ದೇಶದಲ್ಲಿ ಆಡಳಿತ ಪಕ್ಷ ಎನ್ಡಿಎ ಮತ್ತು ವಿಪಕ್ಷಗಳಾದ ಇಂಡಿಯಾ ಒಕ್ಕೂಟಗಳು ಜೆನ್ಝೀಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೆನ್ಝೀಗಳ ಬಳಿಯೇ ಹೋಗಲು ನಿರ್ಧರಿಸಿದ್ದು, ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳಿಸುವ ಚಿಂತನೆಯನ್ನು ಮಾಡಿದೆ. ಈ ಮೂಲಕ ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ ಅವರ ಬೇಡಿಕೆಗಳನ್ನು ಅರಿಯುವ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ಲೈನ್ ಕೋಚಿಂಗ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜೊತೆಗೆ, 'ಒಂದು ದಿನ, ಒಂದು ವಿಶ್ವವಿದ್ಯಾಲಯ' ಕಾರ್ಯಕ್ರಮದಡಿ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ, ಯುವಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ಇಂಡಿಯಾ ಒಕ್ಕೂಟದ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಜೆನ್ಝೀ ಯುವ ಸಮುದಾಯವನ್ನು ತಮ್ಮತ್ತ ಸೆಳೆಯಲು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ದೆಹಲಿ, ಜಾರ್ಖಂಡ್ ಜೆನ್ಝೀ ಹೋರಾಟದ ಎಫೆಕ್ಟ್ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಎಲ್ಲ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳ ಮುಖ್ಯಮಮಂತ್ರಿಗಳಿಗೆ ಆದೇಶ ನೀಡಿದ್ದಾರೆ. ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ವರದಿ ಸಲ್ಲಿಸಲು 1 ತಿಂಗಳ ಗಡುವು ನೀಡಿದ್ದಾರೆ.
10:35 PM (IST) Aug 20
ದೇಶದ ಸೆಮಿ-ಹೈಸ್ಪೀಡ್ ರೈಲು 'ವಂದೇ ಭಾರತ್ ಎಕ್ಸ್ಪ್ರೆಸ್' ಭಾರತೀಯ ರೈಲ್ವೆಗೆ ಬೃಹತ್ ಆದಾಯದ ಮೂಲವಾಗಿದೆ, ದಕ್ಷಿಣ ಭಾರತದಲ್ಲೇ 806 ಕೋಟಿ ರೂ. ಗಳಿಸಿದೆ. ದುಬಾರಿ ಟಿಕೆಟ್ ದರ, ಶೇ.100ರಷ್ಟು ಆಕ್ಯುಪೆನ್ಸಿ ಮತ್ತು ವೇಗದ ಪ್ರಯಾಣದ ಕಾರಣ ಇದು ಯಶಸ್ವಿಯಾಗಿದೆ.
09:58 PM (IST) Aug 20
ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ರೀಚಾರ್ಜ್ ದರಗಳನ್ನು ಶೇಕಡಾ 15-20 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ದರ ಏರಿಕೆಯಿಂದ ಗ್ರಾಹಕರನ್ನು ತಾತ್ಕಾಲಿಕವಾಗಿ ರಕ್ಷಿಸಲು, ಕಂಪನಿಯು ₹300 ಮೌಲ್ಯದ 'ಜಿಯೋ ಪ್ರೈಮ್ ಮೆಂಬರ್ಶಿಪ್' ಅನ್ನು ಪರಿಚಯಿಸಿದೆ.
09:45 PM (IST) Aug 20
ಪುಷ್ಪ 2 ನಂತರ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಕ'. ಅಟ್ಲಿ ನಿರ್ದೇಶನದ ಈ ಚಿತ್ರದ ಬಗ್ಗೆ ಈಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
09:26 PM (IST) Aug 20
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದಾರೆಂದು ಛತ್ತೀಸ್ಗಢ ಕಾಂಗ್ರೆಸ್ ಸುಳ್ಳು ಪೋಸ್ಟ್ ಮಾಡಿದೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಇದು ಸೋಲಿನ ಹತಾಶೆಯಿಂದ ಮಾಡುತ್ತಿರುವ ಅಪಪ್ರಚಾರ ಎಂದು ಬಿಜೆಪಿ ಕಿಡಿಕಾರಿದೆ.
08:24 PM (IST) Aug 20
TCS ತನ್ನ ಉದ್ಯೋಗಿಗಳ ಲ್ಯಾಪ್ಟಾಪ್ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್ಪೀರಿಯನ್ಸ್ ಮಾನಿಟರಿಂಗ್' ಟೂಲ್ ಅಳವಡಿಸಿದೆ. ಈ ಕ್ರಮವು ಡೇಟಾ ಭದ್ರತೆಗಾಗಿಯೇ ಅಥವಾ ಉದ್ಯೋಗಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂಬ ಆತಂಕ ಮತ್ತು ಅನುಮಾನಗಳನ್ನು ಸಿಬ್ಬಂದಿ ವಲಯದಲ್ಲಿ ಹುಟ್ಟುಹಾಕಿದೆ.
07:46 PM (IST) Aug 20
ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.
07:04 PM (IST) Aug 20
06:50 PM (IST) Aug 20
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.
06:50 PM (IST) Aug 20
06:38 PM (IST) Aug 20
06:17 PM (IST) Aug 20
06:14 PM (IST) Aug 20
06:07 PM (IST) Aug 20
05:40 PM (IST) Aug 20
05:39 PM (IST) Aug 20
05:22 PM (IST) Aug 20
ಮನುಷ್ಯನ ಮಾತಿಗೆ ಎಲ್ಲಿಲ್ಲದ ಶಕ್ತಿ ಇದೆ. ಒಂದು ಮಾತು ಸಂಬಂಧವನ್ನು ಬೆಳೆಸಬಲ್ಲದು, ಮುರಿಯಬಲ್ಲದು. ಹಾಗಾಗಿ ಯಾವಾಗ ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾರೊಂದಿಗೆ ಏನು ಹೇಳಬೇಕು? ಎಂಬ ಬಗ್ಗೆ ಎಚ್ಚರಿಕೆ ಇರಬೇಕು. ಚಾಣಕ್ಯನ ಪ್ರಕಾರ, ಬುದ್ಧಿವಂತ ವ್ಯಕ್ತಿ ಯಾರಿಗೂ ಹೇಳದ ಆ 5 ವಿಷಯಗಳು ಯಾವುವು ನೋಡೋಣ.
04:53 PM (IST) Aug 20
04:18 PM (IST) Aug 20
ನಮ್ಮ ದೇಶದಲ್ಲಿ ಎರಡು ರಾಜ್ಯಗಳಿಗೆ ಒಂದೇ ರಾಜಧಾನಿ ಇದೆ. ಆ ರಾಜ್ಯಗಳು ಯಾವುವು? ಒಂದೇ ನಗರವನ್ನು ಎರಡು ರಾಜ್ಯಗಳು ರಾಜಧಾನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗಾದರೆ ಆಡಳಿತ ಯಾರ ಕೈಯಲ್ಲಿದೆ?
04:08 PM (IST) Aug 20
04:00 PM (IST) Aug 20
ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು, ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಕ್ಕಳನ್ನು ತಿದ್ದಲು ಹೋದ ಗುರುವನ್ನೇ ಹಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಈ ಪ್ರಕರಣ, ಸಮಾಜದಲ್ಲಿ ಮಕ್ಕಳ ಕ್ರೂರ ಮನಸ್ಥಿತಿಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
03:30 PM (IST) Aug 20
1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕೋರ್ಟ್ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ, ಪ್ರಮುಖ ನಾಯಕ ಸಜ್ಜನ್ ಕುಮಾರ್ ನಿಧನರಾಗಿದ್ದಾರೆ. ಏನಿದು ಸಿಖ್ ಗಲಭೆ?
03:23 PM (IST) Aug 20
03:21 PM (IST) Aug 20
01:18 PM (IST) Aug 20
01:12 PM (IST) Aug 20
01:05 PM (IST) Aug 20
01:04 PM (IST) Aug 20
12:53 PM (IST) Aug 20
ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದಾರೆ.
12:21 PM (IST) Aug 20
ಪೂರ್ವ ಭಾರತದ ಸಿಂಗ್ಭೂಮ್ ವಲಯದಲ್ಲಿ, ಸುಮಾರು 3.5 ಶತಕೋಟಿ ವರ್ಷಗಳಷ್ಟು ಹಳೆಯ ಜೈವಿಕ ಕುರುಹುಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಆವಿಷ್ಕಾರವು ಭೂಮಿಯ ಮೇಲಿನ ಜೀವಿಗಳ ಉಗಮವು ಹಿಂದೆ ಭಾವಿಸಿದ್ದಕ್ಕಿಂತಲೂ ಪ್ರಾಚೀನವಾದುದು ಎಂಬುದಕ್ಕೆ ಬಲವಾದ ಸಾಕ್ಷಿ ಒದಗಿಸಿದೆ. ಜ್ವಾಲಾಮುಖಿ ಬೂದಿಯ ಪದರಗಳಲ್ಲಿ ಸಂರಕ್ಷಿಸಲ್ಪಟ್ಟಿದ್ದ ಈ ಅವಶೇಷಗಳು, ದ್ಯುತಿಸಂಶ್ಲೇಷಣೆಯಂತಹ ಸಂಕೀರ್ಣ ಪ್ರಕ್ರಿಯೆಗಳು ಅಂದೇ ಇತ್ತೆಂದು ತೋರಿಸಿದೆ.
12:14 PM (IST) Aug 20
12:12 PM (IST) Aug 20
ಬಿಜೆಪಿಯ ಫೈರ್ ಬ್ರ್ಯಾಂಡ್ ವಕ್ತಾರ ಶೆಹಜಾದ್ ಪೂನಾವಾಲ ಪಕ್ಷ ತೊರೆದಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರಾ ಅನ್ನೋ ಕುರಿತು ರೋಚಕ ಭವಿಷ್ಯ ನುಡಿದಿದ್ದಾರೆ. ಪೂನಾವಾಲ ಹೇಳಿದ್ದೇನು?
11:21 AM (IST) Aug 20
11:08 AM (IST) Aug 20
10:58 AM (IST) Aug 20
10:40 AM (IST) Aug 20
10:01 AM (IST) Aug 20
ಜಮ್ಮು ಕಾಶ್ಮೀರ ವಿವಾದದ ಬಗ್ಗೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅಶಾಂತಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಅಲ್ಲಿನ ಜನರು ಭಾರತ ಸೇರಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ಪಾಕ್ ಆಘಾತ
07:52 AM (IST) Aug 20
ನವದೆಹಲಿ(ಆ.20): ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಯುವಕರಿಗೆ ಉಚಿತ ಆನ್ಲೈನ್ ಕೋಚಿಂಗ್ ಕ್ಲಾಸ್ ಆರಂಭಿಸುವ ಬಗ್ಗೆ ಪ್ರಧಾನಿ ಮೋದಿ(PM Narendra Modi) ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ(Pralhad joshi) ಅವರು ಈ ಕುರಿತು ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಯೋಜನೆಯ ಅನುಷ್ಠಾನ, ರೂಪುರೇಷೆ ಮತ್ತಿತರ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ತ್ವರಿತ ಚಾಲನೆಗೆ ಕ್ರಮ ಕೈಗೊಂಡಿದ್ದಾರೆ.
ಜೆನ್ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ
ಜೆನ್ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಯುವಜನತೆಯನ್ನು ತಲುಪುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳುಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ, ಅವರ ಕಳಕಳಿಗಳನ್ನು ಆಲಿಸಲು ಮತ್ತು ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.