Published : Jul 31, 2026, 08:13 AM ISTUpdated : Jul 31, 2026, 11:53 PM IST

India News Live Updates: ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!

ಸಾರಾಂಶ

ನವದೆಹಲಿ:ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್‌ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕವಾದ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಗೋಮೂತ್ರ ತಜ್ಞ’ ಎಂದು ಟೀಕಿಸಿದ್ದನ್ನು ಖಂಡಿಸಿ, 215 ಶಿಕ್ಷಣ ತಜ್ಞರು ಪ್ರಿಯಾಂಕಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಅನೇಕರು ಇದರಲ್ಲಿದ್ದಾರೆ.

‘ಕಾಮಕೋಟಿ ಅವರನ್ನು ನೀವು ಟೀಕಿಸಿದ್ದು ನಮಗೆ ನಿರಾಶೆ ತಂದಿದೆ. ಆ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಈ ಪತ್ರ ಬರೆಯುತ್ತಿದ್ದೇವೆ. ಪ್ರೊ। ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ. ಪ್ರತಿ ಶಿಕ್ಷಣ ತಜ್ಞರಂತೆ, ಅವರು ಸಹ ಊಹೆಗಳನ್ನು ಮಂಡಿಸಲು, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸಲು ಮತ್ತು ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರವನ್ನು ತಿಳಿದು ಅಳೆಯುವ ಬದಲು, ಅವರಿಗೆ ಒಂದು ಹಣೆಪಟ್ಟಿ ಕಟ್ಟುವುದು ಸಲ್ಲದು ಎಂದಿದ್ದಾರೆ.

ಈ ಹಿಂದೆ ಕಾಮಕೋಟಿ ಗೋಮೂತ್ರದ ಮಹತ್ವದ ಬಗ್ಗೆ ಹೇಳಿದ್ದರು. ಪ್ರಿಯಾಂಕಾ ಇದನ್ನೇ ಮುಂದಿಟ್ಟುಕೊಂಡು ಕಾಮಕೋಟಿ ಗೋಮೂತ್ರ ತಜ್ಞ ಎಂದು ಟೀಕಿಸಿದ್ದರು.

11:53 PM (IST) Jul 31

ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!

ನೀಟ್‌ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಹಾಗೂ ತಾಯಿಯ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಯುವತಿಯ ವಿರುದ್ಧ ಪ್ರಧಾನಿ ಮೋದಿ ಉದಾರತೆ ತೋರಿದ್ದಾರೆ. ಶಿಕ್ಷೆಯ ಬದಲು ದಾರಿ ತಪ್ಪಿದ ಯುವಕರಿಗೆ ಸನ್ಮಾರ್ಗ ತೋರಬೇಕು ಎಂದು ಹೇಳಿದ್ದಾರೆ.

Read Full Story

11:33 PM (IST) Jul 31

'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸೋದೆ ನನ್ನ ಕನಸು - ಕಾರಣ ಬಿಚ್ಚಿಟ್ಟ ಬಾಲಿವುಡ್ ನಟಿ

ಬಾಲಿವುಡ್ ನಟಿ ಕೃತಿ ಸನೋನ್, ಟಾಲಿವುಡ್‌ನ ಸ್ಟಾರ್ ನಟರೊಬ್ಬರ ಜೊತೆ ನಟಿಸುವುದು ತಮ್ಮ ಕನಸು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ಆ ಕುತೂಹಲಕಾರಿ ವಿವರಗಳು ಇಲ್ಲಿವೆ.

Read Full Story

10:53 PM (IST) Jul 31

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಳಕೆಯಾದ 2 ಸಾವಿರಕ್ಕೂ ಅಧಿಕ ಕಾಂಡೋಮ್‌ಗಳು

ಚೆಂಗನ್ನೂರಿನ ರಸ್ತೆಯೊಂದರಲ್ಲಿ ಸುಮಾರು 2000 ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿವೆ. ಈ ಘಟನೆಯ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

Read Full Story

10:47 PM (IST) Jul 31

ಗ್ಲೋಬಲ್ ಸ್ಟಾರ್‌ ರಾಮ್ ಚರಣ್‌ಗೆ ಶುರುವಾಯ್ತಾ ಕಷ್ಟಕಾಲ? ಗಾಯ, ಫ್ಲಾಪ್‌, ಸರ್ಜರಿ... ಏನಿದು ಕಥೆ?

ನಟ ರಾಮ್ ಚರಣ್‌ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯಿಂದ ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ. ಮೆಗಾ ಪವರ್ ಸ್ಟಾರ್‌ಗೆ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ರಾಮ್ ಚರಣ್‌ಗೆ ನಿಜಕ್ಕೂ ಕೆಟ್ಟ ಸಮಯ ನಡೆಯುತ್ತಿದೆಯೇ?

Read Full Story

10:02 PM (IST) Jul 31

4 ಸ್ಯಾಟಲೈಟ್‌ ಇಲ್ಲದೆ ಇಂಡಿಯನ್‌ ಜಿಪಿಎಸ್‌ 'ನಾವಿಕ್‌'ಗೆ ಗ್ರಹಣ, ಕೊನೆಗೂ ಸತ್ಯ ಒಪ್ಪಿಕೊಂಡ ಕೇಂದ್ರ ಸರ್ಕಾರ

ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಅಗತ್ಯವಿರುವ ನಾಲ್ಕು ಉಪಗ್ರಹಗಳ ಬದಲು ಕೇವಲ ಮೂರು ಮಾತ್ರವೇ ನ್ಯಾವಿಗೇಷನ್ ಸೇವೆ ನೀಡುತ್ತಿದೆ.

Read Full Story

09:32 PM (IST) Jul 31

ಮದುವೆ ಬಳಿಕ ಕಿಯಾರಾ ಅಡ್ವಾಣಿ ಇಷ್ಟೊಂದು 'ಬೋಲ್ಡ್-ಗ್ಲಾಮರಸ್' ಪಾತ್ರ ಮಾಡಿರೋ ಹಿಂದೆ 'ದೊಡ್ಡ ರಹಸ್ಯ' ಇದೆ!

ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳನ್ನು ನೋಡಿದಾಗ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಅತ್ಯಂತ ಗ್ಲಾಮರಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯ ನಂತರ ಇಷ್ಟೊಂದು ಬೋಲ್ಡ್ ಪಾತ್ರಕ್ಕೆ ಸೈ ಎಂದಿದ್ದು ಯಾಕೆ? ಗುಟ್ಟು ರಟ್ಟಾಗಿದೆ ನೋಡಿ..

Read Full Story

09:21 PM (IST) Jul 31

ಮಕ್ಕಳ ಶಿಕ್ಷಣದ ಚಿಂತೆಗೆ ಇಲ್ಲಿದೆ ಮುಕ್ತಿ - ಮಧ್ಯಮ ವರ್ಗದವರಿಗಾಗಿ ಎಲ್‌ಐಸಿಯ 3 ಭರ್ಜರಿ ಪಾಲಿಸಿಗಳು!

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಎಲ್‌ಐಸಿಯು ಹಲವು ಯೋಜನೆಗಳನ್ನು ಹೊಂದಿದೆ. ಈ ಲೇಖನದಲ್ಲಿ, ಮಧ್ಯಮ ವರ್ಗದವರಿಗೆ ಸೂಕ್ತವಾದ ಎಲ್‌ಐಸಿ ಅಮೃತಬಾಲ್, ಚಿಲ್ಡ್ರನ್ಸ್ ಮನಿ ಬ್ಯಾಕ್ ಮತ್ತು ಜೀವನ್ ತರುಣ್ ಎಂಬ ಮೂರು ಅತ್ಯುತ್ತಮ ಯೋಜನೆಗಳ ವಿವರ ನೀಡಲಾಗಿದೆ.

Read Full Story

08:57 PM (IST) Jul 31

ಕೇವಲ ₹10ಕ್ಕೆ ಹೊಟ್ಟೆತುಂಬ ಊಟ - ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ಕಂಪನಿ ವೀಡಿಯೋ ವೈರಲ್!

ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮ್ಮ ಕಂಪನಿ ಕೇವಲ ₹10ಕ್ಕೆ ನೀಡುವ ಭರ್ಜರಿ ಊಟದ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಅನ್ನ, ಸಾರು, ಪಲ್ಯಗಳನ್ನೊಳಗೊಂಡ ಈ ಊಟಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಕೆಲವರು ಪ್ಲಾಸ್ಟಿಕ್ ಪ್ಯಾಕಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Read Full Story

08:37 PM (IST) Jul 31

ಭಾರೀ ಅನಾಹುತ, ನಟಿ ರಶ್ಮಿಕಾ ಮಂದಣ್ಣಗೆ ಬಲವಾದ ಏಟು; ಇನ್ನೆಷ್ಟು ದಿನ ಮನೆಯಲ್ಲೇ ಇರ್ಬೇಕು ಗೊತ್ತಾ?

ಅಯ್ಯಯ್ಯೋ..  ರಶ್ಮಿಕಾ ಅವರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಗೆಟ್ ವೆಲ್ ಸೂನ್ ರಶ್ಮಿ" (Get Well Soon Rashmika) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. "ನಮ್ಮ ಶ್ರೀವಲ್ಲಿ ಬೇಗ ಗುಣಮುಖರಾಗಿ ಬರಲಿ' ಎಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Read Full Story

08:35 PM (IST) Jul 31

ಮುಂದಿನ ಐದು ವರ್ಷ ರೈತರಿಗೆ ನಿಶ್ಚಿಂತೆ, ಅನ್ನದಾತರಿಗೆ ಬಿಗ್‌ಗಿಫ್ಟ್‌ ಘೋಷಣೆ ಮಾಡಿದ ಪ್ರಧಾನಿ ಮೋದಿ!

ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.

Read Full Story

07:07 PM (IST) Jul 31

2 ತಲೆ, 4 ಕಣ್ಣಿನ ಹಲ್ಲಿ; ಮನುಷ್ಯರ ಉಗುರಿಗಿಂತಲೂ ಚಿಕ್ಕದು, 10 ವರ್ಷ ಬದುಕುತ್ತಾ?

ಅಮೆರಿಕಾದಲ್ಲಿ ಎರಡು ತಲೆ ಮತ್ತು ನಾಲ್ಕು ಕಣ್ಣುಗಳಿರುವ ವಿಚಿತ್ರ ಹಲ್ಲಿಯೊಂದು ಜನಿಸಿದೆ. ಮನುಷ್ಯರ ಉಗುರಿಗಿಂತಲೂ ಚಿಕ್ಕದಾಗಿರುವ ಈ ಜೀವಿ, ಜನಿಸಿ ನಾಲ್ಕು ವಾರಗಳಾದರೂ ಜೀವಂತವಾಗಿದ್ದು, ಈ ಪವಾಡ ಜಗತ್ತಿನ ಗಮನ ಸೆಳೆದಿದೆ.
Read Full Story

07:04 PM (IST) Jul 31

ರೈಲಲ್ಲಿ ಕಡ್ಲೆಪುರಿ ಮಾರುವ 20 ವರ್ಷ ಚಿಕ್ಕವನ ಜೊತೆ 3 ಮಕ್ಕಳ ಅಮ್ಮನಿಗೆ ಲವ್ - ಇಬ್ಬರ ಮದ್ವೆ ಮಾಡಿಸಿದ ಪತಿ

ಉತ್ತರ ಪ್ರದೇಶದ ಚಂದೌಲಿಯಲ್ಲಿ, ಮೂರು ಮಕ್ಕಳ ತಾಯಿಯೊಬ್ಬಳು ಕಿರಿಯ ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಾಲ್ಕು ತಿಂಗಳ ನಂತರ ಪತಿ ಅವರನ್ನು ಪತ್ತೆಹಚ್ಚಿದಾಗ, ಆಕೆ ಮನೆಗೆ ಮರಳಲು ನಿರಾಕರಿಸಿದಳು. ಅಂತಿಮವಾಗಿ, ಪತಿಯೇ ಸಕಲ್ದಿಹಾ ತಹಸಿಲ್‌ನಲ್ಲಿ ಅವಳ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ನಡೆದಿದೆ.
Read Full Story

06:49 PM (IST) Jul 31

ಹೆಂಡ್ತಿಗೆ ಕೊನೆಗೂ ಅಧಿಕೃತವಾಗಿ ವಿಚ್ಚೇದನ ನೀಡಿದ ಮುಖ್ಯಮಂತ್ರಿ, ಪತ್ನಿಗೆ ಸಿಗೋ ಪರಿಹಾರವೆಷ್ಟು? ಕೋರ್ಟ್‌ ಹೇಳಿದ್ದೇನು

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮತ್ತು ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. 17 ವರ್ಷಗಳಿಂದ ಪ್ರತ್ಯೇಕವಾಗಿಯೇ ಈ ಜೋಡಿ ವಾಸ ಮಾಡುತ್ತಿತ್ತು.

Read Full Story

06:47 PM (IST) Jul 31

'ಟಾಕ್ಸಿಕ್'ನ 'ನಾಡಿಯಾ' ಪಾತ್ರವೇ ಪ್ರತಿಯೊಬ್ಬ ನಟಿಯ ಕನಸು - ಯಶ್ ಸಿನಿಮಾದ ಬಗ್ಗೆ ಕಿಯಾರಾ ಹೇಳಿದ್ದೇನು?

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು (ಜುಲೈ 31) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಮತ್ತೊಮ್ಮೆ ಸುದ್ದಿಯಲ್ಲಿದೆ.

Read Full Story

06:32 PM (IST) Jul 31

ಗೋವಾದ ರಹಸ್ಯ ಸ್ವರ್ಗ - ಒಂದು ರಾತ್ರಿಗೆ ₹21 ಲಕ್ಷ , ಈ ಅಲ್ಟ್ರಾ-ಲಕ್ಸುರಿ ವಿಲ್ಲಾದ ಒಡತಿ ಯಾರು ಗೊತ್ತಾ?

ಗೋವಾದಲ್ಲಿರುವ 'ಪಲಾಸಿಯೊ ಅಗುವಾಡಾ' ಎಂಬುದು ₹830 ಕೋಟಿ ಮೌಲ್ಯದ, ಆಹ್ವಾನಿತರಿಗೆ ಮಾತ್ರ ಸೀಮಿತವಾದ ಐಷಾರಾಮಿ ವಿಲ್ಲಾ. ಜಿವಿಕೆ ಗ್ರೂಪ್‌ನ ಸಂಜಯ್ ರೆಡ್ಡಿ ಮತ್ತು ಪಿಂಕಿ ರೆಡ್ಡಿ ಮಾಲೀಕತ್ವದ ಈ ಎಸ್ಟೇಟ್‌ನಲ್ಲಿ ಒಂದು ರಾತ್ರಿ ತಂಗಲು ಕನಿಷ್ಠ ₹21 ಲಕ್ಷ ವೆಚ್ಚವಾಗುತ್ತದೆ.
Read Full Story

06:30 PM (IST) Jul 31

'ಟಾಕ್ಸಿಕ್'ನಿಂದ ಕಿಯಾರಾ ಹೊಸ ಪೋಸ್ಟರ್ ರಿಲೀಸ್ - ಹುಟ್ಟುಹಬ್ಬದಂದು ರಾಜಸ ಲುಕ್‌ನಲ್ಲಿ 'ನಾಡಿಯಾ'

ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್ ಹೊರಬರುತ್ತಿದ್ದು, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

Read Full Story

06:05 PM (IST) Jul 31

ಹೊಸ ಬಜಾಜ್‌ ಪಲ್ಸರ್‌ ಲಾಂಚ್‌ ಡೇಟ್‌ ಫೈನಲ್‌, ಆಗಸ್ಟ್‌ 12ರಂದು ಬಿಡುಗಡೆ ಆಗಲಿರುವ ಮಾಡೆಲ್‌ ಯಾವುದು?

ಬಜಾಜ್ ಆಟೋ ಸಂಸ್ಥೆಯು ಆಗಸ್ಟ್ 12 ರಂದು ತನ್ನ ಜನಪ್ರಿಯ ಪಲ್ಸರ್ ಸರಣಿಯ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಪಲ್ಸರ್ N160, ಹೊಸ ಪೀಳಿಗೆಯ ಪಲ್ಸರ್ 125 ಅಥವಾ 150 ಆಗಿರಬಹುದೆಂದು ನಿರೀಕ್ಷಿಸಲಾಗಿದೆ.

Read Full Story

06:05 PM (IST) Jul 31

ಕೊಹ್ಲಿ, ಸಚಿನ್‌, ಧೋನಿ ಬಳಿ ಇದು ಆಗಲಿಲ್ಲ.. ಅಪರೂಪದ ದಾಖಲೆಗೆ KL ರಾಹುಲ್‌ ರೆಡಿ..!

ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ತಲುಪಲು ಸಜ್ಜಾಗಿದ್ದು, ಅವರಿಗೆ ಇನ್ನು ಕೇವಲ 170 ರನ್‌ಗಳ ಅವಶ್ಯಕತೆಯಿದೆ. ಮುಂಬರುವ ಶ್ರೀಲಂಕಾ ಸರಣಿಯಲ್ಲಿ ಈ ಸಾಧನೆ ಮಾಡಿದರೆ, ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಎಸೆತವನ್ನು ಬೌಲಿಂಗ್ ಮಾಡದೆ 10,000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಲಿದ್ದಾರೆ.
Read Full Story

05:01 PM (IST) Jul 31

ನಟಿ ಸೋನಿಯಾ 3 ತಿಂಗಳ ಮಗಳ ಗಿನ್ನೆಸ್​ ದಾಖಲೆ - ಅಂಗೈ ಮೇಲೆ ನಿಂತು ದಾಖಲೆ ಪುಟ ಸೇರಿದ ಪುಟಾಣಿ

ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಿಯಾ ಅಕುಲ್ ಅವರ 3 ತಿಂಗಳ ಮಗಳು ಶಿಖಾ ವೀರಗೋಣಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ. ತನ್ನ ತಂದೆಯ ಅಂಗೈ ಮೇಲೆ 2 ನಿಮಿಷ 43 ಸೆಕೆಂಡುಗಳ ಕಾಲ ಸಮತೋಲನ ಸಾಧಿಸುವ ಮೂಲಕ ಈ ಪುಟಾಣಿ ವಿಶ್ವದಾಖಲೆಗೆ ಪಾತ್ರಳಾಗಿದ್ದಾಳೆ.

Read Full Story

04:36 PM (IST) Jul 31

ನುವಾಮಾ ವೆಲ್ತ್ ಇತಿಹಾಸದಲ್ಲೇ ಬಂಪರ್ ದಾಖಲೆ - ₹306 ಕೋಟಿ ನಿವ್ವಳ ಲಾಭ, ₹5 ಲಕ್ಷ ಕೋಟಿಯ ಗಡಿ ದಾಟಿದ ಗ್ರಾಹಕರ ಆಸ್ತಿ!

ನುವಾಮಾ ವೆಲ್ತ್ ಮ್ಯಾನೇಜ್ಮೆಂಟ್ 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹306 ಕೋಟಿಗಳ ಐತಿಹಾಸಿಕ ಲಾಭ ಗಳಿಸಿದೆ. ಇದೇ ವೇಳೆ, ಕಂಪನಿ ನಿರ್ವಹಿಸುತ್ತಿರುವ ಗ್ರಾಹಕರ ಆಸ್ತಿ ಮೌಲ್ಯ ₹5 ಲಕ್ಷ ಕೋಟಿ ದಾಟಿದ್ದು, ಮ್ಯೂಚುವಲ್ ಫಂಡ್ ವ್ಯವಹಾರ ಆರಂಭಿಸಲು ಸೆಬಿಯಿಂದ ಅಂತಿಮ ಅನುಮೋದನೆ ಪಡೆದಿದೆ.
Read Full Story

04:18 PM (IST) Jul 31

ಸಿಎಸ್‌ಕೆ ಫಾರ್ಮುಲಾ ಇಲ್ಲಿ ನಡೆಯಲ್ಲ! ಧೋನಿ ಹೆಸರೆತ್ತಿ ಸ್ಟೀಫನ್ ಫ್ಲೆಮಿಂಗ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾಜಿ ಕ್ಯಾಪ್ಟನ್

ನ್ಯೂಜಿಲೆಂಡ್‌ನ ಸ್ಟಿಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಹೆಡ್‌ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ಮೈಕಲ್ ವಾನ್, ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಸಿಕ್ಕಂತೆ ಇಂಗ್ಲೆಂಡ್‌ನಲ್ಲಿ ಎಂಎಸ್ ಧೋನಿಯಂತಹ ನಾಯಕ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
Read Full Story

04:11 PM (IST) Jul 31

ಕಡಿಮೆ ಬೆಲೆ ಜೊತೆ ಬೆಂಕಿ ಫೀಚರ್ಸ್ ಜೊತೆ OnePlus N6x ಬಿಡುಗಡೆ; ಆರಂಭದಲ್ಲಿಯೇ ಡಿಸ್ಕೌಂಟ್

ಒನ್‌ಪ್ಲಸ್‌ ತನ್ನ ಹೊಸ ಬಜೆಟ್ ಸ್ಮಾರ್ಟ್‌ಫೋನ್ OnePlus N6x ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ 7,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಮತ್ತು ಮೀಡಿಯಾಟೆಕ್ ಡೈಮೆನ್ಸಿಟಿ 6360 ಪ್ರೊಸೆಸರ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ, ಲಭ್ಯತೆ ಮತ್ತು ಆಫರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

03:59 PM (IST) Jul 31

ಬೈಕ್ ಪ್ರಿಯರಿಗೆ ಹಬ್ಬದ ಬಂಪರ್ ಗಿಫ್ಟ್ - 'ಅನ್‌ಟೇಮ್ಡ್ ಟ್ರಿನಿಟಿ' ಸರಣಿಯ 3 ಹೊಸ ಬೈಕ್ ಬಿಡುಗಡೆ ಮಾಡಿದ ಜಾವಾ ಯೆಜ್ಡಿ!

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ 2026ರ ಆವೃತ್ತಿಯ 'ಅನ್‌ಟೇಮ್ಡ್ ಟ್ರಿನಿಟಿ' ಸರಣಿಯಡಿ ಮೂರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಯೆಲ್ಲೋ ಫಾಲ್ಕನ್ ಅಡ್ವೆಂಚರ್, ಗ್ರೀನ್ ಮಾಂಬಾ ರೋಡ್‌ಸ್ಟರ್ ಮತ್ತು ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್ ಎಂಬ ಈ ಬೈಕ್‌ಗಳು ಆಕರ್ಷಕ ವಿನ್ಯಾಸ, ಹೊಸ ಬಣ್ಣಗಳು ಮತ್ತು ಸುಧಾರಿತ ಎಂಜಿನ್ ತಂತ್ರಜ್ಞಾನವನ್ನು ಹೊಂದಿವೆ. ಈ ಹೊಸ ಸರಣಿಯ ರಾಷ್ಟ್ರವ್ಯಾಪಿ ಬಿಡುಗಡೆಗೆ ಕೇರಳದಿಂದ ಚಾಲನೆ ನೀಡಲಾಗಿದೆ.
Read Full Story

03:54 PM (IST) Jul 31

ಟಿವಿಎಸ್‌ ಮೋಟಾರ್ಸ್‌ನಿಂದ ಸ್ಕೂಟರ್‌ ದರ ಪರಿಷ್ಕರಣೆ - ಜುಪಿಟರ್‌, ರೈಡರ್‌ ಬೆಲೆ ಏರಿಕೆ, ಈ ಒಂದು ಬ್ರ್ಯಾಂಡ್‌ ಸ್ಕೂಟರ್‌ ಬೆಲೆ ಇಳಿಕೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜುಪಿಟರ್, ಐಕ್ಯೂಬ್, ಆರ್ಬಿಟರ್ ಮತ್ತು ರೈಡರ್ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ, ತನ್ನ ಜನಪ್ರಿಯ ಸ್ಪೋರ್ಟಿ ಸ್ಕೂಟರ್ ಎನ್‌ಟಾರ್ಕ್ 125 ರ ದರವನ್ನು ಕಡಿತಗೊಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
Read Full Story

03:45 PM (IST) Jul 31

ಗೂಗಲ್​ ನೋಡಿ 'ಮಿಸ್ ಟೀನ್ ಯೂನಿವರ್ಸ್ ಇಂಡಿಯಾ' ಕಿರೀಟ ಗೆದ್ದ 17ರ ಬಾಲೆ - ಸುಂದರ ಫೋಟೋಗಳು ಇಲ್ಲಿವೆ

ಒಡಿಶಾದ 17 ವರ್ಷದ ಪ್ರಸುಚಿ ಪಾಂಡಾ ಅವರು 'ಮಿಸ್ ಟೀನ್ ಯೂನಿವರ್ಸ್ ಇಂಡಿಯಾ 2026' ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಅವರ ಈ ಸಾಧನೆಯು ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ.
Read Full Story

03:02 PM (IST) Jul 31

US Education - ಅಮೆರಿಕದಲ್ಲಿ ಓದಿ ಅಲ್ಲೇ ಕೆಲಸ ಮಾಡಬೇಕಾ? ₹95 ಲಕ್ಷ ಶುಲ್ಕ ಕಟ್ಟಲು ಸಿದ್ಧರಾಗಿ! ಟ್ರಂಪ್ ಹೊಸ ಪ್ಲಾನ್!

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ನಂತರ ಅಲ್ಲೇ ಉದ್ಯೋಗ ಮಾಡಬೇಕೆನ್ನುವುದು ಕನಸು ಹೊತ್ತು ಹಲವು ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಶಾಕ್ ನೀಡುವ  ಸಾಧ್ಯತೆಯಿದೆ. ವರದಿಗಳ ಪ್ರಕಾರ, ಇಂತಹ ವಿದ್ಯಾರ್ಥಿಗಳಿಂದ  95 ಲಕ್ಷ ರೂ.ಶುಲ್ಕ ವಸೂಲಿ ಮಾಡುವ ಪ್ರಸ್ತಾಪವೊಂದು ಚರ್ಚೆಯಲ್ಲಿದೆ.

Read Full Story

02:54 PM (IST) Jul 31

ಕರಾಚಿ ಲ್ಯಾರಿ ಮೇಲೆ ಧುರಂಧರ್ ಆಪರೇಶನ್, ಅಸಲಿ ಉಝೈರ್ ಬಲೂಚ್ ತಮ್ಮನ ಮೇಲೆ ಗುಂಡಿನ ದಾಳಿ

ಧುರಂಧರ್ ಸಿನಿಮಾದಲ್ಲಿ ಉಝೈರ್ ಬಲೂಚ್ ಪಾತ್ರದ ಬಗ್ಗೆ ಬಹುತೇಕರು ನೋಡಿದ್ದೀರಿ. ಇದೀಗ ರಿಯಲ್ ಉಝೈರ್ ಬಲೂಚ್ ಸಹೋದರನ ಮೇಲೆ ಅಪರಿಚಿತನ ಗುಂಡಿನ ದಾಳಿಯಾಗಿದೆ. ಸದ್ಯ ಜುಬೈರ್ ಬಲೂಚ್ ಆರೋಗ್ಯ ಗಂಭೀರವಾಗಿದೆ.

Read Full Story

02:51 PM (IST) Jul 31

ಅವನಿಗ್ಯಾಕೆ ಉಪನಾಯಕ ಪಟ್ಟ? 15 ವರ್ಷದ ವೈಭವ್ ಸೂರ್ಯವಂಶಿ ಮೇಲೆ ಕಿಡಿಕಾರಿದ ಹರ್ಷಾ ಬೋಗ್ಲೆ!

ದುಲೀಪ್ ಟ್ರೋಫಿಗೆ ಈಸ್ಟ್ ಝೋನ್ ತಂಡದ ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಕಡಿಮೆ ಅನುಭವವಿರುವ ಯುವಕನಿಗೆ ಈ ಜವಾಬ್ದಾರಿ ನೀಡಿದ್ದನ್ನು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಪ್ರಶ್ನಿಸಿದ್ದಾರೆ. ಈ ತಂಡಕ್ಕೆ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಅವರ ಸೇರ್ಪಡೆಯು ಬೌಲಿಂಗ್ ವಿಭಾಗಕ್ಕೆ ಬಲ ತಂದಿದೆ.
Read Full Story

02:33 PM (IST) Jul 31

West Asia Conflict - ಪಶ್ಚಿಮ ಏಷ್ಯಾ ಸಂಘರ್ಷ - 16 ಭಾರತೀಯರ ಸಾವು, 75 ಮಂದಿಗೆ ಗಾಯ; ಕೇಂದ್ರದಿಂದ ಅಧಿಕೃತ ಮಾಹಿತಿ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ 10 ನಾವಿಕರು ಸೇರಿದಂತೆ ಒಟ್ಟು 16 ಭಾರತೀಯ ನಾಗರಿಕರು ಮೃತಪಟ್ಟಿದ್ದು, 75 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಅಧಿಕೃತ ಮಾಹಿತಿಯಲ್ಲೇನಿದೆ? ತಿಳಿಯಿರಿ.

Read Full Story

02:30 PM (IST) Jul 31

ನೆನಪಿದೆಯಾ ಈ ವೈರಲ್ ಕೇಸ್..? ಬ್ರಿಟಿಷ್ ರ್‍ಯಾಪರ್ 'ಯಂಗ್ ಫಿಲ್ಲಿ'ಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ.. ಅಷ್ಟಕ್ಕೂ ಏನ್ ಆಗಿತ್ತು?

ಆಗಸ್ಟ್ 21, 2026 ರಂದು ಈ ಪ್ರಕರಣ ಮತ್ತೆ ನ್ಯಾಯಾಲಯದ ಮುಂದೆ ಬರಲಿದೆ. ಅಲ್ಲಿಯವರೆಗೆ ಯಂಗ್ ಫಿಲ್ಲಿ ಮೇಲೆ ತೂಗುಗತ್ತಿ ಇದ್ದೇ ಇರುತ್ತದೆ. ತನ್ನ ಅಭಿಮಾನಿಗಳ ನಡುವೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಈ ರ್‍ಯಾಪರ್ ಕಥೆ ಮುಂದೇನು? ಈ ಸ್ಟೋರಿ ನೋಡಿ..

Read Full Story

01:48 PM (IST) Jul 31

ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಭೇಟಿ..? ಆಹ್ವಾನ ನೀಡಲು ಭರ್ಜರಿ ತಯಾರಿ ನಡೆಸಿದ ಪಾಕ್!

2027ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನ ಅಧಿಕೃತವಾಗಿ ಆಹ್ವಾನ ನೀಡಲಿದೆ. ಆತಿಥೇಯ ರಾಷ್ಟ್ರವಾಗಿ ಇದು ತಮ್ಮ ಕರ್ತವ್ಯ ಎಂದು ಪಾಕ್ ಸ್ಪಷ್ಟಪಡಿಸಿದ್ದು, ಉಭಯ ದೇಶಗಳ ನಡುವಿನ ಹದಗೆಟ್ಟ ಸಂಬಂಧಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ.
Read Full Story

01:35 PM (IST) Jul 31

ಸಿಜೆಪಿ ಪ್ರತಿಭಟನೆ ಹಿಂದಿನ ಕರಾಳ ಘಟನೆ ಬಿಚ್ಚಿಟ್ಟ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಪುತ್ರಿ

ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸಿದ ಪ್ರತಭಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದ ಅಸಲಿಯತ್ತು ಬಯಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಪುತ್ರಿ ಹಾಗೂ ಹಲವು ಪೊಲೀಸ್ ಕುಟುಂಬಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.

Read Full Story

01:28 PM (IST) Jul 31

ಮುಂದಿನ ವರ್ಷ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭೇಟಿ? ಪಾಕ್ ಸಚಿವರ ಹೇಳಿಕೆ ಬಳಿಕ ಸಂಚಲನ!

2027ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಭಾರತವನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ ಹೇಳಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2015ರ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.
Read Full Story

01:08 PM (IST) Jul 31

ದೇಶದ ಮೊದಲ ಮೊಬೈಲ್​ಫೋನ್​ ಕರೆಗಿಂದು 31 ವರ್ಷ - ಅಂದು ಕಾಲ್​ ಮಾಡಿದ್ಯಾರು? ಫೋನ್​ ನಡೆದು ಬಂದ ಪಯಣ

1995ರಲ್ಲಿ ನಡೆದ ಭಾರತದ ಮೊದಲ ಮೊಬೈಲ್ ಕರೆಯಿಂದ ಆರಂಭಿಸಿ, 5G ಯುಗದವರೆಗೆ ಭಾರತದಲ್ಲಿ ಮೊಬೈಲ್ ಫೋನ್‌ಗಳ ಪಯಣವನ್ನು ಈ ಲೇಖನ ವಿವರಿಸುತ್ತದೆ. ದುಬಾರಿ ಹ್ಯಾಂಡ್‌ಸೆಟ್‌ಗಳಿಂದ ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆಯವರೆಗೆ, ಪ್ರಮುಖ ಮೈಲಿಗಲ್ಲುಗಳು ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಇದು ಚರ್ಚಿಸುತ್ತದೆ.
Read Full Story

01:06 PM (IST) Jul 31

ಇಬ್ಬರು ಮ್ಯಾಚ್‌ ವಿನ್ನರ್ ಕೈಬಿಟ್ಟು ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಒಂದು ಅಚ್ಚರಿ ಎಂಟ್ರಿ

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್‌ರಂತಹ ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದು, ಅಚ್ಚರಿಯ ರೀತಿಯಲ್ಲಿ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
Read Full Story

12:34 PM (IST) Jul 31

Gold Rates - ನಾಲ್ಕು ತಿಂಗಳಲ್ಲಿ ₹3,140 ಕುಸಿದ ಚಿನ್ನ, ಇಂದು ಮತ್ತೆ ಏರಿಕೆ! ಜುಲೈ 31ರ ದರ ಇಲ್ಲಿದೆ

ಕಳೆದ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ ₹3,140ರಷ್ಟು ಗಣನೀಯ ಇಳಿಕೆ ಕಂಡಿದೆ. ಆದರೆ, ಜುಲೈ 31ರ ಶುಕ್ರವಾರದಂದು ಹಳದಿ ಲೋಹದ ದರದಲ್ಲಿ ₹25ರಷ್ಟು ಅಲ್ಪ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
Read Full Story

11:51 AM (IST) Jul 31

ಪೆಲೆಟ್ ಗನ್‌ಗಳ ಸಂಪೂರ್ಣ ನಿಷೇಧ ಅಸಾಧ್ಯ; ನಿಯಮಗಳನ್ನು ಪ್ರಶ್ನಿಸದೆ ತಡೆ ಅಸಾಧ್ಯ ಎಂದ ಸುಪ್ರೀಂ ನ್ಯಾಯಪೀಠ!

ಪೆಲೆಟ್ ಗನ್‌ಗಳ ಸಂಪೂರ್ಣ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತೀವ್ರ ಪರಿಸ್ಥಿತಿಯಲ್ಲಿ ಗುಂಡು ಹಾರಿಸಲು ಕಾನೂನಿನಲ್ಲಿ ಅವಕಾಶವಿರುವಾಗ ಪೆಲೆಟ್ ಗನ್‌ಗಳನ್ನು ಮಾತ್ರ ಹೇಗೆ ನಿಷೇಧಿಸಲು ಸಾಧ್ಯ ಎಂದು ಪ್ರಶ್ನಿಸಿದೆ. ಅಲ್ಲದೆ, ದಾಳಿಗೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Read Full Story

11:20 AM (IST) Jul 31

ನೀಟ್ ಹೋರಾಟದ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಶಾಕ್, ಬಿಜೆಪಿಗೆ ರಾಜೀನಾಮೆ ನೀಡಿದ ವಕ್ತಾರ ಶೆಹಜಾದ್

ಪ್ರಖರ ಮಾತುಗಳಿಂದಲೇ ಎದುರಾಳಿಗಳನ್ನು ಮಣಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಬಿಜೆಪಿಯಿಂದ ಹೊರಬಂದಿದ್ದಾರೆ. ಸೋಶಿಯಲ್ ಮೀಡಿಯಾ, ಸುದ್ದಿಗೋಷ್ಠಿ, ಸುದ್ದಿ ವಾಹನಿಗಳ ಚರ್ಚೆಯಲ್ಲಿ ಪೂನಾವಾಲ ಹಲವರ ಬೆವರಿಳಿಸಿದ್ದಾರೆ. ದಿಢೀರ್ ರಾಜೀನಾಮೆ ಇದೀಗ ಕೋಲಾಹಲ ಸೃಷ್ಟಿಸಿದೆ.

Read Full Story

10:59 AM (IST) Jul 31

ಆಷಾಢ ಮಾಸದಲ್ಲಿ ಚಿನ್ನ, ಬೆಳ್ಳಿ ಖರೀದಿ ಒಳ್ಳೆಯದಾ? ಶೂನ್ಯ ಮಾಸದಲ್ಲಿ ಇದು ಲಾಭವೋ ನಷ್ಟವೋ?

ಆಷಾಢ ಮಾಸವನ್ನು 'ಶೂನ್ಯ ಮಾಸ' ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ, ಮುಂಜಿ ಮುಂತಾದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾದರೆ ಈ ಆಷಾಢ ಅಥವಾ ಶೂನ್ಯ ಮಾಸದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದೇ? ಇದರಿಂದ ಲಾಭವಾಗುತ್ತದೆಯೇ ಅಥವಾ ನಷ್ಟವೇ ಎಂಬ ಗೊಂದಲ ಹಲವರಲ್ಲಿದೆ. ಇದರ ಧಾರ್ಮಿಕ ಮತ್ತು ಆರ್ಥಿಕ ಹಿನ್ನೆಲೆ ಹಾಗೂ ಇಂದಿನ ಚಿನ್ನದ ದರದ ವಿವರ ಇಲ್ಲಿದೆ.

Read Full Story

10:42 AM (IST) Jul 31

Quantum Energy Plasma - ಒಂದೇ ಚಾರ್ಜ್‌ಗೆ 120 ಕಿ.ಮೀ. ಮೈಲೇಜ್! ಎಲೆಕ್ಟ್ರಿಕ್ ಸ್ಕೂಟಿ ಅಂದ್ರೆ ಇದು ನೋಡಿ!

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಕ್ವಾಂಟಮ್ ಎನರ್ಜಿ ಕಂಪನಿಯು ತನ್ನ ಹೊಸ 'ಪ್ಲಾಸ್ಮಾ' ಇ-ಸ್ಕೂಟರ್ ಅನ್ನು ಪರಿಚಯಿಸಿದೆ. ₹1.25 ಲಕ್ಷ ಎಕ್ಸ್-ಶೋರೂಂ ಬೆಲೆಯ ಈ ಸ್ಕೂಟರ್, ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಯಾಕೆ ಈ ಬೈಕ್ ಖರೀದಿಸಬೇಕು ಎಂದರೆ..

Read Full Story

More Trending News