ನವದೆಹಲಿ (ಮೇ.2): ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾ ದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್ಸಿಪಿ ಸಂಸದ ಅಖರ್ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:31 PM (IST) May 02
08:51 PM (IST) May 02
ಕಾಮಿಕ್ ಕಾನ್ ಎಕ್ಸ್ಪೀರಿಯನ್ಸ್ ಮೆಕ್ಸಿಕೋ 2026 ಕಾರ್ಯಕ್ರಮದಲ್ಲಿ ಎಸ್.ಎಸ್. ಕಾರ್ತಿಕೇಯ ವಾರಣಾಸಿ ಬಗ್ಗೆ ಒಂದು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ 'ರಾಮಾಯಣ'ಕ್ಕೆ ಸಂಬಂಧಿಸಿದ ಸುಮಾರು 20 ನಿಮಿಷದ..
08:31 PM (IST) May 02
07:03 PM (IST) May 02
07:01 PM (IST) May 02
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದ್ಯ ಹರಿಯಾಣದಲ್ಲಿರುವ ತಮ್ಮ ಪಟೌಡಿ ಪ್ಯಾಲೇಸ್ನಲ್ಲಿ ಕುಟುಂಬದ ಜೊತೆ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ತಮ್ಮ ಹಾಲಿಡೇ ದಿನಗಳ ಒಂದೊಂದೇ ಝಲಕ್ ಅನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.
06:42 PM (IST) May 02
ಕುಟುಂಬದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಖುಷಿಯಾಗಿದ್ದ ದಿನವೇ ಘೋರ ದುರಂತವೊಂದು ನಡೆದಿದೆ. 8 ಮಕ್ಕಳ ತಾಯಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಅವರು ಒಬ್ಬರೇ ಹೋಗಿಲ್ಲ, ಬದಲಿಗೆ ತನ್ನ ಅಳಿಯನ ಜೊತೆ ಹೋಗಿರಬಹುದು ಎಂಬ ಅನುಮಾನ ಮೂಡಿದೆ.
06:19 PM (IST) May 02
ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮಗಳು ಸರಾಯಾ ಜೊತೆ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಕಿಯಾರಾ ತಮ್ಮ 'ಮಾಮ್ ಎರಾ'ದ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
06:01 PM (IST) May 02
ಮಧುರೈನಲ್ಲಿರುವ ಸೂಪರ್ಸ್ಟಾರ್ ರಜನಿಕಾಂತ್ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ರಜನಿಕಾಂತ್ ಅವರೇ ಒಬ್ಬ ಕಾರ್ಮಿಕರಾಗಿ ಜೀವನ ಆರಂಭಿಸಿದ್ದನ್ನು ಸ್ಮರಿಸಿ, ಅವರ 'ಬಾಷಾ' ಸಿನಿಮಾದ ಆಟೋ ಡ್ರೈವರ್ ಪಾತ್ರದ ಥೀಮ್ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
05:39 PM (IST) May 02
ಮದುವೆಯೊಂದರಲ್ಲಿ, ಹಾರ ಬದಲಾವಣೆ ಶಾಸ್ತ್ರದ ವೇಳೆ ವಧು ದಿಢೀರ್ ವೇದಿಕೆಯಿಂದ ಜಿಗಿದು ಓಡಿಹೋಗಿದ್ದಾಳೆ. ತನ್ನ ಪ್ರಿಯಕರನನ್ನು ಹುಡುಕಿ ಹೋದ ವಧುವಿನ ಈ ನಡೆಯಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
05:25 PM (IST) May 02
ನಟ ಸೂರ್ಯ ನಾಯಕರಾಗಿ ನಟಿಸುತ್ತಿರುವ 'ಕರುಪ್ಪು' ಚಿತ್ರತಂಡವು ನಟಿ ತ್ರಿಶಾ ಕೃಷ್ಣನ್ ಅವರ ಪಾತ್ರದ ಒಂದು ಝಲಕ್ ಹಂಚಿಕೊಂಡಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ತನ್ನ ಎಕ್ಸ್ ಖಾತೆಯಲ್ಲಿ ತ್ರಿಶಾ ಪಾತ್ರದ ವಿಡಿಯೋ ತುಣುಕನ್ನು ಶೇರ್ ಮಾಡಿದೆ.
05:05 PM (IST) May 02
ನಟ ಅಜಿತ್ ತಮ್ಮ 55ನೇ ಹುಟ್ಟುಹಬ್ಬದ ದಿನವಾದ ಮೇ 1ರಂದು ಫ್ಯಾನ್ಸ್ಗೆ ಒಂದು ಸ್ಪೆಷಲ್ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಬಹುನಿರೀಕ್ಷಿತ ರೇಸಿಂಗ್ ಡಾಕ್ಯುಮೆಂಟರಿ 'ಗ್ಲಾಡಿಯೇಟರ್ಸ್'ನ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ.
04:38 PM (IST) May 02
04:22 PM (IST) May 02
03:39 PM (IST) May 02
03:36 PM (IST) May 02
02:00 PM (IST) May 02
ಅಮೆರಿಕ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲದ ಕಾರಣ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಯುದ್ಧ ಪುನರಾರಂಭವಾಗುವ ಸಾಧ್ಯತೆಯಿದೆ ಎಂದು ಇರಾನ್ ಸಶಸ್ತ್ರ ಪಡೆಗಳು ಎಚ್ಚರಿಸಿವೆ. ಅಮೆರಿಕದ ಯಾವುದೇ ಮೂರ್ಖತನಕ್ಕೆ ತಕ್ಕ ಉತ್ತರ ನೀಡಲು ತಮ್ಮ ಸೇನೆ ಸಜ್ಜಾಗಿದೆ ಎಂದು ಹೇಳಿವೆ.
01:31 PM (IST) May 02
ಭಾರತದ ಪ್ರಥಮ 'ಮಲ್ಟಿ-ಲೇನ್ ಫ್ರೀ ಫ್ಲೋ' ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆಯು ಗುಜರಾತ್ನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಆರಂಭವಾಗಿದೆ. ಈ ನೂತನ ವ್ಯವಸ್ಥೆಯು ANPR ಮತ್ತು ಫಾಸ್ಟ್ಟ್ಯಾಗ್ ತಂತ್ರಜ್ಞಾನ ಬಳಸಿ, ವಾಹನಗಳು ನಿಲ್ಲದೆಯೇ ಟೋಲ್ ಸಂಗ್ರಹಿಸುತ್ತದೆ.
12:27 PM (IST) May 02
ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಿಡ್ನಾಪ್ ಪ್ರಕರಣವೆಂದು ಆರಂಭವಾದ ಕೇಸ್, ಇಬ್ಬರು ಸಹೋದರಿಯರು ತಮ್ಮ ಗಂಡಂದಿರನ್ನು ವಿನಿಮಯ ಮಾಡಿಕೊಳ್ಳಲು ಬಯಸುವುದರೊಂದಿಗೆ ಅಂತ್ಯಗೊಂಡಿದೆ. ಕೋರ್ಟ್ ಕೊಟ್ಟ ತೀರ್ಪೇನು?
12:20 PM (IST) May 02
"ಯಾವುದೇ ಮಹಿಳೆ ತನ್ನ ವಯಸ್ಸಿನ ಬಗ್ಗೆ ಕ್ಷಮೆಯಾಚಿಸುವ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ತಮ್ಮ ವಯಸ್ಸನ್ನು ಒಂದು ಗೌರವದ ಪದಕದಂತೆ (Badge of Honour) ಧರಿಸಬೇಕು ಮತ್ತು ತಮ್ಮ ಸಾಧನೆಯನ್ನು ಸಂಭ್ರಮಿಸಬೇಕು" ಎಂದಿದ್ದಾರೆ.
12:17 PM (IST) May 02
ಪಶ್ಚಿಮ ಬಂಗಾಳದಲ್ಲಿ ಮರುಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ವಾಗತಿಸಿದ್ದಾರೆ. ಇದು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹೀನಾಯ ಸೋಲನ್ನು ಖಚಿತಪಡಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
12:00 PM (IST) May 02
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಬಳಿ 2028ರ ಸಿಂಹಸ್ಥ ಕುಂಭಮೇಳದ ಸಿದ್ಧತೆಗಾಗಿ ನಡೆಯುತ್ತಿದ್ದ ಉತ್ಖನನ ಕಾರ್ಯದ ವೇಳೆ ಬೃಹತ್, ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಭಸ್ಮ ಆರತಿಯ ಪುಣ್ಯಕಾಲದಲ್ಲಿಯೇ ಈ ಶಿವಲಿಂಗ ದರ್ಶನ ನೀಡಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ.
11:26 AM (IST) May 02
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ, ಪಕ್ಷಪಾತದ ಆರೋಪ ಮಾಡಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
11:22 AM (IST) May 02
11:02 AM (IST) May 02
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 15 ಮತಗಟ್ಟೆಗಳಲ್ಲಿ ಚುನಾವಣಾ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮರುಮತದಾನಕ್ಕೆ ಆದೇಶಿಸಿದೆ. ಡೈಮಂಡ್ ಹಾರ್ಬರ್ ಮತ್ತು ಮಗ್ರಾಹತ್ ಪಶ್ಚಿಮ ಕ್ಷೇತ್ರಗಳಲ್ಲಿ ನಡೆದ ಈ ಘಟನೆಗೆ, ಇವಿಎಂ ಗುಂಡಿಗೆ ಟೇಪ್ ಹಾಕಿದಂತಹ ಆರೋಪಗಳು ಕಾರಣವಾಗಿವೆ.
10:06 AM (IST) May 02
08:41 AM (IST) May 02
08:07 AM (IST) May 02
ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 4-5 ರೂ. ಹಾಗೂ ಸಿಲಿಂಡರ್ ಬೆಲೆ 40-50 ರೂ. ಏರಿಕೆಯಾಗುವ ಸಾಧ್ಯತೆಯಿದೆ.
07:50 AM (IST) May 02
ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ. ಸಿಎಂಗೆ ಮದ್ಯಪಾನ ಪತ್ತೆ ಪರೀಕ್ಷೆ ನಡೆಸಬೇಕೆಂದು ಕಾಂಗ್ರೆಸ್ ಮತ್ತು ಅಕಾಲಿದಳ ಆಗ್ರಹಿಸಿದವು, ಆದರೆ ಸ್ಪೀಕರ್ ಬೇಡಿಕೆ ತಿರಸ್ಕರಿಸಿದ್ದರಿಂದ ವಿಪಕ್ಷಗಳು ಸಭಾತ್ಯಾಗ
07:33 AM (IST) May 02
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ₹990 ರಷ್ಟು ಹೆಚ್ಚಳವಾಗಿದ್ದು, ಇದು ಹೋಟೆಲ್ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ಬೆಲೆ ಏರಿಕೆಯ ಹೊರೆಯನ್ನು ಸರಿದೂಗಿಸಲು, ಹೋಟೆಲ್ಗಳು ಅನಿವಾರ್ಯವಾಗಿ ಕಾಫಿ, ಟೀ, ತಿಂಡಿ ಮತ್ತು ಊಟದ ದರವನ್ನು ಹೆಚ್ಚಿಸಲು ಮುಂದಾಗಿವೆ.
07:33 AM (IST) May 02
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದೆಂಬ ಚುನಾವಣೋತ್ತರ ಸಮೀಕ್ಷೆಗಳು ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಅಕ್ರಮ ವಲಸಿಗರನ್ನು ಹೊರಹಾಕಿದರೆ, ಬಾಂಗ್ಲಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಅಲ್ಲಿನ ಸಂಸದ ಅಖ್ತರ್ ಹೊಸೈನಿ ಕಳವಳ ವ್ಯಕ್ತಪಡಿಸಿದ್ದಾರೆ.