Published : Aug 10, 2025, 06:53 AM ISTUpdated : Aug 13, 2025, 05:28 AM IST

Karnataka News Live: ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು?

ಸಾರಾಂಶ

ಬೆಂಗಳೂರು: ಕೆಲವರು ಹಿಂದುತ್ವಕ್ಕೆ ಕಂಟಕ ತರಬೇಕು, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದಾರೆ. ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದೆ ಎಂದು ಹರಿಹರ ಪಂಚಮ ಸಾಲಿ ಪೀಠದ ವಚನಾ ನಂದ ಸ್ವಾಮೀಜಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಆದರೆ, ಹಿಂದುತ್ವ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಈ ಭಯ ಕೆಲವರಿಗೆ ಕಾಡುತ್ತಿದೆ. ಹೀಗಾಗಿ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ಇತ್ತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎಸ್‌ಐಟಿ ಮಾಡಿದ್ದೀರಿ. ಎಷ್ಟು ವರ್ಷ ಇರಿಸಿಕೊಳ್ಳುವಿರಿ? ಮೆಕ್ಕಾ ಮದೀನಾದಲ್ಲಿ ಈ ರೀತಿ ನಡೆದುಕೊಂಡಿದ್ದರೆ ಸುಮ್ಮನಿರ್ತಿದ್ರಾ? ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಶ್ನೆ ಮಾಡಿದ್ದಾರೆ.

Indias Most Expensive Car Nita Ambani s Audi A9 Gosumbe Unveiled

05:28 AM (IST) Aug 13

ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು?

ಭಾರತದ ಅತ್ಯಂತ ದುಬಾರಿ ಕಾರು ನೀತಾ ಅಂಬಾನಿ ಒಡೆತನದಲ್ಲಿದೆ. The Audi A9 Chameleon ಎಂಬ ಈ ಕಾರಿನ ಬೆಲೆ ಸುಮಾರು 100 ಕೋಟಿ ರೂಪಾಯಿಗಳು. ಬಣ್ಣ ಬದಲಾಯಿಸುವ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
Read Full Story

11:26 PM (IST) Aug 10

ಗವಿಸಿದ್ದಪ್ಪ ಹತ್ಯೆ ಖಂಡಿಸಿ ಪ್ರತಿಭಟನೆ, ಕೊಪ್ಪಳ ನಗರದ ಖಾಸಗಿ ಶಾಲೆಗೆ ನಾಳೆ ರಜೆ

ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಖಂಡಿಸಿ ನಾಳೆ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ.

Read Full Story

11:12 PM (IST) Aug 10

ಉತ್ತರ ಕನ್ನಡ - ಅಬ್ಬರದ ಮಳೆಗೆ ಕವಲಗಿ ಹಳ್ಳದಲ್ಲಿ ಕೊಚ್ಚಿ ಹೋದ ಸಹೋದರರು!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ಭಾರೀ ಮಳೆಯಿಂದಾಗಿ ಇಬ್ಬರು ಸಹೋದರರು ಕೊಚ್ಚಿ ಹೋಗಿದ್ದಾರೆ. ಮೀನು ಹಿಡಿಯಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Read Full Story

11:01 PM (IST) Aug 10

ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ

ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ನಾಯಕ ಆನಂದ್ ಶರ್ಮಾ ರಾಜೀನಾಮೆ ನೀಡಿದ್ದಾರೆ.

Read Full Story

10:46 PM (IST) Aug 10

ಭಾರತದ ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯವರದ್ದಲ್ಲ, ನೀತಾ ಅಂಬಾನಿಯದ್ದು! ಇದರ ಬೆಲೆ ಎಷ್ಟು ಕೋಟಿ ಗೊತ್ತಾ?

ಭಾರತದ ಅತ್ಯಂತ ದುಬಾರಿ ಕಾರು ನೀತಾ ಅಂಬಾನಿ ಒಡೆತನದಲ್ಲಿದೆ. The Audi A9 Chameleon ಎಂಬ ಈ ಕಾರಿನ ಬೆಲೆ ಸುಮಾರು 100 ಕೋಟಿ ರೂಪಾಯಿಗಳು. ಬಣ್ಣ ಬದಲಾಯಿಸುವ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
Read Full Story

10:02 PM (IST) Aug 10

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು, ಓರ್ವ ಗಂಭೀರ

ವೇಗವಾಗಿ ಸಾಗುತ್ತದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭಿವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಒರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

Read Full Story

09:49 PM (IST) Aug 10

ಈ ಬಾರಿ ಅದ್ದೂರಿ ದಸರಾ ಮಾಡ್ತೇವೆ, ಕಳೆದ ವರ್ಷ 40 ಕೋಟಿ ಖರ್ಚಾಗಿತ್ತು, ಈ ಸಲ ಹೆಚ್ಚಾಗುತ್ತೆ - ಹೆಚ್‌ಸಿ ಮಹದೇವಪ್ಪ

ಮೈಸೂರು ಅರಮನೆಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಗಜಪಡೆ ಆಗಮನ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಂದ ಪೂಜೆ ಸಲ್ಲಿಕೆ. ಈ ಬಾರಿಯ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ.
Read Full Story

09:25 PM (IST) Aug 10

ವಿಷ್ಣುವರ್ಧನ್ ಸಮಾಧಿ ನೆಲಸಮಕ್ಕೆ ಶೋಭಾ ಕರಾಂದ್ಲಾಜೆ ಅಸಮಾಧಾನ, ಸಂರಕ್ಷಣೆಗೆ ಸಿಎಂಗೆ ಪತ್ರ

ನಟ ವಿಷ್ಣುವರ್ಧನ್ ಸಮಾಧಿ ನೆಲೆಸಮಗೊಳಿಸುವ ಘಟನೆ ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಹಲವು ಈ ಕುರಿತು ಪ್ರತಿಕ್ರಿಯೆಸಿದ್ದಾರೆ. ಇದೀಗ ಕೇಂದ್ರ ಸಚಿವ ಶೋಭಾ ಕರದ್ಲಾಂಜೆ ವಿಷ್ಣು ಸಮಾಧಿ ಉಳಿಸಿ, ಕಲಾ ಗ್ರಾಮವಾಗಿ ಅಭಿವೃದ್ಧಿಪಡಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

Read Full Story

08:51 PM (IST) Aug 10

ರಾಹುಲ್ ಗಾಂಧಿಯವರು 'ಮತಗಳ್ಳತನ' ಆರೋಪ ಸಾಬೀತು ಮಾಡಿಯೇ ಮಾಡ್ತಾರೆ - ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಸತ್ಯ ಎಂದು ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ. ವೋಟರ್ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ದಾಖಲಾತಿ ಮತ್ತು ಡಬಲ್ ಹೆಸರುಗಳು ಕಂಡುಬಂದಿವೆ ಎಂದು ಅವರು ಆರೋಪಿಸಿದ್ದಾರೆ. 

Read Full Story

08:44 PM (IST) Aug 10

ಮೋದಿ ಉದ್ಘಾಟಿಸಿದ ಹಳದಿ ಮೆಟ್ರೋ ನಾಳೆಯಿಂದ ಸಂಚಾರ, ಟಿಕೆಟ್ ದರ,ರೈಲು ವೇಳಾಪಟ್ಟಿ

ಪ್ರಧಾನಿ ಮೋದಿ ಇಂದು ಬೆಂಗಳೂರಿನ ಹಳದಿ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದ ಹಳದಿ ಮೆಟ್ರೋ ಸಂಚಾರ ಆರಂಭಿಸುತ್ತಿದೆ. ರೈಲು ಸಮಯ, ನಿಲ್ದಾಣ, ಟಿಕೆಟ್ ದರ ಸೇರಿದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

Read Full Story

08:17 PM (IST) Aug 10

ಮತಗಳ್ಳನ ಆರೋಪ, ಇಕ್ಕಟ್ಟಿಗೆ ಸಿಲುಕಿದ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯಿಂದ ನೋಟಿಸ್!

ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ. ರಾಹುಲ್ ಗಾಂಧಿ ಈ ನೋಟಿಸ್‌ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
Read Full Story

08:03 PM (IST) Aug 10

ಆಸ್ಪತ್ರೆ ಉದ್ಘಾಟನೆ ವೇಳೆ ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿದ ಸಟಿವ ರಾಮಲಿಂಗಾರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ತೆರಳಿದ್ದ ಸಚಿವ ರಾಮಲಿಂಗಾ ರೆಡ್ಡಿ ಲಿಫ್ಟ್‌ನಲ್ಲಿ ಸಿಲುಕಿದ ಘಟನೆ ನಡೆದಿದೆ.

 

Read Full Story

07:46 PM (IST) Aug 10

'ಕೊಲೆ ಮಾಡಿ ನಮಾಜ್ ಮಾಡಿದ್ದಾರೆ..' ಕೊಪ್ಪಳ ಗವಿಸಿದ್ದಪ್ಪನ ಮನೆಗೆ ಭೇಟಿ ಕೊಟ್ಟ ಯತ್ನಾಳ್‌ರ ಮುಂದೆ ಪೋಷಕರು ಆಕ್ರೋಶ

ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಕೆಎಸ್ ಈಶ್ವರಪ್ಪ ಅವರು ಗವಿಸಿದ್ದಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Read Full Story

07:35 PM (IST) Aug 10

Amruthadhaare - ಭೂಮಿಕಾಳನ್ನು ಸಾಯಿಸಲು ಹೋಗಿ ಪಾರ್ಥನ ಜೀವ ಬಲಿ ಕೊಡ್ತಾಳಾ ಶಕುಂತಲಾ?

ಭೂಮಿಕಾ ಮತ್ತು ಮಗುವನ್ನು ಕೊಲ್ಲಿಸಲು ಅಪಘಾತ ಮಾಡಿಸುವ ಪ್ಲ್ಯಾನ್​ ಮಾಡಿದ್ದಾರೆ ಜೈದೇವ್​ ಮತ್ತು ಶಕುಂತಲಾ. ಈ ಪ್ಲ್ಯಾನ್​ನಲ್ಲಿ ಅರಿಯದೇ ತನ್ನ ಸ್ವಂತ ಮಗ ಪಾರ್ಥನನ್ನೇ ಬಲಿ ಕೊಡ್ತಾಳಾ ಶಕುಂತಲಾ? ಏನಿದು ಅಮೃತಧಾರೆ ಸೀರಿಯಲ್​  ಟ್ವಿಸ್ಟ್​? 

Read Full Story

07:24 PM (IST) Aug 10

ಟ್ರಾಫಿಕ್‌ನಲ್ಲಿ ಸಿಲುಕಿದ ಆ್ಯಂಬುಲೆನ್ಸ್, ನೋವಿನಿಂದ ಕಿರುಚಾಡಿ ದಾರಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

ಗಾಯಗೊಂಡ ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ವೇಗವಾಗಿ ಸಾಗಿಸುವ ನಡುವೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಾಧ್ಯಾಗದಷ್ಟು ಟ್ರಾಫಿಕ್. ಇತ್ತ ಗಾಯಗೊಂಡ ಮಹಿಳೆ ಕಿರುಚಾಡುತ್ತಲೇ ಆ್ಯಂಬುಲೆನ್ಸ್‌ನಲ್ಲೇ ಪ್ರಾಣಬಿಟ್ಟ ಘಟನೆ ನಡೆದಿದೆ.

Read Full Story

07:07 PM (IST) Aug 10

'ಅನಾಮಿಕ ವ್ಯಕ್ತಿ ಹೇಳಿದ ತಕ್ಷಣ ನೆಲ ಅಗೆದು ಹುಡುಕಿದರಲ್ಲಾ, ಏನಾದರೂ ಸಿಕ್ಕೀತಾ?..' ಎಂಪಿ ರೇಣುಕಾಚಾರ್ಯ ಕಿಡಿ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪದ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಹಿಂದೆ ಕಾಣದ ಕೈಗಳಿವೆ ಮತ್ತು ಇದು ಡಾ.ವೀರೇಂದ್ರ ಹೆಗ್ಗಡೆಯವರ ಘನತೆಗೆ ಧಕ್ಕೆ ತರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. 

Read Full Story

06:36 PM (IST) Aug 10

ನಿಮ್ಮ ತಿಂಗಳ ವೇತನ ಉಳಿಸುವ ಸೂತ್ರಗಳು - ಹಣ ಉಳಿಸಿ, ಭವಿಷ್ಯ ರೂಪಿಸಿ

ತಿಂಗಳ ಸಂಬಳವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬಜೆಟ್ ರೂಪಿಸುವುದು, ಸಾಲವನ್ನು ಜಾಣ್ಮೆಯಿಂದ ನಿರ್ವಹಿಸುವುದು ಮತ್ತು ಖರ್ಚುಗಳನ್ನು ವಿಶ್ಲೇಷಿಸುವುದು ಮುಖ್ಯ. ಉಳಿತಾಯಕ್ಕೆ ಆದ್ಯತೆ ನೀಡುವುದು ಮತ್ತು ವಿದ್ಯುತ್, ಇಂಧನ ವೆಚ್ಚ ಕಡಿತ ಮಾಡುವುದು ಸಹ ಅಗತ್ಯ.
Read Full Story

06:34 PM (IST) Aug 10

ಡಾ.ಬ್ರೋಗೆ ಸಿಕ್ಕಿತು ಹೆಂಗಸಿನ ಅಸ್ಥಿ ಪಂಜರ! ಎಳೆ ಎಳೆಯಾಗಿ ಬಿಚ್ಚಿಟ್ಟ ಅದರ ಮಾಹಿತಿ...

ಡಾ.ಬ್ರೋ ಅವರು ಕುತೂಹಲದ ಅಸ್ಥಿಪಂಜರದ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಎಲ್ಲಿಯದ್ದು ಇದು? ಇವರಿಗೆ ಸಿಕ್ಕಿದ್ದು ಹೇಗೆ?

 

Read Full Story

06:31 PM (IST) Aug 10

'ಮತಗಳ್ಳತನ'ದ ಬಗ್ಗೆ ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ; ಸಚಿವ ರಾಜಣ್ಣ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ!

ವೋಟರ್ ಐಡಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ರಾಜಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಸುರ್ಜೇವಾಲರಿಗೆ ದೂರು ಸಲ್ಲಿಸಿದ್ದಾರೆ. 

Read Full Story

06:23 PM (IST) Aug 10

ಹೊಸ ದಾಖಲೆ ಬರೆದ ಮುಕೇಶ್ ಅಂಬಾನಿ, ವಿಶ್ವದಲ್ಲೇ ಇದೀಗ ಜಿಯೋ ನಂ.1 ಟೆಲಿಕಾಂ

ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಹೊಸ ದಾಖಲೆ ಬರೆದಿದೆ. ವಿಶ್ವದ ಘಟಾನುಘಟಿ ಟೆಲಿಕಾಂ ಆಪರೇಟರ್ ಹಿಂದಿಕ್ಕಿರುವ ರಿಲಯನ್ಸ್ ಜಿಯೋ ಇದೀಗ ನಂ.1 ಆಪರೇಟರ್ ಹೆಗ್ಗಳಿಕೆಗೆ ಪಾತ್ರವಾಗಿದೆ.

 

Read Full Story

05:58 PM (IST) Aug 10

ಬೆಂಗಳೂರು ನವ ಭಾರತದ ಸಂಕೇತ, 'ಆಪರೇಷನ್ ಸಿಂದೂರ್' ಯಶಸ್ಸಿನ ಹಿಂದೆ ಕರ್ನಾಟಕದ ಯುವ ತಂತ್ರಜ್ಞರ ಶ್ರಮವಿದೆ - ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರಿನ ಯುವ ತಂತ್ರಜ್ಞರ ಆವಿಷ್ಕಾರಗಳು ಆಪರೇಷನ್ ಸಿಂದೂರ್‌ನ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದು, ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಿದೆ. ಪ್ರಧಾನಿ ಮೋದಿ ಈ ಸಾಧನೆಗಾಗಿ ಬೆಂಗಳೂರಿನ ಯುವಜನರನ್ನು ಶ್ಲಾಘಿಸಿದ್ದಾರೆ.
Read Full Story

05:20 PM (IST) Aug 10

ಎಲ್ರಿಗೂ ತಲೇಲಿ ಮೆದುಳಿದ್ದರೆ, ರಾಹುಲ್‌ ಗಾಂಧಿಗೆ ಮೊಳಕಾಲಲ್ಲಿ ಮೆದುಳಿದೆ - ಯತ್ನಾಳ್ ವಾಗ್ದಾಳಿ

ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನೆಹರು ಅವರ ಕಾಲದ ಉದಾಹರಣೆ ನೀಡಿ, ರಾಹುಲ್ ಗಾಂಧಿಗೆ ನೈತಿಕತೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಣ ಕೊಟ್ಟು ಮತ ಖರೀದಿಸಿದ್ದಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಬಿಜೆಪಿಗೆ ಅಗತ್ಯ ಬಿದ್ದರೆ ಸೇರುತ್ತೇನೆ.

Read Full Story

05:12 PM (IST) Aug 10

ಪ್ರತಾಪ್ ಸಿಂಹರನ್ನ ಪ್ರಜ್ವಲ್ ರೇವಣ್ಣಗೆ ಹೋಲಿಸಿದ ಎಂ ಲಕ್ಷ್ಮಣ್, ಏಕವಚನದಲ್ಲಿ ವಾಗ್ದಾಳಿ!

ಮಾಜಿ ಸಂಸದರೊಬ್ಬರು ಹುಚ್ಚು ನಾಯಿಯಂತೆ ರಾಜ್ಯದ ನಾಯಕರಿಗೆ ಕಚ್ಚುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣನಂತೆ ಈ ಮಾಜಿ ಸಂಸದರ ಕರ್ಮಕಾಂಡವೂ ಬಯಲಾಗಲಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. 

Read Full Story

05:10 PM (IST) Aug 10

ಸಾವರಿನ್ ಗೋಲ್ಡ್ ಬಾಂಡ್ - ಅಕಾಲಿಕ ಮರುಪಾವತಿ ಘೋಷಿಸಿದ ಆರ್‌ಬಿಐ!

2019-20 ಸರಣಿ-IX ಮತ್ತು 2020-21 ಸರಣಿ-V ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಅಕಾಲಿಕ ಮರುಪಾವತಿಯ ಅವಕಾಶ ಲಭ್ಯ. 2025ರ ಆಗಸ್ಟ್ 11ರಂದು ಪ್ರತಿ ಯೂನಿಟ್‌ಗೆ ₹10,070 ದರದಲ್ಲಿ ಮರುಪಾವತಿ ಪಡೆಯಬಹುದು.
Read Full Story

05:05 PM (IST) Aug 10

ಭಾಗ್ಯ-ಆದಿ ಮದ್ವೆಗೆ ಫ್ಯಾನ್ಸ್​ ಕಾತರ... ಇಬ್ಬರು ಮಕ್ಕಳ ಮುದ್ದಿನ ಅಪ್ಪನ ರಿಯಲ್​ ಪತ್ನಿ ಇವ್ರೇ ನೋಡಿ!

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎಂದುಕೊಳ್ಳುತ್ತಿರುವವರೇ ಹೆಚ್ಚು. ಹಾಗಿದ್ರೆ ರಿಯಲ್​ ಲೈಫ್​ನಲ್ಲಿ ಆದಿ ಪತ್ನಿ ಯಾರು? ಮಕ್ಕಳು ಎಷ್ಟು? ಇಲ್ಲಿದೆ ಡಿಟೇಲ್ಸ್​...

 

Read Full Story

05:02 PM (IST) Aug 10

ನಕ್ಸಾ 10 ವರ್ಷದ ಸಂಭ್ರಮ, ಮಾರುತಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ

ಮಾರುತಿ ಸುಜುಕಿ ಇದೀಗ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ ಮಾಡಿದೆ. ನೆಕ್ಸಾ ಜೊತೆಗಿನ 10 ವರ್ಷದ ಸಂಭ್ರಮದಲ್ಲಿ ಈ ಕಾರು ಬಿಡುಗಡೆಯಾಗಿದೆ.

Read Full Story

04:35 PM (IST) Aug 10

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಕೃತ್ಯ; ಯುವಕನನ್ನು ಮನೆಗೆ ಕರೆಸಿ ಸ್ಕ್ರೂಡ್ರೈವರ್‌ನಿಂದ ಹಿಂಸಿಸಿ ದಂಪತಿಗಳಿಂದ ಕೊಲೆ!

₹7 ಲಕ್ಷ ಸಾಲದ ವಿಚಾರವಾಗಿ ಅನೀಸ್‌ನನ್ನು ಕೊಲ್ಲಲಾಗಿದೆ ಎಂದು ಕುಟುಂಬ ಹೇಳಿಕೆ ನೀಡಿದರೆ, ಪೊಲೀಸರು ಅಕ್ರಮ ಸಂಬಂಧವೇ ಕಾರಣ ಎಂದಿದ್ದಾರೆ.

Read Full Story

04:31 PM (IST) Aug 10

ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ಪೂರ್ವಭಾವಿ ಸಭೆ - ಪಕ್ಷಾತೀತ ಹೋರಾಟಕ್ಕೆ ಬೊಮ್ಮಾಯಿ ಮನವಿ!

ಬೆಡ್ತಿ-ವರದಾ ನದಿ ಜೋಡಣೆಗೆ ಜನಶಕ್ತಿ ಪ್ರದರ್ಶನ ಅಗತ್ಯವೆಂದು ಮಾಜಿ ಸಿಎಂ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದರು. ನೀರು ಜೀವಜಲ, ಔಷಧಿಯೂ ಹೌದು. ನೀರಿನ ಸಮಸ್ಯೆ ಜಾಗತಿಕ. ನದಿಗಳ ಸಂರಕ್ಷಣೆ, ಬಳಕೆ ಮುಖ್ಯ. ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಸವಾಲಿನದ್ದು. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಬೇಕು.

Read Full Story

04:12 PM (IST) Aug 10

ಕೇವಲ ₹1,279ರಿಂದ ವಿಮಾನ ಟಿಕೆಟ್ - 'ಫ್ರೀಡಂ ಸೇಲ್ ಆಫರ್' ಕೊಟ್ಟ ಏರ್ ಇಂಡಿಯಾ ಎಕ್ಸ್‌ಪ್ರೆಸ್

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ 50 ಲಕ್ಷ ಸೀಟುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳು ಕ್ರಮವಾಗಿ ₹1,279 ಮತ್ತು ₹4,279 ರಿಂದ ಆರಂಭವಾಗುತ್ತವೆ. ಈ ಆಫರ್ ಆಗಸ್ಟ್ 10 ರಿಂದ 15 ರವರೆಗೆ ಮಾತ್ರ ಲಭ್ಯ.

Read Full Story

04:09 PM (IST) Aug 10

ಸ್ಥಗಿತಗೊಳ್ಳುತ್ತಿದೆ ಮೈಕ್ರೋಸಾಫ್ಟ್ ಜನಪ್ರಿಯ ಸ್ಕ್ಯಾನಿಂಗ್ ಆ್ಯಪ್, ಅಧಿಕೃತ ಘೋಷಣೆ

ಮೈಕ್ರೋಸಾಫ್ಟ್ ತನ್ನ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆ.15ರಿಂದ ಈ ಸ್ಕ್ಯಾನಿಂಗ್ ಆ್ಯಪ್ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.

Read Full Story

03:45 PM (IST) Aug 10

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಮುಕ್ತ, ಟಿಕೆಟ್‌ ದರ ಎಷ್ಟು?

ಪ್ರಧಾನಿ ಮೋದಿ ಆರ್‌.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು. ಬುಧವಾರದಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಪ್ರಾರಂಭದಲ್ಲಿ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ನಡೆಯಲಿದೆ. ಒಟ್ಟು 19.15 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ.
Read Full Story

03:36 PM (IST) Aug 10

ವಿಮಾನದಲ್ಲಿ ಕೊಳಕಾದ ಸೀಟು ಕೊಟ್ಟಿದ್ದನ್ನು ಪ್ರಶ್ನಿಸಿ 1.75 ಲಕ್ಷ ರೂ. ಪಡೆದ ಮಹಿಳೆ!

ದೆಹಲಿಯಿಂದ ಬಾಕುವಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೊಳಕಾದ ಸೀಟು ನೀಡಿದ್ದಕ್ಕಾಗಿ ಇಂಡಿಗೋ ಏರ್‌ಲೈನ್ಸ್‌ಗೆ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ 1.75 ಲಕ್ಷ ರೂ. ದಂಡ ವಿಧಿಸಿದೆ. ಮಹಿಳೆ ದೂರು ನೀಡಿದರೂ ವಿಮಾನ ಸಿಬ್ಬಂದಿ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.
Read Full Story

03:10 PM (IST) Aug 10

ಧರ್ಮಸ್ಥಳದ ರಹಸ್ಯ - ಅನಾಮಿಕ ತೋರಿದ ರತ್ನಗಿರಿ ಬೆಟ್ಟದ 16ನೇ ಪಾಯಿಂಟ್‌ನಲ್ಲಿ ಸಿಕ್ಕಿದ್ದೇನು?

ಧರ್ಮಸ್ಥಳದ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದ ಅನಾಮಿಕ ರತ್ನಗಿರಿ ಬೆಟ್ಟದಲ್ಲಿ ಗುರುತಿಸಿದ 16ನೇ ಪಾಯಿಂಟ್‌ನಲ್ಲಿ ಬರೋಬ್ಬರಿ 30 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದ್ದಾರೆ. ಆದರೆ, ಅಲ್ಲಿ ಸಿಕ್ಕಿದ್ದೇನು? ಪ್ರತ್ಯಕ್ಷ ವರದಿ ಮಾಡಿದ ನಮ್ಮ ರಿಪೋರ್ಟರ್ ಕೊಟ್ಟ ಮಾಹಿತಿ ಇಲ್ಲಿದೆ.

Read Full Story

03:06 PM (IST) Aug 10

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಗೆ 5 ವರ್ಷದ ಬಾಲಕಿಯ ಹೃದಯ ಸ್ಪರ್ಶಿ ಪತ್ರ

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ 5 ವರ್ಷದ ಬಾಲಕಿ ಹೃದಯಸ್ವರ್ಶಿ ಪತ್ರ ಬರೆದಿದ್ದಾರೆ. ಇದು ಬಾಲಕಿಯ ಸಮಸ್ಯೆ ಮಾತ್ರವಲ್ಲ, ಬೆಂಗಳೂರಿನ ಬಹುತೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಅಷ್ಟಕ್ಕೂ ಬಾಲಕಿ ಬರೆದ ಪತ್ರದಲ್ಲಿ ಏನಿದೆ?

Read Full Story

02:50 PM (IST) Aug 10

ಮೈಸೂರಿನ ಜನತೆಗೆ ತಿರುಪತಿಗೆ KSTDC ವಿಶೇಷ ಟೂರ್ ಪ್ಯಾಕೇಜ್; ಟಿಕೆಟ್ ಬೆಲೆ ಎಷ್ಟು?

KSTDC Travel Package: ಮೈಸೂರಿನಿಂದ ತಿರುಪತಿಗೆ ಎರಡು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಒಂದು ದಿನದ ತಿರುಪತಿ ಟ್ರಿಪ್ ಮತ್ತು ಮೂರು ದಿನಗಳ ತಿರುಪತಿ-ಕಾಳಹಸ್ತಿ ಟ್ರಿಪ್ ಪ್ಯಾಕೇಜ್‌ಗಳು ಲಭ್ಯವಿದೆ. ಈ ಪ್ಯಾಕೇಜ್‌ಗಳ ಬೆಲೆ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಿ.

Read Full Story

02:28 PM (IST) Aug 10

ಕನ್ನಡದಲ್ಲಿಯೇ ಸಿಹಿಯುಂಟು, ಕರ್ನಾಟಕ ನಮ್ಮತನದ ಅನುಭವ ನೀಡುತ್ತೆ - ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.

Read Full Story

01:54 PM (IST) Aug 10

ರಾಜ್ಯ ಶಿಕ್ಷಣ ನೀತಿಯ ಅಂತಿಮ ವರದಿಯಲ್ಲಿ ಮಾತೃಭಾಷೆ ಪದಕ್ಕೆ ಕೊಕ್? ಕನ್ನಡಕ್ಕೆ ಕಂಟಕ?

ರಾಜ್ಯ ಶಿಕ್ಷಣ ನೀತಿ ಆಯೋಗದ ದ್ವಿಭಾಷಾ ನೀತಿ ಶಿಫಾರಸಿನಿಂದ ಕನ್ನಡಕ್ಕೆ ಆತಂಕ ಎದುರಾಗಿದೆಯೇ? ಕನ್ನಡ ಭಾಷಾ ಬೋಧನೆ ಮತ್ತು ಕಲಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆಯೇ? ಈ ಕುರಿತು ತಜ್ಞರ ಅಭಿಪ್ರಾಯಗಳನ್ನು ತಿಳಿಯಿರಿ.
Read Full Story

12:54 PM (IST) Aug 10

ಧರ್ಮಸ್ಥಳ ಪ್ರಕರಣದ ಹಿಂದೆ ಏನೋ ಪಿತೂರಿ ಇದೆ - ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ

ಹೆಣ್ಣುಮಕ್ಕಳು ಸ್ವಾವಲಂಬನೆಯಿಂದ ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯ ಇಟ್ಟುಕೊಂಡವರು ವೀರೇಂದ್ರ ಹೆಗ್ಗಡೆ. ಅವರ ಮನೆಯೊಳಗೆ ಈ ರೀತಿ ನಡೆಯುತ್ತೆ ಅಂದ್ರೆ ನಮಗೂ ನಂಬಕ್ಕಾಗಲ್ಲ ಎಂದರು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ.

Read Full Story

12:35 PM (IST) Aug 10

ಒಂದೇ ವರ್ಷ ಭಾರತದ ಪೌರತ್ವ ತ್ಯಜಿಸಿದ 2 ಲಕ್ಷಕ್ಕೂ ಅಧಿಕ ಮಂದಿ, 6 ವರ್ಷದಲ್ಲಿ 1 ಮಿಲಿಯನ್‌ ಜನರ ಗುಡ್‌ ಬೈ!

2024ರಲ್ಲಿ 2.06 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 8 ಲಕ್ಷದ 96 ಸಾವಿರಕ್ಕೂ ಅಧಿಕ ಮಂದಿ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ. ಇದಕ್ಕೆ ಆರ್ಥಿಕ ಅವಕಾಶಗಳು, ಶಿಕ್ಷಣ, ಕುಟುಂಬ ಸೇರಲು, ದ್ವಿಪೌರತ್ವದ ಆಕರ್ಷಣೆ  ಹಲವು ಕಾರಣಗಳಿವೆ.

Read Full Story

12:27 PM (IST) Aug 10

ಹಳದಿ ಮೆಟ್ರೋಗೆ ಚಾಲನೆ ನೀಡಿದ ಮೋದಿ; ನಾಳೆಯಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತ! ಹತ್ತಾರು ವಿಶೇಷತೆಗಳು

ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ 19.15 ಕಿ.ಮೀ. ಹಳದಿ ಮೆಟ್ರೋ ಮಾರ್ಗ ಸೋಮವಾರದಿಂದ ಕಾರ್ಯಾರಂಭ. ಆರಂಭದಲ್ಲಿ ಮೂರು ರೈಲುಗಳು 20-25 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. 2026ರಲ್ಲಿ 15 ರೈಲುಗಳೊಂದಿಗೆ ದೈನಂದಿನ 3.5 ಲಕ್ಷ ಪ್ರಯಾಣಿಕರ ಸಂಚಾರ ನಿರೀಕ್ಷಿತ.

Read Full Story

More Trending News