Published : Aug 21, 2026, 07:48 AM ISTUpdated : Aug 21, 2026, 09:47 PM IST

India News Live: GenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!

ಸಾರಾಂಶ

ಚೆನ್ನೈ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡಿನ ಬಲವಾದ ವಿರೋಧದ ನಡುವೆಯೇ, ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿ ರಕ್ಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಮೂಲಕ ಸೌಹಾರ್ದಯುತವಾಗಿ ಯೋಜನೆ ಜಾರಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಚೆನ್ನೈನ ಕೋವಲಂನಲ್ಲಿ ಶಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ಮೇಕೆದಾಟು ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನಲ್ಲಿ, ಒಂದು ವೇಳೆ ಕೇವಲ ಒಂದು ಹನಿ ನೀರು ಉಳಿದಿದ್ದರೂ ಸಹ ಕುಡಿಯುವ ನೀರಿಗಾಗಿ ಮೀಸಲಿಡುವ 5 ಟಿಎಂಸಿ ನೀರನ್ನು ಹೊರತುಪಡಿಸಿ, ಉಳಿದೆಲ್ಲಾ ನೀರನ್ನು ತಮಿಳುನಾಡಿಗೇ ಬಿಡಲಾಗುವುದು ಎಂದು ಶಾ ಅವರ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದೇನೆ. ಆದ್ದರಿಂದ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ನಿಶ್ಚಿಂತೆಯಿಂದಿರಬಹುದು. ಈ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಮಗಾಗಲ್ಲ, ಬದಲಿಗೆ ನಿಮಗಾಗಿಯೇ’ ಎಂದರು.

ರೈತರಿಗೆ ಸಹಾಯ: ನಾನು, ‘ನಾನು ನಿಮಗೆ ಭರವಸೆ ನೀಡುತ್ತೇನೆ. ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಸಹಾಯ ಮಾಡಲಿದೆ. ನಮಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.

09:47 PM (IST) Aug 21

GenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ '6-7' ಸಂಭ್ರಮಾಚರಣೆಯ ಮೂಲಕ ವೈರಲ್ ಆದ ಯುವ ಕ್ರಿಕೆಟರ್ ಮೇಧವಿ ಬಿಧುರಿ ಅವರ ಹಿನ್ನೆಲೆಯನ್ನು ಈ ಲೇಖನ ವಿವರಿಸುತ್ತದೆ. ಅವರ ಕ್ರಿಕೆಟ್ ಪಯಣ, ಜೆನ್ ಜೀ ಟ್ರೆಂಡ್ ಆಗಿರುವ ಈ ಸಂಭ್ರಮದ ರಹಸ್ಯ ಮತ್ತು ಅವರ ಜೆರ್ಸಿ ಸಂಖ್ಯೆಗೂ ಇದಕ್ಕೂ ಇರುವ ಸಂಬಂಧವನ್ನು ಇಲ್ಲಿ ತಿಳಿಸಲಾಗಿದೆ.
Read Full Story

09:05 PM (IST) Aug 21

ಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣಿಸುತ್ತಿದೆಯಾ? ಈ 5 ಸಿನಿಮಾಗಳು ನಿಮಗೆ ಹೊಸ ಭರವಸೆ ನೀಡುತ್ತವೆ!

ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳೂ ಮನಸ್ಸನ್ನು ಭಾರಾಗಿಸುತ್ತವೆ. ಅಂತಹ ಸಮಯದಲ್ಲಿ ಒಂಟಿತನ, ಭರವಸೆ, ಪರಿಶ್ರಮ, ಪ್ರೀತಿ ಮತ್ತು ಸ್ನೇಹದಂತಹ ಬೇರೆ ಬೇರೆ ಭಾವನೆಗಳ ಬಗ್ಗೆ ಹೇಳುವ ಈ 5 ಸುಂದರ ಸಿನಿಮಾಗಳನ್ನು ನೋಡಿ, ಮನಸ್ಸು ಹಗುರವಾಗುತ್ತೆ!

Read Full Story

08:19 PM (IST) Aug 21

ವರಮಹಾಲಕ್ಷ್ಮಿ ಹಬ್ಬದಂದು ಸೀರೆಯಲ್ಲಿ ‘ಬೊಂಬೆ’ಯಂತೆ ಮಿಂಚಿದ ನಟಿ ಸ್ನೇಹ - ಫೋಟೋ ನೋಡಿದ್ರಾ?

ನಟಿ ಸ್ನೇಹ ಅವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Read Full Story

08:07 PM (IST) Aug 21

ಎಸೆವ ಪ್ಲಾಸ್ಟಿಕ್​ನಿಂದಲೇ 2,700 ಕೋಟಿಯ ಉದ್ಯಮಿಯಾದ! ಸಹಸ್ರ ಕೋಟ್ಯಧಿಪತಿಯ ಮೈನವಿರೋಳೋ ಸ್ಟೋರಿ

ಒಂದು ಕಾಲದಲ್ಲಿ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದ ಶ್ಯಾಮ್ ಸುಂದರ್ ಶರ್ಮಾ ಅವರು, ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ 2,700 ಕೋಟಿ ಮೌಲ್ಯದ 'ಗಣೇಶ್ ಇಕೋಸ್ಪಿಯರ್' ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಕೊರಿಯಾದ ತಂತ್ರಜ್ಞಾನ ಬಳಸಿ, PET ಬಾಟಲಿಗಳಿಂದ ಪಾಲಿಯೆಸ್ಟರ್ ಫೈಬರ್ ತಯಾರಿಸಿ, ಪರಿಸರ ಸಂರಕ್ಷಣೆಯ ಜೊತೆಗೆ ಬೃಹತ್ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
Read Full Story

07:50 PM (IST) Aug 21

ಅಪ್ಪನಿಗೆ ತಿಂಗಳಿಗೆ 3 ಸಾವಿರ ಸಂಬಳ - 24ರ ಹರೆಯದ ಮಗನಿಗೀಗ 1.5 ಕೋಟಿ ಪ್ಯಾಕೇಜ್​! ಯುವಕನ ಯಶೋಗಾಥೆ

ತಂದೆಯ ತಿಂಗಳ 3 ಸಾವಿರ ರೂ. ಆದಾಯದಲ್ಲಿ ಬೆಳೆದ ಶಶಾಂಕ್ ಅಗರವಾಲ್, ಕಠಿಣ ಪರಿಶ್ರಮದಿಂದ ಐಐಟಿ ಬಾಂಬೆ ಸೇರಿ, ಇಂದು ವಾರ್ಷಿಕ 1.5 ಕೋಟಿ ರೂ. ಸಂಬಳ ಗಳಿಸುತ್ತಿದ್ದಾರೆ. ಬಡತನವನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಿದ ಇವರ ಸ್ಪೂರ್ತಿದಾಯಕ ಕಥೆ ಇದು.
Read Full Story

07:43 PM (IST) Aug 21

'ಹೈವಾನ್' ವೇದಿಕೆಯಲ್ಲಿ ಯಶ್ 'ಟಾಕ್ಸಿಕ್' ಬಗ್ಗೆ ಮಾತು.. ಅಕ್ಷಯ್-ಸೈಫ್ ಹೇಳಿರೋ ಮಾತೀಗ ಭಾರೀ ವೈರಲ್!

'ಹೈವಾನ್' ಚಿತ್ರದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಜೊತೆ ನಟರಾದ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ವೇದಿಕೆಯಲ್ಲಿದ್ದರು. ಈ ವೇಳೆ ಆ ಬಾಲಿವುಡ್‌ ನಟರಿಬ್ಬರೂ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.

Read Full Story

07:43 PM (IST) Aug 21

ಸೆ.1ರ ಒಳಗಾಗಿ ಬುಕ್ ಮಾಡಿ; ಟಾಟಾ ನೆಕ್ಸಾನ್, ಪಂಚ್, ಹ್ಯಾರಿಯರ್ ಸೇರಿ ಎಲ್ಲಾ ಕಾರುಗಳ ದರ ಭಾರೀ ಏರಿಕೆ!

ಟಾಟಾ ಮೋಟಾರ್ಸ್ ತನ್ನೆಲ್ಲಾ ಕಾರು ಮತ್ತು ಎಸ್‌ಯುವಿಗಳ ದರವನ್ನು ಸೆಪ್ಟೆಂಬರ್ 1 ರಿಂದ ಹೆಚ್ಚಿಸಲು ನಿರ್ಧರಿಸಿದ್ದು, ಉತ್ಪಾದನಾ ವೆಚ್ಚ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಇವಿ ಸೇರಿದಂತೆ ಎಲ್ಲಾ ಮಾದರಿಗಳ ಮೇಲೆ ಗರಿಷ್ಠ ₹25,000 ವರೆಗೆ ದರ ಏರಿಕೆಯಾಗಲಿದೆ.

Read Full Story

07:20 PM (IST) Aug 21

ಜಪಾನ್ ವಿದ್ಯಾರ್ಥಿಗಳ ಜೊತೆ ಜೆನ್‌ಝಿ ಸ್ಟೈಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ವೈರಲ್

ಜಪಾನ್ ವಿದ್ಯಾರ್ಥಿಗಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ಭಾರಿ ಕುತೂಹಲ ಕೆರಳಿಸಿದೆ. ವಿದ್ಯಾರ್ಥಿಗಳು ಜೆನ್‌ಝಿ ಸ್ಟೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಯೋಗಿ, ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದು ಸೆಲ್ಫಿ ನೀಡಿದ್ದಾರೆ. ಇಷ್ಟೇ ಅಲ್ಲ ಒಹಾಯೊ ಗೊಜೈಮಾಸು ಎಂದು ಅಚ್ಚರಿ ಮೂಡಿಸಿದ್ದಾರೆ.

Read Full Story

06:54 PM (IST) Aug 21

ಗಾಲೆ ಟೆಸ್ಟ್ ಸೋಲಿನ ಬೆನ್ನಲ್ಲೇ ಲಂಕಾದಲ್ಲಿ ಮೇಜರ್ ಚೇಂಜ್; ಕೊಲಂಬೊ ಟೆಸ್ಟ್‌ಗೆ ಎರಡು ಹೊಸ ಆಟಗಾರರಿಗೆ ಬುಲಾವ್!

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದೆದುರು ಸೋತ ಬಳಿಕ, ಶ್ರೀಲಂಕಾ ತಂಡವು ಕೊಲಂಬೊದಲ್ಲಿನ ಎರಡನೇ ಟೆಸ್ಟ್‌ಗೆ ಎರಡು ಪ್ರಮುಖ ಬದಲಾವಣೆ ಮಾಡಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ, ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್‌ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
Read Full Story

06:34 PM (IST) Aug 21

WTC Final - ಗಂಭೀರ್ ತಂತ್ರಗಳಿಂದ ಟೀಂ ಇಂಡಿಯಾ ಕಥೆ ಮುಗೀತಾ? ಫೈನಲ್ ತಲುಪೋಕೆ ಇನ್ನೂ ಚಾನ್ಸ್ ಇದೆಯಾ?

ಹಲವು ಆಂತರಿಕ ಸವಾಲುಗಳು ಮತ್ತು ಹಿರಿಯ ಆಟಗಾರರ ನಿರ್ಗಮನದಿಂದ ಸಂಕಷ್ಟದಲ್ಲಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.
Read Full Story

06:04 PM (IST) Aug 21

Insidious 2026 - ಈ ದೆವ್ವದ ಸಿನಿಮಾ ನೋಡಿದ್ರೆ ರಾತ್ರಿ ನಿದ್ದೆ ಬರಲ್ಲ - ಎದೆ ನಡುಗಿಸೋ ಹಾರರ್ ಅನುಭವ!

ಇನ್ಸಿಡಿಯಸ್ ತನ್ನ 6ನೇ ಭಾಗವಾದ 'ಇನ್ಸಿಡಿಯಸ್: ಔಟ್ ಆಫ್ ದಿ ಫರ್ದರ್' ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಲು ಬಂದಿದೆ. ಈ ಬಾರಿ ಪ್ರಶ್ನೆ ಒಂದೇ, ದೆವ್ವ ನಮ್ಮನ್ನು ಹೆದರಿಸುತ್ತಿದೆಯಾ? ಅಥವಾ ನಾವೇ ದೆವ್ವದ ಲೋಕದಲ್ಲಿ ಸಿಕ್ಕಿಹಾಕಿಕೊಂಡಿದ್ದೀವಾ?

Read Full Story

05:57 PM (IST) Aug 21

ಈ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ಫಿಕ್ಸ್.. ಸಿಂಗಲ್ ಸ್ಕ್ರೀನ್‌ಗೂ 300 ರೂ - ಆದ್ರೆ, ಕರ್ನಾಟಕದ ಕಥೆ ಏನು?

ಯಾವ ಸಿನಿಮಾ ನಿರ್ಮಾಪಕರು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ₹1 ಕೋಟಿ ದೇಣಿಗೆ ನೀಡುತ್ತಾರೋ, ಅಂತಹ ಚಿತ್ರಗಳ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಲ್ಟಿಪ್ಲೆಕ್ಸ್‌ಗಳು ಪ್ರತಿ ಶೋನಲ್ಲೂ 25% ಸೀಟುಗಳನ್ನು ಕಡಿಮೆ ದರದಲ್ಲಿ ಮೀಸಲಿಡಬೇಕು ಎಂದು ಈ ರಾಜ್ಯದ ಸರ್ಕಾರ ಹೇಳಿದೆ. ಕರ್ನಾಟಕದಲ್ಲಿ ಹೇಗಿದೆ?

Read Full Story

04:57 PM (IST) Aug 21

ಕ್ರಿಮಿನಲ್‌ ಕೇಸ್‌ನಿಂದ ರೈಲ್ವೆ ಉದ್ಯೋಗ ಕಳೆದುಕೊಂಡ; 22 ವರ್ಷಗಳ ಹೋರಾಟದ ಬಳಿಕ ಕೊನೆಗೂ ಕ್ಲೀನ್‌ಚಿಟ್ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ..! ಮಾಡಿದ ತಪ್ಪೇನು?

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ವಂಚನೆ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಪಟಿಯಾಲಾ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ಲೀನ್‌ಚಿಟ್ ನೀಡಿದ್ದು, ಈ ತೀರ್ಪು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.
Read Full Story

04:54 PM (IST) Aug 21

ಪೊಲೀಸರ ನಿದ್ದೆಗೆಡಿಸಿದ ಸರಣಿ ಕೊ*ಲೆ ರಹಸ್ಯದ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ OTTಯಲ್ಲಿ ಲಭ್ಯ

South Cinema: 2023ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವು ಇದೀಗ OTTಯಲ್ಲಿ ಲಭ್ಯವಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸರಣಿ ಕೊ*ಲೆ ಪ್ರಕರಣವನ್ನು ತನಿಖೆ ಮಾಡುವ ರೋಚಕ ಕಥೆಯನ್ನು ಈ ಚಿತ್ರ ಹೊಂದಿದೆ.

Read Full Story

04:44 PM (IST) Aug 21

ಉಡುಪಿ ಮೂಲದ ನಟಿ ಶಂಕರಮಂಚಿ ಜಾನಕಿಗೆ 'ಸಾಹುಕಾರ್ ಜಾನಕಿ' ಹೆಸರು ಬಂದಿದ್ದು ಹೇಗೆ? ಈ ಸ್ಟೋರಿ ನೋಡಿ..

ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ‌ ಸಾಹುಕಾರ್ ಜಾನಕಿ‌ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು.

Read Full Story

04:35 PM (IST) Aug 21

ಡಾನ್ಸರ್‌ ಜೊತೆ ಲಾಡ್ಜ್‌ನಲ್ಲಿ ಇದ್ದಾಗಲೇ ಪತ್ನಿ ಕೈಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪ್ರಖ್ಯಾತ ನಟ, ಚಡ್ಡಿಯಲ್ಲೇ ನಿಂತ ಫೋಟೋ ವೈರಲ್‌!

ಪ್ರಸಿದ್ಧ ಜಾನಪದ ನಟ ಈಶ್ವರ್ ಸಾಯಿ, ಸಹ-ನಟಿ ಮಾಧುರಿ ರಾಥೋಡ್ ಜೊತೆ ಹೋಟೆಲ್‌ನಲ್ಲಿದ್ದಾಗ ಪತ್ನಿಯ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪತ್ನಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಗಂಡನನ್ನು ಮಾಧುರಿಯೇ ದಾರಿ ತಪ್ಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

Read Full Story

04:33 PM (IST) Aug 21

ಡಾರ್ಲಿಂಗ್ ಪ್ರಭಾಸ್ ಆರೋಗ್ಯದ ಬಗ್ಗೆ ಮತ್ತೆ ಚರ್ಚೆ - ವೈದ್ಯರ ಪೋಸ್ಟ್‌ನಿಂದ ಅಭಿಮಾನಿಗಳಲ್ಲಿ ಆತಂಕ

ಆ್ಯಕ್ಷನ್ ಸಿನಿಮಾಗಳಿಗಾಗಿ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವ ಪ್ರಭಾಸ್, ‘ಬಾಹುಬಲಿ’, ‘ಸಾಹೋ’ ಹಾಗೂ ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಠಿಣ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

03:45 PM (IST) Aug 21

Sowcar Janaki Passed Away - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

Read Full Story

03:44 PM (IST) Aug 21

ಕೆಲಸಕ್ಕೆ ನೇಮಿಸಿಕೊಂಡ ಎರಡೇ ವಾರಕ್ಕೆ ಅಮ್ಮನನ್ನೇ ಕೆಲಸದಿಂದ ಕಿತ್ತೆಸೆದ ಮಗಳು! ಕಾರಣ ಏನು?

ಲಿಂಕ್ಡ್‌ಇನ್ ಬಳಕೆದಾರರಾದ ಅವಂತಿ ನಗ್ರಾಲ್, ತಮ್ಮ ಕರಿಯರ್ ನಿರ್ವಹಿಸಲು ತಾಯಿಯನ್ನೇ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಆದರೆ, ತಾಯಿಯ ಅತಿಯಾದ ಪ್ರೀತಿ ಮತ್ತು ರಕ್ಷಣಾತ್ಮಕ ಸ್ವಭಾವದಿಂದಾಗಿ ಕೇವಲ ಎರಡೇ ವಾರಗಳಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಬೇಕಾಯಿತು. ಈ ಘಟನೆಯು ವೃತ್ತಿ ಮತ್ತು ಕುಟುಂಬದ ಸಂಬಂಧಗಳ ನಡುವಿನ ಸೂಕ್ಷ್ಮ ಗೆರೆಯನ್ನು ಚರ್ಚೆಗೆ ತಂದಿದೆ.
Read Full Story

03:20 PM (IST) Aug 21

ಜಿಮ್‌ನಿಂದ ಹೊರಬರುತ್ತಿದ್ದ ಕರೀನಾ ನೋಡಿ ಹುಬ್ಬೇರಿಸಿದ ನೆಟ್ಟಿಗರು - 3ನೇ ಬಾರಿಗೆ ಗರ್ಭಿಣಿಯಾದ್ರಾ ಬಾಲಿವುಡ್ ಬೆಡಗಿ?

ಜಿಮ್‌ನಿಂದ ಹೊರಬರುತ್ತಿದ್ದ ಕರೀನಾ ಕಪೂರ್ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ವಿಡಿಯೋದಲ್ಲಿ ಆಕೆಯ ಬೇಬಿ ಬಂಪ್ ಕಾಣಿಸುತ್ತಿದೆ ಮತ್ತು ಭದ್ರತಾ ಸಿಬ್ಬಂದಿ ಆಕೆಗೆ ವಿಶೇಷ ರಕ್ಷಣೆ ನೀಡುತ್ತಿರುವುದು ಈ ಚರ್ಚೆಗೆ ಕಾರಣವಾಗಿದೆ.
Read Full Story

02:58 PM (IST) Aug 21

ಅಡುಗೆ ಮಾಡುವಾಗ ಉಪ್ಪು ಜಾಸ್ತಿಯಾಯ್ತಾ? ನಿಮಿಷಗಳಲ್ಲಿ ಈ ಸಿಂಪಲ್ ಟಿಪ್ಸ್‌ನಿಂದ ರುಚಿ ಸರಿಪಡಿಸಿ

ಅಡುಗೆ ಮಾಡುವಾಗ ಅಪ್ಪಿತಪ್ಪಿ ಪಲ್ಯ ಅಥವಾ ಸಾರಿಗೆ ಹೆಚ್ಚು ಉಪ್ಪು ಹಾಕಿಬಿಟ್ರಾ? ಅದನ್ನು ತಿನ್ನಲಾಗದೆ ಬಿಸಾಡುತ್ತಿದ್ದೀರಾ? ಇನ್ನು ಮುಂದೆ ಆ ಚಿಂತೆ ಬೇಡ. ಕೆಲವೇ ನಿಮಿಷಗಳಲ್ಲಿ ಉಪ್ಪನ್ನು ಕಡಿಮೆ ಮಾಡಿ, ಮತ್ತೆ ರುಚಿಕರವಾಗಿ ಮಾಡಬಹುದು.

Read Full Story

01:55 PM (IST) Aug 21

ದೀಪಿಕಾ ಪಡುಕೋಣೆ ಬಗ್ಗೆ ಸಂದೀಪ್ ವಂಗಾಗೆ ಅಷ್ಟೊಂದು ಕೋಪವೇಕೆ? ಅಂಥದ್ದು ಏನ್ ಮಾಡಿದ್ರು ಈ ನಟಿ? ಸೀಕ್ರೆಟ್ ಇಲ್ಲಿದೆ!!

ದೀಪಿಕಾ ಈ ಪ್ರಾಜೆಕ್ಟ್‌ನಿಂದ ಹೊರಬಂದ ಮೇಲೆ ಆ ಸ್ಥಾನಕ್ಕೆ ಬಂದಿದ್ದು 'ನ್ಯಾಷನಲ್ ಕ್ರಶ್' ತೃಪ್ತಿ ಡಿಮ್ರಿ. ಸದ್ಯಕ್ಕೆ 'ಸ್ಪಿರಿಟ್' ಚಿತ್ರದ ಆಕ್ಷನ್ ಟ್ವಿಸ್ಟ್‌ಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ದೀಪಿಕಾ ಪಡುಕೋಣೆ ಹಾಗೂ ಸಂದೀಪ್ ವಂಗಾ ಈ ಸಂಘರ್ಷಕ್ಕೆ ನಿಜವಾದ ಕಾರಣ ಈಗ ಬಹಿರಂಗವಾಗಿದೆ! ಈ ಸ್ಟೋರಿ ನೋಡಿ..

Read Full Story

01:01 PM (IST) Aug 21

Rajasthan Politics - ಶಾಲೆ ನೋಡಲು ಹೋದ CJP ಮುಖಂಡರ ಮೇಲೆ ಅಟ್ಯಾಕ್, 'ಬಿಜೆಪಿ ಗೂಂಡಾಗಳು' ಎಂದ ದೀಪ್ಕೆ | ವಿಡಿಯೋ

ಜೈಪುರದಲ್ಲಿ ಶೆಡ್ ಒಂದರಲ್ಲಿ ನಡೆಯುತ್ತಿದ್ದ ಶಾಲೆಯನ್ನ ಪರಿಶೀಲಿಸಲು ಹೋದ CJP ನಿಯೋಗದ ಮೇಲೆ ರಾಜಕೀಯ ವಿರೋಧಿಗಳು ದಾಳಿ ಮಾಡಿದ್ದಾರೆ. ಇದು 'ಬಿಜೆಪಿ ಗೂಂಡಾಗಳ' ಪೂರ್ವನಿಯೋಜಿತ ಕೃತ್ಯ ಎಂದು CJP, ಶಿಕ್ಷಣ ಸಚಿವ ಮದನ್ ದಿಲಾವರ್ ಮೇಲೆ ಆರೋಪಿಸಿದೆ.
Read Full Story

12:44 PM (IST) Aug 21

ಸಚಿನ್ ತೆಂಡೂಲ್ಕರ್ ಅಪರೂಪದ ವಿಶ್ವದಾಖಲೆ ಸರಿಗಟ್ಟಿದ ಜೋ ರೂಟ್! ಪಾಕ್ ವಿರುದ್ಧ ಇಂಗ್ಲೆಂಡ್ ನಾಯಕನ ಅಮೋಘ ಸಾಧನೆ

ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ ಜೋ ರೂಟ್, ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ನಾಯಕನಾಗಿ 3000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Read Full Story

12:12 PM (IST) Aug 21

Toxic Countdown Day 05 - ಟಾಕ್ಸಿಕ್ ಕೌಂಟ್‌ಡೌನ್ 05.. ಯಶ್ 'ಟಾಕ್ಸಿಕ್' ಕ್ರೇಜ್ ದೇಶ-ವಿದೇಶಗಳಲ್ಲಿ ಹೇಗಿದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!

ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿರುವ ಬೆಂಗಳೂರಿನ ಬಹಳಷ್ಟು ಥಿಯೇಟರ್‌ಗಳಲ್ಲಿ ಯಶ್ ಅವರ ಭಾರೀ ಎತ್ತರದ ಕಟೌಟ್‌ಗಳು ನಿರ್ಮಾಣ ಆಗಿವೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

Read Full Story

11:31 AM (IST) Aug 21

ಭಾರತದ ಆರ್ಥಿಕತೆಯ ಹೊಸ ಶಕ್ತಿಗಳು! ಮಹಾನಗರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿವೆ ಸಣ್ಣ ನಗರಗಳು - ಅಚ್ಚರಿಯ ವರದಿ!

ಜಾಗತಿಕ ಸಂಸ್ಥೆಯಾದ 'ಡನ್ ಅಂಡ್ ಬ್ರಾಡ್‌ಸ್ಟ್ರೀಟ್' ವರದಿಯ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆಯು ಮೆಟ್ರೋ ನಗರಗಳನ್ನು ಮೀರಿ ಸಣ್ಣ ಮತ್ತು ಉದಯೋನ್ಮುಖ ನಗರಗಳಿಗೆ ವಿಸ್ತರಿಸುತ್ತಿದೆ. ಪುಣೆ ಮೆಟ್ರೋ ನಗರಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳದ ಸೌತ್ 24 ಪರಗಣದಂತಹ ಜಿಲ್ಲೆಗಳು ಉದ್ಯಮ ಮತ್ತು ಹೂಡಿಕೆಯಲ್ಲಿ ಮುಂಚೂಣಿಯಲ್ಲಿವೆ.
Read Full Story

11:30 AM (IST) Aug 21

ಇಷ್ಟೂ ದಿನ ಮುಚ್ಚಿಟ್ಟಿದ್ದ 'ತ್ರಿಷಾ ಸೀಕ್ರೆಟ್' ಕೊನೆಗೂ ಹೊರಬಂತು.. 'ಎಲ್ಲದಕ್ಕೂ ಅದೇ ಕಾರಣ, ಇನ್ನೇನಿಲ್ಲ!

ವಿಜಯ್ ಮತ್ತು ತ್ರಿಶಾ ಮದುವೆಯಾಗುತ್ತಾರೆ ಎಂಬ ರೂಮರ್‌ಗಳು ಹರಿದಾಡುತ್ತಲೇ ಇವೆ. ವಿಜಯ್ ಅವರ ಡಿವೋರ್ಸ್ ಕೇಸ್ ಮುಕ್ತಾಯಗೊಂಡಿದೆ ಎಂಬ ಸುದ್ದಿಯೂ ಇದೆ. ಆದರೆ, ತ್ರಿಶಾ ಮಾತ್ರ ಯಾವುದಕ್ಕೂ ಬಾಯಿ ಬಿಡುತ್ತಿಲ್ಲ. ತನ್ನ ಮನಸ್ಸಿಗೆ ಬಂದಂತೆ ಬದುಕುವ ಈ ಚೆಲುವೆ ಮುಂದಿನ ದಿನಗಳಲ್ಲಿ ಯಾವ 'ದಿಢೀರ್' ನಿರ್ಧಾರ ಪ್ರಕಟಿಸುತ್ತಾರೋ..! ಈ ಸ್ಟೋರಿ ನೋಡಿ..

Read Full Story

11:08 AM (IST) Aug 21

ನ.10ಕ್ಕೆ ಸೋನಿಯಾ ಆತ್ಮಚರಿತ್ರೆ ಬಿಡುಗಡೆ, ಅಮ್ಮಾ...ನಿನ್ನ ಆತ್ಮಕಥೆ ಖುಷಿ, ಹೆಮ್ಮೆಯ ವಿಷಯ - ರಾಹುಲ್‌ ಭಾವುಕ ನುಡಿ

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಯವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಈ ಕುರಿತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಪುತ್ರ ರಾಹುಲ್ ಗಾಂಧಿ, ತಂದೆಯ ಮರಣದ ನಂತರ ತಾಯಿ ಎದುರಿಸಿದ ಕಷ್ಟಗಳನ್ನು ಸ್ಮರಿಸಿದ್ದಾರೆ. ಈ ಕೃತಿಯು ತನ್ನ ಕುಟುಂಬದ ಮಾನವೀಯತೆಗೆ ಸಲ್ಲಿಸುವ ಗೌರವ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
Read Full Story

09:19 AM (IST) Aug 21

ಕಂಠೀರವ ಸ್ಟೇಡಿಯಂಗೆ ಕ್ರೀಡಾ ಇಲಾಖೆ ಕಾಯಕಲ್ಪ; ಹೊರಾಂಗಣ ಕ್ರೀಡಾಂಗಣದಲ್ಲಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣ!

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಳೆಗಾಲದ ಸಮಸ್ಯೆಗಳಾದ ಮೇಲ್ಛಾವಣಿ ಸೋರಿಕೆ ಮತ್ತು ನೀರು ನಿಲ್ಲುವುದನ್ನು ತಡೆಯಲು ನವೀಕರಣ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣದ ಸುತ್ತ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದ್ದು, ಇದು ಡಿಸಿಎಂ ಘೋಷಿಸಿದ 5000 ಕೋಟಿ ರೂ. ಯೋಜನೆಯ ಭಾಗವಲ್ಲ.
Read Full Story

09:00 AM (IST) Aug 21

ಒಂದು ಕುಟುಂಬ, ಒಂದು ಅಕಾಡೆಮಿಯಿಂದ ಹಾಕಿ ವಿಶ್ವಕಪ್‌ನಲ್ಲಿ ಐವರು ಕಣಕ್ಕೆ! ಭಾರತ ಪರ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಜೋಡಿ

ಸೋನಿಪತ್‌ನ ಒಂದು ಹಾಕಿ ಅಕಾಡೆಮಿಯಿಂದ ಐವರು ಆಟಗಾರರು ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇದರಲ್ಲಿ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಎಂಬ ಖ್ಯಾತಿಗೆ ಪ್ರೀತಂ ರಾಣಿ ಸಿವಾಚ್ ಮತ್ತು ಯಶ್‌ದೀಪ್‌ ಸಿವಾಚ್ ಪಾತ್ರರಾಗಿದ್ದಾರೆ. ಇದೇ ವೇಳೆ, ಭಾರತೀಯ ಮಹಿಳಾ ಹಾಕಿ ತಂಡವು ವಿಶ್ವಕಪ್‌ನ ಅಂತಿಮ-8ರ ಘಟ್ಟವನ್ನು ಪ್ರವೇಶಿಸಿದೆ.
Read Full Story

08:10 AM (IST) Aug 21

ಗಾಂಧೀಜಿ ಸಹಿಯುಳ್ಳ 688 ಬರಹಗಳ ಅಪರೂಪದ ಹಸ್ತಪ್ರತಿ ₹16.20 ಕೋಟಿಗೆ ಹರಾಜು - ಹೊಸ ವಿಶ್ವದಾಖಲೆ!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕೈಬರಹದ 688 ಸಂದೇಶಗಳ ಹಸ್ತಪ್ರತಿ ಸಂಗ್ರಹವು 'ಸಫ್ರಾನ್‌-ಆರ್ಟ್' ಹರಾಜಿನಲ್ಲಿ ₹16.20 ಕೋಟಿಗೆ ಮಾರಾಟವಾಗಿ ವಿಶ್ವದಾಖಲೆ ನಿರ್ಮಿಸಿದೆ. ಈ ಹರಾಜಿನಲ್ಲಿ ಗಾಂಧೀಜಿಯವರ ಚರಕ, ಪತ್ರಗಳು ಹಾಗೂ ಇತರ ವೈಯಕ್ತಿಕ ವಸ್ತುಗಳು ಸಹ ಕೋಟ್ಯಂತರ ರೂಪಾಯಿಗೆ ಬಿಕರಿಯಾಗಿವೆ.
Read Full Story

07:49 AM (IST) Aug 21

ನಮ್ಮ ತಂಡದ 3000 ಜನ ಭಾರತದಲ್ಲಿದ್ದಾರೆ; ಮೋದಿ ಸರ್ಕಾರಕ್ಕೆ ಪಾಕ್ ಉಗ್ರ ಶೆಹಜಾಬ್ ಭಟ್ಟಿ ಸವಾಲ್!

ಕರ್ನಾಟಕದಲ್ಲಿ ಮೂವರು ಸೇರಿದಂತೆ ಭಾರತದಾದ್ಯಂತ ಭದ್ರತಾ ಸಂಸ್ಥೆಗಳು ಇತ್ತೀಚೆಗೆ ಸೆರೆಹಿಡಿದ 250 ಜನರು ತನ್ನ ಸಂಘಟನೆಗೆ ಸೇರಿದವರಲ್ಲ ಎಂದಿರುವ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ ಶೆಹಜಾದ್‌ ಭಟ್ಟಿ, ನನ್ನ ತಂಡದ ಇನ್ನೂ 3000 ಜನರು ಭಾರತದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ.

ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿದ್ದಾರೆ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಭಟ್ಟಿ, ‘ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟವರು ನನ್ನ ಸಂಗಡಿಗರಲ್ಲ. ಬದಲಿಗೆ ಅವರೆಲ್ಲ ಕಾಕ್ರೋಚ್‌ ಜನತಾ ಪಕ್ಷಕ್ಕೆ (ಸಿಜೆಪಿ) ಸೇರಿದವರಾಗಿದ್ದಾರೆ. ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿ ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೂ ನಮ್ಮನ್ನು ಪತ್ತೆ ಮಾಡುವಲ್ಲಿ ನಿಮ್ಮ ಭದ್ರತಾ ಪಡೆಗಳು ವಿಫಲವಾದವೇ? ಇಷ್ಟು ತಡವಾಗಿ ಕಾರ್ಯಾಚರಣೆ ಆರಂಭಿಸಿದ್ದೇಕೆ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಂತೆಯೇ, ಬಂಧಿತರ ಗುರುತುಗಳನ್ನು ಬಹಿರಂಗಪಡಿಸಿ, ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವಂತೆಯೂ ಚ್ಯಾಲೆಂಜ್‌ ಮಾಡಿದ್ದಾನೆ.

Read Full Story

More Trending News