LIVE NOW
Published : Jul 31, 2026, 08:13 AM ISTUpdated : Jul 31, 2026, 12:34 PM IST

India News Live Updates: Gold Rates - ನಾಲ್ಕು ತಿಂಗಳಲ್ಲಿ ₹3,140 ಕುಸಿದ ಚಿನ್ನ, ಇಂದು ಮತ್ತೆ ಏರಿಕೆ! ಜುಲೈ 31ರ ದರ ಇಲ್ಲಿದೆ

ಸಾರಾಂಶ

ನವದೆಹಲಿ:ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್‌ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕವಾದ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಗೋಮೂತ್ರ ತಜ್ಞ’ ಎಂದು ಟೀಕಿಸಿದ್ದನ್ನು ಖಂಡಿಸಿ, 215 ಶಿಕ್ಷಣ ತಜ್ಞರು ಪ್ರಿಯಾಂಕಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಅನೇಕರು ಇದರಲ್ಲಿದ್ದಾರೆ.

‘ಕಾಮಕೋಟಿ ಅವರನ್ನು ನೀವು ಟೀಕಿಸಿದ್ದು ನಮಗೆ ನಿರಾಶೆ ತಂದಿದೆ. ಆ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಈ ಪತ್ರ ಬರೆಯುತ್ತಿದ್ದೇವೆ. ಪ್ರೊ। ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ. ಪ್ರತಿ ಶಿಕ್ಷಣ ತಜ್ಞರಂತೆ, ಅವರು ಸಹ ಊಹೆಗಳನ್ನು ಮಂಡಿಸಲು, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸಲು ಮತ್ತು ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರವನ್ನು ತಿಳಿದು ಅಳೆಯುವ ಬದಲು, ಅವರಿಗೆ ಒಂದು ಹಣೆಪಟ್ಟಿ ಕಟ್ಟುವುದು ಸಲ್ಲದು ಎಂದಿದ್ದಾರೆ.

ಈ ಹಿಂದೆ ಕಾಮಕೋಟಿ ಗೋಮೂತ್ರದ ಮಹತ್ವದ ಬಗ್ಗೆ ಹೇಳಿದ್ದರು. ಪ್ರಿಯಾಂಕಾ ಇದನ್ನೇ ಮುಂದಿಟ್ಟುಕೊಂಡು ಕಾಮಕೋಟಿ ಗೋಮೂತ್ರ ತಜ್ಞ ಎಂದು ಟೀಕಿಸಿದ್ದರು.

12:34 PM (IST) Jul 31

Gold Rates - ನಾಲ್ಕು ತಿಂಗಳಲ್ಲಿ ₹3,140 ಕುಸಿದ ಚಿನ್ನ, ಇಂದು ಮತ್ತೆ ಏರಿಕೆ! ಜುಲೈ 31ರ ದರ ಇಲ್ಲಿದೆ

ಕಳೆದ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ ₹3,140ರಷ್ಟು ಗಣನೀಯ ಇಳಿಕೆ ಕಂಡಿದೆ. ಆದರೆ, ಜುಲೈ 31ರ ಶುಕ್ರವಾರದಂದು ಹಳದಿ ಲೋಹದ ದರದಲ್ಲಿ ₹25ರಷ್ಟು ಅಲ್ಪ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
Read Full Story

11:51 AM (IST) Jul 31

ಪೆಲೆಟ್ ಗನ್‌ಗಳ ಸಂಪೂರ್ಣ ನಿಷೇಧ ಅಸಾಧ್ಯ; ನಿಯಮಗಳನ್ನು ಪ್ರಶ್ನಿಸದೆ ತಡೆ ಅಸಾಧ್ಯ ಎಂದ ಸುಪ್ರೀಂ ನ್ಯಾಯಪೀಠ!

ಪೆಲೆಟ್ ಗನ್‌ಗಳ ಸಂಪೂರ್ಣ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತೀವ್ರ ಪರಿಸ್ಥಿತಿಯಲ್ಲಿ ಗುಂಡು ಹಾರಿಸಲು ಕಾನೂನಿನಲ್ಲಿ ಅವಕಾಶವಿರುವಾಗ ಪೆಲೆಟ್ ಗನ್‌ಗಳನ್ನು ಮಾತ್ರ ಹೇಗೆ ನಿಷೇಧಿಸಲು ಸಾಧ್ಯ ಎಂದು ಪ್ರಶ್ನಿಸಿದೆ. ಅಲ್ಲದೆ, ದಾಳಿಗೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Read Full Story

11:20 AM (IST) Jul 31

ನೀಟ್ ಹೋರಾಟದ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಶಾಕ್, ಬಿಜೆಪಿಗೆ ರಾಜೀನಾಮೆ ನೀಡಿದ ವಕ್ತಾರ ಶೆಹಜಾದ್

ಪ್ರಖರ ಮಾತುಗಳಿಂದಲೇ ಎದುರಾಳಿಗಳನ್ನು ಮಣಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಬಿಜೆಪಿಯಿಂದ ಹೊರಬಂದಿದ್ದಾರೆ. ಸೋಶಿಯಲ್ ಮೀಡಿಯಾ, ಸುದ್ದಿಗೋಷ್ಠಿ, ಸುದ್ದಿ ವಾಹನಿಗಳ ಚರ್ಚೆಯಲ್ಲಿ ಪೂನಾವಾಲ ಹಲವರ ಬೆವರಿಳಿಸಿದ್ದಾರೆ. ದಿಢೀರ್ ರಾಜೀನಾಮೆ ಇದೀಗ ಕೋಲಾಹಲ ಸೃಷ್ಟಿಸಿದೆ.

Read Full Story

10:59 AM (IST) Jul 31

ಆಷಾಢ ಮಾಸದಲ್ಲಿ ಚಿನ್ನ, ಬೆಳ್ಳಿ ಖರೀದಿ ಒಳ್ಳೆಯದಾ? ಶೂನ್ಯ ಮಾಸದಲ್ಲಿ ಇದು ಲಾಭವೋ ನಷ್ಟವೋ?

ಆಷಾಢ ಮಾಸವನ್ನು 'ಶೂನ್ಯ ಮಾಸ' ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ, ಮುಂಜಿ ಮುಂತಾದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾದರೆ ಈ ಆಷಾಢ ಅಥವಾ ಶೂನ್ಯ ಮಾಸದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದೇ? ಇದರಿಂದ ಲಾಭವಾಗುತ್ತದೆಯೇ ಅಥವಾ ನಷ್ಟವೇ ಎಂಬ ಗೊಂದಲ ಹಲವರಲ್ಲಿದೆ. ಇದರ ಧಾರ್ಮಿಕ ಮತ್ತು ಆರ್ಥಿಕ ಹಿನ್ನೆಲೆ ಹಾಗೂ ಇಂದಿನ ಚಿನ್ನದ ದರದ ವಿವರ ಇಲ್ಲಿದೆ.

Read Full Story

10:42 AM (IST) Jul 31

Quantum Energy Plasma - ಒಂದೇ ಚಾರ್ಜ್‌ಗೆ 120 ಕಿ.ಮೀ. ಮೈಲೇಜ್! ಎಲೆಕ್ಟ್ರಿಕ್ ಸ್ಕೂಟಿ ಅಂದ್ರೆ ಇದು ನೋಡಿ!

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಕ್ವಾಂಟಮ್ ಎನರ್ಜಿ ಕಂಪನಿಯು ತನ್ನ ಹೊಸ 'ಪ್ಲಾಸ್ಮಾ' ಇ-ಸ್ಕೂಟರ್ ಅನ್ನು ಪರಿಚಯಿಸಿದೆ. ₹1.25 ಲಕ್ಷ ಎಕ್ಸ್-ಶೋರೂಂ ಬೆಲೆಯ ಈ ಸ್ಕೂಟರ್, ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಯಾಕೆ ಈ ಬೈಕ್ ಖರೀದಿಸಬೇಕು ಎಂದರೆ..

Read Full Story

09:56 AM (IST) Jul 31

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗುಡ್‌ಬೈ ಹೇಳಿದ ಕಿವೀಸ್ ಮಾಜಿ ಕ್ಯಾಪ್ಟನ್ ಈಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಹೊಸ ಬಾಸ್!

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರನ್ನು ಹೊಸ ಕೋಚ್ ಆಗಿ ನೇಮಿಸಲಾಗಿದೆ. ಅವರು ಬ್ರೆಂಡನ್ ಮೆಕಲಮ್ ಅವರ ಸ್ಥಾನವನ್ನು ತುಂಬಲಿದ್ದು, ಬೆನ್ ಸ್ಟೋಕ್ಸ್ ಬದಲಿಗೆ ಜೋ ರೂಟ್ ಅವರನ್ನು ಮತ್ತೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Read Full Story

09:39 AM (IST) Jul 31

ಪವಾಡ ಅಂದ್ರೆ ಇದು! ಸತ್ತಿದ್ದಾಳೆಂದು ಆಸ್ಪತ್ರೆಯಿಂದ ಮನೆಗೆ ತರುವಾಗ ರಸ್ತೆ ಮಧ್ಯೆ ಎದ್ದುಕೂತ ಮಹಿಳೆ..!

ಸಾಮಾನ್ಯವಾಗಿ ರಸ್ತೆಗಳಲ್ಲಿರುವ ಗುಂಡಿಗಳು ಅಪಘಾತಗಳಿಗೆ ಕಾರಣವಾಗಿ ಜನರ ಪ್ರಾಣವನ್ನು ಬಲಿಪಡೆಯುತ್ತವೆ. ಆದರೆ, ಇಲ್ಲೊಂದು ಅಪರೂಪದ ಘಟನೆ ನಡೆದಿದ್ದು ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದು ಸಾವಿನ ಮನೆಯತ್ತ ಸಾಗುತ್ತಿದ್ದ ಮಹಿಳೆಗೆ ಮರುಜೀವ ನೀಡಿದೆ! ಈ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.

Read Full Story

08:33 AM (IST) Jul 31

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೆ ಒಂದು ಚಿನ್ನ, ಎರಡು ಬೆಳ್ಳಿ!

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪ್ಯಾರಾ ಅಥ್ಲೆಟಿಕ್ಸ್‌ನ 100 ಮೀ. ಓಟದಲ್ಲಿ ದಿಲೀಪ್‌ ಗಾವಿತ್‌ ಚಿನ್ನ ಮತ್ತು ಮೊಹಮ್ಮದ್‌ ಬಾಸಿಲ್‌ ಬೆಳ್ಳಿ ಗೆದ್ದರೆ, ಲಾಂಗ್‌ಜಂಪ್‌ನಲ್ಲಿ ಮುರಳಿ ಶ್ರೀಶಂಕರ್‌ ಬೆಳ್ಳಿ ಪದಕ ಗೆದ್ದು ದೇಶದ ಪದಕಗಳ ಸಂಖ್ಯೆಯನ್ನು 15ಕ್ಕೆ ಏರಿಸಿದ್ದಾರೆ.
Read Full Story

More Trending News