LIVE NOW
Published : Aug 21, 2026, 07:48 AM ISTUpdated : Aug 21, 2026, 09:19 AM IST

India News Live: ಕಂಠೀರವ ಸ್ಟೇಡಿಯಂಗೆ ಕ್ರೀಡಾ ಇಲಾಖೆ ಕಾಯಕಲ್ಪ; ಹೊರಾಂಗಣ ಕ್ರೀಡಾಂಗಣದಲ್ಲಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣ!

ಸಾರಾಂಶ

ಚೆನ್ನೈ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡಿನ ಬಲವಾದ ವಿರೋಧದ ನಡುವೆಯೇ, ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿ ರಕ್ಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಮೂಲಕ ಸೌಹಾರ್ದಯುತವಾಗಿ ಯೋಜನೆ ಜಾರಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಚೆನ್ನೈನ ಕೋವಲಂನಲ್ಲಿ ಶಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ಮೇಕೆದಾಟು ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನಲ್ಲಿ, ಒಂದು ವೇಳೆ ಕೇವಲ ಒಂದು ಹನಿ ನೀರು ಉಳಿದಿದ್ದರೂ ಸಹ ಕುಡಿಯುವ ನೀರಿಗಾಗಿ ಮೀಸಲಿಡುವ 5 ಟಿಎಂಸಿ ನೀರನ್ನು ಹೊರತುಪಡಿಸಿ, ಉಳಿದೆಲ್ಲಾ ನೀರನ್ನು ತಮಿಳುನಾಡಿಗೇ ಬಿಡಲಾಗುವುದು ಎಂದು ಶಾ ಅವರ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದೇನೆ. ಆದ್ದರಿಂದ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ನಿಶ್ಚಿಂತೆಯಿಂದಿರಬಹುದು. ಈ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಮಗಾಗಲ್ಲ, ಬದಲಿಗೆ ನಿಮಗಾಗಿಯೇ’ ಎಂದರು.

ರೈತರಿಗೆ ಸಹಾಯ: ನಾನು, ‘ನಾನು ನಿಮಗೆ ಭರವಸೆ ನೀಡುತ್ತೇನೆ. ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಸಹಾಯ ಮಾಡಲಿದೆ. ನಮಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.

09:19 AM (IST) Aug 21

ಕಂಠೀರವ ಸ್ಟೇಡಿಯಂಗೆ ಕ್ರೀಡಾ ಇಲಾಖೆ ಕಾಯಕಲ್ಪ; ಹೊರಾಂಗಣ ಕ್ರೀಡಾಂಗಣದಲ್ಲಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣ!

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಳೆಗಾಲದ ಸಮಸ್ಯೆಗಳಾದ ಮೇಲ್ಛಾವಣಿ ಸೋರಿಕೆ ಮತ್ತು ನೀರು ನಿಲ್ಲುವುದನ್ನು ತಡೆಯಲು ನವೀಕರಣ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣದ ಸುತ್ತ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದ್ದು, ಇದು ಡಿಸಿಎಂ ಘೋಷಿಸಿದ 5000 ಕೋಟಿ ರೂ. ಯೋಜನೆಯ ಭಾಗವಲ್ಲ.
Read Full Story

09:00 AM (IST) Aug 21

ಒಂದು ಕುಟುಂಬ, ಒಂದು ಅಕಾಡೆಮಿಯಿಂದ ಹಾಕಿ ವಿಶ್ವಕಪ್‌ನಲ್ಲಿ ಐವರು ಕಣಕ್ಕೆ! ಭಾರತ ಪರ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಜೋಡಿ

ಸೋನಿಪತ್‌ನ ಒಂದು ಹಾಕಿ ಅಕಾಡೆಮಿಯಿಂದ ಐವರು ಆಟಗಾರರು ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಲ್ಲಿ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಎಂಬ ಖ್ಯಾತಿಗೆ ಪ್ರೀತಂ ರಾಣಿ ಸಿವಾಚ್ ಮತ್ತು ಯಶ್‌ದೀಪ್‌ ಸಿವಾಚ್ ಪಾತ್ರರಾಗಿದ್ದಾರೆ. ಇದೇ ವೇಳೆ, ಭಾರತೀಯ ಮಹಿಳಾ ಹಾಕಿ ತಂಡವು ವಿಶ್ವಕಪ್‌ನ ಅಂತಿಮ-8ರ ಘಟ್ಟವನ್ನು ಪ್ರವೇಶಿಸಿದೆ.
Read Full Story

08:10 AM (IST) Aug 21

ಗಾಂಧೀಜಿ ಸಹಿಯುಳ್ಳ 688 ಬರಹಗಳ ಅಪರೂಪದ ಹಸ್ತಪ್ರತಿ ₹16.20 ಕೋಟಿಗೆ ಹರಾಜು - ಹೊಸ ವಿಶ್ವದಾಖಲೆ!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕೈಬರಹದ 688 ಸಂದೇಶಗಳ ಹಸ್ತಪ್ರತಿ ಸಂಗ್ರಹವು 'ಸಫ್ರಾನ್‌-ಆರ್ಟ್' ಹರಾಜಿನಲ್ಲಿ ₹16.20 ಕೋಟಿಗೆ ಮಾರಾಟವಾಗಿ ವಿಶ್ವದಾಖಲೆ ನಿರ್ಮಿಸಿದೆ. ಈ ಹರಾಜಿನಲ್ಲಿ ಗಾಂಧೀಜಿಯವರ ಚರಕ, ಪತ್ರಗಳು ಹಾಗೂ ಇತರ ವೈಯಕ್ತಿಕ ವಸ್ತುಗಳು ಸಹ ಕೋಟ್ಯಂತರ ರೂಪಾಯಿಗೆ ಬಿಕರಿಯಾಗಿವೆ.
Read Full Story

07:49 AM (IST) Aug 21

ನಮ್ಮ ತಂಡದ 3000 ಜನ ಭಾರತದಲ್ಲಿದ್ದಾರೆ; ಮೋದಿ ಸರ್ಕಾರಕ್ಕೆ ಪಾಕ್ ಉಗ್ರ ಶೆಹಜಾಬ್ ಭಟ್ಟಿ ಸವಾಲ್!

ಕರ್ನಾಟಕದಲ್ಲಿ ಮೂವರು ಸೇರಿದಂತೆ ಭಾರತದಾದ್ಯಂತ ಭದ್ರತಾ ಸಂಸ್ಥೆಗಳು ಇತ್ತೀಚೆಗೆ ಸೆರೆಹಿಡಿದ 250 ಜನರು ತನ್ನ ಸಂಘಟನೆಗೆ ಸೇರಿದವರಲ್ಲ ಎಂದಿರುವ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ ಶೆಹಜಾದ್‌ ಭಟ್ಟಿ, ನನ್ನ ತಂಡದ ಇನ್ನೂ 3000 ಜನರು ಭಾರತದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ.

ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿದ್ದಾರೆ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಭಟ್ಟಿ, ‘ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟವರು ನನ್ನ ಸಂಗಡಿಗರಲ್ಲ. ಬದಲಿಗೆ ಅವರೆಲ್ಲ ಕಾಕ್ರೋಚ್‌ ಜನತಾ ಪಕ್ಷಕ್ಕೆ (ಸಿಜೆಪಿ) ಸೇರಿದವರಾಗಿದ್ದಾರೆ. ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿ ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೂ ನಮ್ಮನ್ನು ಪತ್ತೆ ಮಾಡುವಲ್ಲಿ ನಿಮ್ಮ ಭದ್ರತಾ ಪಡೆಗಳು ವಿಫಲವಾದವೇ? ಇಷ್ಟು ತಡವಾಗಿ ಕಾರ್ಯಾಚರಣೆ ಆರಂಭಿಸಿದ್ದೇಕೆ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಂತೆಯೇ, ಬಂಧಿತರ ಗುರುತುಗಳನ್ನು ಬಹಿರಂಗಪಡಿಸಿ, ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವಂತೆಯೂ ಚ್ಯಾಲೆಂಜ್‌ ಮಾಡಿದ್ದಾನೆ.

Read Full Story

More Trending News