LIVE NOW
Published : Jul 02, 2026, 07:34 AM ISTUpdated : Jul 02, 2026, 11:10 PM IST

National News Live: ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ

ಸಾರಾಂಶ

ಮಾಸ್ಕೋ (ಜು.2): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತಕ್ಕೆ ಅತಿದೊಡ್ಡ ತೈಲ ರಫ್ತುದಾರ ದೇಶವಾದ ರಷ್ಯಾ, ಇದೀಗ ಭಾರತದಿಂದಲೇ ತೈಲ ಖರೀದಿಗೆ ಮುಂದಾಗಿದೆ. ರಷ್ಯಾದ ತೈಲ ಸಂಸ್ಕರಣಾ ಘಟಕಗಳ ಮೇಲೆ ಉಕ್ರೇನ್ ದಾಳಿ ಪರಿಣಾಮ ಉತ್ಪಾದನೆ ಶೇ.30 ರಷ್ಟು ಕುಸಿತವಾಗಿದೆ. ಹೀಗಾಗಿ ದೇಶದಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತದಿಂದಲೇ ಸಂಸ್ಕರಿತ ತೈಲ ಖರೀದಿಗೆ ರಷ್ಯಾ ಮುಂದಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ಭಾರತ, ರಷ್ಯಾಕ್ಕೆ ರವಾನಿಸಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:10 PM (IST) Jul 02

ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ

ರೈತರೊಬ್ಬರಿಗೆ ಹಾವು ಕಚ್ಚಿದಾಗ, ಅವರ ಪತ್ನಿ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು ಬಾಯಿಯಿಂದ ವಿಷವನ್ನು ಹೀರಿ ತೆಗೆದಿದ್ದಾರೆ. ಹಾವು ಕಚ್ಚಿದಾಗ ಬಾಯಿಯಿಂದ ವಿಷ ಹೀರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

Read Full Story

10:13 PM (IST) Jul 02

44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್

ರಿವೋಲ್ಟ್‌ ಮೋಟಾರ್ಸ್, ಹೊಸ ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ 160 ಕಿ.ಮೀ ಮೈಲೇಜ್, 90 ಕಿ.ಮೀ ಗರಿಷ್ಠ ವೇಗ, ಮತ್ತು 3.24 kWh ಪೋರ್ಟಬಲ್ ಬ್ಯಾಟರಿಯನ್ನು ಹೊಂದಿದೆ.

Read Full Story

10:09 PM (IST) Jul 02

ತಲೈವಾ ಫ್ಯಾನ್ಸ್‌ಗೆ ಗುಡ್ ನ್ಯೂಸ್! 'ಜೈಲರ್ 2' ರಿಲೀಸ್ ಡೇಟ್ ಫಿಕ್ಸ್ - ಆದ್ರೆ ಇನ್ನೊಂದು ಬಿಗ್ ಟ್ವಿಸ್ಟ್!

ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ನವರಾತ್ರಿ ಹಬ್ಬಕ್ಕೆ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

Read Full Story

09:08 PM (IST) Jul 02

Daveigh Chase - 'ದಿ ರಿಂಗ್' ನಟಿಯ ಸಾವಿನ ರಹಸ್ಯ ಬಯಲು - ಏಡ್ಸ್‌ನಿಂದ ಕೊನೆಯುಸಿರೆಳೆದ ಡೇವೀ ಚೇಸ್

Lilo & Stitch Voice Actress: ಹಾಲಿವುಡ್ ನಟಿ ಡೇವೀ ಚೇಸ್ ಅವರ ಸಾವಿಗೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಕಾರಣ ಎಂದು ಲಾಸ್ ಏಂಜಲೀಸ್ ಕರೋನರ್ ಕಚೇರಿ ಖಚಿತಪಡಿಸಿದೆ.

Read Full Story

09:03 PM (IST) Jul 02

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ್ರೂ ಭಾರತದಲ್ಲಿಲ್ಲ ಎಂದಿದ್ಯಾಕೆ ಪುರಿ?

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮುಂದುವರಿದರೂ, ಈ ಹಿಂದೆ ದುಬಾರಿ ಬೆಲೆಗೆ ಖರೀದಿಸಿದ ತೈಲದಿಂದಾದ ನಷ್ಟವನ್ನು ತೈಲ ಕಂಪನಿಗಳು ಇನ್ನೂ ಸರಿದೂಗಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

Read Full Story

08:58 PM (IST) Jul 02

ಕುಂಭಮೇಳದ ವೈರಲ್​ ಲೇಡಿ ಮೊನಾಲಿಸಾ ಪತಿ ಫರ್ಮಾನ್​ಗೆ ಸಿಕ್ಕಿಲ್ಲ ಬೇಲ್​! ಯಾವುದೇ ಕ್ಷಣದಲ್ಲಿ ಅರೆಸ್ಟ್

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಳ ಪತಿ ಮೊಹಮ್ಮದ್ ಫರ್ಮಾನ್, ಅಪ್ರಾಪ್ತೆಯನ್ನು ಮದುವೆಯಾದ ಆರೋಪ ಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಪೋಕ್ಸೋ ಕಾಯ್ದೆಯಡಿ ಮಧ್ಯಪ್ರದೇಶ ಪೊಲೀಸರು ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ.
Read Full Story

08:28 PM (IST) Jul 02

ರಾಹುಲ್‌ ದ್ರಾವಿಡ್ ಪುತ್ರನ ಅಬ್ಬರ - 360° ಬ್ಯಾಟಿಂಗ್‌ನಿಂದ ಗಮನ ಸೆಳೆದ ಸಮಿತ್, ವಿಡಿಯೋ

ಮಹಾರಾಜ ಟ್ರೋಫಿ ಟಿ20 ಪಂದ್ಯದಲ್ಲಿ, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಹುಬ್ಬಳ್ಳಿ ನಾಯಕ ಮಯಾಂಕ್ ಅಗರ್ವಾಲ್ ಗಾಯಗೊಂಡರು.
Read Full Story

08:06 PM (IST) Jul 02

ಮಹಿಳೆಯರ ಒಳ ಉಡುಪಿನ ಹುಕ್‌ ತೆಗೆದು ಗಿನ್ನೆಸ್‌ ದಾಖಲೆ ಬರೆದ! ವಿಡಿಯೋ ನೋಡಿ ಸುಸ್ತಾದ ಜನರು

ಟರ್ಕಿಯ ವ್ಯಕ್ತಿಯೊಬ್ಬ ಒಂದು ನಿಮಿಷದಲ್ಲಿ ಒಂದೇ ಕೈಯಿಂದ 100 ಮಹಿಳೆಯರ ಬ್ರಾ ಹುಕ್‌ಗಳನ್ನು ತೆಗೆದು ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 2013ರ 91 ಬ್ರಾಗಳ ಹಿಂದಿನ ದಾಖಲೆಯನ್ನು ಮುರಿದ ಈ ವಿಚಿತ್ರ ಸಾಧನೆಯು ಇದೀಗ ಅಧಿಕೃತವಾಗಿ ದಾಖಲೆ ಪುಸ್ತಕ ಸೇರಿದೆ.
Read Full Story

08:05 PM (IST) Jul 02

ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಬ್ಯಾಟರಿ, HD ಕ್ವಾಲಿಟಿ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನ್‌ಗಳು

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಅಧಿಕ ಫೀಚರ್‌ಗಳನ್ನು ಹೊಂದಿರುವ ನಾಲ್ಕು ಅತ್ಯುತ್ತಮ ಫೋನ್‌ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು ದೈತ್ಯ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಪ್ರೊಸೆಸರ್‌ಗಳನ್ನು ಒಳಗೊಂಡಿವೆ.

Read Full Story

07:52 PM (IST) Jul 02

ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳ ಉಡುಪು, 927 ಕೋಟಿ ನಗದು! ಜಾಗತಿಕ ಸಂಚಲನ

ಇರಾಕ್‌ನ ಬಗ್ದಾದ್‌ನಲ್ಲಿ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ, ಅಧಿಕಾರಿಗಳು 927 ಕೋಟಿ ರೂಪಾಯಿ ನಗದು ಮತ್ತು 27 ಕೆ.ಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದಲ್ಲಿ ಚಿನ್ನದ ಒಳ ಉಡುಪುಗಳು ಸೇರಿವೆ.

Read Full Story

07:45 PM (IST) Jul 02

Veena Nagda - 7 ರೂಪಾಯಿಗೆ ಮೆಹೆಂದಿ ಹಾಕ್ತಿದ್ದ ಹುಡುಗಿ, ಇಂದು ಬಾಲಿವುಡ್ ಸ್ಟಾರ್‌ಗಳೇ ಕಾಯ್ತಾರೆ!

ಕೆಲವೊಮ್ಮೆ ಜೀವನದ ದಿಕ್ಕನ್ನೇ ಬದಲಿಸಲು ಒಂದೇ ಒಂದು ಹೊಗಳಿಕೆ ಸಾಕು. ಬಾಲಿವುಡ್‌ನ ಖ್ಯಾತ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ಅವರ ಕಥೆಯೂ ಇದೇ ರೀತಿ ಇದೆ. ಕೇವಲ 6-7 ರೂಪಾಯಿಗೆ ಮೆಹೆಂದಿ ಹಾಕುತ್ತಿದ್ದ ವೀಣಾ..

Read Full Story

06:18 PM (IST) Jul 02

ಅಲ್ಲಿಯೂ ಇಲ್ಲ, ಇಲ್ಲಿಯೂ ಬೇಡ; ಯಾರಿಗೂ ಬೇಡವಾದ ಹಾರ್ದಿಕ್? CSK & MIನಿಂದ ಹೇಳಿಕೆ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಕೈಬಿಡಲಿದೆಯೇ? ಕಳಪೆ ಪ್ರದರ್ಶನದ ನಂತರ ತಂಡದ ಅಚ್ಚರಿಯ ಹೇಳಿಕೆ ಮತ್ತು ಇತರ ತಂಡಗಳ ಸ್ಪಷ್ಟನೆ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.

Read Full Story

06:09 PM (IST) Jul 02

ಇರಾಕ್ ಸಂಸದೆ ಮನೆಯಲ್ಲಿ ಕಂತೆ ಕಂತೆ ಹಣ, 27 ಕೆಜಿ ಬಂಗಾರ, ಬಂಗಾರದ ಒಳ ಉಡುಪು ಪತ್ತೆ!

ಇರಾಕ್‌ನಲ್ಲಿ ನಡೆದ ಬೃಹತ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ, ಸಂಸದೆ ಅಲಿಯಾ ನಾಸಿಫ್ ಸೇರಿದಂತೆ ಹಲವು ಉನ್ನತಾಧಿಕಾರಿಗಳನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ನಗದು, ಅಪಾರ ಚಿನ್ನ ಪತ್ತೆಯಾಗಿದ್ದು, ಹಣವನ್ನು ನೆಲದಡಿಯಲ್ಲಿ ಹೂತಿಡಲಾಗಿತ್ತು. ಇದೇ ವೇಳೆ, ಮತ್ತೋರ್ವ ಸಂಸದೆ ಹಿಂದ್ ಅಲ್ ಅಬ್ಬಾಸಿ ಮನೆಯಲ್ಲಿ ಚಿನ್ನದ ಒಳಉಡುಪು ಸಿಕ್ಕಿದೆ ಎಂಬ ಸುದ್ದಿ ವೈರಲ್ ಆಗಿದೆ.
Read Full Story

06:04 PM (IST) Jul 02

ಮಳೆಗಾಲದಲ್ಲಿ ಈ ಕಪ್ಪೆಗಳು ಬಣ್ಣ ಬದಲಿಸೋದ್ಯಾಕೆ? ಕಪ್ಪೆಗಳ ಚಿನ್ನದ ಬಣ್ಣದ ರಹಸ್ಯ

ಆಂಧ್ರಪ್ರದೇಶದ ಕೈಕಲೂರಿನಲ್ಲಿ ಅಪರೂಪದ ಹಳದಿ ಕಪ್ಪೆಗಳು ಕಾಣಿಸಿಕೊಂಡಿವೆ. ಇವು ಇಂಡಿಯನ್ ಬುಲ್ ಫ್ರಾಗ್ ಆಗಿದ್ದು, ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಗಳು ಹೆಣ್ಣನ್ನು ಆಕರ್ಷಿಸಲು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಪರಿಸರ ಮಾಲಿನ್ಯದಿಂದಾಗಿ ಈ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Read Full Story

05:29 PM (IST) Jul 02

Obsession - ಬಾಕ್ಸಾಫೀಸ್ ಲೂಟಿ ಮಾಡಿದ ಹಾರರ್ ಸಿನಿಮಾ ಈಗ OTTಯಲ್ಲಿ! ಆದರೆ ನೋಡಲು ಈ ಷರತ್ತು ಅನಿವಾರ್ಯ

Obsession ಸಿನಿಮಾದ ಡಿವಿಡಿ, ಬ್ಲೂ-ರೇ ಮತ್ತು 4K UHD ಆವೃತ್ತಿಗಳನ್ನು ಜುಲೈ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಅಲ್ಲದೆ, ಪೀಕಾಕ್ ಸ್ಟ್ರೀಮಿಂಗ್ ಸೇವೆಯಲ್ಲೂ ಇದು ಲಭ್ಯವಾಗುವ ನಿರೀಕ್ಷೆಯಿದೆ.

Read Full Story

05:20 PM (IST) Jul 02

ಶಾರುಕ್ ಖಾನ್ ಕನಸು ನನಸು; 2028ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸ್ಟೇಡಿಯಂ ಕಟ್ಟಿದ ಕಿಂಗ್ ಖಾನ್

ಬಾಲಿವುಡ್ ನಟ ಶಾರುಕ್ ಖಾನ್, ಮೇಜರ್ ಲೀಗ್ ಕ್ರಿಕೆಟ್ ಸಹಯೋಗದೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅನ್ನು ಅನಾವರಣಗೊಳಿಸಿದ್ದಾರೆ. ಈ ಮೈದಾನವು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ತವರು ಮೈದಾನವಾಗಲಿದ್ದು, 2028ರ ಒಲಿಂಪಿಕ್ಸ್ ಪಂದ್ಯಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆಯಿದೆ.
Read Full Story

05:17 PM (IST) Jul 02

National Award Winners - 'ಛತ್ರಪತಿ ಶಿವಾಜಿ ಮಹಾರಾಜ್'ಗೆ ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತರ ಆಗಮನ; ರಿಷಬ್ ಶೆಟ್ಟಿ ಚಿತ್ರಕ್ಕೆ ಮುಗಿಲು ಮುಟ್ಟಿದ ನಿರೀಕ್ಷೆ!

'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರು. ಜೊತೆಗೆ, ಮುಖ್ಯ ಭೂಮಿಕೆಯಲ್ಲಿ ನಟರಾದ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಈ ಹೊಸ ಬೆಳವಣಿಗೆ ಆಗಿದ್ದು, ಅದೇನು ಅಂತ ನೋಡಿ..

Read Full Story

05:02 PM (IST) Jul 02

RRR ಬಳಿಕ ರಾಜಮೌಳಿಗೆ ಮತ್ತೊಂದು ವಿಶ್ವಮಟ್ಟದ ಗೌರವ - ಎಲ್ಲರೂ ಹೆಮ್ಮೆಪಡುವ ಸುದ್ದಿ!

Rajamouli France Honour: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ ಫ್ರಾನ್ಸ್‌ನಲ್ಲಿ ಅಪರೂಪದ ಗೌರವ ಸಿಕ್ಕಿದೆ. ಫ್ರಾನ್ಸ್‌ನ ಲಿಯಾನ್ ನಗರದಲ್ಲಿರುವ ಲ್ಯೂಮಿಯೆರ್ ಮ್ಯೂಸಿಯಂಗೆ ರಾಜಮೌಳಿ ಭೇಟಿ ನೀಡಿದ್ದರು. 

Read Full Story

04:42 PM (IST) Jul 02

ಮೊಬೈಲ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ; ಗುತ್ತಿಗೆದಾರರನ ವಿರುದ್ಧ ಕ್ರಮ

ಭಾರೀ ಮಳೆಯಿಂದಾಗಿ, ಫೋನ್‌ನಲ್ಲಿ ಮಾತನಾಡುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಖಾಸಗಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಠಿಣ ಕ್ರಮದ ಭರವಸೆ ನೀಡಿದೆ.

Read Full Story

04:38 PM (IST) Jul 02

ಭಾರತೀಯ ರೈಲ್ವೇಯಿಂದ ಮಹತ್ವದ ಘೋಷಣೆ - ಅಡ್ವಾನ್ಸ್ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರು ಈ ಸುದ್ದಿ ತಪ್ಪದೇ ನೋಡಿ

ಬೆಂಗಳೂರು: ಭಾರತೀಯ ರೈಲ್ವೇ ಪ್ರಯಾಣಿಕರು ನೂರು ದಿನಕ್ಕೂ ಹೆಚ್ಚಿನ ಕಾಲ ಮುಂಗಡವಾಗಿ ಟಿಕೆಟ್ ಬುಕ್ ಮಾಡುವವರು ಓದಲೇಬೇಕಾದ ಸುದ್ದಿಯಿದೆ. ಯಾಕೆಂದರೆ ಈ ವಿಚಾರದಲ್ಲಿ ಭಾರತೀಯ ರೈಲ್ವೇ ಇದೀಗ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

 

Read Full Story

04:36 PM (IST) Jul 02

ವಿದೇಶದಲ್ಲಿ ಧೂಳೆಬ್ಬಿಸಿದ ಒಪ್ಪೋ ರೆನೋ 16 ಸರಣಿ ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಅತ್ಯುತ್ತಮ ಫೀಚರ್

ಒಪ್ಪೋ ತನ್ನ ಬಹುನಿರೀಕ್ಷಿತ ರೆನೋ 16 ಮತ್ತು ರೆನೋ 16c ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಸರಣಿಯು ಅತ್ಯಾಧುನಿಕ ಕ್ಯಾಮೆರಾ, ಶಕ್ತಿಶಾಲಿ ಪ್ರೊಸೆಸರ್, ಮತ್ತು ದೈತ್ಯ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇವುಗಳ ಬೆಲೆ, ಲಭ್ಯತೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳ ವಿವರ ಇಲ್ಲಿದೆ.
Read Full Story

04:05 PM (IST) Jul 02

ಪ್ಯಾಂಟ್ ಬಿಚ್ಚಿ ಕೊಡ್ತಿದ್ದ; ವೈಭವ್ ಸೂರ್ಯವಂಶಿ ಬಗ್ಗೆ ರವಿಶಾಸ್ತ್ರಿ ಹೇಳಿಕೆ ವೈರಲ್

ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಆಗ್ರಹಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿಯೇ ವೈಭವ್ ಆಡಬೇಕಿತ್ತು, ಒತ್ತಡವಿಲ್ಲದ ಯುವ ಆಟಗಾರನನ್ನು ಬೆಂಚ್ ಮೇಲೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

Read Full Story

03:13 PM (IST) Jul 02

ಮತ್ತೆ ವೈಭವ್ ಸೂರ್ಯವಂಶಿ ಕಡೆಗಣನೆ; ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆ ಕೊಟ್ಟ ಸನ್ನಿ!

ಬೆಂಗಳೂರು: ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

Read Full Story

02:16 PM (IST) Jul 02

EPFO new rules - ಇನ್ಮುಂದೆ ನಿಮ್ಮ ಇನ್-ಹ್ಯಾಂಡ್ ಸ್ಯಾಲರಿ ಹೆಚ್ಚಾಗಲಿದೆ! ಹೆಂಗೆ ಗೊತ್ತಾ..?

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಎಫ್ ಕಡಿತದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ₹15,000ಕ್ಕಿಂತ ಹೆಚ್ಚು ಮೂಲ ವೇತನ ಹೊಂದಿರುವ ನೌಕರರು ₹1,800ಕ್ಕಿಂತ ಹೆಚ್ಚಿನ ಪಿಎಫ್ ದೇಣಿಗೆಯನ್ನು ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಅವರ ಕೈಗೆ ಸಿಗುವ ಸಂಬಳ ಹೆಚ್ಚಾಗಲಿದೆ.

Read Full Story

01:22 PM (IST) Jul 02

ಅಂತಾರಾಷ್ಟ್ರೀಯ ಟಿ20ಯಲ್ಲಿ ಸಿಕ್ಸರ್‌ಗಳ ಸುರಿಮಳೆ - ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ!

ಭಾರತದ ಯುವ ಆಟಗಾರ ಅಭಿಷೇಕ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ಅತಿ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿ ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಅವರು ಸೂರ್ಯಕುಮಾರ್ ಯಾದವ್ ಅವರ ಭಾರತೀಯ ದಾಖಲೆಯನ್ನು ಸಹ ಅಳಿಸಿಹಾಕಿದ್ದಾರೆ.
Read Full Story

01:01 PM (IST) Jul 02

ಕೇತನ್‌ ಕೇಸ್‌ಗೆ ಸಾಕ್ಷಿಯೇ ಇಲ್ಲ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಡಲು ಪೊಲೀಸರು ಪ್ಲಾನ್

ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಕೊರತೆಯಿಂದಾಗಿ, ಸತ್ಯವನ್ನು ಹೊರತೆಗೆಯಲು ಪೊಲೀಸರು ಸಿಯಾಳ ಪಾಲಿಗ್ರಾಫ್ ಪರೀಕ್ಷೆಗೆ ನ್ಯಾಯಾಲಯದ ಅನುಮತಿ ಕೋರಿದ್ದಾರೆ.
Read Full Story

11:42 AM (IST) Jul 02

Terror Module - ದೆಹಲಿಯ ಪೊಲೀಸರ ಭರ್ಜರಿ ಕಾರ್ಯಾಚರಣೆ; ತಪ್ಪಿದ ಭಾರೀ ಅನಾಹುತ! ISI ಉಗ್ರರ ಸಂಪರ್ಕದಲ್ಲಿದ್ದ ನಾಲ್ವರು ಅರೆಸ್ಟ್!

Terror Module ಪಾಕಿಸ್ತಾನ ಮೂಲದ ISI ಹ್ಯಾಂಡ್ಲರ್ ಸೂಚನೆಯಂತೆ ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

11:41 AM (IST) Jul 02

ಇನ್‌ಸ್ಟಾಮಾರ್ಟ್‌ಗೆ ಹೊಸ ಬಾಸ್ - ಓಯೋ ಸಿಇಒ ಆಗಿದ್ದ ಗೌತಮ್ ಸ್ವರೂಪ್ ಈಗ ಕ್ವಿಕ್ ಕಾಮರ್ಸ್ ಬಿಸಿನೆಸ್ ಹೆಡ್‌!

ಭಾರತದ ಪ್ರಮುಖ 'ಕ್ವಿಕ್ ಕಾಮರ್ಸ್' ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್', ತನ್ನ ವ್ಯವಹಾರ ವಿಸ್ತರಣೆಗಾಗಿ ಗೌತಮ್ ಸ್ವರೂಪ್ ಅವರನ್ನು ನೂತನ 'ಮುಖ್ಯ ವಾಣಿಜ್ಯ ಅಧಿಕಾರಿ'ಯಾಗಿ ನೇಮಿಸಿದೆ. 20 ವರ್ಷಗಳ ಅನುಭವ ಹೊಂದಿರುವ ಗೌತಮ್, ಕಂಪನಿಯ ಬೆಳವಣಿಗೆ, ಬ್ರ್ಯಾಂಡ್ ಪಾಲುದಾರಿಕೆ ಮತ್ತು ವಿಸ್ತರಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಶ್ರೀಕರ್ ಅಡವಿ ಮತ್ತು ಹರ್ದೀಪ್ ಕೌರ್ ಕೂಡ ನಾಯಕತ್ವ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Read Full Story

11:33 AM (IST) Jul 02

ಪಾಕಿಸ್ತಾನದಲ್ಲಿ 125 ವರ್ಷಗಳ ಐತಿಹಾಸಿಕ ಗುರುದ್ವಾರ ನೆಲಸಮ; ಭಾರತದ ಖಡಕ್ ಎಚ್ಚರಿಕೆ!

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' ಅನ್ನು ಸ್ಥಳೀಯ ಉದ್ಯಮಿಯೊಬ್ಬ ನೆಲಸಮಗೊಳಿಸಿದ್ದಾನೆ. ಈ ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆಗ್ರಹಿಸಿದೆ. ಸಿಖ್ ಸಮುದಾಯದ ಪ್ರತಿಭಟನೆಯ ನಂತರ, ಪಾಕಿಸ್ತಾನ ಸರ್ಕಾರವು ಗುರುದ್ವಾರವನ್ನು ಪುನರ್ ಸ್ಥಾಪಿಸುವುದಾಗಿ ಭರವಸೆ ನೀಡಿದೆ.

Read Full Story

11:32 AM (IST) Jul 02

ಭಾರತ-ಇಂಗ್ಲೆಂಡ್ ಎರಡನೇ ಟಿ20 ಮ್ಯಾಚ್ ಆರಂಭ ರಾತ್ರಿ 10 ಗಂಟೆಗೆ ಅಲ್ಲ! ಟೀಂ ಇಂಡಿಯಾ ಫ್ಯಾನ್ಸ್‌ಗಾಗಿ ಈ ಸಮಯಕ್ಕೆ ಮ್ಯಾಚ್ ಸ್ಟಾರ್ಟ್

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ಟಿ20 ಪಂದ್ಯವು ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡನೇ ಮ್ಯಾಚ್ ಆರಂಭದ ಸಮಯ ಬದಲಾಗಿದೆ.

 

Read Full Story

11:24 AM (IST) Jul 02

ರೆಡ್‌ಬುಲ್‌, ಪೆಪ್ಸಿಕೋ, ಸ್ಟಿಂಗ್‌, ಕ್ಯಾಂಪಾ ಸೇರಿ 6 ಎನರ್ಜಿ ಡ್ರಿಂಕ್‌ಗೆ FSSAI ನೋಟಿಸ್‌

FSSAI, ರೆಡ್‌ಬುಲ್ ಮತ್ತು ಸ್ಟಿಂಗ್ ಸೇರಿದಂತೆ ಆರು ಪ್ರಮುಖ ಎನರ್ಜಿ ಡ್ರಿಂಕ್ ಬ್ರ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಕಂಪನಿಗಳು 'ಎನರ್ಜಿ ಡ್ರಿಂಕ್' ಎಂದು ಕಾನೂನುಬಾಹಿರವಾಗಿ ಬ್ರ್ಯಾಂಡಿಂಗ್ ಮಾಡಿ ತಪ್ಪು ಮಾಹಿತಿ ನೀಡುತ್ತಿವೆ ಎಂದು ಪ್ರಾಧಿಕಾರ ಆರೋಪಿಸಿದೆ.

Read Full Story

10:31 AM (IST) Jul 02

ಬ್ಯಾಂಕ್ ಜಾಬ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಸುವರ್ಣಾವಕಾಶ, 6715 ಹುದ್ದೆಗಳಿಗೆ IBPS ಆಹ್ವಾನ, 80 ಸಾವಿರ ವೇತನ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ದೇಶದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 6715 ಪ್ರೊಬೇಷನರಿ ಆಫೀಸರ್/ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ.
Read Full Story

09:32 AM (IST) Jul 02

ರಾಮನ ದೇಗುಲದಲ್ಲಿ ಕೃಷ್ಣನ ಲೆಕ್ಕ! 500 ವರ್ಷಗಳ ಕನಸು ನನಸಾದ ಖುಷಿಯಲ್ಲಿದ್ದ ಕೋಟ್ಯಂತರ ರಾಮಭಕ್ತರಿಗೆ ಘಾಸಿ ಮಾಡಿದ ಹುಂಡಿ ಕಳ್ಳರು!

ಅಯೋಧ್ಯೆ ರಾಮಮಂದಿರದ ಹುಂಡಿಯಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ದೇಗುಲದ ನೌಕರರೇ ಕದ್ದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 42 ದಿನಗಳಲ್ಲಿ 70ಕ್ಕೂ ಹೆಚ್ಚು ಬಾರಿ ನಡೆದ ಈ ವ್ಯವಸ್ಥಿತ ಲೂಟಿಯ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.

Read Full Story

09:31 AM (IST) Jul 02

ರೈಲಿನಲ್ಲಿ ಅನಧಿಕೃತ ವ್ಯಾಪಾರ, ಧೂಮಪಾನ, ಭಿಕ್ಷೆಗೆ ₹2000 ದಂಡ!

ಭಾರತೀಯ ರೈಲ್ವೆಯು ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ರೈಲುಗಳಲ್ಲಿ ಧೂಮಪಾನ, ಅನಧಿಕೃತ ವ್ಯಾಪಾರ ಮತ್ತು ಭಿಕ್ಷಾಟನೆ ಮಾಡುವವರಿಗೆ ₹2,000 ದಿಂದ ಆರಂಭಿಸಿ ಭಾರಿ ದಂಡ ಹಾಗೂ ಪುನರಾವರ್ತಿತ ಅಪರಾಧಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
Read Full Story

09:31 AM (IST) Jul 02

'ಸುಮ್ನೆ ಎಕ್ಸಾಂಗೆ ರೆಡಿಯಾಗು, ಗಲ್ಲಿ ಕ್ರಿಕೆಟ್ ಆಡು' - ದೊಡ್ಡ ಕನಸು ಕಾಣುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾಕೆ?

15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ಆತುರ ಬೇಡ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇರಲ್ ಕೊಲಿನನ್ ಸಲಹೆ ನೀಡಿದ್ದಾರೆ. ವೈಭವ್ ತನ್ನ ಬಾಲ್ಯವನ್ನು ಆನಂದಿಸಬೇಕು, ಪರೀಕ್ಷೆಗಳಿಗೆ ಸಿದ್ಧರಾಗಬೇಕು ಮತ್ತು ತರಾತುರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಳಿಸಬಾರದು ಎಂದು ಕೊಲಿನನ್ ಅಭಿಪ್ರಾಯಪಟ್ಟಿದ್ದಾರೆ.
Read Full Story

08:40 AM (IST) Jul 02

ಮಳೆಯಿಂದ ಪಂದ್ಯ ರದ್ದು; ಆದರೂ ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ದಾಖಲೆ ಬರೆದ ಶ್ರೇಯಸ್ ಅಯ್ಯರ್!

ಡುರ್ಹಾಮ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರ ಹೊರತಾಗಿಯೂ ಫಿಫ್ಟಿ ಬಾರಿಸಿದ ನಾಯಕ ಶ್ರೇಯಸ್ ಅಯ್ಯರ್ ಅಪರೂಪದಲ್ಲೇ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

Read Full Story

08:33 AM (IST) Jul 02

ವಿವಾಹವೆಂದರೆ ಬರೀ ಹಾಡು, ಕುಣಿತವಲ್ಲ, ಅದು ಸಂಸ್ಕಾರ; ಸಪ್ತಪದಿ ಇಲ್ಲದಿದ್ರೆ ಹಿಂದು ಮದುವೆ ಅಮಾನ್ಯ - ಹೈಕೋರ್ಟ್‌

ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿಗಳಿಲ್ಲದೆ ಕೇವಲ ನೋಂದಣಿ ಮಾಡಿಕೊಂಡರೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 

Read Full Story

07:54 AM (IST) Jul 02

ಫಿಫಾ ವಿಶ್ವಕಪ್ - 4 ದಶಕಗಳ ಬಳಿಕ ನಾಕೌಟ್ ಮ್ಯಾಚ್ ಗೆದ್ದು ಐತಿಹಾಸಿಕ ದಾಖಲೆ ಬರೆದ ಮೆಕ್ಸಿಕೊ

ಫಿಫಾ ವಿಶ್ವಕಪ್‌ನ ನಾಕೌಟ್‌ ಪಂದ್ಯದಲ್ಲಿ ಮೆಕ್ಸಿಕೊ ತಂಡ ಈಕ್ವೆಡಾರ್‌ ವಿರುದ್ಧ 2-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ 40 ವರ್ಷಗಳ ಬಳಿಕ ನಾಕೌಟ್‌ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿ, ತನ್ನ ದಶಕಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ.
Read Full Story

07:42 AM (IST) Jul 02

ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ದಾಳಿ: ರಷ್ಯಾಕ್ಕೆ ಈಗ ಭಾರತದಿಂದಲೇ ಪೆಟ್ರೋಲ್ ಡೀಸೆಲ್ ಪೂರೈಕೆ!

Global energy alert ಉಕ್ರೇನ್ ದಾಳಿಯಿಂದಾಗಿ ರಷ್ಯಾದ ತೈಲ ಸಂಸ್ಕರಣಾ ಘಟಕಗಳು ಹಾನಿಗೊಳಗಾಗಿದ್ದು, ದೇಶದಲ್ಲಿ ತೀವ್ರ ಪೆಟ್ರೋಲ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಷ್ಯಾ ಇದೀಗ ಭಾರತದಿಂದಲೇ ಸಂಸ್ಕರಿಸಿದ ಪೆಟ್ರೋಲ್ ಖರೀದಿಸುತ್ತಿದೆ.

 

Read Full Story

More Trending News