ಕಾಗಿ ಯಾವುದೇ ಟೆಕ್ ಕೆಲಸ ಸಿಕ್ಕರೂ ಸಾಕು ಎಂದು ಹೇಳಿಕೊಂಡಿದ್ದು, ಉದ್ಯೋಗ ಮಾರುಕಟ್ಟೆಯ ಕಠಿಣ ಪರಿಸ್ಥಿತಿಯ ಬಗ್ಗೆ ಈ ಪೋಸ್ಟ್ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
Read Full Story

06:17 PM (IST) Jul 11

'ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಮ್ಹಾನ್ಸ್‌ಗೆ ಹೋಗಲಿ' - ಶಾಸಕ ಜನಾರ್ದನ ರೆಡ್ಡಿ ವಿವಾದಾತ್ಮಕ ಹೇಳಿಕೆ

ಶಾಸಕ ಜನಾರ್ದನ ರೆಡ್ಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳು, ಇಲಾಖೆಯ ನಿರ್ವಹಣೆ ಹಾಗೂ ರಾಜಕೀಯ ಉದ್ದೇಶಗಳ ಬಗ್ಗೆ ರೆಡ್ಡಿ ಹಲವು ಆರೋಪಗಳನ್ನು ಮಾಡಿದರು.

Read Full Story

06:06 PM (IST) Jul 11

ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - Rule ಮಾಡೋಕೆ ಬರ್ತಾ ಇದ್ದಾನೆ 'ದಿ ಡೆವಿಲ್'

ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಚಿತ್ರಮಂದಿರ ಬಿಡುಗಡೆಯ ಸುಮಾರು ಏಳು ತಿಂಗಳ ಬಳಿಕ ಜುಲೈ 17ರಿಂದ ZEE5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ OTT ರಿಲೀಸ್ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story

05:41 PM (IST) Jul 11

ದೊಡ್ಡ ಕನಸು ಕಾಣಿ, ಕಠಿಣ ಪರಿಶ್ರಮ ಮಾಡಿ - ವಿದ್ಯಾರ್ಥಿನಿಯರಿಗೆ ರವಿ ಡಿ. ಚನ್ನಣ್ಣನವರ್ ಸ್ಪೂರ್ತಿದಾಯಕ ಸಂದೇಶ

ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರು ಡಿಐಜಿ ರವಿ ಡಿ. ಚನ್ನಣ್ಣನವರ್, ಜ್ಞಾನ, ಶಿಸ್ತು, ಸಂಸ್ಕಾರ, ಸಮಯದ ಮಹತ್ವ ಹಾಗೂ ಮೊಬೈಲ್ ದುರ್ಬಳಕೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಹತ್ವದ ಸಲಹೆ ನೀಡಿದರು.

Read Full Story

05:27 PM (IST) Jul 11

JDS ಸೇರಿದ ಬೆನ್ನಲ್ಲೇ ಮಾನವೀಯತೆ ಮೆರೆದ 'ಬಿಗ್‌ ಬಾಸ್‌' ಜಾನ್ವಿ - ಕಷ್ಟದಲ್ಲಿದ್ದ ಅತ್ತೆ-ಮಾವನಿಗೆ ನೆರವಾದ ನಟಿ

'ಬಿಗ್ ಬಾಸ್ ಕನ್ನಡ' ಖ್ಯಾತಿಯ ಜಾನ್ವಿ ಜೆಡಿಎಸ್ ಸೇರಿದ ಬಳಿಕ ಸ್ವಗ್ರಾಮದಲ್ಲಿ ಕಣ್ಣು ಕಾಣದ ಮಾವ ಹಾಗೂ ಅತ್ತೆಗೆ ಸ್ಮಾರ್ಟ್ ಟಿವಿ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಭಾವುಕ ವಿಡಿಯೋ ಜೊತೆಗೆ ಎರಡನೇ ಮದುವೆ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ.

Read Full Story

05:09 PM (IST) Jul 11

Huma Qureshi Shocking Statement - ಮಿತಿ ಮೀರಿ ಹೋಗಲ್ಲ, ಕ್ಯಾಮೆರಾ ಮುಂದೆ ಬೆ*ತ್ತಲಾಗಲ್ಲ; ವೈರಲ್ ಆಯ್ತು ಟಾಕ್ಸಿಕ್ ಬ್ಯೂಟಿ ಮಾತು!

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದ್ರೆ ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈ ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಆದ್ರೆ ಹುಮಾ!?

Read Full Story

05:01 PM (IST) Jul 11

ಏಷ್ಯಾದ ಅತೀ ದೊಡ್ಡ ಏರ್ ಶೋ ಏರೋ ಇಂಡಿಯಾ ಬೆಂಗಳೂರಿನಲ್ಲಿ ಆಯೋಜನೆ, ದಿನಾಂಕ ಪ್ರಕಟಿಸಿದ ಕೇಂದ್ರ

ಏಷ್ಯಾದ ಅತೀ ದೊಡ್ಡ ಏರ್ ಶೋ ಆಗಿ ಹೊರಹೊಮ್ಮಿರುವ ಏರೋ ಇಂಡಿಯಾ ಈ ಬಾರಿಯೂ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಇದೀಗ ಕೇಂದ್ರ ರಕ್ಷಣಾ ಇಲಾಖೆ ಏರೋ ಇಂಡಿಯಾ ಆಯೋಜನೆ ದಿನಾಂಕ ಘೋಷಿಸಿದೆ.

Read Full Story

04:54 PM (IST) Jul 11

ವಿವಾದಗಳ ನಡುವೆಯೂ 'ಕರಾವಳಿ'ಗೆ ಸಿಕ್ತು ಮತ್ತೊಂದು ದೊಡ್ಡ ಬಲ - ಜಯಶ್ರೀ ಕಂಠದಾನ

B Jayashree Karavali: ಅಪ್ಪಟ ಕನ್ನಡ ಮಣ್ಣಿನ ಸೊಗಡನ್ನು ಹೊತ್ತಿರುವ 'ಕರಾವಳಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ.

Read Full Story

04:47 PM (IST) Jul 11

Gill - ಶುಭಮನ್ ಗಿಲ್ ಜೊತೆಗಿರುವ ಆ ಬೆಡಗಿ ಯಾರು? ಸಾರಾ ತೆಂಡೂಲ್ಕರ್‌ಗೇ ಟಕ್ಕರ್ ಕೊಡುವಂತಿದ್ದಾಳೆ ಈ ಹೊಸ ಕ್ರಶ್!

ಏಕದಿನ ತಂಡದ ನಾಯಕ ಶುಭಮನ್ ಗಿಲ್ ವಿಂಬಲ್ಡನ್ ಸುದ್ದಿಯಲ್ಲಿದ್ದಾರೆ. ಅಲ್ಲದೇ ಸಚಿನ್ ತೆಂಡೂಲ್ಕರ್ ಹಾಗೂ ಅವರ ಕುಟುಂಬದೊಂದಿಗೆ ರಾಯಲ್ ಬಾಕ್ಸ್‌ನಲ್ಲಿ ಗಿಲ್ ಪಂದ್ಯ ವೀಕ್ಷಿಸುತ್ತಿರುವುದು ಕಂಡುಬಂದಿತು. ಅಲ್ಲದೇ ಅವರ ಜತೆಯಲ್ಲಿದ್ದ ಹುಡುಗಿ ಯಾರು ಎನ್ನುವ ಸುದ್ದಿಯೂ ಸಖತ ವೈರಲ್‌ ಆಗಿದೆ. 

Read Full Story

04:31 PM (IST) Jul 11

Mother Promise Review - ಹೇಗಿದೆ ಡಾಲಿ ಧನಂಜಯ ಸಿನಿಮಾ? ಮದರ್ ಪ್ರಾಮಿಸ್‌ಗೆ ಇಷ್ಟೇನಾ ರೇಟಿಂಗ್?

Mother Promise Movie Review: ಅನಿವಾರ್ಯತೆಯೇ ಶತ್ರು. ನಟ ಪೂರ್ಣಚಂದ್ರ ಇಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ ಅಪರಾವತಾರ ಮೆರೆದಿದ್ದಾರೆ. ನಿರೀಕ್ಷೆಯೇ ಇಲ್ಲದೆ ಸಿನಿಮಾ ನೋಡಿದವರಿಗೆ ಅಚ್ಚರಿ ಹುಟ್ಟಿಸುತ್ತಾರೆ.

Read Full Story

04:12 PM (IST) Jul 11

ಮತ್ತೆ ಓಡಿಹೋದ ಮಳೆರಾಯ.. ದೇಶಕ್ಕೆ ಎದುರಾಗುವ ಕೆಟ್ಟ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ಕೊಟ್ಟ ಸ್ಯಾಟಲೈಟ್..!

ದೇಶದಾದ್ಯಂತ ಮುಂಗಾರು ಮಳೆ ಅನಿರೀಕ್ಷಿತವಾಗಿ ಸ್ಥಗಿತಗೊಂಡಿದ್ದು, ಶೇ. 70-80 ರಷ್ಟು ಭಾಗಗಳಲ್ಲಿ ಒಣ ಹವೆ ಆವರಿಸಿದೆ. ಪಶ್ಚಿಮ ಪೆಸಿಫಿಕ್ ಸಾಗರದಲ್ಲಿನ ಪ್ರಬಲ ಚಂಡಮಾರುತವು ಭಾರತದತ್ತ ಬರಬೇಕಿದ್ದ ತೇವಾಂಶವನ್ನು ಸೆಳೆಯುತ್ತಿರುವುದೇ ಈ ಮಳೆ ವಿರಾಮಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Read Full Story

04:09 PM (IST) Jul 11

Shivarajkumar Birthday - ಶಿವರಾಜ್‌ಕುಮಾರ್ ಹುಟ್ಟುಹಬ್ಬ; ಇಂದು ರಾತ್ರಿ-ನಾಳೆ ಇವೆಲ್ಲಾ ಕಾರ್ಯಕ್ರಮಗಳು ಇವೆ, ನೋಡಿ..

ನಾಳೆ, ಜುಲೈ 12ರಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕರ್ನಾಟಕದ ಶಿವಣ್ಣ ಅಭಿಮಾನಿಗಳು ಸಿದ್ಧರಾಗಿದ್ದಾರೆ. 64ರ ವಯಸ್ಸಿನಲ್ಲೂ ಹದಿಹರೆಯದ ಹುಡುರಂತೆ ಚಟುವಟಿಕೆಯಿಂದ ಇರುವ ಶಿವಣ್ಣನ ಜನ್ಮದಿನವು ಈ ಬಾರಿ ಅಭಿಮಾನಿಗಳ ಜೊತೆ ನಡೆಯಲಿದೆ. ಅದಕ್ಕಾಗಿ 'ಶ್ರೀಮುತ್ತು' ಶೃಂಗಾರಗೊಳ್ಳುತ್ತಿದೆ.

Read Full Story

04:02 PM (IST) Jul 11

Police - ಕನ್ನಡ ಪರೀಕ್ಷೆ ಬರೆಯದಿದ್ದರೂ ಸಿಗುತ್ತಾ ಸಿವಿಲ್ ಪೊಲೀಸ್ ಕೆಲಸ? ಯಾರಿಗೆ ಅನ್ವಯಿಸುತ್ತೆ ಈ ರೂಲ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದ್ದರೂ, ಈಗಾಗಲೇ ಶಾಲಾ-ಕಾಲೇಜು ಹಂತದಲ್ಲಿ ಕನ್ನಡ ಕಲಿತವರಿಗೆ ಮತ್ತೊಮ್ಮೆ ಪರೀಕ್ಷೆ ಬರೆವ ಹೊರೆಯಿಂದ ಮುಕ್ತಿ ನೀಡಲು ಈ ಮಹತ್ವದ ರೂಲ್ ಜಾರಿಗೆ ತರಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯಿಸುತ್ತದೆ ಮತ್ತು ವಿನಾಯಿತಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Read Full Story

03:09 PM (IST) Jul 11

ಅಪ್ಪು Milana ಸಿನಿಮಾದಂತೆ ಶಿವಮೊಗ್ಗ ಕೋರ್ಟ್‌ನಲ್ಲಿ ಡಿವೋರ್ಸ್‌ ತಗೊಂಡು, ಕಾಫಿ ಕುಡಿದು ರೀಲ್ಸ್‌ ಮಾಡಿದ್ರು

The Tattoo Ghost divorce: ಡಿವೋರ್ಸ್‌ ತಗೊಳ್ಳಲು ಸಾಕಷ್ಟು ಕಾರಣಗಳು ಇರುತ್ತವೆ. ಕೆಲವರು ಡಿವೋರ್ಸ್‌ ತಗೊಂಡೆವು ಎಂದು ಕೂಡ ಹೇಳೋದಿಲ್ಲ. ಇನ್ನೂ ಕೆಲವರು ಇದರಿಂದ ಹೊರಗಡೆ ಬರಲು ತುಂಬ ಸಮಯ ತಗೊಳ್ತಾರೆ. ಆದರೆ ಇಲ್ಲೊಂದು ಜೋಡಿಯೊಂದು ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

Read Full Story

01:35 PM (IST) Jul 11

ಸಿಹಿ ಮುತ್ತು ಸಿಹಿ ಮತ್ತು ಇನ್ನೊಂದು.. 30 ಸೆಕೆಂಡ್‌ನಲ್ಲಿ ಈ ಪುಣ್ಯಾತ್ಮ ಕೊಟ್ಟ ಉಮ್ಮಾಗಳು ಎಷ್ಟು? Video

ಲವ್‌ ಬರ್ಡ್ಸ್‌ಗಳಿಗೆ ಸಿಹಿ ಮುತ್ತುಗಳೇ ಪರಪಂಚ. ಆದ್ರೆ ಈ ಮುತ್ತುಗಳೇ ಗಿನ್ನಿಸ್ ದಾಖಲೆಯಾದ್ರೆ ಹೇಗಿರುತ್ತೆ ಹೇಳಿ? ಜಸ್ಟ್ 30 ಸೆಕೆಂಡ್‌ನಲ್ಲಿ 195 ಕಿಸ್ ಕೊಡಲು ನಿಮ್ಮಿಂದ ಸಾಧ್ಯಾನಾ? ಈ ರೋಮ್ಯಾಂಟಿಕ್ ಕಪಲ್‌ನ ಮುತ್ತುಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.  

Read Full Story

01:16 PM (IST) Jul 11

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ಸಿ.ಶಿವರಾಜು ಅಧಿಕಾರ ಸ್ವೀಕಾರ

ಪ್ರೊ.ಸಿ.ಶಿವರಾಜು ಅವರು ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಅವರು, ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿ ಸ್ನೇಹಿ ವಾತಾವರಣ ಮತ್ತು ನೌಕರರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
Read Full Story

01:12 PM (IST) Jul 11

Shivarajkumar Birthday - ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ; ಅಭಿಮಾನಿಗಳ ಜೊತೆಗೆ ಸಂಭ್ರಮಾಚರಣೆಗೆ 'ದೊಡ್ಮನೆ ದೊರೆ' ಸಿದ್ಧತೆ!

ಕಳೆದ ಮೂರು ವರ್ಷಗಳಿಂದ ಕರುನಾಡಿನ ಪ್ರೀತಿಯ ನಟ ಶಿವಣ್ಣರಿಗೆ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅದೃಷ್ಟ ಕೈತಪ್ಪಿ ಹೋಗಿತ್ತು. ಈ ವರ್ಷ ಅವರ ಹಾಗೂ ಫ್ಯಾನ್ಸ್ ಆಸೆ ಈಡೇರುತ್ತಿದೆ. ಫ್ಯಾನ್ಸ್‌ ಜೊತೆ ಬರ್ತ್‌ಡೇ ಬಾಯ್ ಆಗಲು ಶಿವರಾಜ್‌ಕುಮಾರ್ ಸಹ ಉತ್ಸುಕತೆಯಿಂದ ಸಿದ್ಧರಾಗಿದ್ದಾರೆ.

Read Full Story

01:10 PM (IST) Jul 11

ಇನ್‌ಸ್ಟಾಗ್ರಾಮ್ ನೋಟಿಫಿಕೇಶನ್‌ನಿಂದ ಬಯಲಾಯ್ತು ಪ್ರಿಯಕರನ ಅಸಲಿ ಬುದ್ಧಿ - ಮದುವೆಯಾದ ಮಾಜಿ ಲವರ್ ಜೊತೆ ಏನಿತ್ತು ಆ ಚಾಟಿಂಗ್?

ರೆಡ್ಡಿಟ್‌ನ 'ಗರ್ಲ್ ಡಿನ್ನರ್ ಡೈರೀಸ್' (Girl Dinner Diaries) ವೇದಿಕೆಯಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ, ಪ್ರಸ್ತುತ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಈ ಹೃದಯಸ್ಪರ್ಶಿ ಹಾಗೂ ಆಘಾತಕಾರಿ ಘಟನೆಯ ಸಂಪೂರ್ಣ ವಿವರ ಇಲ್ಲಿದೆ..

Read Full Story

01:06 PM (IST) Jul 11

ಗುರುದತ್‌ ಗಾಣಿಗ ಹೇಳಿದ್ದಕ್ಕೆ ನಾನು Karavali Movie ಪ್ರಚಾರದಲ್ಲಿ ಭಾಗಿಯಾಗಲ್ಲ - Actor Prajwal Devaraj

Actor Prajwal Devaraj: ಪ್ರಜ್ವಲ್‌ ದೇವರಾಜ್‌ ‘ಕರಾವಳಿ’ ಸಿನಿಮಾದ ಟ್ರೇಲರ್‌ ಕಾರ್ಯಕ್ರಮಕ್ಕೆ ಪ್ರಜ್ವಲ್‌ ಅವರೇ ಬಂದಿರಲಿಲ್ಲ. ಆದರೆ ಅವರ ಅಭಿಮಾನಿಗಳು ಬಂದು ಟ್ರೇಲರ್‌ನಲ್ಲಿ ಪ್ರಜ್ವಲ್‌ ಧ್ವನಿ ಇಲ್ಲ ಎಂದು ಜಗಳ ಮಾಡಿದರು. ಆಮೇಲೆ ನಿರ್ದೇಶಕ ಗುರುದತ್‌ ಗಾಣಿಗ ಅವರು ಪ್ರಜ್ವಲ್‌ ವಿರುದ್ಧ ಆರೋಪ ಮಾಡಿದರು, ಆಮೇಲೆ ಪ್ರಜ್ವಲ್‌ ಕೂಡ ಒಂದಿಷ್ಟು ಮಾತನಾಡಿದರು. ಈಗ ಪ್ರಜ್ವಲ್‌ ದೇವರಾಜ್‌ ಅವರು ಸ್ಪಷ್ಟನೆ ನೀಡಿದ್ದಾರೆ.

 

Read Full Story

12:30 PM (IST) Jul 11

Yash-Kiara - ಯಶ್-ಕಿಯಾರ ಮೋಡಿ, ಇವರೇ ನಂಬರ್-01ಜೋಡಿ.. ಆ ಸ್ಟಾರ್ ನಟ ಹೇಳಿರೋ ಮಾತು ಈಗ ಟ್ರೆಂಡಿಂಗ್!

ಟಾಕ್ಸಿಕ್ ಸಿನಿಮಾ ಅಗಸ್ಟ್​ 26ಕ್ಕೆ ಬರುತ್ತೆ. ಆದ್ರೆ ಈ ಸಿನಿಮಾಗೆ ಸೆನ್ಸಾರ್ ಏನಾಗುತ್ತೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ವೈಲೆನ್ಸ್​​ ಜೊತೆ ವೈಬ್ರೇಷನ್ ತರೋ ರೊಮ್ಯಾನ್ಸ್​ಈ ಸಿನಿಮಾದಲ್ಲಿದೆ. ಈ ಝಲಕ್​ಗಳನ್ನೆಲ್ಲಾ ನೋಡಿದ್ರೆ ಟಾಕ್ಸಿಕ್​ಗೆ ಎ ಸರ್ಟಿಫಿಕೆಟ್ ಸಿಕ್ಕಿದ್ರು ಆಶ್ಚರ್ಯವಿಲ್ಲ.

Read Full Story

11:14 AM (IST) Jul 11

ಲಂಡನ್‌ನಲ್ಲಿ ಕೊಹ್ಲಿ ರಹಸ್ಯ ಭೇಟಿಯ ಫೋಟೋ ವೈರಲ್.. ಆಕ್ರೋಶ ಹೊರಹಾಕಿದ RCB ಸ್ಟಾರ್..!

ಲಂಡನ್‌ನ ಕೆಫೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಜೋರ್ಡಾನ್ ಕಾಕ್ಸ್ ಜೊತೆಗಿನ ವಿರಾಟ್ ಕೊಹ್ಲಿಯ ಖಾಸಗಿ ಭೇಟಿಯ ಫೋಟೋ ವೈರಲ್ ಆಗಿದೆ. ಈ ಘಟನೆಯಿಂದ ಬೇಸರಗೊಂಡಿರುವ ಕಾಕ್ಸ್, ಕೊಹ್ಲಿಯ ಖಾಸಗಿ ಬದುಕಿಗೆ ಅಡ್ಡಿಪಡಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

10:53 AM (IST) Jul 11

ಇಂಗ್ಲೆಂಡ್ ಎದುರು ಭಾರತ 285 ರನ್‌ಗೆ ಅಲೌಟ್‌; ಐತಿಹಾಸಿಕ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಅಪರೂಪದ ದಾಖಲೆ ಬರೆದ ಸ್ಮೃತಿ ಮಂಧನಾ!

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 285 ರನ್‌ಗಳಿಗೆ ಆಲೌಟ್ ಆಗಿದೆ. ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕಗಳ ಹೊರತಾಗಿಯೂ ತಂಡವು ಉತ್ತಮ ಆರಂಭದ ನಂತರ ಕುಸಿತ ಕಂಡಿತು. ಇದೇ ಪಂದ್ಯದಲ್ಲಿ ಸ್ಮೃತಿ ಮಂಧಾನ 300 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಅತಿ ಕಿರಿಯ ಆಟಗಾರ್ತಿ ಎಂಬ ವಿಶ್ವದಾಖಲೆ ನಿರ್ಮಿಸಿದರು.
Read Full Story

More Trending News