ಉತ್ತರಖಂಡದಲ್ಲಿ ಪ್ರವಾಹ ದುರಂತ,ಆಂಗ್ಲರ ವಿರುದ್ಧ ಟೆಸ್ಟ್ ಸಂಕಷ್ಟದಲ್ಲಿ ಭಾರತ; ಫೆ.7ರ ಟಾಪ್ 10 ಸುದ್ದಿ!

By Suvarna NewsFirst Published Feb 7, 2021, 5:09 PM IST
Highlights

ಉತ್ತರಖಂಡದಲ್ಲಿ ಸಂಭವಿಸಿದ ಹಿಮಸ್ಫೋಟ ಪರಿಣಾಮ ಪ್ರವಾಹ ಸೃಷ್ಟಿಯಾಗಿದೆ. 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಮೂವರ ಶವ ಹೊರತೆಗೆಯಲಾಗಿದೆ. ಇನ್ನು ರೈತರನ್ನು ದೆಹಲಿ ಪ್ರವೇಶಿಸಲು ನಿರಾಕರಿಸಿದರೆ ಪ್ರಧಾನಿ ಮೋದಿಗೆ ತಮಿಳುನಾಡು ಪ್ರವೇಶಿಸಲು ಬಿಡುವುದಿಲ್ಲ ಎಂದು  ರೈತ ಸಂಘಟನೆ ಎಚ್ಚರಿಕೆ ನೀಡಿದೆ. ಟಿಎಂಸಿ ವಿರುದ್ಧ ತೊಡೆ ತಟ್ಟಿರುವ ಬಿಜೆಪಿ ಬಂಗಾಳದಲ್ಲಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದೆ. 26 ಲಕ್ಷ ರೂ ಪಡೆದು ವಂಚಿಸಿದ್ರಾ ಸನ್ನಿ, ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ  ಟೀಂ ಇಂಡಿಯಾ ಸೇರಿದಂತೆ ಫೆಬ್ರವರಿ 7ರ ಟಾಪ್ 10 ಸುದ್ದಿ ಇಲ್ಲಿವೆ.

ಉತ್ತರಖಂಡ ಹಿಮಸ್ಫೋಟದಿಂದ ಪ್ರವಾಹ; 150 ಮಂದಿ ಕಣ್ಮರೆ, ಪರಿಸ್ಥಿತಿ ಅವಲೋಕಿಸಿದ ಮೋದಿ!...

Latest Videos

ಉತ್ತರಖಂಡಕ್ಕೆ ಭಾನುವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಭಾರಿ ಹಿಮಸ್ಫೋಟದಿಂದ ಪ್ರವಾಹ ಸೃಷ್ಟಿಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ರೈತರನ್ನು ದೆಹಲಿಗೆ ಬಿಡದಿದ್ದರೆ, ಮೋದಿಯನ್ನು ತಮಿಳುನಾಡಿಗೆ ಬರಲು ಬಿಡುವುದಿಲ್ಲ'...

ರೈತ ಸಂಘಟನೆಯಿಂದ ಮೋದಿಗೆ ಚಾಲೆಂಜ್| ಕೃಷಿ ಬಿಲ್ ಹಿಂಪಡೆಯಲು ಆಗ್ರಹ| ರೈತರನ್ನು ದೆಹಲಿಗೆ ಬಿಡದಿದ್ದರೆ, ಮೋದಿಯತನ್ನು ತಮಿಳುನಾಡಿಗೆ ಪ್ರೆವೇಶಿಸಲು ಬಿಡುವುದಿಲ್ಲ ಎಂದ ರೈತ ಸಂಘಟನೆ

ಬಂಗಾಳದಲ್ಲಿ ಬಿಜೆಪಿ ಪರಿವರ್ತನ ಯಾತ್ರೆಗೆ ನಡ್ಡಾ ಚಾಲನೆ!

ಬಂಗಾಳದಲ್ಲಿ ಬಿಜೆಪಿ ಪರಿವರ್ತನ ಯಾತ್ರೆಗೆ ನಡ್ಡಾ ಚಾಲನೆ| ಮತಬ್ಯಾಂಕ್‌ಗಾಗಿ ದೇಶದ ಸಂಸ್ಕೃತಿ ಬದಲಿಸುವ ದೀದಿ: ಗುಡುಗು| ಜೈ ಶ್ರೀರಾಂ ಘೋಷಣೆಯೆಂದರೆ ಮಮತಾಗೇಕೆ ದ್ವೇಷ?

6 ವಿಕೆಟ್ ಪತನ, 321ರನ್ ಹಿನ್ನಡೆ, ಚೆನ್ನೈ ಟೆಸ್ಟ್‌ನ 3ನೇ ದಿನವೂ ಭಾರತಕ್ಕೆ ಸಂಕಷ್ಟ!

ಚೆನ್ನೈ ಟೆಸ್ಟ್ ಪಂದ್ಯದ 3ನೇ ದಿನವೂ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. 6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 321 ರನ್ ಹಿನ್ನಡೆಯಲ್ಲಿದೆ. ತೃತೀಯ ದಿನದಾಟದ ಹೈಲೈಟ್ಸ್ ಇಲ್ಲಿದೆ.

ಪೋರ್ನ್ ವಿಡಿಯೋ ಮಾಡಿ ಮಾರಾಟ ಮಾಡ್ತಿದ್ದ ನಟಿ ಅರೆಸ್ಟ್: ಸಬ್‌ಸ್ಕ್ರೈಬರ್ಸ್‌ಗೂ ಸಂಕಷ್ಟ

ತನ್ನದೇ ಹಾಟ್ ವಿಡಿಯೋಗಳನ್ನು, ಪೋರ್ನ್ ಕಂಟೆಂಟ್ ಮಾಡಿ ಮಾರಾಟ ಮಾಡುತ್ತಿದ್ದ ನಟಿಗೆ ಈಗ ಸಂಕಷ್ಟ ಎದುರಾಗಿದೆ. ಆಕೆ ಮಾತ್ರವಲ್ಲದೆ ಆಕೆಯ ವಿಡಿಯೋ ಹಣ ಕೊಟ್ಟು ನೋಡ್ತಿದ್ದ ಸಬ್‌ಸ್ಕ್ರೈಬರ್ಸ್‌ಗೂ ದಂಡ ಬಿದ್ದಿದೆ....

26 ಲಕ್ಷ ಪಡೆದು ವಂಚಿಸಿದ್ರಾ ಸನ್ನಿ ಲಿಯೋನ್..? ಹಾಟ್ ನಟಿಯ ವಿರುದ್ಧ ಕೇಸ್...

ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಕೇರಳದಲ್ಲಿ ಹಣ ಪಡೆದು ವಂಚಿಸಿದ ಆರೋಪ ಎದುರಿಸಿದ್ದಾರೆ. ಏನಾಯ್ತು..? ಇಲ್ಲಿ ಓದಿ

ಮಹೀಂದ್ರ ಕಾರಿಗೆ ಗರಿಷ್ಠ 3 ಲಕ್ಷ ರೂ. ಡಿಸ್ಕೌಂಟ್; ಫೆಬ್ರವರಿ ತಿಂಗಳು ಮಾತ್ರ!...

ಮಹೀಂದ್ರ ತನ್ನ ಕಾರಿನ ಮೇಲೆ ಡಿಸ್ಕೌಂಟ್ ಘೋಷಿಸಿದೆ. BS6 ಕಾರುಗಳ ಮೇಲೆ ಗರಿಷ್ಠ 3 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಯಾವ ಕಾರಿಗೆ ಎಷ್ಟು ಡಿಸ್ಕೌಂಟ್ ಸಿಗಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ಕುರುಬರ ಸಮಾವೇಶಕ್ಕೆ ಅಶೋಕ್: ಸಚಿವರ ಮೂಲಕ ಸಿಎಂಗೆ ಸಂದೇಶ ಕಳುಹಿಸಿದ ಶ್ರೀಗಳು...

ಕುರುಬರ ಸಮಾವೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿ ಕುರುಬ ಸಮುದಾಯದ ಎಸ್‌ಟಿ ಹೋರಾಟದ ಮನವಿ ಪತ್ರವನ್ನು ಸ್ವೀಕರಿಸಿದರು.

ಕೃಷಿ ಕಾಯ್ದೆ ಅಸಲಿಯತ್ತೇನು? ಹಳೇ ಪತ್ರದಿಂದ ಬಯಲಾಯ್ತು ಡಬಲ್ ಗೇಮ್!...

ಕಳಚಿ ಬಿತ್ತು ಕೃಷಿ ಕಾಯ್ದೆ ವಿರೋಧಿಗಳ ಊಸರವಳ್ಳಿ ಮುಖವಾಡ. ಆ ಹಳೇ ಪತ್ರದಿಂದ ಬಯಲಾಯ್ತು ಕಾಂಗ್ರೆಸ್‌ನ ಡಬಲ್ ಗೇಮ್. ಅಂದು ರೊಚ್ಚಿಗೆದ್ದಿದ್ದ ಬಿಜೆಪಿ ಇಂದು ಅಪ್ಪಿ ಮುದ್ದಾಡುತ್ತಿರುವುದೇಕೆ? ಹನ್ನೊಂದು ವರ್ಷದ ಪತ್ರ, ವಿರೋಧಿಗಳ ಪ್ರಣಾಳಿಕೆ. ರೈತರಿಇಗೆ ಮಾತ್ರ ಜೈಲು ಫಿಕ್ಸ್. 

ವಧುವಿನ ಹತ್ತಿರಹೋಗಿ ಫೋಟೋ ತೆಗೆದವನಿಗೆ ವರನಿಂದ ಗೂಸಾ!...

ಮದುವೆ ಮನೆಯಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಫೋಟೋಗ್ರಾಫರ್ ಉದ್ಧಟತನ| ‌ ವಧುವಿನ ತೀರಾ ಹತ್ತಿರಕ್ಕೆ ಹೋಗಿ ಫೋಟೊ ತೆಗೆಯುವ ಯತ್ನ| ಫೋಟೋಗ್ರಾಫರ್‌ಗೆ ವರನ ಗೂಸಾ

click me!